Homeಅಂಕಣಗಳುಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

- Advertisement -
- Advertisement -

ಎದುರು ಬರುತ್ತಿರುವವನು ಕಾಂಗ್ರೆಸ್ ಕಾರ್ಯಕರ್ತ ಎಂದು ಗೊತ್ತಾದರೆ ಸಾಕು ಭಕ್ತಿಯಿಂದ ಕೈ ಮುಗಿದು, ’ದಯಮಾಡಿ ನನ್ನನ್ನ ಕಾಂಗ್ರೆಸ್‌ಗೆ ಸೇರಿಸಿ’ ಎಂದು ಕೇಳಿಕೊಳ್ಳುತ್ತಿದ್ದ ಕಡೂರು ದತ್ತಣ್ಣ ಕಾಂಗ್ರೆಸ್ ಸೇರಿಯೂ ಆಯ್ತು; ಅದನ್ನು ಬಿಟ್ಟು ಮತ್ತೆ ಜೆಡಿಎಸ್ ಸೇರಿ ಕಡೂರಿನ ಕ್ಯಾಂಡೇಟ್ ಆಗಿಯೂ ಆಯ್ತು. ಕಡೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಂತಹ ವ್ಯತ್ಯಾಸವಿಲ್ಲ, ಹಾಗಾಗಿ ದತ್ತಣ್ಣ ಎಲ್ಲಿ ನಿಂತರೂ ಮೂರನೆ ಸ್ಥಾನ ಕಾಯಂ ಆಗಿದೆಯಂತಲ್ಲಾ, ಥೂತ್ತೇರಿ.

*****

ಸಿ.ಸೋಮಶೇಖರ ನೆನಪಿಸಿಕೊಳ್ಳಿ; ಅಧಿಕಾರಿಯಾಗಿ ಅಖಂಡ ಐಶ್ವರ್ಯ ಹೊಂದಿದ್ದವರು ಮತ್ತು ಲಂಕೇಶ್‌ರಿಂದ ಜನ್ಮಾಪಿ ನೆನೆಸಿಕೊಳ್ಳುವಂತೆ ಟೀಕಿಸಿಕೊಂಡಿದ್ದವರು. ಇದಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಅರೆದು ಕುಡಿಯಲು ಪ್ರಯತ್ನಿಸಿ, ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡಿದ್ದರು. ಈತ ವಚನ ಹೇಳುತ್ತಿರುವುದು ಬಿಜೆಪಿ ಪಡಸಾಲೆಯಲ್ಲಿ, ಏಕೆಂದರೆ ಬಿಜೆಪಿ ಗರ್ಭಗುಡಿಗೆ ಆತ ಹೋಗುವಂತಿಲ್ಲ. ಬಿಜೆಪಿ ಲಿಂಗಾಯಿತರಿಗೆ ಗೌರವ ತಂದುಕೊಟ್ಟ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿರುವ ಈತ ತುಮಕೂರು ಜಿಲ್ಲೆಯ ಡಿ.ಸಿಯಾಗಿದ್ದಾಗ, ಇಂಥದೇ ಚುನಾವಣೆ ಬಂದು ಮೊದಲು ಆ ಡಿ.ಸಿಯನ್ನ ವರ್ಗಮಾಡಿ ಎಂದು ದೇವೇಗೌಡರು ಹಟ ಹಿಡಿದದ್ದು ಯಾಕೆ ಅಂತ ಈಗ ಗೊತ್ತಾಗುತ್ತಿದೆಯಲ್ಲಾ, ಥೂತ್ತೇರಿ.

*****

ಬಿಜೆಪಿ ಪರವಾಗಿ ಸಿ.ಸೋಮಶೇಖರ್ ನಂತಹವರು ಎಷ್ಟೇ ವಕಾಲತ್ತು ವಹಿಸಿದರೂ ಈಶ್ವರಪ್ಪನಿಗಿರುವ ಪಕ್ಷನಿಷ್ಠೆ ಇಡೀ ದೇಶದಲ್ಲಿಯೇ ಯಾರಿಗೂ ಇಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಅದಕ್ಕಾಗಿಯೇ ಪ್ರಧಾನಿಯವರೇ ಫೋನು ಮಾಡಿ ಅಭಿನಂದಿಸಿ, ’ಈಶ್ವರಪ್ಪಾಜಿ, ತು ಅಸಾಧಾರಣ ವ್ಯಕ್ತಿ ಹೈ. ಏಕ್ ಬಾರ್ ಇದರ್ ಆನ’ ಎಂದರಂತಲ್ಲಾ. ಆ ಕೂಡಲೇ ಕೇಸರಿ ಮೈದುಂಬಿದಂತಾದ ಈಶ್ವರಪ್ಪ, ’ಆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಲ್ಲಿ ಸಾಯಿಲಿ, ನಾನು ಮಾತ್ರ ಬಿಜೆಪಿಲಿದ್ದೇ ಹೋಯ್ತಿನಿ’ ಎಂದರಂತಲ್ಲಾ. ಇಂತಹ ಕಠೋರ ಶಪಥ ಮಾಡಿದ ಈಶ್ವರಪ್ಪನನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಅಲ್ಲವೆ! ಅದಕ್ಕಾಗಿ ಫೋನು ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ..’

“ಹಲೋ ಯಾರೂ?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿಗೋದ್ರಿ, ಬನ್ರಿ ಮಾತಾಡನ”.

“ಡೆಡ್‌ಲೈನಿಗೆ ಒಂದೆರಡು ಮಾತ್ ಹೇಳಿ ಸಾರ್.”

“ಏನು ಮಾತಾಡದ್ರಿ.. ಯಾವುದ್ಕು ಉತ್ಸಾಹ ಇಲ. ಸುಮ್ಮನೆ ತೋರಿಕೆಗೆ ಏನೇನೋ ಮಾತಾಡ್ತಿನಿ.”

“ಅದು ಗೊತ್ತು ಸಾರ್, ನಿಮ್ಮತ್ರ ಸೇವಕನಂಗಿದ್ದ ಹುಡುಗನ ಪರ ಓಟು ಕೇಳಿದರಂತೆ. ಹಿಂಸೆ ನ್ಯನಿಸಿಗಳಕ್ಕಾಗಲ್ಲ.”

“ಆದ್ರು ಕೇಳಬೇಕಲ್ಲ ಹೇಳಿ.”

“ಯಾಕ್ಸರ್ ಬಿಜೆಪಿಗಳು ನಿಮಿಗೆ ಇಂತ ಅವುಮಾನ ಮಾಡಿದ್ರು. ಬಿಜೆಪಿ ಇತಿಹಾಸದಲ್ಲಿ ಯಾರಿಗೂ ಇಂತ ಅವುಮಾನಾಗಿಲ್ಲ ಸಾ.”

“ಶೆಟ್ಟರ್‌ಗಿಂತ ಅವುಮಾನಾಗಿಲ್ಲ ಬುಡ್ರಿ.”

“ಅಂಗಂತಿರಾ?”

ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

“ಊ ಮತ್ತೆ. ಮುಖ್ಯಮಂತ್ರಿಯಾಗಿದ್ದೋರಿಗೆ ಮಿಸ್ ಕಾಲ್ ಕೊಟ್ಟು, ಇವುರು ಪೋನ್ ಮಾಡಿದಾಗ ನಿಮಗೆ ಟಿಕೆಟ್ ಇಲ್ಲ ಅಂದುಬುಟ್ಟು ಕಟ್ ಮಾಡ್ಯವುರಲ್ಲ, ಇದವು ಅವಮಾನ ಅಲವೆ?”

“ನಿಮ್ಮ ಅವುಮಾನದ ಮುಂದೆ ಅವುರದೇನೂ ಅಲ್ಲ ಸಾರ್.”

“ಅದ್ಯಂಗರೀ?”

“ನೀವು ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ. ಶಿವಮೊಗ್ಗದಲ್ಲಿ ಪಾರ್ಟಿಗಾಗಿ ಬಂದ್, ಗೋಲಿಬಾರು, ಲೂಟಿ ಯಲ್ಲಾನು ಮಾಡಿಸಿದ್ದಿರಿ. ಕೆ.ಹೆಚ್.ಶ್ರೀನಿವಾಸ್ ಊರಾಬುಟ್ಟೋಗಂಗೆ ಮಾಡಿದ್ದಿರಿ, ಮುಸ್ಲಿಮರ ಮದುವೆಗೂ ದುಡ್ಡುಕೊಟ್ಟಿದ್ದಿರಿ. ತಮುಳು ಜನ ಸಂಘಟಿಸಿ ಅವುರನೆಲ್ಲಾ ಬಸ್ಸಲ್ಲಿ ಸರದಿ ಪ್ರಕಾರ ತುಂಬಿಕಂಡೋಗಿ ತಮುಳು ನಾಡಿನ ತಂಜಾವ್ಯೂರು, ರಾಮೇಶ್ವರ, ಚಿದಂಬರ, ಮದುರೆ, ಪಳನಿ ಯಲ್ಲಾನು ತೋರಿಸಿಗಂಡು ಬಂದು ಸುರದ್ದಿದ್ದಿರಿ. ಹಂಗೆ ನೋಡಿದ್ರೆ ಆ ಶಿವಮೊಗ್ಗದಲ್ಲಿ ನಿಮ್ಮನ್ನ ಸೋಲಸಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ. ಇದ್ಯಾವುದನ್ನು ಲೆಕ್ಕಕ್ಕೆ ತಗೊಳ್ದೆ, ಕೇವಲ ಸಿದ್ದರಾಮಯ್ಯನ ತಲೆ ಕಡಿತಿನಿ ಅಂದಿದ್ದ ಮಾತ್ರಕ್ಕೆ ನಿಮ್ಮ ಸೇವಕನಿಗೆ ಟಿಕೆಟ್ ಕೊಟ್ಟು ನಿಮಗಿಲ್ಲ ಅಂದರಲ್ಲಾ ಸಾರ್. ನನಗೇ ಇಷ್ಟು ಹಿಂಸೆ ಆಯ್ತಾ ಅದೆ. ನೀವ್ಯಂಗೆ ತಡ್ಕೋತಾ ಇದೀರಿ ಅನ್ನದೆ ಆಶ್ಚರ್ಯ ಸಾರ್.”

“ಅದು ಪಾರ್ಟಿ ನಿಷ್ಟೆ ಕಂಡ್ರಿ, ನನಿಗೆ ಇಲ್ಲಿವರಿಗೂ ಸಿಕ್ಕಿದೆಲ್ಲಾ ಪಾರ್ಟಿಯಿಂದ. ಪಾರ್ಟಿ ನಮ್ಮ ತಾಯಿಯಿದ್ದಂಗೆ.”

“ಪಾರ್ಟಿ ತಾಯಿಯಾದ್ರೆ, ತಂದೆ ಯಾರು ಸಾರ್?”

“ಪೊಲಿಟಿಕೆಲ್ ಪಾರ್ಟಿ ಅಂದ್ರೆ ತಾಯಿ, ಅಲ್ಲಿ ತಂದೆಯಿರಲ್ಲ”

“ಅಂದ್ರೆ ಪೊಲಿಟಿಕಲ್ ಪಾರ್ಟಿಗೆ ತಂದೆಯಿರಲ್ವ ಸಾರ್?”

“ರಿ ತಲೆಕೆಟ್ಟಂಗೆ ಮಾತಾಬ್ಯಾಡಿ. ನಮ್ಮನ್ನ ಬೆಳೆಸಿ ಸ್ಥಾನಮಾನ ಕೊಟ್ಟ ಪಾರ್ಟಿ ತಾಯಿಗೆ ಸಮಾನ ಅಂತ ನಾನು ಹೇಳಿದ್ದು.”

“ನನಿಗೇನೂ ಈ ಹೋಲಿಕೆನೆ ಸರಿಯಿಲ್ಲ ಸಾರ್. ಅಪ್ರಭುದ್ಧ ಮೂರ್ಖರು ಮಾತ್ರ ಇಂತ ಹೋಲಿಕೆ ಮಾಡಬಲ್ಲರು.”

“ಯಾಕ್ರಿ ಅಂಗಂತಿರಿ?”

“ಮತ್ತಿನ್ನೇನು ಸಾರ್, ಹೆತ್ತು ಹಾಲು ಕುಡಿಸಿ ಬೆಳೆಸೋ ತಾಯಿ ಎಲ್ಲೀ, ಹಾದಿ ಬೀದಿಲಿ ಸಿಕ್ಕಿದೋರ ಹಿಡಕಂಡು ಬಂದು, ಚಡ್ಡಿ ಇಕ್ಕಿ, ಲಾಟಿ ಕೊಟ್ಟು ಮಹೊಡಿ ಸಾಬರಿಗೆ ಅನ್ನೂ ಪಾರ್ಟಿ ಎಲ್ಲಿ? ಅಂಥ ಪಾರ್ಟಿನ ದೇವತೆಯಂತ ತಾಯಿಗೋಲುಸ್ತಿರಲ್ಲಾ. ಆಯ್ತು ನಿಮ್ಮ ಮಾತನ್ನ ಒಪ್ಪಿಗಳನ. ಇವತ್ತು ನಿಮ್ಮ ಕತೆ ಏನಾಗಿದೆ?”

“ಏನು ಆಗಬಾರದ್ದಾಗಿಲ್ಲ ಕಂಡ್ರೀ.”

“ಸಾರ್ ನಿಮಗೆ ಯಂಗೇಳಬೇಕು ಅಂತ ಗೊತ್ತಾಯ್ತಯಿಲ್ಲ. ಬಿಜೆಪಿಲಿ ಚುನಾವಣೆಗೆ ನಿಲ್ಲಕ್ಕೆ ನಿಮ್ಮಷ್ಟು ಯೋಗ್ಯ ಕ್ಯಾಂಡೇಟ್ ಇರಲಿಲ್ಲ. ಅವುರು ನಿರಾಕರಿಸಿದ ತಕ್ಷಣನೆ ಶೆಟ್ಟರ್ ತರ ತೀರ್ಮಾನ ತಗೊಬೇಕಿತ್ತು.”

“ಬ್ಯಾರೆ ಪಾರ್ಟಿಯೋರು ನನ್ನನ್ನ ಸೇರಿಸ್ರಿರಲಿಲ್ಲ ಕಂಡ್ರಿ.”

“ಜೆಡಿಎಸ್‌ನೋರು ಸೇರಿಸ್ತಿದ್ರು ಸಾರ್. ಜೆಡಿಎಸ್ ಟೀಮನ್ನ ದಂಡೂಪಾಳ್ಯದ ಗ್ಯಾಂಗು ಅಂದಿದ್ದ ಆಯನೂರ್ ಮಂಜುನಾಥನ್ನೆ ಸೇರಿಸಿಕೊಂಡ್ರು. ಅಂಥದರಲ್ಲಿ ಕುಮಾರಣ್ಣ ನಿಮ್ಮನ್ನ ಬುಡತಿದ್ರೆ..”

“ಬುಡತಿರಲಿಲ್ಲ ನಿಜ. ಅಂಗೆ ನೋಡಿದ್ರೆ ಕುಮಾರಣ್ಣ ಈ ಹಿಂದೆ ಎರಡು ಬಾರಿ ನಾನೇಳಿದೋರಿಗೆ ಟಿಕೆಟ್ ಕೊಟ್ಟವುರೆ. ಅಂಗಂತ ನಾನು ಪಾರ್ಟಿ ಬುಡಕ್ಕಾಗಲ್ಲ. ಈಗ ನಾನು ಚುನಾವಣಾ ರಾಜಕಾರಣದಿಂದ ದೂರ. ಮುಂದೆ ಪಾರ್ಟಿ ಕೆಲಸ ಮಾಡಿಕಂಡೋಯ್ತಿನಿ”

“ಪಾರ್ಟಿ ಕೆಲಸನ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿಲ್ಲ.”

“ಯಾಕ್ರಿ ಅಂಗಂತಿರಿ?”

“ನಿಮ್ಮ ಜಾಗಕ್ಕೆ ನಿಮಗಿಂತ್ಲೂ ಭೀಕರ ವ್ಯಕ್ತಿನ ತಂದಾಗ್ಯದೆ. ಮುಂದೆ ಅವುಂದೆ ರಾಜ್ಯಭಾರ. ಅವುರು ಆವರಿಸಿಕೊಂಡ ಜಾಗದಲ್ಲಿ ನೀವು ಅಪ್ಪಮಕ್ಕಳಿಗೇನೂ ಕೆಲಸಿಲ್ಲ. ನಿಮ್ಮ ಈ ನಿವೃತ್ತಿ ನಂತರ ನಿಮ್ಮ ಮಗ ನಿಮ್ಮ ಜೊತೆ ಬಂದು ಸೇರಿಕಳ್ತನೆ. ನೀವು ಮೂಲೆಗುಂಪಾಗದ್ರಲ್ಲಿ ಈಗಾಗ್ಲೆ ಮೂಲೆಗುಂಪಾಗಿರೊ ಎಡೂರಪ್ಪನ ಕೈವಾಡನೂ ಇದೆ.”

“ಅವುರ ಕೈವಾಡ ಯಾಕಿರತ್ರಿ?”

“ಸಾರ್ ನಿಜ ಹೇಳಿ. ನಿಮಗೆ ಎಡೂರಪ್ಪ ಅಂದ್ರೆ ಅಷ್ಟಕಷ್ಟೆ. ಇನ್ನ ರಾಘವೇಂದ್ರನ ಗೆಲುವು ನಿಮಗೆ ಬೇಕಿರಲಿಲ್ಲ. ಅಂಗೇನೆ ಆ ವಿಜಯೇಂದ್ರನ ಅಭ್ಯುದಯ ನಿಮಗೆ ಬೇಕಿಲ್ಲ, ಇದು ಗೊತ್ತಾಗಿ ಎಡೂರಪ್ಪ ನಮ್ಮ ಕತೆ ಮುಗದರಷ್ಟೆ ಹೋಯ್ತು, ಈಶ್ವರಪ್ಪನ ಕತೆನೂ ಮುಗಿಲಿ ಅಂತ ಕಾಯ್ತಿದ್ರು ಸಾರ್.”

“ಅದು ನನಿಗೂ ಗೊತ್ತು ಕಂಡ್ರಿ. ನಾನೇನು ಅಷ್ಟು ದಡ್ಡ ಅಲ್ಲ.”

“ಆದ್ರು ನೀವು ಅಸಹಾಯಕರಾಗಿ ಅಂತ್ಯವಾಗ್ತಿರಿ ಸಾರ್.”

“ಹ್ಯಂಗ್ರೀ?”

“ಎಡೂರಪ್ಪನ ಮಕ್ಕಳು ಎಂ.ಪಿ ಎಂ.ಎಲ್.ಎ ಆಯ್ತರೆ. ಸಿಟ್ಟು ಸ್ವಾಭಿಮಾನ ತೋರಿದ ಶೆಟ್ಟರ್ ಎಂ.ಎಲ್.ಎ ಆಯ್ತರೆ. ನೀವು ಅಪ್ಪಾ ಮಗ ಏನೂ ಆಗಲವಲ್ಲ ಸಾ.”

“ಆಗದಿದ್ರೆ ಕತ್ತೆ ಬಾಲ, ಸಂಘದ ಕಾರ್ಯಕರ್ತರಾಗಿರ್ತಿವಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....