HomeUncategorizedನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

ನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

- Advertisement -
- Advertisement -

ಬಾಬ್ರಿ ಮಸೀದಿಯ ಧ್ವಂಸ ಒಂದು ರೀತಿಯ ‘ಹಿಂದೂತ್ವ’ದ ಉನ್ಮಾದತೆಯನ್ನು ಯುವಕರಲ್ಲಿ ತುಂಬಿದ್ದ ಸಂದರ್ಭ. ಅಂತಹ ಉನ್ಮಾದಿತರು ಆಗಸ್ಟ್ 15ರಂದು ಬಿಡುಗಡೆಗೊಂಡ ‘ರೋಜಾ’ ಸಿನಿಮಾವನ್ನು ಕಣ್ತುಂಬಿಕೊಂಡು ಬಂದು, ದೇಶಪ್ರೇಮದ ಮಾದರಿಯೊಂದನ್ನು ಹೃದಯಕ್ಕಿಳಿಸಿಕೊಂಡರು. ಅದರ ಪರಿಣಾಮವನ್ನು ಥಿಯೇಟರ್‍ಗಳಲ್ಲೇ ನೋಡಬಹುದಿತ್ತು! ದೇಶದ ಬಗ್ಗೆ ಪ್ರೇಮವಷ್ಟೇ ಆಗಿದ್ದರೆ, ಅದಕ್ಕಿಂತ ಒಳ್ಳೆಯ ಸಂಗತಿ ಇನ್ನೇನಿರಲು ಸಾಧ್ಯ? ಆದರೆ, ಅವರು ಕಾಶ್ಮೀರವನ್ನು ಕಣ್ತುಂಬಿಕೊಂಡ ರೀತಿಯಲ್ಲಿ ದೊಡ್ಡ ಸಮಸ್ಯೆಯಿತ್ತು. ಅದರ ಪ್ರಕಾರ ಕಾಶ್ಮೀರವೆಂದರೆ ಭಾರತವನ್ನು ದ್ವೇಷಿಸುವ ಭಯೋತ್ಪಾದಕರ ತಾಣ ಅಷ್ಟೇ.

ಸುಡುತ್ತಿರುವ ರಾಷ್ಟ್ರಧ್ವಜದ ಮೇಲೆ ಸಿನಿಮಾದ ಹೀರೊ ಅರವಿಂದ ಸ್ವಾಮಿ ಬಿದ್ದು, ತನ್ನ ಬಟ್ಟೆಗಳು ಸುಟ್ಟು ಜೀವಕ್ಕೆ ಅಪಾಯವಿದ್ದರೂ ಧ್ವಜವನ್ನು ರಕ್ಷಿಸುವ ಹೋರಾಟ. ಥಿಯೇಟರಿನಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಆಗ 14-20 ವಯಸ್ಸಿನವರಾಗಿದ್ದವರು ಈಗ 40-47 ವಯಸ್ಸಿನ ಅಜುಬಾಜಿನಲ್ಲಿದ್ದಾರೆ. ಥಿಯೇಟರಿನಲ್ಲಿ ‘ದೇಶಪ್ರೇಮ’ದ ದ್ಯೋತಕವಾಗಿ ಮೊಳಗಿದ್ದ ಘೋಷಣೆಗಳು ಈಗ ದೇಶವೆಂಬ ಥಿಯೇಟರಿನಲ್ಲಿ ಮೊಳಗುತ್ತಿವೆ. ಅದರ ಅರ್ಥವೂ ಸಾರೇ ಜಹಾಂಸೆ ಅಚ್ಛಾ, ಜನಗಣಮನ, ಹಿಂದ್ ದೇಶ್ ಕೇ ನಿವಾಸಿ ಥರದ ಗೀತೆಗಳಲ್ಲಿ ವ್ಯಕ್ತವಾದ ಭಾವಕ್ಕಿಂತ ಭಿನ್ನವಾಗಿದೆ.

***

370ನೇ ವಿಧಿ ರದ್ದಿನ ಕುರಿತು ತುಂಬ ಭಾವುಕರಾಗಿ, ರೋಮಾಂಚಿತರಾಗಿ ‘ಐತಿಹಾಸಿಕ ಕ್ರಮ’ ಎನ್ನುವ ಪೀಳಿಗೆಯ ಬಹುತೇಕರ ಪಾಲಿಗೆ ಕಾಶ್ಮೀರ ಸಮಸ್ಯೆ ಎಂದರೆ ಅಂದು ಮಣಿರತ್ನಂ ತೀರಾ ಜಾಳು ಜಾಳಾಗಿ, ಬಾಲಿಶವಾಗಿ ತೋರಿಸಿದ್ದ, ‘ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು’ ಅವರು ಯತ್ನಿಸುತ್ತಿದ್ದಾರೆ ಎಂಬುದಷ್ಟೇ. 1989ರಲ್ಲಿ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಾಗ ಶಾಲೆ-ಕಾಲೇಜಿಗೆ ಹೋಗುತ್ತಿದ್ದವರು ಮುಂದೆ ಅಲ್ಲಿ ಉಗ್ರವಾದ ಮತ್ತು ಸೇನಾ ಕಾರ್ಯಾಚರಣೆಗಳ ಕಾರಣಕ್ಕೆ ಸರಿಯಾದ ವಿದ್ಯೆಯನ್ನೇ ಪಡೆಯಲಿಲ್ಲ. ದಿನವೂ ಅಘೋಷಿತ ಬಂದ್ ನೋಡಿಯೇ ಬೆಳೆದ ಅಂಥವರ ಬದುಕು ಈಗ ಸಂದಿಗ್ಧದಲ್ಲಿದೆ. ಆದರೆ ಕಾಶ್ಮೀರದಾಚೆಯ ಭಾರತದಲ್ಲಿರುವ ಯುವ ಸಮೂಹಕ್ಕೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕ ಹೆಮ್ಮೆಯಿದೆ!

‘ರೋಜಾ’ ಅಥವಾ ‘ಮಿಷನ್ ಕಾಶ್ಮೀರ್’- ಇಂತಹ ಜನಪ್ರಿಯ ಸಿನಿಮಾಗಳ ಅಪಾಯವಿರುವುದೇ ಇಲ್ಲಿ ಅನಿಸುತ್ತದೆ. ಪ್ರೇಮಕತೆಯ ಎಳೆ ಇಟ್ಟುಕೊಂಡು ಹೊರಡುವ ಮಣಿರತ್ನಂ, ‘ಕಾಶ್ಮೀರ ಪ್ರಕ್ಷುಬ್ದತೆ’ಯ ಹಿನ್ನೆಲೆಯಲ್ಲಿ ಪ್ರೇಮಕತೆ ಎಂದು ಪ್ರಚಾರ ಪಡೆದರು. ಆದರೆ, ಯಾವ ಗಂಭೀರ ಅಧ್ಯಯನವೂ ಇಲ್ಲದೇ ಅವರು ಹಸಿ ಹಸಿಯಾಗಿ ತೋರಿಸಿದ ಬ್ಯಾಕ್‍ಡ್ರಾಪ್ ಕತೆ ಮತ್ತು ಧ್ವಜ ಕಾಪಾಡುವ ಹೀರೊಯಿಸಂ- ಹಿಂದೂತ್ವದ ರಾಷ್ಟ್ರೀಯತೆಯ ರೂಪಕಗಳೇ ಆಗಿದ್ದವು. ಕಾಶ್ಮೀರವನ್ನು ಭಾರತದೊಡನೆ ಬೆಸೆಯಲು ಬೇಕಾದ ಪ್ರೇಮಕಥೆ ಅದಾಗಿರಲಿಲ್ಲ.

ಮಣಿರತ್ನಂ ತಮ್ಮ ‘ಬಾಂಬೆ’ಯಲ್ಲಿ ನ್ಯೂಟ್ರಲ್ ನೋಟ ಕೊಡಲು ಯತ್ನಿಸಿದ್ದರು. ನಂತರದ ‘ದಿಲ್ ಸೆ’ ಈಶಾನ್ಯ ಭಾರತದ ಸಂಕೀರ್ಣ ಸಮಸ್ಯೆಯನ್ನು ಒಂದು ಸರಳ ರೇಖಾತ್ಮಕ ನೆಲೆಯಲ್ಲಿ ತೋರಿಸಿತ್ತು.

ಕಾಶ್ಮೀರ ಮತ್ತು ಈಶಾನ್ಯ ಭಾರತದ ಕುರಿತು ಬೇರೆ ರೀತಿಯ ಮಾಹಿತಿ ಇಲ್ಲದವರಿಗೆ 370 ವಿಧಿ ರದ್ದು ಐತಿಹಾಸಿಕ ಅನಿಸಿರಲೇಬೇಕು… ಈ ನಡುವೆ 2002ರ ಭೀಕರ ಹತ್ಯಾಕಾಂಡ ಕೂಡ ‘ಅವರಿಗೆ’ ಕಲಿಸಿದ ಪಾಠ ಎಂದು ನಂಬಿಕೊಂಡು ಬಂದವರಿಗೆ ಕಾಶ್ಮೀರದ ವಿಭಜನೆ ಕೂಡ ಐತಿಹಾಸಿಕವೇ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿಯೇ ಇರಬೇಕು. ಅದರ ಇತಿಹಾಸ ಭಾರತದ ಉಳಿದ ಭಾಗಗಳ ಇತಿಹಾಸದ ಜೊತೆಗೆ ಹೊಂದಿಕೊಂಡಿದೆ. ಅದನ್ನು ಆಳಿದವರು ‘ಹಿಂದೂ ರಾಜ’ರು ಎಂಬ ಕಾರಣಕ್ಕೆ ಮಾತ್ರವಲ್ಲದೇ, ಅದರ ಜನಪ್ರಿಯ ನಾಯಕ ಷೇಕ್ ಅಬ್ದುಲ್ಲಾ ಸಹಾ ಸೆಕ್ಯುಲರ್ ಕಾಶ್ಮೀರವನ್ನೇ ಬಯಸಿದ್ದರು ಎಂಬುದನ್ನೂ ಮರೆಯಲಾಗದು. ಅಂತಹ ಕಾಶ್ಮೀರದ ಪ್ರತಿ ಪ್ರಜೆಯನ್ನೂ ಪ್ರೀತಿಯಿಂದ ಗೆಲ್ಲಬೇಕೆಂದರೆ, ಅವರ ಕುರಿತ ಪೂರ್ವಗ್ರಹಗಳನ್ನು ತೊರೆಯಬೇಕಿದೆ. ಇದ್ದುದರಲ್ಲಿ ರಾಜೀó ಗಡಿಯಾಚೆ ಮತ್ತು ಈಚೆಗಿನ ಜನರನ್ನು ಮನುಷ್ಯರನ್ನಾಗಿ ಚಿತ್ರಿಸುವ ಕೆಲಸ ಮಾಡಿದೆ.

****

ಹಿಂದೊಮ್ಮೆ ಇನ್ಪೋಸಿಸ್‍ನ ಎನ್.ಆರ್.ನಾರಾಯಣ ಮೂರ್ತಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈಗ ಸೇನೆಯನ್ನು ಬಳಸಿಕೊಂಡು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಬಿಟ್ಟರೆ? ಬಹುಪಾಲು ಬೆಂಗಳೂರಿಗರು ಇದೊಂದು ಐತಿಹಾಸಿಕ ಕ್ರಮವೆಂದೇ ಕರೆಯುತ್ತಾರೆ. ಅನ್ಯ ರಾಜ್ಯಗಳ ಪಾಲಿಗೆ ಕೂಡ ಇದು ಐತಿಹಾಸಿಕವೇ ಆಗಿರುತ್ತದೆ.

ಆದರೆ, ಬೆಂಗಳೂರಲ್ಲಿರುವ ಮೂಲ ಕನ್ನಡಿಗರು ಮತ್ತು ಬೆಂಗಳೂರಾಚೆಗಿನ ಪ್ರದೇಶದಲ್ಲಿರುವ ಕನ್ನಡಿಗರ ಪಾಲಿಗೆ ಇದೊಂದು ಐತಿಹಾಸಿಕ ದ್ರೋಹ ಅನ್ನಿಸಿಯೇ ಅನ್ನಿಸುತ್ತದೆ, ಅನ್ನಿಸಲೇ ಬೇಕು….

ಈ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ಕನ್ನಡಿಗರಿಗೆ ಕಾಶ್ಮೀರದ ಜನರ ಸಂಕಟ ಅರ್ಥವಾದಿತೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...