Homeಅಂಕಣಗಳುಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು.

- Advertisement -
- Advertisement -

ನೀವು ಯಾವಾಗರ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋಗಿರತೀರಿ ಅಂತ ತಿಳಕೋರಿ. ವಾಪಸ್ ಬರುವಾಗ ಯಾರರ ಕೇಳಿದರ, ನಾನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರನ್ನು ಭೇಟಿ ಆದೆ ಅಂತ ಹೇಳ್ತೀರಾ?

ನಿಮ್ಮ ಜೀವನದಾಗ ಒಂದು ಸತಿ ಆದರೂ `ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕರಿಗೆ ಅರ್ಜಿ ಕೊಟ್ಟೆ’ ಅಂತ ಯಾರಿಗರ ಹೇಳೀರಾ? ನಾವು ಯಾರು ಬಳಸದೆ ಇರೋ ಶಬ್ದಗಳನ್ನ ಸರಕಾರ ಭಾಷಾಂತರದ ನೆಪದಲ್ಲಿ ಯಾಕ್ ಉಪಯೋಗ ಮಾಡತದ?

ಅದರ ನೀವು ತಮಿಳು ನಾಡಿನಾಗ ಇದ್ದರ ನಾನು ಕಾವಲು ನಿಲಯಂಗೆ ಹೋಗಿದ್ದೆ. ಕಾವಲು ರಚಕನ ಅವರನ್ನು ಭೇಟಿ ಅಗಿದ್ದೇ ಅಂತ ಹೇಳ್ತಾ ಇದ್ದೀರಿ. ಅಲ್ಲಿಯ ಹಂಗ ಜನಸ್ನೇಹಿ ಭಾಷಾಂತರ ನಮ್ಮಲ್ಲಿ ಯಾಕ್ ಸಾಧ್ಯ ಆಗೋದಿಲ್ಲ?

ಈ ಪದ್ಧತಿ ನಮ್ಮ ಕಾನೂನು ಮಾಡುವರಲ್ಲೂ ಐತಿ. ಈ ಉದಾಹರಣೆ ನೋಡ್ರಿ.

“ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲು ಈ ಕಾಯಿದೆ ರೂಪಿಸಲಾಗಿದೆ. ಅದರಂತೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಗುತ್ತಿದೆ’’- ಈ ಮೇಲಿನ ಅತ್ಯಂತ ಪ್ರಮುಖ ಘೋಷಣೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯ ಕಾಯಿದೆ ಒಳಗ ಐತಿ.

ಭವ್ಯ ಭಾರತದ ಘನ ಸರ್ಕಾರಗಳು ಸ್ವಾತಂತ್ರ್ಯ ಪೂರ್ವದಿಂದಲೂ ಪಾಸು ಮಾಡಿಕೊಂಡು ಬರುತ್ತಿರುವ ಅನೇಕ ಅರ್ಥಹೀನ-ಅನುಪಯುಕ್ತ ಕಾಯಿದೆ ಒಳಗ ಇದೂ ಒಂದು.

ಇವು ಯಾಕ್ ಹಿಂಗ ಅರ್ಥಹೀನ – ಗೈರು ಉಪಯೋಗಿ ಅದಾವು ಅಂತ ನಿಮಗ ಗೊತ್ತದ ಏನು? ಯಾಕ್ ಅಂದ್ರ ನಾವು ಮಾಡುವ ಯಾವ ಕಾನೂನು ಯಾರಿಗೂ ಅರ್ಥ ಆಗಬಾರದು ಅಂತ ಆಳುವ ನಾಯಕರಿಗೆ ಅನಸ್ತದ, ಅದಕ್ಕ. ಅದು ಅಷ್ಟ ಸರಳ. ಅದರ ಹಿಂದ ಏನು ಭಾರಿ ರಹಸ್ಯ ಇಲ್ಲ.

ನಮ್ಮಿಂದ ವೋಟು ತೊಗೊಂಡು ಹೋದವರು ನಮಗೆ ತಿಳಿಯೋ ಹಂಗ ಕಾನೂನು ಮಾಡಬೇಕು ಅನ್ನುವ ಕನಿಷ್ಟ ಆಸೆ ನಮಗ ಇರಬೇಕೋ ಬ್ಯಾಡೋ? ಇರಬೇಕು. ಅದು ಬೇಕು ಅಂತನ ಜಗತ್ತಿನ ಬ್ಯಾರೆ ಬ್ಯಾರೆ ದೇಶದಾಗ ಅದರ ಸಲುವಾಗಿ ಹೋರಾಟ ನಡದೆತಿ. ಅದು ಮಾಹಿತಿ ಹಕ್ಕಿನ ಒಂದು ಭಾಗ.

ಮಾಹಿತಿ ಹಕ್ಕು ಅಂದ ಕೂಡಲೇ – ಬರೆ ಒಂದು ಅರ್ಜಿ ಕೊಡೋದು, ಅದಕ್ಕ ಹತ್ತು ರೂಪಾಯಿ ಫೀ ಕಟ್ಟೋದು, ಅಮ್ಯಾಲೆ ಸರ್ಕಾರಿ ಅಧಿಕಾರಿಯಿಂದ ಒಂದು ಎರಡು ತಿಂಗಳ ನಂತರ ಒಂದು ಉತ್ತರ ಬರೋದು, ಅದನ್ನ ನೋಡಿದರ ನಿಮ್ಮ ಪ್ರಶ್ನೆಗೆ, ಅಲ್ಲಿನ ಉತ್ತರಕ್ಕ ಸಂಬಂಧನ ಇಲ್ಲದ ಹಂಗ ಇರೋದು, ಇಷ್ಟ ಅಲ್ಲ. ಅಥವಾ ಉತ್ತರ ಬರಲಾರದ, ಅದು ಮಾಹಿತಿ ಇಲ್ಲದ ಹಕ್ಕು ಅಂತನೂ ಆಗಿ ಬಿಡತದ, ಒಂದೊಂದು ಸತೆ.

ಮಾಹಿತಿ ಹಕ್ಕು ಅಂದ್ರ ಸರ್ಕಾರದ ನೀತಿ, ನಿಯಮ, ಕಾನೂನು-ಕಾಯಿದೆ ಗಳ ಬಗ್ಗೆ ಶ್ರೀ ಸಾಮಾನ್ಯ ತಿಳಕೋಬೇಕು ಅನ್ನೋ ಹಕ್ಕು, ಅದು ತನ್ನ ಮಾತೃಭಾಷೆ ಒಳಗ ಭಾಷಾಂತರ ಆಗಬೇಕು ಅನ್ನುವ ಹಕ್ಕು, ಮತ್ತು ಹಂಗ ಭಾಷಾಂತರ ಆಗಿದ್ದು ಸರಳ ಭಾಷೆ ಒಳಗ ಇರಬೇಕು. ಇಲ್ಲ ಅಂದ್ರ ಇಂಗ್ಲೀಷುದಾಗ ಇದ್ದರ ಛಲೋ ಇತ್ತು ಅನ್ನೋ ಹಂಗ ಆದೀತು.

ಒಟ್ಟಿನಾಗ ಜನರಿಗೆ ಎಲ್ಲ ವಿಷಯ ತಿಳಿಬೇಕು, ಯಾವುದು ಕತ್ತಲಿನಾಗ ನಡಿಯಬಾರದು, ಸರಕಾರ ಪಾರದರ್ಶಕವಾಗಿ ಇರಬೇಕು. ಇದು ಅದರ ಉದ್ದೇಶ.

ಕಾನೂನಿಗೆ ಒಂದಕ್ಕಿಂತ ಹೆಚ್ಚು ಅರ್ಥ ಇರೋ ಕಾರಣದಿಂದನೇ ವಕೀಲರಿಗೆ ಬೇಡಿಕೆ ಅದ. ಇಬ್ಬರು ವಕೀಲರು ಒಂದೇ ರೀತಿ ವಿಚಾರ ಮಾಡೋದಿಲ್ಲ ಅನ್ನುವ ಕಾರಣದಿಂದ ಕೋರ್ಟಿನಾಗ ವಾದ-ವಿವಾದ ನಡಿತದ. ನ್ಯಾಯ ಮೂರ್ತಿಗಳು ಮೂರನೇ ಅಭಿಪ್ರಾಯ ಹೊಂದಿರತಾರ ಅನ್ನುವುದಕ್ಕ ಒಂದರಿಂದ ಇನ್ನೊಂದು ನ್ಯಾಯಾಲಯಕ್ಕ ಕೆಳಗಿನ ಜನ ಮೇಲು ಮನವಿ ಹೋಗತಾರ. ಶಾಸನ ಸಭೆ ಮಾಡಿದ ಕಾನೂನು ಜನರಿಗೆ ಹೋಗಲಿ, ಸರ್ಕಾರದ ಅಧಿಕಾರಿಗಳಿಗೇ ತಿಳಿದಿರೋದಿಲ್ಲ.

ಭಾರತದಾಗ ಮೊದಲ ಬಾರಿಗೆ ಶಾಸನ ಸಭೆಯೊಳಗ ಮಾಹಿತಿ ಹಕ್ಕಿನ ಬೇಡಿಕೆ ಇಟ್ಟವರು ಅಂದ್ರ ಕರ್ನಾಟಕದ ವಿಧಾನ ಪರಿಷತ್ ಸದಸ್ಯ ರಾಗಿದ್ದ ಪ್ರೊ. ಲಕ್ಷ್ಮಿ ಸಾಗರ ಅವರು. ಅವರು 80 ರ ದಶಕದೊಳಗ ಬೇಡಿಕೆ ಇಟ್ಟರು. ಆದರ ನಮ್ಮಲ್ಲಿ ಜಾರಿಗೆ ಬಂದಿದ್ದು 2015 ರ ಒಳಗ. ಸ್ವೀಡನ್ ಹಾಗೂ ಕೆಲ ಚಳಿ ಪ್ರದೇಶ ರಾಜ್ಯಗಳ ಒಳಗ ಈ ಕಾಯಿದೆ ಬಂದು 250 ವರ್ಷ ಆತು. ಅಲ್ಲಿ ಮತ್ತು ಅಮೆರಿಕ ಯೂರೋಪಿನಾಗ ಈಗ ಬರೆ ಮಾಹಿತಿ ಹಕ್ಕು ಇದ್ದರೆ ಸಾಲದು, ಅದು ಜನರಿಗೆ ಅರ್ಥವಾಗೋ ಹಂಗ ಸರಳ ಭಾಷೆಯೊಳಗ ಇರಬೇಕು ಅನ್ನೋ ಆಂದೋಲನ ಶುರು ಆಗೇದ.

ಮೂರು ವರ್ಷದ ಹಿಂದೆ ಅಮೆರಿಕಾದಾಗ ಸರಳ ಭಾಷಾ ಕರಡು ನಿಯಮ ಕಾಯಿದೆ ಅಂತ ಜಾರಿಗೆ ಬಂದದ. ಬ್ರಿಟಿಷ್ ಸರ್ಕಾರದವರು ಸರಳ ಭಾಷಾ ಆಯೋಗ ಅಂತ ಸ್ಥಾಪನೆ ಮಾಡಿದ್ದಾರ. ಸರ್ಕಾರದ ಎಲ್ಲಾ ಕಾನೂನುಗಳು ಸರಳ ಅದಾವ ಇಲ್ಲ ಅಂತ ನೋಡೋದು ಇವರ ಕೆಲಸ.

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು. ಅದು 2021ರಲ್ಲಿ ಜಾರಿಗೆ ಬರ್ತದ.

ಈ ಜನ ಆಂದೋಲನ ಯೂರೋಪಿನಲ್ಲಿ 60-70ರ ದಶಕದೊಳಗ ಶುರು ಆತು. ಡೇವಿಡ್ ಮಾಲೀನಕಾಫ, ರಿಚರ್ಡ್ ವಿಡಿಕ, ಮಾರ್ಟಿನ್ ಕಟ್ಸ್, ಕ್ರಸಿ ಮೇಹರ ಮುಂತಾದ ಭಾಷಾತಜ್ಞ, ಹೋರಾಟಗಾರರು ಜನಜಾಗೃತಿ ಮೂಡಿಸಿ, ಸರಕಾರಗಳನ್ನು ಒಪ್ಪಿಸಿ ಜನಪರ ಭಾಷೆ ಬಳಕೆ ಜನಪ್ರಿಯ ಆಗೋ ಹಂಗ ನೋಡಿಕೊಂಡಾರ.

ಆದರ ನಾವು ಇನ್ನೂ ಅವರ ಬಗ್ಗೆ ಸುದ್ದಿ ಓದೋದರಾಗ ಇದ್ದೇವಿ. ಇರುವ ಒಂದು ಮಾಹಿತಿ ಹಕ್ಕು ಕಾಯಿದೆಯ ಮೂಲ ಸ್ವರೂಪ ಉಳಿಸಿಕೊಳ್ಳಲಿಕ್ಕೆ ನಮಗ ಆಗವಲ್ಲತು.

ಆಳುವ ಪಕ್ಷಗಳು ತಾವು ಮಾಡುವ ಎಲ್ಲ ಕೆಲಸಗಳಿಗೂ ನಮ್ಮಿಂದ ಪೂರ್ವ ಅನುಮತಿ ತೊಗೊಂಡಬಿಟ್ಟವರ ಗತೆ ಮಾಡಲಿಕ್ಕೆ ಹತ್ತಿದಾರು. ಅವರಿಗೆ ಯಾವ ಜವಾಬ್ದಾರಿನೂ ಇಲ್ಲ. ನಿಮಗ ಜವಾಬ್ದಾರಿ ಇಲ್ಲ ಅಂತ ಹೇಳೋ ಧೈರ್ಯ ಯಾರಿಗೂ ಇಲ್ಲ.

ಆದರ ನಮ್ಮ ಸಾಂಸ್ಕೃತಿಕ ಇತಿಹಾಸ ನೋಡಿದರ ನಮಗ ಸರಳ ಭಾಷೆಯ ಬಗ್ಗೆ ಹೊರಗಿನವರು ಹೇಳಿಕೊಡಬೇಕಾಗಿಲ್ಲ ಅಂತ ಅನ್ನಿಸತದ.

ಉದಾಹರಣೆಗೆ ಸಂಸ್ಕೃತದ ಮಹಾ ಕಾವ್ಯಗಳನ್ನ ಕನ್ನಡಕ್ಕೆ ತಂದ ಪಂಪ – ಕುಮಾರವ್ಯಾಸನಂತವರು, ಭಕ್ತಿ ಪಂಥದ ಸಂತರು, `ಓಣಿಯ ಭಾಷೆಯಲ್ಲಿ’ ಅಸಂಖ್ಯ ಪದ ಹಾಡಿದ ಹರಿದಾಸರು, ಮತ್ತು ವಚನ ರಚನೆ ಮಾಡಿದ ಶರಣರು ಸರಳ ಭಾಷೆಯ ಬಗ್ಗೆ ಮಾತು ಆಡದೆ ಮಾಡಿ ತೋರಿಸಿದವರು.

`ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಅನ್ನುವ ಮಾತಿನ ಸರಳತೆ ಕೋಡ್ ಆಫ್ ಹಮ್ಮುರಬಿಯಿಂದ ಹಿಡಕೊಂಡು ಭಾರತೀಯ ಸಂವಿಧಾನದ ವರೆಗೂ ಧ್ವನಿಸುತ್ತದ.

ಕೆಲವು ವಚನಕಾರರು ಅರ್ಥ ಆಗಲಾರದ ವಚನ ಬರೆದರು, ಇನ್ನೂ ಕೆಲವರು ಬೆಡಗಿನ ವಚನ ಬರೆದರು ಅನ್ನುವುದ ಖರೆ.

ಹನ್ನೆರಡನೇ ಶತಮಾನದೊಳಗ ಸಾಧ್ಯ ಆಗಿದ್ದು 20ನೇ ಶತಮಾನದೊಳಗ ಯಾಕ್ ಸಾಧ್ಯ ಆಗತಾ ಇಲ್ಲ? ಇದಕ್ಕ ಉತ್ತರ ಸರಳ ಇಲ್ಲ.

ಇಲ್ಲ ಅನ್ನುವದಕ್ಕ ಅಪವಾದವಾಗಿ ಕೆಲವರು ಪ್ರಯತ್ನ ಮಾಡಿದರು. ಅದರಲ್ಲಿ ಮುಖ್ಯವಾದವರು ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಜ್ಯೋತಿ ಸನ್ಯಾಲ್ ಅವರು. ಅವರು ಪ್ಲೇನ್ ಇಂಗ್ಲೀಷ್ ಇಂಡಿಯಾ ಅಂತ ಒಂದು ಸಂಸ್ಥೆ ಶುರು ಮಾಡಿದರು. ಇಂಗ್ಲೀಷ್ ಮಾತು ಆಡುವ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದ ಪುಸ್ತಕ ಅಂತ ಅನ್ನಿಸಿಕೊಳ್ಳುವ `ಇಂಡ್ಲಿಷ’ ಅನ್ನುವ ಮಜವಾದ ಹೆಸರಿನ ಪುಸ್ತಕ ಬರೆದರು.

ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ಪ್ರಥಮ ಅನ್ನುವ ದಿ ಸ್ಟೇಟ್ಸ್‌ಮನ್ ಪತ್ರಿಕೆ ಭಾಷಾ ಬಳಕೆ ಕೈಪಿಡಿ ಪುಸ್ತಕ ಬರೆದರು.

ಕಲ್ಕತ್ತಾದ ಹತ್ತಿರ ಹಳ್ಳಿಯಲ್ಲಿ ಬೆಳೆದ ಅವರು ಜಾಧವಪುರ ವಿಶ್ವವಿದ್ಯಾಲಯದೊಳಗ ಸಾಹಿತ್ಯ ಪದವಿ ಪಡೆದು ಕಲ್ಕತಾ-ಬೆಂಗಳೂರುಗಳಲ್ಲಿ ಕೆಲಸ ಮಾಡಿದರು. ವಿಶ್ವದ ಅತಿ ಶ್ರೇಷ್ಟ ಪತ್ರಿಕೆಗಳನ್ನು ಓದಿ – ಮನನ ಮಾಡಿ – ಸರಳ ಭಾಷೆಯ ಅಗತ್ಯವನ್ನು ಮನದಟ್ಟುಮಾಡಿಕೊಂಡರು.

ತಮ್ಮ ನಿವೃತ್ತಿ ನಂತರ ಲಂಡನ್ನಿನ ಮಾರ್ಟಿನ್ ಕಟ್ಸ್ ಅವರ ಸಹಯೋಗದಲ್ಲಿ ಸರಳ ಭಾಷೆ ಆಂದೋಲನ ಶುರು ಮಾಡಿದರು. ಐಸಿಐಸಿಐ ಬ್ಯಾಂಕ್‍ನಂತಹ ಕೆಲವು ಕಂಪನಿಗಳ ನೀತಿ- ನಿಯಮಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿದ್ದಿ ಬರೆದರು.

ಭಾರತೀಯ ಕಾನೂನುಗಳು ಇನ್ನೂ ಬ್ರಿಟಿಷರ ನೆರಳಿನಲ್ಲಿ ಇವೆ. ಇವು ಬದಲು ಆಗದೆ ಇದ್ದರೆ ಅಳುವವರು ಎಷ್ಟು ಬದಲು ಆದರೂ ಕೂಡ ಬ್ರಿಟೀಷ್ ಆಡಳಿತವೇ ಮುಂದುವರೆಯುತ್ತದೆ ಅಂತ ಅವರು ಹೇಳುತ್ತಾ ಇದ್ದರು.

ಪತ್ರಿಕೆಗಳು ಸರಳವಾದ ಭಾಷೆ ಬಳಸಬೇಕು. ಇಲ್ಲದೆ ಹೋದಲ್ಲಿ ಇನ್ನೂ ಅನೇಕ ಶತಮಾನಗಳು ಹೋದರೂ ಕೂಡ ಓದುಗರಿಗೆ ಬಜೆಟ್ ಮರುದಿನದ ಪತ್ರಿಕೆಯಲ್ಲಿ ಅರ್ಥವಾಗೋದಿಲ್ಲ. ಯಾವ ಮುಖ್ಯ ಕಾಯ್ದೆ, ತಿದ್ದುಪಡಿ, ನೀತಿ ನಿಯಮ ಯಾವುದೂ ಓದುಗರನ್ನು ಮುಟ್ಟುವುದಿಲ್ಲ, ಅಂತ ಅವರು ಪ್ರತಿಪಾದನೆ ಮಾಡುತ್ತಿದ್ದರು.

ಅವರು ಹೋದ ಮೇಲೆ ಕೆಲವು ಬದಲಾವಣೆಗಳು ಅಗಿದಾವ. ರೋಹಿಣಿ ನಿಲೇಕಣಿ ಅವರು ನಡೆಸುವ `ನ್ಯಾಯ’ ಅನ್ನುವ ಸಂಸ್ಥೆ ವಿವಿಧ ಜನೋಪಯೋಗಿ ಕಾಯಿದೆಗಳ ಸರಳ ರೂಪಗಳನ್ನು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟ ಮಾಡತದ.

ಸುಭಾಷ್ ವಿಜಯರಣ ಅನ್ನುವ ವಕೀಲರು ಸುಪ್ರೀಂ ಕೋರ್ಟ್‍ದೊಳಗ ಎಲ್ಲ ಕಾಯಿದೆಗಳು ಸರಳ ಭಾಷೆ ಒಳಗ ಇರಬೇಕು ಅನ್ನುವ ಅರ್ಜಿ ದಾಖಲು ಮಾಡಿದ್ದಾರ. ಯುವ ವಕೀಲರಿಗೆ ಸರಳ ಭಾಷೆಯಲ್ಲಿ ಕಾಯಿದೆ ಕರಡು ತಯಾರಿ ಮಾಡುವ ತರಬೇತಿ ಕೊಡಬೇಕು ಅಂತ ಅದರೊಳಗ ಬೇಡಿಕೆ ಇಟ್ಟಾರ. ಮಹೇಶ್ ಶಾರದ ಅನ್ನುವ ನಿವೃತ ನ್ಯಾಯಾಧೀಶರು ನ್ಯಾಯಾಲಯಗಳಲ್ಲಿ ಸರಳ ಭಾಷೆಯ ಅವಶ್ಯಕತೆಗೆ ಬೆಂಬಲ ಸೂಚಿಸಿದ್ದಾರ.

ಆದರ ಅದು ನಮ್ಮ ಜನರಿಗೆ ಇನ್ನೂ ಅವಶ್ಯಕ ಅನ್ನಿಸಿಲ್ಲ. ಹಂಗಾರ ಇದು ನಮಗ ಬ್ಯಾಡ್ ಏನು? ಪೀಜಾ, ಬರ್ಗರ್ – ಕೋಲ್ಡ್ ಕಾಫಿ ಎಲ್ಲ ಬೇರೆ ದೇಶದವರನ್ನು ನೋಡಿ ನಾವು ಕಾಪಿ ಮಾಡತೆವಿ, ಆದರ ಇಂಥಾ ಒಳ್ಳೆ ವಿಚಾರ ಯಾಕ ನಾವು ಪಾಲಿಸೋದಿಲ್ಲ?

ಯಾಕ್ ಅಂದ್ರ ನಾವು ಸರಕಾರ ನಡಸಲಿಕ್ಕೆ ಕೆಲವು ಜನರಿಗೆ ಹೊರಗುತ್ತಿಗೆ ಕೊಟ್ಟಿರತೇವು. ಆದರ ಬ್ಯಾರೆ ವಿಷಯ ಎಲ್ಲ ನಾವು ಸ್ವಂತ ಪಾಲನೆ ಮಾಡ್ತೇವಿ. ಅಷ್ಟ.


ಇದನ್ನೂ ಓದಿ: ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕನ್ನಡದ ಮಟ್ಟಿಗಂತೂ, ಸಂಸ್ಕೃತ ಪದಗಳನ್ನು ಕನ್ನಡ ಬರವಣಿಗೆಗೆ ನುಸುಳಿಸಿರುವುದರಿಂದ ಕನ್ನಡ ಕಗ್ಗಂಟಾಗಿದೆ.
    ವಿಜಾತಿಯ ಒತ್ತಕ್ಷರಗಳಿಂದ,ಮಹಾಪ್ರಾಣ ಅಕ್ಕರಗಳನ್ನೊಳಗೊಂಡ ಪದಗಳು ಕನ್ನಡಬೇರಿನ ಪದಗಳಲ್ಲ ಎಂಬ ಕನ್ನಡನುಡಿಯರಿಗರ ಮಾತನ್ನು ಲೆಕ್ಕಕ್ಕೆ ತೆಗೆದುಕೊಂಡು ಮುನ್ನಡೆಯದಿದ್ದರೆ ಕನ್ನಡ ಮತ್ತಷ್ಟು ಕಗ್ಗಂಟಾಗಲಿದೆ.
    ಉದಾ:-ಪ್ರಥಮ…ಮೊದಲ
    ದ್ವಿತೀಯ… ಎರಡನೆಯ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...