Homeಮುಖಪುಟಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು.

- Advertisement -
- Advertisement -

| ಹುಲಿಕುಂಟೆ ಮೂರ್ತಿ |

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು.

ದು.ಸರಸ್ವತಿ ಅಕ್ಕನ ‘ಜೀವಸಂಪಿಗೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪದ್ಯ ಓದಬೇಕಿತ್ತು. ಪದ್ಯ ಓದುವ ಮೊದಲು ‘ನಾನು ಕವಿಯಲ್ಲ’ ಅಂದು ‘ಎಬಿಸಿಡಿ ಎಂದರೆ..’ ಪದ್ಯ ಓದಿದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯನವರು ‘ಕವಿಯಲ್ಲ ಅಂತನೇ ಒಳ್ಳೇ ಪದ್ಯ ಓದ್ದಲ್ಲೋ’ ಎಂದು ನಕ್ಕಿದ್ದರು. ಅದಾದಮೇಲೆ ಅವರು ಅಧ್ಯಕ್ಷತೆ ವಹಿಸಿದ್ದ, ಕವಿತೆ ಓದಿದ ಅನೇಕ ಕವಿಗೋಷ್ಟಿಗಳಲ್ಲಿ ನಾನೂ ಪದ್ಯ ಓದಿದೆ. ಓದಿದ ನಂತರ ‘ಗುಡ್ ಕಣೋ’ ಅಂದು ಅಷ್ಟಗಲ ನಕ್ಕು ಬೆನ್ನು ತಟ್ಟುತ್ತಿದ್ದರು. ಅವರು ವೇದಿಕೆಯಲ್ಲಿದ್ದ ಕಾರ್ಯಕ್ರಮಗಳಲ್ಲಿ ನಾನು ಮಾತನಾಡಿದ ಮೇಲೆ ಹತ್ತಿರ ಕರೆದು ‘ಗುಡ್’ ಹೇಳದೆ ಇರುತ್ತಿರಲಿಲ್ಲ. ಕನ್ನಡದ ದಲಿತ ಸಾಹಿತಿಗಳೆಲ್ಲರಿಗಿಂತ ಅವರೊಂದಿಗೆ ಹೆಚ್ಚು ವೇದಿಕೆ ಹಂಚಿಕೊಂಡ ಖುಷಿ ನನ್ನದು.

ಕೆ.ಬಿ.ಸಿದ್ದಯ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ‘ಅಲ್ಲಮ’. ಅಲ್ಲಮ ಪ್ರಭು ಕುರಿತು ಅವರು ಮಾತನಾಡಲು ಶುರು ಮಾಡಿದರೆ ನಾವೆಲ್ಲಾ ಬಹಳ ಹಿಂದುಳಿದಿದ್ದೇವೆ ಅನ್ನಿಸುತ್ತಿತ್ತು. ಶರಣ ಚಳವಳಿ ಮತ್ತು ಅಲ್ಲಮನನ್ನು ಅವರು ಅರ್ಥೈಸುತ್ತಿದ್ದ ಕ್ರಮವೇ ವಿಶಿಷ್ಟವಾಗಿತ್ತು. ಅಲ್ಲಮನ ಕುರಿತು ಆಲೋಚಿಸುತ್ತಿದ್ದ ಕೆಲವೇ ವಿದ್ವಾಂಸರಲ್ಲಿ ಕೆ.ಬಿ.ಎಸ್ ವಿಭಿನ್ನವಾಗಿದ್ದರು. ಅವರು ಯಾವ ವಿಷಯವನ್ನಾದರೂ ಮಾತನಾಡುವಾಗ ನೀಳ ಉಸಿರೆಳೆದುಕೊಂಡು ಕಣ್ಮುಚ್ಚಿ ಧ್ಯಾನಿಸಿ ತೂಕ ಹಾಕಿದಂತೆ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಅವರೇ ಮೆಚ್ಚಿಕೊಳ್ಳುವ ಹಾಗೆ.. ಬೆಳ್ಳಗಿನ ಬಟ್ಟೆ, ಬೆಳ್ಳಗಿನ ಗಡ್ಡ ಮತ್ತು ಬೆಳ್ಳಗಿನ ನಗು ಸಿದ್ದಯ್ಯನವರ ಗುರುತುಗಳು. ಆ ಗುರುತುಗಳೇ ನಮ್ಮಂಥವರನ್ನು ಅವರೆಡೆಗೆ ಸೆಳೆಯುತ್ತಿದ್ದವು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಟ್ಟಿದ ಎಚ್ಚರದ ಹಾದಿಯಲ್ಲಿ ಸ್ವಾಭಿಮಾನದ ಅಕ್ಷರಗಳ ಕೆಂಡ ಹಾದವರಲ್ಲಿ ಕೆ.ಬಿ.ಸಿದ್ದಯ್ಯ ಒಬ್ಬರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಎಚ್.ಗೋವಿಂದಯ್ಯ ಮುಂತಾದವರೊಟ್ಟಿಗೆ ದಲಿತ ಹೋರಾಟಕ್ಕೆ ಅಗತ್ಯವಿದ್ದ ಸಾಹಿತ್ಯವನ್ನು ಒದಗಿಸುವ ಕೆಲಸವನ್ನು ಮಾಡಿದರು. ಅವರ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ..’ ಹಾಡು ದಲಿತರ ಬದುಕಿನ ನೋವನ್ನು ಚಿತ್ರಿಸಿತ್ತು. ಕೋಲಾರ ಶೇಷಗಿರಿಯಪ್ಪನ ಕೊಲೆ ಪ್ರಕರಣ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಇಡೀ ರಾಜ್ಯದ ಮೂಲೆಮೂಲೆಯಲ್ಲಿ ಹೋರಾಟ ಕಟ್ಟಿದ ದಸಂಸ ಹಿಂದೆ ಸಿದ್ದಯ್ಯನವರೂ ಇದ್ದರು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಗೆ ಈ ಮಹನೀಯರು ಸೃಷ್ಟಿಸಿದ ಸಾಹಿತ್ಯ ನಾಡಿನ ದಲಿತೇತರರ ಎದೆಗಳಲ್ಲೂ ಜಾತಿವಿನಾಶದ ಕಿಡಿಯನ್ನು ಹೊತ್ತಿಸಿದ್ದು ಸುಳ್ಳಲ್ಲ.

ಇಂಥಾ ಹಾದಿಯಲ್ಲಿ ನಡೆದುಬಂದ ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು. ಅದಾಗಲೇ ಸದ್ದು ಮಾಡುತ್ತಿದ್ದ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳ ಮರು ಓದಿನ ಜೊತೆಗೆ ಸಿದ್ದಯ್ಯನವರ ಸಂಶೋಧನಾತ್ಮಕ ಜನಪದ ಸಂಕಥನಗಳು ಸೇರಿಕೊಂಡವು. ಇದರಿಂದಾಗಿ ದಲಿತ ಬದುಕುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ಗೋಚರಿಸಿತು. ಈ ಮೂಲಕ ಸಿದ್ದಯ್ಯನವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತು. ಆ ನಂತರದಲ್ಲಿ ಕರ್ನಾಟಕದ ಸಾಹಿತ್ಯ, ಹೋರಾಟ ಮತ್ತು ರಾಜಕಾರಣದಲ್ಲಿ ಸಿದ್ದಯ್ಯನವರು ಸೇರಿಹೋದರು.

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆ ದಲಿತ ಪ್ರಜ್ಞೆಯ ಮೆದುಳಿನಂತೆ ಕೆಲಸ ಮಾಡುತ್ತಿದ್ದ ದಲಿತ ಹಿರಿಯರೂ ಅಲ್ಲಲ್ಲಿ ಚದುರಿಹೋದರು. ಸಿದ್ದಯ್ಯನವರೂ ದಲಿತರೊಳಗಿನ ಮಾದಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಪ್ರಾರಂಭಿಸಿದ ‘ಒಳ ಮೀಸಲಾತಿ’ ಹೋರಾಟದ ಭಾಗವಾಗಬೇಕಾಯಿತು. ಅಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ‘ದಲಿತ’ ಅನ್ನುವ ಶಬ್ಧವನ್ನೇ ‘ದಾರಿ ತಪ್ಪಿಸುವ ಶಬ್ದ’ ಎಂದರು. ಅವರ ಮಾತು ನಿಜವೂ ಆಗಿತ್ತು. ದಲಿತ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವುದರಿಂದ ಅದಲಿತ ಬಂಧುಗಳಿಗೆ ಬೇಸರವಾಗುತ್ತದೆಂದು ವಾದಿಸಿದರು. ಅವರ ಈ ವಾದಕ್ಕೂ ಇತರ ದಲಿತ ಸಾಹಿತಿಗಳೊಂದಿಗಿನ ಅವರ ಮುನಿಸಿಗೂ ಸಂಬಂಧ ಕಲ್ಪಿಸಲಾಯಿತು. ಅದು ನಿಜವೇನೋ ಎಂಬಂತೆ ತಮ್ಮೊಂದಿಗೆ ಸಂಘಟನೆ ಕಟ್ಟಿ, ಬರೆದು, ದಲಿತ ಪ್ರಜ್ಞೆಯನ್ನು ಹಿಗ್ಗಿಸಿದ ಹಿರಿಯರ ಕುರಿತು ಅಸಹನೆ ವ್ಯಕ್ತಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ವಿರೋಧಿ ಮನುಧರ್ಮ ಶಾಸ್ತ್ರದ ಪ್ರತಿಪಾದಕ ಪೇಜಾವರ ಶ್ರೀ ಸಿದ್ದಯ್ಯನವರ ಮನೆಗೆ ಬಂದುಹೋದರು.

ಇದೆಲ್ಲದರ ಜೊತೆಗೆ ಸಿದ್ದಯ್ಯನವರು ತುಮಕೂರಿನಲ್ಲಿ ನೆಲೆಯೂರಿದ್ದು ಒಂದು ರೀತಿಯ ಸೀಮಿತ ವಾತಾವರಣವನ್ನು ಸೃಷ್ಟಿಸಿತು. ಅವರು ತುಮಕೂರನ್ನೇ ನಂಬಿ ಕೂತುಬಿಟ್ಟರು ಅಥವಾ ತುಮಕೂರು ಅವರನ್ನು ಕಟ್ಟಿಹಾಕಿಬಿಟ್ಟಿತು. ಅಲ್ಲಿನ ಕಾಲೇಜೊಂದರಲ್ಲಿ ಅವರು ಉಪನ್ಯಾಸಕ ವೃತ್ತಿ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ರಾಜಕೀಯ ನಾಯಕ ಸಿದ್ಧರಾಮಯ್ಯನವರ ಸ್ನೇಹ, ದಲಿತ ಲೋಕದ ಸಾಹಿತ್ಯಕ ಘನತೆ, ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಖಂಡಕಾವ್ಯ… ಇದ್ಯಾವುದೂ ಸಿದ್ದಯ್ಯನವರನ್ನು ಅವರು ಏರಬೇಕಿದ್ದ ಎತ್ತರಕ್ಕೆ ಬೆಳೆಸಲಿಲ್ಲ; ಬೇರೆ ಯಾರಿಗಾದರೂ ಇಂಥಾ ಒಂದೇ ಒಂದು ಸಾಧ್ಯತೆ ಇದ್ದರೂ ಪ್ರಾಧಿಕಾರಗಳ ಅಧ್ಯಕ್ಷಗಿರಿ, ಎಂಎಲ್‍ಸಿ ಪಟ್ಟ ಸಿಕ್ಕಿಬಿಡುತ್ತಿತ್ತು. ಸಿದ್ದಯ್ಯನವರು ಅಂಥಾ ಆಸೆಯನ್ನೇನೋ ಇಟ್ಟುಕೊಂಡಿದ್ದರೂ ಅದಕ್ಕೆ ಬೇಕಾದ ಶ್ರಮ ಹಾಕಲಿಲ್ಲ; ಬದಲಿಗೆ ನಿಷ್ಠುರವಾಗಿ ಮಾತನಾಡುವುದನ್ನು ಹೆಚ್ಚು ಮಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಅವರಿಂದ ದೂರವೇ ಉಳಿದರು.

ಇತ್ತ ಕರ್ನಾಟಕದಲ್ಲಿ ದಲಿತ ಯುವಜನತೆಯಲ್ಲಿ ಎಡ – ಬಲದ ಅಂತರ, ಪರಸ್ಪರ ಅಸಹನೆ ಹೆಚ್ಚುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆದರೂ ಎಪ್ಪತ್ತರ ದಶಕದ ಕಾವು ಕಾಣಲೇ ಇಲ್ಲ. ಇದನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಹಿರಿಯರು ಸಿದ್ದಯ್ಯನವರೂ ಸೇರಿದಂತೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮೇಲಿನ ಸಿದ್ದಯ್ಯನವರ ಸಿಟ್ಟಿಗೆ ಕೆಲವರು ಎಡ -ಬಲದ ಬೋರ್ಡು ನೇತುಹಾಕಿದರೂ ದಲಿತ ಸಾಹಿತ್ಯ ಮತ್ತು ಚಳವಳಿಯ ವಲಯ ಅದನ್ನೇನೂ ಗಂಭೀರವಾಗಿ ಪರಿಗಣಿಸಲಿಲ್ಲ; ಯಾಕೆಂದರೆ ಪರಮೇಶ್ವರ್ ವಿಷಯದಲ್ಲಿ ಸಿದ್ದಯ್ಯನವರ ಸಿಟ್ಟು ಸಕಾರಣವಾಗಿತ್ತು. ಆನಂತರ ಅದು ‘ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ; ಪರಮೇಶ್ವರರನ್ನು ಸೋಲಿಸುತ್ತೇವೆ’ ಎಂಬ ಘೋಷವಾಕ್ಯವಾಗುವ ಅತಿಗೆ ಹೋಯಿತು. ಇದು ಮಾದಿಗ ಸಮುದಾಯದವರೇ ಆದ ಆಂಜಿನೇಯ ಅವರ ಸೋಲಿಗೂ ಕಾರಣವಾಯಿತು. ಸದಾಶಿವ ಆಯೋಗದ ವರದಿಯನ್ನು ಜನತೆಯ ಮುಂದೆ ಇಡಿ; ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಮಾದಿಗ ಬಂಧುಗಳು ನಡೆಸಿದ ಹೋರಾಟಕ್ಕೆ ಸಿದ್ದಯ್ಯ ಮತ್ತು ಸಿದ್ದರಾಮಯ್ಯನವರ ಸ್ನೇಹ ಹೆಗಲು ನೀಡಲಿಲ್ಲ. ಇದಕ್ಕೆ ಆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ಬಿಜೆಪಿ ಸಖ್ಯದಲ್ಲಿದ್ದಾರೆ ಅನ್ನುವ ಸಿದ್ದಯ್ಯನವರ ಕೋಪ ಕಾರಣವಿರಬಹುದು. ಸ್ವಾತಂತ್ರ್ಯ ಉದ್ಯಾನದ ಹತ್ತಿರ ನಡೆಯುತ್ತಿದ್ದ ಮಾದಿಗರ ಹೋರಾಟಕ್ಕೆ ಪ್ರತಿದಿನ ಹಾಜರಾಗುತ್ತಿದ್ದ ಸಿದ್ದಯ್ಯನವರನ್ನು ಹೊರಗೇ ಓಡಾಡಿಕೊಂಡು ಹೋಗುವಂತೆ ಮಾಡಿದ್ದು ಆ ಹೋರಾಟಗಾರರ ದೊಡ್ಡ ನಷ್ಟ. ಒಂದು ದಿನ ಪ್ರತಿಭಟನೆಯ ಪೆಂಡಾಲಿನ ಹೊರಗೆ ಬಿಸಿಲಲ್ಲಿ ನಿಂತಿದ್ದ ಸಿದ್ದಯ್ಯನವರು ಆ ಹೋರಾಟ ಕುರಿತು ರೂಪಕದ ಭಾಷೆಯಲ್ಲಿ ಮಾತನಾಡಿದ್ದು ನನಗಿನ್ನೂ ನೆನಪಿದೆ. ಆವತ್ತು ‘ಯಾಕಣ್ಣಾ ಬಿಸಿಲಲ್ಲಿ ನಿಂತಿದಿರಾ’ ಎಂದು ಕೇಳಿದ ನನ್ನ ಕೆನ್ನೆ ಹಿಂಡಿ ನಕ್ಕಿದ್ದರು. ಅದಾದ ನಂತರ ತುಮಕೂರಿನ ಮಾದಿಗ ಬಂಧುಗಳು ನಡೆಸಿದ ಅದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕಂಡು ಅವರಿಗೆ ಸಮುದಾಯದ ಮೇಲಿದ್ದ ಕಾಳಜಿ ದೊಡ್ಡದು ಎಂದು ನಾವು ಗೆಳೆಯರು ಮಾತಾಡಿಕೊಂಡಿದ್ದೆವು.

ಸಿದ್ದಯ್ಯನವರು ಎಲ್ಲರಂತೆ ಮಿತಿಗಳಿದ್ದ ಮನುಷ್ಯ. ಸಾಹಿತ್ಯ ಮತ್ತು ಚಳವಳಿ ಎರಡರಲ್ಲಿ ‘ಸಾಹಿತಿ’ ಎಂದು ಗುರ್ತಿಸಿಕೊಳ್ಳಲು ಅವರು ಆಸೆ ಪಡುತ್ತಿದ್ದ ಹಾಗೆ, ಕನ್ನಡ ಸಾಹಿತ್ಯ ಸಮಾಜ ಅವರನ್ನು ಒಬ್ಬ ‘ಸಾಹಿತಿ’ಯಾಗಿಯೇ ನೋಡಲು ಆಸೆ ಪಡುತ್ತಿತ್ತು. ಇದಕ್ಕೆ ಕಾರಣ ಅವರಿಗಿದ್ದ ಓದಿನ ವಿಸ್ತಾರ ಮತ್ತು ಕಾವ್ಯದ ಮೇಲಿದ್ದ ಆಕರ್ಷಣೆ. ಇದರಿಂದಾಗಿ ಕೇವಲ ಬೀದಿಗಳಲ್ಲಿ ಧಿಕ್ಕಾರ ಕೂಗಿಕೊಂಡು ಬದುಕು ಮುಗಿಸುತ್ತಿದ್ದ ನೂರಾರು ದಲಿತ ಯುವಕ ಯುವತಿಯರನ್ನು ಚಳವಳಿ, ಸಾಹಿತ್ಯ ಮತ್ತು ಅಕಾಡೆಮಿಕ್ ನೆಲೆಗಳಲ್ಲಿ ನಡೆಯುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಅವರನ್ನು ಪ್ರೀತಿಸುವ ದಲಿತ ಹುಡುಗ ಹುಡುಗಿಯರು ಹೋರಾಟ, ಸಾಹಿತ್ಯ ಎರಡರಲ್ಲೂ ಸಮರ್ಥವಾಗಿ ಹೆಜ್ಜೆ ಇಡುವಂತಾಗಿದೆ.

ಈಗ ಸಿದ್ದಯ್ಯನವರು ಕನ್ನಡ ಸಾಹಿತ್ಯಕ್ಕೆ ಹೇಗೋ ಹಾಗೆ ದಲಿತ ಚಳವಳಿಯ ಹಾದಿಯೂ ಆಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...