Homeಮುಖಪುಟಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು.

- Advertisement -
- Advertisement -

| ಹುಲಿಕುಂಟೆ ಮೂರ್ತಿ |

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು.

ದು.ಸರಸ್ವತಿ ಅಕ್ಕನ ‘ಜೀವಸಂಪಿಗೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪದ್ಯ ಓದಬೇಕಿತ್ತು. ಪದ್ಯ ಓದುವ ಮೊದಲು ‘ನಾನು ಕವಿಯಲ್ಲ’ ಅಂದು ‘ಎಬಿಸಿಡಿ ಎಂದರೆ..’ ಪದ್ಯ ಓದಿದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯನವರು ‘ಕವಿಯಲ್ಲ ಅಂತನೇ ಒಳ್ಳೇ ಪದ್ಯ ಓದ್ದಲ್ಲೋ’ ಎಂದು ನಕ್ಕಿದ್ದರು. ಅದಾದಮೇಲೆ ಅವರು ಅಧ್ಯಕ್ಷತೆ ವಹಿಸಿದ್ದ, ಕವಿತೆ ಓದಿದ ಅನೇಕ ಕವಿಗೋಷ್ಟಿಗಳಲ್ಲಿ ನಾನೂ ಪದ್ಯ ಓದಿದೆ. ಓದಿದ ನಂತರ ‘ಗುಡ್ ಕಣೋ’ ಅಂದು ಅಷ್ಟಗಲ ನಕ್ಕು ಬೆನ್ನು ತಟ್ಟುತ್ತಿದ್ದರು. ಅವರು ವೇದಿಕೆಯಲ್ಲಿದ್ದ ಕಾರ್ಯಕ್ರಮಗಳಲ್ಲಿ ನಾನು ಮಾತನಾಡಿದ ಮೇಲೆ ಹತ್ತಿರ ಕರೆದು ‘ಗುಡ್’ ಹೇಳದೆ ಇರುತ್ತಿರಲಿಲ್ಲ. ಕನ್ನಡದ ದಲಿತ ಸಾಹಿತಿಗಳೆಲ್ಲರಿಗಿಂತ ಅವರೊಂದಿಗೆ ಹೆಚ್ಚು ವೇದಿಕೆ ಹಂಚಿಕೊಂಡ ಖುಷಿ ನನ್ನದು.

ಕೆ.ಬಿ.ಸಿದ್ದಯ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ‘ಅಲ್ಲಮ’. ಅಲ್ಲಮ ಪ್ರಭು ಕುರಿತು ಅವರು ಮಾತನಾಡಲು ಶುರು ಮಾಡಿದರೆ ನಾವೆಲ್ಲಾ ಬಹಳ ಹಿಂದುಳಿದಿದ್ದೇವೆ ಅನ್ನಿಸುತ್ತಿತ್ತು. ಶರಣ ಚಳವಳಿ ಮತ್ತು ಅಲ್ಲಮನನ್ನು ಅವರು ಅರ್ಥೈಸುತ್ತಿದ್ದ ಕ್ರಮವೇ ವಿಶಿಷ್ಟವಾಗಿತ್ತು. ಅಲ್ಲಮನ ಕುರಿತು ಆಲೋಚಿಸುತ್ತಿದ್ದ ಕೆಲವೇ ವಿದ್ವಾಂಸರಲ್ಲಿ ಕೆ.ಬಿ.ಎಸ್ ವಿಭಿನ್ನವಾಗಿದ್ದರು. ಅವರು ಯಾವ ವಿಷಯವನ್ನಾದರೂ ಮಾತನಾಡುವಾಗ ನೀಳ ಉಸಿರೆಳೆದುಕೊಂಡು ಕಣ್ಮುಚ್ಚಿ ಧ್ಯಾನಿಸಿ ತೂಕ ಹಾಕಿದಂತೆ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಅವರೇ ಮೆಚ್ಚಿಕೊಳ್ಳುವ ಹಾಗೆ.. ಬೆಳ್ಳಗಿನ ಬಟ್ಟೆ, ಬೆಳ್ಳಗಿನ ಗಡ್ಡ ಮತ್ತು ಬೆಳ್ಳಗಿನ ನಗು ಸಿದ್ದಯ್ಯನವರ ಗುರುತುಗಳು. ಆ ಗುರುತುಗಳೇ ನಮ್ಮಂಥವರನ್ನು ಅವರೆಡೆಗೆ ಸೆಳೆಯುತ್ತಿದ್ದವು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಟ್ಟಿದ ಎಚ್ಚರದ ಹಾದಿಯಲ್ಲಿ ಸ್ವಾಭಿಮಾನದ ಅಕ್ಷರಗಳ ಕೆಂಡ ಹಾದವರಲ್ಲಿ ಕೆ.ಬಿ.ಸಿದ್ದಯ್ಯ ಒಬ್ಬರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಎಚ್.ಗೋವಿಂದಯ್ಯ ಮುಂತಾದವರೊಟ್ಟಿಗೆ ದಲಿತ ಹೋರಾಟಕ್ಕೆ ಅಗತ್ಯವಿದ್ದ ಸಾಹಿತ್ಯವನ್ನು ಒದಗಿಸುವ ಕೆಲಸವನ್ನು ಮಾಡಿದರು. ಅವರ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ..’ ಹಾಡು ದಲಿತರ ಬದುಕಿನ ನೋವನ್ನು ಚಿತ್ರಿಸಿತ್ತು. ಕೋಲಾರ ಶೇಷಗಿರಿಯಪ್ಪನ ಕೊಲೆ ಪ್ರಕರಣ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಇಡೀ ರಾಜ್ಯದ ಮೂಲೆಮೂಲೆಯಲ್ಲಿ ಹೋರಾಟ ಕಟ್ಟಿದ ದಸಂಸ ಹಿಂದೆ ಸಿದ್ದಯ್ಯನವರೂ ಇದ್ದರು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಗೆ ಈ ಮಹನೀಯರು ಸೃಷ್ಟಿಸಿದ ಸಾಹಿತ್ಯ ನಾಡಿನ ದಲಿತೇತರರ ಎದೆಗಳಲ್ಲೂ ಜಾತಿವಿನಾಶದ ಕಿಡಿಯನ್ನು ಹೊತ್ತಿಸಿದ್ದು ಸುಳ್ಳಲ್ಲ.

ಇಂಥಾ ಹಾದಿಯಲ್ಲಿ ನಡೆದುಬಂದ ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು. ಅದಾಗಲೇ ಸದ್ದು ಮಾಡುತ್ತಿದ್ದ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳ ಮರು ಓದಿನ ಜೊತೆಗೆ ಸಿದ್ದಯ್ಯನವರ ಸಂಶೋಧನಾತ್ಮಕ ಜನಪದ ಸಂಕಥನಗಳು ಸೇರಿಕೊಂಡವು. ಇದರಿಂದಾಗಿ ದಲಿತ ಬದುಕುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ಗೋಚರಿಸಿತು. ಈ ಮೂಲಕ ಸಿದ್ದಯ್ಯನವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತು. ಆ ನಂತರದಲ್ಲಿ ಕರ್ನಾಟಕದ ಸಾಹಿತ್ಯ, ಹೋರಾಟ ಮತ್ತು ರಾಜಕಾರಣದಲ್ಲಿ ಸಿದ್ದಯ್ಯನವರು ಸೇರಿಹೋದರು.

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆ ದಲಿತ ಪ್ರಜ್ಞೆಯ ಮೆದುಳಿನಂತೆ ಕೆಲಸ ಮಾಡುತ್ತಿದ್ದ ದಲಿತ ಹಿರಿಯರೂ ಅಲ್ಲಲ್ಲಿ ಚದುರಿಹೋದರು. ಸಿದ್ದಯ್ಯನವರೂ ದಲಿತರೊಳಗಿನ ಮಾದಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಪ್ರಾರಂಭಿಸಿದ ‘ಒಳ ಮೀಸಲಾತಿ’ ಹೋರಾಟದ ಭಾಗವಾಗಬೇಕಾಯಿತು. ಅಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ‘ದಲಿತ’ ಅನ್ನುವ ಶಬ್ಧವನ್ನೇ ‘ದಾರಿ ತಪ್ಪಿಸುವ ಶಬ್ದ’ ಎಂದರು. ಅವರ ಮಾತು ನಿಜವೂ ಆಗಿತ್ತು. ದಲಿತ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವುದರಿಂದ ಅದಲಿತ ಬಂಧುಗಳಿಗೆ ಬೇಸರವಾಗುತ್ತದೆಂದು ವಾದಿಸಿದರು. ಅವರ ಈ ವಾದಕ್ಕೂ ಇತರ ದಲಿತ ಸಾಹಿತಿಗಳೊಂದಿಗಿನ ಅವರ ಮುನಿಸಿಗೂ ಸಂಬಂಧ ಕಲ್ಪಿಸಲಾಯಿತು. ಅದು ನಿಜವೇನೋ ಎಂಬಂತೆ ತಮ್ಮೊಂದಿಗೆ ಸಂಘಟನೆ ಕಟ್ಟಿ, ಬರೆದು, ದಲಿತ ಪ್ರಜ್ಞೆಯನ್ನು ಹಿಗ್ಗಿಸಿದ ಹಿರಿಯರ ಕುರಿತು ಅಸಹನೆ ವ್ಯಕ್ತಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ವಿರೋಧಿ ಮನುಧರ್ಮ ಶಾಸ್ತ್ರದ ಪ್ರತಿಪಾದಕ ಪೇಜಾವರ ಶ್ರೀ ಸಿದ್ದಯ್ಯನವರ ಮನೆಗೆ ಬಂದುಹೋದರು.

ಇದೆಲ್ಲದರ ಜೊತೆಗೆ ಸಿದ್ದಯ್ಯನವರು ತುಮಕೂರಿನಲ್ಲಿ ನೆಲೆಯೂರಿದ್ದು ಒಂದು ರೀತಿಯ ಸೀಮಿತ ವಾತಾವರಣವನ್ನು ಸೃಷ್ಟಿಸಿತು. ಅವರು ತುಮಕೂರನ್ನೇ ನಂಬಿ ಕೂತುಬಿಟ್ಟರು ಅಥವಾ ತುಮಕೂರು ಅವರನ್ನು ಕಟ್ಟಿಹಾಕಿಬಿಟ್ಟಿತು. ಅಲ್ಲಿನ ಕಾಲೇಜೊಂದರಲ್ಲಿ ಅವರು ಉಪನ್ಯಾಸಕ ವೃತ್ತಿ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ರಾಜಕೀಯ ನಾಯಕ ಸಿದ್ಧರಾಮಯ್ಯನವರ ಸ್ನೇಹ, ದಲಿತ ಲೋಕದ ಸಾಹಿತ್ಯಕ ಘನತೆ, ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಖಂಡಕಾವ್ಯ… ಇದ್ಯಾವುದೂ ಸಿದ್ದಯ್ಯನವರನ್ನು ಅವರು ಏರಬೇಕಿದ್ದ ಎತ್ತರಕ್ಕೆ ಬೆಳೆಸಲಿಲ್ಲ; ಬೇರೆ ಯಾರಿಗಾದರೂ ಇಂಥಾ ಒಂದೇ ಒಂದು ಸಾಧ್ಯತೆ ಇದ್ದರೂ ಪ್ರಾಧಿಕಾರಗಳ ಅಧ್ಯಕ್ಷಗಿರಿ, ಎಂಎಲ್‍ಸಿ ಪಟ್ಟ ಸಿಕ್ಕಿಬಿಡುತ್ತಿತ್ತು. ಸಿದ್ದಯ್ಯನವರು ಅಂಥಾ ಆಸೆಯನ್ನೇನೋ ಇಟ್ಟುಕೊಂಡಿದ್ದರೂ ಅದಕ್ಕೆ ಬೇಕಾದ ಶ್ರಮ ಹಾಕಲಿಲ್ಲ; ಬದಲಿಗೆ ನಿಷ್ಠುರವಾಗಿ ಮಾತನಾಡುವುದನ್ನು ಹೆಚ್ಚು ಮಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಅವರಿಂದ ದೂರವೇ ಉಳಿದರು.

ಇತ್ತ ಕರ್ನಾಟಕದಲ್ಲಿ ದಲಿತ ಯುವಜನತೆಯಲ್ಲಿ ಎಡ – ಬಲದ ಅಂತರ, ಪರಸ್ಪರ ಅಸಹನೆ ಹೆಚ್ಚುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆದರೂ ಎಪ್ಪತ್ತರ ದಶಕದ ಕಾವು ಕಾಣಲೇ ಇಲ್ಲ. ಇದನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಹಿರಿಯರು ಸಿದ್ದಯ್ಯನವರೂ ಸೇರಿದಂತೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮೇಲಿನ ಸಿದ್ದಯ್ಯನವರ ಸಿಟ್ಟಿಗೆ ಕೆಲವರು ಎಡ -ಬಲದ ಬೋರ್ಡು ನೇತುಹಾಕಿದರೂ ದಲಿತ ಸಾಹಿತ್ಯ ಮತ್ತು ಚಳವಳಿಯ ವಲಯ ಅದನ್ನೇನೂ ಗಂಭೀರವಾಗಿ ಪರಿಗಣಿಸಲಿಲ್ಲ; ಯಾಕೆಂದರೆ ಪರಮೇಶ್ವರ್ ವಿಷಯದಲ್ಲಿ ಸಿದ್ದಯ್ಯನವರ ಸಿಟ್ಟು ಸಕಾರಣವಾಗಿತ್ತು. ಆನಂತರ ಅದು ‘ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ; ಪರಮೇಶ್ವರರನ್ನು ಸೋಲಿಸುತ್ತೇವೆ’ ಎಂಬ ಘೋಷವಾಕ್ಯವಾಗುವ ಅತಿಗೆ ಹೋಯಿತು. ಇದು ಮಾದಿಗ ಸಮುದಾಯದವರೇ ಆದ ಆಂಜಿನೇಯ ಅವರ ಸೋಲಿಗೂ ಕಾರಣವಾಯಿತು. ಸದಾಶಿವ ಆಯೋಗದ ವರದಿಯನ್ನು ಜನತೆಯ ಮುಂದೆ ಇಡಿ; ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಮಾದಿಗ ಬಂಧುಗಳು ನಡೆಸಿದ ಹೋರಾಟಕ್ಕೆ ಸಿದ್ದಯ್ಯ ಮತ್ತು ಸಿದ್ದರಾಮಯ್ಯನವರ ಸ್ನೇಹ ಹೆಗಲು ನೀಡಲಿಲ್ಲ. ಇದಕ್ಕೆ ಆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ಬಿಜೆಪಿ ಸಖ್ಯದಲ್ಲಿದ್ದಾರೆ ಅನ್ನುವ ಸಿದ್ದಯ್ಯನವರ ಕೋಪ ಕಾರಣವಿರಬಹುದು. ಸ್ವಾತಂತ್ರ್ಯ ಉದ್ಯಾನದ ಹತ್ತಿರ ನಡೆಯುತ್ತಿದ್ದ ಮಾದಿಗರ ಹೋರಾಟಕ್ಕೆ ಪ್ರತಿದಿನ ಹಾಜರಾಗುತ್ತಿದ್ದ ಸಿದ್ದಯ್ಯನವರನ್ನು ಹೊರಗೇ ಓಡಾಡಿಕೊಂಡು ಹೋಗುವಂತೆ ಮಾಡಿದ್ದು ಆ ಹೋರಾಟಗಾರರ ದೊಡ್ಡ ನಷ್ಟ. ಒಂದು ದಿನ ಪ್ರತಿಭಟನೆಯ ಪೆಂಡಾಲಿನ ಹೊರಗೆ ಬಿಸಿಲಲ್ಲಿ ನಿಂತಿದ್ದ ಸಿದ್ದಯ್ಯನವರು ಆ ಹೋರಾಟ ಕುರಿತು ರೂಪಕದ ಭಾಷೆಯಲ್ಲಿ ಮಾತನಾಡಿದ್ದು ನನಗಿನ್ನೂ ನೆನಪಿದೆ. ಆವತ್ತು ‘ಯಾಕಣ್ಣಾ ಬಿಸಿಲಲ್ಲಿ ನಿಂತಿದಿರಾ’ ಎಂದು ಕೇಳಿದ ನನ್ನ ಕೆನ್ನೆ ಹಿಂಡಿ ನಕ್ಕಿದ್ದರು. ಅದಾದ ನಂತರ ತುಮಕೂರಿನ ಮಾದಿಗ ಬಂಧುಗಳು ನಡೆಸಿದ ಅದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕಂಡು ಅವರಿಗೆ ಸಮುದಾಯದ ಮೇಲಿದ್ದ ಕಾಳಜಿ ದೊಡ್ಡದು ಎಂದು ನಾವು ಗೆಳೆಯರು ಮಾತಾಡಿಕೊಂಡಿದ್ದೆವು.

ಸಿದ್ದಯ್ಯನವರು ಎಲ್ಲರಂತೆ ಮಿತಿಗಳಿದ್ದ ಮನುಷ್ಯ. ಸಾಹಿತ್ಯ ಮತ್ತು ಚಳವಳಿ ಎರಡರಲ್ಲಿ ‘ಸಾಹಿತಿ’ ಎಂದು ಗುರ್ತಿಸಿಕೊಳ್ಳಲು ಅವರು ಆಸೆ ಪಡುತ್ತಿದ್ದ ಹಾಗೆ, ಕನ್ನಡ ಸಾಹಿತ್ಯ ಸಮಾಜ ಅವರನ್ನು ಒಬ್ಬ ‘ಸಾಹಿತಿ’ಯಾಗಿಯೇ ನೋಡಲು ಆಸೆ ಪಡುತ್ತಿತ್ತು. ಇದಕ್ಕೆ ಕಾರಣ ಅವರಿಗಿದ್ದ ಓದಿನ ವಿಸ್ತಾರ ಮತ್ತು ಕಾವ್ಯದ ಮೇಲಿದ್ದ ಆಕರ್ಷಣೆ. ಇದರಿಂದಾಗಿ ಕೇವಲ ಬೀದಿಗಳಲ್ಲಿ ಧಿಕ್ಕಾರ ಕೂಗಿಕೊಂಡು ಬದುಕು ಮುಗಿಸುತ್ತಿದ್ದ ನೂರಾರು ದಲಿತ ಯುವಕ ಯುವತಿಯರನ್ನು ಚಳವಳಿ, ಸಾಹಿತ್ಯ ಮತ್ತು ಅಕಾಡೆಮಿಕ್ ನೆಲೆಗಳಲ್ಲಿ ನಡೆಯುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಅವರನ್ನು ಪ್ರೀತಿಸುವ ದಲಿತ ಹುಡುಗ ಹುಡುಗಿಯರು ಹೋರಾಟ, ಸಾಹಿತ್ಯ ಎರಡರಲ್ಲೂ ಸಮರ್ಥವಾಗಿ ಹೆಜ್ಜೆ ಇಡುವಂತಾಗಿದೆ.

ಈಗ ಸಿದ್ದಯ್ಯನವರು ಕನ್ನಡ ಸಾಹಿತ್ಯಕ್ಕೆ ಹೇಗೋ ಹಾಗೆ ದಲಿತ ಚಳವಳಿಯ ಹಾದಿಯೂ ಆಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...