Homeಮುಖಪುಟಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಹೇಗೆ?

- Advertisement -
- Advertisement -

ಏಕರೂಪ ನಾಗರಿಕ ಸಂಹಿತೆ ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಭಾರತದ ಸಂವಿಧಾನದಲ್ಲಿ ನಂಬಿಕೆ ಇರುವ ಯಾವದೇ ವ್ಯಕ್ತಿಗೆ ಇರಬಾರದು. ಅಸಲಿ ಪ್ರಶ್ನೆ ಏನೆಂದರೆ, ಏಕರೂಪ ನಾಗರಿಕ ಸಂಹಿತೆ ಹೇಗೆ, ಯಾವಾಗ ಮತ್ತು ಯಾವ ಸಿದ್ಧಾಂತದ ಆಧಾರದಲ್ಲಿ ಜಾರಿಗೊಳಿಸಬೇಕು ಎಂಬುದು. ಆದರೆ ಪ್ರಸಕ್ತ ಸರಕಾರದ ನಿಯತ್ತನ್ನು ನೋಡಿ ಅನ್ನಿಸುವುದೇನೆಂದರೆ, ಮತ್ತೊಮ್ಮೆ ಈ ವಿಷಯ ಎತ್ತಿರುವುದರ ಹಿಂದೆ, ಅಸಲಿ ಪ್ರಶ್ನೆಗಳನ್ನು ಕೇಳದೆ ದಿಕ್ಕು ತಪ್ಪಿಸಿ 2024ರ ಚುನಾವಣೆಗಳಿಗೆ ಮುನ್ನ ಕೋಮುವಾದದ ಆತಂಕ ಹುಟ್ಟಿಸುವ ಹುನ್ನಾರವಿದೆ ಎಂದು.

ದೇಶದ ಕಾನೂನು ಆಯೋಗವು ಕಳೆದ ವಾರ ಈ ವಿಷಯದಲ್ಲಿ ಜನರಿಂದ ಅಭಿಪ್ರಾಯ ಕೇಳಿದೆ. ಗಮನಿಸಬೇಕಾದ ವಿಷಯವೇನೆಂದರೆ, ಇದಕ್ಕಿಂತ ಮುಂಚೆ ಬಿಜೆಪಿ ಸರಕಾರದಿಂದಲೇ ನೇಮಿಸಲಾಗಿದ್ದ ಕಳೆದ ಕಾನೂನು ಆಯೋಗವೂ ನವೆಂಬರ್ 2016ರಲ್ಲಿ ಇದೇ ವಿಷಯದ ಬಗ್ಗೆ ಜನರ ಅಭಿಪ್ರಾಯ ಕೇಳಿತ್ತು. ಅದಕ್ಕೆ ಒಂದಿಷ್ಟಲ್ಲ, ಒಟ್ಟು 75,378 ಸಲಹೆಗಳು ಬಂದಿದ್ದವು. ಅದರ ಆಧಾರದ ಮೇಲೆ 2018ರಲ್ಲಿ ಕಾನೂನು ಆಯೋಗವು 185 ಪುಟಗಳ ಒಂದು ದೀರ್ಘವಾದ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಈ ಸಮಯದಲ್ಲಿ ಎಲ್ಲಾ ಸಮುದಾಯಗಳ ಬೇರೆಬೇರೆ ಕೌಟುಂಬಿಕ ಕಾನೂನುಗಳನ್ನು ಬದಲಿಸಿ ಒಂದು ಸಂಹಿತೆ ರಚಿಸುವುದು ಅವಶ್ಯಕವೂ ಇಲ್ಲ ಹಾಗೂ ಅಪೇಕ್ಷಣೀಯವೂ ಅಲ್ಲ ಎಂದು. ಅದರ ನಂತರ 2023ರಲ್ಲಿ ಇನ್ನೊಮ್ಮೆ ಇದೇ ಪ್ರಕ್ರಿಯೆಯನ್ನು ಪುನರಾವರ್ತನೆ ಮಾಡುವುದನ್ನು ನೋಡಿದರೆ ಕಳೆದ ಆಯೋಗ ನೀಡಿದ ವರದಿ ಎಲ್ಲೋ ಬಿಜೆಪಿಯ ರಾಜಕೀಯಕ್ಕೆ ಅನುಕೂಲಕರವಾಗಿಲ್ಲ ಎಂಬ ಸಂದೇಹ ಉಂಟಾಗುತ್ತದೆ. ಹಾಗಾಗಿಯೇ ಮತ್ತೊಮ್ಮೆ ವಿವಾದವನ್ನು ಹೊಸ ರೀತಿಯಲ್ಲಿ ತೆರೆದಿಟ್ಟು 2024ರ ಚುನಾವಣೆಯ ತಯ್ಯಾರಿ ಮಾಡಲಾಗುತ್ತಿದೆ.

ಸೈದ್ಧಾಂತಿಕವಾಗಿ ಏಕರೂಪ ನಾಗರಿಕ ಸಂಹಿತೆ ನಮ್ಮ ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಒಂದು ಸರಿಯಾದ ಹೆಜ್ಜೆಯಾದೀತು. ಸಿದ್ಧಾಂತವೇನೆಂದರೆ, ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳಿರುವ ಹಾಗೂ ಕೇವಲ ಧರ್ಮದ ಅಥವಾ ಪಂಥದ ಆಧಾರದ ಮೇಲೆ ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು. ಇದೇ ಆಶಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ರಚನೆಕಾರರು ಸುದೀರ್ಘವಾದ ಚರ್ಚೆಯ ನಂತರ ರಾಜ್ಯದ ನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಂವಿಧಾನದ 44ರ ಅನುಚ್ಛೇದದಲ್ಲಿ ಸರಕಾರಕ್ಕೆ ಸಲಹೆ ನೀಡಲಾಗಿತ್ತು; “ಭಾರತದ ಎಲ್ಲಾ ರಾಜ್ಯ ಕ್ಷೇತ್ರಗಳಲ್ಲಿ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ಪ್ರಯತ್ನ ಮಾಡಲಾಗುವುದು.” ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ನಂತರ ರಾಮ್ ಮನೋಹರ್ ಲೋಹಿಯಾ ಕೂಡ ಈ ಸಿದ್ಧಾಂತದ ಪರವಾಗಿ ವಕಾಲತ್ತು ವಹಿಸಿದ್ದರು.

ಪ್ರಶ್ನೆ ಏನೆಂದರೆ, ಸಂವಿಧಾನದಲ್ಲಿ ವರ್ಣಿಸಲಾದ ’ಯುನಿಫಾರ್ಮ್’ ಅಥವಾ ’ಏಕರೂಪ’ ನಾಗರಿಕ ಸಂಹಿತೆಯ ಅರ್ಥವೇನು? ಇದರ ಒಂದು ಅಕ್ಷರಶಃ ಅರ್ಥ, ಇಂದು ದೇಶದ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ಕೌಟುಂಬಿಕ ಸಂಪತ್ತಿನಂತಹ ವಿಷಯಗಳ ಬಗ್ಗೆ ಹಿಂದೂ, ಮುಸ್ಲಿಂ, ಪಾರಸಿ ಹಾಗೂ ಕ್ರೈಸ್ತ ಸಮುದಾಯಗಳಿಗಾಗಿ ಯಾವ ಕಾನೂನುಗಳನ್ನು ರಚಿಸಲಾಗಿದೆಯೋ ಅವುಗಳನ್ನು ಕೊನೆಗೊಳಿಸಿ ಎಲ್ಲ ಭಾರತೀಯ ನಾಗರಿಕರಿಗಾಗಿ ಈ ಎಲ್ಲ ವಿಷಯಗಳ ಮೇಲೆ ಒಂದೇ ಕಾನೂನು ಮಾಡಬೇಕು ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಯಾವ ರೀತಿಯಲ್ಲಿ ಅಪರಾಧದ ವಿಷಯಗಳಲ್ಲಿ, ತೆರಿಗೆ ಮತ್ತು ಇತರ ಕಾನೂನುಗಳಲ್ಲಿ ಬೇರೆಬೇರೆ ಸಮುದಾಯಗಳಿಗೆ ಬೇರೆಬೇರೆ ಕಾನೂನುಗಳಿಲ್ಲವೋ, ಅದೇ ರೀತಿಯಲ್ಲಿ ಕೌಟುಂಬಿಕ ವಿಷಯಗಳಿಗಾಗಿಯೂ ದೇಶದಲ್ಲಿ ಕೇವಲ ಒಂದು ಕಾನೂನು ಇರಬೇಕೆಂಬುದು. ಮೊದಲ ನೋಟದಲ್ಲಿ ಇದು ಸುಂದರವಾಗಿ ಕಾಣಿಸುವ ವ್ಯವಸ್ಥೆಯಂತೆ ಕಂಡರೂ, ಇದರಲ್ಲಿ ಇರುವ ತೊಡಕೇನೆಂದರೆ ನಮ್ಮ ದೇಶದಲ್ಲಿ ವಿವಾಹ, ವಿಚ್ಛೇದನ ಹಾಗೂ ಉತ್ತರಾಧಿಕಾರದ ಬಗ್ಗೆ ಬೇರೆಬೇರೆ ಪದ್ಧತಿಗಳು ನಡೆದುಕೊಂಡು ಬಂದಿವೆ. ಬೇರೆ ಧರ್ಮದ ಅನುಯಾಯಿಗಳ ವಿಷಯ ಬಿಟ್ಟರೂ, ಆಗ ಸ್ವತಃ ಹಿಂದೂ ಸಮುದಾಯದ ಒಳಗಡೆಯೇ ಸಾವಿರಾರು ರೀತಿಯ ರೀತಿನೀತಿಗಳು ನಡೆದುಕೊಂಡು ಬಂದಿವೆ.

ಇದನ್ನೂ ಓದಿ: ಉತ್ತರಾಖಂಡ್: ‘ಸಾಮಾಜಿಕ ಸಾಮರಸ್ಯ’ ಸಾರಿದರೆ ಏಕರೂಪ ನಾಗರಿಕ ಸಂಹಿತೆಗೆ ಒಪ್ಪಿಗೆ- ಕಾಂಗ್ರೆಸ್ ನಾಯಕ

ಸ್ವಾಭಾವಿಕವಾಗಿಯೇ, ಈ ಎಲ್ಲವನ್ನೂ ಕೊನೆಗೊಳಿಸಿ ’ಸ್ಪೆಷಲ್ ಮ್ಯಾರೇಜ್ ಆಕ್ಟ್’ನಂತಹ ಯಾವುದೇ ಕಾನೂನನ್ನು ಎಲ್ಲಾ ಜನರ ಮೇಲೆ ಅನುಷ್ಠಾನಗೊಳಿಸುವುದು ಅಸಾಧ್ಯವಾದ ಕಸರತ್ತಾಗುವುದು ಹಾಗೂ ಸುಖಾಸುಮ್ಮನೇ ದೇಶದಲ್ಲಿ ದೊಡ್ಡ ಅಲ್ಲೋಲಕಲ್ಲೋಲ ಸೃಷ್ಟಿಸುವ ಕೆಲಸವಾಗುತ್ತದೆ. ಇದರಲ್ಲಿ ಒಂದು ಸಮುದಾಯದ ಸಂಹಿತೆಯನ್ನು ಮಿಕ್ಕ ಎಲ್ಲಾ ಸಮುದಾಯಗಳ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವೂ ಇದರಿಂದ ಹುಟ್ಟುಕೊಳ್ಳುತ್ತದೆ. ಹಾಗಾಗಿ, ಕಾನೂನು ಆಯೋಗದ ಈ ಹೊಸ ಆರಂಭದಿಂದ ಅನುಮಾನ ಮತ್ತು ವಿವಾದ ಸೃಷ್ಟಿಯಾಗಿದೆ. ಈ ವಿವಾದವನ್ನು ಸೃಷ್ಟಿಸುವುದೇ ಬಹುಶಃ ಇದರ ಉದ್ದೇಶವಾಗಿರಬಹುದು.

ಆದರೆ ಸಮಾನ ನಾಗರಿಕ ಸಂಹಿತೆಯ ಸಿದ್ಧಾಂತದ ಇನ್ನೊಂದು ವ್ಯಾಖ್ಯಾನವು ಹೆಚ್ಚು ತಾರ್ಕಿಕವಾಗಿದ್ದು, ಸಂವಿಧಾನದ ಆಶಯಗಳೊಂದಿಗೆ ಸಮ್ಮತವಾಗಿವೆ ಹಾಗೂ ನಮ್ಮ ಪರಿಸ್ಥಿತಿಗೆ ಉಪಯುಕ್ತವೆನಿಸುತ್ತಿದೆ. ಈ ವ್ಯಾಖ್ಯಾನದ ಅನುಗುಣವಾಗಿ ನಾಗರಿಕ ಸಂಹಿತೆಯನ್ನು ಸಮಾನವಾಗಿಸಲು ಬೇರೆಬೇರೆ ಧರ್ಮದ ಅನುಯಾಯಿಗಳ ಬೇರೆಬೇರೆ ರೀತಿರಿವಾಜು ಹಾಗೂ ವ್ಯವಸ್ಥೆಗಳನ್ನು ಕೊನೆಗೊಳಿಸುವ ಅವಶ್ಯಕತೆ ಇಲ್ಲ, ಆದರೆ ಅವುಗಳಲ್ಲಿ ಸಮಾನತೆಯನ್ನು ಸ್ಥಾಪಿಸುವ ಅವಶ್ಯಕತೆ ಇದೆ. ಬೇರೆಬೇರೆ ಕೌಟುಂಬಿಕ ಕಾನೂನುಗಳಲ್ಲಿ, ಸಾಂವಿಧಾನದ ಮೌಲ್ಯಗಳು ಮತ್ತು ಮೌಲಿಕ ಹಕ್ಕುಗಳೊಂದಿಗೆ ತಾಳೆಯಾಗದೇ ಇರುವ ಯಾವೆಲ್ಲ ಅಂಶಗಳಿವೆಯೋ ಅವುಗಳನ್ನು ಬದಲಿಸಬೇಕು. ವಿವಿಧ ಧಾರ್ಮಿಕ ಸಮುದಾಯಗಳ ಪರಂಪರಾಗತ ರೀತಿ ರಿವಾಜುಗಳು ಹಾಗೂ ಕಾನೂನುಗಳಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡುವ ಅನೇಕ ವ್ಯವಸ್ಥೆಗಳಿವೆ, ಮಕ್ಕಳ ಹಿತಾಸಕ್ತಿಗಳನ್ನು ಕಡೆಗಣಿಸುವ ಹಾಗೂ ಟ್ರಾನ್ಸ್‌ಜೆಂಡರ್ ಮತ್ತು ವಿವಾಹೇತರ ಮಕ್ಕಳನ್ನು ಅಮಾನ್ಯಗೊಳಿಸುವ ವ್ಯವಸ್ಥೆಗಳಿವೆ. ಇಂತಹ ಎಲ್ಲಾ ಕಾನೂನುಗಳನ್ನು ಬದಲಿಸಬೇಕಿದೆ, ಅವು ಯಾವ ಧಾರ್ಮಿಕ ಸಮುದಾಯದ ಸಂಹಿತೆಯ ಭಾಗವೇ ಆಗಿರಲಿ.

ಉದಾಹರಣೆಗೆ, ಮುಸ್ಲಿಂ ಸಮುದಾಯದಲ್ಲಿಯ ತ್ರಿವಳಿ ತಲಾಕ್ ಮತ್ತು ತಲಾಕ್ ಎ ಬಿದ್ದತ್ ನಂತಹ ವ್ಯವಸ್ಥೆಗಳು ಅಮಾನವೀಯವಾಗಿವೆ ಹಾಗೂ ಮಹಿಳೆಯ ವಿರುದ್ಧವಾಗಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಷಯಗಳ ಮೇಲೆ ರಾಷ್ಟ್ರೀಯ ಚರ್ಚೆ ಆಗುವುದಕ್ಕಿಂತ ಮುನ್ನವೇ ಸರ್ವೋಚ್ಚ ನ್ಯಾಯಾಲಯವು ಈ ಪದ್ಧತಿಗಳು ಇಸ್ಲಾಂಗೆ ಮತ್ತು ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಹೇಳಿ ಇವುಗಳನ್ನು ಅಮಾನ್ಯಗೊಳಿಸಿದೆ. ಇದೇ ರೀತಿ ಹಿಂದು ಸಮುದಾಯದಲ್ಲಿ ಬಾಲ್ಯ ವಿವಾಹ, ಸತಿ ಮತ್ತು ದೇವದಾಸಿ ಪದ್ಧತಿಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಆದರೆ ಎಲ್ಲಾ ಕೌಟುಂಬಿಕ ಕಾನೂನುಗಳಲ್ಲಿ ಮಹಿಳಾವಿರೋಧಿ ಅಂಶಗಳು ಇನ್ನೂ ಉಳಿದುಕೊಂಡಿವೆ. ಭಾರತೀಯ ಕಾನೂನು ಮುಸ್ಲಿಮ ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸುತ್ತದೆ, ಈ ವ್ಯವಸ್ಥೆಯನ್ನು ಪಾಕಿಸ್ತಾನ, ಈಜಿಪ್ಟ್ ಹಾಗೂ ಅಲ್ಜೀರಿಯಾದಂತಹ ಅನೇಕ ಮಸ್ಲಿಂ ಬಾಹುಳ್ಯವುಳ್ಳ ದೇಶಗಳು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಅಂದಹಾಗೆ ತ್ರಿವಳಿ ತಲಾಕ್‌ನಂತೆಯೇ ಮುಸ್ಲಿಮರಲ್ಲಿ ಬಹುಪತ್ನಿತ್ವದ ವ್ಯವಸ್ಥೆಯೂ ಈಗ ಹೆಸರಿಗೆ ಮಾತ್ರ ಉಳಿದುಕೊಂಡಿದೆ. (ಹೆಚ್ಚುಕಡಿಮೆ ಹಿಂದೂಗಳಲ್ಲಿ ಎಷ್ಟು ಪ್ರಮಾಣದಲ್ಲಿದೆಯೋ ಅಷ್ಟೇ ಪ್ರಮಾಣದಲ್ಲಿ, ಆದರೆ ಹಿಂದೂಗಳಲ್ಲಿ ಈ ಪದ್ಧತಿ ಕಾನೂನುಬಾಹಿರವಾಗಿದೆ.) ಆದರೂ ಇದು ಅನ್ಯಾಯದಿಂದ ಕೂಡಿದ್ದಾಗಿದೆ. ನಮ್ಮಲ್ಲೂ ಈ ಕಾನೂನುಗಳಲ್ಲಿ ಬದಲಾವಣೆ ಮಾಡಿ, ಇವನ್ನು ಸೀಮಿತಗೊಳಿಸಬೇಕಿದೆ. ಅದೇ ರೀತಿಯಲ್ಲಿ ಹಿಂದೂ ಸಮುದಾಯದ ಮೇಲೆ ಜಾರಿ ಆಗುವ ಕೌಟುಂಬಿಕ ಕಾನೂನುಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಸಮಾನ ಹಕ್ಕುಗಳು ಸಂಪೂರ್ಣವಾಗಿ ಸಿಕ್ಕಿಲ್ಲ, ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಹಕ್ಕುಗಳಿಲ್ಲ ಹಾಗೂ ಅವಿವಾಹಿತ ಹೆಣ್ಣುಮಕ್ಕಳನ್ನು ಅಪ್ರಾಪ್ತೆ ಎಂಬಂತೆ ಕಾಣಲಾಗುತ್ತದೆ. ಉತ್ತರಾಧಿಕಾರದ ವಿಷಯದಲ್ಲಿ ’ಮಿತಾಕ್ಷರ’ ಕಾನೂನಿನ (ಹಿಂದೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನು) ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿಯ ಕಾನೂನು ಬದಲಾಗಬೇಕು ಹಾಗೂ ತೆರಿಗೆಗೆ ’ಹಿಂದೂ ಅವಿಭಾಜ್ಯ ಕುಟುಂಬ’ (HUF) ನಂತಹ ವ್ಯವಸ್ಥೆಯ ಯಾವುದೇ ಔಚಿತ್ಯ ಉಳಿದುಕೊಂಡಿಲ್ಲ. ಸಿಖ್ ಸಮುದಾಯದ ಮೇಲೆ ಹಿಂದೂ ಕೌಟುಂಬಿಕ ಕಾನೂನು ಜಾರಿಗೊಳಿಸುವುದರ ಮೇಲೆ ಗಂಭೀರ ಆತಂಕಗಳು ಉಂಟಾಗಿವೆ. ಅದೇ ರೀತಿಯಲ್ಲಿ ಕ್ರೈಸ್ತ ಸಮುದಾಯದ ಕಾನೂನುಗಳಲ್ಲಿ ವಿಚ್ಛೇದನ ವಿರೋಧಿ ವ್ಯವಸ್ಥೆ ಮತ್ತು ದತ್ತು ಪಡೆಯುವ ಕಾನೂನುಗಳಲ್ಲಿ ಬದಲಾವಣೆಯ ಅವಶ್ಯಕತೆ ಇದೆ.

ಒಂದು ವೇಳೆ ಈ ವಿಷಯದಲ್ಲಿ ಸರಕಾರದ ನಿಯತ್ತು ನಿಷ್ಕಲ್ಮಶವಾಗಿದ್ದರೆ, ಬಹುಸಂಖ್ಯಾತ ಸಮಾಜದ ಕೌಟುಂಬಿಕ ಕಾನೂನುಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಉದ್ದೇಶ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಪ್ರಶ್ನೆಯ ಮೇಲೆ ಒಂದು ಹೊಸ ವಿವಾದ ಸೃಷ್ಟಿಸುವ ಬದಲಿಗೆ ಮೋದಿ ಸರಕಾರ ತಾನೇ ನೇಮಿಸಿದ ಕಳೆದ ಕಾನೂನು ಆಯೋಗದ ಶಿಫಾರಸ್ಸನ್ನು ಸ್ವೀಕರಿಸಬೇಕು ಹಾಗೂ ಎಲ್ಲಾ ಸಮುದಾಯಗಳ ಕೌಟುಂಬಿಕ ಕಾನೂನುಗಳಲ್ಲಿ ತಾರ್ಕಿಕವಾದ ಮತ್ತು ಸಂವಿಧಾನ ಸಮ್ಮತ ಬದಲಾವಣೆ ಮಾಡುವ ಕೆಲಸ ಆರಂಭಿಸಬೇಕು.

ಇದನ್ನೂ ಓದಿ: ಬಿಜೆಪಿಗೆ ಬೇಕಿರುವ ಏಕರೂಪ ನಾಗರಿಕ ಸಂಹಿತೆ ನ್ಯಾಯಸಮ್ಮತವಾದದ್ದೇ?

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...