Homeಚಳವಳಿಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

ಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

- Advertisement -
- Advertisement -

ಉತ್ತರ ಭಾರತದ ರೈತರು ಗ್ರಾಮ ಬಂದ್ ಪ್ರತಿಭಟನೆಯ ಹೋರಾಟ ಆರಂಭಿಸಿದ್ದಾರೆ. ತಮ್ಮ ಯಾವುದೇ ಉತ್ಪನ್ನವನ್ನೂ ಮಂಡಿಗಳಿಗೆ ಕಳಿಸುವುದಿಲ್ಲ; ಇಲ್ಲೇ ಕೊಳೆಯಲಿ ಪರವಾಗಿಲ್ಲ ಎಂಬ ವಿನೂತನ ಪ್ರತಿಭಟನೆ ಇದು. ಹಾಲು, ತರಕಾರಿ, ಹಣ್ಣುಗಳ ಪೂರೈಕೆ ನಗರಗಳಿಗೆ ಬಂದ್ ಆದಾಗಲೇ ನಗರಿಗರಿಗೆ ರೈತರ ಕಷ್ಟ ಗೊತ್ತಾಗುವುದು.
ಈ ಪ್ರತಿಭಟನೆ ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ, ಮಹಾರಾಷ್ಟ್ರ ಮತ್ತು ಪಂಜಾಬುಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ಈ ಹೋರಾಟ ಭಾಜಪ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿದೆ ಎನ್ನುವುದು ಕಾಕತಾಳೀಯ ಅಲ್ಲ; ಹಾಗೆಂದು ಅದು ರಾಜಕೀಯ ಕುತಂತ್ರದ ಆಟವೂ ಅಲ್ಲ. ಈ ರಾಜ್ಯಗಳ ಸರಕಾರಗಳು ರೈತರ ಬಗ್ಗೆ ಸತತವಾಗಿ ತಾತ್ಸಾರದ ಧೋರಣೆ ತಳೆದ ಕಾರಣ ರೈತರ ಬೇಗುದಿ ಹೆಚ್ಚಿದೆ. ಈ ಹೋರಾಟ ಏಕಾಏಕಿ ಹುಟ್ಟಿಕೊಂಡದ್ದೂ ಅಲ್ಲ, ಯಾವುದೋ ಭಾವನಾತಕ ಕಾರಣಕ್ಕೇ ಭುಗಿಲೆದ್ದ ಪ್ರತಿಭಟನೆಯೂ ಅಲ್ಲ. ಇದು ಭೂಕಂಪದ ಮೊದಲಿನ ಸರಣಿ ಗುರುಗಾಟದ ಹಾಗೆ; ಕಳೆದ ಕೆಲವು ವರ್ಷಗಳಿಂದ ಅಲ್ಲಿಇಲ್ಲಿ ವ್ಯಕ್ತವಾಗುತ್ತಲೇ ಇದೆ.
ಕಳೆದ ವರ್ಷ ಮಧ್ಯಪ್ರದೇಶದ ಮಾಂಡ್‍ಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೋಲೀಸರು ಗೋಲೀಬಾರ್ ಮಾಡಿ ಆರು ರೈತರ ಜೀವ ಹೋಗಿತ್ತು. ಈ ದಮನದ ನೆನಪು ರೈತರಲ್ಲಿ ಇನ್ನೂ ಹಸಿಯಾಗಿದೆ. ಈ ಗೋಲೀಬಾರಿನ ಬಳಿಕ ಸರ್ಕಾರ ಅಷ್ಟಿಷ್ಟು ಕ್ರಮ ಕೈಗೊಂಡರೂ ಮತ್ತೆ ರೈತ ನಿರ್ಲಕ್ಷದ ಜಾಡಿಗೆ ಮರಳಿದೆ. ಈ ಬಾರಿಯ ಗ್ರಾಮ ಬಂದ್ ಹೋರಾಟದ ಭಾಗವಾಗಿ ಮಾಂಡ್‍ಸೂರಿನಲ್ಲಿ ಇದೇ ಜೂನ್ ಆರರಂದು, ಗೋಲೀಬಾರಿನಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಹುತಾತ್ಮ ದಿನಾಚರಣೆಯೂ ನಡೆಯಲಿದೆ. ಸಾವಿರಾರು ರೈತರು ಸೇರಲಿದ್ದಾರೆ.
ಈ ಹೋರಾಟಕ್ಕೆ ಇನ್ನೊಂದು ಆಯಾಮವಿದೆ. ಇಷ್ಟು ದಿನ ಆಯಾ ರಾಜ್ಯ ಅಥವಾ ಸಂದರ್ಭಗಳಲ್ಲಿ ಬೇಗುದಿ ಅನುಭವಿಸಿದ ರೈತರು ಬೀದಿಗಿಳಿದಾಗ ಉಳಿದ ಸಂಘಟನೆಗಳು ಅದಕ್ಕೆ ಬೆಂಬಲ ನೀಡಿ ಹೋರಾಟದ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಕಳೆದ ವರ್ಷದ ಮಧ್ಯಪ್ರದೇಶದ ರೈತ ಹೋರಾಟವಿರಬಹುದು, ಭೂ ಸ್ವಾಧೀನದ ವಿರುದ್ಧ ರಾಜಸ್ತಾನದಲ್ಲಿ ಭುಗಿಲೆದ್ದ ಹೋರಾಟ ಇರಬಹುದು. ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಸಮಾಲೊಚನೆ ನಡೆಸಿ ಸುಮಾರು 150 ರೈತಪರ ಸಂಘಟನೆಗಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೂಪುತಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಈ ಸಮಿತಿಗೊಂದು ಸಾಂಸ್ಥಿಕ ಸ್ವರೂಪವೂ ದೊರಕಿತು. ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಆಶಾ, ಕರ್ನಾಟಕ ರಾಜ್ಯ ರೈತ ಸಂಘ, ಜನ ಚಳವಳಿಯ ರಾಷ್ಟ್ರೀಯ ಒಕ್ಕೂಟ, ಸ್ವರಾಜ್ ಅಭಿಯಾನ್ ಸೇರಿ ದೇಶದ ಸುಮಾರು 150 ಮುಖ್ಯ ರೈತಪರ/ ಜನಪರ ಹೋರಾಟಗಳು ಸಂಘಟನೆಗಳು ಈ ಸಮಿತಿಯ ಭಾಗವಾಗಿವೆ.
ನಮ್ಮದೆರಡೇ ಬೇಡಿಕೆಗಳು
ಕೃಷಿ ಬಿಕ್ಕಟ್ಟಿನ ಎಲ್ಲಾ ಸಮಸ್ಯೆಗಳ ವಿವರ ಈ ಎರಡು ಮೂಲಗಳಲ್ಲಿ ಹುದುಗಿದೆ ಎಂಬ ಸ್ಪಷ್ಟತೆಯನ್ನು ಈ ಸಮನ್ವಯ ಸಮಿತಿ ಅನಾವರಣಗೊಳಿಸಿದೆ. ಈ ಸಮನ್ವಯ ಸಮಿತಿ ಎರಡು ಸ್ಥೂಲ ಬೇಡಿಕೆಗಲನ್ನು ಮುಂದಿಟ್ಟಿದೆ. ಬೆಳೆಗೆ ಲಾಭದಾಯಕ ಬೆಲೆ ಮತ್ತು ಋಣಮುಕ್ತ ರೈತ. ಬೆಳೆಗೆ ಲಾಭದಾಯಕ ಬೆಲೆ ನೀಡಿದರೆ ಸಾಲ ಮನ್ನಾದಂಥಾ ಬೇಡಿಕೆಗಳೇ ಅಸಂಗತವಾಗುತ್ತದೆ ಎಂಬ ನಿಲುವನ್ನು ಬಹುತೇಕ ಆರ್ಥಿಕ ತಜ್ಞರಷ್ಟೇ ಅಲ್ಲ, ರೈತ ನಾಯಕರೂ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಸಮಿತಿ ಈ ಕುರಿತ ಶಿಫಾರಸ್ಸುಗಳನ್ನು ಪ್ರಕಟಗೊಳಿಸಿದ್ದು ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸದೇ ನುಣುಚಿಕೊಳ್ಳುತ್ತಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದಲ್ಲಿ ‘ಈ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ; ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ’ ಎಂದು ಅಫಿಡವಿಟ್ ಸಲ್ಲಿಸಿದ್ದ ಮೋದಿ ಈ ವರ್ಷ ರೈತ ಅಸಹನೆಯ ಬಿಸಿ ತಟ್ಟಿದ್ದರಿಂದ ಸ್ವಾಮಿನಾಥನ್ ಶಿಫಾರಸು ಜಾರಿ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಚೌಕಟ್ಟು ಪೂರಾ ಲೊಳಲೊಟ್ಟೆ. ಸರ್ಕಾರ ಉತ್ಪಾದನಾ ವೆಚ್ಚ + 50% ಎಂಬ ಸೂತ್ರ ಮುಂದಿಟ್ಟಿರುವುದರಲ್ಲಿ ಭೂಮಿಯ ಬಂಡವಾಳದ ವೆಚ್ಚ ಮತ್ತಿತರ ಪರೋಕ್ಷ ವೆಚ್ಚಗಳು ಸೇರಿಲ್ಲ. ಅಷ್ಟೇಕೆ ಉತ್ಪಾದನಾ ವೆಚ್ಚವನ್ನು ಸರ್ಕಾರ ಲೆಕ್ಕ ಹಾಕಿದ್ದೇ ಅವಾಸ್ತವವಾಗಿದೆ. ಕುಗ್ಗಿದ ಉತ್ಪಾದನಾ ವೆಚ್ಚವನ್ನು ತಾನೇ ತೀರ್ಮಾನಿಸಿ ಅದರ ಆಧಾರದ ಮೇಲೆ ತಾನೇ ಬೆಲೆ ಘೋಷಿಸುವ ಸರ್ಕಾರದ ಅಡ್ಡ ಕಸುಬಿತನ ರೈತ ಮುಖಂಡರಿಗೆ ಅರ್ಥವಾಗಿದೆ.
ಈ ರೀತಿ ಅತಾರ್ಕಿಕವಾದ ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ದಕ್ಕುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ಸಮಿತಿಯು ದೇಶದ ಬಹುತೇಕ ಮಾರುಕಟ್ಟೆಗಳಿಗೆ ಹೋಗಿ ಅಧ್ಯಯನ ನಡೆಸಿದೆ. ಎಲ್ಲಾ ಕಡೆ ಒಂದೇ ಚಿತ್ರಣ. ಕನಿಷ್ಠ ಬೆಂಬಲ ಬೆಲೆ ಎನ್ನುವುದೇ ದೊಡ್ಡ ಮೋಸ. ಆದ್ದರಿಂದಲೇ ಲಾಭದಾಯಕ ಬೆಲೆ ಕುರಿತಂತೆ ನಿಷ್ಕರ್ಷೆಗೆ ಬರಲು ಕಾನೂನು ರೂಪಿಸಲೂ ಈ ಸಮಿತಿ ಒತ್ತಾಯಿಸುತ್ತಿದೆ. ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮಧ್ಯಪ್ರವೇಶ, ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಬೆಲೆಯ ಮಧ್ಯೆಯ ವ್ಯತ್ಯಾಸವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುವುದು ಎಲ್ಲಾ ಈ ಬೇಡಿಕೆಗಳಲ್ಲಿ ಸೇರಿದೆ.
ಈ ಸಮಿತಿ ಗಹನವಾಗಿ ಯೋಚಿಸಿರುವ ಇನ್ನೊಂದು ಆಯಾಮ ಸಾಲದ್ದು. ಋಣಮುಕ್ತ ರೈತ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿರುವ ಸಮಿತಿ, ರೈತ ಸಂಕುಲ ಯಾವುದೇ ಋಣ ಬಾಧೆಯಿಂದ ನರಳದಂತೆ ಮಾಡುವ ಮಾರ್ಗೋಪಾಯಗಳನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದೆ. ಮುಖ್ಯ ಅಂಶವೆಂದರೆ ಈ ಬೇಡಿಕೆ ಯಾಕೆ ಎಂಬುದಷ್ಟೇ ಅಲ್ಲ, ಇದನ್ನು ಹೇಗೆ ಮಾಡಬಹುದು ಎಂಬು ಅನುಷ್ಠಾನ ಯೊಗ್ಯ ಸಲಹೆಗಳೂ ಈ ಸಮಿತಿಯಲ್ಲಿದೆ. ಸರ್ಕಾರಗಳು ನುಣುಚಿಕೊಳ್ಳಲು ಸಾದ್ಯವೇ ಇಲ್ಲ!
ಹಾಗಿದ್ದರೆ ಸರ್ಕಾರಗಳು ಯಾಕೆ ನುಣುಚಿಕೊಳ್ಳುತ್ತಿವೆ?
ಈ ಚಳವಳಿ ಉತ್ತರಭಾರತದಲ್ಲಿ ಪ್ರಖರವಾಗಿ ಬೆಳೆಯುತ್ತಿರುವುದರ ಹಿಂದೆ ಭಾಜಪದ ರಾಜಕೀಯ ಹಿತಾಸಕ್ತಿಗಳ ಜನದ್ರೋಹ ಇದೆ. ಗ್ರಾಮೀಣ ವರ್ಗವನ್ನು ಭಾವುಕ ವಿಷಯಗಳ ಮೂಲಕ ಹಾದಿ ತಪ್ಪಿಸುತ್ತಾ ಆಡಳಿತದ ತಣ್ಣನೆ ಆಟದಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಮಣೆ ಹಾಕುವ ಕೆಲಸ ಭಾಜಪ ಕಾಂಗ್ರೆಸ್ಸಿಗಿಂತಲೂ ತೀವ್ರವಾಗಿ ಮಾಡುತ್ತಿದೆ. ಕಾರ್ಪೋರೇಟ್ ಕುಳಗಳ ಕೆಟ್ಟ ಸಾಲಗಳನ್ನು ನಿರಂತರವಾಗಿ ಮನ್ನಾ ಮಾಡುತ್ತಾ ಬಂದಿರುವ ಈ ಸರ್ಕಾರ ಆ ನಷ್ಟ ತುಂಬಿಸಲು ಬ್ಯಾಂಕುಗಳಿಗೆ ಬಜೆಟ್ ಅನುದಾನ ಬೇರೆ ನೀಡುತ್ತಿದೆ. ಅರ್ಥಾತ್ ಕಾರ್ಪೋರೇಟ್ ನಷ್ಟವನ್ನು ನೇರಾ ನೇರಾ ಸರ್ಕಾರ ತುಂಬಿ ಕೊಡುತ್ತಿದೆ; ಅದೂ ನಮ್ಮ ತೆರಿಗೆ ಮೂಲಕ.
ಈ ಕಳ್ಳಾಟಕ್ಕೆ ಶಾಶ್ವತ ಕೊನೆ ಹೇಳಲು ಈ ಸಂಯುಕ್ತ ಸಮನ್ವಯ ಸಮಿತಿಯ ನೇತೃತ್ವದ ರೈತ ಹೋರಾಟ ನಿರ್ಧರಿಸಿದಂತಿದೆ. ಭಾಜಪ ತನ್ನ ಭಾವನಾತ್ಮಕ ಕೋಮು ಧ್ರುವೀಕರಣದ ಮೂಲಕ ಹುಲುಸು ಬೆಲೆ ಪಡೆದಿರುವ ರಾಜ್ಯಗಳಲ್ಲೇ ಈ ಭೂಕಂಪದ ಅದುರುವಿಕೆ ತೀವ್ರವಾಗುತ್ತಿದೆ. ಮೊದಲೇ ಅಭಿವೃದ್ಧಿ ಕುಂಠಿತವಾಗಿರುವ ಈ ರಾಜ್ಯಗಳಲ್ಲಿ ರೈತ ನಿರ್ಲಕ್ಷ್ಯವೂ ಸೇರಿಕೊಂಡರೆ ಅಧಿಕಾರಸ್ಥ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಅಪಾಯದ ಸೂಚನೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದೂ ಕರ್ನಾಟಕದಲ್ಲಿ ಸ್ಥಳೀಯ ಮಂಥನದ ಸಂಕ್ರಮಣ ಸ್ಥಿತಿಯಲ್ಲಿ ಉತ್ತರದಷ್ಟು ತೀವ್ರ ಹೋರಾಟ ತಕ್ಷಣಕ್ಕೆ ಹೊಮ್ಮದು. ಆದರೆ ಈ ಚಳವಳಿ ರೈತ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪಡೆವ ಸ್ಪಷ್ಠತೆಯೊಂದಿಗೆ ಹೊರಟಿರುವ ಕಾರಣ ಈ ವರ್ಷ ಅಭೂತಪೂರ್ವ ಚಳವಳಿ ಎಲ್ಲೆಡೆ ಭುಗಿಲೇಳಲಿದೆ. ಕರ್ನಾಟಕವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...