Homeಕರ್ನಾಟಕಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

- Advertisement -
- Advertisement -

ಕರ್ನಾಟಕದ ಹಳ್ಳಿಗಳ ಗೋಡೆಗಳ ಮೇಲೆ ಬಿಜೆಪಿಯೇ ಭರವಸೆ ಎಂಬ ವರ್ಣರಂಜಿತ ಬೋರ್ಡ್‌ಗಳು ರಾರಾಜಿಸುತ್ತಿವೆಯಲ್ಲಾ. ಎಂದಿನಂತೆ ಹಳ್ಳಿಗರು ನಿಂತು ನೋಡಿ ಓದಲು ಯತ್ನಿಸುತ್ತ ಭರವಸೆ ಎಂದರೆ ಏನು, ಅದರಲ್ಲೂ ಬಿಜೆಪಿ ಭರವಸೆ ಯಾವುದು ಎಂಬ ಚರ್ಚೆ ಆರಂಭಿಸಿದ್ದಾರೆ. ಏಕೆಂದರೆ ಭರವಸೆ ಎಂಬುದು ಕೇವಲ ಭರವಸೆ ಎಂಬಂತಾಗಿದೆ, ಅದು ನಿಜವಾದ ಮಾತಲ್ಲ. ಅದು ಸದ್ಯದಲ್ಲಿ ತಮ್ಮ ತೆವಲು ತೀರಿಸಿಕೊಳ್ಳಲು ಕೊಡುವ ಹೇಳಿಕೆ ಎಂಬುದು ಹಳ್ಳಿಗರಿಗೆ ಎಂದೋ ಅರ್ಥವಾದ ಸುಳ್ಳು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಿಜೆಪಿ ಎಂಬುದು ಭರವಸೆ ಪಾರ್ಟಿ. ಭರವಸೆ ಎಂಬುದು ಸುಲಭವಾದ ಸುಳ್ಳು. ಏನು ಭರವಸೆ, ಯಾವ ಭರವಸೆ, ಅದು ಈಡೇರಲು ಹಾಕಿಕೊಂಡ ಕಾರ್ಯತಂತ್ರವೇನು ಎಂಬ ಯಾವ ವಿವರವೂ ಇಲ್ಲದ ಪುರೋಹಿತ ಮಂತ್ರವಿದ್ದಂತೆ ಅದು ಎಂಬುದು ಹಳ್ಳಿಗರಿಗೆ ಈಗಾಗಲೇ ಮನದಟ್ಟಾದ ಸಂಗತಿಯಾದ್ದರಿಂದ ಮೋದಿ ಪಾರ್ಟಿ ಹಳ್ಳಿಗಳ ಗೋಡೆಯ ಮೇಲೆ ಬರೆದಿರುವ ಭರವಸೆಯ ಬೋರ್ಡನ್ನು ’ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ’ ಎಂಬ ತೀರ್ಮಾನಕ್ಕೆ ಹಳ್ಳಿಗರು ಬಂದಾಗಿದೆಯಂತಲ್ಲಾ. ಹಳ್ಳಿ ರೈತ ಕೊಡುವ ಒಂದು ಉದಾಹರಣೆ ನೋಡಿದರೆ ಸಾಕು; ಬಸವರಾಜ ಬೊಮ್ಮಾಯಿ ಮಂಡಿಸಿದ ಅದ್ಭುತ ಬಜೆಟ್ಟಿನಲ್ಲಿ ರೈತರಿಗೆ ಐದು ಲಕ್ಷ ಬಡ್ಡಿರಹಿತ ಸಾಲ ಎಂಬ ಭರವಸೆ ಕೊಡಲಾಗಿದೆ. ಐದು ಲಕ್ಷ ಪಡೆಯಬೇಕಾದರೆ ಆತನ ಬಳಿಯಿರುವ ಭೂಮಿ ಇಡಬೇಕು, ಅದರ ಮೇಲೆ ಸುರಿಯುವ ಐದು ಲಕ್ಷ; ಇವೆಲ್ಲವನ್ನು ತರ್ಕಿಸಿದರೆ ಸದರಿ ಸಾಲ ಸುಳ್ಳು ಭರವಸೆಯಾಗಿ ಉಳಿಯಲಿದೆ. ಕರ್ನಾಟಕದ ಯಾವ ರೈತನೂ ಈ ಐದು ಲಕ್ಷದ ಸಹವಾಸಕ್ಕೆ ಹೋಗುವುದಿಲ್ಲವಂತಲ್ಲಾ, ಥೂತ್ತೇರಿ.
*****

ಮಾಧುಸ್ವಾಮಿ ಗೊಣಗಾಟದ ಪ್ರಕಾರ ಈ ಸರಕಾರದ ಅವಧಿ ಮುಗಿಯುವವರೆಗೆ ಹೇಗೋ ದ್ರವಾಹಾರ ನೀಡುತ್ತ ಮುಂದೂಡಿಕೊಂಡು ಹೋಗುತ್ತಾರಂತಲ್ಲಾ. ಎಂಬ ಗೊಣಗಾಟಕ್ಕೆ ಪೂರಕವಾಗಿ ಬೊಮ್ಮಾಯಿಯ ಬಜೆಟ್ಟು ಮಂಡನೆಯಾಗಿದೆಯಲ್ಲಾ. ಇದರಲ್ಲಿ ಪ್ರಧಾನವಾಗಿ ಕಂಡುಬರುವ ಅಂಶ ಯಾವುದೆಂದರೆ ಬೊಮ್ಮಾಯಿ ಬದುಕಿನ ಆದರ್ಶ ಪುರುಷನಾದ ಎಡೂರಪ್ಪ ಮಠಗಳಿಗೆ ಕೊಟ್ಟ ದಾನ-ಅನುದಾನವನ್ನು ಸಾವಿರ ಕೋಟಿ ಏರಿಸಿರುವುದು; ಸಾವಿರಾರು ಮಠಗಳಿರುವಾಗ ಸಾವಿರ ಕೋಟಿ ಅನುದಾನ ಹೆಚ್ಚಿನದೇನಲ್ಲ. ಮಠದ ಜೋಳಿಗೆಗಳು ಎಷ್ಟು ಕೊಟ್ಟರೂ ಇನ್ನೂ ಅಗಲವಾಗಿ ಬಾಯಿ ತೆರೆಯುವಂತಿವೆ. ವಿಷಯ ಅದಲ್ಲ ಪ್ರಜಾಪ್ರಭುತ್ವದ ಸರಕಾರವೊಂದು ಸಾಮಾನ್ಯವಾಗಿ ತಮಗೆ ಸಂಬಂಧಪಡದ ಮಠಗಳಿಗೆ ಸಾಮಾನ್ಯನ ಬೆವರಿನ ಹಣವನ್ನು ಕೋಟಿಗಟ್ಟಲೆ ಕೊಡುವುದು ಎಷ್ಟು ಸರಿ ಎಂಬುದು. ಬಜೆಟ್ ಮಂಡನೆಯ ಸಮಯದಲ್ಲಿ ಮಠಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ ಅಂದರೆ ನಮ್ಮ ನಡುವಿನ ಮಠಗಳು ಮಠಗಳಾಗಿ ಉಳಿದಿಲ್ಲ; ಅವು ತಮ್ಮ ಆಚಾರ ವಿಚಾರ ವರ್ತನೆಯಿಂದಲೇ ರಾಜಕೀಯದ ಪಾರ್ಟಿಗಳಿಗೆ ಓಟು ಕೇಳುವ ಬೂತುಗಳಂತಾಗಿ ಕುಳಿತಿವೆ. ಇದನ್ನು ಗ್ರಹಿಸಿದ ಬೊಮ್ಮಾಯಿ ಯಾರದೊ ದುಡ್ಡನ್ನು ಎಲ್ಲಮ್ಮನ ಜಾತ್ರೆಯಲ್ಲಿ ಎರಚಿದಂತೆ ಮಠಗಳಿಗೆ ಸುರಿದಿದ್ದಾರೆ. ಈ ಹಣ ಮಠ ತಲುಪುವ ವೇಳೆಗೆ ಹಲವು ಮಠಾಧೀಶರು ಹೇಗೆ ಖರ್ಚು ಮಾಡಬೇಕೆಂಬ ನೀಲನಕ್ಷೆ ತಯಾರಿಸುತ್ತಿದ್ದಾರಂತಲ್ಲಾ. ಅದರಲ್ಲಿ ಹೊಸ ಕಾರು, ಶಯನಾಗೃಹದ ನವೀಕರಣ ಮತ್ತು ಫಾರಿನ್ ಟೂರ್ ಕೂಡ ಸೇರಲಿವೆಯಂತಲ್ಲಾ, ಥೂತ್ತೇರಿ.
*****

ಬಿಜೆಪಿ ಪಾರ್ಟಿಯ ಮೆಂಟಲ್‌ಕೇಸ್ ವಿಭಾಗದಿಂದ ತಪ್ಪಿಸಿಕೊಂಡಂತೆ ಕಾಣುವ ಮುತಾಲಿಕ್ ಎಂಬಾತ ಹಿಂದಿಗಿಂತಲೂ ಮುಸ್ಲಿಮರನ್ನು ಟೀಕಿಸಲು ನಾಲಿಗೆಯನ್ನು ಹರಿತ ಮಾಡಿಕೊಳ್ಳುತ್ತಿದ್ದಾರಲ್ಲಾ. ಈತನ ಮುಸ್ಲಿಂ ಹೆಣ್ಣುಮಕ್ಕಳ ಬಗೆಗಿನ ದ್ವೇಷದ ಮಾತಿಗೆ ಆ ಕಡೆಯಿಂದ ಯಾವ ಪ್ರತ್ಯುತ್ತರವೂ ಬಂದಿಲ್ಲ. ಇದನ್ನ ಅವಮಾನವೆಂದು ಪರಿಗಣಿಸಿದ ಮುತಾಲಿಕ್ ತನ್ನ ಮತೀಯ ಕಿಚ್ಚಿನ ಹೇಳಿಕೆಗಳನ್ನ ಮುಂದುವರಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ಸೇರಿ ಶಾಸಕನಾಗಿ ಸದನದಲ್ಲಿ ತನ್ನ ಅಮೋಘವಾದ ಭಾಷಣ ಕಟ್ಟುವ ಕನಸು ಕಂಡಿದ್ದ ಮುತಾಲಿಕರನ್ನು ಹಿಂದೊಮ್ಮೆ ಬಿಜೆಪಿ ಪಾರ್ಟಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅಲ್ಲಾಗಲೇ ಪ್ರವರ್ಧಮಾನಕ್ಕೆ ಬಂದಿದ್ದ ಸಿ.ಟಿ ರವಿ, ರೇಣುಕಾಚಾರಿ, ಅಶ್ವತ್ಥನಾರಾಯಣ, ಯತ್ನಾಳ್ ಇಂತಹ ನಾಯಕರ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆಂದು ಬಿಜೆಪಿ ತೀರ್ಮಾನ ತೆಗೆದುಕೊಂಡು ಸೂರ್ಯಾಸ್ತಮಾನಕ್ಕೂ ಮುನ್ನ ಮುತಾಲಿಕರನ್ನು ಪಾರ್ಟಿಯಿಂದ ತೆಗೆದು ಬಿಸಾಡಲಾಯ್ತು. ಇದು ಬಿಜೆಪಿಯ ಒಂದು ದೊಡ್ಡ ದಾಖಲೆಯಾಗಿದೆ. ಏಕೆಂದರೆ ಪಾರ್ಟಿಗೆ ಸೇರಿಸಿಕೊಂಡ ನಾಲ್ಕುಗಂಟೆ ಅವಧಿಯಲ್ಲೇ ಯಾರನ್ನಾದರೂ ಮೂಲೆಗೆಸೆದದ್ದು ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಆದರೇನು? ಮುತಾಲಿಕರ ಮನಸ್ಸು ಅಘಾತಗೊಂಡ ಕಾರಣವಾಗಿ, ಹೆಚ್ಚು ಮುಸ್ಲಿಮರನ್ನ ಬೈದಷ್ಟೂ ತನ್ನ ಬದುಕಿನ ಏಕೈಕ ಧ್ಯೇಯವಾದ ಶಾಸಕತ್ವ ದಕ್ಕುವುದೆಂದು ಭಾವಿಸಿರುವ ಆತ ಮತಿಗೆಟ್ಟಂತೆ ಮಾತನಾಡುತ್ತಿರುವುದು ಸದ್ಯದ ಮನರಂಜನೆಯಾಗಿದೆಯಂತಲ್ಲಾ, ಥೂತ್ತೇರಿ.
*****

ಇದನ್ನೂ ಓದಿ: ಹಠಾತ್ ಜನಸಂಖ್ಯೆ ಏರಲು ಕಾರಣವೇನು? – ಯಾಹೂ

ಇತ್ತ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಶಾನೆ ತಮಾಶೆಯಿಂದ ಕೂಡಿವೆಯಂತಲ್ಲಾ. ಈ ಮಹೇಶ ಜೋಶಿ ಎಂಬ ಸಾಹಿತ್ಯ ಪರಿಷತ್ ವಿದೂಶಕನ ವಿಷಯ ಬಂದಾಗಲೆಲ್ಲಾ ಪತ್ರಕರ್ತರು ನಾಡೋಜ ಮಹೇಶ ಜೋಷಿ ಎಂದು ಬರೆಯತೊಡಗಿವೆ. ಇದು ಈತನ ಬೇಡಿಕೆಯೋ ಅಥವ ಮಾರಿಕೊಂಡ ಪತ್ರಕರ್ತರ ಚೇಷ್ಟೆಯೋ ಎಂಬುದು ನಿಗೂಢವಾಗಿದೆ. ಇದು ಹಾಳುಬಿದ್ದು ಹೋಗಲಿ, ಸಾಹಿತ್ಯ ಪರಿಷತ್‌ನ ದತ್ತಿನಿಧಿ ಪ್ರಶಸ್ತಿಗಾಗಿ ಜೋಶಿ ಮುಂದಾಳತ್ವದ ತಂಡ 53 ಕೃತಿಗಳನ್ನ ಆರಿಸಿದೆ. ಈ ಅದ್ಭುತ ಕೃತಿಗಳ ಪ್ರಶಸ್ತಿ 250ರೂಗಳಿಂದ ಹಿಡಿದು ಹತ್ತು ಸಾವಿರದವರೆಗೂ ಇದೆಯಂತೆ. 250ರೂ ಪಡೆಯಲು ಯಾವ ಅಳುಕೂ ಇಲ್ಲವಾಗಿ, ಸದರಿ ಕೃತಿಕಾರರು 250ರೂ ತೆಗೆದುಕೊಂಡು ಅನತಿ ದೂರದಲ್ಲಿರುವ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ ತಿಂದು ಮನೆಗೆ ಬರುವ ತೀರ್ಮಾನ ತೆಗೆದುಕೊಂಡಿದ್ದಲ್ಲದೆ ಈ ಮಹೇಶ್ ಜೋಶಿ ಸಾಹಿತ್ಯಾಭಿರುಚಿಗೆ ಅಚ್ಚರಿಕೊಂಡಿದ್ದಾರಂತೆ. ಸಾಹಿತ್ಯಕ್ಕೂ ಇವರಿಗೂ ದೂರದ ಸಂಬಂಧ ಎಂಬುದು ಈತ ಸಾಹಿತ್ಯ ಪರಿಷತ್ ಪರಿಚಾರಕ ಹುದ್ದೆಗೆ ಮಂತ್ರಿ ಮಹೋದಯರ ಸವಲತ್ತು ಬೇಕೆಂದು ರಚ್ಚೆ ಹಿಡಿದಾಗಲೇ ತಿಳಿದಿತ್ತು. ಈಗ ಈತ ದತ್ತಿನಿಧಿ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಿದ ಕೃತಿಗಳಲ್ಲಿ ಇಡ್ಲಿ ಸಾಂಬರ್ ಮತ್ತು ವಡೆ ಪ್ರಸ್ತಾಪ ಐದು ಪುಟಕೋಮ್ಮೆ ದಾಖಲಾಗಿದೆ; ಈ ಕೃತಿಯನ್ನ ಜೋಶಿ ತಂಡ ಜೊಲ್ಲು ಸುರಿಸುತ್ತಲೇ ಆಯ್ಕೆ ಮಾಡಿದೆಯಂತಲ್ಲಾ. ಅಂತಹ ವಿವರಗಳನ್ನುಳ್ಳ ಪುಸ್ತಕವನ್ನ ಪ್ರಶಸ್ತಿಗೆ ಆಯ್ಕೆ ಮಾಡುವುದರಲ್ಲಿ ಯಾವ ಅಚ್ಚರಿಯೂ ಇಲ್ಲವಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...