Homeಅಂಕಣಗಳುನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

- Advertisement -
- Advertisement -

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದಯವಾದ ಸುದ್ದಿಕೇಳಿ ಗಣಿಮಣ್ಣು ತಿಂದಷ್ಟು ಖುಷಿಯಾಯ್ತಲ್ಲಾ. ಇದಕ್ಕೆ ಕಾರಣರಾದ ಜನಾರ್ಧನ ರೆಡ್ಡಿಯವರಿಗೆ ಪೋನ್ ಮಾಡಿ ಶುಭಾಶಯ ಹೇಳಬೇಕೆನಿಸಿ ಪೋನ್ ಮಾಡಿದರೆ ರಿಂಗಾಯ್ತು. ರಿಂಗ್‌ಟೋನ್: ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ನೀನೊಲಿದ ಮನೆ ಮನೆಯು ಲಕ್ಷ್ಮೀನಿವಾಸ….’

“ಹಲೋ ಯಾರು?”

“ನಾನು ಸಾರ್ ಪತ್ರಕರ್ತ ಯಾಹು ಅಂತ.”

“ಯಾವೂ ಅಂದ್ರೆ ಯಾರು?”

“ನಿಮ್ಮತ್ರ ಈ ಹಿಂದೆ ಒಬ್ಬ ವಕೀಲ, ಮತ್ತೊಬ್ಬ ಪತ್ರಕರ್ತ ಕಂ ಪ್ರೊಫೆಸರ್ ಇದ್ರಲ್ಲ ಸಾರ್ ಅವರ ಆತ್ಮೀಯ ಗೆಳೆಯ ಸಾರ್.”

“ಭಾಳ ಒಳ್ಳೆದು. ಏನು ಹೇಳಿ ಇವರೆ.”

“ನಿಮ್ಮನ್ನ ಅಭಿನಂದಿಸೋದಕ್ಕೆ ಪೋನ್ ಮಾಡಿದೆ ಸಾರ್. ಅಂತೂ ನಮ್ಮ ಕರ್ನಾಟಕ್ಕೆ ಇಂತದೊಂದು ಪಾರ್ಟಿ ಬೇಕಿತ್ತು ಸಾರ್.”

“ಅದಕ್ಕಾಗಿ ನಾನು ಪಾರ್ಟಿ ಸ್ಥಾಪನೆ ಮಾಡಿದೆ, ಯಾಕಂದ್ರೆ ಕಲ್ಯಾಣ ಕರ್ನಾಟಕ ಅಂತ ಹೇಳಿ ಬರೀ ನಾಮಕರಣ ಮಾಡಿದ್ರು, ಆದ್ರೆ ಅಭಿವೃದ್ಧಿ ಕೆಲಸಗಳು ಏನೂ ಆಗಿಲ್ಲ.”

“ನಿಜ ಸಾರ್ ಶ್ರೀಕೃಷ್ಣದೇವರಾಯನ ಕಾಲದಿಂದ್ಲೂ ಆಭಿವೃದ್ಧಿ ಆಗಲಿಲ್ಲ. ಕಡೆಗೆ ನಮ್ಮ ಸಂಪತ್ತನ್ನೆಲ್ಲಾ ತುಂಬಿಕೊಂಡು ಆಂಧ್ರಕ್ಕೋದ್ರು.”

“ನಾನು ಕಲ್ಯಾಣ ಕರ್ನಾಟಕನ ಅಷ್ಟೇ ಅಭಿವೃದ್ಧಿ ಮಾಡಲ್ಲ, ಇಡೀ ಕರ್ನಾಟಕನ ಅಭಿವೃದ್ಧಿ ಮಾಡತಕ್ಕಂತ ಕಾರ್ಯಕ್ರಮ ತಯಾರು ಮಾಡಿದ್ದಿನಿ.”

“ಆ ಅಭಿವೃದ್ಧಿಲಿ ಗಣಿ ಗುಡ್ಡಗಳು ಇವೆಯಾ ಸಾರ್?”

“ಇಲ್ಲ, ಜನರ ಮೂಲಭೂತ ಸಮಸ್ಯೆಗಳಿವೆ.”

“ಜನರ ಸಮಸ್ಯೆ ನಿವಾರಿಸಕ್ಕೆ ಹಣ ಬೇಕಲ್ಲವ ಸಾರ್. ಅದನ್ನ ಎಲ್ಲಿಂದ ತರ್ತಿರಿ? ಕೇಂದ್ರ ಸರಕಾರ ಹಣಕೊಡಲಿಲ್ಲ ಅಂದರೆ ಯಂಗೆ ಮಾಡ್ತಿರಿ?”

“ನಾನು ಹ್ಯಾಗೊ ಮಾಡ್ತಿನಿ. ಮೊದಲಿಂದ ನಾನು ನನ್ನ ಗುರಿಲಿ ಸೋತವನಲ್ಲ, ಈಗಲೂ ಸೋಲಲ್ಲ.”

“ಸೋಲಬೇಡಿ ಸಾರ್.. ವಿಧಾನಸೌಧದ ವರಾಂಡದಲ್ಲಿ ನಿಮ್ಮ ಗ್ರೀನ್ ಕಲರ್ ರೋಲ್ಸ್‌ರಾಯ್ ಕಾರ್ ನಿಂತಿರದ್ದನ್ನ ನೋಡಕ್ಕೆ ನನ್ನ ಕಣ್ಣಿಗೆ ಹಬ್ಬ ಸಾರ್.”

“ನಾನು ನನ್ನ ರೋಲ್ಸ್‌ರಾಯ್ ಕಾರಲ್ಲಿ ಬಂದೇ ಬರ್ತಿನಿ ಯಾಹೂ.”

“ನಿಮ್ಮಂತವರ ಕಾರ್ಯಕ್ಷೇತ್ರದ ತಾಣದಂಗಿದ್ದ ಬಿಜೆಪಿ ಯಾಕೆ ಬಿಟ್ರಿ ಸಾರ್?”

“ಬಿಜೆಪಿ ಇವತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ರೆ ಅದು ನನ್ನಿಂದ. ಮೊದಲು ಕುಮಾರಸ್ವಾಮಿಗೆ ಏನು ಬೇಕೋ ಅದನ್ನ ಕೊಟ್ಟು ಅಧಿಕಾರದಲ್ಲಿ ಪಾಲು ಪಡೆದೆವು. ನಂತರ ಬಹುಮತ ಬರದೇ ಹೋದಾಗ ಶಾಸಕರಿಗೆ ಏನು ಬೇಕೋ ಅದು ಕೊಟ್ಟು, ಅವರಿಂದ ರಾಜಿನಾಮೆ ಕೊಡಿಸಿ ಚುನಾವಣೆ ಮಾಡಿ ಎಡೂರಪ್ಪನ್ನ ಮುಖ್ಯಮಂತ್ರಿ ಮಾಡಿದ್ದು ನಾವು. ಅದಕ್ಕಾಗಿ ನಾವು ಗಣಿಯಿಂದ ಬಂದ ಹಣವನ್ನು ಖರ್ಚು ಮಾಡಿದೆವು.”

“ಆ ನಂತರ ಸರಕಾರ ಬಂದಾಗ ಅಕ್ರಮ ಮಾಡಿ ಹಣ ಮಾಡಿಕಂಡ್ರಲ್ಲ ಸಾರ್. ಗಣಿ ಹಣನ ರಾಜಕಾರಣಕ್ಕೆ ಹಾಕಿದ್ರಿ. ಪವರ್ರಿಗೆ ಬಂದಾಗ ಗೋರಿ ಕಂಡ್ರಿ..”

“ಅದು ಸರಿ, ಪರಿಣಾಮಗಳನ್ನ ಅನುಭವಿಸಿದವರು ನಾವು, ಜೈಲಿಗೆ ಹೋಗಿದ್ದು ನಾನು, ನಮ್ಮ ತಾಯಿ ಸಮಾನರಾಗಿದ್ದ ಸುಷ್ಮಸ್ವರಾಜ್ ಕೂಡ ಅವುರ್ಯಾರೊ ನನಿಗೆ ಗೊತ್ತೆಯಿಲ್ಲ ಅಂದುಬುಟ್ರು. ಇನ್ನ ತಂದೆ ಸಮಾನರಾದ ಎಡೂರಪ್ಪನೂ ನಮ್ಮ ಸಹಾಯಕ್ಕೆ ಬರಲಿಲ್ಲ..”

“ಬರಲಿಲ್ಲ ಅಂದ್ರೆ ಅವರಿಗೂ ನಿಮ್ಮ ಮೇಲೆ ಸಿಟ್ಟಿತ್ತಲ್ಲ ಸಾರ್. ಅವರ ಆತ್ಮೀಯರಾಗಿದ್ದ ಶೋಭ ಕರಂದ್ಲಾಜೆಯವರ್ನ ಸಂಪುಟದಿಂದ ತಗಿಬೇಕು ಅಂದ್ರಿ, ತಗದ್ರು. ಇನ್ನ ನಿಮ್ಮನ್ನ ವಿಚಾರಿಸಿಗಳಕ್ಕೆ ಅಂತ ಕಳಿಸಿದ್ದ ಡಿ.ಸಿನ ಕೂಡಲೇ ವರ್ಗಮಾಡಿ ಅಂದಾಗ ಮಾಡಿದ್ರು. ಒಂದೇ ವಾರಕ್ಕೆ ಎಸ್ಪಿ ಡಿ.ಸಿ ವರ್ಗ ಮಾಡಿಸಿದ್ದು ನೀವೇ ಇರಬೇಕು.”

“ಯಾರು ಸರಕಾರವನ್ನ ತಂದ್ರೋ ಅವರಿಗೇ ಕಿರುಕುಳ ಕೊಡೋ ಅಧಿಕಾರಿಗಳನ್ನ ಹಾಕಿದ್ರೆ ಸುಮ್ಮನಿರಬೇಕಾಗುತ್ತ?”

“ಆಗಲ್ಲ ಸಾರ್. ನೀವು ಬಿಜೆಪಿ ಅನ್ನೋ ಪಾರ್ಟಿನ ಅರ್ಥಮಾಡಿಕೊಬೇಕಾಗಿತ್ತು. ಅವರ ಮೋಸದ ಇತಿಹಾಸ ದೊಡ್ಡದಿದೆ.”

“ನಂಬಿದವರ ಕತ್ತು ಕುಯ್ಯತರೆ ಅಂತ ಗೊತ್ತಿರಲಿಲ್ಲ ಕಂಡ್ರಿ.”

“ಕತ್ತು ಕುಯ್ಯಲ್ಲ ಸಾರ್ ಅವುರು. ನೀವೇ ಪಾಷಣ ತಿಂದು ಸಾಯಂಗೆ ಮಾಡ್ತರೆ. ಇದೇ ಎಡೂರಪ್ಪ ಜೈಲಿಗೋಗಿದ್ದಾಗ ಬೆಂಗಳೂರಿಗೆ ಅಡ್ವಾನಿ ಬಂದಿದ್ರು. ಎಡೂರಪ್ಪನ್ನ ನೋಡಕ್ಕೆ ಹೋಗಿದ್ರಾ? ಅದೇ ಅಡ್ವಾನಿ ಈಗೆಲ್ಯವುರೆ, ಬಾಬರಿ ಮಸೀದಿ ಕೆಡಹಿದ ಕಲ್ಯಾಣಸಿಂಗ ಏನಾದ್ರು, ಹುಬ್ಬಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸಿದ ಉಮಾಭಾರತಿ ಏನಾದ್ರು, ಶಿವಸೇನೆ ಏನಾಗಿದೆ, ಗೋವಾ ಕತೆ ಏನಾಗಿದೆ. ಕುತಂತ್ರದಿಂದ್ಲೆ ಪಾರ್ಟಿ ಕಟ್ಟಿ ಆಡಳಿತ ಮಾಡದು ಅವರ ಹುಟ್ಟುಗುಣ. ನೀವು ನಿಮ್ಮ ಬಗ್ಗೆ ಯೋಚನೆ ಮಾಡಿದ್ರೆ ಇಷ್ಟೊಂದು ಗಣಿ ಲೂಟಿ ಮಾಡೋ ಅಗತ್ಯ ಇರಲಿಲ್ಲ ಅಲ್ಲವ ಸಾರ್?”

“ಹೌದು, ಇವರಿಗೋಸ್ಕರ ಜಾಸ್ತಿ ಮಾಡಬೇಕಾಯ್ತು.”

“ಗಣಿಕಳ್ರು ಅಂತ ಹೆಸರು ಪಡದೋರು ನೀವು. ಅಧಿಕಾರ ಮಾಡ್ತ ಸರಕಾರನೆ ಕೊಳ್ಳೆ ಹೊಡಿತಾಯಿರೋರು ಅವುರು.”

“ಅದಕೆ ನಾನು ಅವರನ್ನ ಸುಮ್ಮನೆ ಬಿಡಬಾರ್ದು ಅಂತ ಕಲ್ಯಾಣ ಪ್ರಗತಿ ಪಕ್ಷ ಮಾಡಿದ್ದಿನಿ.”

“ಪ್ರಾದೇಶಿಕ ಪಕ್ಷ ಮಾಡಿದೋರ್ಯಾರು ಸಕ್ಸಸ್ ಆಗಿಲವಂತಲ್ಲಾ ಸಾರ್?”

“ಆಗಿಲ್ಲ ಅನ್ನದನ್ನ ನಾನು ಕೂಡ ಗಮನಿಸಿದ್ದೀನಿ. ಮಾನ್ಯ ಎಡೂರಪ್ಪನವರು ಮಾಡಿದ್ರು ಬಿಜೆಪಿನ ಅಧಿಕಾರದಿಂದ ದೂರ ಇಟ್ಟರು. ಆ ನಂತರ ಬಿಜೆಪಿಯವರೇ ಕರದು ಅಧಿಕಾರವನ್ನ ಕೊಟ್ರು. ನಾನು ಕೂಡ ಹಾಗೇ ಮಾಡ್ತಿನಿ ನೋಡಿ.”

“ವಿಜಯನಗರ ಸಾಮ್ರಾಜ್ಯ ಆಳಿದೋರು ತೆಲುಗರಂತೆ! ಅವರ ನಂತರ ನೀವೇನಾದ್ರು ಪವರ್ರಿಗೆ ಬಂದ್ರೆ ಮತ್ತೆ ಕಲ್ಯಾಣ ಕರ್ನಾಟಕ ಸಾಮ್ರಾಜ್ಯ ಸ್ಥಾಪನೆ ಆಗುತ್ತಲ್ಲ ಸಾರ್?”

“ಈಗಲೂ ಕಲ್ಯಾಣ ಕರ್ನಾಟಕ ತೆಲುಗರದ್ದೇ ಆಗಿದೆ ಕಂಡ್ರಿ. ಇಲ್ಲಿನ ಜಿಲ್ಲಾಪಂಚಾಯ್ತಿ ಸದಸ್ಯರು, ಗ್ರಾಮಪಂಚಾಯ್ತಿ ಸದಸ್ಯರು, ಎಮ್ಮೆಲ್ಲೆ, ಮಂತ್ರಿಗಳೆಲ್ಲಾ ತೆಲುಗು ಭಾಷಿಕರು. ಅವರಿಗೊಬ್ಬ ಲೀಡರು ಬೇಕು ಆ ಕೊರತೆಯನ್ನ ನಾನು ತುಂಬತೀನಿ.”

“ಮತ್ತೆ ಸಮಗ್ರ ಕರ್ನಾಟಕದ ಮಾತನಾಡ್ತಿರಿ?”

“ಅದು ಕೂಡ ನಿಜ. ಇಡೀ ಕರ್ನಾಟಕ ಅಭಿವೃದ್ಧಿ ನಮ್ಮ ಕನಸು.”

“ನಿಮ್ಮ ಕನಸು ನನಸಾಗದಕ್ಕೆ ಕರ್ನಾಟಕ ಕಾಯ್ತಯಿದೆ ಸಾರ್, ನೀವು ನಿಮ್ಮ ಕಾರ್ಯಕ್ಷೇತ್ರನ ಎಲ್ಲಾ ಜಿಲ್ಲೆಗೂ ವಿಸ್ತರಿಸಿಕೊಳ್ಳೊದಾದ್ರೆ ನಿಧಿ ತರದ ಗುಡ್ಡಗಳು ನಿಂತಿವೆ, ಕನಕಪುರದ ಕಡೆ ಗ್ರಾನೈಟ್ ಬೆಟ್ಟಗಳಿವೆ, ಇನ್ನ ಪಾಂಡವಪುರದ ಕಡೆ ಪುಟ್ಟರಾಜನ ಬೆಟ್ಟಗಳಿವೆ, ಚಿಕ್ಕಮಗಳೂರಿಗೆ ಬಂದ್ರೆ ಗಣಿ ಗಿರಿಗಳ ಸಾಲೇಯಿದೆ, ಶಿವಮೊಗ್ಗದ ಕಡೆ ಕುಂದಾದ್ರಿ ಕೊಡಚಾದ್ರಿ ಬೆಟ್ಟಗಳಿವೆ. ಇನ್ನ ನಿಮ್ಮಲ್ಲೇ ಕಪ್ಪತ್ತ ಗುಡ್ಡ ಸಾಲಿದೆ. ನೀವು ಯಾವುದೇ ಜಿಲ್ಲೆಗೋದ್ರು ಗಣಿಗುಡ್ಡಗಳಿವೆ ಸಾರ್. ಅವನ್ನೆಲ್ಲಾ ನೆಲಸಮ ಮಾಡಿ ಕಲ್ಯಾಣ ರಾಜ್ಯದ ಕೃಷ್ಣದೇವರಾಯನ ಕಾಲ ಮಾಡಬಹುದು. ನಿಮ್ಮ ಖಾಸಗಿ ದರ್ಬಾರಿನಲ್ಲಿರೊ ಕುರ್ಚಿ ಮೇಲೆ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿ ಕೊಟ್ಟಂತ ಕಿರೀಟ ಧರಿಸಿ ಕೂತಗಬಹುದು. ಆಗ ಬಿಜೆಪಿ ಕಣ್ಣು ತಪ್ಪಿಸಿ ರಾಮುಲು ಬರ್ತರೆ.”

“ರಾಮುಲು ಬಂದ್ರೆ ಅವರನ್ನೆ ಮುಖ್ಯಮಂತ್ರಿ ಮಾಡ್ತಿನಿ.”

“ನೀವು?”

“ನಾನು ಉಪಮುಖ್ಯಮಂತ್ರಿ ಮತ್ತೆ ಗಣಿಕಾತೆ ತಗೊತಿನಿ.”

ಥೂತ್ತೇರಿ.


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...