HomeUncategorizedನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

ನಮ್ಮ ಸಿನೆಮಾಗಳು ತೋರಿಸಿದ್ದಷ್ಟೇ ಕಾಶ್ಮೀರವ?

- Advertisement -
- Advertisement -

ಬಾಬ್ರಿ ಮಸೀದಿಯ ಧ್ವಂಸ ಒಂದು ರೀತಿಯ ‘ಹಿಂದೂತ್ವ’ದ ಉನ್ಮಾದತೆಯನ್ನು ಯುವಕರಲ್ಲಿ ತುಂಬಿದ್ದ ಸಂದರ್ಭ. ಅಂತಹ ಉನ್ಮಾದಿತರು ಆಗಸ್ಟ್ 15ರಂದು ಬಿಡುಗಡೆಗೊಂಡ ‘ರೋಜಾ’ ಸಿನಿಮಾವನ್ನು ಕಣ್ತುಂಬಿಕೊಂಡು ಬಂದು, ದೇಶಪ್ರೇಮದ ಮಾದರಿಯೊಂದನ್ನು ಹೃದಯಕ್ಕಿಳಿಸಿಕೊಂಡರು. ಅದರ ಪರಿಣಾಮವನ್ನು ಥಿಯೇಟರ್‍ಗಳಲ್ಲೇ ನೋಡಬಹುದಿತ್ತು! ದೇಶದ ಬಗ್ಗೆ ಪ್ರೇಮವಷ್ಟೇ ಆಗಿದ್ದರೆ, ಅದಕ್ಕಿಂತ ಒಳ್ಳೆಯ ಸಂಗತಿ ಇನ್ನೇನಿರಲು ಸಾಧ್ಯ? ಆದರೆ, ಅವರು ಕಾಶ್ಮೀರವನ್ನು ಕಣ್ತುಂಬಿಕೊಂಡ ರೀತಿಯಲ್ಲಿ ದೊಡ್ಡ ಸಮಸ್ಯೆಯಿತ್ತು. ಅದರ ಪ್ರಕಾರ ಕಾಶ್ಮೀರವೆಂದರೆ ಭಾರತವನ್ನು ದ್ವೇಷಿಸುವ ಭಯೋತ್ಪಾದಕರ ತಾಣ ಅಷ್ಟೇ.

ಸುಡುತ್ತಿರುವ ರಾಷ್ಟ್ರಧ್ವಜದ ಮೇಲೆ ಸಿನಿಮಾದ ಹೀರೊ ಅರವಿಂದ ಸ್ವಾಮಿ ಬಿದ್ದು, ತನ್ನ ಬಟ್ಟೆಗಳು ಸುಟ್ಟು ಜೀವಕ್ಕೆ ಅಪಾಯವಿದ್ದರೂ ಧ್ವಜವನ್ನು ರಕ್ಷಿಸುವ ಹೋರಾಟ. ಥಿಯೇಟರಿನಲ್ಲಿ ಭಾರತ್ ಮಾತಾ ಕಿ ಜೈ, ಜೈ ಹಿಂದ್, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಆಗ 14-20 ವಯಸ್ಸಿನವರಾಗಿದ್ದವರು ಈಗ 40-47 ವಯಸ್ಸಿನ ಅಜುಬಾಜಿನಲ್ಲಿದ್ದಾರೆ. ಥಿಯೇಟರಿನಲ್ಲಿ ‘ದೇಶಪ್ರೇಮ’ದ ದ್ಯೋತಕವಾಗಿ ಮೊಳಗಿದ್ದ ಘೋಷಣೆಗಳು ಈಗ ದೇಶವೆಂಬ ಥಿಯೇಟರಿನಲ್ಲಿ ಮೊಳಗುತ್ತಿವೆ. ಅದರ ಅರ್ಥವೂ ಸಾರೇ ಜಹಾಂಸೆ ಅಚ್ಛಾ, ಜನಗಣಮನ, ಹಿಂದ್ ದೇಶ್ ಕೇ ನಿವಾಸಿ ಥರದ ಗೀತೆಗಳಲ್ಲಿ ವ್ಯಕ್ತವಾದ ಭಾವಕ್ಕಿಂತ ಭಿನ್ನವಾಗಿದೆ.

***

370ನೇ ವಿಧಿ ರದ್ದಿನ ಕುರಿತು ತುಂಬ ಭಾವುಕರಾಗಿ, ರೋಮಾಂಚಿತರಾಗಿ ‘ಐತಿಹಾಸಿಕ ಕ್ರಮ’ ಎನ್ನುವ ಪೀಳಿಗೆಯ ಬಹುತೇಕರ ಪಾಲಿಗೆ ಕಾಶ್ಮೀರ ಸಮಸ್ಯೆ ಎಂದರೆ ಅಂದು ಮಣಿರತ್ನಂ ತೀರಾ ಜಾಳು ಜಾಳಾಗಿ, ಬಾಲಿಶವಾಗಿ ತೋರಿಸಿದ್ದ, ‘ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು’ ಅವರು ಯತ್ನಿಸುತ್ತಿದ್ದಾರೆ ಎಂಬುದಷ್ಟೇ. 1989ರಲ್ಲಿ ಕಣಿವೆಯಲ್ಲಿ ಹಿಂಸೆ ಭುಗಿಲೆದ್ದಾಗ ಶಾಲೆ-ಕಾಲೇಜಿಗೆ ಹೋಗುತ್ತಿದ್ದವರು ಮುಂದೆ ಅಲ್ಲಿ ಉಗ್ರವಾದ ಮತ್ತು ಸೇನಾ ಕಾರ್ಯಾಚರಣೆಗಳ ಕಾರಣಕ್ಕೆ ಸರಿಯಾದ ವಿದ್ಯೆಯನ್ನೇ ಪಡೆಯಲಿಲ್ಲ. ದಿನವೂ ಅಘೋಷಿತ ಬಂದ್ ನೋಡಿಯೇ ಬೆಳೆದ ಅಂಥವರ ಬದುಕು ಈಗ ಸಂದಿಗ್ಧದಲ್ಲಿದೆ. ಆದರೆ ಕಾಶ್ಮೀರದಾಚೆಯ ಭಾರತದಲ್ಲಿರುವ ಯುವ ಸಮೂಹಕ್ಕೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಕ್ಕ ಹೆಮ್ಮೆಯಿದೆ!

‘ರೋಜಾ’ ಅಥವಾ ‘ಮಿಷನ್ ಕಾಶ್ಮೀರ್’- ಇಂತಹ ಜನಪ್ರಿಯ ಸಿನಿಮಾಗಳ ಅಪಾಯವಿರುವುದೇ ಇಲ್ಲಿ ಅನಿಸುತ್ತದೆ. ಪ್ರೇಮಕತೆಯ ಎಳೆ ಇಟ್ಟುಕೊಂಡು ಹೊರಡುವ ಮಣಿರತ್ನಂ, ‘ಕಾಶ್ಮೀರ ಪ್ರಕ್ಷುಬ್ದತೆ’ಯ ಹಿನ್ನೆಲೆಯಲ್ಲಿ ಪ್ರೇಮಕತೆ ಎಂದು ಪ್ರಚಾರ ಪಡೆದರು. ಆದರೆ, ಯಾವ ಗಂಭೀರ ಅಧ್ಯಯನವೂ ಇಲ್ಲದೇ ಅವರು ಹಸಿ ಹಸಿಯಾಗಿ ತೋರಿಸಿದ ಬ್ಯಾಕ್‍ಡ್ರಾಪ್ ಕತೆ ಮತ್ತು ಧ್ವಜ ಕಾಪಾಡುವ ಹೀರೊಯಿಸಂ- ಹಿಂದೂತ್ವದ ರಾಷ್ಟ್ರೀಯತೆಯ ರೂಪಕಗಳೇ ಆಗಿದ್ದವು. ಕಾಶ್ಮೀರವನ್ನು ಭಾರತದೊಡನೆ ಬೆಸೆಯಲು ಬೇಕಾದ ಪ್ರೇಮಕಥೆ ಅದಾಗಿರಲಿಲ್ಲ.

ಮಣಿರತ್ನಂ ತಮ್ಮ ‘ಬಾಂಬೆ’ಯಲ್ಲಿ ನ್ಯೂಟ್ರಲ್ ನೋಟ ಕೊಡಲು ಯತ್ನಿಸಿದ್ದರು. ನಂತರದ ‘ದಿಲ್ ಸೆ’ ಈಶಾನ್ಯ ಭಾರತದ ಸಂಕೀರ್ಣ ಸಮಸ್ಯೆಯನ್ನು ಒಂದು ಸರಳ ರೇಖಾತ್ಮಕ ನೆಲೆಯಲ್ಲಿ ತೋರಿಸಿತ್ತು.

ಕಾಶ್ಮೀರ ಮತ್ತು ಈಶಾನ್ಯ ಭಾರತದ ಕುರಿತು ಬೇರೆ ರೀತಿಯ ಮಾಹಿತಿ ಇಲ್ಲದವರಿಗೆ 370 ವಿಧಿ ರದ್ದು ಐತಿಹಾಸಿಕ ಅನಿಸಿರಲೇಬೇಕು… ಈ ನಡುವೆ 2002ರ ಭೀಕರ ಹತ್ಯಾಕಾಂಡ ಕೂಡ ‘ಅವರಿಗೆ’ ಕಲಿಸಿದ ಪಾಠ ಎಂದು ನಂಬಿಕೊಂಡು ಬಂದವರಿಗೆ ಕಾಶ್ಮೀರದ ವಿಭಜನೆ ಕೂಡ ಐತಿಹಾಸಿಕವೇ. ಕಾಶ್ಮೀರ ಭಾರತದ ಅವಿಭಾಜ್ಯ ಭಾಗವಾಗಿಯೇ ಇರಬೇಕು. ಅದರ ಇತಿಹಾಸ ಭಾರತದ ಉಳಿದ ಭಾಗಗಳ ಇತಿಹಾಸದ ಜೊತೆಗೆ ಹೊಂದಿಕೊಂಡಿದೆ. ಅದನ್ನು ಆಳಿದವರು ‘ಹಿಂದೂ ರಾಜ’ರು ಎಂಬ ಕಾರಣಕ್ಕೆ ಮಾತ್ರವಲ್ಲದೇ, ಅದರ ಜನಪ್ರಿಯ ನಾಯಕ ಷೇಕ್ ಅಬ್ದುಲ್ಲಾ ಸಹಾ ಸೆಕ್ಯುಲರ್ ಕಾಶ್ಮೀರವನ್ನೇ ಬಯಸಿದ್ದರು ಎಂಬುದನ್ನೂ ಮರೆಯಲಾಗದು. ಅಂತಹ ಕಾಶ್ಮೀರದ ಪ್ರತಿ ಪ್ರಜೆಯನ್ನೂ ಪ್ರೀತಿಯಿಂದ ಗೆಲ್ಲಬೇಕೆಂದರೆ, ಅವರ ಕುರಿತ ಪೂರ್ವಗ್ರಹಗಳನ್ನು ತೊರೆಯಬೇಕಿದೆ. ಇದ್ದುದರಲ್ಲಿ ರಾಜೀó ಗಡಿಯಾಚೆ ಮತ್ತು ಈಚೆಗಿನ ಜನರನ್ನು ಮನುಷ್ಯರನ್ನಾಗಿ ಚಿತ್ರಿಸುವ ಕೆಲಸ ಮಾಡಿದೆ.

****

ಹಿಂದೊಮ್ಮೆ ಇನ್ಪೋಸಿಸ್‍ನ ಎನ್.ಆರ್.ನಾರಾಯಣ ಮೂರ್ತಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಈಗ ಸೇನೆಯನ್ನು ಬಳಸಿಕೊಂಡು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿಬಿಟ್ಟರೆ? ಬಹುಪಾಲು ಬೆಂಗಳೂರಿಗರು ಇದೊಂದು ಐತಿಹಾಸಿಕ ಕ್ರಮವೆಂದೇ ಕರೆಯುತ್ತಾರೆ. ಅನ್ಯ ರಾಜ್ಯಗಳ ಪಾಲಿಗೆ ಕೂಡ ಇದು ಐತಿಹಾಸಿಕವೇ ಆಗಿರುತ್ತದೆ.

ಆದರೆ, ಬೆಂಗಳೂರಲ್ಲಿರುವ ಮೂಲ ಕನ್ನಡಿಗರು ಮತ್ತು ಬೆಂಗಳೂರಾಚೆಗಿನ ಪ್ರದೇಶದಲ್ಲಿರುವ ಕನ್ನಡಿಗರ ಪಾಲಿಗೆ ಇದೊಂದು ಐತಿಹಾಸಿಕ ದ್ರೋಹ ಅನ್ನಿಸಿಯೇ ಅನ್ನಿಸುತ್ತದೆ, ಅನ್ನಿಸಲೇ ಬೇಕು….

ಈ ನೆಲೆಯಲ್ಲಿ ನಿಂತು ನೋಡಿದಾಗಲಷ್ಟೇ ಕನ್ನಡಿಗರಿಗೆ ಕಾಶ್ಮೀರದ ಜನರ ಸಂಕಟ ಅರ್ಥವಾದಿತೇನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...