Homeಕರ್ನಾಟಕಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

- Advertisement -
- Advertisement -

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಣ್ಣಿನ ಸೊಗಡು ಇದ್ದು, ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕಾದದ್ದು ನಾಗರೀಕತೆಯ ಕರ್ತವ್ಯ. ಆದರೆ, ದೇಶವನ್ನು ತಮ್ಮದೇ ಜಾತಿ- ಧರ್ಮ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಕಾಡುತ್ತಿರುವಂತೆಯೇ ಇದೀಗ ಭಾಷಾ ಶ್ರೇಷ್ಠತೆಯ ವ್ಯಸನವೂ ದೇಶಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಭಾರತದಲ್ಲಿ ನೂರೆಂಟು ಭಾಷೆಗಳಿವೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಆದರೆ, ಕನ್ನಡ ಅಭಿವೃದ್ಧಿಗೆ ಬಿಡಿಗಾಸು ನೀಡದ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಿದಂತೆ ಇದೀಗ ಸಂಸ್ಕೃತವನ್ನೂ ಹೇರಲು ಮುಂದಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೂರಾರು ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಹೊರಟಿದೆ. ಇದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಹಲವು ಬಲಪಂಥೀಯರು ಸಂಸ್ಕೃತ ಭಾರತದ ಆದಿಭಾಷೆ, ಮೂಲ ಭಾಷೆ, ಭಾರತದ ಮಾತೃಭಾಷೆ ಎಂದೆಲ್ಲಾ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಸಂಸ್ಕೃತ ಭಾಷೆಯ ಅಬ್ಬರ ಜೋರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ಭಾರತದ ಮೂಲ ಭಾಷೆ ಯಾವುದು? ಸಂಸ್ಕೃತಕ್ಕೂ ಭಾರತಕ್ಕೂ ಇರುವ ಸಂಬಂಧವೇನು? ಸಂಸ್ಕೃತ ನಿಜಕ್ಕೂ ಭಾರತದ ಮೂಲ ಭಾಷೆಯ-ದೇವ ಭಾಷೆಯಾ? ಇಷ್ಟಕ್ಕೂ ಸಂಸ್ಕೃತ ಇದೀಗ ಸತ್ತ ಭಾಷೆಯಾಗಿರುವುದು ಏಕೆ? ಎಂಬ ಅಸಲಿ ವಿಚಾರಗಳ ಕಡೆಗೆ ಗಮನ ಹರಿಸಬೇಕಾದ ತುರ್ತು ಎದುರಾಗಿದೆ.

ಸಂಸ್ಕೃತದ ಮೂಲ ಯಾವುದು?

ಜಗತ್ತಿನಲ್ಲಿ ಅತಿದೊಡ್ಡ ನುಡಿ ಕುಟುಂಬ ಇಂಡೋ ಯುರೋಪಿಯನ್ ಕುಟುಂಬ. ಲಿತುವೇನಿಯಾದ ಪುರಾತತ್ವ ತಜ್ಞೆ ಮಾರಿಜಾ ಗಿಂಬುಟಾಸ್ ಎನ್ನುವವರು ಪ್ರತಿಪಾದಿಸಿದ್ದ ಕುರ್ಗಾನ್ ಹಯ್ಪಾತಿಸಿಸ್ (Kurgan hypothesis) ಪ್ರಕಾರ ಇಂಡೋ ಯೂರೋಪಿಯನ್ನರ ತಾಯ್ನೆಲ ಇರುವುದು ಪಾಂಟಿಕ್ ಸ್ಟೆಪ್ (Pontic Steppe) ಜಾಗದಲ್ಲಿ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ ಜಾಗ. ಈಗ್ಗೆ 5000 ವರ್ಷಗಳ ಹಿಂದೆ ಅಲ್ಲಿದ್ದ ಆದಿ ಇಂಡೊ ಯೂರೋಪಿಯನ್ ನುಡಿಗರು ಯೂರೋಪ್ ಮತ್ತು ದಕ್ಶಿಣ ಏಶಿಯಾ ಕಡೆಗೆ ಎರಡು ಕವಲುಗಳಾಗಿ ವಲಸೆ ಹೋದರು. ಈ ಮೂನಲಕ ಜಗತ್ತಿನ ಎಲ್ಲಾ ಕಡೆ ಇಂಡೋ ಯೂರೋಪಿಯನ್ ಕುಟುಂಬದ ನುಡಿಗಳನ್ನು ಹಬ್ಬಿಸಿದರು. ಈ ಕುರ್ಗPನ್ ಹಯ್ಪಾತಿಸೀಸ್ ನ್ನು ಇತ್ತೀಚಿನ DNA ಸಂಶೋದನೆಗಳು ಸಹ ಗಟ್ಟಿಗೊಳಿಸಿವೆ.

ಈ ಇಂಡೋ ಯೂರೋಪಿಯನ್ ನುಡಿ ಕುಟುಂಬದ ಎರಡು ಕವಲುಗಳು ಇಂಡೋ ಆರ್ಯನ್ ಕವಲು ಮತ್ತು ಇರಾನಿಯನ್ ಕವಲು. ಸಂಸ್ಕೃತ ನುಡಿಯು ಇಂಡೋ ಕುಟುಂಬ ಕವಲಿನ ನುಡಿಯಾದರೆ ಅವೆಸ್ತ ಮತ್ತು ಪರ್ಸಿಯನ್ ಇರಾನಿಯನ್ ಕವಲಿನ ನುಡಿಗಳು. ಬಹಳ ಹಳೆಯದಾದ ಋಗ್ವೇದ ಸಂಸ್ಕೃತದಲ್ಲಿ ಇದ್ದರೆ ಜೊರಾಸ್ಟ್ರಿಯನ್ನರ ಜಂಡ್ ಅವೆಸ್ತಾ ಗ್ರಂಥವು ಅವೆಸ್ತಾ ನುಡಿಯಲ್ಲಿದೆ. ಈ ಎರಡೂ ಪ್ರಾಚೀನ ಗ್ರಂಥಗಳ ನಡುವೆ ಬಹಳ ಸಾಮ್ಯತೆ ಇರುವುದು ಸಹ ಕಂಡುಬಂದಿದೆ.

ಸಂಸ್ಕೃತ ನುಡಿಯ ಮೂಲಕ ಇಂಡೋ ಯೂರೋಪಿಯನ್ ಕುಟುಂಬದ ನುಡಿ ಬಾರತಕ್ಕೆ ಬಂದದ್ದು ಇಂದಿಗೆ 3,500 ವರ್ಷಗಳ ಹಿಂದೆ. ಈ ಹೊತ್ತಿಗೆ ಭಾರತದಲ್ಲಿ ದ್ರಾವಿಡ ನುಡಿ ಬಹಳ ಕುಟುಂಬ ದೊಡ್ಡ ನುಡಿ ಕುಟುಂಬವಾಗಿ ಬಾರತದ ಜನರಲ್ಲಿ ಚಾಲ್ತಿಯಲ್ಲಿತ್ತು. ಸಿಂದೂ ಬಯಲಿನ ನಾಗರೀಕತೆಯೂ ದ್ರಾವಿಡ ನುಡಿಗಳ ಮೂಲಕವೇ ಕಟ್ಟಲ್ಪಟ್ಟಿತ್ತು.

ಜೊತೆಗೇ ಮತ್ತೊಂದು ನುಡಿ ಕುಟುಂಬದ ಕೋಲಾ ಮುಂಡಾ ನುಡಿಯೂ ಭಾರತದಲ್ಲಿ ಬೇರು ಬಿಟ್ಟು ಬೆಳೆದಿತ್ತು. ಈ ಭಾಷೆಗಳಲ್ಲಿ ಭಾರತದ ಮಣ್ಣಿನ ಸೊಗಡಿತ್ತು. ಅಷ್ಟರಲ್ಲಾಗಲೇ ದ್ರಾವಿಡ ಬಾಷೆಗಳಲ್ಲಿ ಸಾಹಿತ್ಯಗಳನ್ನೇ ರಚಿಸಲಾಗಿತ್ತು. ಆದರೆ, ತದನಂತರದ ಕಾಲದಲ್ಲಿ ಭಾರತಕ್ಕೆ ವಲಸೆ ಬಂದ ಸಂಸ್ಕೃತ ಹೇಗೆ ಭಾರತದ ಮೂಲ ಮಾತೃ ಭಾಷೆಯಾಯಿತು? ಎಂದು ಪ್ರಶ್ನೆ ಮಾಡುತ್ತಾರೆ ಸಾಮಾಜಿಕ ಹೋರಾಟಗಾರ, ಎಲ್ಲರ ಕನ್ನಡ ಚಳವಳಿಯ ಪ್ರಮುಖರಲ್ಲೊಬ್ಬರಾದ ಹರ್ಷಕುಮಾರ ಕುಗ್ವೆ.

ಪ್ರಖ್ಯಾತ ಸಂಶೋಧಕರಾದ ಷಾ ಶೆಟ್ಟರ್, ಸಂಗಮೇಶ್ ಬದರಿಮಠ್ ರಂತಹ ಸಂಶೋಧಕರೂ ಸಹ ದ್ರಾವಿಡ ಭಾಷೆಯ ಭಾರತದ ಮೂಲ ಭಾಷೆ ಎಂಬುದನ್ನು ಈಗಾಗಲೇ ತಮ್ಮ ಸಂಶೋಧನೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದು ಹಲವರು ಸಂಸ್ಕೃತವೇ ಭಾರತದ ಮಾತೃ ಭಾಷೆ ಎಂದು ಆಧಾರವಿಲ್ಲದೆ ವಾದಿಸುತ್ತಿರುವುದು ವಿಪರ್ಯಾಸ.

(ಮಾಹಿತಿ – ಹರ್ಷಕುಮಾರ್ ಕುಗ್ವೆ)


ಇದನ್ನೂ ಓದಿರಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...