Homeಕರ್ನಾಟಕಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

- Advertisement -
- Advertisement -

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಣ್ಣಿನ ಸೊಗಡು ಇದ್ದು, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಾದದ್ದು ನಾಗರೀಕತೆಯ ಕರ್ತವ್ಯ. ಆದರೆ, ದೇಶವನ್ನು ತಮ್ಮದೇ ಜಾತಿ- ಧರ್ಮ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಕಾಡುತ್ತಿರುವಂತೆಯೇ ಇದೀಗ ಭಾಷಾ ಶ್ರೇಷ್ಠತೆಯ ವ್ಯಸನವೂ ದೇಶಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಭಾರತದಲ್ಲಿ ನೂರೆಂಟು ಭಾಷೆಗಳಿವೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆದರೆ, ಕನ್ನಡ ಅಭಿವೃದ್ಧಿಗೆ ಬಿಡಿಗಾಸು ನೀಡದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಿದಂತೆ ಇದೀಗ ಸಂಸ್ಕೃತವನ್ನೂ ಹೇರಲು ಮುಂದಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೂರಾರು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಹೊರಟಿದೆ. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಹಲವು ಬಲಪಂಥೀಯರು ಸಂಸ್ಕೃತ ಭಾರತದ ಆದಿಭಾಷೆ, ಮೂಲ ಭಾಷೆ, ಭಾರತದ ಮಾತೃಭಾಷೆ ಎಂದೆಲ್ಲಾ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಂಸ್ಕೃತ ಭಾಷೆಯ ಅಬ್ಬರ ಜೋರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಮೂಲ ಭಾಷೆ ಯಾವುದು? ಸಂಸ್ಕೃತಕ್ಕೂ ಭಾರತಕ್ಕೂ ಇರುವ ಸಂಬಂಧವೇನು? ಸಂಸ್ಕೃತ ನಿಜಕ್ಕೂ ಭಾರತದ ಮೂಲ ಭಾಷೆಯ-ದೇವ ಭಾಷೆಯಾ? ಇಷ್ಟಕ್ಕೂ ಸಂಸ್ಕೃತ ಇದೀಗ ಸತ್ತ ಭಾಷೆಯಾಗಿರುವುದು ಏಕೆ? ಎಂಬ ಅಸಲಿ ವಿಚಾರಗಳ ಕಡೆಗೆ ಗಮನ ಹರಿಸಬೇಕಾದ ತುರ್ತು ಎದುರಾಗಿದೆ.

ಸಂಸ್ಕೃತದ ಮೂಲ ಯಾವುದು?

ಜಗತ್ತಿನಲ್ಲಿ ಅತಿದೊಡ್ಡ ನುಡಿ ಕುಟುಂಬ ಇಂಡೋ ಯುರೋಪಿಯನ್ ಕುಟುಂಬ. ಲಿತುವೇನಿಯಾದ ಪುರಾತತ್ವ ತಜ್ಞೆ ಮಾರಿಜಾ ಗಿಂಬುಟಾಸ್ ಎನ್ನುವವರು ಪ್ರತಿಪಾದಿಸಿದ್ದ ಕುರ್ಗಾನ್ ಹಯ್ಪಾತಿಸಿಸ್ (Kurgan hypothesis) ಪ್ರಕಾರ ಇಂಡೋ ಯೂರೋಪಿಯನ್ನರ ತಾಯ್ನೆಲ ಇರುವುದು ಪಾಂಟಿಕ್ ಸ್ಟೆಪ್ (Pontic Steppe) ಜಾಗದಲ್ಲಿ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ ಜಾಗ. ಈಗ್ಗೆ 5000 ವರ್ಷಗಳ ಹಿಂದೆ ಅಲ್ಲಿದ್ದ ಆದಿ ಇಂಡೊ ಯೂರೋಪಿಯನ್ ನುಡಿಗರು ಯೂರೋಪ್ ಮತ್ತು ದಕ್ಶಿಣ ಏಶಿಯಾ ಕಡೆಗೆ ಎರಡು ಕವಲುಗಳಾಗಿ ವಲಸೆ ಹೋದರು. ಈ ಮೂನಲಕ ಜಗತ್ತಿನ ಎಲ್ಲಾ ಕಡೆ ಇಂಡೋ ಯೂರೋಪಿಯನ್ ಕುಟುಂಬದ ನುಡಿಗಳನ್ನು ಹಬ್ಬಿಸಿದರು. ಈ ಕುರ್ಗPನ್ ಹಯ್ಪಾತಿಸೀಸ್ ನ್ನು ಇತ್ತೀಚಿನ DNA ಸಂಶೋದನೆಗಳು ಸಹ ಗಟ್ಟಿಗೊಳಿಸಿವೆ.

ಈ ಇಂಡೋ ಯೂರೋಪಿಯನ್ ನುಡಿ ಕುಟುಂಬದ ಎರಡು ಕವಲುಗಳು ಇಂಡೋ ಆರ್ಯನ್ ಕವಲು ಮತ್ತು ಇರಾನಿಯನ್ ಕವಲು. ಸಂಸ್ಕೃತ ನುಡಿಯು ಇಂಡೋ ಕುಟುಂಬ ಕವಲಿನ ನುಡಿಯಾದರೆ ಅವೆಸ್ತ ಮತ್ತು ಪರ್ಸಿಯನ್ ಇರಾನಿಯನ್ ಕವಲಿನ ನುಡಿಗಳು. ಬಹಳ ಹಳೆಯದಾದ ಋಗ್ವೇದ ಸಂಸ್ಕೃತದಲ್ಲಿ ಇದ್ದರೆ ಜೊರಾಸ್ಟ್ರಿಯನ್ನರ ಜಂಡ್ ಅವೆಸ್ತಾ ಗ್ರಂಥವು ಅವೆಸ್ತಾ ನುಡಿಯಲ್ಲಿದೆ. ಈ ಎರಡೂ ಪ್ರಾಚೀನ ಗ್ರಂಥಗಳ ನಡುವೆ ಬಹಳ ಸಾಮ್ಯತೆ ಇರುವುದು ಸಹ ಕಂಡುಬಂದಿದೆ.

ಸಂಸ್ಕೃತ ನುಡಿಯ ಮೂಲಕ ಇಂಡೋ ಯೂರೋಪಿಯನ್ ಕುಟುಂಬದ ನುಡಿ ಬಾರತಕ್ಕೆ ಬಂದದ್ದು ಇಂದಿಗೆ 3,500 ವರ್ಷಗಳ ಹಿಂದೆ. ಈ ಹೊತ್ತಿಗೆ ಭಾರತದಲ್ಲಿ ದ್ರಾವಿಡ ನುಡಿ ಬಹಳ ಕುಟುಂಬ ದೊಡ್ಡ ನುಡಿ ಕುಟುಂಬವಾಗಿ ಬಾರತದ ಜನರಲ್ಲಿ ಚಾಲ್ತಿಯಲ್ಲಿತ್ತು. ಸಿಂದೂ ಬಯಲಿನ ನಾಗರೀಕತೆಯೂ ದ್ರಾವಿಡ ನುಡಿಗಳ ಮೂಲಕವೇ ಕಟ್ಟಲ್ಪಟ್ಟಿತ್ತು.

ಜೊತೆಗೇ ಮತ್ತೊಂದು ನುಡಿ ಕುಟುಂಬದ ಕೋಲಾ ಮುಂಡಾ ನುಡಿಯೂ ಭಾರತದಲ್ಲಿ ಬೇರು ಬಿಟ್ಟು ಬೆಳೆದಿತ್ತು. ಈ ಭಾಷೆಗಳಲ್ಲಿ ಭಾರತದ ಮಣ್ಣಿನ ಸೊಗಡಿತ್ತು. ಅಷ್ಟರಲ್ಲಾಗಲೇ ದ್ರಾವಿಡ ಬಾಷೆಗಳಲ್ಲಿ ಸಾಹಿತ್ಯಗಳನ್ನೇ ರಚಿಸಲಾಗಿತ್ತು. ಆದರೆ, ತದನಂತರದ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಸಂಸ್ಕೃತ ಹೇಗೆ ಭಾರತದ ಮೂಲ ಮಾತೃ ಭಾಷೆಯಾಯಿತು? ಎಂದು ಪ್ರಶ್ನೆ ಮಾಡುತ್ತಾರೆ ಸಾಮಾಜಿಕ ಹೋರಾಟಗಾರ, ಎಲ್ಲರ ಕನ್ನಡ ಚಳವಳಿಯ ಪ್ರಮುಖರಲ್ಲೊಬ್ಬರಾದ ಹರ್ಷಕುಮಾರ ಕುಗ್ವೆ.

ಪ್ರಖ್ಯಾತ ಸಂಶೋಧಕರಾದ ಷಾ ಶೆಟ್ಟರ್, ಸಂಗಮೇಶ್ ಬದರಿಮಠ್ ರಂತಹ ಸಂಶೋಧಕರೂ ಸಹ ದ್ರಾವಿಡ ಭಾಷೆಯ ಭಾರತದ ಮೂಲ ಭಾಷೆ ಎಂಬುದನ್ನು ಈಗಾಗಲೇ ತಮ್ಮ ಸಂಶೋಧನೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದು ಹಲವರು ಸಂಸ್ಕೃತವೇ ಭಾರತದ ಮಾತೃ ಭಾಷೆ ಎಂದು ಆಧಾರವಿಲ್ಲದೆ ವಾದಿಸುತ್ತಿರುವುದು ವಿಪರ್ಯಾಸ.

(ಮಾಹಿತಿ – ಹರ್ಷಕುಮಾರ್ ಕುಗ್ವೆ)


ಇದನ್ನೂ ಓದಿರಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...