Homeಮುಖಪುಟ"ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ'': ಕಾಗೋಡು ತಿಮ್ಮಪ್ಪ ಸಂದರ್ಶನ

“ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ”: ಕಾಗೋಡು ತಿಮ್ಮಪ್ಪ ಸಂದರ್ಶನ

- Advertisement -
- Advertisement -

ಕಾಗೋಡು ತಿಮ್ಮಪ್ಪನವರು ನಮ್ಮ ನಡುವಿನ ವಿಶಿಷ್ಟ ರಾಜಕಾರಣಿ. ಚುನಾವಣೆಯ ಸೋಲು ಗೆಲುವುಗಳನ್ನ ಬದಿಗಿಟ್ಟು, ಈ ವ್ಯವಸ್ಥೆಯ ಬಗ್ಗೆ ಗಾಢವಾಗಿ ಚಿಂತಿಸುವವರು. ಆ ಕಾರಣಕ್ಕೆ ಇವರನ್ನು ಕಂಡರೆ ಪಾರ್ಟಿಯ ಕಾರ್ಯಕರ್ತರಿಗೆ ಮತ್ತು ಸರಕಾರದ ಕರ್ಮಾಚಾರಿಗಳಿಗೆ ಅಷ್ಟೊಂದು ಇಷ್ಟವಿಲ್ಲ. ಪಾರ್ಟಿ ಕಾರ್ಯಕರ್ತರಿಂದ ಇವರು ನಿರೀಕ್ಷಿಸುವುದು ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ. ಆದ್ದರಿಂದ ವಿನಾಕಾರಣದ ಕಾಡುಹರಟೆಗೆ ಅಲ್ಲಿ ಅವಕಾಶವಿಲ್ಲ. ಇನ್ನ ಸರ್ಕಾರದ ಕರ್ಮಾಚಾರಿಗಳು ಬಂದರೆ ಆಗುತ್ತಿರುವ ಕೆಲಸದ ಪ್ರಗತಿ ಎಲ್ಲಿಗೆ ಬಂತು, ನಿಂತಿದ್ದರೆ ಆದ ತೊಡಕೇನು, ಮುಂದೇನು ಮಾಡಬೇಕು ಎಂಬ ಸಲಹೆ. ಈ ಸಮಯದಲ್ಲಿ ಅಧಿಕಾರಿಯ ದಕ್ಷತೆ ಅದಕ್ಷತೆ ಗುರುತಿಸಿಬಿಡುವ ತಿಮ್ಮಪ್ಪನವರು ಕೆಲಸಗಾರನಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇಲ್ಲವಾದರೆ ಬೈಗುಳ ಗ್ಯಾರಂಟಿ ಅವರೆಂದೂ ಮತದಾರನನ್ನ ಓಲೈಸಿದವರಲ್ಲ. ಓಟಿಗಾಗಿ ಹಲ್ಲು ಗಿಂಜಿದವರಲ್ಲ. ಚುನಾವಣೆ ಸಮಯದಲ್ಲಿ ಎದುರು ಸಿಕ್ಕವರ ಯೋಗಕ್ಷೇಮ ವಿಚಾರಿಸಬೇಕೆಂಬ ಸಲಹೆ ಕೇಳಿ ನಕ್ಕಂತವರು. ರಾಜಕಾರಣ ಆರಂಭವಾದದ್ದು ಸಮಾಜವಾದಿ ಪಾರ್ಟಿ ಮುಖಾಂತರ ದೇವರಾಜ ಅರಸು ಇಷ್ಟವಾದರೂ ಅವರ ಪಾರ್ಟಿ ಸೇರಲಿಲ್ಲ. ಆದರೂ ಗುಂಡೂರಾಯರ ಕಾಲದಲ್ಲಿ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಇಂದಿಗೂ ಮನಸ್ಸು ಬದಲಿಸಿದವರಲ್ಲ. ಪಾರ್ಟಿ ಮತ್ತು ಕಾರ್ಯಕ್ರಮ ಬದ್ಧತೆ ಎಂದರೇನೆಂದು ತಿಮ್ಮಪ್ಪನವರನ್ನ ನೋಡಿದರೆ ತಿಳಿಯುತ್ತದೆ. ಒಬ್ಬ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅನುಭವಗಳಿದ್ದರೂ ತಮ್ಮ ಭಾಗದ ಕೆಲಸ ನಿರ್ವಹಿಸಿದವರು. ಎಷ್ಟೇ ಸವಲತ್ತುಗಳನ್ನು ತಂದುಕೊಟ್ಟರೂ, ದ್ರೋಹ ಬಗೆಯುವ ಸಾಮಾನ್ಯ ಜನರ ನಡವಳಿಕೆ ಬಗ್ಗೆ ಎಂದೂ ಅಚ್ಚರಿಗೊಳ್ಳದವರು. ಜನರೇನೆಂಬುದನ್ನು ಲೋಹಿಯಾ, ಗೋಪಾಲಗೌಡರಿಂದ ತಿಳಿದವರು. ಆದ್ದರಿಂದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿಲ್ಲ. ದೇಶ ಮತ್ತು ಕರ್ನಾಟಕ ಹತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಅವರನ್ನ ಮಾತನಾಡಿಸಬೇಕೆನಿಸಿತು. ಸಾಗರದ ಅವರ ಮನೆಗೆ ಹೋದಾಗ ಈ ಹಿಂದಿನಂತೆ ಹಲವಾರು ಕಾರುಗಳು ನಿಂತಿರಲಿಲ್ಲ. ಆ ಸಾಲಿನಲ್ಲಿ ಅವರದ್ದೂ ಒಂದು ಸಾಮಾನ್ಯ ಮನೆಯಂತೆ ಕಂಡಿತು. ಒಳಗೋದಾಗ ಆರಾಮವಾಗಿ ಟಿವಿ ನೋಡುತ್ತಾ ಕುಳಿತಿದ್ದರು.

ನನ್ನನ್ನು ಕಂಡು, “ಬನ್ರೀ” ಎಂದರು. ನಂತರ ‘ಯೇಯ್’ ಎಂದರು. ಹಾಗೆಂದರೆ ಸಹಾಯಕ ಬಂದು ಟಿವಿ ಆಫ್ ಮಾಡಬೇಕು. ಅದನ್ನು ಆತ ಮಾಡಿದ. ಈ ಹಿಂದೆ ಮನೆಗೋದಾಗ ‘ಯೇಯ್’ ಎನ್ನುತ್ತಿದ್ದರು. ಹಾಗಂದರೆ ಕಾಫಿ ತಂದು ಕೊಡು ಅಂತ. ಹೀಗೆ ತಿಮ್ಮಪ್ಪನವರ ಏಕಕ್ಷರದ ಸೂಚನೆಯಲ್ಲಿ ಒಂದೊಂದು ಸಲಹೆ ಸೂಚನೆ ವಾಕ್ಯಗಳೇ ಅಡಗಿರುತ್ತವೆ. ಇಲ್ಲಿ ಮೌನದ ಭಾಷೆಯೂ ಅಧಿಕ, ಕೆಲವೊಂದು ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಮೌನವೇ ಉತ್ತರ ನೀಡುತ್ತದೆ.

ಪ್ರಶ್ನೆ: ಏನ್ ಸಾರ್ ದೇಶ ಹಿಂಗೆ ಮಾಡಿದ್ರು?
ಉತ್ತರ: ಮಾಡ್ತರೆ, ಅವುರಿಬ್ರು ಜೊತೆಯಾಗ್ಯವುರೆ, ಅವುರ್ಯಂಗೆ ಜೊತೆಯಾಗ್ಯವುರೆ ಅಂದ್ರೇ ಅವುರಿಗೆ ಕೌಂಟ್ರು ಕೊಡಕ್ಕೆ ನಮ್ಮಲ್ಯಾರು ಇಲ್ಲ. ಪಾಪ ಆ ಯಮ್ಮ ಮಮತಾ ಬ್ಯಾನರ್ಜಿ ಒಬ್ಬಳೆ ಎಷ್ಟು ಅಂತ ಹೋರಾಟ ಕೊಡಕ್ಕಾಯ್ತದೆ. ಒಂದು ಎಂಟತ್ತು ಸ್ಟೇಟಲ್ಲಿ ಅವುಳ ತರ ಹೋರಾಟ ಕೊಡೋರಿದ್ರೆ ಇವುರಿಂಗಾಡಕ್ಕಾಯ್ತಿರಲಿಲ್ಲ.

ಪ್ರಶ್ನೆ: ಕಾಂಗ್ರೆಸ್ ಏನ್ ಸಾರ್ ಹಿಂಗಾಯ್ತು?
ಉತ್ತರ: ಬಣ ಮಾಡಿಕಂಡು ಕಿತ್ತಾಡ್ತಾ ಅವೆ. ಮೋದಿಗೆ ಉತ್ತರ ಕೊಡೋನು ಯಾರು ಇಲ್ಲ. ಕಾಂಗ್ರೆಸ್ ಅಧೋಗತಿಗಿಳಿದದೆ ಏನು ಮಾಡದು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದೋರು. ಮೋದಿ ಎದುರಿಗೆ ಮಾತಾಡಲಿಲ್ಲ. ಈಗ್ಲು ಯಾರೂ ಮಾತಾಡಲಿಲ್ಲ.

ಪ್ರಶ್ನೆ: ಜನಗಳಿಗೆ ದುಡ್ಡು ಕೊಡ್ತಾ ಅವುರೆ ಸಾರ್, ದುಡ್ಡು ತಗಂಡು ಓಟು ಮಾಡ್ತರೆ, ಇನ್ನ ನಿಮ್ಮಂಥೋರು ಗೆಲ್ಲಕ್ಕಾಗಲ್ಲ ಅಲವೆ?
ಉತ್ತರ: ದುಡ್ಡು ತಗೋಬ್ಯಾಡಿ ಅಂತ ಹೇಳಬೇಕು. ಒಂಥರದ ಜನಾಂದೋಲನ ನ್ಯಡಿ ಬೇಕು. ಆಗ ದುಡ್ಡಿದ್ದೋರ ಸೋಲಸಬವುದು.

ಪ್ರಶ್ನೆ: ಜನ ಸಾರ್, ನಾನು ಮಂಡ್ಯದ ಲೋಕಸಭಾ ಚುನಾವಣೆ ನೋಡಿದೆ. ಕಾಂಗ್ರೆಸ್ಸಿನೋರು ನೋರ್ರುಪಾಯಿ ಕೊಟ್ಟು ಕುಮಾರಸ್ವಾಮಿ ಕಡಿಯೋರು ಐದು ನೂರ್ರುಪಾಯಿ ಕೊಟ್ರು. ಆದ್ರು ಜನ ನೂರ್ರುಪಾಯಿ ಕಡಿಕೆ ಓಟು ಮಾಡಿದ್ರು. (ನಗು)
ಉತ್ತರ: ಥೂ ಅವ್ಯಲ್ಲ ಅಲ್ಲ, ಹಣ ತಗಂಡು ಓಟು ಮಾಡಿದ ಅಪಾಯನ ನಮ್ಮ ಜನಗಳಿಗೆ ಹೇಳಬೇಕು ಕೇಳ್ತರೆ.

ಪ್ರಶ್ನೆ: ಎಡೂರಪ್ಪನ ಆಡಳಿತದ ಬಗ್ಗೆ ಏನನ್ನಸತ್ತೆ ಸಾರ್?
ಉತ್ತರ: ಅವುನ ರಾಜಕಾರಣನೆ ಬೇರೆ ಕಂಡ್ರೀ ಮೊನ್ನೆ ಅವುನ್ಯಾರೋ ಸ್ವಾಮಿ ಯಾರವುನು?
ನಾನು: ವಚನಾನಂದ
ಉತ್ತರ: ಹಾ| ಅವನು ಏನೊ ಅಂದ ಅಂತ ಉಳದೋರೆಲ್ಲ ಯಂಗೆ ಮ್ಯಾಲೆ ಬಿದ್ರು. ಅಂಗೆ ಮಠಮಾನ್ಯ ಎಡೂರಪ್ಪನ ಬೆನ್ನಿಗವೆ. ಟೀಕೆ ಮಾಡಿದೊರು ಓಲೈಸೋರು ಯಲ್ರು ಅವುನ ಕಡಿಕವುರೆ ಆದ್ರಿಂದ ಆತನ ರಾಜಕಾರಣದ ಆಲೋಚನೆ ಬೇರೆ. ನಾವು ನಿರೀಕ್ಷೆ ಮಾಡೋದೆ ಬೇರೆ.

ಪ್ರಶ್ನೆ: ಮಂತ್ರಿಗಳು ಎಮ್ಮೆಲ್ಲೆಗಳು ನೇರವಾಗಿ ಮತೀಯವಾಗಿ ಮಾತಾಡ್ತರಲ್ಲ ಸಾರ್?
ಉತ್ತರ: ಮಾತಾಡ್ತರೆ, ಅವುರ ಮನಸಲ್ಲಿ ಇದ್ದದ್ದೇ ಅದಲ್ವ. ಈಗ ಬಾಯಿ ಬಿಡ್ತರಷ್ಟೇಯ ಯಾವನಾದ್ರು ಎಂಪಿ ಬಾಯಿ ಬಿಡ್ತನ ಮೋದಿ ಶಾ ಇಬ್ರೆ ಇರದೀಗ, ಏನು ಮಾಡಿದ್ರು ಜೊತೆಲಿ ಮಾಡ್ತರೆ, ಈ ದೇಶಕ್ಕೆ ಏನು ಮಾಡದಕ್ಕೂ ಜೊತೆಯಾಗ್ಯವುರೆ, ನೋಡನ ಇರಿ ಅದೇನಾಯ್ತದೊ ನೋಡನ.”

ನಾನು: ನಮಸ್ಕಾರ ಸರ್ ಬರ್ತೀನಿ.
ತಿಮ್ಮಪ್ಪನವರು: ಆಯ್ತು ಹೋಗಿ ಬನ್ನಿ.

ಬಿ.ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...