Homeಅಂಕಣಗಳುಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರದ ದಂತಕಥೆ ನಿಮಗೆ ಗೊತ್ತೇ?

- Advertisement -
- Advertisement -

ಏಪ್ರಿಲ್ 13, 1919. ಅದು ಪಂಜಾಬ್‍ನ ಅಮೃತಸರ ಜಿಲ್ಲೆಯ ಜಲಿಯನ್ ವಾಲಾಬಾಗ್ ವಾಲಾಬಾಗ್ ಉದ್ಯಾನವನ. ಅಲ್ಲಿ ಶಾಂತಿಯುತವಾಗಿ ಮತ್ತು ನಿಶಸ್ತ್ರವಾಗಿ ಸಭೆ ಸೇರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟೀಷ್ ಸೇನಾಧಿಕಾರಿ ಜನರಲ್ ಡಯರ್‍ನ ಆಜ್ಞಾನುಸಾರ ಗುಂಡಿನ ಮಳೆಗೆರೆಯಲಾಗುತ್ತದೆ. ಮೂರು ಸಾವಿರಕ್ಕೂ ಅಧಿಕ ಮಂದಿ ಹೋರಾಟಗಾರರು ಪ್ರಾಣಾರ್ಪಣೆ ಮಾಡುತ್ತಾರೆ. ಆ ಸುದ್ದಿ ಜಲಿಯನ್ ವಾಲಾಬಾಗ್ ದುರಂತ ಎಂದು ಜಗತ್ತಿನಾದ್ಯಂತ ಪಸರಿಸುತ್ತದೆ.

ಏಪ್ರಿಲ್ 14, 1919. ಅಲ್ಲಿಗೆ ಪುಟ್ಟ ಬಾಲಕನೊಬ್ಬ ಬರುತ್ತಾನೆ. ರಕ್ತಸಿಕ್ತ ಮಣ್ಣ, ಹಳೇ ಬಟ್ಟೆ ಬರೆ ಚಪ್ಪಲಿಗಳನ್ನು ನೋಡಿ ಕ್ರುದ್ಧಗೊಳ್ಳುತ್ತಾನೆ. ಡಬ್ಬಿಯಲ್ಲಿದ್ದ ಊಟವನ್ನು ಚೆಲ್ಲಿ ಅದಕ್ಕೆ ರಕ್ತಸಿಕ್ತವಾದ ಮಣ್ಣನ್ನು ತುಂಬಿ, ನಿಮ್ಮ ಸಾವಿಗೆ ನ್ಯಾಯ ದೊರಕಿಸುತ್ತೇನೆಂದು ಶಪಥ ಮಾಡುತ್ತಾನೆ. ‘ಅಣ್ಣ ಏಕೆ ಸಪ್ಪಗಿದ್ದೀಯಾ, ಊಟ ಮಾಡೋಲ್ಲವೇ?’ ಮನೆಯಲ್ಲಿ ತಂಗಿ ಕೇಳುತ್ತಾಳೆ. ತನ್ನ ತಂಗಿಗೆ ನಿನ್ನೆ ನಡೆದಿದ್ದ ದುರಂತದ ಬಗ್ಗೆ ವಿವರಿಸುತ್ತಾನೆ. ನಮ್ಮ ದೇಶಕ್ಕೆ ನುಗ್ಗಿರುವ ದ್ರೋಹಿ ಬ್ರಿಟೀಷರನ್ನು ಸೆದೆಬಡಿಯಬೇಕೆಂದು ತಿಳಿಸುತ್ತಾನೆ.

ಏಪ್ರಿಲ್ 15, 1919. ಆ ಬಾಲಕನ ಚಿಕ್ಕಪ್ಪ ಮಾವಿನ ಬೀಜ(ವಾಟೆ)ವನ್ನು ಹಿತ್ತಲಿನಲ್ಲಿ ನೆಡುತ್ತಿರುತ್ತಾರೆ. ಅಲ್ಲಿಗೆ ಬಂದ ಬಾಲಕ ಕೇಳುತ್ತಾನೆ.
ಚಿಕ್ಕಪ್ಪ ಏನು ಮಾಡುತ್ತಿದ್ದೀರಿ?
ಮಾವಿನ ಬೀಜ ನೆಡುತ್ತಿದ್ದೇನೆ ಮಗು
ಏಕೆ ನೆಡುತ್ತಿದ್ದೀರಿ?
ಏಕೆಂದರೆ ಇದು ಮಾವಿನ ಸಸಿಯಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಮಾವಿನ ಹಣ್ಣುಗಳನ್ನು ನಮಗೆ ನೀಡುತ್ತದೆ.
ಇದನ್ನು ಕೇಳಿದ ಕೂಡಲೇ ಆ ಬಾಲಕ ಮನೆಗ ಓಡುತ್ತಾನೆ. ತನಗೆ ಆಡಲೆಂದು ತಂದಿದ್ದ ಪಿಸ್ತೂಲೊಂದನ್ನು ತಂದು ತಾನು ಸಹ ನೆಡಲು ಆರಂಭಿಸುತ್ತಾನೆ. ಆಗ ಪ್ರಶ್ನೆ ಕೇಳುವ ಸರದಿ ಆತನ ಚಿಕ್ಕಪ್ಪನದಾಗಿರುತ್ತದೆ.
ಏನು ಮಾಡುತ್ತಿದ್ದೀಯ ಮಗು?
ಕಾಣುತ್ತಿಲ್ಲವೇ, ಬಂದೂಕು ನೆಡುತ್ತಿದ್ದೇನೆ
ಏಕೆ ನೆಡುತ್ತಿದ್ದೀಯಾ?
ಏಕೆಂದರೆ ಇದು ಬಂದೂಕಿನ ಗಿಡವಾಗುತ್ತದೆ, ನಂತರ ಬೆಳೆದು ಮರವಾಗುತ್ತದೆ.
ಅದರಿಂದ ಏನು ಪ್ರಯೋಜನ?
ಇದು ಸಾವಿರಾರು ಬಂದೂಕೂಗಳನ್ನು ನಮಗೆ ನೀಡುತ್ತದೆ. ಆ ಬಂದೂಕುಗಳಿಂದ ನಮ್ಮನ್ನು ಹಿಂಸಿಸುತ್ತಿರುವ ಬ್ರೀಟಿಷರನ್ನು ಸುಟ್ಟು ಈ ದೇಶದಿಂದ ಓಡಿಸುತ್ತೇನೆ ಎನ್ನುತ್ತಾನೆ ಆ ಪುಟ್ಟ ಬಾಲಕ.
ಎದುರಿಗಿದ್ದ ಆತನ ಚಿಕ್ಕಪ್ಪನ ಬಾಯಲ್ಲಿ ಮಾತೇ ಬರುವುದಿಲ್ಲ. ಆ ಬಾಲಕನ್ನು ಅಪ್ಪಿ ಕಣ್ಣಿರಿಡುತ್ತಾರೆ.
ಆ ಬಾಲಕನ ಹೆಸರು ಭಗತ್ ಸಿಂಗ್. ಆಗ ಆತನ ವಯಸ್ಸು ಕೇವಲ 12 ವರ್ಷ. ಆತನ ಚಿಕ್ಕಪ್ಪನ ಹೆಸರು ಸರ್ದಾರ್ ಅಜಿತ ಸಿಂಗ್.

ಸ್ನೇಹಿತರೇ ಇದು ಸತ್ಯವೋ, ಸುಳ್ಳೋ ಎಂಬುದು ಮುಖ್ಯವಲ್ಲ. ಇಂದು ಬಹಳಷ್ಟು ಕಡೆ ಈ ದಂತಕಥೆ ಹಬ್ಬಿದೆ. ಭಗತ್ ಸಿಂಗ್ ಜೀವನ ಮತ್ತು ಹೋರಾಟ ಕುರಿತ ಸಿನಿಮಾಗಳಲ್ಲಿ ಇದು ಬರುತ್ತದೆ. ಇದರ ಸಾರಂಶ ಮಾತ್ರ ಎಂತವರನ್ನು ಸ್ಫೂರ್ತಿಗೊಳಿಸುತ್ತದೆ. 12 ವರ್ಷದ ಬಾಲಕ ಭಗತ್ ಸಿಂಗ್ ಗಿದ್ದ ದೇಶಪ್ರೇಮ, ಶತ್ರುಗಳ ವಿರುದ್ಧ ಇದ್ದ ಸಿಟ್ಟು, ಆಕ್ರೋಶ, ತಾನು ಹತಾತ್ಮನಾಗುವವರೆಗೂ ಇದ್ದ ಬದ್ಧತೆ, ಭಾರತದ ಭವಿಷ್ಯದ ಬಗ್ಗೆ ಇದ್ದ ಸ್ಪಷ್ಟತೆ ಭಗತ್ ಸಿಂಗ್‍ರನ್ನು ಪ್ರಪಂಪದ ಮೇರು ಹೋರಾಟಗಾರನ ಸ್ಥಾನಕ್ಕೆ ಏರಿಸಿದೆ.

ನೂರು ವರ್ಷಗಳ ಹಿಂದೆ ನಡೆದಿದ್ದ ಜಲಿಯನ್ ವಾಲಾಬಾಗ್ ದುರಂತದ ಹುತಾತ್ಮರಿಗೆ ನಾವು ಗೌರವ ಮತ್ತು ನ್ಯಾಯ ಸಲ್ಲಿಸಬೇಕಿದೆ. ಇಂದಿಗೂ ಕೂಡ ಜನರ ಹಕ್ಕುಗಳು ಅಪಾಯದ ಅಂಚಿನಲ್ಲಿವೆ. ಬಡವರು, ತಳಸಮುದಾಯದವರು, ಮಹಿಳೆಯರು ಆತಂಕದಲ್ಲಿದ್ದಾರೆ. ಅವರ ಪರವಾಗಿ ದಿಟ್ಟವಾಗಿ ದನಿಯೆತ್ತುವ ತುರ್ತು ಹಿಂದಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ನೂರು ವರ್ಷದ ಹಿಂದೆ ಮಡಿದ ವೀರರ ತ್ಯಾಗ ಬಲಿದಾನಗಳನ್ನು ಸ್ಫೂರ್ತಿಯಾಗಿ ಪಡೆದು ಹೋರಾಟ ಮುಂದುವರೆಸೋಣ. ಅವರಿಗೆ ನಿಜವಾದ ಗೌರವ ಸಲ್ಲಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...