Homeಅಂಕಣಗಳುಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ತೆಗೆದುಕೊಂಡ ಸಿದ್ದು ಅವರ ಲಕ್ಕಿನಲ್ಲಿ ಎಡೂರಪ್ಪನವರ ಪಾಲು ಪ್ರಧಾನವಾಗಿದೆಯಂತಲ್ಲಾ. ಮೊದಲು ಸಿದ್ದು ಮುಖ್ಯಮಂತ್ರಿಯಾಗಬೇಕಾದರೆ, ಎಡೂರಪ್ಪ ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಮಾಡಿ ಚುನಾವಣೆಗಿಳಿದು ಬಿಜೆಪಿಯನ್ನು ಕೇವಲ ನಲವತ್ತು ಸೀಟಿಗೆ ಇಳಿಸಿದ್ದು ಕಾರಣವಾದರೆ, ಈ ಸಾರ್ತಿಗೆ, ದಾರಿ ಇನ್ನು ಇರುವಾಗಲೇ ಮಾರ್ಗಮಧ್ಯದಲ್ಲಿ ಯಡ್ಡಿಯವರನ್ನು ಇಳಿಸಿ ಕಣ್ಣೀರು ತರಿಸಿದ್ದರ ಜೊತೆಗೆ, ಬಿಜೆಪಿಯಲ್ಲಿದ್ದರೂ ಬಾಯಿ ಸ್ವಚ್ಛವಾಗಿಟ್ಟುಕೊಂಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮಾಡಿದ ಅವಮಾನವೂ ಕಾರಣವಾಗಿದೆಯಂತಲ್ಲಾ. ಆದರೆ ಬುದ್ಧಿವಂತ ಸಿದ್ದು ಅವರು ಯಡ್ಡಿಯವರ ದೆಸೆಯಿಂದ ತಮ್ಮ ದೆಸೆ ಕುದುರಿದ್ದದನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಮನದೊಳಗೇ ಒಂದು ಕೃತಜ್ಞತೆಯಿದೆ. ಅದೇ ಕಾರಣಕ್ಕೆ ಏನೋ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನಗೌಡನಿಗೆ ಟಿಕೆಟ್ ತಪ್ಪಿಸಿ ಗೋಣಿಮಾಲತೇಶರನ್ನ ಕ್ಯಾಂಡಿಡೇಟ್ ಮಾಡಿ, ಎಡೂರಪ್ಪನವರ ಮಗನಿಗೆ ಸಹಾಯ ಮಾಡಿದ್ದಾರೆಂದು ಜನರು ಹೇಳುತ್ತಿದ್ದಾರಂತಲ್ಲಾ. ಇದರಲ್ಲಿ ಡಿ.ಕೆ.ಶಿ ಕೈವಾಡವನ್ನು ಅಲ್ಲಗಳೆಯಲಾಗುತ್ತಿಲ್ಲವಲ್ಲಾ, ಥೂತ್ತೇರಿ.

*******

ಪಂಚರತ್ನ ಮುಂದಿಟ್ಟುಕೊಂಡು ಇಡೀ ಕರ್ನಾಟಕವನ್ನು ಸುತ್ತಿ ಬಂದ ಕುಮಾರಣ್ಣನ ಪಾರ್ಟಿ ವಿಧಾನಸಭೆಯಲ್ಲಿ ನಿಗದಿತ ಸಂಖ್ಯೆಯ ಮಾನ್ಯತೆ ಕಳೆದುಕೊಂಡು ತನ್ನ ಕುಮಾರಣ್ಣನ ಪಕ್ಷ ವಿಸರ್ಜನೆ ಘೋಷಣೆಗೆ ಕಾಯುತ್ತಿದೆಯಂತಲ್ಲಾ. ಹಾಗೇ ನೋಡಿದರೆ ಬಿಜೆಪಿಯಂತೆ ದಳ ಕೂಡ ಎಂದೂ ಮೆಜಾರಿಟಿ ಪಡೆಯದ ಪಾರ್ಟಿ; ಇದು ಗೊತ್ತಿದ್ದರಿಂದಲೇ ಕುಮಾರಣ್ಣ ನನ್ನ ಪಾರ್ಟಿಗೆ ಬಹುಮತ ಬರದಿದ್ದರೆ ವಿಸರ್ಜಿಸುತ್ತೇನೆ ಎಂದಿದ್ದು ಸಾಮಾಜಿಕ ಮಾಧ್ಯಮಗಳ ಲ್ಲಿ ಹರಿದಾಡಿತ್ತು. ಹಾಗೆ ನೋಡಿದರೆ ಕುಮಾರಣ್ಣನ ಪಾರ್ಟಿ ತನಗೆ ತಾನೇ ವಿಸರ್ಜಿಸಿಕೊಳ್ಳುತ್ತ ಹೊರಟು ಶಾನೆ ವರ್ಷವಾಯ್ತು. ಮೊದಲಿಗೆ ಜಿ.ಟಿ.ದೇವೇಗೌಡರು ಹೊರನಡೆದು ಕಾಂಗ್ರೆಸ್ ಮನೆಯ ಬಾಗಿಲಿಗೆ ಹೋಗಿ ಮತ್ತೆ ವಾಪಸ್ ಬಂದರು; ನಂತರ ಹಲವಾರು ಜನ ಹೊರನಡೆದೇಬಿಟ್ಟರು. ಪಾರ್ಟಿ ಅಧ್ಯಕ್ಷನಾದವನು ಜವಾಬ್ದಾರಿಯಿಂದ ನಡೆದುಕೊಂಡು, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಸಮಾಧಾನಗೊಂಡವರನ್ನ ಸಾಂತ್ವನಗೊಳಿಸುತ್ತ ಸಣ್ಣತನಗಳನ್ನು ಮೀರುತ್ತ ಪಾರ್ಟಿ ಕಾರ್ಯಕರ್ತರ ರಕ್ಷಕನಾಗಿರಬೇಕು. ಮುಖಂಡನಲ್ಲಿ ಈ ಗುಣಗಳಿಲ್ಲದಿದ್ದರೆ ಹಿಂಬಾಲಕರು ಒಂದೊಂದು ಹಂತದಲ್ಲಿ ಖಾಲಿಯಾಗುತ್ತಾರೆ. ಕುಮಾರಣ್ಣನ ಪಂಚರತ್ನಕ್ಕಿಂತ ಪಾರ್ಟಿ ಮುಖಂಡರು ಮುಖ್ಯವಾಗಬೇಕಿತ್ತು. ಐದು ವರ್ಷ ದುರಾಡಳಿತ ನಡೆಸಿದವರನ್ನು ಬಿಟ್ಟು ಕಾಂಗ್ರೆಸ್ ಟೀಕಿಸುವುದು ಮುಖ್ಯವಾಗಬಾರದಿತ್ತು. ನಿಜಕ್ಕೂ ದಳದಂತಹ ಪಾರ್ಟಿ ಇರಬೇಕು. ಅದು ಇದ್ದು ಬಿಜೆಪಿಯನ್ನ ಕಾಂಗ್ರೆಸ್ಸನ್ನ ನಿಯಂತ್ರಿಸಬೇಕು. ಆ ಎರಡೂ ಪಾರ್ಟಿಗಳಿಗಿಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆಯಲ್ಲಾ, ಇದು ಸಾಧ್ಯವೇ ಥೂತ್ತೇರಿ.

*****

ಕರ್ನಾಟಕದ ಜನಸ್ತೋಮಕ್ಕೆ ಬೇಕಿದ್ದ ಒಂದು ಚುನಾವಣಾ ಸೋಲು ಕಡೆಗೂ ಸಂಭವಿಸಿ ಜನ ನಿಟ್ಟುಸಿರುಬಿಟ್ಟರಂತಲ್ಲಾ. ಜನಕ್ಕೆ ಬೇಕಿದ್ದ ಆ ಸೋತ ವ್ಯಕ್ತಿ ಸಿ.ಟಿ ರವಿ. ತನ್ನ ಸೋಲನ್ನು ಇನ್ನೂ ನಂಬದ ಸಿ.ಟಿ ರವಿಯವರನ್ನು ಮಾತನಾಡಿಸಿ ಒಂದಿಷ್ಟು ಮನರಂಜನೆ ತೆಗೆದುಕೊಳ್ಳಲು ಫೋನ್ ಮಾಡಿದರೆ, ರಿಂಗಾಯ್ತು. ರಿಂಗ್‌ಟೋನ್: ’ನಮಸ್ತೆ ಸದಾ ವತ್ಸಲೇ ಮಾತೃಭೂಮಿ..’.

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಅಂದ್ರೆ ಯಾರ್ರಿ?”

“ಇದೇನ್ ಸಾರ್ ಹಿಂಗ್ ಕೇಳ್ತಿರಿ? ನೀವೆ ಒಂದು ಸತಿ ಕಲಾಮಂದಿದರಲ್ಲಿ ಸನ್ಮಾನ ಮಾಡಿದ್ರಿ..”

“ಆಗ್ಲೆ ಇಪ್ಪತ್ತು ವರ್ಷ ಆಯ್ತಲ್ರೀ?”

“ಹೌದು ಸಾರ್, ಆಗ ನೀವು ವಳ್ಳೆಯವರಾಗಿದ್ರಿ.”

“ಆಗ ಒಳ್ಳೆಯವನಾಗಿದ್ದೆ ಅಂದ್ರೆ ಈಗ ಕೆಟ್ಟೊಗಿದ್ದಿನಾ?”

“ಹೌದು ಸಾರ್, ನೀವು ಈಗ ಒಳ್ಳೆಯವರಾಗಿದ್ರೆ, ಚಿಕ್ಕಮಗಳೂರಿನ ನೀರಿನ ವಿಷಯ ಮಾತಾಡಿ, ಕರಗಡದ ಸಮಸ್ಯೆ ಬಗೆಹರಸತಿದ್ರಿ. ಅದುಬಿಟ್ಟು ಬಾಬಾ ಬುಡನ್‌ಗಿರಿ ಹಿಡಕಂಡ್ರಿ.”

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

“ಬಾಬಾ ಬುಡನ್‌ಗಿರಿ ಹಿಡಕೊಂಡು ದತ್ತಪೀಠ ಮಾಡಿದ್ಕೆ ನಾನು ನಾಲ್ಕು ಸಾರಿ ಗೆದ್ದದ್ದು.”

“ಈಗ್ಯಾಕೆ ಸೋತ್ರಿ ಸಾರ್?”

“ನಮ್ಮವರೆ ವಿಶ್ವಾಸ ದ್ರೋಹ ಮಾಡಿದ್ರು?”

“ನೀವು ವಿಶ್ವಾಸ ಕಳಕೊಂಡ ಮ್ಯಾಲೆ ಅವುರು ದ್ರೋಹ ಮಾಡದು ಸಹಜ ಅಲ್ಲವಾ?”

“ನಾನು ಯಾರ ವಿಶ್ವಾಸವನ್ನು ಕಳಕೊಂಡಿಲ್ಲ. ಸಮರ್ಥ ರೀತಿಲಿ ಆಡಳಿತ ಮಾಡಿದ್ದಿವಿ. ನಮ್ಮದು ಒಳ್ಳೆ ಸರಕಾರ ಗೊತ್ತ?”

“ನನಿಗಾಗೊ ಆಶ್ಚರ್ಯ ಯಾವುದು ಅಂದ್ರೆ ಸಾರ್.. ನಿಮ್ಮ ಸರಕಾರ ಸಮಾಜಘಾತುಕ ಶಕ್ತಿತರ ಕೆಲಸ ಮಾಡ್ತು. ಅದೆಲ್ಲ ನಿಮಗೆ ಒಳ್ಳೆದಾಗಿ ಕಾಣ್ತದಲ್ಲಾ ಅದೇ ದುರಂತ. ಒಂದು ತಪ್ಪು ತಪ್ಪಾಗಿ ಕಾಣದೆ ನಿಮಗೆಲ್ಲ ಸರಿಯಾಗಿ ಕಾಣ್ತದೆ ಅಂದ್ರೆ ಒಂದು ಪಾರ್ಟಿ ಜನಕ್ಕೆ ಏನೋ ಆಗಿ ಕಾಣ್ಸಿದೆ ಅನ್ಸುತ್ತೆ ಸಾರ್.”

“ನಮಗೇನೂ ಆಗಿಲ್ಲ, ನಿಮ್ಮ ಪೂರ್ವಗ್ರಹನ ಸರಿಮಾಡಿಕಳಿ.”

“ನಿಮ್ಮ ಬಗ್ಗೆ ಯಾವ ಪೂರ್ವಗ್ರಹದ ಅಗತ್ಯ ಇಲ್ಲ. ಸಾರ್ ನಿಮ್ಮ ಪಾರ್ಟಿ ಕೃತ್ಯಗಳೇ ಅಂಗಿದ್ದೊ.”

“ನಾವು ಕಾಂಗ್ರೆಸ್ಸಿಗರಿಗಿಂತ ಒಳ್ಳೆ ಆಡಳಿತ ಕೊಟ್ಟಿದ್ದಿವಿ.”

“ನಿಜ ಸಾರ್, ಆ ಕಾಂಗ್ರೆಸ್‌ನವು ಎಂದೂ ನಲವತ್ತು ಪರಸೆಂಟ್ ತಗೊಂಡಿರಲಿಲ್ಲ, ಆ ಕಾರಣಕ್ಕೆ ಯಾವ ಮಂತ್ರಿನೂ ರಾಜಿನಾಮೆ ಕೊಟ್ಟು ಟಿಕೆಟ್ ಇಲ್ದೆ ಮನಿಗೋಗಿರಲಿಲ್ಲ. ಸಿಕ್ಕಿದ್ದೆ ಅವಕಾಶ ಅಂತ ಪಠ್ಯಪುಸ್ತಕ ತಿದ್ದಿ ಪುರೋಹಿತರ ಅಜೆಂಡ ಸೇರಿಸಿರಲಿಲ್ಲ. ಕುವೆಂಪುಗೆ ಅವಮಾನ ಮಾಡಿದಾಗ್ಲು ನೀವು ಸುಮ್ಮನಿದ್ರಿ. ಆಡತಯಿದ್ದ ನಾಟಕ ನಿಲ್ಲಿಸಿದ್ರಿ, ಟಿಪ್ಪುವನ್ನ ವಿಕೃತವಾಗಿ ಚಿತ್ರಿಸಿ ನಾಟಕ ಆಡಿದ್ರಿ, ಅದನ್ನ ಟೀಕೆ ಮಾಡಿದ ಸಿದ್ದರಾಮಯ್ಯನವರನ್ನ “ಸಿದ್ರಾಮುಲ್ಲಖಾನ್” ಅಂತ ಕರದ್ರಿ. ಮಹಿಳೆಯರ ಬಗ್ಗೆ ನಿಮ್ಮಲ್ಲಿ ಎಂಥ ಬಾವುನೆ ಅದೆ ಅನ್ನದ ಹೇಳೋದೆ ಬೇಕಿಲ್ಲ. ಸೋಮಣ್ಣ ಪಾಪ ಬಡ ಹೆಂಗಸಿಗೆ ಸಾರ್ವಜನಿಕವಾಗಿ ಹೊಡೆದು, ಆಮೇಲೆ ಆ ಹೆಂಗಸಿಗೆ ದುಡ್ಡುಕೊಟ್ಟರು. ಸೋಮಣ್ಣ ಹೊಡಿಲಿಲ್ಲ, ತಮಾಸಿಗೆ ಭುಜ ತಟ್ಟಿದ್ದು ಅಂತ ಹೇಳಿಸಿದ್ರಿ. ನಿಮ್ಮ ಇಡೀ ಪಾರ್ಟಿ ಜನ ಒಂದೇ ಒಂದು ಒಳ್ಳೆ ಮಾತಾಡಲಿಲ್ಲ. ನಿಮ್ಮ ಸರಕಾರ ಒಂದೇ ಒಂದು ಜನ ಮೆಚ್ಚುವ ಕೆಲಸ ಮಾಡಲಿಲ್ಲ. ಜಾತಿ ಜಗಳ ಮಾಡಿಸಿದ್ರಿ. ಮುಸಲ್ಮಾನರ ಮೇಲೆ ಬಿದ್ದು ಗಲಭೆ ಮಾಡಿಸಿದ್ರಿ. ಸುಳ್ಳು ಕೇಸಾಕ್ಸಿದ್ರಿ. ಇಡೀ ನಾಡೆ ಒಂದು ಅವ್ಯಕ್ತ ಭಯದಲ್ಲಿ ಕ್ಷೆಭೆಗೊಳಗಾಗಿತ್ತು. ನಿಮ್ಮಂಥ ಜವಾಬ್ದಾರಿಯಿರೊ ಯುವ ನಾಯಕರು ಪುರೋಹಿತಶಾಹಿಗಳ ಗುಲಾಮರಾಗಿದ್ರಿ. ಬಹಳ ವಿಶಾಲವಾದ ಮನಸ್ಸಿನ ಪರಂಪರೆಯಿಂದ ಬಂದ ನಿಮಗೆ ಆರೆಸ್ಸೆಸ್ ಆಶ್ರಯದ ಅಗತ್ಯ ಇರಲಿಲ್ಲ. ಚಿಕ್ಕಮಗಳೂರು ಬ್ರಿಟಿಷರು ಕೂಡ ಮೆಚ್ಚಿದ ಸುಂದರ ನಾಡು. ಅಲ್ಲಿ ಇಂಗ್ಲೆಂಡಿನಿಂದ, ಜರ್ಮನಿಯಿಂದ ಬಂದು ತೋಟ ಮಾಡಿದೋರವುರೆ, ಮದ್ರಾಸಿನಿಂದ ಬಂದು ತೋಟ ಮಾಡಿದೋರವುರೆ. ಹಿಂಗೆ ಜಗತ್ತಿಗೇ ತೆರೆಕೊಂಡ ಚಿಕ್ಕಮಗಳೂರಿಗೆ ಪುರೋಹಿತಶಾಹಿ ತರಹ ಮಾತನಾಡೊ ರಾಜಕಾರಣಿ ಬೇಕಿಲ್ಲ ಅಂತ ಜನಕ್ಕೆ ಅನ್ನಿಸಿ ನಿಮ್ಮನ್ನ ಸೋಲಿಸಿದ್ರು ಸಾರ್. ನಿಮ್ಮ ಸೋಲಿನ ಕಾರಣಗಳು ಯಾವ ಕಾರಣಕ್ಕೂ ನಿಮಗೆ ಹೊಳಿಯಲ್ಲ. ಯಾಕೆ ಅಂದ್ರೆ ನಿಮ್ಮ ಕಣ್ಣಿಗೆ ಪೊರೆಯಾಗಿವೆ. ನೀವು ಇನ್ನೊಂದು ದಾಖಲೆ ಮಾಡಿದ್ದೀರಿ ಸಾರ್. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕುಳಿ ವಿಠ್ಠಲ ಹೆಗಡೆಯವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡ್ತು. ಆತ ಸಾಮಾನ್ಯ ವ್ಯಕ್ತಿಯೇನಲ್ಲ. ಆತ ಬರದಿರೊ ’ಮಂಗನಬ್ಯಾಟೆ’ಗೆ ಅಕಾಡೆಮಿ ಅವಾರ್ಡು ಬಂದಿದೆ. ಹೆಗಡೆ ನಿಮಗಾಗಲ್ಲ ಅಂತ ಹೇಳಿ ಸಾಹಿತ್ಯ ಸಮ್ಮೇಳನ ನ್ಯಡಿದಂಗೆ ಮಾಡಿದ್ರಿ. ಸಮ್ಮೇಳನದ ಜಾಗಕ್ಕೆ ಭಜರಂಗಿಗಳು ಬಂದು ಬಾಯಿ ಹರಕೊಂಡು ಸಮ್ಮೇಳನ ನಿಲ್ಲಿಸಿದ್ರು. ಇದು ಇತಿಹಾಸದಲ್ಲಿ ದಾಖಲಾದ ಅಭಿವ್ಯಕ್ತಿ ಸ್ವಾತಂತ್ರ ಹರಣದ ಘಟನೆ. ಕನ್ನಡ ಸಾಹಿತ್ಯಕ್ಕೆ ನೀವು ಮಾಡಿದ ಅವಮಾನ. ಭುವನೇಶ್ವರಿಗೆ ಮಾಡಿದ ದ್ರೋಹ. ದೂರದ ಊರುಗಳಿಂದ ಬಂದ ಸಾಹಿತಿಗಳು ನಿಮ್ಮನ್ನ ನಿಂದಿಸುತ್ತಾ ಇದೊಂದು ಅನಾಗರಿಕ ನಡೆ, ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ, ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರಿಗೆ ಮಾಡಿದ ಅವಮಾನ, ಇದೇ ಜಿಲ್ಲೆಯ ಹಿರೇಕೂಡಿಗೆಯಲ್ಲಿ ಹುಟ್ಟಿದ ಕುವೆಂಪುಗೆ ಮಾಡಿದ ಅವಮಾನ ಅಂತ ಬೈಕಂಡೋದ್ರು ಸಾರ್. ಮಾತಾಡಿ ಸಾರ್ ಹೇಳಿ ಏನಾರ. ಹಲೋ. ಹಲೋ. ಹಲೋ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...