Homeಅಂಕಣಗಳುಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

- Advertisement -
- Advertisement -

ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿಬಿಟ್ಟಿತಲ್ಲಾ. ನಿಷೇಧದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಾಗಾದರೆ ಆರೆಸ್ಸೆಸ್ಸನ್ನು ನಿಷೇಧಿಸಿ ಎಂದು ಕರೆಕೊಟ್ಟ ಕೂಡಲೇ ಬಿಜೆಪಿಯ ತಲೆಕೆಟ್ಟ ಲೀಡರುಗಳು ಸಿದ್ದು ಮೇಲೆ ಬಿದ್ದಿವೆಯಂತಲ್ಲಾ. ಈ ಆರೆಸ್ಸೆಸ್ಸಿಗರು ಮತ್ತು ಲೀಡರುಗಳು ಗಾಂಧಿ ಹತ್ಯೆಯ ನಂತರ ಹುಟ್ಟಿದವರು; ಇವರಿಗೆ ಇತಿಹಾಸ ಗೊತ್ತಿರಲಾರದು. ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಆರೋಪಿಸಿ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರೇ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರೆಂದು ಸಿದ್ದು ಇನ್ನೂ ತಮ್ಮ ವಿರೋಧಿಗಳ ಮುಸುಡಿಗೆ ಹೇಳಿಲ್ಲವಂತಲ್ಲಾ, ಥೂತ್ತೇರಿ.

*****

ಸಂಘ ಪರಿವಾರಿಗಳು ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುತ್ತಿವೆ, ಇದಷ್ಟೇ ಅಲ್ಲ, ಮುಂದೆ ಮಾಡಬಹುದಾದ ಧ್ವಂಸದ ಕಾರ್ಯಗಳ ಪಟ್ಟಿಯನ್ನು ಮಾಡುತ್ತಿವೆ. ಬಾಬರಿ ಮಸೀದಿ ವಿಷಯದಲ್ಲಿ ತೀರ್ಪು ನೀಡಿದ ಸಮಯದಲ್ಲಿ ಸುಪ್ರೀಂಕೋರ್ಟು ’ಆಯ್ತು ಸಾಕು ಮಾಡಿ, ಮುಂದೆ ದೇಶದ ಶಾಂತಿ ಬಹಳ ಮುಖ್ಯ’ ಎಂದು ಹೇಳಿದ ಮಾತಿಗೆ ಕಿವುಡಾಗಿ ಕುಂತಿವೆಯೆಲ್ಲಾ. ಹೊಸದಾಗಿ ಹುಟ್ಟಿಕೊಂಡ ಗಾದೆ ಮಾತಿನಂತೆ ’ನಳ್ಳಿ ಹೆಚ್ಚಿದ ಕೆರೆ ಹಾಳು, ಆರೆಸ್ಸೆಸ್ ಹೆಚ್ಚಿದ ಊರ್ ಹಾಳು’ ಎಂಬ ಗಾದೆಯಂತೆ ಈಗ ಬ್ರಾಹ್ಮಣ ವಠಾರದಲ್ಲಿದ್ದ ಆರೆಸ್ಸೆಸ್ ಕವಾಯತು ಊರನ್ನೆಲ್ಲಾ ವ್ಯಾಪಿಸುತ್ತಿದೆ. ಅವುಗಳ ದೀರ್ಘಕಾಲದ ಅಜೆಂಡಾ ಪ್ರಕಾರ ಮುಸ್ಲಿಮರನ್ನ ಬಗ್ಗು ಬಡಿಯುವುದು, ನಂತರ ದಲಿತರ ಮೇಲೆ ಶೂದ್ರರ ಕೈಲಿ ದಾಳಿ ಮಾಡಿಸುವುದು, ಆ ನಂತರ ಸಿಖ್ಖರು, ಯಾದವರು ಹೀಗೆ ನಡೆಯಲಿಚ್ಛಿಸಿರುವ ದೊಡ್ಡ ದೊಂಬಿಯನ್ನೇ ಊಹಿಸಬಹುದು. ತಲೆಕೆಟ್ಟವರಿಗೆ ಮತ್ತು ಬರುವ ಔಷಧಿ ಕೊಡಿಸಿ ಜಗಲಿಯ ಮೇಲೆ ಕೂರಿಸುವ ತನಕ ಇವೆಲ್ಲಾ ನಿರಂತರವಾಗಿ ನಡೆಯುವ ಚೇಷ್ಟೆಗಳೆಂದು ಉಗ್ರ ಗಾಂಧಿವಾದಿಗಳು ಗೊಣಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ತಲುಪಾಯ್ತು. ಮಂಡ್ಯದ ಹತ್ತಿರ ಹೋಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಬಾಲಿಶ ಹುಡುಗ, ಲಾಲಿಪಾಪು ಮತ್ತು ಅಪ್ರಬುದ್ಧ ಬಾಲ ಭಾಷೆಯ ಹುಡುಗ ಎಂದೆಲ್ಲಾ ಚೆಡ್ಡಿಗಳು ತಮ್ಮ ಜಾಲತಾಣದಲ್ಲಿ ಯಾರ ವಿರುದ್ಧ ಅಪಪ್ರಚಾರ ಮಾಡಿದ್ದವೊ ಅಂತಹ ರಾಹುಲಗಾಂಧಿ, ತಂದೆ ತಾಯಿ ಅಜ್ಜಿ ಮುತ್ತಾತರ ಮಾರ್ಗ ಹುಡುಕುತ್ತ ಹೊರಟವನಂತೆ ಬರುತ್ತಿದ್ದಾನಂತಲ್ಲಾ. ಅವನನ್ನು ನೋಡಲು ರಸ್ತೆ ಬದಿಯಲ್ಲಿ ನಿಂತ ಜನ ಮತ್ತು ಆತನ ಹಿಂದೆ ಕಿಲೋಮಿಟರುಗಟ್ಟಲೆ ಹರಿದು ಬರುತ್ತಿರುವ ಜನಸಾಗರ ನೋಡಿದ ಬಿಜೆಪಿಗಳು ಬೆಚ್ಚಿ ಏನು ಮಾಡಲೂ ತೋಚದೆ ಜಾಥಾದಲ್ಲಿ ಪೇಸಿಎಂ ಟಿಶರ್ಟ್ ಧರಿಸಿದ್ದ ಹುಡುಗರನ್ನ ಹಿಡಿದು ಶರ್ಟ್ ಬಿಚ್ಚಿಕೊಂಡು ಬರಲು ಹೇಳಿವೆಯಂತಲ್ಲಾ. ಒಂದು ಟೀಶರ್ಟ್ ಬಿಚ್ಚಿದರೇನು ಹತ್ತು ಟೀಶರ್ಟ್ ಕೊಡಿಸುತ್ತೇನೆ ಎಂದು ಡಿಕೆಶಿ ಹೇಳಿದ ಕೂಡಲೇ ಮಾಧ್ಯಮದೊಳಗಿರುವ ಶಾನುಭೋಗರ ಹುಡುಗರು ತಮ್ಮ ಕ್ಯಾಮರಾ ಚುರುಕುಗೊಳಿಸಿ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದ ಡಿಕೆಶಿ, ಸಿದ್ದರಾಮಯ್ಯನಿಗೆ ಎಡಗೈ ತಾಕಿಸಿದ ಡಿಕೆಶಿ, ರಾಹುಲ್ ಕಾರಿನಲ್ಲಿ ಜಾಗವಿಲ್ಲದೆ ಹಿಂದಿನ ಕಾರಿನಲ್ಲಿ ಹೊರಟ ಡಿಕೆಶಿ ಎಂದು ಅರಚುತ್ತಲೇ ತಮ್ಮ ಚೇಷ್ಟೆಗಳನ್ನು ಮೆರೆಯುತ್ತಿವೆಯಂತಲ್ಲಾ. ನಗು ಕಳೆದುಕೊಂಡ ಜನಕ್ಕೆ ಇನ್ನು ಏನೇನು ಹಾಸ್ಯ ಪ್ರಸಂಗವನ್ನು ಈ ದಸರಾ ಸಮಯದಲ್ಲಿ ಮಾಧ್ಯಮಗಳು ತೋರುತ್ತವೊ ಎಂಬುದು ಮನರಂಜನೆಗೆ ಹಾತೊರೆಯುವ ಜನರ ಮನದಾಳದ ಮಾತಾಗಿದೆಯಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸತ್ಯ ಮತ್ತು ಸತ್ವದ ಹುಡುಕಾಟ ಗೌರಿ. ಕಾಂ ಧ್ಯೇಯೋದ್ದೇಶ.ಹೆಮ್ಮೆಯಾಗುತ್ತದೆ…ಪತ್ರಿಕಾ ಧರ್ಮವನ್ನೇ ಮರೆತ ಮೈಮನ ಮಾರಿಕೊಂಡ ಅದೆಷ್ಟೋ ಮಾಧ್ಯಮಗಳ ನಡುವೆ ಕೆಸರಲ್ಲಿ ಕಮಲ ಅರಳಿದಂತೆ ಅರಳಿ ಮಾಧ್ಯಮ ಅಂದರೆ ಇದಲ್ಲಾ ಇದು ಎಂದು ಅರಹುತ್ತಿರುವ ನಿಷ್ಕಲ್ಮಷ ನಿಷ್ಕಪಟ ಈ ಮಾಧ್ಯಮ ಕಂಡು.ಹೃದಯಾಂತರಾಳದ ಸಲಾಂ ಬಸವ ಶರಣು.
    ಗುಡಿಬಂಡೆ ಫಯಾಜ್ ಅಹಮದ್ ಖಾನ್
    ರಾಜ್ಯಾಧ್ಯಕ್ಷರು. ಕಸಾಪ
    ಕರುನಾಡು ಸಾಹಿತ್ಯ ಪರಿಷತ್ತು.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...