Homeಕರ್ನಾಟಕಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

- Advertisement -
- Advertisement -

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಣ್ಣಿನ ಸೊಗಡು ಇದ್ದು, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಾದದ್ದು ನಾಗರೀಕತೆಯ ಕರ್ತವ್ಯ. ಆದರೆ, ದೇಶವನ್ನು ತಮ್ಮದೇ ಜಾತಿ- ಧರ್ಮ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಕಾಡುತ್ತಿರುವಂತೆಯೇ ಇದೀಗ ಭಾಷಾ ಶ್ರೇಷ್ಠತೆಯ ವ್ಯಸನವೂ ದೇಶಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಭಾರತದಲ್ಲಿ ನೂರೆಂಟು ಭಾಷೆಗಳಿವೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆದರೆ, ಕನ್ನಡ ಅಭಿವೃದ್ಧಿಗೆ ಬಿಡಿಗಾಸು ನೀಡದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಿದಂತೆ ಇದೀಗ ಸಂಸ್ಕೃತವನ್ನೂ ಹೇರಲು ಮುಂದಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೂರಾರು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಹೊರಟಿದೆ. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಹಲವು ಬಲಪಂಥೀಯರು ಸಂಸ್ಕೃತ ಭಾರತದ ಆದಿಭಾಷೆ, ಮೂಲ ಭಾಷೆ, ಭಾರತದ ಮಾತೃಭಾಷೆ ಎಂದೆಲ್ಲಾ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಂಸ್ಕೃತ ಭಾಷೆಯ ಅಬ್ಬರ ಜೋರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಮೂಲ ಭಾಷೆ ಯಾವುದು? ಸಂಸ್ಕೃತಕ್ಕೂ ಭಾರತಕ್ಕೂ ಇರುವ ಸಂಬಂಧವೇನು? ಸಂಸ್ಕೃತ ನಿಜಕ್ಕೂ ಭಾರತದ ಮೂಲ ಭಾಷೆಯ-ದೇವ ಭಾಷೆಯಾ? ಇಷ್ಟಕ್ಕೂ ಸಂಸ್ಕೃತ ಇದೀಗ ಸತ್ತ ಭಾಷೆಯಾಗಿರುವುದು ಏಕೆ? ಎಂಬ ಅಸಲಿ ವಿಚಾರಗಳ ಕಡೆಗೆ ಗಮನ ಹರಿಸಬೇಕಾದ ತುರ್ತು ಎದುರಾಗಿದೆ.

ಸಂಸ್ಕೃತದ ಮೂಲ ಯಾವುದು?

ಜಗತ್ತಿನಲ್ಲಿ ಅತಿದೊಡ್ಡ ನುಡಿ ಕುಟುಂಬ ಇಂಡೋ ಯುರೋಪಿಯನ್ ಕುಟುಂಬ. ಲಿತುವೇನಿಯಾದ ಪುರಾತತ್ವ ತಜ್ಞೆ ಮಾರಿಜಾ ಗಿಂಬುಟಾಸ್ ಎನ್ನುವವರು ಪ್ರತಿಪಾದಿಸಿದ್ದ ಕುರ್ಗಾನ್ ಹಯ್ಪಾತಿಸಿಸ್ (Kurgan hypothesis) ಪ್ರಕಾರ ಇಂಡೋ ಯೂರೋಪಿಯನ್ನರ ತಾಯ್ನೆಲ ಇರುವುದು ಪಾಂಟಿಕ್ ಸ್ಟೆಪ್ (Pontic Steppe) ಜಾಗದಲ್ಲಿ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ ಜಾಗ. ಈಗ್ಗೆ 5000 ವರ್ಷಗಳ ಹಿಂದೆ ಅಲ್ಲಿದ್ದ ಆದಿ ಇಂಡೊ ಯೂರೋಪಿಯನ್ ನುಡಿಗರು ಯೂರೋಪ್ ಮತ್ತು ದಕ್ಶಿಣ ಏಶಿಯಾ ಕಡೆಗೆ ಎರಡು ಕವಲುಗಳಾಗಿ ವಲಸೆ ಹೋದರು. ಈ ಮೂನಲಕ ಜಗತ್ತಿನ ಎಲ್ಲಾ ಕಡೆ ಇಂಡೋ ಯೂರೋಪಿಯನ್ ಕುಟುಂಬದ ನುಡಿಗಳನ್ನು ಹಬ್ಬಿಸಿದರು. ಈ ಕುರ್ಗPನ್ ಹಯ್ಪಾತಿಸೀಸ್ ನ್ನು ಇತ್ತೀಚಿನ DNA ಸಂಶೋದನೆಗಳು ಸಹ ಗಟ್ಟಿಗೊಳಿಸಿವೆ.

ಈ ಇಂಡೋ ಯೂರೋಪಿಯನ್ ನುಡಿ ಕುಟುಂಬದ ಎರಡು ಕವಲುಗಳು ಇಂಡೋ ಆರ್ಯನ್ ಕವಲು ಮತ್ತು ಇರಾನಿಯನ್ ಕವಲು. ಸಂಸ್ಕೃತ ನುಡಿಯು ಇಂಡೋ ಕುಟುಂಬ ಕವಲಿನ ನುಡಿಯಾದರೆ ಅವೆಸ್ತ ಮತ್ತು ಪರ್ಸಿಯನ್ ಇರಾನಿಯನ್ ಕವಲಿನ ನುಡಿಗಳು. ಬಹಳ ಹಳೆಯದಾದ ಋಗ್ವೇದ ಸಂಸ್ಕೃತದಲ್ಲಿ ಇದ್ದರೆ ಜೊರಾಸ್ಟ್ರಿಯನ್ನರ ಜಂಡ್ ಅವೆಸ್ತಾ ಗ್ರಂಥವು ಅವೆಸ್ತಾ ನುಡಿಯಲ್ಲಿದೆ. ಈ ಎರಡೂ ಪ್ರಾಚೀನ ಗ್ರಂಥಗಳ ನಡುವೆ ಬಹಳ ಸಾಮ್ಯತೆ ಇರುವುದು ಸಹ ಕಂಡುಬಂದಿದೆ.

ಸಂಸ್ಕೃತ ನುಡಿಯ ಮೂಲಕ ಇಂಡೋ ಯೂರೋಪಿಯನ್ ಕುಟುಂಬದ ನುಡಿ ಬಾರತಕ್ಕೆ ಬಂದದ್ದು ಇಂದಿಗೆ 3,500 ವರ್ಷಗಳ ಹಿಂದೆ. ಈ ಹೊತ್ತಿಗೆ ಭಾರತದಲ್ಲಿ ದ್ರಾವಿಡ ನುಡಿ ಬಹಳ ಕುಟುಂಬ ದೊಡ್ಡ ನುಡಿ ಕುಟುಂಬವಾಗಿ ಬಾರತದ ಜನರಲ್ಲಿ ಚಾಲ್ತಿಯಲ್ಲಿತ್ತು. ಸಿಂದೂ ಬಯಲಿನ ನಾಗರೀಕತೆಯೂ ದ್ರಾವಿಡ ನುಡಿಗಳ ಮೂಲಕವೇ ಕಟ್ಟಲ್ಪಟ್ಟಿತ್ತು.

ಜೊತೆಗೇ ಮತ್ತೊಂದು ನುಡಿ ಕುಟುಂಬದ ಕೋಲಾ ಮುಂಡಾ ನುಡಿಯೂ ಭಾರತದಲ್ಲಿ ಬೇರು ಬಿಟ್ಟು ಬೆಳೆದಿತ್ತು. ಈ ಭಾಷೆಗಳಲ್ಲಿ ಭಾರತದ ಮಣ್ಣಿನ ಸೊಗಡಿತ್ತು. ಅಷ್ಟರಲ್ಲಾಗಲೇ ದ್ರಾವಿಡ ಬಾಷೆಗಳಲ್ಲಿ ಸಾಹಿತ್ಯಗಳನ್ನೇ ರಚಿಸಲಾಗಿತ್ತು. ಆದರೆ, ತದನಂತರದ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಸಂಸ್ಕೃತ ಹೇಗೆ ಭಾರತದ ಮೂಲ ಮಾತೃ ಭಾಷೆಯಾಯಿತು? ಎಂದು ಪ್ರಶ್ನೆ ಮಾಡುತ್ತಾರೆ ಸಾಮಾಜಿಕ ಹೋರಾಟಗಾರ, ಎಲ್ಲರ ಕನ್ನಡ ಚಳವಳಿಯ ಪ್ರಮುಖರಲ್ಲೊಬ್ಬರಾದ ಹರ್ಷಕುಮಾರ ಕುಗ್ವೆ.

ಪ್ರಖ್ಯಾತ ಸಂಶೋಧಕರಾದ ಷಾ ಶೆಟ್ಟರ್, ಸಂಗಮೇಶ್ ಬದರಿಮಠ್ ರಂತಹ ಸಂಶೋಧಕರೂ ಸಹ ದ್ರಾವಿಡ ಭಾಷೆಯ ಭಾರತದ ಮೂಲ ಭಾಷೆ ಎಂಬುದನ್ನು ಈಗಾಗಲೇ ತಮ್ಮ ಸಂಶೋಧನೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದು ಹಲವರು ಸಂಸ್ಕೃತವೇ ಭಾರತದ ಮಾತೃ ಭಾಷೆ ಎಂದು ಆಧಾರವಿಲ್ಲದೆ ವಾದಿಸುತ್ತಿರುವುದು ವಿಪರ್ಯಾಸ.

(ಮಾಹಿತಿ – ಹರ್ಷಕುಮಾರ್ ಕುಗ್ವೆ)


ಇದನ್ನೂ ಓದಿರಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...