Homeಕರ್ನಾಟಕಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

ಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

- Advertisement -
- Advertisement -

 ಶುದ್ಧೋದನ |

ಎಲ್ಲರೂ ಸೇರಿದರು ಹೊಸ ಪಕ್ಷ ತಂಗಿ
ಬಿಡಲಿಲ್ಲ ನಾನೊಬ್ಬನೇ ಹಳೆಯ ಅಂಗಿ
ನನಗೆ ಬೇಕಾಗಿಲ್ಲ ಹೊಸ ಹಗಲುವೇಷ
ವೇಷಧಾರಿಗಳಿಂದ ಹಾಳಾಯಿತು ದೇಶ
ಇದು ರೈತ ಹೋರಾಟಗಾರ, ಶಿಕ್ಷಣ ತಜ್ಞ, ನಿಜ ಜನನಾಯಕ ದಿನಕರ ದೇಸಾಯಿ 1960ರ ದಶಕದಲ್ಲಿ ಬರೆದ ಚುಟುಕು. ಪಕ್ಷಾಂತರ ಪಿಡುಗಿಂದ ರೋಸಿದ ದೇಸಾಯರು ಇಂಥ ಹಲವು ಚೌಪದಿ ಕಟ್ಟಿದ್ದಾರೆ. ದೇಸಾಯರು ರಚಿಸಿದ ಸಾವಿರಾರು ಚುಟುಕುಗಳಲ್ಲಿ ಮುಕ್ಕಾಲು ಪಾಲು ರಾಜಕೀಯ ವಿಡಂಬನೆ, ವಿಮರ್ಶೆಗೆ ಸಂಬಂಧಿಸಿದ್ದು. 1967ರಲ್ಲಿ ದೇಸಾಯರು ಉತ್ತರ ಕನ್ನಡದಿಂದ ಗೆದ್ದು ಪಾರ್ಲಿಮೆಂಟ್‍ಗೆ ಹೋಗಿದ್ದರು. ಮೊದಲೊಮ್ಮೆ ಸೋತಿದ್ದ ದೇಸಾಯರು 1971ರಲ್ಲಿ ಗೆಲ್ಲಲಾಗಲಿಲ್ಲ; ಆ ನಂತರ ರಾಜಕೀಯದಿಂದ ದೂರಾದರು.
ಸದಾ ಜನಪರವಾಗಿ ತುಡಿಯುತ್ತಿದ್ದ, ದುಡಿಯುತ್ತಿದ್ದ ದೇಸಾಯರಂತೆ ಹಲವು ಸಜ್ಜನರು ಕೆನರಾ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಹೇಗೆ ಮೋದಿ ಮಂಕುಬೂದಿ ಹಾರಾಡುತ್ತಿದೆಯೋ ಹಾಗೆ ಅಂದು ಇಂದಿರಾ ಭ್ರಮೆ ಜಿಲ್ಲೆಯಲ್ಲಿತ್ತು. ಹಾಗಾಗಿ ಉಡುಪಿಯಿಂದ ವಲಸೆ ಬಂದಿದ್ದ ಜೋಕಿಮ್ ಆಳ್ವನಂಥ ಕೆಲಸಕ್ಕೆ ಬಾರದವರು ಎರಡೆರಡು ಬಾರಿ ಕೆನರಾದ ಎಂಪಿಯಾಗಿದ್ದು ದೌರ್ಭಾಗ್ಯವೇ ಸರಿ. ಜೋಯಿಡಾದ ರಾಮನಗರದ ಬಳಿ ವಾಸವಾಗಿದ್ದ ನಿವೃತ್ತ ಸೈನ್ಯಾಧಿಕಾರಿ, ಪ್ರಸಿದ್ಧ ಸಾಹಿತಿ ಮನೋಹರ್ ಮಾಳಗಾಂವ್ಕರ್ 1962ರಲ್ಲಿ ಸ್ಪರ್ಧಿಸಿದ್ದರು. ಅವರ ಮಹತ್ವ ಮತದಾರರಿಗೆ ಅರ್ಥವಾಗಲಿಲ್ಲ. ಆತ ಸೋತರು. ರಾಜಮಹಾರಾಜರು, ಗಂಗೆಯಲ್ಲಿ ತಿರುವು ತರಹದ ಕಾದಂಬರಿ ಇಂಗ್ಲಿಷ್‍ನಲ್ಲಿ ಬರೆದಿದ್ದ ಮಾಳಗಾಂವ್ಕರ್‍ನಂಥ ಜನರ ನಾಡಿಬಡಿತ ಬಲ್ಲವರ ಬದಲು ದಂಡಪಿಂಡ ಜೋಕಿಮ್‍ರನ್ನು ಜನ ಗೆಲ್ಲಿಸಿದ್ದರು.
1971ರಲ್ಲಿ ಇಂದಿರಾ ಗಾಳಿಯ ಅಲೆಯೇರಿ ಗೆದ್ದಿದ್ದು ಅಂದು ಸಹಕಾರಿ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ “ನಾಡವ” ಸಮುದಾಯದ ಬಿ.ವಿ.ನಾಯಕ್. ಭೂ ಮಾಲೀಕರ ವಿರುದ್ಧ ರೈತ-ಕೂಲಿಕಾರರ ಸಂಘಟಿಸಿ ಪ್ರಚಂಡ ಹೋರಾಟ ಕಟ್ಟಿದ್ದ ದೇಸಾಯರ ಎದುರು “ಅನಾಮಧೇಯ” ನಾಯಕ್ ಪಾರ್ಲಿಮೆಂಟ್ ಮೆಂಬರ್ ಆಗಿದ್ದರು. ನಾಯಕ್ ಮಹಾಮೇಧಾವಿ. ಅಂತಾರಾಷ್ಟ್ರಿಯ ವಿಷಯಗಳ ಮೇಲೆ ಪ್ರಭುತ್ವದಿಂದ ಮಾತಾಡುತ್ತಿದ್ದ ನಾಯಕ್ ಇಂದಿರಾ ಆಪ್ತ ವಲಯದಲ್ಲಿದ್ದರು. ಅಂದಿನ ಲೋಕಸಭಾ ಅಧ್ಯಕ್ಷ ಲ್ಲೋನ್‍ರ ಮೆಚ್ಚಿಗೆ ಪಡೆದಿದ್ದರು.
ಮಾದನ ಗೇರಿ, ಹಿರೇಗುತ್ತಿ ಬಡ ರೈತರಿಂದ ಹೊಲಗದ್ದೆ ಕಸಿದುಕೊಂಡು ಹೊರ ರಾಜ್ಯದ ಬಂಡವಾಳಶಾಹಿಗಳಿಗೆ ಕಾಸ್ಟಿಕ್ ಸೋಡಾ ತಯಾರಿಕೆಗೆ ಕೊಟ್ಟಾಗ ತಿರುಗಿ ಬಿದ್ದ ನಾಯಕ್ ಹೋರಾಟ ನಡೆಸಿದ್ದರು. ರೈತರಂತೆ ಕಚ್ಚೆ ಕಟ್ಟಿಕೊಂಡು ಪಾರ್ಲಿಮೆಂಟ್‍ಗೆ ಹೋಗಿ ಪ್ರತಿಭಟಿಸಿದ್ದರು. ಇದರಿಂದ ಅಂದಿನ ಸಿಎಂ ದೇವರಾಜ ಅರಸರ ಕೆಂಗಣ್ಣಿಗೆ ತುತ್ತಾದರು. ತುರ್ತುಪರಿಸ್ಥಿತಿ ವಿರೋಧಿಸಿ “ಲಾಂಗ್ ಲಾಂಗ್ ವೇ ಟು ಗೋ” ಎಂಬ ಪುಸ್ತಕ ಬರೆದು ಇಂದಿರೆಯ ಎದುರು ಹಾಕಿಕೊಂಡಿದ್ದರು. ನಂತರ ಕಾಂಗ್ರೆಸ್ ಟಿಕೆಟ್ ನಾಯಕ್‍ಗೆ ಸಿಗಲಿಲ್ಲ.
ತುರ್ತು ಪರಿಸ್ಥಿತಿ ಹೊತ್ತಲ್ಲಿ ಜೈಲು ಪಾಲಾಗಿದ್ದ “ಜಾಣ” ರಾಮಕೃಷ್ಣ ಹೆಗಡೆ 1977ರ ಎಲೆಕ್ಷನ್‍ನಲ್ಲಿ ಸಂಯುಕ್ತ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಉತ್ತರ ಕನ್ನಡದಲ್ಲಿ ಹೆಗಡೆಗೆ ಎದುರಾಳಿ ಬಿ.ಪಿ.ಕದಮ್‍ಗಿಂತ ಹೆಚ್ಚು ಮತ ಬಂದಿತ್ತು. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ-ಕಿತ್ತೂರಲ್ಲಿ ಹಿನ್ನಡೆಯಾಗಿ ಬರೀ ಮೂವತ್ತು ಸಾವಿರ ಮತದಿಂದ ಸೋಲಬೇಕಾಯ್ತು. ಆನಂತರ ಕಾಂಗ್ರೆಸ್‍ನ ಜೋಬದ್ರಗೇಡಿ ಎಂದೇ ಹೆಸರುವಾಸಿಯಾಗಿದ್ದ ದೇವರಾಯ ನಾಯ್ಕ ಸತತ ನಾಲ್ಕು ಬಾರಿ ಸಂಸದರಾಗಿದ್ದರು. ಇಂದಿರಾ ಮತ್ತು ಬಂ ಪ್ರಭಾವದಿಂದ ನಾಯ್ಕ್ ಗೆಲ್ಲುತ್ತಿದ್ದರು. ಉತ್ತರ ಕನ್ನಡದ ಹೊನ್ನಾವರ ಮೂಲದ ಜನಪ್ರಿಯ ಸಿನಿನಟ ಅನಂತನಾಗ್ ಜನತಾ ಪಕ್ಷದಿಂದ ಅಖಾಡಕ್ಕಿಳಿದಾಗ ಜಿಲ್ಲೆಯಲ್ಲಿ ಕೈಗಾ-ಸೀಬರ್ಡ್ ಪರಿಸರ ಹೋರಾಟ ಬಿರುಸಾಗಿತ್ತು. ಕೈಗಾ ವಿರೋಧಿ ಚಳವಳಿಯಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ- ಪಕ್ಕದ ಉಡುಪಿ ಜಿಲ್ಲೆಯ ಶಿವರಾಮಕಾರಂತರನ್ನು ಪರಿಸರವಾದಿಗಳು ಕರೆತಂದು ಕಣಕ್ಕಿಳಿಸಿದ್ದರು.
ನಾಮಪತ್ರ ಕೊಟ್ಟ ಒಂದು ದಿನವೂ ಪ್ರಚಾರ ಮಾಡದೆ ಕಾರಂತರು ವಿದೇಶಕ್ಕೆ ಹೋದರು. ಚುನಾವಣೆ ಮುಗಿದಾಗ ಬಂದರು ಆದರೂ 58 ಸಾವಿರ ಮತ ಬಂದಿತ್ತು. ಕಾರಂತ್, ಅನಂತನಾಗ್ ಇಬ್ಬರೂ ಸೋತರು. ಅದೇ ನಿದ್ದೆಬಡುಕ ದೇನಾ ಗೆದ್ದಿದ್ದರು. ಇವತ್ತು ಜಿಲ್ಲೆಯ ಪೊಲಿಟಿಕಲ್ ಡಾನ್ ಎನಿಸಿರುವ ದೇಶಪಾಂಡೆ ಜನತಾ ಪಕ್ಷ, ಜನತಾದಳದಿಂದ ಎರಡೆರಡು ಬಾರಿ ಮುಗ್ಗರಿಸಿ ಬಿದ್ದವರೇ. ವೈಚಾರಿಕ ಸಾಹಿತಿ ಗೌರೀಶ್ ಕಾಯ್ಕಿಣಿ ಒಮ್ಮೆ ಸ್ಪರ್ಧಿಸಿದ್ದರು. ಅಧಿಕೃತವಾಗಿ ಕಾಯ್ಕಿಣಿ ಸೋತಿದ್ದರು; ಜಿಲ್ಲೆಯ ಮತದಾರರು ಎಡವಿದ್ದರು. ಜೋಕಿಮ್ ಆಳ್ವರ ಸೊಸೆ ಮ್ಯಾಗಿ ನಾಲ್ಕು ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದಿದ್ದರು. ಆ ನಂತರದ್ದು ಸಂವಿಧಾನ ಬದಲಿಸುವ ಸಂಚಿನ, ದಲಿತರನ್ನು ನಾಯಿಗಳು ಎನ್ನುವ ಅನಂತ್ಮಾಣಿಯ ಹಿಂಧೂತ್ವದ ಅಂಧಯುಗ.
ಅಯೋಗ್ಯ ಮಾಣಿಯ ಗೆಲುವಿನ ಗುಟ್ಟು ಅಡಗಿರುವುದೇ ಮ್ಯಾಗಿ-ದೇಶ್ ಕಾಲೆಳೆದಾಟ ಮತ್ತು ಪುತ್ರ ವ್ಯಾಮೋಹದಲ್ಲಿ. ಪಾರ್ಟಿಯ ಸಬ್ಸಿಡಿ ಸೌಲತ್ತುಗಳೆಲ್ಲ ತಮ್ಮ ಕುಟುಂಬಕ್ಕಷ್ಟೇ ಸೀಮಿತ ಆಗಬೇಕೆಂಬ ಅವರ ಮಸಲತ್ತಿನಿಂದಾಗಿ ಎರಡನೇ ಸಾಲಿನ ನಾಯಕರ್ಯಾರನ್ನೂ ಬೆಳೆಸಲಿಲ್ಲ. ಆದರೆ ಮೋಟಿನ್ಸ್‍ರ ತಿಮ್ಮಪ್ಪ ಹೆಗಡೆ, ರಾಮಕೃಷ್ಣ ಹೆಗಡೆ, ಬಂಗಾರಪ್ಪ ತಮ್ಮ ಶಿಷ್ಯರಿಗೆ ಶಾಸಕ-ಮಂತ್ರಿ ಮಾಡಿ ನಾಯಕತ್ವ ಬೆಳೆಸಿದ್ದರು. ನಿಜಲಿಂಗಪ್ಪನವರು ಸಿಎಂ ಆಗಿದ್ದಾಗ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಶಿರಸಿಯ ಮೋಟಿನ್ಸರ್ ತಿಮ್ಮಪ್ಪ ಹೆಗಡೆ ನಾಮಕರಣಗೊಂಡಿದ್ದರು.
ಹಿರಿಯ ಮುತ್ಸದ್ದಿಯಾಗಿದ್ದ ತಿಮ್ಮಪ್ಪನವರನ್ನು ಮಂತ್ರಿ ಮಾಡಲು ನಿರ್ಧರಿಸಲಾಗಿತ್ತು. ಈ ಸುದ್ದಿ ಕೇಳಿ ತಿಮ್ಮಪ್ಪ ಖುಷಿ ಪಡಲಿಲ್ಲ, ಬದಲಿಗೆ ದಂಗಾದರು. `ನೇರವಾಗಿ ಜನರಿಂದ ಆಯ್ಕೆಯಾಗಿದ್ದ ಶಿರಸಿ ಶಾಸಕ ರಾಮಕೃಷ್ಣ ಹೆಗಡೆಯೇ ಮಂತ್ರಿಗಿರಿಗೆ ಅರ್ಹ. ನಾನು ನಾಮಕರಣ ಎಮ್ಮೆಲ್ಸಿ, ನನಗ್ಯಾಕೆ ಮಂತ್ರಿಗಿರಿ’ ಎಂದು ನಿರಾಕರಿಸುವ ತಿಮ್ಮಪ್ಪನವರು “ರಾಮಕೃಷ್ಣನಿಗೇ ಮಂತ್ರಿ ಮಾಡಿ” ಎಂದು ಸಿಎಂಗೆ ಹೇಳಿದ್ದರು. ತಿಮ್ಮಪ್ಪನವರ ಶಿಷ್ಯನಾಗಿ ರಾಜಕಾರಣ ಶುರುಮಾಡಿದ್ದ ರಾಕೃ ಹೆಗಡೆ ಮಂತ್ರಿ, ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ, ಕೇಂದ್ರ ಮಂತ್ರಿ ಆಗಿ ಬೆಳೆದದ್ದು ಇತಿಹಾಸ. ದುರಂತವೆಂದರೆ, ಹೆಗಡೆ ರಾಷ್ಟ್ರಮಟ್ಟದ ಇಮೇಜು ಬೆಳೆಸಿಕೊಂಡರೇ ಹೊರತು ಹೆತ್ತ ಜಿಲ್ಲೆಯ ಋಣ ತೀರಿಸಲೇ ಇಲ್ಲ!!
ಹೆಗಡೆಜೀ ಕೊಂಕಣ ದೇಶಪಾಂಡೆಯನ್ನು “ಸೈತಾನ”ನಾಗಿ ಬೆಳೆಸಿದರು. ದೀವರ ಆರ್.ಎಸ್.ನಾಯ್ಕರನ್ನು ರಾಜ್ಯಸಭೆಗೆ ಕಳಿಸಿದರು. ನೆರೆಯ ಶಿವಮೊಗ್ಗದ `ಬಂ’ಗೆ ಉತ್ತರ ಕನ್ನಡ (ಶಿರಸಿ) ಹೆಣ್ಣು ಕೊಟ್ಟ ಮಾವನ ಮನೆ. `ಬಂ’ ಕೆ.ಎಚ್.ಗೌಡ (ಹಾಲಕ್ಕಿ ಒಕ್ಕಲಿಗ), ಆರ್.ಎನ್.ನಾಯ್ಕ್ (ದೀವರು), ದೇವರಾಯ ನಾಯ್ಕ್ (ದೀವರು), ಪ್ರಭಾಕರ್ ರಾಣೆ (ಮರಠ), ವಂಸತ್ ಅಸ್ನೋಟಿಕರ್ (ದೇವಳಿ)ಯಂಥ ತೀರಾ ಹಿಂದುಳಿದ ವರ್ಗದವರನ್ನು ಶಾಸಕ-ಸಂಸದ-ಮಂತ್ರಿ ಮಾಡಿದ್ದರು.
ಅಂದಿನ ಲಿಬರಲ್ ನಾಯಕರಿಗೂ-ಇಂದಿನ ಪುಢಾರಿಗಳಿಗೂ ಇರುವ ವ್ಯತ್ಯಾಸವಿದು! ಇಂದು ಎರಡು-ಮೂರು ದಶಕದಿಂದ ಆಳುತ್ತಿರುವ ದೇಶ್, ಮ್ಯಾಗಿ, ಮಾಣಿಗಳೇ ಉತ್ತರ ಕನ್ನಡಕ್ಕೆ ದೊಡ್ಡ ಶಾಪವಾಗಿದ್ದಾರೆ. ಪ್ರಗತಿ, ಅಭಿವೃದ್ಧಿ, ಜನಹಿತದ ಯೋಜನೆ-ಯೋಚನೆಯ ನಾಯಕರೇ ಜಿಲ್ಲೆಯಲ್ಲಿಲ್ಲ. ನತದೃಷ್ಟ ಉತ್ತರ ಕನ್ನಡ ಜಿಲ್ಲೆಯ ನೋವಿನ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...