Homeಕರ್ನಾಟಕಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

ಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

- Advertisement -
- Advertisement -

 ಶುದ್ಧೋದನ |

ಎಲ್ಲರೂ ಸೇರಿದರು ಹೊಸ ಪಕ್ಷ ತಂಗಿ
ಬಿಡಲಿಲ್ಲ ನಾನೊಬ್ಬನೇ ಹಳೆಯ ಅಂಗಿ
ನನಗೆ ಬೇಕಾಗಿಲ್ಲ ಹೊಸ ಹಗಲುವೇಷ
ವೇಷಧಾರಿಗಳಿಂದ ಹಾಳಾಯಿತು ದೇಶ
ಇದು ರೈತ ಹೋರಾಟಗಾರ, ಶಿಕ್ಷಣ ತಜ್ಞ, ನಿಜ ಜನನಾಯಕ ದಿನಕರ ದೇಸಾಯಿ 1960ರ ದಶಕದಲ್ಲಿ ಬರೆದ ಚುಟುಕು. ಪಕ್ಷಾಂತರ ಪಿಡುಗಿಂದ ರೋಸಿದ ದೇಸಾಯರು ಇಂಥ ಹಲವು ಚೌಪದಿ ಕಟ್ಟಿದ್ದಾರೆ. ದೇಸಾಯರು ರಚಿಸಿದ ಸಾವಿರಾರು ಚುಟುಕುಗಳಲ್ಲಿ ಮುಕ್ಕಾಲು ಪಾಲು ರಾಜಕೀಯ ವಿಡಂಬನೆ, ವಿಮರ್ಶೆಗೆ ಸಂಬಂಧಿಸಿದ್ದು. 1967ರಲ್ಲಿ ದೇಸಾಯರು ಉತ್ತರ ಕನ್ನಡದಿಂದ ಗೆದ್ದು ಪಾರ್ಲಿಮೆಂಟ್‍ಗೆ ಹೋಗಿದ್ದರು. ಮೊದಲೊಮ್ಮೆ ಸೋತಿದ್ದ ದೇಸಾಯರು 1971ರಲ್ಲಿ ಗೆಲ್ಲಲಾಗಲಿಲ್ಲ; ಆ ನಂತರ ರಾಜಕೀಯದಿಂದ ದೂರಾದರು.
ಸದಾ ಜನಪರವಾಗಿ ತುಡಿಯುತ್ತಿದ್ದ, ದುಡಿಯುತ್ತಿದ್ದ ದೇಸಾಯರಂತೆ ಹಲವು ಸಜ್ಜನರು ಕೆನರಾ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಹೇಗೆ ಮೋದಿ ಮಂಕುಬೂದಿ ಹಾರಾಡುತ್ತಿದೆಯೋ ಹಾಗೆ ಅಂದು ಇಂದಿರಾ ಭ್ರಮೆ ಜಿಲ್ಲೆಯಲ್ಲಿತ್ತು. ಹಾಗಾಗಿ ಉಡುಪಿಯಿಂದ ವಲಸೆ ಬಂದಿದ್ದ ಜೋಕಿಮ್ ಆಳ್ವನಂಥ ಕೆಲಸಕ್ಕೆ ಬಾರದವರು ಎರಡೆರಡು ಬಾರಿ ಕೆನರಾದ ಎಂಪಿಯಾಗಿದ್ದು ದೌರ್ಭಾಗ್ಯವೇ ಸರಿ. ಜೋಯಿಡಾದ ರಾಮನಗರದ ಬಳಿ ವಾಸವಾಗಿದ್ದ ನಿವೃತ್ತ ಸೈನ್ಯಾಧಿಕಾರಿ, ಪ್ರಸಿದ್ಧ ಸಾಹಿತಿ ಮನೋಹರ್ ಮಾಳಗಾಂವ್ಕರ್ 1962ರಲ್ಲಿ ಸ್ಪರ್ಧಿಸಿದ್ದರು. ಅವರ ಮಹತ್ವ ಮತದಾರರಿಗೆ ಅರ್ಥವಾಗಲಿಲ್ಲ. ಆತ ಸೋತರು. ರಾಜಮಹಾರಾಜರು, ಗಂಗೆಯಲ್ಲಿ ತಿರುವು ತರಹದ ಕಾದಂಬರಿ ಇಂಗ್ಲಿಷ್‍ನಲ್ಲಿ ಬರೆದಿದ್ದ ಮಾಳಗಾಂವ್ಕರ್‍ನಂಥ ಜನರ ನಾಡಿಬಡಿತ ಬಲ್ಲವರ ಬದಲು ದಂಡಪಿಂಡ ಜೋಕಿಮ್‍ರನ್ನು ಜನ ಗೆಲ್ಲಿಸಿದ್ದರು.
1971ರಲ್ಲಿ ಇಂದಿರಾ ಗಾಳಿಯ ಅಲೆಯೇರಿ ಗೆದ್ದಿದ್ದು ಅಂದು ಸಹಕಾರಿ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ “ನಾಡವ” ಸಮುದಾಯದ ಬಿ.ವಿ.ನಾಯಕ್. ಭೂ ಮಾಲೀಕರ ವಿರುದ್ಧ ರೈತ-ಕೂಲಿಕಾರರ ಸಂಘಟಿಸಿ ಪ್ರಚಂಡ ಹೋರಾಟ ಕಟ್ಟಿದ್ದ ದೇಸಾಯರ ಎದುರು “ಅನಾಮಧೇಯ” ನಾಯಕ್ ಪಾರ್ಲಿಮೆಂಟ್ ಮೆಂಬರ್ ಆಗಿದ್ದರು. ನಾಯಕ್ ಮಹಾಮೇಧಾವಿ. ಅಂತಾರಾಷ್ಟ್ರಿಯ ವಿಷಯಗಳ ಮೇಲೆ ಪ್ರಭುತ್ವದಿಂದ ಮಾತಾಡುತ್ತಿದ್ದ ನಾಯಕ್ ಇಂದಿರಾ ಆಪ್ತ ವಲಯದಲ್ಲಿದ್ದರು. ಅಂದಿನ ಲೋಕಸಭಾ ಅಧ್ಯಕ್ಷ ಲ್ಲೋನ್‍ರ ಮೆಚ್ಚಿಗೆ ಪಡೆದಿದ್ದರು.
ಮಾದನ ಗೇರಿ, ಹಿರೇಗುತ್ತಿ ಬಡ ರೈತರಿಂದ ಹೊಲಗದ್ದೆ ಕಸಿದುಕೊಂಡು ಹೊರ ರಾಜ್ಯದ ಬಂಡವಾಳಶಾಹಿಗಳಿಗೆ ಕಾಸ್ಟಿಕ್ ಸೋಡಾ ತಯಾರಿಕೆಗೆ ಕೊಟ್ಟಾಗ ತಿರುಗಿ ಬಿದ್ದ ನಾಯಕ್ ಹೋರಾಟ ನಡೆಸಿದ್ದರು. ರೈತರಂತೆ ಕಚ್ಚೆ ಕಟ್ಟಿಕೊಂಡು ಪಾರ್ಲಿಮೆಂಟ್‍ಗೆ ಹೋಗಿ ಪ್ರತಿಭಟಿಸಿದ್ದರು. ಇದರಿಂದ ಅಂದಿನ ಸಿಎಂ ದೇವರಾಜ ಅರಸರ ಕೆಂಗಣ್ಣಿಗೆ ತುತ್ತಾದರು. ತುರ್ತುಪರಿಸ್ಥಿತಿ ವಿರೋಧಿಸಿ “ಲಾಂಗ್ ಲಾಂಗ್ ವೇ ಟು ಗೋ” ಎಂಬ ಪುಸ್ತಕ ಬರೆದು ಇಂದಿರೆಯ ಎದುರು ಹಾಕಿಕೊಂಡಿದ್ದರು. ನಂತರ ಕಾಂಗ್ರೆಸ್ ಟಿಕೆಟ್ ನಾಯಕ್‍ಗೆ ಸಿಗಲಿಲ್ಲ.
ತುರ್ತು ಪರಿಸ್ಥಿತಿ ಹೊತ್ತಲ್ಲಿ ಜೈಲು ಪಾಲಾಗಿದ್ದ “ಜಾಣ” ರಾಮಕೃಷ್ಣ ಹೆಗಡೆ 1977ರ ಎಲೆಕ್ಷನ್‍ನಲ್ಲಿ ಸಂಯುಕ್ತ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಉತ್ತರ ಕನ್ನಡದಲ್ಲಿ ಹೆಗಡೆಗೆ ಎದುರಾಳಿ ಬಿ.ಪಿ.ಕದಮ್‍ಗಿಂತ ಹೆಚ್ಚು ಮತ ಬಂದಿತ್ತು. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ-ಕಿತ್ತೂರಲ್ಲಿ ಹಿನ್ನಡೆಯಾಗಿ ಬರೀ ಮೂವತ್ತು ಸಾವಿರ ಮತದಿಂದ ಸೋಲಬೇಕಾಯ್ತು. ಆನಂತರ ಕಾಂಗ್ರೆಸ್‍ನ ಜೋಬದ್ರಗೇಡಿ ಎಂದೇ ಹೆಸರುವಾಸಿಯಾಗಿದ್ದ ದೇವರಾಯ ನಾಯ್ಕ ಸತತ ನಾಲ್ಕು ಬಾರಿ ಸಂಸದರಾಗಿದ್ದರು. ಇಂದಿರಾ ಮತ್ತು ಬಂ ಪ್ರಭಾವದಿಂದ ನಾಯ್ಕ್ ಗೆಲ್ಲುತ್ತಿದ್ದರು. ಉತ್ತರ ಕನ್ನಡದ ಹೊನ್ನಾವರ ಮೂಲದ ಜನಪ್ರಿಯ ಸಿನಿನಟ ಅನಂತನಾಗ್ ಜನತಾ ಪಕ್ಷದಿಂದ ಅಖಾಡಕ್ಕಿಳಿದಾಗ ಜಿಲ್ಲೆಯಲ್ಲಿ ಕೈಗಾ-ಸೀಬರ್ಡ್ ಪರಿಸರ ಹೋರಾಟ ಬಿರುಸಾಗಿತ್ತು. ಕೈಗಾ ವಿರೋಧಿ ಚಳವಳಿಯಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ- ಪಕ್ಕದ ಉಡುಪಿ ಜಿಲ್ಲೆಯ ಶಿವರಾಮಕಾರಂತರನ್ನು ಪರಿಸರವಾದಿಗಳು ಕರೆತಂದು ಕಣಕ್ಕಿಳಿಸಿದ್ದರು.
ನಾಮಪತ್ರ ಕೊಟ್ಟ ಒಂದು ದಿನವೂ ಪ್ರಚಾರ ಮಾಡದೆ ಕಾರಂತರು ವಿದೇಶಕ್ಕೆ ಹೋದರು. ಚುನಾವಣೆ ಮುಗಿದಾಗ ಬಂದರು ಆದರೂ 58 ಸಾವಿರ ಮತ ಬಂದಿತ್ತು. ಕಾರಂತ್, ಅನಂತನಾಗ್ ಇಬ್ಬರೂ ಸೋತರು. ಅದೇ ನಿದ್ದೆಬಡುಕ ದೇನಾ ಗೆದ್ದಿದ್ದರು. ಇವತ್ತು ಜಿಲ್ಲೆಯ ಪೊಲಿಟಿಕಲ್ ಡಾನ್ ಎನಿಸಿರುವ ದೇಶಪಾಂಡೆ ಜನತಾ ಪಕ್ಷ, ಜನತಾದಳದಿಂದ ಎರಡೆರಡು ಬಾರಿ ಮುಗ್ಗರಿಸಿ ಬಿದ್ದವರೇ. ವೈಚಾರಿಕ ಸಾಹಿತಿ ಗೌರೀಶ್ ಕಾಯ್ಕಿಣಿ ಒಮ್ಮೆ ಸ್ಪರ್ಧಿಸಿದ್ದರು. ಅಧಿಕೃತವಾಗಿ ಕಾಯ್ಕಿಣಿ ಸೋತಿದ್ದರು; ಜಿಲ್ಲೆಯ ಮತದಾರರು ಎಡವಿದ್ದರು. ಜೋಕಿಮ್ ಆಳ್ವರ ಸೊಸೆ ಮ್ಯಾಗಿ ನಾಲ್ಕು ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದಿದ್ದರು. ಆ ನಂತರದ್ದು ಸಂವಿಧಾನ ಬದಲಿಸುವ ಸಂಚಿನ, ದಲಿತರನ್ನು ನಾಯಿಗಳು ಎನ್ನುವ ಅನಂತ್ಮಾಣಿಯ ಹಿಂಧೂತ್ವದ ಅಂಧಯುಗ.
ಅಯೋಗ್ಯ ಮಾಣಿಯ ಗೆಲುವಿನ ಗುಟ್ಟು ಅಡಗಿರುವುದೇ ಮ್ಯಾಗಿ-ದೇಶ್ ಕಾಲೆಳೆದಾಟ ಮತ್ತು ಪುತ್ರ ವ್ಯಾಮೋಹದಲ್ಲಿ. ಪಾರ್ಟಿಯ ಸಬ್ಸಿಡಿ ಸೌಲತ್ತುಗಳೆಲ್ಲ ತಮ್ಮ ಕುಟುಂಬಕ್ಕಷ್ಟೇ ಸೀಮಿತ ಆಗಬೇಕೆಂಬ ಅವರ ಮಸಲತ್ತಿನಿಂದಾಗಿ ಎರಡನೇ ಸಾಲಿನ ನಾಯಕರ್ಯಾರನ್ನೂ ಬೆಳೆಸಲಿಲ್ಲ. ಆದರೆ ಮೋಟಿನ್ಸ್‍ರ ತಿಮ್ಮಪ್ಪ ಹೆಗಡೆ, ರಾಮಕೃಷ್ಣ ಹೆಗಡೆ, ಬಂಗಾರಪ್ಪ ತಮ್ಮ ಶಿಷ್ಯರಿಗೆ ಶಾಸಕ-ಮಂತ್ರಿ ಮಾಡಿ ನಾಯಕತ್ವ ಬೆಳೆಸಿದ್ದರು. ನಿಜಲಿಂಗಪ್ಪನವರು ಸಿಎಂ ಆಗಿದ್ದಾಗ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಶಿರಸಿಯ ಮೋಟಿನ್ಸರ್ ತಿಮ್ಮಪ್ಪ ಹೆಗಡೆ ನಾಮಕರಣಗೊಂಡಿದ್ದರು.
ಹಿರಿಯ ಮುತ್ಸದ್ದಿಯಾಗಿದ್ದ ತಿಮ್ಮಪ್ಪನವರನ್ನು ಮಂತ್ರಿ ಮಾಡಲು ನಿರ್ಧರಿಸಲಾಗಿತ್ತು. ಈ ಸುದ್ದಿ ಕೇಳಿ ತಿಮ್ಮಪ್ಪ ಖುಷಿ ಪಡಲಿಲ್ಲ, ಬದಲಿಗೆ ದಂಗಾದರು. `ನೇರವಾಗಿ ಜನರಿಂದ ಆಯ್ಕೆಯಾಗಿದ್ದ ಶಿರಸಿ ಶಾಸಕ ರಾಮಕೃಷ್ಣ ಹೆಗಡೆಯೇ ಮಂತ್ರಿಗಿರಿಗೆ ಅರ್ಹ. ನಾನು ನಾಮಕರಣ ಎಮ್ಮೆಲ್ಸಿ, ನನಗ್ಯಾಕೆ ಮಂತ್ರಿಗಿರಿ’ ಎಂದು ನಿರಾಕರಿಸುವ ತಿಮ್ಮಪ್ಪನವರು “ರಾಮಕೃಷ್ಣನಿಗೇ ಮಂತ್ರಿ ಮಾಡಿ” ಎಂದು ಸಿಎಂಗೆ ಹೇಳಿದ್ದರು. ತಿಮ್ಮಪ್ಪನವರ ಶಿಷ್ಯನಾಗಿ ರಾಜಕಾರಣ ಶುರುಮಾಡಿದ್ದ ರಾಕೃ ಹೆಗಡೆ ಮಂತ್ರಿ, ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ, ಕೇಂದ್ರ ಮಂತ್ರಿ ಆಗಿ ಬೆಳೆದದ್ದು ಇತಿಹಾಸ. ದುರಂತವೆಂದರೆ, ಹೆಗಡೆ ರಾಷ್ಟ್ರಮಟ್ಟದ ಇಮೇಜು ಬೆಳೆಸಿಕೊಂಡರೇ ಹೊರತು ಹೆತ್ತ ಜಿಲ್ಲೆಯ ಋಣ ತೀರಿಸಲೇ ಇಲ್ಲ!!
ಹೆಗಡೆಜೀ ಕೊಂಕಣ ದೇಶಪಾಂಡೆಯನ್ನು “ಸೈತಾನ”ನಾಗಿ ಬೆಳೆಸಿದರು. ದೀವರ ಆರ್.ಎಸ್.ನಾಯ್ಕರನ್ನು ರಾಜ್ಯಸಭೆಗೆ ಕಳಿಸಿದರು. ನೆರೆಯ ಶಿವಮೊಗ್ಗದ `ಬಂ’ಗೆ ಉತ್ತರ ಕನ್ನಡ (ಶಿರಸಿ) ಹೆಣ್ಣು ಕೊಟ್ಟ ಮಾವನ ಮನೆ. `ಬಂ’ ಕೆ.ಎಚ್.ಗೌಡ (ಹಾಲಕ್ಕಿ ಒಕ್ಕಲಿಗ), ಆರ್.ಎನ್.ನಾಯ್ಕ್ (ದೀವರು), ದೇವರಾಯ ನಾಯ್ಕ್ (ದೀವರು), ಪ್ರಭಾಕರ್ ರಾಣೆ (ಮರಠ), ವಂಸತ್ ಅಸ್ನೋಟಿಕರ್ (ದೇವಳಿ)ಯಂಥ ತೀರಾ ಹಿಂದುಳಿದ ವರ್ಗದವರನ್ನು ಶಾಸಕ-ಸಂಸದ-ಮಂತ್ರಿ ಮಾಡಿದ್ದರು.
ಅಂದಿನ ಲಿಬರಲ್ ನಾಯಕರಿಗೂ-ಇಂದಿನ ಪುಢಾರಿಗಳಿಗೂ ಇರುವ ವ್ಯತ್ಯಾಸವಿದು! ಇಂದು ಎರಡು-ಮೂರು ದಶಕದಿಂದ ಆಳುತ್ತಿರುವ ದೇಶ್, ಮ್ಯಾಗಿ, ಮಾಣಿಗಳೇ ಉತ್ತರ ಕನ್ನಡಕ್ಕೆ ದೊಡ್ಡ ಶಾಪವಾಗಿದ್ದಾರೆ. ಪ್ರಗತಿ, ಅಭಿವೃದ್ಧಿ, ಜನಹಿತದ ಯೋಜನೆ-ಯೋಚನೆಯ ನಾಯಕರೇ ಜಿಲ್ಲೆಯಲ್ಲಿಲ್ಲ. ನತದೃಷ್ಟ ಉತ್ತರ ಕನ್ನಡ ಜಿಲ್ಲೆಯ ನೋವಿನ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...