Homeಅಂಕಣಗಳುಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್'!

ಅಮೆರಿಕದಲ್ಲಿ ಬಲಪಂಥೀಯರ ಚುನಾವಣಾ ವಿಷಯವಾಗುತ್ತಿರುವ ‘ಆ್ಯಂಟಿ ವೋಕ್’!

- Advertisement -
- Advertisement -

ದಿಲ್ಬರ್ಟ್ ಮತ್ತು ರೋಲ್ಡ್ ಡಾಲ್ ಹಾಗೂ ಎಚ್ಚೆತ್ತ ಮಾಧ್ಯಮಗಳ ಬಗ್ಗೆ ಕಳೆದ ವಾರ ಬರೆದ ಸಂಪಾದಕೀಯದಲ್ಲಿ, ಈ ಎಚ್ಚರಿಕೆಯನ್ನು ’ವೋಕ್ ಸಂಸ್ಕೃತಿ’ ಅಥವಾ ’ವೋಕಿಸಂ’ ಎಂಬ ಬಗೆದು ಹೀಗಳೆಯಲು ಹಲವರು ಪ್ರಯತ್ನಿಸುವ ಬಗ್ಗೆ ಪ್ರಸ್ತಾಪಿಸಿ ಲೇಖನವನ್ನು ಕೊನೆಗೊಳಿಸಲಾಗಿತ್ತು. ’ವೋಕ್-ವಿರೋಧಿ’ ಅಭಿಯಾನವನ್ನೇ ಪ್ರಧಾನವಾಗಿಟ್ಟುಕೊಂಡು ಯುಎಸ್‌ಎನ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ವಿವೇಕ್ ಬಗ್ಗೆ ಸುದೀರ್ಘ ಲೇಖನವನ್ನು ಪ್ರಕಟಿಸಿದ್ದ ನ್ಯೂಯಾರ್ಕರ್ ಪತ್ರಿಕೆ ಅವರನ್ನು ’ಆಂಟಿ ವೋಕ್ ಇಂಕ್’ ಸಿಇಒ ಎಂದು ಕರೆದಿತ್ತು. 21ನೇ ಶತಮಾನದಲ್ಲಿ ಜನಾಂಗ, ಲಿಂಗತ್ವ, ಹವಾಮಾನ, ಸವಲತ್ತು, ಪ್ರಾತಿನಿಧ್ಯ ಮುಂತಾದ ಸಂಗತಿಗಳ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳುತ್ತಿರುವ ಅಥವಾ ಎಚ್ಚರಗೊಳ್ಳಬೇಕಿರುವ ಆಶಯದ ವಿರುದ್ಧ ಹೂಡಿರುವ ಈ ’ವೋಕ್-ವಿರೋಧಿ’ ಅಭಿಯಾನ ದಿನೇದಿನೇ ಬಲಪಂಥೀಯ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ. ಅಮೆರಿಕದ ತೀವ್ರ ಬಲಪಂಥೀಯ ಟಿವಿ ಚಾನೆಲ್ ಆದ ಫಾಕ್ಸ್ ನ್ಯೂಸ್ ಕಾರ್ಯಕ್ರಮಗಳಲ್ಲಿ ವಿವೇಕ್ ರಾಮಸ್ವಾಮಿ ಕಾಯಂಆಗಿ ಹೋಗಿದ್ದಾರೆ ಎನ್ನುತ್ತವೆ ವರದಿಗಳು.

ಸ್ಯಾಂಪಲ್‌ಗೆ ವಿವೇಕ್ ಅವರ ಒಂದು ಟ್ವೀಟ್ ನೋಡಿ: “ನಾನು ಅಧ್ಯಕ್ಷನಾಗಿ, ಫೆಡೆರಲ್ ಕಾನೂನಾದ (ಯುಎಸ್‌ಎ ರಾಷ್ಟ್ರ ಮತ್ತು ರಾಜ್ಯಗಳು ಸೇರಿ ಮಾಡಿರುವ) ’ಅಫರ್ಮೆಟಿವ್ ಆಕ್ಷನ್’ ಅನ್ನು (ಅಂದರೆ, ಜನಾಂಗೀಯ ತಾರತಮ್ಯ ಕೊನೆಗಾಣಿಸಲು ನೀಡುವ ಮೀಸಲಾತಿ) ಕೊನೆಗೊಳಿಸುತ್ತೇನೆ. ಜನಾಂಗದ ಆಧಾರದ ಮೇಲೆ ಮೀಸಲಾತಿ ನೀಡುವ ಲಿಂಡನ್ ಜಾನ್ಸನ್ ಕಾರ್ಯಾಂಗ ಆದೇಶ 11246ವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಜಾನ್ಸನ್ ನಂತರ ಪ್ರತಿ ರಿಪಬ್ಲಿಕನ್‌ಗೆ ಈ ಕೆಲಸ ಮಾಡುವ ಅವಕಾಶವಿತ್ತು. ನಾನು ಯಾವುದೇ ಕ್ಷಮೆ ಕೇಳದೆ ಮಾಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ “ಪ್ರತಿಭೆ, ಶ್ರೇಷ್ಠತೆ, ಸ್ವ-ಆಡಳಿತ, ಮುಕ್ತ ಅಭಿವ್ಯಕ್ತಿ. ಇದು ಹೊಸ ಅಮೆರಿಕನ್ ಡ್ರೀಮ್ ಎಂದು ಬರೆದುಕೊಳ್ಳುತ್ತಾರೆ. ಯಾವ ಮೌಲ್ಯಗಳನ್ನು ಮರುಮೌಲ್ಯಮಾಪನ ಮಾಡಿ ಸಮಾನತೆ, ಪ್ರಾತಿನಿಧ್ಯದ ಕಡೆಗೆ ಚಲಿಸಬೇಕೆಂದು ಎಚ್ಚೆತ್ತ ಮನಸ್ಸುಗಳು ತುಡಿಯುತ್ತಿವೆಯೋ ಅವನ್ನೆಲ್ಲಾ ಅವಮಾನಿಸಿ ವಿರೋಧಿಸುವ ಅಭಿಯಾನವೇ ’ಆ್ಯಂಟಿ ವೋಕಿಸಂ’. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ, ಜನಾಂಗೀಯ ನಿಂದನೆಯ ಬಗ್ಗೆ ಕಠಿಣ ಕ್ರಮಗಳು, ಜನ ಕಲ್ಯಾಣ ಯೋಜನೆಗಳು – ಹೀಗೆ ಜನಪರ ನೀತಿಗಳನ್ನೆಲ್ಲಾ ತೊಡೆದುಹಾಕಿ ’ಅಮೆರಿಕ ಫಸ್ಟ್’ ಎನಿಸಿಕೊಳ್ಳಬೇಕೆನ್ನುವ ’ಹುಸಿ ಶ್ರೇಷ್ಠತೆಯ’ ಧೋರಣೆಯೇ ಇದರ ಮೊದಲ ಆದ್ಯತೆ. ಮುಕ್ತ ಅಭಿವ್ಯಕ್ತಿ ಎಂಬುದು ಜವಾಬ್ದಾರಿ ಹೊತ್ತುಕೊಳ್ಳದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿ ಉಳಿಯಬೇಕೆಂಬ ವಾದ ಇವರದ್ದು. ಯಾವುದೇ ಮಟ್ಟದಲ್ಲಿ ಕೂಡ ಜನಾಂಗೀಯ, ಅಲ್ಪಸಂಖ್ಯಾತರ, ಮಹಿಳೆಯರ ಅವಮಾನ-ನಿಂದನೆಯನ್ನು ಮಾಡಲು ಸ್ವಾತಂತ್ರ್ಯ ಇರಬೇಕೆಂಬುದು ಇವರ ಫ್ರೀ ಸ್ಪೀಚ್ ವಾದದ ಉದ್ದೇಶ!

ಇದನ್ನೂ ಓದಿ: ದಿಲ್ಬರ್ಟ್, ರೋಲ್ಡ್ ಡಾಲ್ ಮತ್ತು ಎಚ್ಚೆತ್ತ ಮಾಧ್ಯಮಗಳ ಸುತ್ತ…

ಈ ವಿವೇಕ್ ರಾಮಸ್ವಾಮಿಯ ಕುಟುಂಬದವರು ಕೇರಳ ಮೂಲದ ಬ್ರಾಹ್ಮಣ ಜಾತಿಗೆ ಸೇರಿದವರು. ಇಲ್ಲಿನ ಬ್ರಾಹ್ಮಣ್ಯದ ’ಶ್ರೇಷ್ಠತೆಯ’ ಬಲಪಂಥೀಯತೆ ಮತ್ತು ಅಮೆರಿಕದಲ್ಲಿ ಹುಟ್ಟಿ ಬೆಳೆದು ಮೈಗೂಡಿಸಿಕೊಂಡಿರುವ ಕಾರ್ಪೊರೆಟ್ ಸಂಸ್ಕೃತಿಯ ಬಲಪಂಥೀಯತೆ ಒಟ್ಟಿಗೆ ಸೇರಿ ವಿವೇಕ್ ಅಮೆರಿಕದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ನಾಂದಿ ಹಾಡುತ್ತಿದ್ದಾರೆ; ಡೊನಾಲ್ಡ್ ಟ್ರಂಪ್ ಮಾಡಿದ ಡ್ಯಾಮೇಜ್ ಏನೇನೂ ಸಾಲದೆಂಬಂತೆ. ಇಂತಹ ’ವೋಕ್-ಎಚ್ಚರ’ದ ವಿರುದ್ಧದ ಅಭಿಯಾನ ಮೀಸಲಾತಿ ವಿರೋಧಿಯಾಗಿ, ಖಾಸಗೀಕರಣದ ಪ್ರತಿಪಾದಕನಾಗಿ, ದೈತ್ಯ ಕಾರ್ಪೊರೆಟ್ ಕುಳಗಳ ಸಂರಕ್ಷರರಾಗಿ ಬೇರೆಬೇರೆ ಅವತಾರಗಳಲ್ಲಿ ಭಾರತದಲ್ಲಿಯೂ ನಮಗೆ ಕಾಣಸಿಗುತ್ತದೆ. ಅದು ಮುಂದೆ ಇನ್ನೂ ತೀವ್ರವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಆಧುನಿಕ ಜಗತ್ತಿಗೆ ಬೇಕಾದ ಸಮಾನತೆಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಕಾಳಜಿಯನ್ನು ಸ್ವಲ್ಪವಾದರೂ ಉಳಿಸಿಕೊಂಡಿರುವ ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಮತ್ತು ನಾಗರಿಕ ಹಕ್ಕುಗಳ ಹೋರಾಟ ಗುಂಪುಗಳು ಸಕ್ರಿಯವಾಗಬೇಕಿದೆ.

2014ರಲ್ಲಿ ಕಪ್ಪು ವ್ಯಕ್ತಿಯೊಬ್ಬನನ್ನು ಅಮೆರಿಕದ ಪೊಲೀಸನೊಬ್ಬ ಕೊಂದಿದ್ದು ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಆಗ ’ಸ್ಟೇ ವೋಕ್’ ಅಥವಾ ’ವೋಕ್’ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. 2020ರಲ್ಲಿ ಯುಎಸ್‌ಎನ ಪೊಲೀಸನೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಕತ್ತುಹಿಸುಕಿ ಸಾರ್ವಜನಿಕವಾಗಿಯೇ ಹತ್ಯೆ ಮಾಡಿದಾಗ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ ತೀವ್ರ ಸ್ವರೂಪ ಪಡೆದುಕೊಂಡಿತು. ಇದು ಜಗತ್ತಿನಾದ್ಯಂತ ಜನಾಂಗೀಯ ಹಿಂಸೆಗಳ ಬಗ್ಗೆ ಚರ್ಚೆಗೆ ಕಾರಣವಾಯಿತು. ಜನಾಂಗೀಯ ನಿಂದನೆ ಮತ್ತು ಹಿಂಸೆಗಳ ಬಗ್ಗೆ ಜಾಗೃತಿ ತಳೆಯುವಂತೆ ಯುವ ಸಮುದಾಯವನ್ನು ಪ್ರಚೋದಿಸಿತು. ಭಾರತದಲ್ಲಿ ಜಾತಿನಿಂದನೆ ಮತ್ತು ಹಿಂಸೆಯ ಬಗ್ಗೆಗೂ ಚರ್ಚೆಗಳಾದವು. ಕೆಲಸದ ಸ್ಥಳಗಳಲ್ಲಿ ಜನರು ಹೆಚ್ಚು ಸಂವೇದನಾಶೀಲರಾಗಲು ತಳಸಮುದಾಯಗಳಿಂದ ಆಗ್ರಹ ಮೂಡಿಬಂತು. ಆಗ ಶೋಷಕ ಸಮುದಾಯಕ್ಕೆ ಸೇರಿದ ಕೆಲವರಾದರೂ ಎಚ್ಚೆತ್ತು ಸ್ಪಂದಿಸಲು ಪ್ರಾರಂಭಿಸಿದರು. ಅದರ ಜೊತೆಗೇ ಈ ಎಚ್ಚೆತ್ತ ಪ್ರಜ್ಞೆಯನ್ನು ಪ್ರಶ್ನಿಸುವ ಅವಮಾನಿಸುವ ವಿದ್ಯಮಾನಗಳೂ ಚುರುಕು ಪಡೆದವು. ಇಂದಿಗೂ ಈ ವಿವೇಕ್ ರಾಮಸ್ವಾಮಿ ’ಬ್ಲಾಕ್ ಲೈವ್ಸ್ ಮ್ಯಾಟರ್‍ಸ್’ಅನ್ನು ಗೇಲಿಮಾಡುವುದನ್ನು ತನ್ನ ಕಾಯಕವನ್ನಾಗಿಸಿಕೊಂಡಿದ್ದಾರೆ. ಅದಕ್ಕಾಗಿ ಆ ಚಳವಳಿಯಲ್ಲಿ ಭಾಗಿಯಾದವರ ಚಾರಿತ್ರ್ಯಹರಣಕ್ಕೂ ಮುಂದಾಗುತ್ತಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆಗಳು 2024ರ ಮೊದಲ ಭಾಗದಲ್ಲಿ ಜರುಗಲಿವೆ. ಅಮೆರಿಕದ ಚುನಾವಣೆಗಳು 2024ರ ಕೊನೆಗೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷ ತೀವ್ರ ಬಲಪಂಥೀಯತೆಯ ಹೊಸ ರೂಪದಲ್ಲಿ ಅವತರಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. 2020ರಲ್ಲಿ ಹೇಗೋ ರಿವರ್ಸ್ ಪೋಲರೈಸೇಷನ್ ಸಾಧ್ಯವಾಗಿ ಟ್ರಂಪ್‌ನ ಸೋಲು ಸಾಧ್ಯವಾಗಿತ್ತು. ಆದರೆ ಟ್ರಂಪ್‌ಗಿಂತಲೂ ತನ್ನ ಪ್ರತಿಗಾಮಿ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಬಲ್ಲ ವ್ಯಕ್ತಿತ್ವ ವಿವೇಕ್ ಅವರದ್ದು. ಇವರ ನರೆಟಿವ್‌ಅನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸುವ ಕಾರ್ಯಸ್ವರೂಪ ಡೆಮಾಕ್ರಟ್ ಪಕ್ಷದಿಂದ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿಲ್ಲ. ಭಾರತದಲ್ಲಿಯೂ ಇದೇ ಸನ್ನಿವೇಶವನ್ನು ನಾವು ಮುಂಗಾಣಬಹುದಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆಡಳಿತ ನಡೆಸುತ್ತಿರುವ ಬಲಪಂಥೀಯ ಪಕ್ಷ ಮರು ಆಯ್ಕೆಗಾಗಿ ಹಿಂದೆ ನಡೆಸಿದಂತೆಯೆ ಧ್ರುವೀಕರಣದ ತೀವ್ರ ಪ್ರಚಾರಾಭಿಯಾನ ನಡೆಸಲಿದೆ. ಇಲ್ಲಿನ ವಿರೋಧ ಪಕ್ಷಗಳು ಅದನ್ನು ಕೌಂಟರ್ ಮಾಡಲು ಸಜ್ಜಾಗಿವೆಯೇ? ರಾಷ್ಟ್ರವ್ಯಾಪಿ ಅಸ್ತಿತ್ವವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಂದು ಜನಪರ-ಪ್ರಗತಿಪರ ನಿಲುವುಗಳನ್ನು ಮತ್ತು ಬಲಪಂಥೀಯ ನೀತಿಗಳ ವಿರುದ್ಧವಾದ ಪೊಸಿಶನ್‌ಅನ್ನು ತೆಗೆದುಕೊಳ್ಳುವ ಮುಖಂಡರುಗಳು ಕಾಣಿಸುತ್ತಿಲ್ಲ. ಸಂಪತ್ತಿನ ಅಸಮಾನತೆ, ಪ್ರಾತಿನಿಧ್ಯ, ಹವಾಮಾನ ವೈಪರೀತ್ಯ ಇಂತಹ ವಿಷಯಗಳು ಇಲ್ಲಿನ್ನೂ ಚುನಾವಣೆಯ ವಿಷಯಗಳಾಗುತ್ತಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಜವಾಬ್ದಾರಿಯೇ ದೊಡ್ಡದಿದೆ ಎಂಬುದಂತೂ ನಿಚ್ಚಳ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...