Homeಅಂಕಣಗಳುಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

- Advertisement -
- Advertisement -

ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿಬಿಟ್ಟಿತಲ್ಲಾ. ನಿಷೇಧದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಾಗಾದರೆ ಆರೆಸ್ಸೆಸ್ಸನ್ನು ನಿಷೇಧಿಸಿ ಎಂದು ಕರೆಕೊಟ್ಟ ಕೂಡಲೇ ಬಿಜೆಪಿಯ ತಲೆಕೆಟ್ಟ ಲೀಡರುಗಳು ಸಿದ್ದು ಮೇಲೆ ಬಿದ್ದಿವೆಯಂತಲ್ಲಾ. ಈ ಆರೆಸ್ಸೆಸ್ಸಿಗರು ಮತ್ತು ಲೀಡರುಗಳು ಗಾಂಧಿ ಹತ್ಯೆಯ ನಂತರ ಹುಟ್ಟಿದವರು; ಇವರಿಗೆ ಇತಿಹಾಸ ಗೊತ್ತಿರಲಾರದು. ಗಾಂಧಿ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡ ಇದೆಯೆಂದು ಆರೋಪಿಸಿ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರೇ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರೆಂದು ಸಿದ್ದು ಇನ್ನೂ ತಮ್ಮ ವಿರೋಧಿಗಳ ಮುಸುಡಿಗೆ ಹೇಳಿಲ್ಲವಂತಲ್ಲಾ, ಥೂತ್ತೇರಿ.

*****

ಸಂಘ ಪರಿವಾರಿಗಳು ಗಾಂಧಿಯನ್ನು ಕೊಂದ ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುತ್ತಿವೆ, ಇದಷ್ಟೇ ಅಲ್ಲ, ಮುಂದೆ ಮಾಡಬಹುದಾದ ಧ್ವಂಸದ ಕಾರ್ಯಗಳ ಪಟ್ಟಿಯನ್ನು ಮಾಡುತ್ತಿವೆ. ಬಾಬರಿ ಮಸೀದಿ ವಿಷಯದಲ್ಲಿ ತೀರ್ಪು ನೀಡಿದ ಸಮಯದಲ್ಲಿ ಸುಪ್ರೀಂಕೋರ್ಟು ’ಆಯ್ತು ಸಾಕು ಮಾಡಿ, ಮುಂದೆ ದೇಶದ ಶಾಂತಿ ಬಹಳ ಮುಖ್ಯ’ ಎಂದು ಹೇಳಿದ ಮಾತಿಗೆ ಕಿವುಡಾಗಿ ಕುಂತಿವೆಯೆಲ್ಲಾ. ಹೊಸದಾಗಿ ಹುಟ್ಟಿಕೊಂಡ ಗಾದೆ ಮಾತಿನಂತೆ ’ನಳ್ಳಿ ಹೆಚ್ಚಿದ ಕೆರೆ ಹಾಳು, ಆರೆಸ್ಸೆಸ್ ಹೆಚ್ಚಿದ ಊರ್ ಹಾಳು’ ಎಂಬ ಗಾದೆಯಂತೆ ಈಗ ಬ್ರಾಹ್ಮಣ ವಠಾರದಲ್ಲಿದ್ದ ಆರೆಸ್ಸೆಸ್ ಕವಾಯತು ಊರನ್ನೆಲ್ಲಾ ವ್ಯಾಪಿಸುತ್ತಿದೆ. ಅವುಗಳ ದೀರ್ಘಕಾಲದ ಅಜೆಂಡಾ ಪ್ರಕಾರ ಮುಸ್ಲಿಮರನ್ನ ಬಗ್ಗು ಬಡಿಯುವುದು, ನಂತರ ದಲಿತರ ಮೇಲೆ ಶೂದ್ರರ ಕೈಲಿ ದಾಳಿ ಮಾಡಿಸುವುದು, ಆ ನಂತರ ಸಿಖ್ಖರು, ಯಾದವರು ಹೀಗೆ ನಡೆಯಲಿಚ್ಛಿಸಿರುವ ದೊಡ್ಡ ದೊಂಬಿಯನ್ನೇ ಊಹಿಸಬಹುದು. ತಲೆಕೆಟ್ಟವರಿಗೆ ಮತ್ತು ಬರುವ ಔಷಧಿ ಕೊಡಿಸಿ ಜಗಲಿಯ ಮೇಲೆ ಕೂರಿಸುವ ತನಕ ಇವೆಲ್ಲಾ ನಿರಂತರವಾಗಿ ನಡೆಯುವ ಚೇಷ್ಟೆಗಳೆಂದು ಉಗ್ರ ಗಾಂಧಿವಾದಿಗಳು ಗೊಣಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಭಾರತ್ ಜೋಡೋ ಯಾತ್ರೆ ಕೇರಳದಿಂದ ಕರ್ನಾಟಕ ತಲುಪಾಯ್ತು. ಮಂಡ್ಯದ ಹತ್ತಿರ ಹೋಗುತ್ತಿದೆ. ಕಳೆದ ಎಂಟು ವರ್ಷಗಳಿಂದ ಬಾಲಿಶ ಹುಡುಗ, ಲಾಲಿಪಾಪು ಮತ್ತು ಅಪ್ರಬುದ್ಧ ಬಾಲ ಭಾಷೆಯ ಹುಡುಗ ಎಂದೆಲ್ಲಾ ಚೆಡ್ಡಿಗಳು ತಮ್ಮ ಜಾಲತಾಣದಲ್ಲಿ ಯಾರ ವಿರುದ್ಧ ಅಪಪ್ರಚಾರ ಮಾಡಿದ್ದವೊ ಅಂತಹ ರಾಹುಲಗಾಂಧಿ, ತಂದೆ ತಾಯಿ ಅಜ್ಜಿ ಮುತ್ತಾತರ ಮಾರ್ಗ ಹುಡುಕುತ್ತ ಹೊರಟವನಂತೆ ಬರುತ್ತಿದ್ದಾನಂತಲ್ಲಾ. ಅವನನ್ನು ನೋಡಲು ರಸ್ತೆ ಬದಿಯಲ್ಲಿ ನಿಂತ ಜನ ಮತ್ತು ಆತನ ಹಿಂದೆ ಕಿಲೋಮಿಟರುಗಟ್ಟಲೆ ಹರಿದು ಬರುತ್ತಿರುವ ಜನಸಾಗರ ನೋಡಿದ ಬಿಜೆಪಿಗಳು ಬೆಚ್ಚಿ ಏನು ಮಾಡಲೂ ತೋಚದೆ ಜಾಥಾದಲ್ಲಿ ಪೇಸಿಎಂ ಟಿಶರ್ಟ್ ಧರಿಸಿದ್ದ ಹುಡುಗರನ್ನ ಹಿಡಿದು ಶರ್ಟ್ ಬಿಚ್ಚಿಕೊಂಡು ಬರಲು ಹೇಳಿವೆಯಂತಲ್ಲಾ. ಒಂದು ಟೀಶರ್ಟ್ ಬಿಚ್ಚಿದರೇನು ಹತ್ತು ಟೀಶರ್ಟ್ ಕೊಡಿಸುತ್ತೇನೆ ಎಂದು ಡಿಕೆಶಿ ಹೇಳಿದ ಕೂಡಲೇ ಮಾಧ್ಯಮದೊಳಗಿರುವ ಶಾನುಭೋಗರ ಹುಡುಗರು ತಮ್ಮ ಕ್ಯಾಮರಾ ಚುರುಕುಗೊಳಿಸಿ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದ ಡಿಕೆಶಿ, ಸಿದ್ದರಾಮಯ್ಯನಿಗೆ ಎಡಗೈ ತಾಕಿಸಿದ ಡಿಕೆಶಿ, ರಾಹುಲ್ ಕಾರಿನಲ್ಲಿ ಜಾಗವಿಲ್ಲದೆ ಹಿಂದಿನ ಕಾರಿನಲ್ಲಿ ಹೊರಟ ಡಿಕೆಶಿ ಎಂದು ಅರಚುತ್ತಲೇ ತಮ್ಮ ಚೇಷ್ಟೆಗಳನ್ನು ಮೆರೆಯುತ್ತಿವೆಯಂತಲ್ಲಾ. ನಗು ಕಳೆದುಕೊಂಡ ಜನಕ್ಕೆ ಇನ್ನು ಏನೇನು ಹಾಸ್ಯ ಪ್ರಸಂಗವನ್ನು ಈ ದಸರಾ ಸಮಯದಲ್ಲಿ ಮಾಧ್ಯಮಗಳು ತೋರುತ್ತವೊ ಎಂಬುದು ಮನರಂಜನೆಗೆ ಹಾತೊರೆಯುವ ಜನರ ಮನದಾಳದ ಮಾತಾಗಿದೆಯಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸತ್ಯ ಮತ್ತು ಸತ್ವದ ಹುಡುಕಾಟ ಗೌರಿ. ಕಾಂ ಧ್ಯೇಯೋದ್ದೇಶ.ಹೆಮ್ಮೆಯಾಗುತ್ತದೆ…ಪತ್ರಿಕಾ ಧರ್ಮವನ್ನೇ ಮರೆತ ಮೈಮನ ಮಾರಿಕೊಂಡ ಅದೆಷ್ಟೋ ಮಾಧ್ಯಮಗಳ ನಡುವೆ ಕೆಸರಲ್ಲಿ ಕಮಲ ಅರಳಿದಂತೆ ಅರಳಿ ಮಾಧ್ಯಮ ಅಂದರೆ ಇದಲ್ಲಾ ಇದು ಎಂದು ಅರಹುತ್ತಿರುವ ನಿಷ್ಕಲ್ಮಷ ನಿಷ್ಕಪಟ ಈ ಮಾಧ್ಯಮ ಕಂಡು.ಹೃದಯಾಂತರಾಳದ ಸಲಾಂ ಬಸವ ಶರಣು.
    ಗುಡಿಬಂಡೆ ಫಯಾಜ್ ಅಹಮದ್ ಖಾನ್
    ರಾಜ್ಯಾಧ್ಯಕ್ಷರು. ಕಸಾಪ
    ಕರುನಾಡು ಸಾಹಿತ್ಯ ಪರಿಷತ್ತು.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...