Homeಅಂಕಣಗಳುಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್'!

ಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್’!

- Advertisement -
- Advertisement -

ದಿಲ್ಬರ್ಟ್ ಮತ್ತು ರೋಲ್ಡ್ ಡಾಲ್ ಹಾಗೂ ಎಚ್ಚೆತ್ತ ಮಾಧ್ಯಮಗಳ ಬಗ್ಗೆ ಕಳೆದ ವಾರ ಬರೆದ ಸಂಪಾದಕೀಯದಲ್ಲಿ, ಈ ಎಚ್ಚರಿಕೆಯನ್ನು ’ವೋಕ್ ಸಂಸ್ಕೃತಿ’ ಅಥವಾ ’ವೋಕಿಸಂ’ ಎಂಬ ಬಗೆದು ಹೀಗಳೆಯಲು ಹಲವರು ಪ್ರಯತ್ನಿಸುವ ಬಗ್ಗೆ ಪ್ರಸ್ತಾಪಿಸಿ ಲೇಖನವನ್ನು ಕೊನೆಗೊಳಿಸಲಾಗಿತ್ತು. ’ವೋಕ್-ವಿರೋಧಿ’ ಅಭಿಯಾನವನ್ನೇ ಪ್ರಧಾನವಾಗಿಟ್ಟುಕೊಂಡು ಯುಎಸ್‌ಎನ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಿವೇಕ್ ಬಗ್ಗೆ ಸುದೀರ್ಘ ಲೇಖನವನ್ನು ಪ್ರಕಟಿಸಿದ್ದ ನ್ಯೂಯಾರ್ಕರ್ ಪತ್ರಿಕೆ ಅವರನ್ನು ’ಆಂಟಿ ವೋಕ್ ಇಂಕ್’ ಸಿಇಒ ಎಂದು ಕರೆದಿತ್ತು. 21ನೇ ಶತಮಾನದಲ್ಲಿ ಜನಾಂಗ, ಲಿಂಗತ್ವ, ಹವಾಮಾನ, ಸವಲತ್ತು, ಪ್ರಾತಿನಿಧ್ಯ ಮುಂತಾದ ಸಂಗತಿಗಳ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುತ್ತಿರುವ ಅಥವಾ ಎಚ್ಚರಗೊಳ್ಳಬೇಕಿರುವ ಆಶಯದ ವಿರುದ್ಧ ಹೂಡಿರುವ ಈ ’ವೋಕ್-ವಿರೋಧಿ’ ಅಭಿಯಾನ ದಿನೇದಿನೇ ಬಲಪಂಥೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಅಮೆರಿಕದ ತೀವ್ರ ಬಲಪಂಥೀಯ ಟಿವಿ ಚಾನೆಲ್ ಆದ ಫಾಕ್ಸ್ ನ್ಯೂಸ್ ಕಾರ್ಯಕ್ರಮಗಳಲ್ಲಿ ವಿವೇಕ್ ರಾಮಸ್ವಾಮಿ ಕಾಯಂಆಗಿ ಹೋಗಿದ್ದಾರೆ ಎನ್ನುತ್ತವೆ ವರದಿಗಳು.

ಸ್ಯಾಂಪಲ್‌ಗೆ ವಿವೇಕ್ ಅವರ ಒಂದು ಟ್ವೀಟ್ ನೋಡಿ: “ನಾನು ಅಧ್ಯಕ್ಷನಾಗಿ, ಫೆಡೆರಲ್ ಕಾನೂನಾದ (ಯುಎಸ್‌ಎ ರಾಷ್ಟ್ರ ಮತ್ತು ರಾಜ್ಯಗಳು ಸೇರಿ ಮಾಡಿರುವ) ’ಅಫರ್ಮೆಟಿವ್ ಆಕ್ಷನ್’ ಅನ್ನು (ಅಂದರೆ, ಜನಾಂಗೀಯ ತಾರತಮ್ಯ ಕೊನೆಗಾಣಿಸಲು ನೀಡುವ ಮೀಸಲಾತಿ) ಕೊನೆಗೊಳಿಸುತ್ತೇನೆ. ಜನಾಂಗದ ಆಧಾರದ ಮೇಲೆ ಮೀಸಲಾತಿ ನೀಡುವ ಲಿಂಡನ್ ಜಾನ್ಸನ್ ಕಾರ್ಯಾಂಗ ಆದೇಶ 11246ವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಜಾನ್ಸನ್ ನಂತರ ಪ್ರತಿ ರಿಪಬ್ಲಿಕನ್‌ಗೆ ಈ ಕೆಲಸ ಮಾಡುವ ಅವಕಾಶವಿತ್ತು. ನಾನು ಯಾವುದೇ ಕ್ಷಮೆ ಕೇಳದೆ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿಭೆ, ಶ್ರೇಷ್ಠತೆ, ಸ್ವ-ಆಡಳಿತ, ಮುಕ್ತ ಅಭಿವ್ಯಕ್ತಿ. ಇದು ಹೊಸ ಅಮೆರಿಕನ್ ಡ್ರೀಮ್ ಎಂದು ಬರೆದುಕೊಳ್ಳುತ್ತಾರೆ. ಯಾವ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿ ಸಮಾನತೆ, ಪ್ರಾತಿನಿಧ್ಯದ ಕಡೆಗೆ ಚಲಿಸಬೇಕೆಂದು ಎಚ್ಚೆತ್ತ ಮನಸ್ಸುಗಳು ತುಡಿಯುತ್ತಿವೆಯೋ ಅವನ್ನೆಲ್ಲಾ ಅವಮಾನಿಸಿ ವಿರೋಧಿಸುವ ಅಭಿಯಾನವೇ ’ಆ್ಯಂಟಿ ವೋಕಿಸಂ’. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ, ಜನಾಂಗೀಯ ನಿಂದನೆಯ ಬಗ್ಗೆ ಕಠಿಣ ಕ್ರಮಗಳು, ಜನ ಕಲ್ಯಾಣ ಯೋಜನೆಗಳು – ಹೀಗೆ ಜನಪರ ನೀತಿಗಳನ್ನೆಲ್ಲಾ ತೊಡೆದುಹಾಕಿ ’ಅಮೆರಿಕ ಫಸ್ಟ್’ ಎನಿಸಿಕೊಳ್ಳಬೇಕೆನ್ನುವ ’ಹುಸಿ ಶ್ರೇಷ್ಠತೆಯ’ ಧೋರಣೆಯೇ ಇದರ ಮೊದಲ ಆದ್ಯತೆ. ಮುಕ್ತ ಅಭಿವ್ಯಕ್ತಿ ಎಂಬುದು ಜವಾಬ್ದಾರಿ ಹೊತ್ತುಕೊಳ್ಳದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಉಳಿಯಬೇಕೆಂಬ ವಾದ ಇವರದ್ದು. ಯಾವುದೇ ಮಟ್ಟದಲ್ಲಿ ಕೂಡ ಜನಾಂಗೀಯ, ಅಲ್ಪಸಂಖ್ಯಾತರ, ಮಹಿಳೆಯರ ಅವಮಾನ-ನಿಂದನೆಯನ್ನು ಮಾಡಲು ಸ್ವಾತಂತ್ರ್ಯ ಇರಬೇಕೆಂಬುದು ಇವರ ಫ್ರೀ ಸ್ಪೀಚ್ ವಾದದ ಉದ್ದೇಶ!

ಇದನ್ನೂ ಓದಿ: ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

ಈ ವಿವೇಕ್ ರಾಮಸ್ವಾಮಿಯ ಕುಟುಂಬದವರು ಕೇರಳ ಮೂಲದ ಬ್ರಾಹ್ಮಣ ಜಾತಿಗೆ ಸೇರಿದವರು. ಇಲ್ಲಿನ ಬ್ರಾಹ್ಮಣ್ಯದ ’ಶ್ರೇಷ್ಠತೆಯ’ ಬಲಪಂಥೀಯತೆ ಮತ್ತು ಅಮೆರಿಕದಲ್ಲಿ ಹುಟ್ಟಿ ಬೆಳೆದು ಮೈಗೂಡಿಸಿಕೊಂಡಿರುವ ಕಾರ್ಪೊರೆಟ್ ಸಂಸ್ಕೃತಿಯ ಬಲಪಂಥೀಯತೆ ಒಟ್ಟಿಗೆ ಸೇರಿ ವಿವೇಕ್ ಅಮೆರಿಕದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ; ಡೊನಾಲ್ಡ್ ಟ್ರಂಪ್ ಮಾಡಿದ ಡ್ಯಾಮೇಜ್ ಏನೇನೂ ಸಾಲದೆಂಬಂತೆ. ಇಂತಹ ’ವೋಕ್-ಎಚ್ಚರ’ದ ವಿರುದ್ಧದ ಅಭಿಯಾನ ಮೀಸಲಾತಿ ವಿರೋಧಿಯಾಗಿ, ಖಾಸಗೀಕರಣದ ಪ್ರತಿಪಾದಕನಾಗಿ, ದೈತ್ಯ ಕಾರ್ಪೊರೆಟ್ ಕುಳಗಳ ಸಂರಕ್ಷರರಾಗಿ ಬೇರೆಬೇರೆ ಅವತಾರಗಳಲ್ಲಿ ಭಾರತದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಮುಂದೆ ಇನ್ನೂ ತೀವ್ರವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿಗೆ ಬೇಕಾದ ಸಮಾನತೆಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿಯನ್ನು ಸ್ವಲ್ಪವಾದರೂ ಉಳಿಸಿಕೊಂಡಿರುವ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ನಾಗರಿಕ ಹಕ್ಕುಗಳ ಹೋರಾಟ ಗುಂಪುಗಳು ಸಕ್ರಿಯವಾಗಬೇಕಿದೆ.

2014ರಲ್ಲಿ ಕಪ್ಪು ವ್ಯಕ್ತಿಯೊಬ್ಬನನ್ನು ಅಮೆರಿಕದ ಪೊಲೀಸನೊಬ್ಬ ಕೊಂದಿದ್ದು ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆಗ ’ಸ್ಟೇ ವೋಕ್’ ಅಥವಾ ’ವೋಕ್’ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. 2020ರಲ್ಲಿ ಯುಎಸ್‌ಎನ ಪೊಲೀಸನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಕತ್ತುಹಿಸುಕಿ ಸಾರ್ವಜನಿಕವಾಗಿಯೇ ಹತ್ಯೆ ಮಾಡಿದಾಗ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರ ಸ್ವರೂಪ ಪಡೆದುಕೊಂಡಿತು. ಇದು ಜಗತ್ತಿನಾದ್ಯಂತ ಜನಾಂಗೀಯ ಹಿಂಸೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು. ಜನಾಂಗೀಯ ನಿಂದನೆ ಮತ್ತು ಹಿಂಸೆಗಳ ಬಗ್ಗೆ ಜಾಗೃತಿ ತಳೆಯುವಂತೆ ಯುವ ಸಮುದಾಯವನ್ನು ಪ್ರಚೋದಿಸಿತು. ಭಾರತದಲ್ಲಿ ಜಾತಿನಿಂದನೆ ಮತ್ತು ಹಿಂಸೆಯ ಬಗ್ಗೆಗೂ ಚರ್ಚೆಗಳಾದವು. ಕೆಲಸದ ಸ್ಥಳಗಳಲ್ಲಿ ಜನರು ಹೆಚ್ಚು ಸಂವೇದನಾಶೀಲರಾಗಲು ತಳಸಮುದಾಯಗಳಿಂದ ಆಗ್ರಹ ಮೂಡಿಬಂತು. ಆಗ ಶೋಷಕ ಸಮುದಾಯಕ್ಕೆ ಸೇರಿದ ಕೆಲವರಾದರೂ ಎಚ್ಚೆತ್ತು ಸ್ಪಂದಿಸಲು ಪ್ರಾರಂಭಿಸಿದರು. ಅದರ ಜೊತೆಗೇ ಈ ಎಚ್ಚೆತ್ತ ಪ್ರಜ್ಞೆಯನ್ನು ಪ್ರಶ್ನಿಸುವ ಅವಮಾನಿಸುವ ವಿದ್ಯಮಾನಗಳೂ ಚುರುಕು ಪಡೆದವು. ಇಂದಿಗೂ ಈ ವಿವೇಕ್ ರಾಮಸ್ವಾಮಿ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ಅನ್ನು ಗೇಲಿಮಾಡುವುದನ್ನು ತನ್ನ ಕಾಯಕವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಆ ಚಳವಳಿಯಲ್ಲಿ ಭಾಗಿಯಾದವರ ಚಾರಿತ್ರ್ಯಹರಣಕ್ಕೂ ಮುಂದಾಗುತ್ತಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆಗಳು 2024ರ ಮೊದಲ ಭಾಗದಲ್ಲಿ ಜರುಗಲಿವೆ. ಅಮೆರಿಕದ ಚುನಾವಣೆಗಳು 2024ರ ಕೊನೆಗೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷ ತೀವ್ರ ಬಲಪಂಥೀಯತೆಯ ಹೊಸ ರೂಪದಲ್ಲಿ ಅವತರಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. 2020ರಲ್ಲಿ ಹೇಗೋ ರಿವರ್ಸ್ ಪೋಲರೈಸೇಷನ್ ಸಾಧ್ಯವಾಗಿ ಟ್ರಂಪ್‌ನ ಸೋಲು ಸಾಧ್ಯವಾಗಿತ್ತು. ಆದರೆ ಟ್ರಂಪ್‌ಗಿಂತಲೂ ತನ್ನ ಪ್ರತಿಗಾಮಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ವ್ಯಕ್ತಿತ್ವ ವಿವೇಕ್ ಅವರದ್ದು. ಇವರ ನರೆಟಿವ್‌ಅನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಾರ್ಯಸ್ವರೂಪ ಡೆಮಾಕ್ರಟ್ ಪಕ್ಷದಿಂದ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿಲ್ಲ. ಭಾರತದಲ್ಲಿಯೂ ಇದೇ ಸನ್ನಿವೇಶವನ್ನು ನಾವು ಮುಂಗಾಣಬಹುದಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಡಳಿತ ನಡೆಸುತ್ತಿರುವ ಬಲಪಂಥೀಯ ಪಕ್ಷ ಮರು ಆಯ್ಕೆಗಾಗಿ ಹಿಂದೆ ನಡೆಸಿದಂತೆಯೆ ಧ್ರುವೀಕರಣದ ತೀವ್ರ ಪ್ರಚಾರಾಭಿಯಾನ ನಡೆಸಲಿದೆ. ಇಲ್ಲಿನ ವಿರೋಧ ಪಕ್ಷಗಳು ಅದನ್ನು ಕೌಂಟರ್ ಮಾಡಲು ಸಜ್ಜಾಗಿವೆಯೇ? ರಾಷ್ಟ್ರವ್ಯಾಪಿ ಅಸ್ತಿತ್ವವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಂದು ಜನಪರ-ಪ್ರಗತಿಪರ ನಿಲುವುಗಳನ್ನು ಮತ್ತು ಬಲಪಂಥೀಯ ನೀತಿಗಳ ವಿರುದ್ಧವಾದ ಪೊಸಿಶನ್‌ಅನ್ನು ತೆಗೆದುಕೊಳ್ಳುವ ಮುಖಂಡರುಗಳು ಕಾಣಿಸುತ್ತಿಲ್ಲ. ಸಂಪತ್ತಿನ ಅಸಮಾನತೆ, ಪ್ರಾತಿನಿಧ್ಯ, ಹವಾಮಾನ ವೈಪರೀತ್ಯ ಇಂತಹ ವಿಷಯಗಳು ಇಲ್ಲಿನ್ನೂ ಚುನಾವಣೆಯ ವಿಷಯಗಳಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯೇ ದೊಡ್ಡದಿದೆ ಎಂಬುದಂತೂ ನಿಚ್ಚಳ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...