Homeಅಂಕಣಗಳುಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ತೆಗೆದುಕೊಂಡ ಸಿದ್ದು ಅವರ ಲಕ್ಕಿನಲ್ಲಿ ಎಡೂರಪ್ಪನವರ ಪಾಲು ಪ್ರಧಾನವಾಗಿದೆಯಂತಲ್ಲಾ. ಮೊದಲು ಸಿದ್ದು ಮುಖ್ಯಮಂತ್ರಿಯಾಗಬೇಕಾದರೆ, ಎಡೂರಪ್ಪ ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಮಾಡಿ ಚುನಾವಣೆಗಿಳಿದು ಬಿಜೆಪಿಯನ್ನು ಕೇವಲ ನಲವತ್ತು ಸೀಟಿಗೆ ಇಳಿಸಿದ್ದು ಕಾರಣವಾದರೆ, ಈ ಸಾರ್ತಿಗೆ, ದಾರಿ ಇನ್ನು ಇರುವಾಗಲೇ ಮಾರ್ಗಮಧ್ಯದಲ್ಲಿ ಯಡ್ಡಿಯವರನ್ನು ಇಳಿಸಿ ಕಣ್ಣೀರು ತರಿಸಿದ್ದರ ಜೊತೆಗೆ, ಬಿಜೆಪಿಯಲ್ಲಿದ್ದರೂ ಬಾಯಿ ಸ್ವಚ್ಛವಾಗಿಟ್ಟುಕೊಂಡಿದ್ದ ಜಗದೀಶ್ ಶೆಟ್ಟರ್ ಅವರಿಗೆ ಮಾಡಿದ ಅವಮಾನವೂ ಕಾರಣವಾಗಿದೆಯಂತಲ್ಲಾ. ಆದರೆ ಬುದ್ಧಿವಂತ ಸಿದ್ದು ಅವರು ಯಡ್ಡಿಯವರ ದೆಸೆಯಿಂದ ತಮ್ಮ ದೆಸೆ ಕುದುರಿದ್ದದನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಮನದೊಳಗೇ ಒಂದು ಕೃತಜ್ಞತೆಯಿದೆ. ಅದೇ ಕಾರಣಕ್ಕೆ ಏನೋ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನಗೌಡನಿಗೆ ಟಿಕೆಟ್ ತಪ್ಪಿಸಿ ಗೋಣಿಮಾಲತೇಶರನ್ನ ಕ್ಯಾಂಡಿಡೇಟ್ ಮಾಡಿ, ಎಡೂರಪ್ಪನವರ ಮಗನಿಗೆ ಸಹಾಯ ಮಾಡಿದ್ದಾರೆಂದು ಜನರು ಹೇಳುತ್ತಿದ್ದಾರಂತಲ್ಲಾ. ಇದರಲ್ಲಿ ಡಿ.ಕೆ.ಶಿ ಕೈವಾಡವನ್ನು ಅಲ್ಲಗಳೆಯಲಾಗುತ್ತಿಲ್ಲವಲ್ಲಾ, ಥೂತ್ತೇರಿ.

*******

ಪಂಚರತ್ನ ಮುಂದಿಟ್ಟುಕೊಂಡು ಇಡೀ ಕರ್ನಾಟಕವನ್ನು ಸುತ್ತಿ ಬಂದ ಕುಮಾರಣ್ಣನ ಪಾರ್ಟಿ ವಿಧಾನಸಭೆಯಲ್ಲಿ ನಿಗದಿತ ಸಂಖ್ಯೆಯ ಮಾನ್ಯತೆ ಕಳೆದುಕೊಂಡು ತನ್ನ ಕುಮಾರಣ್ಣನ ಪಕ್ಷ ವಿಸರ್ಜನೆ ಘೋಷಣೆಗೆ ಕಾಯುತ್ತಿದೆಯಂತಲ್ಲಾ. ಹಾಗೇ ನೋಡಿದರೆ ಬಿಜೆಪಿಯಂತೆ ದಳ ಕೂಡ ಎಂದೂ ಮೆಜಾರಿಟಿ ಪಡೆಯದ ಪಾರ್ಟಿ; ಇದು ಗೊತ್ತಿದ್ದರಿಂದಲೇ ಕುಮಾರಣ್ಣ ನನ್ನ ಪಾರ್ಟಿಗೆ ಬಹುಮತ ಬರದಿದ್ದರೆ ವಿಸರ್ಜಿಸುತ್ತೇನೆ ಎಂದಿದ್ದು ಸಾಮಾಜಿಕ ಮಾಧ್ಯಮಗಳ ಲ್ಲಿ ಹರಿದಾಡಿತ್ತು. ಹಾಗೆ ನೋಡಿದರೆ ಕುಮಾರಣ್ಣನ ಪಾರ್ಟಿ ತನಗೆ ತಾನೇ ವಿಸರ್ಜಿಸಿಕೊಳ್ಳುತ್ತ ಹೊರಟು ಶಾನೆ ವರ್ಷವಾಯ್ತು. ಮೊದಲಿಗೆ ಜಿ.ಟಿ.ದೇವೇಗೌಡರು ಹೊರನಡೆದು ಕಾಂಗ್ರೆಸ್ ಮನೆಯ ಬಾಗಿಲಿಗೆ ಹೋಗಿ ಮತ್ತೆ ವಾಪಸ್ ಬಂದರು; ನಂತರ ಹಲವಾರು ಜನ ಹೊರನಡೆದೇಬಿಟ್ಟರು. ಪಾರ್ಟಿ ಅಧ್ಯಕ್ಷನಾದವನು ಜವಾಬ್ದಾರಿಯಿಂದ ನಡೆದುಕೊಂಡು, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಅಸಮಾಧಾನಗೊಂಡವರನ್ನ ಸಾಂತ್ವನಗೊಳಿಸುತ್ತ ಸಣ್ಣತನಗಳನ್ನು ಮೀರುತ್ತ ಪಾರ್ಟಿ ಕಾರ್ಯಕರ್ತರ ರಕ್ಷಕನಾಗಿರಬೇಕು. ಮುಖಂಡನಲ್ಲಿ ಈ ಗುಣಗಳಿಲ್ಲದಿದ್ದರೆ ಹಿಂಬಾಲಕರು ಒಂದೊಂದು ಹಂತದಲ್ಲಿ ಖಾಲಿಯಾಗುತ್ತಾರೆ. ಕುಮಾರಣ್ಣನ ಪಂಚರತ್ನಕ್ಕಿಂತ ಪಾರ್ಟಿ ಮುಖಂಡರು ಮುಖ್ಯವಾಗಬೇಕಿತ್ತು. ಐದು ವರ್ಷ ದುರಾಡಳಿತ ನಡೆಸಿದವರನ್ನು ಬಿಟ್ಟು ಕಾಂಗ್ರೆಸ್ ಟೀಕಿಸುವುದು ಮುಖ್ಯವಾಗಬಾರದಿತ್ತು. ನಿಜಕ್ಕೂ ದಳದಂತಹ ಪಾರ್ಟಿ ಇರಬೇಕು. ಅದು ಇದ್ದು ಬಿಜೆಪಿಯನ್ನ ಕಾಂಗ್ರೆಸ್ಸನ್ನ ನಿಯಂತ್ರಿಸಬೇಕು. ಆ ಎರಡೂ ಪಾರ್ಟಿಗಳಿಗಿಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆಯಲ್ಲಾ, ಇದು ಸಾಧ್ಯವೇ ಥೂತ್ತೇರಿ.

*****

ಕರ್ನಾಟಕದ ಜನಸ್ತೋಮಕ್ಕೆ ಬೇಕಿದ್ದ ಒಂದು ಚುನಾವಣಾ ಸೋಲು ಕಡೆಗೂ ಸಂಭವಿಸಿ ಜನ ನಿಟ್ಟುಸಿರುಬಿಟ್ಟರಂತಲ್ಲಾ. ಜನಕ್ಕೆ ಬೇಕಿದ್ದ ಆ ಸೋತ ವ್ಯಕ್ತಿ ಸಿ.ಟಿ ರವಿ. ತನ್ನ ಸೋಲನ್ನು ಇನ್ನೂ ನಂಬದ ಸಿ.ಟಿ ರವಿಯವರನ್ನು ಮಾತನಾಡಿಸಿ ಒಂದಿಷ್ಟು ಮನರಂಜನೆ ತೆಗೆದುಕೊಳ್ಳಲು ಫೋನ್ ಮಾಡಿದರೆ, ರಿಂಗಾಯ್ತು. ರಿಂಗ್‌ಟೋನ್: ’ನಮಸ್ತೆ ಸದಾ ವತ್ಸಲೇ ಮಾತೃಭೂಮಿ..’.

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಯಾಹೂ ಅಂದ್ರೆ ಯಾರ್ರಿ?”

“ಇದೇನ್ ಸಾರ್ ಹಿಂಗ್ ಕೇಳ್ತಿರಿ? ನೀವೆ ಒಂದು ಸತಿ ಕಲಾಮಂದಿದರಲ್ಲಿ ಸನ್ಮಾನ ಮಾಡಿದ್ರಿ..”

“ಆಗ್ಲೆ ಇಪ್ಪತ್ತು ವರ್ಷ ಆಯ್ತಲ್ರೀ?”

“ಹೌದು ಸಾರ್, ಆಗ ನೀವು ವಳ್ಳೆಯವರಾಗಿದ್ರಿ.”

“ಆಗ ಒಳ್ಳೆಯವನಾಗಿದ್ದೆ ಅಂದ್ರೆ ಈಗ ಕೆಟ್ಟೊಗಿದ್ದಿನಾ?”

“ಹೌದು ಸಾರ್, ನೀವು ಈಗ ಒಳ್ಳೆಯವರಾಗಿದ್ರೆ, ಚಿಕ್ಕಮಗಳೂರಿನ ನೀರಿನ ವಿಷಯ ಮಾತಾಡಿ, ಕರಗಡದ ಸಮಸ್ಯೆ ಬಗೆಹರಸತಿದ್ರಿ. ಅದುಬಿಟ್ಟು ಬಾಬಾ ಬುಡನ್‌ಗಿರಿ ಹಿಡಕಂಡ್ರಿ.”

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

“ಬಾಬಾ ಬುಡನ್‌ಗಿರಿ ಹಿಡಕೊಂಡು ದತ್ತಪೀಠ ಮಾಡಿದ್ಕೆ ನಾನು ನಾಲ್ಕು ಸಾರಿ ಗೆದ್ದದ್ದು.”

“ಈಗ್ಯಾಕೆ ಸೋತ್ರಿ ಸಾರ್?”

“ನಮ್ಮವರೆ ವಿಶ್ವಾಸ ದ್ರೋಹ ಮಾಡಿದ್ರು?”

“ನೀವು ವಿಶ್ವಾಸ ಕಳಕೊಂಡ ಮ್ಯಾಲೆ ಅವುರು ದ್ರೋಹ ಮಾಡದು ಸಹಜ ಅಲ್ಲವಾ?”

“ನಾನು ಯಾರ ವಿಶ್ವಾಸವನ್ನು ಕಳಕೊಂಡಿಲ್ಲ. ಸಮರ್ಥ ರೀತಿಲಿ ಆಡಳಿತ ಮಾಡಿದ್ದಿವಿ. ನಮ್ಮದು ಒಳ್ಳೆ ಸರಕಾರ ಗೊತ್ತ?”

“ನನಿಗಾಗೊ ಆಶ್ಚರ್ಯ ಯಾವುದು ಅಂದ್ರೆ ಸಾರ್.. ನಿಮ್ಮ ಸರಕಾರ ಸಮಾಜಘಾತುಕ ಶಕ್ತಿತರ ಕೆಲಸ ಮಾಡ್ತು. ಅದೆಲ್ಲ ನಿಮಗೆ ಒಳ್ಳೆದಾಗಿ ಕಾಣ್ತದಲ್ಲಾ ಅದೇ ದುರಂತ. ಒಂದು ತಪ್ಪು ತಪ್ಪಾಗಿ ಕಾಣದೆ ನಿಮಗೆಲ್ಲ ಸರಿಯಾಗಿ ಕಾಣ್ತದೆ ಅಂದ್ರೆ ಒಂದು ಪಾರ್ಟಿ ಜನಕ್ಕೆ ಏನೋ ಆಗಿ ಕಾಣ್ಸಿದೆ ಅನ್ಸುತ್ತೆ ಸಾರ್.”

“ನಮಗೇನೂ ಆಗಿಲ್ಲ, ನಿಮ್ಮ ಪೂರ್ವಗ್ರಹನ ಸರಿಮಾಡಿಕಳಿ.”

“ನಿಮ್ಮ ಬಗ್ಗೆ ಯಾವ ಪೂರ್ವಗ್ರಹದ ಅಗತ್ಯ ಇಲ್ಲ. ಸಾರ್ ನಿಮ್ಮ ಪಾರ್ಟಿ ಕೃತ್ಯಗಳೇ ಅಂಗಿದ್ದೊ.”

“ನಾವು ಕಾಂಗ್ರೆಸ್ಸಿಗರಿಗಿಂತ ಒಳ್ಳೆ ಆಡಳಿತ ಕೊಟ್ಟಿದ್ದಿವಿ.”

“ನಿಜ ಸಾರ್, ಆ ಕಾಂಗ್ರೆಸ್‌ನವು ಎಂದೂ ನಲವತ್ತು ಪರಸೆಂಟ್ ತಗೊಂಡಿರಲಿಲ್ಲ, ಆ ಕಾರಣಕ್ಕೆ ಯಾವ ಮಂತ್ರಿನೂ ರಾಜಿನಾಮೆ ಕೊಟ್ಟು ಟಿಕೆಟ್ ಇಲ್ದೆ ಮನಿಗೋಗಿರಲಿಲ್ಲ. ಸಿಕ್ಕಿದ್ದೆ ಅವಕಾಶ ಅಂತ ಪಠ್ಯಪುಸ್ತಕ ತಿದ್ದಿ ಪುರೋಹಿತರ ಅಜೆಂಡ ಸೇರಿಸಿರಲಿಲ್ಲ. ಕುವೆಂಪುಗೆ ಅವಮಾನ ಮಾಡಿದಾಗ್ಲು ನೀವು ಸುಮ್ಮನಿದ್ರಿ. ಆಡತಯಿದ್ದ ನಾಟಕ ನಿಲ್ಲಿಸಿದ್ರಿ, ಟಿಪ್ಪುವನ್ನ ವಿಕೃತವಾಗಿ ಚಿತ್ರಿಸಿ ನಾಟಕ ಆಡಿದ್ರಿ, ಅದನ್ನ ಟೀಕೆ ಮಾಡಿದ ಸಿದ್ದರಾಮಯ್ಯನವರನ್ನ “ಸಿದ್ರಾಮುಲ್ಲಖಾನ್” ಅಂತ ಕರದ್ರಿ. ಮಹಿಳೆಯರ ಬಗ್ಗೆ ನಿಮ್ಮಲ್ಲಿ ಎಂಥ ಬಾವುನೆ ಅದೆ ಅನ್ನದ ಹೇಳೋದೆ ಬೇಕಿಲ್ಲ. ಸೋಮಣ್ಣ ಪಾಪ ಬಡ ಹೆಂಗಸಿಗೆ ಸಾರ್ವಜನಿಕವಾಗಿ ಹೊಡೆದು, ಆಮೇಲೆ ಆ ಹೆಂಗಸಿಗೆ ದುಡ್ಡುಕೊಟ್ಟರು. ಸೋಮಣ್ಣ ಹೊಡಿಲಿಲ್ಲ, ತಮಾಸಿಗೆ ಭುಜ ತಟ್ಟಿದ್ದು ಅಂತ ಹೇಳಿಸಿದ್ರಿ. ನಿಮ್ಮ ಇಡೀ ಪಾರ್ಟಿ ಜನ ಒಂದೇ ಒಂದು ಒಳ್ಳೆ ಮಾತಾಡಲಿಲ್ಲ. ನಿಮ್ಮ ಸರಕಾರ ಒಂದೇ ಒಂದು ಜನ ಮೆಚ್ಚುವ ಕೆಲಸ ಮಾಡಲಿಲ್ಲ. ಜಾತಿ ಜಗಳ ಮಾಡಿಸಿದ್ರಿ. ಮುಸಲ್ಮಾನರ ಮೇಲೆ ಬಿದ್ದು ಗಲಭೆ ಮಾಡಿಸಿದ್ರಿ. ಸುಳ್ಳು ಕೇಸಾಕ್ಸಿದ್ರಿ. ಇಡೀ ನಾಡೆ ಒಂದು ಅವ್ಯಕ್ತ ಭಯದಲ್ಲಿ ಕ್ಷೆಭೆಗೊಳಗಾಗಿತ್ತು. ನಿಮ್ಮಂಥ ಜವಾಬ್ದಾರಿಯಿರೊ ಯುವ ನಾಯಕರು ಪುರೋಹಿತಶಾಹಿಗಳ ಗುಲಾಮರಾಗಿದ್ರಿ. ಬಹಳ ವಿಶಾಲವಾದ ಮನಸ್ಸಿನ ಪರಂಪರೆಯಿಂದ ಬಂದ ನಿಮಗೆ ಆರೆಸ್ಸೆಸ್ ಆಶ್ರಯದ ಅಗತ್ಯ ಇರಲಿಲ್ಲ. ಚಿಕ್ಕಮಗಳೂರು ಬ್ರಿಟಿಷರು ಕೂಡ ಮೆಚ್ಚಿದ ಸುಂದರ ನಾಡು. ಅಲ್ಲಿ ಇಂಗ್ಲೆಂಡಿನಿಂದ, ಜರ್ಮನಿಯಿಂದ ಬಂದು ತೋಟ ಮಾಡಿದೋರವುರೆ, ಮದ್ರಾಸಿನಿಂದ ಬಂದು ತೋಟ ಮಾಡಿದೋರವುರೆ. ಹಿಂಗೆ ಜಗತ್ತಿಗೇ ತೆರೆಕೊಂಡ ಚಿಕ್ಕಮಗಳೂರಿಗೆ ಪುರೋಹಿತಶಾಹಿ ತರಹ ಮಾತನಾಡೊ ರಾಜಕಾರಣಿ ಬೇಕಿಲ್ಲ ಅಂತ ಜನಕ್ಕೆ ಅನ್ನಿಸಿ ನಿಮ್ಮನ್ನ ಸೋಲಿಸಿದ್ರು ಸಾರ್. ನಿಮ್ಮ ಸೋಲಿನ ಕಾರಣಗಳು ಯಾವ ಕಾರಣಕ್ಕೂ ನಿಮಗೆ ಹೊಳಿಯಲ್ಲ. ಯಾಕೆ ಅಂದ್ರೆ ನಿಮ್ಮ ಕಣ್ಣಿಗೆ ಪೊರೆಯಾಗಿವೆ. ನೀವು ಇನ್ನೊಂದು ದಾಖಲೆ ಮಾಡಿದ್ದೀರಿ ಸಾರ್. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕುಳಿ ವಿಠ್ಠಲ ಹೆಗಡೆಯವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡ್ತು. ಆತ ಸಾಮಾನ್ಯ ವ್ಯಕ್ತಿಯೇನಲ್ಲ. ಆತ ಬರದಿರೊ ’ಮಂಗನಬ್ಯಾಟೆ’ಗೆ ಅಕಾಡೆಮಿ ಅವಾರ್ಡು ಬಂದಿದೆ. ಹೆಗಡೆ ನಿಮಗಾಗಲ್ಲ ಅಂತ ಹೇಳಿ ಸಾಹಿತ್ಯ ಸಮ್ಮೇಳನ ನ್ಯಡಿದಂಗೆ ಮಾಡಿದ್ರಿ. ಸಮ್ಮೇಳನದ ಜಾಗಕ್ಕೆ ಭಜರಂಗಿಗಳು ಬಂದು ಬಾಯಿ ಹರಕೊಂಡು ಸಮ್ಮೇಳನ ನಿಲ್ಲಿಸಿದ್ರು. ಇದು ಇತಿಹಾಸದಲ್ಲಿ ದಾಖಲಾದ ಅಭಿವ್ಯಕ್ತಿ ಸ್ವಾತಂತ್ರ ಹರಣದ ಘಟನೆ. ಕನ್ನಡ ಸಾಹಿತ್ಯಕ್ಕೆ ನೀವು ಮಾಡಿದ ಅವಮಾನ. ಭುವನೇಶ್ವರಿಗೆ ಮಾಡಿದ ದ್ರೋಹ. ದೂರದ ಊರುಗಳಿಂದ ಬಂದ ಸಾಹಿತಿಗಳು ನಿಮ್ಮನ್ನ ನಿಂದಿಸುತ್ತಾ ಇದೊಂದು ಅನಾಗರಿಕ ನಡೆ, ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ, ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರಿಗೆ ಮಾಡಿದ ಅವಮಾನ, ಇದೇ ಜಿಲ್ಲೆಯ ಹಿರೇಕೂಡಿಗೆಯಲ್ಲಿ ಹುಟ್ಟಿದ ಕುವೆಂಪುಗೆ ಮಾಡಿದ ಅವಮಾನ ಅಂತ ಬೈಕಂಡೋದ್ರು ಸಾರ್. ಮಾತಾಡಿ ಸಾರ್ ಹೇಳಿ ಏನಾರ. ಹಲೋ. ಹಲೋ. ಹಲೋ”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...