Homeನ್ಯಾಯ ಪಥನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು

- Advertisement -
- Advertisement -

ಪುಟಕ್ಕಿಟ್ಟ ಪುಟಗಳು – ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್ ರಿಚರ್ಡ್ ಬ್ಯಾಕ್

  • ಯೋಗೇಶ್ ಮಾಸ್ಟರ್

ಸಮುದ್ರದ ಬೆಳ್ಳಕ್ಕಿಯೊಂದರ ದೃಷ್ಟಾಂತವೇ ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್. 1972ರಲ್ಲಿ ಪ್ರಕಟವಾದ ರಿಚರ್ಡ್‍ರವರ ಈ ಕತೆ ಮಿಲಿಯನುಗಟ್ಟಲೆ ಪ್ರತಿಗಳು ಮುದ್ರಿತವಾದವು.

ಎಳೆಯ ವಯಸ್ಸಿನ ಜೊನಾತನ್ ಎಂಬ ಸೀಗಲ್ ಮೊದಮೊದಲು ತಾನೂ ಇತರ ಸಮುದ್ರದ ಬೆಳ್ಳಕ್ಕಿಗಳಂತೆ ಅವುಗಳೊಡನೆ ಇದ್ದವನೇ. ಆದರೆ ಆ ಹಕ್ಕಿಗಳು ಬದುಕಿದ್ದದ್ದೇ ಬರೀ ತಿನ್ನುವುದಕ್ಕೆ. ತಿನ್ನುವುದು ಮತ್ತು ತಿಂದು ಬದುಕಿರುವುದು ಅವುಗಳ ಬದುಕು. ಅದೇ ಅವುಗಳ ರೂಢಿ. ಹಾಗಿರುವುದೇ ತಮ್ಮ ಹಣೆಬರಹ ಎಂಬುದು ಆ ಹಕ್ಕಿಗಳ ಸಮಾಜದ ನಂಬಿಕೆ. ಆದರೆ ಜೊನಾತನಿಗೆ ಅದು ಬಹಳ ಬೇಸರ. ಹೊಸತನ್ನು ಮಾಡುವ ತುಡಿತ. ತಿನ್ನುವುದಕ್ಕಷ್ಟೇ ಹಾರುವುದರ ಹೊರತಾಗಿ ದೂರಕ್ಕೆ, ಎತ್ತರಕ್ಕೆ, ಹೊಸತಿಗೆ ವೇಗದಲ್ಲಿ ಸಾಗುವ ಅದಮ್ಯ ಬಯಕೆ. ಅವನ ಹಾರುವ ಕನಸಿನ ಶಕ್ತಿಯನ್ನು ಸೀಮಿತಗೊಳಿಸುವ ಅವನ ಪರಿವಾರದೊಂದಿಗೆ ಅವನ ಸಂಘರ್ಷ. ಅವನದು ಉದ್ಧಟತನವೆಂದು ಸೀಗಲ್ ಹಕ್ಕಿಗಳ ಪರಿವಾರ ಅವನನ್ನು ಬಹಿಷ್ಕರಿಸಿದಾಗ ಅವನು ಒಂಟಿ.

ಒಂಟಿಯಾಗಿ ಸಾಗಿದಾಗಲೇ ಹೊಸ ಶಕ್ತಿಗಳ ಪರಿಚಯ. ಅದರಂತೆ ಅವನಿಗೆ ಉನ್ನತಕ್ಕೆ ಹಾರಲು ಉತ್ತೇಜಿಸುವ ಪಕ್ಷಿಗಳ ಸಹವಾಸವಾಗಿ ಅವನು ತರಾವರಿಯಾಗಿ ಬಾನಂಗಳದಲ್ಲಿ ಹಾರಲು ಕಲಿಯುವನು. ವಿವಿಧ ಒಳನೋಟ ಮತ್ತು ಹಾರುವ ಪಾಠಗಳೊಂದಿಗೆ ತನ್ನ ಪರಿವಾರಕ್ಕೆ ಮರಳುವನು.

ಈಗ ಜೊನಾತನನೇ ಗುರು. ಇತರ ಸೀಗಲ್ಲುಗಳು ಅವನಿಂದ ಹಾರಲು ಕಲಿಯುವವು. ತಮ್ಮಲ್ಲಿಯೂ ಅಮಿತವಾದ ಶಕ್ತಿ ಇದೆ ಎಂದು ಅರಿಯುವವು. ಒಟ್ಟಾರೆ ಪರಿವಾರವು ನನ್ನ ಬಗ್ಗೆ ಏನೇ ಹೇಳಿದರೂ, ನಾನು ನಾನಾಗಿ ಇರಲು ಸಂಪೂರ್ಣ ಸ್ವಾತಂತ್ರ್ಯವನ್ನು ನಾನೇ ಪಡೆದುಕೊಳ್ಳಬೇಕು ಎಂದು ಅರ್ಥಮಾಡಿಕೊಳ್ಳುವವು. ಮಿತಿಗಳನ್ನು ಮೀರುವ ನನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಇಲ್ಲೇ ಈಗಲೇ ನಾನೇ ಪಡೆದುಕೊಳ್ಳಬೇಕು. ನನ್ನತನದ ದಾರಿಯಲ್ಲಿ ಯಾವುದೂ ನನ್ನ ತಡೆಯಲಾಗದು, ನಾನು ಏನಾಗಬೇಕೆಂದು ಬಯಸುತ್ತೇನೆಯೋ ಅದು ಈಗಾಗಲೇ ಆಗಿರುವಂತೆ ಭಾವಿಸಿ, ಆ ಭಾವಶಕ್ತಿಯಿಂದಲೇ ಸಾಧಿಸುವುದು; ಇವೇ ಆ ಪ್ರೇರಣೆಗಳು.

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು.

ಪುಟಪುಟಗಳಲ್ಲಿಯೂ ತಾತ್ವಿಕತೆಯ ಒಳನೋಟಗಳನ್ನು ಹಂಚಿಕೊಳ್ಳುವ ಜೊನಾತನ್ ಅಷ್ಟೊಂದು ಜನಪ್ರಿಯವಾಗಿದ್ದು ನಾನಾ ಕಾರಣಗಳಿಂದ.

ಸ್ವತಃ ಪೈಲೆಟ್ ಆಗಿದ್ದ ರಿಚರ್ಡ್ ಬ್ಯಾಕ್ ತಮ್ಮ ಹಾರುವಿಕೆಯಲ್ಲಿ ಕಂಡುಕೊಂಡಿದ್ದ ಸತ್ಯ, ಸೌಂದರ್ಯ ಮತ್ತು ಅನುಭವಗಳನ್ನೆಲ್ಲಾ ಜೊನಾತನ್ ಸೀಗಲ್ಲಿನಲ್ಲಿ ಪ್ರತಿಫಲಿಸಿದ್ದರು. ಅವರ ಅನುಭವಗಳ ಗಾಢತೆ ಅನುಭೂತಿಯಾಗಿ ಆಧ್ಯಾತ್ಮಿಕತೆಯ ಒಳನೋಟಗಳನ್ನೂ ಈ ಪುಸ್ತಕ ಫಲಿಸಿತ್ತು. ವ್ಯಕ್ತಿಗತವಾಗಿ ಯಾರೊಬ್ಬರೂ ತಮ್ಮ ಮಿತಿಗಳನ್ನು ಮೀರಲು ಇರುವ ಸಾಧ್ಯತೆಗಳ ಕಂಡುಕೊಳ್ಳಲು ಪ್ರೇರಣೆಯಾಗಿತ್ತು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟುಗಳ ಮಿತಿಗಳನ್ನು ಮೀರಲು ಉತ್ತೇಜಿಸಿತ್ತು. ಮಿಗಿಲಾಗಿ ಪುಸ್ತಕ ಓದುತ್ತಿದ್ದರೆ ಜೊನಾತನ್ ಬದುಕನ್ನು ದೃಶ್ಯದಲ್ಲಿಯೇ ಕಟ್ಟಿಕೊಡುವಂತಹ ಶೈಲಿ ಬರವಣಿಗೆಯದಾಗಿತ್ತು.

ಈಗಲೂ ಜೊನಾತನ್ ಬಲ್ಲವರಿಗೆ ಅದೊಂದು ಪ್ರೇರಣೆಯ ರೂಪಕ ಶಕ್ತಿಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...