Homeನ್ಯಾಯ ಪಥನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು

- Advertisement -
- Advertisement -

ಪುಟಕ್ಕಿಟ್ಟ ಪುಟಗಳು – ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್ ರಿಚರ್ಡ್ ಬ್ಯಾಕ್

  • ಯೋಗೇಶ್ ಮಾಸ್ಟರ್

ಸಮುದ್ರದ ಬೆಳ್ಳಕ್ಕಿಯೊಂದರ ದೃಷ್ಟಾಂತವೇ ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್. 1972ರಲ್ಲಿ ಪ್ರಕಟವಾದ ರಿಚರ್ಡ್‍ರವರ ಈ ಕತೆ ಮಿಲಿಯನುಗಟ್ಟಲೆ ಪ್ರತಿಗಳು ಮುದ್ರಿತವಾದವು.

ಎಳೆಯ ವಯಸ್ಸಿನ ಜೊನಾತನ್ ಎಂಬ ಸೀಗಲ್ ಮೊದಮೊದಲು ತಾನೂ ಇತರ ಸಮುದ್ರದ ಬೆಳ್ಳಕ್ಕಿಗಳಂತೆ ಅವುಗಳೊಡನೆ ಇದ್ದವನೇ. ಆದರೆ ಆ ಹಕ್ಕಿಗಳು ಬದುಕಿದ್ದದ್ದೇ ಬರೀ ತಿನ್ನುವುದಕ್ಕೆ. ತಿನ್ನುವುದು ಮತ್ತು ತಿಂದು ಬದುಕಿರುವುದು ಅವುಗಳ ಬದುಕು. ಅದೇ ಅವುಗಳ ರೂಢಿ. ಹಾಗಿರುವುದೇ ತಮ್ಮ ಹಣೆಬರಹ ಎಂಬುದು ಆ ಹಕ್ಕಿಗಳ ಸಮಾಜದ ನಂಬಿಕೆ. ಆದರೆ ಜೊನಾತನಿಗೆ ಅದು ಬಹಳ ಬೇಸರ. ಹೊಸತನ್ನು ಮಾಡುವ ತುಡಿತ. ತಿನ್ನುವುದಕ್ಕಷ್ಟೇ ಹಾರುವುದರ ಹೊರತಾಗಿ ದೂರಕ್ಕೆ, ಎತ್ತರಕ್ಕೆ, ಹೊಸತಿಗೆ ವೇಗದಲ್ಲಿ ಸಾಗುವ ಅದಮ್ಯ ಬಯಕೆ. ಅವನ ಹಾರುವ ಕನಸಿನ ಶಕ್ತಿಯನ್ನು ಸೀಮಿತಗೊಳಿಸುವ ಅವನ ಪರಿವಾರದೊಂದಿಗೆ ಅವನ ಸಂಘರ್ಷ. ಅವನದು ಉದ್ಧಟತನವೆಂದು ಸೀಗಲ್ ಹಕ್ಕಿಗಳ ಪರಿವಾರ ಅವನನ್ನು ಬಹಿಷ್ಕರಿಸಿದಾಗ ಅವನು ಒಂಟಿ.

ಒಂಟಿಯಾಗಿ ಸಾಗಿದಾಗಲೇ ಹೊಸ ಶಕ್ತಿಗಳ ಪರಿಚಯ. ಅದರಂತೆ ಅವನಿಗೆ ಉನ್ನತಕ್ಕೆ ಹಾರಲು ಉತ್ತೇಜಿಸುವ ಪಕ್ಷಿಗಳ ಸಹವಾಸವಾಗಿ ಅವನು ತರಾವರಿಯಾಗಿ ಬಾನಂಗಳದಲ್ಲಿ ಹಾರಲು ಕಲಿಯುವನು. ವಿವಿಧ ಒಳನೋಟ ಮತ್ತು ಹಾರುವ ಪಾಠಗಳೊಂದಿಗೆ ತನ್ನ ಪರಿವಾರಕ್ಕೆ ಮರಳುವನು.

ಈಗ ಜೊನಾತನನೇ ಗುರು. ಇತರ ಸೀಗಲ್ಲುಗಳು ಅವನಿಂದ ಹಾರಲು ಕಲಿಯುವವು. ತಮ್ಮಲ್ಲಿಯೂ ಅಮಿತವಾದ ಶಕ್ತಿ ಇದೆ ಎಂದು ಅರಿಯುವವು. ಒಟ್ಟಾರೆ ಪರಿವಾರವು ನನ್ನ ಬಗ್ಗೆ ಏನೇ ಹೇಳಿದರೂ, ನಾನು ನಾನಾಗಿ ಇರಲು ಸಂಪೂರ್ಣ ಸ್ವಾತಂತ್ರ್ಯವನ್ನು ನಾನೇ ಪಡೆದುಕೊಳ್ಳಬೇಕು ಎಂದು ಅರ್ಥಮಾಡಿಕೊಳ್ಳುವವು. ಮಿತಿಗಳನ್ನು ಮೀರುವ ನನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಇಲ್ಲೇ ಈಗಲೇ ನಾನೇ ಪಡೆದುಕೊಳ್ಳಬೇಕು. ನನ್ನತನದ ದಾರಿಯಲ್ಲಿ ಯಾವುದೂ ನನ್ನ ತಡೆಯಲಾಗದು, ನಾನು ಏನಾಗಬೇಕೆಂದು ಬಯಸುತ್ತೇನೆಯೋ ಅದು ಈಗಾಗಲೇ ಆಗಿರುವಂತೆ ಭಾವಿಸಿ, ಆ ಭಾವಶಕ್ತಿಯಿಂದಲೇ ಸಾಧಿಸುವುದು; ಇವೇ ಆ ಪ್ರೇರಣೆಗಳು.

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು.

ಪುಟಪುಟಗಳಲ್ಲಿಯೂ ತಾತ್ವಿಕತೆಯ ಒಳನೋಟಗಳನ್ನು ಹಂಚಿಕೊಳ್ಳುವ ಜೊನಾತನ್ ಅಷ್ಟೊಂದು ಜನಪ್ರಿಯವಾಗಿದ್ದು ನಾನಾ ಕಾರಣಗಳಿಂದ.

ಸ್ವತಃ ಪೈಲೆಟ್ ಆಗಿದ್ದ ರಿಚರ್ಡ್ ಬ್ಯಾಕ್ ತಮ್ಮ ಹಾರುವಿಕೆಯಲ್ಲಿ ಕಂಡುಕೊಂಡಿದ್ದ ಸತ್ಯ, ಸೌಂದರ್ಯ ಮತ್ತು ಅನುಭವಗಳನ್ನೆಲ್ಲಾ ಜೊನಾತನ್ ಸೀಗಲ್ಲಿನಲ್ಲಿ ಪ್ರತಿಫಲಿಸಿದ್ದರು. ಅವರ ಅನುಭವಗಳ ಗಾಢತೆ ಅನುಭೂತಿಯಾಗಿ ಆಧ್ಯಾತ್ಮಿಕತೆಯ ಒಳನೋಟಗಳನ್ನೂ ಈ ಪುಸ್ತಕ ಫಲಿಸಿತ್ತು. ವ್ಯಕ್ತಿಗತವಾಗಿ ಯಾರೊಬ್ಬರೂ ತಮ್ಮ ಮಿತಿಗಳನ್ನು ಮೀರಲು ಇರುವ ಸಾಧ್ಯತೆಗಳ ಕಂಡುಕೊಳ್ಳಲು ಪ್ರೇರಣೆಯಾಗಿತ್ತು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟುಗಳ ಮಿತಿಗಳನ್ನು ಮೀರಲು ಉತ್ತೇಜಿಸಿತ್ತು. ಮಿಗಿಲಾಗಿ ಪುಸ್ತಕ ಓದುತ್ತಿದ್ದರೆ ಜೊನಾತನ್ ಬದುಕನ್ನು ದೃಶ್ಯದಲ್ಲಿಯೇ ಕಟ್ಟಿಕೊಡುವಂತಹ ಶೈಲಿ ಬರವಣಿಗೆಯದಾಗಿತ್ತು.

ಈಗಲೂ ಜೊನಾತನ್ ಬಲ್ಲವರಿಗೆ ಅದೊಂದು ಪ್ರೇರಣೆಯ ರೂಪಕ ಶಕ್ತಿಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...