Homeಮುಖಪುಟ"ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ'': ಕಾಗೋಡು ತಿಮ್ಮಪ್ಪ ಸಂದರ್ಶನ

“ಕಾಂಗ್ರೆಸ್ ಅಧೋಗತಿಗಿಳಿದದೆ; ಎಡೂರಪ್ಪನ ಬೆನ್ನಿಗೆ ಮಠಮಾನ್ಯಗಳವೆ”: ಕಾಗೋಡು ತಿಮ್ಮಪ್ಪ ಸಂದರ್ಶನ

- Advertisement -
- Advertisement -

ಕಾಗೋಡು ತಿಮ್ಮಪ್ಪನವರು ನಮ್ಮ ನಡುವಿನ ವಿಶಿಷ್ಟ ರಾಜಕಾರಣಿ. ಚುನಾವಣೆಯ ಸೋಲು ಗೆಲುವುಗಳನ್ನ ಬದಿಗಿಟ್ಟು, ಈ ವ್ಯವಸ್ಥೆಯ ಬಗ್ಗೆ ಗಾಢವಾಗಿ ಚಿಂತಿಸುವವರು. ಆ ಕಾರಣಕ್ಕೆ ಇವರನ್ನು ಕಂಡರೆ ಪಾರ್ಟಿಯ ಕಾರ್ಯಕರ್ತರಿಗೆ ಮತ್ತು ಸರಕಾರದ ಕರ್ಮಾಚಾರಿಗಳಿಗೆ ಅಷ್ಟೊಂದು ಇಷ್ಟವಿಲ್ಲ. ಪಾರ್ಟಿ ಕಾರ್ಯಕರ್ತರಿಂದ ಇವರು ನಿರೀಕ್ಷಿಸುವುದು ಕ್ಷೇತ್ರಕ್ಕೆ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ. ಆದ್ದರಿಂದ ವಿನಾಕಾರಣದ ಕಾಡುಹರಟೆಗೆ ಅಲ್ಲಿ ಅವಕಾಶವಿಲ್ಲ. ಇನ್ನ ಸರ್ಕಾರದ ಕರ್ಮಾಚಾರಿಗಳು ಬಂದರೆ ಆಗುತ್ತಿರುವ ಕೆಲಸದ ಪ್ರಗತಿ ಎಲ್ಲಿಗೆ ಬಂತು, ನಿಂತಿದ್ದರೆ ಆದ ತೊಡಕೇನು, ಮುಂದೇನು ಮಾಡಬೇಕು ಎಂಬ ಸಲಹೆ. ಈ ಸಮಯದಲ್ಲಿ ಅಧಿಕಾರಿಯ ದಕ್ಷತೆ ಅದಕ್ಷತೆ ಗುರುತಿಸಿಬಿಡುವ ತಿಮ್ಮಪ್ಪನವರು ಕೆಲಸಗಾರನಿಗೆ ಮಾತ್ರ ಮನ್ನಣೆ ಕೊಡುತ್ತಾರೆ. ಇಲ್ಲವಾದರೆ ಬೈಗುಳ ಗ್ಯಾರಂಟಿ ಅವರೆಂದೂ ಮತದಾರನನ್ನ ಓಲೈಸಿದವರಲ್ಲ. ಓಟಿಗಾಗಿ ಹಲ್ಲು ಗಿಂಜಿದವರಲ್ಲ. ಚುನಾವಣೆ ಸಮಯದಲ್ಲಿ ಎದುರು ಸಿಕ್ಕವರ ಯೋಗಕ್ಷೇಮ ವಿಚಾರಿಸಬೇಕೆಂಬ ಸಲಹೆ ಕೇಳಿ ನಕ್ಕಂತವರು. ರಾಜಕಾರಣ ಆರಂಭವಾದದ್ದು ಸಮಾಜವಾದಿ ಪಾರ್ಟಿ ಮುಖಾಂತರ ದೇವರಾಜ ಅರಸು ಇಷ್ಟವಾದರೂ ಅವರ ಪಾರ್ಟಿ ಸೇರಲಿಲ್ಲ. ಆದರೂ ಗುಂಡೂರಾಯರ ಕಾಲದಲ್ಲಿ ಕಾಂಗ್ರೆಸ್ ಸೇರಿದ ತಿಮ್ಮಪ್ಪ ಇಂದಿಗೂ ಮನಸ್ಸು ಬದಲಿಸಿದವರಲ್ಲ. ಪಾರ್ಟಿ ಮತ್ತು ಕಾರ್ಯಕ್ರಮ ಬದ್ಧತೆ ಎಂದರೇನೆಂದು ತಿಮ್ಮಪ್ಪನವರನ್ನ ನೋಡಿದರೆ ತಿಳಿಯುತ್ತದೆ. ಒಬ್ಬ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಅನುಭವಗಳಿದ್ದರೂ ತಮ್ಮ ಭಾಗದ ಕೆಲಸ ನಿರ್ವಹಿಸಿದವರು. ಎಷ್ಟೇ ಸವಲತ್ತುಗಳನ್ನು ತಂದುಕೊಟ್ಟರೂ, ದ್ರೋಹ ಬಗೆಯುವ ಸಾಮಾನ್ಯ ಜನರ ನಡವಳಿಕೆ ಬಗ್ಗೆ ಎಂದೂ ಅಚ್ಚರಿಗೊಳ್ಳದವರು. ಜನರೇನೆಂಬುದನ್ನು ಲೋಹಿಯಾ, ಗೋಪಾಲಗೌಡರಿಂದ ತಿಳಿದವರು. ಆದ್ದರಿಂದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿಲ್ಲ. ದೇಶ ಮತ್ತು ಕರ್ನಾಟಕ ಹತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಅವರನ್ನ ಮಾತನಾಡಿಸಬೇಕೆನಿಸಿತು. ಸಾಗರದ ಅವರ ಮನೆಗೆ ಹೋದಾಗ ಈ ಹಿಂದಿನಂತೆ ಹಲವಾರು ಕಾರುಗಳು ನಿಂತಿರಲಿಲ್ಲ. ಆ ಸಾಲಿನಲ್ಲಿ ಅವರದ್ದೂ ಒಂದು ಸಾಮಾನ್ಯ ಮನೆಯಂತೆ ಕಂಡಿತು. ಒಳಗೋದಾಗ ಆರಾಮವಾಗಿ ಟಿವಿ ನೋಡುತ್ತಾ ಕುಳಿತಿದ್ದರು.

ನನ್ನನ್ನು ಕಂಡು, “ಬನ್ರೀ” ಎಂದರು. ನಂತರ ‘ಯೇಯ್’ ಎಂದರು. ಹಾಗೆಂದರೆ ಸಹಾಯಕ ಬಂದು ಟಿವಿ ಆಫ್ ಮಾಡಬೇಕು. ಅದನ್ನು ಆತ ಮಾಡಿದ. ಈ ಹಿಂದೆ ಮನೆಗೋದಾಗ ‘ಯೇಯ್’ ಎನ್ನುತ್ತಿದ್ದರು. ಹಾಗಂದರೆ ಕಾಫಿ ತಂದು ಕೊಡು ಅಂತ. ಹೀಗೆ ತಿಮ್ಮಪ್ಪನವರ ಏಕಕ್ಷರದ ಸೂಚನೆಯಲ್ಲಿ ಒಂದೊಂದು ಸಲಹೆ ಸೂಚನೆ ವಾಕ್ಯಗಳೇ ಅಡಗಿರುತ್ತವೆ. ಇಲ್ಲಿ ಮೌನದ ಭಾಷೆಯೂ ಅಧಿಕ, ಕೆಲವೊಂದು ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಮೌನವೇ ಉತ್ತರ ನೀಡುತ್ತದೆ.

ಪ್ರಶ್ನೆ: ಏನ್ ಸಾರ್ ದೇಶ ಹಿಂಗೆ ಮಾಡಿದ್ರು?
ಉತ್ತರ: ಮಾಡ್ತರೆ, ಅವುರಿಬ್ರು ಜೊತೆಯಾಗ್ಯವುರೆ, ಅವುರ್ಯಂಗೆ ಜೊತೆಯಾಗ್ಯವುರೆ ಅಂದ್ರೇ ಅವುರಿಗೆ ಕೌಂಟ್ರು ಕೊಡಕ್ಕೆ ನಮ್ಮಲ್ಯಾರು ಇಲ್ಲ. ಪಾಪ ಆ ಯಮ್ಮ ಮಮತಾ ಬ್ಯಾನರ್ಜಿ ಒಬ್ಬಳೆ ಎಷ್ಟು ಅಂತ ಹೋರಾಟ ಕೊಡಕ್ಕಾಯ್ತದೆ. ಒಂದು ಎಂಟತ್ತು ಸ್ಟೇಟಲ್ಲಿ ಅವುಳ ತರ ಹೋರಾಟ ಕೊಡೋರಿದ್ರೆ ಇವುರಿಂಗಾಡಕ್ಕಾಯ್ತಿರಲಿಲ್ಲ.

ಪ್ರಶ್ನೆ: ಕಾಂಗ್ರೆಸ್ ಏನ್ ಸಾರ್ ಹಿಂಗಾಯ್ತು?
ಉತ್ತರ: ಬಣ ಮಾಡಿಕಂಡು ಕಿತ್ತಾಡ್ತಾ ಅವೆ. ಮೋದಿಗೆ ಉತ್ತರ ಕೊಡೋನು ಯಾರು ಇಲ್ಲ. ಕಾಂಗ್ರೆಸ್ ಅಧೋಗತಿಗಿಳಿದದೆ ಏನು ಮಾಡದು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದೋರು. ಮೋದಿ ಎದುರಿಗೆ ಮಾತಾಡಲಿಲ್ಲ. ಈಗ್ಲು ಯಾರೂ ಮಾತಾಡಲಿಲ್ಲ.

ಪ್ರಶ್ನೆ: ಜನಗಳಿಗೆ ದುಡ್ಡು ಕೊಡ್ತಾ ಅವುರೆ ಸಾರ್, ದುಡ್ಡು ತಗಂಡು ಓಟು ಮಾಡ್ತರೆ, ಇನ್ನ ನಿಮ್ಮಂಥೋರು ಗೆಲ್ಲಕ್ಕಾಗಲ್ಲ ಅಲವೆ?
ಉತ್ತರ: ದುಡ್ಡು ತಗೋಬ್ಯಾಡಿ ಅಂತ ಹೇಳಬೇಕು. ಒಂಥರದ ಜನಾಂದೋಲನ ನ್ಯಡಿ ಬೇಕು. ಆಗ ದುಡ್ಡಿದ್ದೋರ ಸೋಲಸಬವುದು.

ಪ್ರಶ್ನೆ: ಜನ ಸಾರ್, ನಾನು ಮಂಡ್ಯದ ಲೋಕಸಭಾ ಚುನಾವಣೆ ನೋಡಿದೆ. ಕಾಂಗ್ರೆಸ್ಸಿನೋರು ನೋರ್ರುಪಾಯಿ ಕೊಟ್ಟು ಕುಮಾರಸ್ವಾಮಿ ಕಡಿಯೋರು ಐದು ನೂರ್ರುಪಾಯಿ ಕೊಟ್ರು. ಆದ್ರು ಜನ ನೂರ್ರುಪಾಯಿ ಕಡಿಕೆ ಓಟು ಮಾಡಿದ್ರು. (ನಗು)
ಉತ್ತರ: ಥೂ ಅವ್ಯಲ್ಲ ಅಲ್ಲ, ಹಣ ತಗಂಡು ಓಟು ಮಾಡಿದ ಅಪಾಯನ ನಮ್ಮ ಜನಗಳಿಗೆ ಹೇಳಬೇಕು ಕೇಳ್ತರೆ.

ಪ್ರಶ್ನೆ: ಎಡೂರಪ್ಪನ ಆಡಳಿತದ ಬಗ್ಗೆ ಏನನ್ನಸತ್ತೆ ಸಾರ್?
ಉತ್ತರ: ಅವುನ ರಾಜಕಾರಣನೆ ಬೇರೆ ಕಂಡ್ರೀ ಮೊನ್ನೆ ಅವುನ್ಯಾರೋ ಸ್ವಾಮಿ ಯಾರವುನು?
ನಾನು: ವಚನಾನಂದ
ಉತ್ತರ: ಹಾ| ಅವನು ಏನೊ ಅಂದ ಅಂತ ಉಳದೋರೆಲ್ಲ ಯಂಗೆ ಮ್ಯಾಲೆ ಬಿದ್ರು. ಅಂಗೆ ಮಠಮಾನ್ಯ ಎಡೂರಪ್ಪನ ಬೆನ್ನಿಗವೆ. ಟೀಕೆ ಮಾಡಿದೊರು ಓಲೈಸೋರು ಯಲ್ರು ಅವುನ ಕಡಿಕವುರೆ ಆದ್ರಿಂದ ಆತನ ರಾಜಕಾರಣದ ಆಲೋಚನೆ ಬೇರೆ. ನಾವು ನಿರೀಕ್ಷೆ ಮಾಡೋದೆ ಬೇರೆ.

ಪ್ರಶ್ನೆ: ಮಂತ್ರಿಗಳು ಎಮ್ಮೆಲ್ಲೆಗಳು ನೇರವಾಗಿ ಮತೀಯವಾಗಿ ಮಾತಾಡ್ತರಲ್ಲ ಸಾರ್?
ಉತ್ತರ: ಮಾತಾಡ್ತರೆ, ಅವುರ ಮನಸಲ್ಲಿ ಇದ್ದದ್ದೇ ಅದಲ್ವ. ಈಗ ಬಾಯಿ ಬಿಡ್ತರಷ್ಟೇಯ ಯಾವನಾದ್ರು ಎಂಪಿ ಬಾಯಿ ಬಿಡ್ತನ ಮೋದಿ ಶಾ ಇಬ್ರೆ ಇರದೀಗ, ಏನು ಮಾಡಿದ್ರು ಜೊತೆಲಿ ಮಾಡ್ತರೆ, ಈ ದೇಶಕ್ಕೆ ಏನು ಮಾಡದಕ್ಕೂ ಜೊತೆಯಾಗ್ಯವುರೆ, ನೋಡನ ಇರಿ ಅದೇನಾಯ್ತದೊ ನೋಡನ.”

ನಾನು: ನಮಸ್ಕಾರ ಸರ್ ಬರ್ತೀನಿ.
ತಿಮ್ಮಪ್ಪನವರು: ಆಯ್ತು ಹೋಗಿ ಬನ್ನಿ.

ಬಿ.ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...