Homeಅಂಕಣಗಳುಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

- Advertisement -
- Advertisement -

ಎದುರು ಬರುತ್ತಿರುವವನು ಕಾಂಗ್ರೆಸ್ ಕಾರ್ಯಕರ್ತ ಎಂದು ಗೊತ್ತಾದರೆ ಸಾಕು ಭಕ್ತಿಯಿಂದ ಕೈ ಮುಗಿದು, ’ದಯಮಾಡಿ ನನ್ನನ್ನ ಕಾಂಗ್ರೆಸ್‌ಗೆ ಸೇರಿಸಿ’ ಎಂದು ಕೇಳಿಕೊಳ್ಳುತ್ತಿದ್ದ ಕಡೂರು ದತ್ತಣ್ಣ ಕಾಂಗ್ರೆಸ್ ಸೇರಿಯೂ ಆಯ್ತು; ಅದನ್ನು ಬಿಟ್ಟು ಮತ್ತೆ ಜೆಡಿಎಸ್ ಸೇರಿ ಕಡೂರಿನ ಕ್ಯಾಂಡೇಟ್ ಆಗಿಯೂ ಆಯ್ತು. ಕಡೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಂತಹ ವ್ಯತ್ಯಾಸವಿಲ್ಲ, ಹಾಗಾಗಿ ದತ್ತಣ್ಣ ಎಲ್ಲಿ ನಿಂತರೂ ಮೂರನೆ ಸ್ಥಾನ ಕಾಯಂ ಆಗಿದೆಯಂತಲ್ಲಾ, ಥೂತ್ತೇರಿ.

*****

ಸಿ.ಸೋಮಶೇಖರ ನೆನಪಿಸಿಕೊಳ್ಳಿ; ಅಧಿಕಾರಿಯಾಗಿ ಅಖಂಡ ಐಶ್ವರ್ಯ ಹೊಂದಿದ್ದವರು ಮತ್ತು ಲಂಕೇಶ್‌ರಿಂದ ಜನ್ಮಾಪಿ ನೆನೆಸಿಕೊಳ್ಳುವಂತೆ ಟೀಕಿಸಿಕೊಂಡಿದ್ದವರು. ಇದಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಅರೆದು ಕುಡಿಯಲು ಪ್ರಯತ್ನಿಸಿ, ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡಿದ್ದರು. ಈತ ವಚನ ಹೇಳುತ್ತಿರುವುದು ಬಿಜೆಪಿ ಪಡಸಾಲೆಯಲ್ಲಿ, ಏಕೆಂದರೆ ಬಿಜೆಪಿ ಗರ್ಭಗುಡಿಗೆ ಆತ ಹೋಗುವಂತಿಲ್ಲ. ಬಿಜೆಪಿ ಲಿಂಗಾಯಿತರಿಗೆ ಗೌರವ ತಂದುಕೊಟ್ಟ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿರುವ ಈತ ತುಮಕೂರು ಜಿಲ್ಲೆಯ ಡಿ.ಸಿಯಾಗಿದ್ದಾಗ, ಇಂಥದೇ ಚುನಾವಣೆ ಬಂದು ಮೊದಲು ಆ ಡಿ.ಸಿಯನ್ನ ವರ್ಗಮಾಡಿ ಎಂದು ದೇವೇಗೌಡರು ಹಟ ಹಿಡಿದದ್ದು ಯಾಕೆ ಅಂತ ಈಗ ಗೊತ್ತಾಗುತ್ತಿದೆಯಲ್ಲಾ, ಥೂತ್ತೇರಿ.

*****

ಬಿಜೆಪಿ ಪರವಾಗಿ ಸಿ.ಸೋಮಶೇಖರ್ ನಂತಹವರು ಎಷ್ಟೇ ವಕಾಲತ್ತು ವಹಿಸಿದರೂ ಈಶ್ವರಪ್ಪನಿಗಿರುವ ಪಕ್ಷನಿಷ್ಠೆ ಇಡೀ ದೇಶದಲ್ಲಿಯೇ ಯಾರಿಗೂ ಇಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಅದಕ್ಕಾಗಿಯೇ ಪ್ರಧಾನಿಯವರೇ ಫೋನು ಮಾಡಿ ಅಭಿನಂದಿಸಿ, ’ಈಶ್ವರಪ್ಪಾಜಿ, ತು ಅಸಾಧಾರಣ ವ್ಯಕ್ತಿ ಹೈ. ಏಕ್ ಬಾರ್ ಇದರ್ ಆನ’ ಎಂದರಂತಲ್ಲಾ. ಆ ಕೂಡಲೇ ಕೇಸರಿ ಮೈದುಂಬಿದಂತಾದ ಈಶ್ವರಪ್ಪ, ’ಆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಲ್ಲಿ ಸಾಯಿಲಿ, ನಾನು ಮಾತ್ರ ಬಿಜೆಪಿಲಿದ್ದೇ ಹೋಯ್ತಿನಿ’ ಎಂದರಂತಲ್ಲಾ. ಇಂತಹ ಕಠೋರ ಶಪಥ ಮಾಡಿದ ಈಶ್ವರಪ್ಪನನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಅಲ್ಲವೆ! ಅದಕ್ಕಾಗಿ ಫೋನು ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ..’

“ಹಲೋ ಯಾರೂ?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿಗೋದ್ರಿ, ಬನ್ರಿ ಮಾತಾಡನ”.

“ಡೆಡ್‌ಲೈನಿಗೆ ಒಂದೆರಡು ಮಾತ್ ಹೇಳಿ ಸಾರ್.”

“ಏನು ಮಾತಾಡದ್ರಿ.. ಯಾವುದ್ಕು ಉತ್ಸಾಹ ಇಲ. ಸುಮ್ಮನೆ ತೋರಿಕೆಗೆ ಏನೇನೋ ಮಾತಾಡ್ತಿನಿ.”

“ಅದು ಗೊತ್ತು ಸಾರ್, ನಿಮ್ಮತ್ರ ಸೇವಕನಂಗಿದ್ದ ಹುಡುಗನ ಪರ ಓಟು ಕೇಳಿದರಂತೆ. ಹಿಂಸೆ ನ್ಯನಿಸಿಗಳಕ್ಕಾಗಲ್ಲ.”

“ಆದ್ರು ಕೇಳಬೇಕಲ್ಲ ಹೇಳಿ.”

“ಯಾಕ್ಸರ್ ಬಿಜೆಪಿಗಳು ನಿಮಿಗೆ ಇಂತ ಅವುಮಾನ ಮಾಡಿದ್ರು. ಬಿಜೆಪಿ ಇತಿಹಾಸದಲ್ಲಿ ಯಾರಿಗೂ ಇಂತ ಅವುಮಾನಾಗಿಲ್ಲ ಸಾ.”

“ಶೆಟ್ಟರ್‌ಗಿಂತ ಅವುಮಾನಾಗಿಲ್ಲ ಬುಡ್ರಿ.”

“ಅಂಗಂತಿರಾ?”

ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

“ಊ ಮತ್ತೆ. ಮುಖ್ಯಮಂತ್ರಿಯಾಗಿದ್ದೋರಿಗೆ ಮಿಸ್ ಕಾಲ್ ಕೊಟ್ಟು, ಇವುರು ಪೋನ್ ಮಾಡಿದಾಗ ನಿಮಗೆ ಟಿಕೆಟ್ ಇಲ್ಲ ಅಂದುಬುಟ್ಟು ಕಟ್ ಮಾಡ್ಯವುರಲ್ಲ, ಇದವು ಅವಮಾನ ಅಲವೆ?”

“ನಿಮ್ಮ ಅವುಮಾನದ ಮುಂದೆ ಅವುರದೇನೂ ಅಲ್ಲ ಸಾರ್.”

“ಅದ್ಯಂಗರೀ?”

“ನೀವು ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ. ಶಿವಮೊಗ್ಗದಲ್ಲಿ ಪಾರ್ಟಿಗಾಗಿ ಬಂದ್, ಗೋಲಿಬಾರು, ಲೂಟಿ ಯಲ್ಲಾನು ಮಾಡಿಸಿದ್ದಿರಿ. ಕೆ.ಹೆಚ್.ಶ್ರೀನಿವಾಸ್ ಊರಾಬುಟ್ಟೋಗಂಗೆ ಮಾಡಿದ್ದಿರಿ, ಮುಸ್ಲಿಮರ ಮದುವೆಗೂ ದುಡ್ಡುಕೊಟ್ಟಿದ್ದಿರಿ. ತಮುಳು ಜನ ಸಂಘಟಿಸಿ ಅವುರನೆಲ್ಲಾ ಬಸ್ಸಲ್ಲಿ ಸರದಿ ಪ್ರಕಾರ ತುಂಬಿಕಂಡೋಗಿ ತಮುಳು ನಾಡಿನ ತಂಜಾವ್ಯೂರು, ರಾಮೇಶ್ವರ, ಚಿದಂಬರ, ಮದುರೆ, ಪಳನಿ ಯಲ್ಲಾನು ತೋರಿಸಿಗಂಡು ಬಂದು ಸುರದ್ದಿದ್ದಿರಿ. ಹಂಗೆ ನೋಡಿದ್ರೆ ಆ ಶಿವಮೊಗ್ಗದಲ್ಲಿ ನಿಮ್ಮನ್ನ ಸೋಲಸಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ. ಇದ್ಯಾವುದನ್ನು ಲೆಕ್ಕಕ್ಕೆ ತಗೊಳ್ದೆ, ಕೇವಲ ಸಿದ್ದರಾಮಯ್ಯನ ತಲೆ ಕಡಿತಿನಿ ಅಂದಿದ್ದ ಮಾತ್ರಕ್ಕೆ ನಿಮ್ಮ ಸೇವಕನಿಗೆ ಟಿಕೆಟ್ ಕೊಟ್ಟು ನಿಮಗಿಲ್ಲ ಅಂದರಲ್ಲಾ ಸಾರ್. ನನಗೇ ಇಷ್ಟು ಹಿಂಸೆ ಆಯ್ತಾ ಅದೆ. ನೀವ್ಯಂಗೆ ತಡ್ಕೋತಾ ಇದೀರಿ ಅನ್ನದೆ ಆಶ್ಚರ್ಯ ಸಾರ್.”

“ಅದು ಪಾರ್ಟಿ ನಿಷ್ಟೆ ಕಂಡ್ರಿ, ನನಿಗೆ ಇಲ್ಲಿವರಿಗೂ ಸಿಕ್ಕಿದೆಲ್ಲಾ ಪಾರ್ಟಿಯಿಂದ. ಪಾರ್ಟಿ ನಮ್ಮ ತಾಯಿಯಿದ್ದಂಗೆ.”

“ಪಾರ್ಟಿ ತಾಯಿಯಾದ್ರೆ, ತಂದೆ ಯಾರು ಸಾರ್?”

“ಪೊಲಿಟಿಕೆಲ್ ಪಾರ್ಟಿ ಅಂದ್ರೆ ತಾಯಿ, ಅಲ್ಲಿ ತಂದೆಯಿರಲ್ಲ”

“ಅಂದ್ರೆ ಪೊಲಿಟಿಕಲ್ ಪಾರ್ಟಿಗೆ ತಂದೆಯಿರಲ್ವ ಸಾರ್?”

“ರಿ ತಲೆಕೆಟ್ಟಂಗೆ ಮಾತಾಬ್ಯಾಡಿ. ನಮ್ಮನ್ನ ಬೆಳೆಸಿ ಸ್ಥಾನಮಾನ ಕೊಟ್ಟ ಪಾರ್ಟಿ ತಾಯಿಗೆ ಸಮಾನ ಅಂತ ನಾನು ಹೇಳಿದ್ದು.”

“ನನಿಗೇನೂ ಈ ಹೋಲಿಕೆನೆ ಸರಿಯಿಲ್ಲ ಸಾರ್. ಅಪ್ರಭುದ್ಧ ಮೂರ್ಖರು ಮಾತ್ರ ಇಂತ ಹೋಲಿಕೆ ಮಾಡಬಲ್ಲರು.”

“ಯಾಕ್ರಿ ಅಂಗಂತಿರಿ?”

“ಮತ್ತಿನ್ನೇನು ಸಾರ್, ಹೆತ್ತು ಹಾಲು ಕುಡಿಸಿ ಬೆಳೆಸೋ ತಾಯಿ ಎಲ್ಲೀ, ಹಾದಿ ಬೀದಿಲಿ ಸಿಕ್ಕಿದೋರ ಹಿಡಕಂಡು ಬಂದು, ಚಡ್ಡಿ ಇಕ್ಕಿ, ಲಾಟಿ ಕೊಟ್ಟು ಮಹೊಡಿ ಸಾಬರಿಗೆ ಅನ್ನೂ ಪಾರ್ಟಿ ಎಲ್ಲಿ? ಅಂಥ ಪಾರ್ಟಿನ ದೇವತೆಯಂತ ತಾಯಿಗೋಲುಸ್ತಿರಲ್ಲಾ. ಆಯ್ತು ನಿಮ್ಮ ಮಾತನ್ನ ಒಪ್ಪಿಗಳನ. ಇವತ್ತು ನಿಮ್ಮ ಕತೆ ಏನಾಗಿದೆ?”

“ಏನು ಆಗಬಾರದ್ದಾಗಿಲ್ಲ ಕಂಡ್ರೀ.”

“ಸಾರ್ ನಿಮಗೆ ಯಂಗೇಳಬೇಕು ಅಂತ ಗೊತ್ತಾಯ್ತಯಿಲ್ಲ. ಬಿಜೆಪಿಲಿ ಚುನಾವಣೆಗೆ ನಿಲ್ಲಕ್ಕೆ ನಿಮ್ಮಷ್ಟು ಯೋಗ್ಯ ಕ್ಯಾಂಡೇಟ್ ಇರಲಿಲ್ಲ. ಅವುರು ನಿರಾಕರಿಸಿದ ತಕ್ಷಣನೆ ಶೆಟ್ಟರ್ ತರ ತೀರ್ಮಾನ ತಗೊಬೇಕಿತ್ತು.”

“ಬ್ಯಾರೆ ಪಾರ್ಟಿಯೋರು ನನ್ನನ್ನ ಸೇರಿಸ್ರಿರಲಿಲ್ಲ ಕಂಡ್ರಿ.”

“ಜೆಡಿಎಸ್‌ನೋರು ಸೇರಿಸ್ತಿದ್ರು ಸಾರ್. ಜೆಡಿಎಸ್ ಟೀಮನ್ನ ದಂಡೂಪಾಳ್ಯದ ಗ್ಯಾಂಗು ಅಂದಿದ್ದ ಆಯನೂರ್ ಮಂಜುನಾಥನ್ನೆ ಸೇರಿಸಿಕೊಂಡ್ರು. ಅಂಥದರಲ್ಲಿ ಕುಮಾರಣ್ಣ ನಿಮ್ಮನ್ನ ಬುಡತಿದ್ರೆ..”

“ಬುಡತಿರಲಿಲ್ಲ ನಿಜ. ಅಂಗೆ ನೋಡಿದ್ರೆ ಕುಮಾರಣ್ಣ ಈ ಹಿಂದೆ ಎರಡು ಬಾರಿ ನಾನೇಳಿದೋರಿಗೆ ಟಿಕೆಟ್ ಕೊಟ್ಟವುರೆ. ಅಂಗಂತ ನಾನು ಪಾರ್ಟಿ ಬುಡಕ್ಕಾಗಲ್ಲ. ಈಗ ನಾನು ಚುನಾವಣಾ ರಾಜಕಾರಣದಿಂದ ದೂರ. ಮುಂದೆ ಪಾರ್ಟಿ ಕೆಲಸ ಮಾಡಿಕಂಡೋಯ್ತಿನಿ”

“ಪಾರ್ಟಿ ಕೆಲಸನ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿಲ್ಲ.”

“ಯಾಕ್ರಿ ಅಂಗಂತಿರಿ?”

“ನಿಮ್ಮ ಜಾಗಕ್ಕೆ ನಿಮಗಿಂತ್ಲೂ ಭೀಕರ ವ್ಯಕ್ತಿನ ತಂದಾಗ್ಯದೆ. ಮುಂದೆ ಅವುಂದೆ ರಾಜ್ಯಭಾರ. ಅವುರು ಆವರಿಸಿಕೊಂಡ ಜಾಗದಲ್ಲಿ ನೀವು ಅಪ್ಪಮಕ್ಕಳಿಗೇನೂ ಕೆಲಸಿಲ್ಲ. ನಿಮ್ಮ ಈ ನಿವೃತ್ತಿ ನಂತರ ನಿಮ್ಮ ಮಗ ನಿಮ್ಮ ಜೊತೆ ಬಂದು ಸೇರಿಕಳ್ತನೆ. ನೀವು ಮೂಲೆಗುಂಪಾಗದ್ರಲ್ಲಿ ಈಗಾಗ್ಲೆ ಮೂಲೆಗುಂಪಾಗಿರೊ ಎಡೂರಪ್ಪನ ಕೈವಾಡನೂ ಇದೆ.”

“ಅವುರ ಕೈವಾಡ ಯಾಕಿರತ್ರಿ?”

“ಸಾರ್ ನಿಜ ಹೇಳಿ. ನಿಮಗೆ ಎಡೂರಪ್ಪ ಅಂದ್ರೆ ಅಷ್ಟಕಷ್ಟೆ. ಇನ್ನ ರಾಘವೇಂದ್ರನ ಗೆಲುವು ನಿಮಗೆ ಬೇಕಿರಲಿಲ್ಲ. ಅಂಗೇನೆ ಆ ವಿಜಯೇಂದ್ರನ ಅಭ್ಯುದಯ ನಿಮಗೆ ಬೇಕಿಲ್ಲ, ಇದು ಗೊತ್ತಾಗಿ ಎಡೂರಪ್ಪ ನಮ್ಮ ಕತೆ ಮುಗದರಷ್ಟೆ ಹೋಯ್ತು, ಈಶ್ವರಪ್ಪನ ಕತೆನೂ ಮುಗಿಲಿ ಅಂತ ಕಾಯ್ತಿದ್ರು ಸಾರ್.”

“ಅದು ನನಿಗೂ ಗೊತ್ತು ಕಂಡ್ರಿ. ನಾನೇನು ಅಷ್ಟು ದಡ್ಡ ಅಲ್ಲ.”

“ಆದ್ರು ನೀವು ಅಸಹಾಯಕರಾಗಿ ಅಂತ್ಯವಾಗ್ತಿರಿ ಸಾರ್.”

“ಹ್ಯಂಗ್ರೀ?”

“ಎಡೂರಪ್ಪನ ಮಕ್ಕಳು ಎಂ.ಪಿ ಎಂ.ಎಲ್.ಎ ಆಯ್ತರೆ. ಸಿಟ್ಟು ಸ್ವಾಭಿಮಾನ ತೋರಿದ ಶೆಟ್ಟರ್ ಎಂ.ಎಲ್.ಎ ಆಯ್ತರೆ. ನೀವು ಅಪ್ಪಾ ಮಗ ಏನೂ ಆಗಲವಲ್ಲ ಸಾ.”

“ಆಗದಿದ್ರೆ ಕತ್ತೆ ಬಾಲ, ಸಂಘದ ಕಾರ್ಯಕರ್ತರಾಗಿರ್ತಿವಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...