Homeಅಂಕಣಗಳು'ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?'

‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’

- Advertisement -
- Advertisement -

ಆರೆಸ್ಸೆಸ್ ತತ್ವ ಅಳವಡಿಸಿಕೊಂಡರೆ ನಾವು ಕಾಂಗ್ರೆಸ್ ಪರವಾಗಿಯೂ ಕೆಲಸ ಮಾಡಲು ಸಿದ್ಧ ಎಂದು ಆರೆಸ್ಸೆಸ್ ಸಂಘದ ಅರುಣಕುಮಾರ ಹೇಳಿದ್ದಾರಲ್ಲಾ ಇದೊಂದು ರೀತಿ ಅಜ್ಞಾನದಿಂದ ಕೂಡಿರುವ ಮಾತು. ಕಾಂಗ್ರೆಸ್ ಹುಟ್ಟಿದಾಗಿನಿಂದಲೂ ಹಲವರು ಹಿಂದೂ ಪರವಾದ ಸಿದ್ಧಾಂತಗಳಲ್ಲೇ ಬದುಕಿದ್ದಾರೆ. ಆದರೆ ಜೈನ, ಬೌದ್ಧ, ಸಿಖ್ ಮತ್ತು ಬಸವ ತತ್ವಗಳೆಲ್ಲಾ ಹಿಂದೂಧರ್ಮದಿಂದಲೇ ಸಿಡಿದುಹೋಗಿ ಪ್ರಜ್ವಲಿಸುತ್ತಿರುವ ಧರ್ಮದ ಕಿಡಿಗಳು. ಇನ್ನೂ ಲೋಕಲ್ಲಾಗಿ ಮಾತನಾಡುವುದಾದರೆ ಕಾಂಗ್ರೆಸಿನಲ್ಲಿದ್ದು ತಮ್ಮವನೇನಾದರು ಬಿಜೆಪಿ ಕ್ಯಾಂಡಿಡೇಟ್ ಆದರೆ ಅವನಿಗೆ ಓಟು ಮಾಡುವ ಅಸಾಮಿಗಳೂ ಹೇರಳವಾಗಿದ್ದಾರೆ. ಈ ಪೈಕಿ ಎರಡು ಉದಾಹರಣೆ ಕೊಡುವುದಾದರೆ, ಚಿಕ್ಕಮಗಳೂರಲ್ಲಿ ಅನಾದಿಕಾಲದಿಂದಲೂ ಕಾಂಗ್ರೆಸ್ಸಿಗರಾಗಿರುವ ಒಕ್ಕಲಿಗರು ತಮ್ಮ ಹುಡುಗನನ್ನ ಕೈಬಿಡಲಾದೀತೆ ಎಂದು ಸಿ.ಟಿ.ರವಿಗೆ ಓಟು ಮಾಡುತ್ತಿರಲಾಗಿ, ಅತ್ತ ಶಿವಮೊಗ್ಗದ ಕಾಂಗ್ರೆಸ್ ಕುರುಬರು ಈಶ್ವರಪ್ಪ ನಮ್ಮವನೆಂದು ಓಟು ಮಾಡುವ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬಿಜೆಪಿ ವಿಷಯದಲ್ಲಿ ಈ ಆಟ ನಡೆಯುವುದಿಲ್ಲ. ಅಲ್ಲಿ ಹೆರಿಗೆ ಡಾಕ್ಟರ್ ಹೆರಿಗೆ ಪೇಷಂಟ್ ಕಾಯುವಂತೆ ಬಿಜೆಪಿ ಮತದಾರರನ್ನು ಕಾಯುವ ವಾಚ್‌ಮನ್‌ಗಳು ಹೇರಳವಾಗಿದ್ದಾರಂತಲ್ಲಾ, ಥೂತ್ತೇರಿ.

*****

ನಮ್ಮ ಸಂಸ್ಕೃತಿ ವಿಷಯ ಮಾತನಾಡುವುದಾದರೆ, ಸಾಮಾಜಿಕವಾಗಿ ಏನೇ ನಡೆದರೂ, ಅದು ಮಹಿಳೆ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಬಂದಿರುವುದು ಅನಾದಿಕಾಲದಿಂದ ನಡೆದುಬಂದಿದೆ. ಮುರುಘಾ ಶರಣರ ಆರೋಪಿತ ದುಷ್ಕೃತ್ಯದಲ್ಲಿ ಸಿಲುಕಿದ್ದವರೆಲ್ಲಾ ಮಕ್ಕಳು. ಇನ್ನು ಪ್ರವಾಹದಿಂದ ಸಂತ್ರಸ್ತರಾಗಿ ಶಾಸಕನಿಂದ ಅನಾಗರಿಕವಾದ ಅವಾಚ್ಯ ಬೈಗುಳ ಕೇಳಿದವರು ಮಹಿಳೆ. ಈ ಪ್ರಕರಣದ ವಿಷಯದಲ್ಲಿ ಮಾಧ್ಯಮದೊಳಗಿರುವ ಶ್ಯಾನುಭೋಗರ ಮಕ್ಕಳು ಕೃತ್ಯದ ವಿಶ್ಲೇಷಣೆ ಬಿಟ್ಟು, ಕಾಂಗ್ರೆಸ್ ಕೈಗೆ ಅನಾಯಾಸವಾಗಿ ಸಿಕ್ಕ ಅಸ್ತ್ರವಿದು ಎಂದುದಲ್ಲದೆ ಶಿಸ್ತಿನ ಪಕ್ಷ ಬಿಜೆಪಿ ಏನು ಮಾಡುತ್ತದೋ ಎಂದು ಕೂಗಿವೆಯಲ್ಲಾ. ಅಂತೂ ಲಿಂಬಾವಳಿ ನಡವಳಿಕೆಯಿಂದ ಅಘಾತವಾಗಿರುವುದು ಟಿವಿಯೊಳಗಿರುವ ಸಂಘಿ ಅಂಕರ್‌ಗಳಿಗೆ. ಶಿಸ್ತಿನ ಪಕ್ಷ ಬಿಜೆಪಿ ಎನ್ನುವುದನ್ನು ವಿಶ್ಲೇಷಿಸುವುವಾದರೆ ಲಿಂಬಾವಳಿಯ ಅನಾಗರಿಕ ನಡತೆಯ ವಿಷಯದಲ್ಲಿ ಯಾವೊಬ್ಬ ಬಿಜೆಪಿಯೂ ಪ್ರತಿಕ್ರಿಯಿಸಿಲ್ಲ. ಇನ್ನು ಬಿಜೆಪಿ ಮಹಿಳೆಯರಂತೂ ಆಕೆಗೆ ತಕ್ಕಶಾಸ್ತಿಯಾಯ್ತು ಎನ್ನುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ಇತಿಹಾಸದಲ್ಲಿ ಈವರೆಗೆ ಯಾವೊಬ್ಬ ಶಾಸಕನೂ ಇಷ್ಟು ಅನಾಗರಿಕವಾಗಿ ನಡೆದುಕೊಂಡಿರದ ಕಾರಣವಾಗಿ, ಪ್ರಕರಣದ ಪ್ರಮುಖ ಆರೋಪಿ ಲಿಂಬಾವಳಿಯನ್ನ ಮಾತನಾಡಿಸಬೇಕೆನಿಸಿತಲ್ಲಾ. ಆ ಕೂಡಲೇ ಪೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ”.

“ಹಲೋ ಯಾರ್ರಿ”

“ಸಾರ್ ನಾನು ಯಾಹು ಅಂತ, ಸಾರ್”

“ಯಾಹು ಅಂದರೆ ಯಾರ್ರಿ”

“ಪತ್ರಕರ್ತ ಸಾರ್”

“ಏನೇಳ್ರಿ”

“ನಿಮಗೆ ಧಮಕಿ ಹಾಕಿದ ಮಹಿಳೆ ಮೇಲೆ ಎಫ್‌ಐಆರ್ ಆಯ್ತಂತಲ್ಲಾ ಸಾರ್”

“ಎಫ್‌ಐಆರ್‌ಗಿಂತ ಮೊದ್ಲು ನಾಲ್ಕು ವದಿರಿ ಅವುಳಿಗೆ ಅಂತ ಹೇಳಿದ್ದೆ ನಮ್ಮ ಪೊಲೀಸರಿಗೆ”

“ಯಾಕ್ ಸಾರ್”

“ಮತ್ತೆ ಅವಳ ದುರಹಂಕಾರ ನೋಡ್ರಿ, ರಾಜಕಾಲುವೆ ಒತ್ತುವರಿ ಮಾಡಿದ್ಲು, ಅಲ್ದೆ ನನಿಗೇ ಆವಾಜ್ ಹಾಕ್ತಳೆ”

“ತಪ್ಪು ಸಾರ್ ಜನಪ್ರತಿನಿಧಿಗೆ ಆವಾಜ್ ಹಾಕಬಾರ್ದು”

“ಅದಕ್ಕೆ ಎಫ್‌ಐಆರ್ ಹಾಕಿಸಿದ್ದೀನಿ”

“ವಳೆದಾಯ್ತು ಬುಡಿ ಸಾರ್. ಇನ್ನ ಮುಂದೆ ಯಾರೂ ನಿಮ್ಮತ್ರ ಅರ್ಜಿ ಹಿಡಕೊಂಡು ಬರಲ್ಲ”

“ಜನಕ್ಕೆ ಸದರ ಕೊಡಬಾರ್ದು ಕಂಡ್ರಿ. ಶಾಸಕರು ಅಂದ್ರೆ ಭಯ ಇರಬೇಕು. ಇಲ್ಲ ಅಂದ್ರೆ ಯಲ್ಲಾದಕ್ಕೂ ಅರ್ಜಿ ತಗೊಂಡು ಬರ್ತಾರೆ”

“ಮಹಿಳಾ ಹೋರಾಟಗಾರ್ರು ಆ ಹೆಣ್ಣು ಮಗಳ ಪರ ಪ್ರತಿಭಟನೆ ಮಾಡ್ತೆ ಅವುರೆ.”

“ಮಾಡ್ಲಿ ಬುಡ್ರಿ. ಈ ಮಹಿಳೆಯರು ಆಕೆ ಪರ ಬರ್ತಾರೆ ಅಂದ್ರೆ ಇವುರು ಅವುಳ ತರದೋರೆಯಾ”

“ಅಲ್ಲ ಸಾರ್, ನಿಮ್ಮಲ್ಲಿ ಮಹಿಳೆಯರ ಬಗ್ಗೆ ಇರೋ ಗೌರವ ನೋಡಿದ್ರೆ, ನಿಮ್ಮ ಮಾತಿನ ಪರಿಣಾಮನೆ ನಿಮಗೆ ಗೊತ್ತಿಲ್ಲ ಅನ್ಸುತ್ತೆ”

“ಏನೇಳ್ತಾಯಿದ್ದಿರಿ ನೀವು”

“ಅವತ್ತಿನಿಂದ ಇವತ್ತಿನವರೆಗೂ ಶಿಸ್ತಿನ ಪಕ್ಷವಾದ ನಿಮ್ಮಲ್ಲಿ ಶೀಲವಂತನೇ ಕಾಣಲಿಲ್ಲ. ವಿಕೃತ ಮನಸ್ಸಿನವರೇ ಜಾಸ್ತಿ ಬಿಡಿ ಸಾರ್”

ಥೂತ್ತೇರಿ.


ಇದನ್ನೂ ಓದಿ: ಬೊಮ್ಮಾಯಿಯಿಂದ ಲಿಂಗಾಯಿತರಿಗೇ ಅವಮಾನವಾಯ್ತಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...