HomeUncategorizedನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

ನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

- Advertisement -
- Advertisement -

ಬಾಬ್ರಿ ಮಸೀದಿಯ ಧ್ವಂಸ ಒಂದು ರೀತಿಯ ‘ಹಿಂದೂತ್ವ’ದ ಉನ್ಮಾದತೆಯನ್ನು ಯುವಕರಲ್ಲಿ ತುಂಬಿದ್ದ ಸಂದರ್ಭ. ಅಂತಹ ಉನ್ಮಾದಿತರು ಆಗಸ್ಟ್ 15ರಂದು ಬಿಡುಗಡೆಗೊಂಡ ‘ರೋಜಾ’ ಸಿನಿಮಾವನ್ನು ಕಣ್ತುಂಬಿಕೊಂಡು ಬಂದು, ದೇಶಪ್ರೇಮದ ಮಾದರಿಯೊಂದನ್ನು ಹೃದಯಕ್ಕಿಳಿಸಿಕೊಂಡರು. ಅದರ ಪರಿಣಾಮವನ್ನು ಥಿಯೇಟರ್‍ಗಳಲ್ಲೇ ನೋಡಬಹುದಿತ್ತು! ದೇಶದ ಬಗ್ಗೆ ಪ್ರೇಮವಷ್ಟೇ ಆಗಿದ್ದರೆ, ಅದಕ್ಕಿಂತ ಒಳ್ಳೆಯ ಸಂಗತಿ ಇನ್ನೇನಿರಲು ಸಾಧ್ಯ? ಆದರೆ, ಅವರು ಕಾಶ್ಮೀರವನ್ನು ಕಣ್ತುಂಬಿಕೊಂಡ ರೀತಿಯಲ್ಲಿ ದೊಡ್ಡ ಸಮಸ್ಯೆಯಿತ್ತು. ಅದರ ಪ್ರಕಾರ ಕಾಶ್ಮೀರವೆಂದರೆ ಭಾರತವನ್ನು ದ್ವೇಷಿಸುವ ಭಯೋತ್ಪಾದಕರ ತಾಣ ಅಷ್ಟೇ.

ಸುಡುತ್ತಿರುವ ರಾಷ್ಟ್ರಧ್ವಜದ ಮೇಲೆ ಸಿನಿಮಾದ ಹೀರೊ ಅರವಿಂದ ಸ್ವಾಮಿ ಬಿದ್ದು, ತನ್ನ ಬಟ್ಟೆಗಳು ಸುಟ್ಟು ಜೀವಕ್ಕೆ ಅಪಾಯವಿದ್ದರೂ ಧ್ವಜವನ್ನು ರಕ್ಷಿಸುವ ಹೋರಾಟ. ಥಿಯೇಟರಿನಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಆಗ 14-20 ವಯಸ್ಸಿನವರಾಗಿದ್ದವರು ಈಗ 40-47 ವಯಸ್ಸಿನ ಅಜುಬಾಜಿನಲ್ಲಿದ್ದಾರೆ. ಥಿಯೇಟರಿನಲ್ಲಿ ‘ದೇಶಪ್ರೇಮ’ದ ದ್ಯೋತಕವಾಗಿ ಮೊಳಗಿದ್ದ ಘೋಷಣೆಗಳು ಈಗ ದೇಶವೆಂಬ ಥಿಯೇಟರಿನಲ್ಲಿ ಮೊಳಗುತ್ತಿವೆ. ಅದರ ಅರ್ಥವೂ ಸಾರೇ ಜಹಾಂಸೆ ಅಚ್ಛಾ, ಜನಗಣಮನ, ಹಿಂದ್ ದೇಶ್ ಕೇ ನಿವಾಸಿ ಥರದ ಗೀತೆಗಳಲ್ಲಿ ವ್ಯಕ್ತವಾದ ಭಾವಕ್ಕಿಂತ ಭಿನ್ನವಾಗಿದೆ.

***

370ನೇ ವಿಧಿ ರದ್ದಿನ ಕುರಿತು ತುಂಬ ಭಾವುಕರಾಗಿ, ರೋಮಾಂಚಿತರಾಗಿ ‘ಐತಿಹಾಸಿಕ ಕ್ರಮ’ ಎನ್ನುವ ಪೀಳಿಗೆಯ ಬಹುತೇಕರ ಪಾಲಿಗೆ ಕಾಶ್ಮೀರ ಸಮಸ್ಯೆ ಎಂದರೆ ಅಂದು ಮಣಿರತ್ನಂ ತೀರಾ ಜಾಳು ಜಾಳಾಗಿ, ಬಾಲಿಶವಾಗಿ ತೋರಿಸಿದ್ದ, ‘ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು’ ಅವರು ಯತ್ನಿಸುತ್ತಿದ್ದಾರೆ ಎಂಬುದಷ್ಟೇ. 1989ರಲ್ಲಿ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಾಗ ಶಾಲೆ-ಕಾಲೇಜಿಗೆ ಹೋಗುತ್ತಿದ್ದವರು ಮುಂದೆ ಅಲ್ಲಿ ಉಗ್ರವಾದ ಮತ್ತು ಸೇನಾ ಕಾರ್ಯಾಚರಣೆಗಳ ಕಾರಣಕ್ಕೆ ಸರಿಯಾದ ವಿದ್ಯೆಯನ್ನೇ ಪಡೆಯಲಿಲ್ಲ. ದಿನವೂ ಅಘೋಷಿತ ಬಂದ್ ನೋಡಿಯೇ ಬೆಳೆದ ಅಂಥವರ ಬದುಕು ಈಗ ಸಂದಿಗ್ಧದಲ್ಲಿದೆ. ಆದರೆ ಕಾಶ್ಮೀರದಾಚೆಯ ಭಾರತದಲ್ಲಿರುವ ಯುವ ಸಮೂಹಕ್ಕೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕ ಹೆಮ್ಮೆಯಿದೆ!

‘ರೋಜಾ’ ಅಥವಾ ‘ಮಿಷನ್ ಕಾಶ್ಮೀರ್’- ಇಂತಹ ಜನಪ್ರಿಯ ಸಿನಿಮಾಗಳ ಅಪಾಯವಿರುವುದೇ ಇಲ್ಲಿ ಅನಿಸುತ್ತದೆ. ಪ್ರೇಮಕತೆಯ ಎಳೆ ಇಟ್ಟುಕೊಂಡು ಹೊರಡುವ ಮಣಿರತ್ನಂ, ‘ಕಾಶ್ಮೀರ ಪ್ರಕ್ಷುಬ್ದತೆ’ಯ ಹಿನ್ನೆಲೆಯಲ್ಲಿ ಪ್ರೇಮಕತೆ ಎಂದು ಪ್ರಚಾರ ಪಡೆದರು. ಆದರೆ, ಯಾವ ಗಂಭೀರ ಅಧ್ಯಯನವೂ ಇಲ್ಲದೇ ಅವರು ಹಸಿ ಹಸಿಯಾಗಿ ತೋರಿಸಿದ ಬ್ಯಾಕ್‍ಡ್ರಾಪ್ ಕತೆ ಮತ್ತು ಧ್ವಜ ಕಾಪಾಡುವ ಹೀರೊಯಿಸಂ- ಹಿಂದೂತ್ವದ ರಾಷ್ಟ್ರೀಯತೆಯ ರೂಪಕಗಳೇ ಆಗಿದ್ದವು. ಕಾಶ್ಮೀರವನ್ನು ಭಾರತದೊಡನೆ ಬೆಸೆಯಲು ಬೇಕಾದ ಪ್ರೇಮಕಥೆ ಅದಾಗಿರಲಿಲ್ಲ.

ಮಣಿರತ್ನಂ ತಮ್ಮ ‘ಬಾಂಬೆ’ಯಲ್ಲಿ ನ್ಯೂಟ್ರಲ್ ನೋಟ ಕೊಡಲು ಯತ್ನಿಸಿದ್ದರು. ನಂತರದ ‘ದಿಲ್ ಸೆ’ ಈಶಾನ್ಯ ಭಾರತದ ಸಂಕೀರ್ಣ ಸಮಸ್ಯೆಯನ್ನು ಒಂದು ಸರಳ ರೇಖಾತ್ಮಕ ನೆಲೆಯಲ್ಲಿ ತೋರಿಸಿತ್ತು.

ಕಾಶ್ಮೀರ ಮತ್ತು ಈಶಾನ್ಯ ಭಾರತದ ಕುರಿತು ಬೇರೆ ರೀತಿಯ ಮಾಹಿತಿ ಇಲ್ಲದವರಿಗೆ 370 ವಿಧಿ ರದ್ದು ಐತಿಹಾಸಿಕ ಅನಿಸಿರಲೇಬೇಕು… ಈ ನಡುವೆ 2002ರ ಭೀಕರ ಹತ್ಯಾಕಾಂಡ ಕೂಡ ‘ಅವರಿಗೆ’ ಕಲಿಸಿದ ಪಾಠ ಎಂದು ನಂಬಿಕೊಂಡು ಬಂದವರಿಗೆ ಕಾಶ್ಮೀರದ ವಿಭಜನೆ ಕೂಡ ಐತಿಹಾಸಿಕವೇ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿಯೇ ಇರಬೇಕು. ಅದರ ಇತಿಹಾಸ ಭಾರತದ ಉಳಿದ ಭಾಗಗಳ ಇತಿಹಾಸದ ಜೊತೆಗೆ ಹೊಂದಿಕೊಂಡಿದೆ. ಅದನ್ನು ಆಳಿದವರು ‘ಹಿಂದೂ ರಾಜ’ರು ಎಂಬ ಕಾರಣಕ್ಕೆ ಮಾತ್ರವಲ್ಲದೇ, ಅದರ ಜನಪ್ರಿಯ ನಾಯಕ ಷೇಕ್ ಅಬ್ದುಲ್ಲಾ ಸಹಾ ಸೆಕ್ಯುಲರ್ ಕಾಶ್ಮೀರವನ್ನೇ ಬಯಸಿದ್ದರು ಎಂಬುದನ್ನೂ ಮರೆಯಲಾಗದು. ಅಂತಹ ಕಾಶ್ಮೀರದ ಪ್ರತಿ ಪ್ರಜೆಯನ್ನೂ ಪ್ರೀತಿಯಿಂದ ಗೆಲ್ಲಬೇಕೆಂದರೆ, ಅವರ ಕುರಿತ ಪೂರ್ವಗ್ರಹಗಳನ್ನು ತೊರೆಯಬೇಕಿದೆ. ಇದ್ದುದರಲ್ಲಿ ರಾಜೀó ಗಡಿಯಾಚೆ ಮತ್ತು ಈಚೆಗಿನ ಜನರನ್ನು ಮನುಷ್ಯರನ್ನಾಗಿ ಚಿತ್ರಿಸುವ ಕೆಲಸ ಮಾಡಿದೆ.

****

ಹಿಂದೊಮ್ಮೆ ಇನ್ಪೋಸಿಸ್‍ನ ಎನ್.ಆರ್.ನಾರಾಯಣ ಮೂರ್ತಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈಗ ಸೇನೆಯನ್ನು ಬಳಸಿಕೊಂಡು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಬಿಟ್ಟರೆ? ಬಹುಪಾಲು ಬೆಂಗಳೂರಿಗರು ಇದೊಂದು ಐತಿಹಾಸಿಕ ಕ್ರಮವೆಂದೇ ಕರೆಯುತ್ತಾರೆ. ಅನ್ಯ ರಾಜ್ಯಗಳ ಪಾಲಿಗೆ ಕೂಡ ಇದು ಐತಿಹಾಸಿಕವೇ ಆಗಿರುತ್ತದೆ.

ಆದರೆ, ಬೆಂಗಳೂರಲ್ಲಿರುವ ಮೂಲ ಕನ್ನಡಿಗರು ಮತ್ತು ಬೆಂಗಳೂರಾಚೆಗಿನ ಪ್ರದೇಶದಲ್ಲಿರುವ ಕನ್ನಡಿಗರ ಪಾಲಿಗೆ ಇದೊಂದು ಐತಿಹಾಸಿಕ ದ್ರೋಹ ಅನ್ನಿಸಿಯೇ ಅನ್ನಿಸುತ್ತದೆ, ಅನ್ನಿಸಲೇ ಬೇಕು….

ಈ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ಕನ್ನಡಿಗರಿಗೆ ಕಾಶ್ಮೀರದ ಜನರ ಸಂಕಟ ಅರ್ಥವಾದಿತೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...