Homeಅಂಕಣಗಳುಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

- Advertisement -
- Advertisement -

ಅದೊಂದು ಕಾಲವಿತ್ತು; ಚುನಾವಣೆ ಬಂತೆಂದರೆ ಲೀಡರ್‌ಗಳು ತಮ್ಮ ನಾಲಗೆಯನ್ನು ಮಸೆದುಕೊಂಡು, ಪರಿಣಾಮಕಾರಿ ಸುಭಾಷಿತಗಳನ್ನು ಬಾಯಿಪಾಠ ಮಾಡಿಕೊಂಡು, ಉಪಕತೆಗಳನ್ನು ಹೊಸೆದುಕೊಂಡು ಬಹಿರಂಗ ಸಭೆಗಳಲ್ಲಿ ಭಾಷಣ ಬಿಗಿದು ಓಟು ಕೇಳುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತೂ ಗಂಟೆಗಟ್ಟಲೆ ಮಾತನಾಡಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮಾತನಾಡಿ ಓಟನ್ನೇ ಕೇಳುತ್ತಿರಲಿಲ್ಲ. “ಓಟು ಕೇಳಿ ಸಾರ್” ಎಂದರೆ “ಜನಗಳಿಗೆ ಗೊತ್ತಿಲ್ಲವೆ” ಎಂದುಬಿಡುತ್ತಿದ್ದರು. ಅಂದಿನ ಸಮಾಜವಾದಿಗಳೆಲ್ಲ ಭಯಂಕರ ಭಾಷಣಕಾರರಾಗಿದ್ದರು. ಭಾಷಣದಿಂದಲೇ ಮತ ಪಡೆಯುತ್ತಿದ್ದರು. ಈಗ ಹಠಾತ್ ಎಲ್ಲವೂ ಬದಲುಗೊಂಡಿದೆ. ಮತದಾರರ ಪಟ್ಟಿ ಹಿಡಿದು, ಹಂಚಬಹುದಾದ ಸಾಮಗ್ರಿಯ ದಾಸ್ತಾನಿನ ಮೇಲೆ ಮತಗಳ ಎಣಿಕೆ ನಡೆಯುತ್ತಿದೆ. ಜನರಿಗೆ ಮಾಂಸ, ಮದ್ಯ ಮತ್ತು ಕಾಸುಕೊಟ್ಟ ಮೇಲೆ ಅವರೊಡನೆ ಮಾತನಾಡುವ ಅಗತ್ಯವಿಲ್ಲ, ಭಾಷಣದ ಅಗತ್ಯವಿಲ್ಲ, ಭಾವನಿಕೆ ಮಾತಿಲ್ಲ; ಮೌನದಲ್ಲಿಯೇ ಮತದ ವ್ಯವಹಾರ ಮುಗಿದ ಮೇಲೆ ಪ್ರಜಾಪ್ರಭುತ್ವವೂ ಕೂಡ ಯಕ್ಕುಟ್ಟಿ ಹೋಗಿದೆಯಂತಲ್ಲಾ, ಥೂತ್ತೇರಿ.

******

ತೊಂಭತ್ತೆರಡು ವರ್ಷದ ದೇವೇಗೌಡರು ಸ್ವತಂತ್ರವಾಗಿ ನಡೆಯಲಾರರು, ವಯೋಸಹಜವಾಗಿ ಮಾತನಾಡುವುದು ತ್ರಾಸವಾದರೂ ಅವರನ್ನು ಕರೆಸಿ ಒಂದೆರಡು ತೊಟ್ಟು ಕಣ್ಣೀರು ಹಾಕಿಸಿಬಿಟ್ಟರೆ ನನ್ನ ಗೆಲುವು ಗ್ಯಾರಂಟಿ ಎಂದು ಭಾವಿಸಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಗೌಡರ ಮನೆಗೆ ಹೋಗಿ ಕೈ ಮುಗಿದಾಗ, ಇಲ್ಲ ಗೌಡರನ್ನು ಕಳುಹಿಸಲು ವೈದ್ಯರ ಒಪ್ಪಿಗೆ ಕಡ್ಡಾಯ ಎಂದರಂತಲ್ಲಾ. ಆಗ ದಿಕ್ಕು ಕಾಣದಂತಾದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಎದುರು ನಿಂತು “ಅಪ್ಪಾ ನಿಮ್ಮ ವೈರಿಯಾದ ಚಲುವರಾಯಸ್ವಾಮಿ ಗೆಲ್ಲುವಂತೆ ಕಾಣುತ್ತಿದ್ದಾನೆ, ನನಗೆ ದಿಕ್ಕೇತೋಚದಂತಾಗಿದೆ” ಎಂದ ಕೂಡಲೇ ಗೌಡರು ಮೈಮೇಲೆ ದೆವ್ವ ಬಂದಂತೆ ಎದ್ದು ನಿಂತು, ಅಲ್ಲೇ ಇದ್ದ ಅಪ್ಪಾಜಿ ಹೆಗಲ ಮೇಲೆ ಬಲಗೈ ಊರಿ ಎಡಗೈಯ್ಯನ್ನು ಸುರೇಶಗೌಡನ ಭುಜಕ್ಕೆ ಹಾಕಿಕೊಂಡು ನಾಗಮಂಗಲದ ಕಡೆ ನಡೆದೇಬಿಟ್ಟರಂತಲ್ಲಾ. ನಾಗಮಂಗಲದಲ್ಲಿ ಗೌಡರನ್ನು ನೋಡಿದ ಗತಕಾಲದ ಜನ “ಅಬ್ಬಾಬ್ಬಾ ಸೇಡು ಅಂದರೆ ಇದು, ತೊಂಭತ್ತೆರಡು ವರ್ಷವಾಗಿದ್ದರೂ ಐವತ್ತು ವರ್ಷದ ವೈರಿಯನ್ನು ಹೊಡೆದುರುಳಿಸಲು ಬಂದು ನಿಂತಿರುವ ಗೌಡರ ಛಲ ಸಾಮಾನ್ಯವೇ ಅಂದರಂತಲ್ಲಾ. ಮನುಷ್ಯನಿಗೆ ವಯಸ್ಸಾದಂತೆ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದಂತೆ, ಆದರೆ ನಮ್ಮ ಗೌಡರನ್ನ ನೋಡಿದರೆ ಆ ಮಾತು ಸುಳ್ಳಾಗಿ ಕಾಣುತ್ತಿದೆಯಲ್ಲಾ ಎಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ನಾಗಮಂಗಲದಲ್ಲಿ ಕಾಣಿಸಿಕೊಂಡ ಗೌಡರು, “ಬರಗಾಲವೆಂಬ ಭೀಕರತೆಗೆ ಸಿಕ್ಕಿ ಗುಳೆ ಹೋಗುತ್ತಿದ್ದ ನಾಗಮಂಗಲದ ಜನ ನೋಡಲಾಗದೆ ನಾನು ಈ ತಾಲೂಕಿಗೆ ಹೇಮಾವತಿ ಹರಿಸಿದೆ; ಅಂದಿನಿಂದ ಜನ ಅನ್ನ ಉಣ್ಣುತ್ತಿದ್ದಾರೆ” ಎಂದು ಹಸಿಸುಳ್ಳು ಹೇಳಿ ಜನರನ್ನು ದಂಗು ಬಡಿಸಿದರಲ್ಲಾ. ನಾಗಮಂಗಲದ ಜನರ ಅಭಿಪ್ರಾಯದಂತೆ ಅಂದು ಸಂಸ್ಥಾ ಕಾಂಗ್ರೆಸ್ಸಿನ ಶಾಸಕರಾಗಿದ್ದ ಎಚ್.ಟಿ.ಕೃಷ್ಣಪ್ಪನವರನ್ನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಪಾರ್ಟಿಗೆ ಕರೆದಾಗ, ಅವರು “ನನ್ನ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಕೊಡುವುದಾದರೆ ನಿಮ್ಮ ಪಾರ್ಟಿಗೆ ಬರುತ್ತೇನೆ” ಎಂದರು. ಕೂಡಲೇ ಇಂಜಿನಿಯರ್ ಕರೆದ ಅರಸು ನಾಗಮಂಗಲಕ್ಕೆ ಸಾಧ್ಯವಾದಷ್ಟು ಹೇಮಾವತಿ ನೀರು ಹರಿಸಿ ಎಂದು ಹೇಳಿ ಕೃಷ್ಣಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡರು. ಇದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಆದರೆ ದೇವೇಗೌಡರು ತುಮಕೂರಿಗಾಗಲಿ, ನಾಗಮಂಗಲಕ್ಕಾಗಲಿ ಹೇಮಾವತಿ ಹರಿಸಲಿಲ್ಲ. ಅವರು ಮುಖ್ಯಮಂತ್ರಿಯಾಗಿದದ್ದು ಕೇವಲ ಹದಿನೆಂಟು ತಿಂಗಳು. ಸೇಡಿಗಾಗಿ ಸುಳ್ಳು ಹೇಳಬಾರದು. ಸತ್ಯ ಸಂಗತಿಯ ಅರಿವಿರುವ ಜನರು ನಗಾಡಬಹುದೆಂಬ ಎಚ್ಚರ ಗೌಡರಲ್ಲಿ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

******

ಇತ್ತ ಬಿಜೆಪಿ ಅಜೆಂಡಾಗಳು ಒಂದೊಂದೇ ಅನಾವರಣಗೊಂಡು ಜನತೆ ಬೆಚ್ಚಿ ಬೀಳುವಂತಾಗಿದೆಯಲ್ಲಾ. ಎರಡು ದಶಕದ ಹಿಂದೆ ತಯಾರಾದ ಬಿಜೆಪಿ ಅಜೆಂಡಾದ ಮುಖ್ಯಾಂಶಗಳ ಸಂಖ್ಯೆ 25. ಅವುಗಳಲ್ಲಿ ಈಗಾಗಲೇ ಕೆಲವು ಜಾರಿಯಾಗಿವೆ. ಒಂದೆರಡನ್ನು ಮಾತ್ರ ಉಲ್ಲೇಖಿಸುವುದಾದರೆ, ಮಸೀದಿ ಕೆಡವಿ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲಾಗಿದೆ. ರಾಮಮಂದಿರ ಕಟ್ಟಲಾಗಿದೆ. ಹಾಗೆಯೇ ರಾಮಮಂದಿರಗಳನ್ನ ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಿಸಲಾಗುತ್ತದೆ. ನಂತರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ಸೂಚನೆ ಅಶ್ವತ್ಥನಾರಾಯಣ ಎಂಬುವವರ ಬಾಯಿಂದ ಬಂದಿದೆ. ಆ ಪ್ರಕಾರ ರಾಮನಗರಕ್ಕೂ ರಾಮಮಂದಿರ ಬರಲಿದೆ. ಹೀಗೆ ವ್ಯಾಪಕವಾಗಿ ಹರಡುವ ರಾಮಮಂದಿರಗಳ ಮುಖಾಂತರ ಆಡಳಿತ ನಡೆಯಲಿದೆ. ಪೂಜಾರಿಗಳು ಎರಡೆರೆಡು ಶಿಫ್ಟ್‌ನಂತೆ ಕೆಲಸ ನಿರ್ವಹಿಸಲಿದ್ದಾರೆ. ಪ್ರಧಾನ ಅರ್ಚಕರ ಕೆಳಗೆ ಸರಕಾರದ ಕರ್ಮಚಾರಿಗಳು ಬರುತ್ತಾರೆ, ಸರಕಾರಿ ಯಂತ್ರದಲ್ಲಿ ಯಾವ ಶೂದ್ರನು ಇರುವುದಿಲ್ಲ. ಬ್ರಾಹ್ಮಣರೇ ತುಂಬಿಕೊಂಡ ರಾಮಮಂದಿರದ ಆಡಳಿತದ ದೆಸೆಯಿಂದ ರಾಮರಾಜ್ಯ ಸ್ಥಾಪನೆಯಾಗಲಿದೆಯಂತಲ್ಲಾ, ಥೂತ್ತೇರಿ.

******

ಬಿಜೆಪಿಗಳ ಅಧಿಕೃತ ಘೋಷಣೆಯಂತಲೇ, “ನೀವು ಬಂದರೆ ಜೊತೆಯಾಗಿ, ಬಾರದಿದ್ದರೆ ನಿಮ್ಮನ್ನ ಬಿಟ್ಟು, ಅಡ್ಡಿಪಡಿಸಿದರೆ ಹತ್ತಿಕ್ಕಿ ನಾವು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತೇವೆ” ಎಂಬುದು ಈಗಾಗಲೇ ಜಾರಿಯಾಗಿದೆಯಂತಲ್ಲಾ. “ನೀವು ಬಾರದಿದ್ದರೆ, ನಿಮ್ಮನ್ನ ಬಿಟ್ಟೇ ನಾವು ರಾಮರಾಜ್ಯ ಕಟ್ಟುತ್ತೇವೆ” ಎಂಬುದು ಎಡೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ನಿಜವಾಗಿದೆಯಲ್ಲಾ. ಈ ಬಗ್ಗೆ ಬಿಜೆಪಿ ಬುದ್ದಿಜೀವಿ ಮಂಜನನ್ನ ಕೇಳಿದರೆ ನೋಡಿ ಅದ್ವಾನಿಗಿಂತ ಇವರಾರೂ ದೊಡ್ಡವರಲ್ಲಾ, ಅದ್ವಾನಿ ಬಾಬ್ರಿ ಮಸೀದಿ ಕೆಡವಿಸಿದ ಲೀಡ್ರು, ಅದಕ್ಕೂ ಮೊದಲು ರಾಮನನ್ನ ರಸ್ತೆಗೆ ತಂದು ಮೆರವಣಿಗೆ ಮಾಡಿದರು. ನಂತರ ಇಟ್ಟಿಗೆ ಮೆರವಣಿಗೆ ಮಾಡಿದರು, ರಾಮ ಪಾದುಕ ಮೆರವಣಿಗೆ ಮಾಡಿದರು, ಜ್ಯೋತಿ ಮೆರವಣಿಗೆ ಮಾಡಿದರು, ಈ ದೇಶದಲ್ಲಿ ಬಿಜೆಪಿ ಆವರಿಸಿಕೊಳ್ಳುವಂತೆ ಮಾಡಿದರು. ಆದರೆ ಜಿನ್ನಾ ಸೆಕ್ಯುಲರಾಗಿದ್ದ ಅನ್ನ ಮಾತಿಗೆ ಅದ್ವಾನಿಯನ್ನೇ ಆಚೆಗೆ ಎಸೆದ ಬಿಜೆಪಿಗೆ ಈಶ್ವರ, ಎಡೂರಪ್ಪ, ಶೆಟ್ಟರ್ ಯಾವ ಲೆಕ್ಕಾರಿ. ಅಂಗೇ ನೋಡ್ತಾಯಿರಿ “ಬಿಜೆಪಿನ ಇನ್ನೂ ಹ್ಯಂಗೆ ಚೊಕ್ಕ ಮಾಡ್ತಿವಿ” ಅಂತ ಜಾರುತ್ತಿದ್ದ ಖಾಕಿ ಚೆಡ್ಡಿಯನ್ನ ಮೇಲೆಳೆದುಕೊಂಡು ಹೋದನಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...