Homeಕರ್ನಾಟಕಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ!

- Advertisement -
- Advertisement -

ಕರ್ನಾಟಕದ ಹಳ್ಳಿಗಳ ಗೋಡೆಗಳ ಮೇಲೆ ಬಿಜೆಪಿಯೇ ಭರವಸೆ ಎಂಬ ವರ್ಣರಂಜಿತ ಬೋರ್ಡ್‌ಗಳು ರಾರಾಜಿಸುತ್ತಿವೆಯಲ್ಲಾ. ಎಂದಿನಂತೆ ಹಳ್ಳಿಗರು ನಿಂತು ನೋಡಿ ಓದಲು ಯತ್ನಿಸುತ್ತ ಭರವಸೆ ಎಂದರೆ ಏನು, ಅದರಲ್ಲೂ ಬಿಜೆಪಿ ಭರವಸೆ ಯಾವುದು ಎಂಬ ಚರ್ಚೆ ಆರಂಭಿಸಿದ್ದಾರೆ. ಏಕೆಂದರೆ ಭರವಸೆ ಎಂಬುದು ಕೇವಲ ಭರವಸೆ ಎಂಬಂತಾಗಿದೆ, ಅದು ನಿಜವಾದ ಮಾತಲ್ಲ. ಅದು ಸದ್ಯದಲ್ಲಿ ತಮ್ಮ ತೆವಲು ತೀರಿಸಿಕೊಳ್ಳಲು ಕೊಡುವ ಹೇಳಿಕೆ ಎಂಬುದು ಹಳ್ಳಿಗರಿಗೆ ಎಂದೋ ಅರ್ಥವಾದ ಸುಳ್ಳು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಿಜೆಪಿ ಎಂಬುದು ಭರವಸೆ ಪಾರ್ಟಿ. ಭರವಸೆ ಎಂಬುದು ಸುಲಭವಾದ ಸುಳ್ಳು. ಏನು ಭರವಸೆ, ಯಾವ ಭರವಸೆ, ಅದು ಈಡೇರಲು ಹಾಕಿಕೊಂಡ ಕಾರ್ಯತಂತ್ರವೇನು ಎಂಬ ಯಾವ ವಿವರವೂ ಇಲ್ಲದ ಪುರೋಹಿತ ಮಂತ್ರವಿದ್ದಂತೆ ಅದು ಎಂಬುದು ಹಳ್ಳಿಗರಿಗೆ ಈಗಾಗಲೇ ಮನದಟ್ಟಾದ ಸಂಗತಿಯಾದ್ದರಿಂದ ಮೋದಿ ಪಾರ್ಟಿ ಹಳ್ಳಿಗಳ ಗೋಡೆಯ ಮೇಲೆ ಬರೆದಿರುವ ಭರವಸೆಯ ಬೋರ್ಡನ್ನು ’ಅಡಾಸು ಕಂಪನಿಗೆ ಅಡವಿಟೇಜು ಜಾಸ್ತಿಯಂತೆ’ ಎಂಬ ತೀರ್ಮಾನಕ್ಕೆ ಹಳ್ಳಿಗರು ಬಂದಾಗಿದೆಯಂತಲ್ಲಾ. ಹಳ್ಳಿ ರೈತ ಕೊಡುವ ಒಂದು ಉದಾಹರಣೆ ನೋಡಿದರೆ ಸಾಕು; ಬಸವರಾಜ ಬೊಮ್ಮಾಯಿ ಮಂಡಿಸಿದ ಅದ್ಭುತ ಬಜೆಟ್ಟಿನಲ್ಲಿ ರೈತರಿಗೆ ಐದು ಲಕ್ಷ ಬಡ್ಡಿರಹಿತ ಸಾಲ ಎಂಬ ಭರವಸೆ ಕೊಡಲಾಗಿದೆ. ಐದು ಲಕ್ಷ ಪಡೆಯಬೇಕಾದರೆ ಆತನ ಬಳಿಯಿರುವ ಭೂಮಿ ಇಡಬೇಕು, ಅದರ ಮೇಲೆ ಸುರಿಯುವ ಐದು ಲಕ್ಷ; ಇವೆಲ್ಲವನ್ನು ತರ್ಕಿಸಿದರೆ ಸದರಿ ಸಾಲ ಸುಳ್ಳು ಭರವಸೆಯಾಗಿ ಉಳಿಯಲಿದೆ. ಕರ್ನಾಟಕದ ಯಾವ ರೈತನೂ ಈ ಐದು ಲಕ್ಷದ ಸಹವಾಸಕ್ಕೆ ಹೋಗುವುದಿಲ್ಲವಂತಲ್ಲಾ, ಥೂತ್ತೇರಿ.
*****

ಮಾಧುಸ್ವಾಮಿ ಗೊಣಗಾಟದ ಪ್ರಕಾರ ಈ ಸರಕಾರದ ಅವಧಿ ಮುಗಿಯುವವರೆಗೆ ಹೇಗೋ ದ್ರವಾಹಾರ ನೀಡುತ್ತ ಮುಂದೂಡಿಕೊಂಡು ಹೋಗುತ್ತಾರಂತಲ್ಲಾ. ಎಂಬ ಗೊಣಗಾಟಕ್ಕೆ ಪೂರಕವಾಗಿ ಬೊಮ್ಮಾಯಿಯ ಬಜೆಟ್ಟು ಮಂಡನೆಯಾಗಿದೆಯಲ್ಲಾ. ಇದರಲ್ಲಿ ಪ್ರಧಾನವಾಗಿ ಕಂಡುಬರುವ ಅಂಶ ಯಾವುದೆಂದರೆ ಬೊಮ್ಮಾಯಿ ಬದುಕಿನ ಆದರ್ಶ ಪುರುಷನಾದ ಎಡೂರಪ್ಪ ಮಠಗಳಿಗೆ ಕೊಟ್ಟ ದಾನ-ಅನುದಾನವನ್ನು ಸಾವಿರ ಕೋಟಿ ಏರಿಸಿರುವುದು; ಸಾವಿರಾರು ಮಠಗಳಿರುವಾಗ ಸಾವಿರ ಕೋಟಿ ಅನುದಾನ ಹೆಚ್ಚಿನದೇನಲ್ಲ. ಮಠದ ಜೋಳಿಗೆಗಳು ಎಷ್ಟು ಕೊಟ್ಟರೂ ಇನ್ನೂ ಅಗಲವಾಗಿ ಬಾಯಿ ತೆರೆಯುವಂತಿವೆ. ವಿಷಯ ಅದಲ್ಲ ಪ್ರಜಾಪ್ರಭುತ್ವದ ಸರಕಾರವೊಂದು ಸಾಮಾನ್ಯವಾಗಿ ತಮಗೆ ಸಂಬಂಧಪಡದ ಮಠಗಳಿಗೆ ಸಾಮಾನ್ಯನ ಬೆವರಿನ ಹಣವನ್ನು ಕೋಟಿಗಟ್ಟಲೆ ಕೊಡುವುದು ಎಷ್ಟು ಸರಿ ಎಂಬುದು. ಬಜೆಟ್ ಮಂಡನೆಯ ಸಮಯದಲ್ಲಿ ಮಠಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ ಅಂದರೆ ನಮ್ಮ ನಡುವಿನ ಮಠಗಳು ಮಠಗಳಾಗಿ ಉಳಿದಿಲ್ಲ; ಅವು ತಮ್ಮ ಆಚಾರ ವಿಚಾರ ವರ್ತನೆಯಿಂದಲೇ ರಾಜಕೀಯದ ಪಾರ್ಟಿಗಳಿಗೆ ಓಟು ಕೇಳುವ ಬೂತುಗಳಂತಾಗಿ ಕುಳಿತಿವೆ. ಇದನ್ನು ಗ್ರಹಿಸಿದ ಬೊಮ್ಮಾಯಿ ಯಾರದೊ ದುಡ್ಡನ್ನು ಎಲ್ಲಮ್ಮನ ಜಾತ್ರೆಯಲ್ಲಿ ಎರಚಿದಂತೆ ಮಠಗಳಿಗೆ ಸುರಿದಿದ್ದಾರೆ. ಈ ಹಣ ಮಠ ತಲುಪುವ ವೇಳೆಗೆ ಹಲವು ಮಠಾಧೀಶರು ಹೇಗೆ ಖರ್ಚು ಮಾಡಬೇಕೆಂಬ ನೀಲನಕ್ಷೆ ತಯಾರಿಸುತ್ತಿದ್ದಾರಂತಲ್ಲಾ. ಅದರಲ್ಲಿ ಹೊಸ ಕಾರು, ಶಯನಾಗೃಹದ ನವೀಕರಣ ಮತ್ತು ಫಾರಿನ್ ಟೂರ್ ಕೂಡ ಸೇರಲಿವೆಯಂತಲ್ಲಾ, ಥೂತ್ತೇರಿ.
*****

ಬಿಜೆಪಿ ಪಾರ್ಟಿಯ ಮೆಂಟಲ್‌ಕೇಸ್ ವಿಭಾಗದಿಂದ ತಪ್ಪಿಸಿಕೊಂಡಂತೆ ಕಾಣುವ ಮುತಾಲಿಕ್ ಎಂಬಾತ ಹಿಂದಿಗಿಂತಲೂ ಮುಸ್ಲಿಮರನ್ನು ಟೀಕಿಸಲು ನಾಲಿಗೆಯನ್ನು ಹರಿತ ಮಾಡಿಕೊಳ್ಳುತ್ತಿದ್ದಾರಲ್ಲಾ. ಈತನ ಮುಸ್ಲಿಂ ಹೆಣ್ಣುಮಕ್ಕಳ ಬಗೆಗಿನ ದ್ವೇಷದ ಮಾತಿಗೆ ಆ ಕಡೆಯಿಂದ ಯಾವ ಪ್ರತ್ಯುತ್ತರವೂ ಬಂದಿಲ್ಲ. ಇದನ್ನ ಅವಮಾನವೆಂದು ಪರಿಗಣಿಸಿದ ಮುತಾಲಿಕ್ ತನ್ನ ಮತೀಯ ಕಿಚ್ಚಿನ ಹೇಳಿಕೆಗಳನ್ನ ಮುಂದುವರಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ಸೇರಿ ಶಾಸಕನಾಗಿ ಸದನದಲ್ಲಿ ತನ್ನ ಅಮೋಘವಾದ ಭಾಷಣ ಕಟ್ಟುವ ಕನಸು ಕಂಡಿದ್ದ ಮುತಾಲಿಕರನ್ನು ಹಿಂದೊಮ್ಮೆ ಬಿಜೆಪಿ ಪಾರ್ಟಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅಲ್ಲಾಗಲೇ ಪ್ರವರ್ಧಮಾನಕ್ಕೆ ಬಂದಿದ್ದ ಸಿ.ಟಿ ರವಿ, ರೇಣುಕಾಚಾರಿ, ಅಶ್ವತ್ಥನಾರಾಯಣ, ಯತ್ನಾಳ್ ಇಂತಹ ನಾಯಕರ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆಂದು ಬಿಜೆಪಿ ತೀರ್ಮಾನ ತೆಗೆದುಕೊಂಡು ಸೂರ್ಯಾಸ್ತಮಾನಕ್ಕೂ ಮುನ್ನ ಮುತಾಲಿಕರನ್ನು ಪಾರ್ಟಿಯಿಂದ ತೆಗೆದು ಬಿಸಾಡಲಾಯ್ತು. ಇದು ಬಿಜೆಪಿಯ ಒಂದು ದೊಡ್ಡ ದಾಖಲೆಯಾಗಿದೆ. ಏಕೆಂದರೆ ಪಾರ್ಟಿಗೆ ಸೇರಿಸಿಕೊಂಡ ನಾಲ್ಕುಗಂಟೆ ಅವಧಿಯಲ್ಲೇ ಯಾರನ್ನಾದರೂ ಮೂಲೆಗೆಸೆದದ್ದು ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಆದರೇನು? ಮುತಾಲಿಕರ ಮನಸ್ಸು ಅಘಾತಗೊಂಡ ಕಾರಣವಾಗಿ, ಹೆಚ್ಚು ಮುಸ್ಲಿಮರನ್ನ ಬೈದಷ್ಟೂ ತನ್ನ ಬದುಕಿನ ಏಕೈಕ ಧ್ಯೇಯವಾದ ಶಾಸಕತ್ವ ದಕ್ಕುವುದೆಂದು ಭಾವಿಸಿರುವ ಆತ ಮತಿಗೆಟ್ಟಂತೆ ಮಾತನಾಡುತ್ತಿರುವುದು ಸದ್ಯದ ಮನರಂಜನೆಯಾಗಿದೆಯಂತಲ್ಲಾ, ಥೂತ್ತೇರಿ.
*****

ಇದನ್ನೂ ಓದಿ: ಹಠಾತ್ ಜನಸಂಖ್ಯೆ ಏರಲು ಕಾರಣವೇನು? – ಯಾಹೂ

ಇತ್ತ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳು ಶಾನೆ ತಮಾಶೆಯಿಂದ ಕೂಡಿವೆಯಂತಲ್ಲಾ. ಈ ಮಹೇಶ ಜೋಶಿ ಎಂಬ ಸಾಹಿತ್ಯ ಪರಿಷತ್ ವಿದೂಶಕನ ವಿಷಯ ಬಂದಾಗಲೆಲ್ಲಾ ಪತ್ರಕರ್ತರು ನಾಡೋಜ ಮಹೇಶ ಜೋಷಿ ಎಂದು ಬರೆಯತೊಡಗಿವೆ. ಇದು ಈತನ ಬೇಡಿಕೆಯೋ ಅಥವ ಮಾರಿಕೊಂಡ ಪತ್ರಕರ್ತರ ಚೇಷ್ಟೆಯೋ ಎಂಬುದು ನಿಗೂಢವಾಗಿದೆ. ಇದು ಹಾಳುಬಿದ್ದು ಹೋಗಲಿ, ಸಾಹಿತ್ಯ ಪರಿಷತ್‌ನ ದತ್ತಿನಿಧಿ ಪ್ರಶಸ್ತಿಗಾಗಿ ಜೋಶಿ ಮುಂದಾಳತ್ವದ ತಂಡ 53 ಕೃತಿಗಳನ್ನ ಆರಿಸಿದೆ. ಈ ಅದ್ಭುತ ಕೃತಿಗಳ ಪ್ರಶಸ್ತಿ 250ರೂಗಳಿಂದ ಹಿಡಿದು ಹತ್ತು ಸಾವಿರದವರೆಗೂ ಇದೆಯಂತೆ. 250ರೂ ಪಡೆಯಲು ಯಾವ ಅಳುಕೂ ಇಲ್ಲವಾಗಿ, ಸದರಿ ಕೃತಿಕಾರರು 250ರೂ ತೆಗೆದುಕೊಂಡು ಅನತಿ ದೂರದಲ್ಲಿರುವ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ ತಿಂದು ಮನೆಗೆ ಬರುವ ತೀರ್ಮಾನ ತೆಗೆದುಕೊಂಡಿದ್ದಲ್ಲದೆ ಈ ಮಹೇಶ್ ಜೋಶಿ ಸಾಹಿತ್ಯಾಭಿರುಚಿಗೆ ಅಚ್ಚರಿಕೊಂಡಿದ್ದಾರಂತೆ. ಸಾಹಿತ್ಯಕ್ಕೂ ಇವರಿಗೂ ದೂರದ ಸಂಬಂಧ ಎಂಬುದು ಈತ ಸಾಹಿತ್ಯ ಪರಿಷತ್ ಪರಿಚಾರಕ ಹುದ್ದೆಗೆ ಮಂತ್ರಿ ಮಹೋದಯರ ಸವಲತ್ತು ಬೇಕೆಂದು ರಚ್ಚೆ ಹಿಡಿದಾಗಲೇ ತಿಳಿದಿತ್ತು. ಈಗ ಈತ ದತ್ತಿನಿಧಿ ಪ್ರಶಸ್ತಿಯೊಂದಕ್ಕೆ ಆಯ್ಕೆ ಮಾಡಿದ ಕೃತಿಗಳಲ್ಲಿ ಇಡ್ಲಿ ಸಾಂಬರ್ ಮತ್ತು ವಡೆ ಪ್ರಸ್ತಾಪ ಐದು ಪುಟಕೋಮ್ಮೆ ದಾಖಲಾಗಿದೆ; ಈ ಕೃತಿಯನ್ನ ಜೋಶಿ ತಂಡ ಜೊಲ್ಲು ಸುರಿಸುತ್ತಲೇ ಆಯ್ಕೆ ಮಾಡಿದೆಯಂತಲ್ಲಾ. ಅಂತಹ ವಿವರಗಳನ್ನುಳ್ಳ ಪುಸ್ತಕವನ್ನ ಪ್ರಶಸ್ತಿಗೆ ಆಯ್ಕೆ ಮಾಡುವುದರಲ್ಲಿ ಯಾವ ಅಚ್ಚರಿಯೂ ಇಲ್ಲವಂತಲ್ಲಾ, ಥೂತ್ತೇರಿ.

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...