Homeಅಂಕಣಗಳುಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

ಸುಮಲತಾರದ್ದು ಈ ಶತಮಾನದ ಎರಡನೇ ದ್ರೋಹ

- Advertisement -
- Advertisement -

ಮಂಡ್ಯ ಜಿಲ್ಲೆ ಜನತೆಗೆ ಸುಮಲತಾ ನಡೆ ಈ ಶತಮಾನದ ಎರಡನೇ ದ್ರೋಹವಾಗಿ ಕಾಣತೊಡಗಿದೆಯಂತಲ್ಲಾ. ಮೊದಲ ದ್ರೋಹ ಎಸ್.ಎಂ ಕೃಷ್ಣರದ್ದು. ಯಾರನ್ನು ಕೇಳಿದರೂ ತಾವು ಮೋಸ ಹೋದ ಮಾತು ಅವರಿಂದ ಹೊರಬರುತ್ತಿದೆ. ಇದಕ್ಕೆ ಅವರು ಕೊಡುವ ಕಾರಣ: ಸುಮಲತಾ ಚುನಾವಣೆ ಮುಗಿಯುವ ಹಂತದಲ್ಲಿ ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು; ಇದರಿಂದ ಕರಗಿಹೋದ ಮಂಡ್ಯದ ಜನ ತಮ್ಮ ಮನೆಯ ಮಗಳಾಗಿ ಸ್ವೀಕರಿಸಿದರು; ಅಂದು ಮುಖ್ಯಮಂತ್ರಿ ಮಗನೇ ಮೈತ್ರಿ ಸರ್ಕಾರದ ಅಭ್ಯರ್ಥಿಯಾದರೂ ಕಾಂಗ್ರೆಸ್ಸಿಗರು ಒಳಗೊಳಗೇ ಕೆಲಸ ಮಾಡಿದರು. ಭಾಷಾಭಿಮಾನಿಗಳು, ರೈತಸಂಘದವರು, ದಲಿತ ಸಂಘದ ಲೀಡರುಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಸುಮಲತಾ ಒಂದೂಕಾಲು ಲಕ್ಷದ ಲೀಡು ಪಡೆದು ಗೆದ್ದರು. ಆದರೇನು ಗೆದ್ದ ಕ್ಷಣದಿಂದಲೇ ಅವರ ಒಡನಾಟ ಮನೆಹಾಳು ಬಿಜೆಪಿಗಳ ಜೊತೆ ಆರಂಭವಾಯ್ತು. ಈಗ ಅವರು ಹೆಚ್ಚುಕಮ್ಮಿ ಬಿಜೆಪಿ ಸೇರಿದಂತೆಯೇ ಅಂಬಂತೆ ಬಿಜೆಪಿಗೆ ಬಂಬಲ ಘೋಷಿಸಿರುವುದು ಕೂಡ ಸಕಾರಣವಾಗಿರದೆ ಇನ್ನ ವರ್ಷವಿರುವ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಸೇರಿ ಮತದಾರರಿಗೆ ಆಘಾತ ನೀಡಿದ್ದಾರೆ. ಈಕೆಯನ್ನು ಬೆಂಬಲಿಸಿದ ಸಿನಿಮಾ ನಟರೂ ಕೂಡ ಮೋಸ ಹೋಗಿದ್ದಾರೆ. ಆದರೇನು ಇಂತಹ ಯಾವ ನೋವೂ ಅವರನ್ನು ಭಾಧಿಸಿದಂತಿಲ್ಲ. ಇವರ ಬಗ್ಗೆ ಅಪ್ರಭುದ್ಧವಾಗಿ ಮಾತನಾಡಿದ್ದ ರೇವಣ್ಣ, ಶಿವರಾಮೇಗೌಡರ ಮಾತುಗಳೇ ನಿಜವಾಗಿರುವ ಈ ಸಮಯದಲ್ಲಿ, ಶಿವರಾಮೇಗೌಡ ಸುಮಲತಾ ಒಂದೇ ವೇದಿಕೆಗೆ ಬಂದರಲ್ಲಾ ಥೂತ್ತೇರಿ.

*****

ಇದ್ದಕ್ಕಿದ್ದಂತೆ ಮಂಡ್ಯ ಜಿಲ್ಲೆಯ ಉರಿಗೌಡ, ನಂಜೇಗೌಡರ ಬಗ್ಗೆ ವಕಾಲತ್ತು ವಹಿಸಿರುವ ಶೋಭಾ ಕರಂದ್ಲಾಜೆ ಎಂಬ ಸಂಶೋಧಕಿ ಎಡೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಬಲಗೈನಂತಿದ್ದವರು. ನೂರು ವರ್ಷದ ಇತಿಹಾಸವಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಕೇಂದ್ರ ಸರಕಾರ ಮುಚ್ಚಿ ಒಂದು ಸಾವಿರ ಕುಟುಂಬಗಳು ಬೀದಿಗೆ ಬಿದ್ದಾಗ ಇವರು ಮಾತನಾಡಲಿಲ್ಲ. ವಿಐಎಸ್‌ಎಲ್ ಮುಚ್ಚಲು ಸಹಕರಿಸಿದ ಶಿವಮೊಗ್ಗದ ರಾಜಕಾರಣಿಗಳ ಮನಸ್ಸಿನ ಹಿಂದೆ ಇದ್ದ ಕುತ್ಸಿತ ಭಾವನೆಗಳು ಹಲವು: ಭದ್ರಾವತಿ ಹಿಂದಿನಿಂದ ಕಾಂಗ್ರೆಸ್ಸನ್ನು ಬೆಂಬಲಿಸಿಕೊಂಡು ಬಂದ ಕ್ಷೇತ್ರ; ಅಲ್ಲಿಗೆ ಶಿವಮೊಗ್ಗದ ಯಾವ ಮತೀಯ ಕಾಯಿಲೆಗಳೂ ತಲುಪಲಿಲ್ಲ. ಅಲ್ಲಿನ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್) ಮತ್ತು ವಿಐಎಸ್‌ಎಲ್‌ನಲ್ಲಿನ ಬಹುತೇಕ ಕಾರ್ಮಿಕರೆಲ್ಲಾ ಒಕ್ಕಲಿಗರು. ಇವರ ಬಗ್ಗೆ ಮೊದಲಿನಿಂದಲೂ ಎಡೂರಪ್ಪನವರ ಟೀಮಿಗೆ ತಾತ್ಸಾರ. ಅದೇನೇ ಇರಲಿ ಮಂಡ್ಯಕ್ಕೆ ಬಂದು ಉರಿಗೌಡ ನಂಜೇಗೌಡರ ಬಗ್ಗೆ ಸಂಶೋಧನೆಗೆ ತೊಡಗಿರುವ ಈ ಶೋಭಾ ಕರಂದ್ಲಾಜೆ ನೂರುವರ್ಷದ ಇತಿಹಾಸವಿರುವ ವಿಐಎಸ್‌ಎಲ್ ಬಗ್ಗೆ ಈವರೆಗೂ ಚಕಾರವೆತ್ತದಿರುವುದು ಭದ್ರಾವತಿ ಜನರಿಗೆ ಬಗೆದಿರುವ ದ್ರೋಹವೆಂದು ಅರಿವು ಮಾಡಿಕೊಡಬೇಕಿದೆಯಲ್ಲಾ, ಥೂತ್ತೇರಿ.

ಇದನ್ನೂ ಓದಿ: ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಇತಿಹಾಸದ ಸಮಾಧಿ ಅಗೆದು ಅಲ್ಲಿನ ಸತ್ಯಸಂಗತಿಗಳನ್ನು ಮರೆಮಾಡಿ ತಮಗೆ ಬೇಕಿರುವುದನ್ನು ಸೃಷ್ಟಿಸಿ ಸುಳ್ಳು ಹೇಳುತ್ತ ಹೋಗುವುದು ಬಿಜೆಪಿಗಳ ಹಳೆಯ ಚಾಳಿ. ಅದರಂತೆ ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನ ಬದಿಗೊತ್ತಿ ಉರಿ ಹಿಡಿದು ನಂಜುಕಾರುತ್ತ ಹೊರಟಿವೆ. ಸಂಶೋಧಕ ಹ.ಕ.ರಾಜೇಗೌಡರು ಉರಿಗೌಡ ಮತ್ತು ನಂಜೇಗೌಡರು ಟಿಪ್ಪು ಆಡಳಿತದ ವಿರುದ್ಧ ದಂಗೆ ಎದ್ದರು ಎಂಬ ಸಾಲನ್ನು ಹಿಡಿದುಹೊರಟಿರುವ ಬಿಜೆಪಿಯ ಮಂದಮತಿಗಳು ಒಂದಿಷ್ಟು ಧ್ಯಾನಿಸಿ ಸತ್ಯಸಂಗತಿಯನ್ನು ಗ್ರಹಿಸಿದ್ದಾರೆ. ಟಿಪ್ಪು ಸಂಪುಟದಲ್ಲಿದ್ದ ಎಂಟು ಜನ ಮಂತ್ರಿಗಳಲ್ಲಿ ಐವರು ಬ್ರಾಹ್ಮಣರಿದ್ದರು. ಅದರಲ್ಲಿ ದಿವಾನ್ ಪೂರ್ಣಯ್ಯನೂ ಬ್ರಾಹ್ಮಣ; ಇವರ ಆಣತಿಯಂತೇ ಆಡಳಿತ ನಡೆದಿದೆ. ಆ ಸಮಯದಲ್ಲಿ ಇವರುಗಳ ವರ್ಗವೆಲ್ಲಾ ಸವಲತ್ತಿನಿಂದ ಸಂತೃಪ್ತವಾಗಿದೆ. ಆದಕಾರಣ ವಿರೋಧ ವ್ಯಕ್ತವಾಗಿದೆ; ಟಿಪ್ಪು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬ್ರಾಹ್ಮಣರು ಏನು ಮಾಡಿದರು, ಎಷ್ಟು ಜಹಗೀರಿಗಳನ್ನು ಪಡೆದು ಆ ಭೂಮಿಯಲ್ಲಿ ಒಕ್ಕಲಿಗರಿಗೆ ಬೇಸಾಯ ಮಾಡಲು ಬಿಟ್ಟು ಗರ್ಭಗುಡಿಯಲ್ಲಿ ತಾವು ಆರಾಮವಾಗಿದ್ದು ಅವಸಾನ ಹೊಂದಿದರು ಎಂಬ ಸಂಗತಿ ಉರಿಗೌಡ ನಂಜೇಗೌಡರ ಸಂಗತಿಯೊಂದಿಗೆ ಈಚೆಬರಬೇಕಾಗಿದೆಯೆಲ್ಲಾ, ಥೂತ್ತೇರಿ.

****

ಈ ಜಗತ್ತಿಗೆ ಶ್ರೇಷ್ಠ ರಾಜಕೀಯ ವ್ಯವಸ್ಥೆ ಎಂದರೆ ಅದು ಪ್ರಜಾತಂತ್ರ. ಇಂತಹ ವ್ಯವಸ್ಥೆಯನ್ನು ದುರುಳವಾಗಿ ಬಳಸಿಕೊಂಡ ಬಿಜೆಪಿಗಳು ಏನೆಲ್ಲಾ ಅನಾಹುತ ಸಾಧ್ಯವೊ ಅದನ್ನೆಲ್ಲಾ ಮಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದುಬಂದು ತಮ್ಮ ಅಜೆಂಡಾಗಳನ್ನು ಕೈಗೆತ್ತಿಕೊಂಡರು. ಆರಂಭವೇ ರಥಯಾತ್ರೆ, ಇದು ಮುಗಿದನಂತರ ರಾಮಜ್ಯೋತಿ ಪಾದುಕೆ ಮತ್ತು ಇಟ್ಟಿಗೆ ಯಾತ್ರೆ ನಂತರ ಬಾಬರಿ ಮಸೀದಿಯನ್ನು ಕೆಡವಲಾಯ್ತು. ಅಲ್ಲಿಗೆ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ಕೆಡವಿ ಕೋಮುಘರ್ಷಣೆಯನ್ನು ದೊಡ್ಡಮಟ್ಟದಲ್ಲಿ ಉದ್ಘಾಟಿಸಲಾಯ್ತು. ಅಂದಿನಿಂದ ನಿರಂತರವಾಗಿ ಮತೀಯ ಘರ್ಷಣೆ ನಡೆಸುತ್ತ, ಪ್ರಜಾತಂತ್ರ ಬಳಸಿಕೊಂಡು ಗೆದ್ದು ಬಂದು, ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಹೇಳಿದ ಸಂಸದನ ವಿರುದ್ಧ ಮೋದಿ ಮಾತನಾಡಲಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಹಾಳುಮಾಡಿ ನ್ಯಾಯಾಂಗ ವ್ಯವಸ್ಥೆಯನ್ನು ಶಿಥಿಲಗೊಳಿಸಿ ದೇಶಕ್ಕೆ ಗಂಡಾಂತರ ತಂದಿರುವಾಗ ಆ ಬಗ್ಗೆ ಮಾತನಾಡಿದ ರಾಹುಲಗಾಂಧಿಗೇ ಪ್ರಜಾತಂತ್ರದಿಂದ ತೊಂದರೆಯಾಗಿದೆ ಎನ್ನುವ ಮೋದಿಯವರು ಪ್ರಜಾತಂತ್ರದ ಬುಡಕ್ಕೆ ಕೊಡಲಿ ಏಟು ಕೊಡುತ್ತ ಬಂದಿರುವುದು ಅರಿವಿಗೇ ಬಂದಿಲ್ಲವಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...