Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

ಕಳೆದುಹೋದ ದಿನಗಳು -1: ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು

- Advertisement -
- Advertisement -

1930 ರ ದಶಕ ಬ್ರಿಟಿಷರ ಆಳ್ವಿಕೆ. ಕೊಡಗು ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮಡಿಕೇರಿಯ ಕೋಟೆ ಹೆಬ್ಬಾಗಿಲ ಬಳಿ ಈಗ ಇರುವ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ ಅಂದಿನ ಜಿಲ್ಲಾ ಕಲೆಕ್ಟರ್‌ರ ನಿವಾಸ. ಅದು ಈಗ ಇರುವಂತಹ ವಿದ್ಯುತ್, ಗ್ಯಾಸ್, ಸೀಮೆಎಣ್ಣೆ ಸ್ಟವ್ ಮುಂತಾದ ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಕಾಲ. ಮಡಿಕೇರಿ ಪೇಟೆಯಲ್ಲಿ ಒಲೆ ಉರಿಯಬೇಕಾದರೆ ಹಳ್ಳಿಯಿಂದ ಸೌದೆ ಬರಬೇಕು.

ಪ್ರತಿದಿನ ಮದ್ಯಾಹ್ನ ಮೂರುಗಂಟೆಯ ವೇಳೆಗೆ ಸೌದೆ ತುಂಬಿದ ಎತ್ತಿನ ಗಾಡಿಗಳು ಟೋಲ್ ಗೇಟ್ (ಇಂದಿನ ಜನರಲ್ ತಿಮ್ಮಯ್ಯ ಸರ್ಕಲ್) ನಲ್ಲಿ ಸುಂಕ ಕಟ್ಟಿ ಊರೊಳಗೆ ಬರಬೇಕು.

ಅಲ್ಲಿಂದ ಮುಂದೆ ಬಂದು ಕೋಟೆ ಬಾಗಿಲು ದಾಟಿದ ಕೂಡಲೇ ರಸ್ತೆ ಕಡಿದಾದ ಇಳಿಜಾರು. ಸೌದೆ ತುಂಬಿದ ಎತ್ತಿನಗಾಡಿಗಳು ಬಿರಿ (ಎತ್ತಿನ ಗಾಡಿಗಳ ದೇಸೀ ಬ್ರೇಕ್) ಹಾಕಿಯೇ ಮುಂದೆ ಸಾಗಬೇಕು. ಎತ್ತಿನ ಗಾಡಿಗೆ ಬಿರಿ ಹಾಕಿದರೆ ಆಗುವ ಕಿರ್ರೋಂ….. ಎನ್ನುವ ಸದ್ದು ಮೈಲು ದೂರಕ್ಕೂ ಕೇಳುತ್ತದೆ.

ಕೋಟೆ ಬಾಗಿಲ ಮುಂದಿದ್ದ ಜಿಲ್ಲಾ ಕಲೆಕ್ಟರ್ ಮನೆಯಲ್ಲಿ ಕಲೆಕ್ಟರ್‌ರ ಪತ್ನಿ‌ಗೆ ಅದು ಮದ್ಯಾಹ್ನದ ನಿದ್ದೆಯ ಸಮಯ. ಈ ಎತ್ತಿನ ಗಾಡಿಗಳ ಬಿರಿಗಳ ಸದ್ದಿನಿಂದ ಆಕೆಯ ಮಧ್ಯಾಹ್ನದ ನಿದ್ದೆಗೆ ಬಾಧೆ ಬಂತು. ಆಕೆ ಗಂಡನಲ್ಲಿ ದೂರಿರಬಹುದು.

ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್ ನ ಕಟ್ಟಡ

ಸೌದೆ ತುಂಬಿದ ಎತ್ತಿನಗಾಡಿಗಳು ಟೋಲ್ ಗೇಟ್ ನಿಂದ ಮುಂದೆ ಊರೊಳಕ್ಕೆ ಬರಬಾರದು, ಎಂದು ಕಲೆಕ್ಟರ್ ಸಾಹೇಬರು ಫರ್ಮಾನು ಹೊರಡಿಸಿದರು. ಗಾಡಿಗಳು ಊರೊಳಗೆ ಬರುವುದು ನಿಂತುಹೋಯಿತು.

ಶ್ರೀಮಂತರು ಕೈಗಾಡಿಗಳ ಮೂಲಕ ಅಲ್ಲಿಂದಲೇ ಸೌದೆಯನ್ನು ತರಿಸಿಕೊಂಡರು. ಆದರೆ ಬಡವರ ಮನೆಯಲ್ಲಿ ಒಲೆ ಉರಿಯುವುದು ಕಷ್ಟವಾಯಿತು. ಹಾಗೇ ಎತ್ತಿನ ಗಾಡಿಗಳಲ್ಲಿ ಹಳ್ಳಿಯಿಂದ ಸೌದೆ ತಂದು ಮಾರಿ ಅದರಿಂದ ನಿತ್ಯದ ಅನ್ನ ಕಾಣುತ್ತಿದ್ದವರಿಗೂ ಸಮಸ್ಯೆಯಾಯಿತು.

ಆ ಸಮಯದಲ್ಲಿ ಮಂಗಳೂರಿನಿಂದ “ದೀನ ಬಂಧು” ಎನ್ನುವ ಪತ್ರಿಕೆಯೊಂದು ಪ್ರಕಟವಾಗುತ್ತಿತ್ತು. ಕೆಲವೇ ದಿನಗಳಲ್ಲಿ ಆ ಪತ್ರಿಕೆಯಲ್ಲಿ “ಜಿಲ್ಲಾ ಕಲೆಕ್ಟರ್‌ರ ಪತ್ನಿಯ ಮಧ್ಯಾಹ್ನದ ನಿದ್ದೆಗಾಗಿ ಬಡವರ ಅನ್ನಕ್ಕೆ ಕಲ್ಲು” ಎಂಬ ಲೇಖನ ಪ್ರಕಟವಾಯಿತು.

ಒಂದೆರಡು ದಿನಗಳಲ್ಲಿಯೇ ಬ್ರಿಟಿಷ್ ಅಧಿಕಾರಿಯ ವಿರುದ್ಧ ಬರೆಯುವ ದುಸ್ಸಾಹಸ ಮಾಡಿದ  ವ್ಯಕ್ತಿಯನ್ನು ಬಂಧಿಸಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಆ ಲೇಖನ ಬರೆದವನು ಒಂಬತ್ತನೇ ತರಗತಿ ಓದುತ್ತಿರುವ ಒಬ್ಬ ಶಾಲಾ ಬಾಲಕ ಎಂದು ಗೊತ್ತಾಗಿ ನ್ಯಾಯಾಲಯದಲ್ಲಿ ಜನ ಸೇರಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕೂಡಾ ಅಲ್ಲಿ ಜಮಾಯಿಸಿದರು.

ಆ  ಲೇಖನವನ್ನು ಬರೆದ ಶಾಲಾ ಬಾಲಕ ಎನ್.ಕೆ ಗಣಪಯ್ಯ.

ಆಗ ಜಿಲ್ಲಾ ನ್ಯಾಯಾಧೀಶರಾಗಿದ್ದವರು ಕೊಡಗಿನವರೇ ಆದ ಬೋಪಯ್ಯ ಎಂಬವರು. ಅವರಿಗೆ ಪರಿಸ್ಥಿತಿ ಅರಿವಾಯಿತು

ಅವರು ಬಾಲಕ ಗಣಪಯ್ಯನಿಗೆ ಇನ್ನು ಮುಂದೆ ಹೀಗೆ ಮಾಡಿದರೆ ಶಿಕ್ಷೆ ವಿಧಿಸುತ್ತೇನೆ. ಎಂದು ಎಚ್ಚರಿಸಿ ಬಿಟ್ಟು ಬಿಟ್ಟರಂತೆ.

ಬಹುಶಃ ಕಲೆಕ್ಟರ್ ಸಾಹೇಬರಿಗೂ ತಮ್ಮ ತಪ್ಪು ಅರಿವಾಯಿತೋ ಅಥವಾ ಯಾರಾದರೂ ತಿಳಿಹೇಳಿದರೋ ಗಾಡಿಗಳು ಊರೊಳಗೆ ಬರಬಹುದೆಂದು ಅಪ್ಪಣೆಯಾಯಿತು.

ಈ ವಿಚಾರವನ್ನು ನನಗೆ ತಿಳಿಸಿದವರು ಸಿ.ಎಂ. ಪೂಣಚ್ಚನವರು. ಮೇಲಿನ ಘಟನೆ ನಡೆದಾಗ ಅವರು ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ.

“ನಾವೆಲ್ಲ ಆಶ್ಚರ್ಯ, ಕುತೂಹಲಗಳಿಂದ ಗಣಪಯ್ಯನವರನ್ನು ನೋಡುತ್ತಿದ್ದೆವು. ನಮ್ಮಂತವರ ಕಣ್ಣಿನಲ್ಲಿ ಅವರೊಬ್ಬ ಹೀರೋ… ಮುಂದೆ ಅವರನ್ನು ನನ್ನ ಗುರುಗಳೆಂದೇ ಪರಿಗಣಿಸಿದೆ ಎಂದರು ಪೂಣಚ್ಚ. ಆ ಘಟನೆಯ ನಂತರ ಗಣಪಯ್ಯನವರನ್ನು ಸಹಪಾಠಿಗಳು ಮತ್ತು ಕೆಲವರು ಪರಿಚಿತರು “ದೀನಬಂಧು ಗಣಪಯ್ಯ” ಎನ್ನುತ್ತಿದ್ದರಂತೆ!

ಕೊಡಗಿನ ವಿರಾಜಪೇಟೆ ತಾಲ್ಲೂಕು ನರಿಯಂದಡ ಗ್ರಾಮದ ಕೃಷ್ಣಯ್ಯನವರ ಮಗ   ಗಣಪಯ್ಯನವರದ್ದು ಕಷ್ಟದ ಬದುಕು. ಮನೆಯಲ್ಲಿ ಬಡತನ, ಪ್ರೌಢಶಾಲೆ ತಲಪಿದ್ದೇ ದೊಡ್ಡದು. ಅಲ್ಲಿಗೇ ವಿದ್ಯೆ ಮೊಟಕಾಯಿತು, ಜೀವನ ನಿರ್ವಹಣೆಗೆ ಹಲವು ಸಣ್ಣ ಪುಟ್ಟ ಚಾಕರಿಗಳನ್ನು ಮಾಡಿದರು.

ಬಾಲ್ಯದಿಂದ ಬಂದ ಕೃಷಿ ಅನುಭವವಿತ್ತು. ನಂತರದ ದಿನಗಳಲ್ಲಿ ಸಣ್ಣ ಪ್ರಾಯದಲ್ಲೇ ಕೊಡಗಿನ ಸಾಕಮ್ಮನವರ ಕಾಫಿತೋಟದಲ್ಲಿ ಕೆಲಸಕ್ಕೆ ಸೇರಿದರು.

(ಮುಂದುವರೆಯುತ್ತದೆ…)

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಸಂವಿಧಾನದಿಂದ ಮಾತ್ರ ರೈತನ ಮಗನಾದ ನಾನು ಸುಪ್ರೀಂ ಕೋರ್ಟ್‌ವರೆಗೂ ತಲುಪಲು ಸಾಧ್ಯವಾಯಿತು: ಜಸ್ಟಿಸ್ ನಾಗಮೋಹನ್ ದಾಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚೆನ್ನಾಗಿದೆ. ಪ್ರಸಾದರೆ. ಕೆಲವೊಂದನ್ನು ಓದಿದ್ದೆ. ಇನ್ನು ಮುಂದೆ ಎಲ್ಲವನ್ನೂ ಓದಬಹುದು. ಶುಭಾಶಯಗಳು.

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...