Homeಅಂಕಣಗಳುಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ತೆಗೆದುಕೊಂಡ ಸಿದ್ದು ಅವರ ಲಕ್ಕಿನಲ್ಲಿ ಎಡೂರಪ್ಪನವರ ಪಾಲು ಪ್ರಧಾನವಾಗಿದೆಯಂತಲ್ಲಾ. ಮೊದಲು ಸಿದ್ದು ಮುಖ್ಯಮಂತ್ರಿಯಾಗಬೇಕಾದರೆ, ಎಡೂರಪ್ಪ ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಮಾಡಿ ಚುನಾವಣೆಗಿಳಿದು ಬಿಜೆಪಿಯನ್ನು ಕೇವಲ ನಲವತ್ತು ಸೀಟಿಗೆ ಇಳಿಸಿದ್ದು ಕಾರಣವಾದರೆ, ಈ ಸಾರ್ತಿಗೆ, ದಾರಿ ಇನ್ನು ಇರುವಾಗಲೇ ಮಾರ್ಗಮಧ್ಯದಲ್ಲಿ ಯಡ್ಡಿಯವರನ್ನು ಇಳಿಸಿ ಕಣ್ಣೀರು ತರಿಸಿದ್ದರ ಜೊತೆಗೆ, ಬಿಜೆಪಿಯಲ್ಲಿದ್ದರೂ ಬಾಯಿ ಸ್ವಚ್ಛವಾಗಿಟ್ಟುಕೊಂಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮಾಡಿದ ಅವಮಾನವೂ ಕಾರಣವಾಗಿದೆಯಂತಲ್ಲಾ. ಆದರೆ ಬುದ್ಧಿವಂತ ಸಿದ್ದು ಅವರು ಯಡ್ಡಿಯವರ ದೆಸೆಯಿಂದ ತಮ್ಮ ದೆಸೆ ಕುದುರಿದ್ದದನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಮನದೊಳಗೇ ಒಂದು ಕೃತಜ್ಞತೆಯಿದೆ. ಅದೇ ಕಾರಣಕ್ಕೆ ಏನೋ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನಗೌಡನಿಗೆ ಟಿಕೆಟ್ ತಪ್ಪಿಸಿ ಗೋಣಿಮಾಲತೇಶರನ್ನ ಕ್ಯಾಂಡಿಡೇಟ್ ಮಾಡಿ, ಎಡೂರಪ್ಪನವರ ಮಗನಿಗೆ ಸಹಾಯ ಮಾಡಿದ್ದಾರೆಂದು ಜನರು ಹೇಳುತ್ತಿದ್ದಾರಂತಲ್ಲಾ. ಇದರಲ್ಲಿ ಡಿ.ಕೆ.ಶಿ ಕೈವಾಡವನ್ನು ಅಲ್ಲಗಳೆಯಲಾಗುತ್ತಿಲ್ಲವಲ್ಲಾ, ಥೂತ್ತೇರಿ.

*******

ಪಂಚರತ್ನ ಮುಂದಿಟ್ಟುಕೊಂಡು ಇಡೀ ಕರ್ನಾಟಕವನ್ನು ಸುತ್ತಿ ಬಂದ ಕುಮಾರಣ್ಣನ ಪಾರ್ಟಿ ವಿಧಾನಸಭೆಯಲ್ಲಿ ನಿಗದಿತ ಸಂಖ್ಯೆಯ ಮಾನ್ಯತೆ ಕಳೆದುಕೊಂಡು ತನ್ನ ಕುಮಾರಣ್ಣನ ಪಕ್ಷ ವಿಸರ್ಜನೆ ಘೋಷಣೆಗೆ ಕಾಯುತ್ತಿದೆಯಂತಲ್ಲಾ. ಹಾಗೇ ನೋಡಿದರೆ ಬಿಜೆಪಿಯಂತೆ ದಳ ಕೂಡ ಎಂದೂ ಮೆಜಾರಿಟಿ ಪಡೆಯದ ಪಾರ್ಟಿ; ಇದು ಗೊತ್ತಿದ್ದರಿಂದಲೇ ಕುಮಾರಣ್ಣ ನನ್ನ ಪಾರ್ಟಿಗೆ ಬಹುಮತ ಬರದಿದ್ದರೆ ವಿಸರ್ಜಿಸುತ್ತೇನೆ ಎಂದಿದ್ದು ಸಾಮಾಜಿಕ ಮಾಧ್ಯಮಗಳ ಲ್ಲಿ ಹರಿದಾಡಿತ್ತು. ಹಾಗೆ ನೋಡಿದರೆ ಕುಮಾರಣ್ಣನ ಪಾರ್ಟಿ ತನಗೆ ತಾನೇ ವಿಸರ್ಜಿಸಿಕೊಳ್ಳುತ್ತ ಹೊರಟು ಶಾನೆ ವರ್ಷವಾಯ್ತು. ಮೊದಲಿಗೆ ಜಿ.ಟಿ.ದೇವೇಗೌಡರು ಹೊರನಡೆದು ಕಾಂಗ್ರೆಸ್ ಮನೆಯ ಬಾಗಿಲಿಗೆ ಹೋಗಿ ಮತ್ತೆ ವಾಪಸ್ ಬಂದರು; ನಂತರ ಹಲವಾರು ಜನ ಹೊರನಡೆದೇಬಿಟ್ಟರು. ಪಾರ್ಟಿ ಅಧ್ಯಕ್ಷನಾದವನು ಜವಾಬ್ದಾರಿಯಿಂದ ನಡೆದುಕೊಂಡು, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಸಮಾಧಾನಗೊಂಡವರನ್ನ ಸಾಂತ್ವನಗೊಳಿಸುತ್ತ ಸಣ್ಣತನಗಳನ್ನು ಮೀರುತ್ತ ಪಾರ್ಟಿ ಕಾರ್ಯಕರ್ತರ ರಕ್ಷಕನಾಗಿರಬೇಕು. ಮುಖಂಡನಲ್ಲಿ ಈ ಗುಣಗಳಿಲ್ಲದಿದ್ದರೆ ಹಿಂಬಾಲಕರು ಒಂದೊಂದು ಹಂತದಲ್ಲಿ ಖಾಲಿಯಾಗುತ್ತಾರೆ. ಕುಮಾರಣ್ಣನ ಪಂಚರತ್ನಕ್ಕಿಂತ ಪಾರ್ಟಿ ಮುಖಂಡರು ಮುಖ್ಯವಾಗಬೇಕಿತ್ತು. ಐದು ವರ್ಷ ದುರಾಡಳಿತ ನಡೆಸಿದವರನ್ನು ಬಿಟ್ಟು ಕಾಂಗ್ರೆಸ್ ಟೀಕಿಸುವುದು ಮುಖ್ಯವಾಗಬಾರದಿತ್ತು. ನಿಜಕ್ಕೂ ದಳದಂತಹ ಪಾರ್ಟಿ ಇರಬೇಕು. ಅದು ಇದ್ದು ಬಿಜೆಪಿಯನ್ನ ಕಾಂಗ್ರೆಸ್ಸನ್ನ ನಿಯಂತ್ರಿಸಬೇಕು. ಆ ಎರಡೂ ಪಾರ್ಟಿಗಳಿಗಿಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆಯಲ್ಲಾ, ಇದು ಸಾಧ್ಯವೇ ಥೂತ್ತೇರಿ.

*****

ಕರ್ನಾಟಕದ ಜನಸ್ತೋಮಕ್ಕೆ ಬೇಕಿದ್ದ ಒಂದು ಚುನಾವಣಾ ಸೋಲು ಕಡೆಗೂ ಸಂಭವಿಸಿ ಜನ ನಿಟ್ಟುಸಿರುಬಿಟ್ಟರಂತಲ್ಲಾ. ಜನಕ್ಕೆ ಬೇಕಿದ್ದ ಆ ಸೋತ ವ್ಯಕ್ತಿ ಸಿ.ಟಿ ರವಿ. ತನ್ನ ಸೋಲನ್ನು ಇನ್ನೂ ನಂಬದ ಸಿ.ಟಿ ರವಿಯವರನ್ನು ಮಾತನಾಡಿಸಿ ಒಂದಿಷ್ಟು ಮನರಂಜನೆ ತೆಗೆದುಕೊಳ್ಳಲು ಫೋನ್ ಮಾಡಿದರೆ, ರಿಂಗಾಯ್ತು. ರಿಂಗ್‌ಟೋನ್: ’ನಮಸ್ತೆ ಸದಾ ವತ್ಸಲೇ ಮಾತೃಭೂಮಿ..’.

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಅಂದ್ರೆ ಯಾರ್ರಿ?”

“ಇದೇನ್ ಸಾರ್ ಹಿಂಗ್ ಕೇಳ್ತಿರಿ? ನೀವೆ ಒಂದು ಸತಿ ಕಲಾಮಂದಿದರಲ್ಲಿ ಸನ್ಮಾನ ಮಾಡಿದ್ರಿ..”

“ಆಗ್ಲೆ ಇಪ್ಪತ್ತು ವರ್ಷ ಆಯ್ತಲ್ರೀ?”

“ಹೌದು ಸಾರ್, ಆಗ ನೀವು ವಳ್ಳೆಯವರಾಗಿದ್ರಿ.”

“ಆಗ ಒಳ್ಳೆಯವನಾಗಿದ್ದೆ ಅಂದ್ರೆ ಈಗ ಕೆಟ್ಟೊಗಿದ್ದಿನಾ?”

“ಹೌದು ಸಾರ್, ನೀವು ಈಗ ಒಳ್ಳೆಯವರಾಗಿದ್ರೆ, ಚಿಕ್ಕಮಗಳೂರಿನ ನೀರಿನ ವಿಷಯ ಮಾತಾಡಿ, ಕರಗಡದ ಸಮಸ್ಯೆ ಬಗೆಹರಸತಿದ್ರಿ. ಅದುಬಿಟ್ಟು ಬಾಬಾ ಬುಡನ್‌ಗಿರಿ ಹಿಡಕಂಡ್ರಿ.”

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

“ಬಾಬಾ ಬುಡನ್‌ಗಿರಿ ಹಿಡಕೊಂಡು ದತ್ತಪೀಠ ಮಾಡಿದ್ಕೆ ನಾನು ನಾಲ್ಕು ಸಾರಿ ಗೆದ್ದದ್ದು.”

“ಈಗ್ಯಾಕೆ ಸೋತ್ರಿ ಸಾರ್?”

“ನಮ್ಮವರೆ ವಿಶ್ವಾಸ ದ್ರೋಹ ಮಾಡಿದ್ರು?”

“ನೀವು ವಿಶ್ವಾಸ ಕಳಕೊಂಡ ಮ್ಯಾಲೆ ಅವುರು ದ್ರೋಹ ಮಾಡದು ಸಹಜ ಅಲ್ಲವಾ?”

“ನಾನು ಯಾರ ವಿಶ್ವಾಸವನ್ನು ಕಳಕೊಂಡಿಲ್ಲ. ಸಮರ್ಥ ರೀತಿಲಿ ಆಡಳಿತ ಮಾಡಿದ್ದಿವಿ. ನಮ್ಮದು ಒಳ್ಳೆ ಸರಕಾರ ಗೊತ್ತ?”

“ನನಿಗಾಗೊ ಆಶ್ಚರ್ಯ ಯಾವುದು ಅಂದ್ರೆ ಸಾರ್.. ನಿಮ್ಮ ಸರಕಾರ ಸಮಾಜಘಾತುಕ ಶಕ್ತಿತರ ಕೆಲಸ ಮಾಡ್ತು. ಅದೆಲ್ಲ ನಿಮಗೆ ಒಳ್ಳೆದಾಗಿ ಕಾಣ್ತದಲ್ಲಾ ಅದೇ ದುರಂತ. ಒಂದು ತಪ್ಪು ತಪ್ಪಾಗಿ ಕಾಣದೆ ನಿಮಗೆಲ್ಲ ಸರಿಯಾಗಿ ಕಾಣ್ತದೆ ಅಂದ್ರೆ ಒಂದು ಪಾರ್ಟಿ ಜನಕ್ಕೆ ಏನೋ ಆಗಿ ಕಾಣ್ಸಿದೆ ಅನ್ಸುತ್ತೆ ಸಾರ್.”

“ನಮಗೇನೂ ಆಗಿಲ್ಲ, ನಿಮ್ಮ ಪೂರ್ವಗ್ರಹನ ಸರಿಮಾಡಿಕಳಿ.”

“ನಿಮ್ಮ ಬಗ್ಗೆ ಯಾವ ಪೂರ್ವಗ್ರಹದ ಅಗತ್ಯ ಇಲ್ಲ. ಸಾರ್ ನಿಮ್ಮ ಪಾರ್ಟಿ ಕೃತ್ಯಗಳೇ ಅಂಗಿದ್ದೊ.”

“ನಾವು ಕಾಂಗ್ರೆಸ್ಸಿಗರಿಗಿಂತ ಒಳ್ಳೆ ಆಡಳಿತ ಕೊಟ್ಟಿದ್ದಿವಿ.”

“ನಿಜ ಸಾರ್, ಆ ಕಾಂಗ್ರೆಸ್‌ನವು ಎಂದೂ ನಲವತ್ತು ಪರಸೆಂಟ್ ತಗೊಂಡಿರಲಿಲ್ಲ, ಆ ಕಾರಣಕ್ಕೆ ಯಾವ ಮಂತ್ರಿನೂ ರಾಜಿನಾಮೆ ಕೊಟ್ಟು ಟಿಕೆಟ್ ಇಲ್ದೆ ಮನಿಗೋಗಿರಲಿಲ್ಲ. ಸಿಕ್ಕಿದ್ದೆ ಅವಕಾಶ ಅಂತ ಪಠ್ಯಪುಸ್ತಕ ತಿದ್ದಿ ಪುರೋಹಿತರ ಅಜೆಂಡ ಸೇರಿಸಿರಲಿಲ್ಲ. ಕುವೆಂಪುಗೆ ಅವಮಾನ ಮಾಡಿದಾಗ್ಲು ನೀವು ಸುಮ್ಮನಿದ್ರಿ. ಆಡತಯಿದ್ದ ನಾಟಕ ನಿಲ್ಲಿಸಿದ್ರಿ, ಟಿಪ್ಪುವನ್ನ ವಿಕೃತವಾಗಿ ಚಿತ್ರಿಸಿ ನಾಟಕ ಆಡಿದ್ರಿ, ಅದನ್ನ ಟೀಕೆ ಮಾಡಿದ ಸಿದ್ದರಾಮಯ್ಯನವರನ್ನ “ಸಿದ್ರಾಮುಲ್ಲಖಾನ್” ಅಂತ ಕರದ್ರಿ. ಮಹಿಳೆಯರ ಬಗ್ಗೆ ನಿಮ್ಮಲ್ಲಿ ಎಂಥ ಬಾವುನೆ ಅದೆ ಅನ್ನದ ಹೇಳೋದೆ ಬೇಕಿಲ್ಲ. ಸೋಮಣ್ಣ ಪಾಪ ಬಡ ಹೆಂಗಸಿಗೆ ಸಾರ್ವಜನಿಕವಾಗಿ ಹೊಡೆದು, ಆಮೇಲೆ ಆ ಹೆಂಗಸಿಗೆ ದುಡ್ಡುಕೊಟ್ಟರು. ಸೋಮಣ್ಣ ಹೊಡಿಲಿಲ್ಲ, ತಮಾಸಿಗೆ ಭುಜ ತಟ್ಟಿದ್ದು ಅಂತ ಹೇಳಿಸಿದ್ರಿ. ನಿಮ್ಮ ಇಡೀ ಪಾರ್ಟಿ ಜನ ಒಂದೇ ಒಂದು ಒಳ್ಳೆ ಮಾತಾಡಲಿಲ್ಲ. ನಿಮ್ಮ ಸರಕಾರ ಒಂದೇ ಒಂದು ಜನ ಮೆಚ್ಚುವ ಕೆಲಸ ಮಾಡಲಿಲ್ಲ. ಜಾತಿ ಜಗಳ ಮಾಡಿಸಿದ್ರಿ. ಮುಸಲ್ಮಾನರ ಮೇಲೆ ಬಿದ್ದು ಗಲಭೆ ಮಾಡಿಸಿದ್ರಿ. ಸುಳ್ಳು ಕೇಸಾಕ್ಸಿದ್ರಿ. ಇಡೀ ನಾಡೆ ಒಂದು ಅವ್ಯಕ್ತ ಭಯದಲ್ಲಿ ಕ್ಷೆಭೆಗೊಳಗಾಗಿತ್ತು. ನಿಮ್ಮಂಥ ಜವಾಬ್ದಾರಿಯಿರೊ ಯುವ ನಾಯಕರು ಪುರೋಹಿತಶಾಹಿಗಳ ಗುಲಾಮರಾಗಿದ್ರಿ. ಬಹಳ ವಿಶಾಲವಾದ ಮನಸ್ಸಿನ ಪರಂಪರೆಯಿಂದ ಬಂದ ನಿಮಗೆ ಆರೆಸ್ಸೆಸ್ ಆಶ್ರಯದ ಅಗತ್ಯ ಇರಲಿಲ್ಲ. ಚಿಕ್ಕಮಗಳೂರು ಬ್ರಿಟಿಷರು ಕೂಡ ಮೆಚ್ಚಿದ ಸುಂದರ ನಾಡು. ಅಲ್ಲಿ ಇಂಗ್ಲೆಂಡಿನಿಂದ, ಜರ್ಮನಿಯಿಂದ ಬಂದು ತೋಟ ಮಾಡಿದೋರವುರೆ, ಮದ್ರಾಸಿನಿಂದ ಬಂದು ತೋಟ ಮಾಡಿದೋರವುರೆ. ಹಿಂಗೆ ಜಗತ್ತಿಗೇ ತೆರೆಕೊಂಡ ಚಿಕ್ಕಮಗಳೂರಿಗೆ ಪುರೋಹಿತಶಾಹಿ ತರಹ ಮಾತನಾಡೊ ರಾಜಕಾರಣಿ ಬೇಕಿಲ್ಲ ಅಂತ ಜನಕ್ಕೆ ಅನ್ನಿಸಿ ನಿಮ್ಮನ್ನ ಸೋಲಿಸಿದ್ರು ಸಾರ್. ನಿಮ್ಮ ಸೋಲಿನ ಕಾರಣಗಳು ಯಾವ ಕಾರಣಕ್ಕೂ ನಿಮಗೆ ಹೊಳಿಯಲ್ಲ. ಯಾಕೆ ಅಂದ್ರೆ ನಿಮ್ಮ ಕಣ್ಣಿಗೆ ಪೊರೆಯಾಗಿವೆ. ನೀವು ಇನ್ನೊಂದು ದಾಖಲೆ ಮಾಡಿದ್ದೀರಿ ಸಾರ್. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕುಳಿ ವಿಠ್ಠಲ ಹೆಗಡೆಯವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡ್ತು. ಆತ ಸಾಮಾನ್ಯ ವ್ಯಕ್ತಿಯೇನಲ್ಲ. ಆತ ಬರದಿರೊ ’ಮಂಗನಬ್ಯಾಟೆ’ಗೆ ಅಕಾಡೆಮಿ ಅವಾರ್ಡು ಬಂದಿದೆ. ಹೆಗಡೆ ನಿಮಗಾಗಲ್ಲ ಅಂತ ಹೇಳಿ ಸಾಹಿತ್ಯ ಸಮ್ಮೇಳನ ನ್ಯಡಿದಂಗೆ ಮಾಡಿದ್ರಿ. ಸಮ್ಮೇಳನದ ಜಾಗಕ್ಕೆ ಭಜರಂಗಿಗಳು ಬಂದು ಬಾಯಿ ಹರಕೊಂಡು ಸಮ್ಮೇಳನ ನಿಲ್ಲಿಸಿದ್ರು. ಇದು ಇತಿಹಾಸದಲ್ಲಿ ದಾಖಲಾದ ಅಭಿವ್ಯಕ್ತಿ ಸ್ವಾತಂತ್ರ ಹರಣದ ಘಟನೆ. ಕನ್ನಡ ಸಾಹಿತ್ಯಕ್ಕೆ ನೀವು ಮಾಡಿದ ಅವಮಾನ. ಭುವನೇಶ್ವರಿಗೆ ಮಾಡಿದ ದ್ರೋಹ. ದೂರದ ಊರುಗಳಿಂದ ಬಂದ ಸಾಹಿತಿಗಳು ನಿಮ್ಮನ್ನ ನಿಂದಿಸುತ್ತಾ ಇದೊಂದು ಅನಾಗರಿಕ ನಡೆ, ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ, ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರಿಗೆ ಮಾಡಿದ ಅವಮಾನ, ಇದೇ ಜಿಲ್ಲೆಯ ಹಿರೇಕೂಡಿಗೆಯಲ್ಲಿ ಹುಟ್ಟಿದ ಕುವೆಂಪುಗೆ ಮಾಡಿದ ಅವಮಾನ ಅಂತ ಬೈಕಂಡೋದ್ರು ಸಾರ್. ಮಾತಾಡಿ ಸಾರ್ ಹೇಳಿ ಏನಾರ. ಹಲೋ. ಹಲೋ. ಹಲೋ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...