Homeಅಂಕಣಗಳುಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಅವರವುರ ತಲೆ ಮ್ಯಾಲೆ ಅವರವುರೇ ಕಲ್ಲಾಕಂಡ್ರು ಸಾ!

ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು

- Advertisement -
- Advertisement -

| ಯಾಹೂ |

ಬಿಜೆಪಿ ಗಳಿಸಿದ ಬಹುಮತಕ್ಕೆ ದೇಶದ ಬುದ್ದಿಜೀವಿಗಳು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯ ಪ್ರಜೆ ತನ್ನ ಕೆಲಸ ಮುಗಿಸಿದಂತೆ ಸಮಾಧಾನದಿಂದಿದ್ದಾನೆ. ಆದರೆ ಚೆಡ್ಡಿಗಳ ತುರಿಕೆ ಚೇಷ್ಟೆಯನ್ನು ಗ್ರಹಿಸಿದವರು ಈ ದೇಶಕ್ಕೆ ಏನು ಕಾದಿದೆಯೋ ಎಂದು ಹೆದರಿ ಹೋಗಿದ್ದಾರಲ್ಲಾ. ಈ ಸಮಯದಲ್ಲಿ ಬಹು ಗಂಭೀರವಾಗಿ ಚಿಂತಿಸುವುದರ ಬದಲು ನಮ್ಮ ವಾಟಿಸ್ಸೆಗೆ ಫೋನ್ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆನಿಸಿತು. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು.
ರಿಂಗ್ ಟೋನ್: ಏನು ಮಾಡಿ ಏನು ಬಂತಣ್ಣ, ನಾವೆಲ್ಲ ಕೂಡಿ ಏನು ಮಾಡಿ ಏನು ಬಂತಣ್ಣಾ…..
“ಗುಡ್‍ಮಾರ್ನಿಂಗು ಸಾ.”
“ವಾಟಿಸ್ಸೆ ಎಲ್ಲಿದ್ದೀ.”
“ಇನ್ನೆಲ್ಲಿರನ ಸಾರ್, ಕತ್ತಿಗೆ ಬೇಜಾರಾದ್ರೆ ಹಾಳು ಗ್ವಾಡೆ ಅಂತ ಊರಲ್ಲಿದೀನಿ.”
“ಯಂಗಿದೆ ಊರು.”
“144 ಸೆಕ್ಷೆನ್ ಹಾಕಿದಂಗದೆ.”
“ಯಾಕೆ?”
“ಅಂಥಾ ಬಿಸ್ಲು ಸಾರ್, ಈ ಬಿಸ್ಲು ನೋಡಿ ಮುಂದ್ಲೊರಸಕೂ ಇರಬೇಕಾ ಅನ್ನಿಸಿದೆ.”
“ನಿನ್ನಂಥವನಿಗೆ ಅಂಗನ್ನಸಬಾರ್ದು.”
“ನನ್ನಂಥವುನು ಅಂದ್ರೇನು ಸಾ.”
“ಭಾರತವನ್ನೇ ಬದಲಾಯ್ಸೊ ಶ್ರೀಸಾಮಾನ್ಯ ಅಂತ.”
“ಶ್ರೀಸಾಮಾನ್ಯ ಇನ್ನ ಯಾರ ಮಾತ್ನೂ ಕೇಳದಿಲ್ಲ, ಯಾರಿಗೂ ಸಿಗದಿಲ್ಲ ಸಾ.”
“ಅದನ್ನ ರಾಜಕಾರಣಿಗಳು ಅರ್ಥ ಮಾಡಿಕಳ್ಳಿಲ್ಲವಲ್ಲ ಹೇಳು.”
“ಈಗದೆ ಆಯ್ತಾ ಅದೆ ಸಾ. ಈ ಸಿದ್ರಾಮಯ್ಯ ದ್ಯಾವೇಗೌಡ ಇವುರಿಗ್ಯಲ್ಲ ಈಗರ್ಥ ಆಯ್ತ ಅದೆ.”
“ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ದೇಸದ ಕತೆ ಏನಾರ ಆಗ್ಲಿ. ನಮ್ಮ ಸುಮಲತ ಗೆದ್ಲಲ್ಲ ಸಾ.”
“ಸುಮಲತನ ಗೆಲುವ ಅಷ್ಟು ಸೀರಿಯಸ್ಸಾಗಿ ತಗಂಡಿದ್ಯಾ?”
“ಊ ಸಾ. ನಮ್ಮ ಅಳಿವು ಉಳಿವಿನ ಪ್ರಶ್ನೆ ಆಗಿತ್ತು.”
“ಅಷ್ಟ್ ಗಂಭೀರವಾಗಿತ್ತ.”
“ಅಲ್ವೆ ಮತ್ತೆ, ಅದೆಲ್ಲೊ ಬಾರಲ್ಲಿ ಕುತಗಂಡು ಚಿಲ್ಡ್ ಬೀರು ಕುಡೀತಿದ್ದ ಹುಡುಗನ್ನ ತಂದು ಮಂಡ್ಯಕ್ಕೆ ನಿಲ್ಸಿದ್ರಲ್ಲ. ಇವರಿಗೆ ಎಷ್ಟು ಧೈರ್ಯ ಇರಬೇಕು. ಮಂಡ್ಯ ಜಿಲ್ಲೇನ ಏನನ್ನಕಂಡಿದ್ರು ಸಾ.”
“ಸರಿಯಾದ ಉತ್ರ ಕೊಟ್ರಲ್ಲ ಬುಡಿ.”
“ಬುಡದಲ್ಲ ಸಾ. ದ್ಯಾವೇಗೌಡ್ರು ಅಷ್ಟು ಸುಲಭಕ್ಕೆ ಏನ್ನೂ ಬುಡದಿಲ್ಲ. ಆ ಹುಡುಗನ್ನ ಅಲ್ಲೇ ಇರು ಅಂದುಬುಡ್ತರೆ.”
“ಹಾಗಂತೀಯಾ.”
“ಇತಿಹಾಸ ನೋಡಿಲ್ವಾ ಸಾ. ದ್ಯಾವೇಗೌಡ್ರು ಚುನಾವಣೆಯ ಸೋಲು ಗೆಲುವಿಗೆ ಹೆದರಿದೋರಲ್ಲ. ನಿನ್ನ ಭಾಗಕ್ಕೆ ಮಂಡ್ಯ ಕೊಟ್ಟಿದೀವಿ, ನೀನಲ್ಲೇ ಇರು ಅಂದು ಬುಡ್ತರೆ. ಇದು ನೋಡಿದ್ರೆ ಹೈಲು ಪೈಲುಡುಗ ಮಂಡ್ಯ ಜಿಲ್ಲೆಯನ್ನೆ ಹುಚ್ಚಾಸ್ಪತ್ರೆ ಮಾಡಿಬುಡ್ತನೆ.”
“ಏನೇ ಆದ್ರು ಮಂಡ್ಯದ ಜನಗಳು ಸ್ವಾಭಿಮಾನಿಗಳು ಬುಡು.”
“ಅದು ಜಗತ್ತಿಗೇ ಗೊತ್ತಾಯ್ತು ಸಾ.”
“ಜಗತ್ತಿಗೇ ಗೊತ್ತಾಯ್ತಾ.”
“ಊ ಸಾ. ಅಂಬರೀಶ್‍ಗೆ ಪ್ರಪಂಚದಲ್ಯಲ್ಲ ಸ್ನೇಹಿತರಿದ್ರು, ಪರಿಚಯ ಮಾಡಿಕ್ಯಳದು, ಪಾರ್ಟಿ ಕೊಡದು, ಮುಂದ್ಲು ದೇಸುಕೆ ಹೋಯ್ತಾಯಿರದ. ಅಂಗೆ ದುಬಾಯಿ, ಕುವೈತ್, ಮಸ್ಕಟ್, ಅಮೇರಿಕದಲ್ಯಲ್ಲ ಪ್ರೆಂಡ್ಸಿದ್ರು. ಅವುರ್ಯಲ್ಲ ಮಂಡ್ಯದ ಜನ ಏನು ಮಾಡ್ತರೆ ಅಂತ ನೋಡ್ತಿದ್ರು.”
“ರಾಜ್ಯದ ಚುನಾವಣೆ ರಿಜಲ್ಟ್ ಬಗ್ಗೆ ಏನೇಳ್ತಿ.”
“ಹೇಳದೇನು ಸಾ. ಯಲ್ಲ ಮುಗಿತಲ್ಲ ಬುಡಿ.”
“ಮುಗೀತು ಅಂತೀಯಾ.”
“ಇನ್ನೇನು ಸಾ. ಬಿಜೆಪಿ ತಲೆಮ್ಯಾಲೆ ಕಲ್ಲಾಕಕ್ಕೆ ಇವುರಿಬ್ರೂ ಒಂದಾಗಿ ಸೈಜಗಲ್ಲ ಹೊತ್ತಗಂಡು ನಿಂತಿದ್ರು. ಅವುರಿಗೆ ಗೊತ್ತಿಲ್ಲದಂಗೆ ಅವುರವುರ ಮ್ಯಾಲೆ ಹಾಯ್ಕಂಡ್ರು ಸಾ.”
“ಏನಂದೆ.”
“ಕಾಂಗ್ರೆಸ್ ತಲೆಮ್ಯಾಲೆ ಜೆಡಿಎಸ್ ಕಲ್ಲು ಬಿತ್ತು, ಜೆಡಿಎಸ್ ತಲೆಮ್ಯಾಲೆ ಕಾಂಗ್ರೆಸ್ ಕಲ್ಲು ಬಿತ್ತು. ಬಿಜೆಪಿ ನನ ಮಕ್ಕಳು ಸೇಪಾಗಿ ಡೆಲ್ಲಿಗೋದ್ರು.”
“ಅವುರ ನಡುವೆ ಅಷ್ಟು ದ್ವೇಶ ಇತ್ತ.”
“ಇತ್ತು ಸಾ, ಸತತವಾಗಿ ಒಂದೊರ್ಸ ಜಗಳಾಡ್ಯವುರೆ, ಹರಿಯ ಮುರಿಯ ಜಗಳಾಡಿಕಂಡು ಚುನಾವಣೆ ಬಂದೇಟಿಗೆ ತ್ಯಕ್ಕೆ ಬಡಕಂಡು, ನಾವಿಬ್ರು ಒಂದು ಅಂತ ಜನಗಳೆದ್ರಿಗೆ ಹೋಗಿ ನಿಂತ್ರೆ ಜನ ನಗದಿಲವಾ.”
“ಇದೊಂತರ ವಳೇಟು ಅಂಗರೆ.”
“ಓಟು ಮಾಡದೇ ವಳೇಟು ಕೊಡಕ್ಕಲವೆ, ಆಗೊಂದು ಸತಿ ಮಂಡ್ಯದಲ್ಲಿ ಉಪ ಚುನಾವಣೆ ಬತ್ತು. ದಿಢೀರಂತ ಕುಮಾರಸ್ವಾಮಿನೂ ಎಡೂರಪ್ಪನೂ ಗಬುಕ್ಕಂತ ತಬ್ಬಿಕಂಡು ಮುತ್ತು ಕೊಟ್ರು. ಜನ ಪುಟ್ಟರಾಜನ್ನ ಸೋಲಿಸಿ ರಮ್ಯನ್ನ ಗೆಲ್ಲಿಸಿದ್ರು, ಗೊತ್ತ ಸಾ.”
“ಗೊತ್ತು. ಜನ ಅಕ್ರಮ ಸಮಂದ ಸಹಿಸಲ್ಲ ಅಲವೆ.”
“ಸಮಂದ ಮಾಡೋರೂ ದೊಡ್ಡ ಮನುಸರಾಗಿರಬೇಕು, ಉದ್ದೇಶ ವಳ್ಳೆದಿರಬೇಕು, ಅಂಗಿದ್ರೆ ಸಯಿಸಿಗತ್ತರೆ ಸಾ.”
“ಮೋದಿ ಈ ತರ ಗೆಲ್ಲದ ನಿರೀಕ್ಷೆ ಮಾಡಿದ್ಯಾ?.”
“ತಿರಗ ಬರಬವುದು ಅನ್ನಕಂಡಿದ್ದೆ.”
“ಹ್ಯಂಗೇ.”
” ಮನೇಲಿ ಕುತಗಂಡು ಟಿವಿ ನೋಡಿ ನೋಡಿ ಅಂಗಂದಿದ್ದ. ಟಿವಿಲಿರೋ ಹಾದರಕ್ಕುಟ್ಟಿದ ನನ್ನ ಮಕ್ಕಳು ದ್ಯಾವೇಗೌಡನ ಅಭಿಮಾನಿ ಸಿದ್ದೇಗೌಡನ್ನೇ ಬದ್ಲಾಸಿದ್ರು ಅಂದ್ರೆ ಇನ್ನೇನೇಳನಾ.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....