Homeನ್ಯಾಯ ಪಥನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು

- Advertisement -
- Advertisement -

ಪುಟಕ್ಕಿಟ್ಟ ಪುಟಗಳು – ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್ ರಿಚರ್ಡ್ ಬ್ಯಾಕ್

  • ಯೋಗೇಶ್ ಮಾಸ್ಟರ್

ಸಮುದ್ರದ ಬೆಳ್ಳಕ್ಕಿಯೊಂದರ ದೃಷ್ಟಾಂತವೇ ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್. 1972ರಲ್ಲಿ ಪ್ರಕಟವಾದ ರಿಚರ್ಡ್‍ರವರ ಈ ಕತೆ ಮಿಲಿಯನುಗಟ್ಟಲೆ ಪ್ರತಿಗಳು ಮುದ್ರಿತವಾದವು.

ಎಳೆಯ ವಯಸ್ಸಿನ ಜೊನಾತನ್ ಎಂಬ ಸೀಗಲ್ ಮೊದಮೊದಲು ತಾನೂ ಇತರ ಸಮುದ್ರದ ಬೆಳ್ಳಕ್ಕಿಗಳಂತೆ ಅವುಗಳೊಡನೆ ಇದ್ದವನೇ. ಆದರೆ ಆ ಹಕ್ಕಿಗಳು ಬದುಕಿದ್ದದ್ದೇ ಬರೀ ತಿನ್ನುವುದಕ್ಕೆ. ತಿನ್ನುವುದು ಮತ್ತು ತಿಂದು ಬದುಕಿರುವುದು ಅವುಗಳ ಬದುಕು. ಅದೇ ಅವುಗಳ ರೂಢಿ. ಹಾಗಿರುವುದೇ ತಮ್ಮ ಹಣೆಬರಹ ಎಂಬುದು ಆ ಹಕ್ಕಿಗಳ ಸಮಾಜದ ನಂಬಿಕೆ. ಆದರೆ ಜೊನಾತನಿಗೆ ಅದು ಬಹಳ ಬೇಸರ. ಹೊಸತನ್ನು ಮಾಡುವ ತುಡಿತ. ತಿನ್ನುವುದಕ್ಕಷ್ಟೇ ಹಾರುವುದರ ಹೊರತಾಗಿ ದೂರಕ್ಕೆ, ಎತ್ತರಕ್ಕೆ, ಹೊಸತಿಗೆ ವೇಗದಲ್ಲಿ ಸಾಗುವ ಅದಮ್ಯ ಬಯಕೆ. ಅವನ ಹಾರುವ ಕನಸಿನ ಶಕ್ತಿಯನ್ನು ಸೀಮಿತಗೊಳಿಸುವ ಅವನ ಪರಿವಾರದೊಂದಿಗೆ ಅವನ ಸಂಘರ್ಷ. ಅವನದು ಉದ್ಧಟತನವೆಂದು ಸೀಗಲ್ ಹಕ್ಕಿಗಳ ಪರಿವಾರ ಅವನನ್ನು ಬಹಿಷ್ಕರಿಸಿದಾಗ ಅವನು ಒಂಟಿ.

ಒಂಟಿಯಾಗಿ ಸಾಗಿದಾಗಲೇ ಹೊಸ ಶಕ್ತಿಗಳ ಪರಿಚಯ. ಅದರಂತೆ ಅವನಿಗೆ ಉನ್ನತಕ್ಕೆ ಹಾರಲು ಉತ್ತೇಜಿಸುವ ಪಕ್ಷಿಗಳ ಸಹವಾಸವಾಗಿ ಅವನು ತರಾವರಿಯಾಗಿ ಬಾನಂಗಳದಲ್ಲಿ ಹಾರಲು ಕಲಿಯುವನು. ವಿವಿಧ ಒಳನೋಟ ಮತ್ತು ಹಾರುವ ಪಾಠಗಳೊಂದಿಗೆ ತನ್ನ ಪರಿವಾರಕ್ಕೆ ಮರಳುವನು.

ಈಗ ಜೊನಾತನನೇ ಗುರು. ಇತರ ಸೀಗಲ್ಲುಗಳು ಅವನಿಂದ ಹಾರಲು ಕಲಿಯುವವು. ತಮ್ಮಲ್ಲಿಯೂ ಅಮಿತವಾದ ಶಕ್ತಿ ಇದೆ ಎಂದು ಅರಿಯುವವು. ಒಟ್ಟಾರೆ ಪರಿವಾರವು ನನ್ನ ಬಗ್ಗೆ ಏನೇ ಹೇಳಿದರೂ, ನಾನು ನಾನಾಗಿ ಇರಲು ಸಂಪೂರ್ಣ ಸ್ವಾತಂತ್ರ್ಯವನ್ನು ನಾನೇ ಪಡೆದುಕೊಳ್ಳಬೇಕು ಎಂದು ಅರ್ಥಮಾಡಿಕೊಳ್ಳುವವು. ಮಿತಿಗಳನ್ನು ಮೀರುವ ನನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಇಲ್ಲೇ ಈಗಲೇ ನಾನೇ ಪಡೆದುಕೊಳ್ಳಬೇಕು. ನನ್ನತನದ ದಾರಿಯಲ್ಲಿ ಯಾವುದೂ ನನ್ನ ತಡೆಯಲಾಗದು, ನಾನು ಏನಾಗಬೇಕೆಂದು ಬಯಸುತ್ತೇನೆಯೋ ಅದು ಈಗಾಗಲೇ ಆಗಿರುವಂತೆ ಭಾವಿಸಿ, ಆ ಭಾವಶಕ್ತಿಯಿಂದಲೇ ಸಾಧಿಸುವುದು; ಇವೇ ಆ ಪ್ರೇರಣೆಗಳು.

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು.

ಪುಟಪುಟಗಳಲ್ಲಿಯೂ ತಾತ್ವಿಕತೆಯ ಒಳನೋಟಗಳನ್ನು ಹಂಚಿಕೊಳ್ಳುವ ಜೊನಾತನ್ ಅಷ್ಟೊಂದು ಜನಪ್ರಿಯವಾಗಿದ್ದು ನಾನಾ ಕಾರಣಗಳಿಂದ.

ಸ್ವತಃ ಪೈಲೆಟ್ ಆಗಿದ್ದ ರಿಚರ್ಡ್ ಬ್ಯಾಕ್ ತಮ್ಮ ಹಾರುವಿಕೆಯಲ್ಲಿ ಕಂಡುಕೊಂಡಿದ್ದ ಸತ್ಯ, ಸೌಂದರ್ಯ ಮತ್ತು ಅನುಭವಗಳನ್ನೆಲ್ಲಾ ಜೊನಾತನ್ ಸೀಗಲ್ಲಿನಲ್ಲಿ ಪ್ರತಿಫಲಿಸಿದ್ದರು. ಅವರ ಅನುಭವಗಳ ಗಾಢತೆ ಅನುಭೂತಿಯಾಗಿ ಆಧ್ಯಾತ್ಮಿಕತೆಯ ಒಳನೋಟಗಳನ್ನೂ ಈ ಪುಸ್ತಕ ಫಲಿಸಿತ್ತು. ವ್ಯಕ್ತಿಗತವಾಗಿ ಯಾರೊಬ್ಬರೂ ತಮ್ಮ ಮಿತಿಗಳನ್ನು ಮೀರಲು ಇರುವ ಸಾಧ್ಯತೆಗಳ ಕಂಡುಕೊಳ್ಳಲು ಪ್ರೇರಣೆಯಾಗಿತ್ತು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟುಗಳ ಮಿತಿಗಳನ್ನು ಮೀರಲು ಉತ್ತೇಜಿಸಿತ್ತು. ಮಿಗಿಲಾಗಿ ಪುಸ್ತಕ ಓದುತ್ತಿದ್ದರೆ ಜೊನಾತನ್ ಬದುಕನ್ನು ದೃಶ್ಯದಲ್ಲಿಯೇ ಕಟ್ಟಿಕೊಡುವಂತಹ ಶೈಲಿ ಬರವಣಿಗೆಯದಾಗಿತ್ತು.

ಈಗಲೂ ಜೊನಾತನ್ ಬಲ್ಲವರಿಗೆ ಅದೊಂದು ಪ್ರೇರಣೆಯ ರೂಪಕ ಶಕ್ತಿಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...