Homeಅಂಕಣಗಳುಸಾಧ್ಯವಾದಲೆಲ್ಲಾ ಗಿಡ ನೆಡಿ, ಹೆಂಡಕ್ಕೆ ಬದಲು ಹಾಲು - ಗಣಪಯ್ಯನವರ ಧ್ಯೇಯಗಳು

ಸಾಧ್ಯವಾದಲೆಲ್ಲಾ ಗಿಡ ನೆಡಿ, ಹೆಂಡಕ್ಕೆ ಬದಲು ಹಾಲು – ಗಣಪಯ್ಯನವರ ಧ್ಯೇಯಗಳು

ಅವರು ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಸೆರಮನೆಯಲ್ಲಿದ್ದಾಗಲೂ ಹಾರ್ಲೆಯ ತೋಟದಿಂದ ನೂರು ಕಾಫಿಗಿಡಗಳನ್ನು ತರಿಸಿಕೊಂಡು, ಸೆರೆಮನೆ ಆವರಣದೊಳಗೆ ನೆಟ್ಟಿದ್ದರು.

- Advertisement -
- Advertisement -

ಕಳೆದುಹೋದ ದಿನಗಳು -25

ಎರಡು ದಶಕಗಳಿಗೂ ಹೆಚ್ಚು ಕಾಲ ಹಾರ್ಲೆ ಸಮೂಹದ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ವಾಸುದೇವ ರಾವ್ ನಿವೃತ್ತರಾದರು. ಅವರ ಸ್ಥಾನಕ್ಕೆ ಹಾರ್ಲೆಯಲ್ಲೇ ಉದ್ಯೋಗಿಯಾಗಿದ್ದ ಎಂ. ನಾರಾಯಣ ಭಟ್ ಎಂಬವರು ಬಂದಿದ್ದರು. ವಾಸುದೇವರಾವ್ ಆವರಿಗೆ ಹೋಲಿಸಿದರೆ ಇವರು ಅತ್ಯಂತ ಸೌಮ್ಯ ಸ್ವಭಾವದವರು. ಸ್ವಲ್ಪಮಟ್ಟಿಗೆ ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಮಕ್ಕಳಿಗೆ ಭಜನೆ ಪದ್ಯಗಳನ್ನೂ ಹೇಳಿಕೊಡುತ್ತಿದ್ದರು. ನಮ್ಮ ಜೈಕರ್ನಾಟಕ ಸಂಘದ ಕಾರ್ಯಕ್ರಮವೊಂದರಲ್ಲಿಯೂ ಅವರು ಬಂದು ಹಾಡಿದ್ದರು.

ಅಗಲಟ್ಟಿ ಗ್ರಾಮದಲ್ಲಿ ದಲಿತರಿಗೆ ಜಮೀನು ಮಂಜೂರಾಗಿತ್ತು. ಅಲ್ಲೀಗ ಕೃಷಿ ಕೆಲಸಗಳನ್ನು ಪ್ರಾರಂಭಿಸಬೇಕಿತ್ತು. ಅದಕ್ಕಾಗಿ ಯೋಜನೆಗಳನ್ನು ತಯಾರಿಸುತ್ತಿದ್ದರು. ಒಂದು ದಿನ ಗಣಪಯ್ಯ ನನ್ನಲ್ಲಿ, ಪೂರ್ಣಿಮಾ ಎಸ್ಟೇಟಿನಲ್ಲಿ ಮುಂದಿನ ವರ್ಷ ಒಂದು ಲಕ್ಷ ಕಾಫಿಗಿಡಗಳ ಪಾತಿ ಮಾಡಬೇಕು. ಅಗಲಟ್ಟಿ, ಮಾವಿನ ಹಳ್ಳಿ ದಲಿತರಿಗೆ ಮಂಜೂರಾದ ನೂರು ಎಕರೆ ಜಮೀನಿನಲ್ಲಿ ಅವರ ಮನೆಗಳಿಗೆ ಸ್ಥಳ ಬಿಟ್ಟರೆ ಒಟ್ಟು ತೊಂಬತ್ತು ಎಕರೆ ಕಾಫಿ ಕೃಷಿ ಮಾಡಬಹುದು. ಅರಣ್ಯ ಇಲಾಖೆಯಲ್ಲಿ ಹತ್ತು ಸಾವಿರ ಗಿಡಗಳಿಗೆ ಹೇಳಿದ್ದೇನೆ, ಅರ್ಜಿ ಕೊಡಬೇಕು. ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಎಲ್ಲಾ ಲೆಕ್ಕಚಾರಗಳು ಅವರ ಮನಸ್ಸಿನಲ್ಲೇ ಕರಾರುವಾಕ್ಕಾಗಿ ತಯಾರಾಗುತ್ತಿದ್ದವು.

ಗಣಪಯ್ಯನವರು ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದರು. ಸಕಲೇಶಪುರದ ರೋಟರಿ ಸಂಸ್ಥೆಯ ಸಭಾಂಗಣ, ಸರ್ಕಾರಿ ನೌಕರರ ಭವನ, ಅನೇಕ ಕಡೆಗಳಲ್ಲಿ ಶಾಲಾ ಕೊಠಡಿಗಳು, ರಕ್ಷಿದಿ ಶಾಲೆಗೆ ವಿದ್ಯುದೀಕರಣ ಹೀಗೇ ನೂರಾರು ಕೆಲಸಗಳಾದವು. ಕೆಲವು ಕಡೆಗಳಲ್ಲಿ ಅವರು ಮಾಡಿದ ಸಹಾಯವನ್ನು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಆಯಾ ಊರಿನವರು ಹೇಳಿದಾಗ ಮಾತ್ರ ತಿಳಿಯುತ್ತಿದೆ. ತಮ್ಮ ತೋಟಗಳಿಂದ ಬರುತ್ತಿದ್ದ ಉತ್ಪನ್ನದಲ್ಲಿ ಅವರ ಕುಟುಂಬಕ್ಕೆ ಖರ್ಚಾಗುತ್ತಿದ್ದುದು, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ನಿರ್ವಹಣೆಯಷ್ಟು ಮಾತ್ರ. ಉಳಿದ ಎಲ್ಲವೂ ಸಾರ್ವಜನಿಕ ಕಾರ್ಯಗಳಿಗೆ ಮೀಸಲು.

ಎನ್.ಕೆ.ಗಣಪಯ್ಯ ರೋಟರಿ ಸಭಾಂಗಣ

ಗಣಪಯ್ಯನವರಲ್ಲಿ ಕಾರಂತರ ಕಾದಂಬರಿಗಳಿಂದ ಹಿಡಿದು ಭಾಸನ ನಾಟಕಗಳವರೆಗೆ ಒಳ್ಳೆಯ ಪುಸ್ತಕಗಳ ಸಂಗ್ರಹವಿತ್ತು. ಸಾಂಖ್ಯ ಮತ್ತು ಪತಂಜಲಿ ಯೋಗದ ಬಗ್ಗೆ ಹೆಚ್ಚು ಆಸಕ್ತಿಯುಳ್ಳವರಾಗಿದ್ದರು.

ಸಕಲೇಶಪುರದಲ್ಲಿ ಪುರಸಭಾಭವನದಲ್ಲಿ ಗಣಪಯ್ಯ ಒಮ್ಮೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಕಾರ್ಯಕ್ರಮನ್ನು ಏರ್ಪಡಿಸಿದ್ದರು. ಅಂದು ಸುಬ್ಬುಲಕ್ಷ್ಮಿ ದಂಪತಿಗಳು ಹಾರ್ಲೆ ಎಸ್ಟೇಟಿನಲ್ಲಿ ಉಳಿದಿದ್ದರು.

ಗಣಪಯ್ಯ ಗಾಂಧೀಜಿಯ ಟ್ರಸ್ಟೀ ಶಿಫ್ ಸಮಾಜವಾದದ ನೈಜ ಉದಾಹರಣೆಯಾಗಿದ್ದರು. ಆ ಕಾಲಘಟ್ಟದಲ್ಲಿ ಸಮಾಜದಲ್ಲಿ ನಾವು ಗಣಪಯ್ಯನವರಂತಹ ಹಲವಾರು ವ್ಯಕ್ತಿಗಳನ್ನು ಬೇರೆ ಬೇರೆ ಊರುಗಳಲ್ಲಿ ಕಾಣಬಹುದು. ಇದಕ್ಕೆ ಕಾರಣಗಳೇನಿರಬಹುದು ಮತ್ತು ಇದರ ಹಿನ್ನೆಲೆಗಳೇನು ಎಂಬ ವಿಚಾರಕ್ಕೆ ಮುಂದೆ ಬರೆಯುತ್ತೇನೆ.

ಅವರು ಹೇಳುತ್ತಿದ್ದುದು ಮುಖ್ಯವಾಗಿ ಎರಡು ವಿಚಾರಗಳನ್ನು. ಮೊದಲನೆಯದು “ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಗಿಡ ನೆಡಿ ಅದು ಪುಣ್ಯದ ಕೆಲಸ” ಎಂದು. ಅವರು ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರು ಸೆರಮನೆಯಲ್ಲಿದ್ದಾಗಲೂ ಹಾರ್ಲೆಯ ತೋಟದಿಂದ ನೂರು ಕಾಫಿಗಿಡಗಳನ್ನು ತರಿಸಿಕೊಂಡು, ಸೆರೆಮನೆ ಆವರಣದೊಳಗೆ ನೆಟ್ಟಿದ್ದರು. ಅವು ನಂತರ ಏನಾದವು ತಿಳಿಯದು. ಯಾಕೆಂದರೆ ಆ ಕಾರಾಗೃಹ ಈಗ “ಫ್ರೀಡಂ ಪಾರ್ಕ್” ಆಗಿದೆ. ಎರಡನೆಯ ವಿಚಾರ ಹೆಂಡ ಕುಡಿಬೇಡಿ ಬದಲಿಗೆ ಹಾಲು ಕುಡಿಯಿರಿ ಎಂದು ಹೇಳುತ್ತಿದ್ದರಲ್ಲದೆ “ಹೆಂಡಕ್ಕೆ ಬದಲು ಹಾಲು” ಇದು ನನ್ನ ಸ್ಲೋಗನ್, ಜೋರಾಗಿ ಹೇಳಿ ಎಂದು ಸಭೆಯಲ್ಲಿ ಜನರಲ್ಲಿ ಒಟ್ಟಾಗಿ ಘೋಷಣೆ ಮಾಡಿಸುತ್ತಿದ್ದರು.

ಯಾವುದೋ ಇಂತದ್ದೇ ಒಂದು ಸಂದರ್ಭದಲ್ಲಿ ಒಬ್ಬರು “ಹಾಗಾದರೆ ಕಾಫಿ?” ಎಂದು ತಮಾಷೆಗೆ ಪ್ರಶ್ನಿಸಿದರು.

ಆಗ ಗಣಪಯ್ಯ ಕಾಫಿ ಬೇಕಾದಷ್ಟು ಕುಡಿಯಿರಿ “Any time is coffee time” ಎಂದು ಬಿಟ್ಟರು !.

Any time is coffee time – ಗಣಪಯ್ಯ

ಈ ಘೋಷವಾಕ್ಯ ನಂತರದ ದಿನಗಳಲ್ಲಿ ಗಣಪಯ್ಯನವರ “ಹೆಂಡಕ್ಕೆ ಬದಲು ಹಾಲು” ಘೋಷಣೆಯನ್ನು ಹಿಂದಿಕ್ಕಿ ಎಷ್ಟು ಜನಪ್ರಿಯವಾಯಿತೆಂದರೆ, ಬೆಂಗಳೂರಿನ ಕಾಫಿ ಪುಡಿ ತಯಾರಕರೊಬ್ಬರು ಇದನ್ನು ತಮ್ಮ ಕಾಫಿ ಪುಡಿಯ ಪ್ರಚಾರಕ್ಕೆ ಬಳಸಿಕೊಂಡಿದ್ದರು!

ಗಣಪಯ್ಯನವರ ಈ ಎಲ್ಲಾ ಕೆಲಸಗಳಲ್ಲಿ ಅವರ ಮಗ ರವೀಂದ್ರನಾಥರು ನಿರಂತರ ಜೊತೆಯಾಗಿದ್ದರು. ಇವರು ಸ್ಥಾಪಿಸಿದ ಬಾಲನಿಕೇತನ ಅನಾಥಾಶ್ರಮದಲ್ಲಿ ಹಲವಾರು ಮಕ್ಕಳು ಬದುಕು ರೂಪಿಸಿಕೊಂಡಿದ್ದರು. ಅವರಲ್ಲಿ ಕೆಲವರು ಶಿಕ್ಷಕರಾಗಿ, ಇನ್ನು ಕೆಲವರು ಸ್ವಂತ ಉದ್ಯಮಿಗಳಾಗಿ ಸಮಾಜದಲ್ಲಿ ಮನ್ನಣೆಗಳಿಸಿದ್ದಾರೆ. ಅಂಥವರಲ್ಲಿ ಒಬ್ಬರು ಮುಂದೆ ತಾವೇ ಒಂದು ಅನಾಥಾಶ್ರಮವನ್ನು ಸ್ಥಾಪಿಸಿ ಹಲವು ಮಕ್ಕಳಿಗೆ ಬೆಳಕಾಗಿದ್ದಾರೆ.

ರೋಟರಿ ಸಂಸ್ಥೆಯಲ್ಲಿ ರವೀಂದ್ರನಾಥರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು, ಅವೆಲ್ಲ, ಶಿಕ್ಷಣ, ಕೃಷಿ, ಸಾಮಾಜಿಕ ಸೇವೆ ಹೈನುಗಾರಿಕೆ ಮುಂತಾದವುಗಳಿಗೆ ಸಂಬಂಧಿಸಿದ್ದಾಗಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದುದು ಕಡಿಮೆಯೇ, ನಮ್ಮ ನಾಟಕ ಪ್ರದರ್ಶನಗಳಿಗೆ ಗಣಪಯ್ಯನವರು ನಂತರವೂ ಬರುತ್ತಿದ್ದರು.

ರವೀಂದ್ರನಾಥರು ನಮ್ಮ ಕಾರ್ಯಕ್ರಮಗಳಿಗೆ ಬಂದದ್ದು ಕಡಿಮೆಯೇ. ಯಾರೋ ಸಂಗೀತ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಅವರು ಭಾರತದ ಅತ್ಯುನ್ನತ ಸಂಗೀತ ಪ್ರೇಮಿಗಳಲ್ಲಿ ಮೊದಲನೆಯವನು ಔರಂಗಜೇಬ ಎರಡನೆಯವನು ನಾನೇ ಎಂದಿದ್ದರು!

ರವೀಂದ್ರನಾಥ ಅವರು ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಮೂರುದಿನಗಳ ಚಲನಚಿತ್ರ ರಸಗ್ರಹಣ ಶಿಬಿರ ನಡೆದಿತ್ತು.

ಸಕಲೇಶಪುರ ರೋಟರಿ ಸಂಸ್ಥೆ ಯ ಸಂಯೋಜನೆಯ ನೀನಾಸಂ ಚಲನ ಚಿತ್ರ ಶಿಬಿರ

ದೇವರಲ್ಲಿ ನಂಬಿಕೆಯಿರುವ ರವಿಂದ್ರನಾಥರು ಅಷ್ಟೇ ವೈಜ್ಞಾನಿಕ ಮನೋಭಾವದವರು ಕೂಡಾ. ಆ ಕಾರಣಕ್ಕಾಗಿಯೇ ಅವರಿಗೆ ಅಥರ್ವವೇದ ಮೆಚ್ಚಿನ ಗ್ರಂಥ. ಅದನ್ನವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಅವರ ವೈಜ್ಞಾನಿಕ ವಿಚಾರಗಳು ಅನೇಕ ಸಮಕಾಲೀನರಿಗೆ ಅರ್ಥವಾಗದೆ, ರವೀಂದ್ರನಾಥರದು ಪುಸ್ತಕದ ಬದನೇಕಾಯಿ. ಅವರು ಥಿಯರಿ ಪ್ರೊಫೆಸರ್ ಪ್ರಾಕ್ಟಿಕಲ್ ಆಲ್ಲ ಎಂದು ಹೇಳುತ್ತಿದ್ದರು- ಈಗಲೂ ಹೇಳುತ್ತಿದ್ದಾರೆ. ಅದು  ಸಾಪೇಕ್ಷ ನಿಜ ಯಾಕೆಂದರೆ ಮೂವತ್ತು ವರ್ಷದ ಹಿಂದೆಯೇ ಅವರು ನಮಗೆ ಮುಂದೆ ಈ ಎಲ್ಲ ಇಂಧನಗಳೂ ಪ್ರಯೋಜನಕ್ಕೆ ಬಾರವು ನಾವು ಸೌರಶಕ್ತಿಯನ್ನೇ ಅವಲಂಬಿಸಬೇಕು ಆ ದಿನ ಬರುತ್ತದೆ ಎಂದಿದ್ದರು. ಹಳ್ಳಿಗಳಿಗೆ ಇನ್ನೂ ಟಿವಿ ಬಂದಿರಲಿಲ್ಲ ಆ ಕಾಲದಲ್ಲೇ ಮುಂದೆ ಸಿನಿಮಾ ರೀಲುಗಳನ್ನು ಹೊತ್ತುಕೊಂಡು ಓಡಾಡಬೇಕಿಲ್ಲ ಉಪಗ್ರಹಗಳಿಂದ ನೇರವಾಗಿ ಸಿನಿಮಾ ಮಂದಿರಗಳಿಗೆ ಸಿನಿಮಾ ರವಾನೆ ಮಾಡಬಹುದು ಎಂದರು. 90 ದಶಕದಲ್ಲಿ ಅನೇಕರು ಕಂಪ್ಯೂಟರ್ ಉಪಯೋಗಿಸಲು ತಿಣುಕಾಡುತ್ತಿರುವಾಗ  ಕಂಪ್ಯೂಟರ್ ಉಪಯೋಗಿಸಲು ಪ್ರೋಗ್ರಾಮಿಂಗ್  ಮಾಡುವಷ್ಟು ಕಲಿತರಲ್ಲದೆ  ಎಸ್ಟೇಟಿನ ಎಲ್ಲ ವ್ಯವಹಾರಗಳಿಗೂ ಕಂಪ್ಯೂಟರ್ ಬಳಸಲಾರಂಭಿಸಿದರು.

ಯಾವುದು ವೈಜ್ಞಾನಿಕ ಯಾವುದು ಅಲ್ಲ ಎನ್ನುವುದನ್ನು ತುಂಬ ಸರಳವಾಗಿ ವಿವರಿಸುತ್ತಿದ್ದರು. “ನೋಡು ಒಂದು ಕೆಲಸ ಅಥವಾ ಪ್ರಯೋಗ ಉದಾಹರಣೆಗೆ ಅರಿಶಿನಕ್ಕೆ ಸುಣ್ಣ ಹಾಕಿದರೆ ಕೆಂಪಾಗುತ್ತದೆ. ಅದು ನಾನು ಹಾಕಿದರೂ ಆಗುತ್ತದೆ ನೀನು ಹಾಕಿದರೂ ಆಗುತ್ತದೆ, ಹಾಗಾಗಿ ಅದು ವೈಜ್ಞಾನಿಕ ಸತ್ಯ. ನಾನು ಅರಶಿನಕ್ಕೆ ಸುಣ್ಣ ಹಾಕಿದಾಗ ಕೆಂಪಾಯಿತು, ನೀನು ಹಾಕಿದಾಗ ಆಗಲಿಲ್ಲ ಎಂದರೆ, ಅದು ಸತ್ಯ ಅಲ್ಲ ಆಗ ನಾನೇನೋ ಟ್ರಿಕ್ ಮಾಡಿದ್ದೇನೆ ಎನ್ನುವುದು ಮಾತ್ರ ಸತ್ಯ!” ಎಂದಿದ್ದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು -22: ದಲಿತರಿಗೆ ಭೂಮಿ ಮತ್ತು ರೈತ ಸಂಘದ ಹುಟ್ಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...