Homeಅಂಕಣಗಳುಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

ಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

- Advertisement -
- Advertisement -

 

ಗಿರೀಶ್ ಕಾರ್ನಾಡ್‍ರವರ ಸಾವಿನ ನಂತರ ನಡೆದುಕೊಂಡ ರೀತಿಗೆ ಅವರ ವೈರಿಗಳೂ ಮೆಚ್ಚಿ ತಲೆದೂಗುತ್ತಿದ್ದಾರಂತಲ್ಲಾ. ಇದರ ನಡುವೆ ವೀರಶೈವರ ಜಾಲತಾಣಗಳು ಕಾರ್ನಾಡರ ಸಾವನ್ನು ಸಂಭ್ರಮಿಸಿದ್ದು ನೋಡಿದ ಲಿಂಗಾಯತರು, ‘ಥೂ ಎಷ್ಟೇ ಆಗಲಿ ಇವುರು ಅಂಥೋರೆಯ’ ಎಂದು ಉದ್ಘಾರ ತೆಗೆದರಂತಲ್ಲಾ. ಅದಿರಲಿ ಈ ವೀರಶೈವರಿಗೇಕೆ ಕಾರ್ನಾಡರ ಸಾವಿಗೆ ಸಂಭ್ರಮಿಸಿದರು ಎಂದು ನೋಡಿದರೆ, ಕಾರ್ನಾಡರ ‘ತಲೆದಂಡ’ ಕೃತಿ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದಂತಲ್ಲಾ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಕೊಲೆ ಇಪ್ಪತ್ತೊಂದನೆ ಶತಮಾನದಲ್ಲೂ ಕೆಲವರನ್ನು ಬೆಚ್ಚಿಸುತ್ತದೆ ಎಂದರೆ ಆಶ್ಚರ್ಯ. ಗಾಂಧೀ ಕೊಲೆಯೂ ಹಾಗೇ ಅಲ್ಲವೆ. ಕೊಂದವನು ನಮ್ಮ ಜಾತಿ ಅಲ್ಲ ಎಂದರು. ಪತ್ತೆ ಹಚ್ಚಿ ಹೇಳಿದಾಗ ನಮ್ಮ ಸಂಘದ ಸದಸ್ಯನಲ್ಲ ಎಂದರು. ಅದನ್ನೂ ಪತ್ತೆ ಹಚ್ಚಿದಾಗ ಸಂಘ ತೊರೆದು ಬಹಳ ವರ್ಷವಾಗಿತ್ತು ಎಂದರು. ಎಲ್ಲಾ ಮುಗಿದು ಮರಣ ದಂಡನೆಯಾದಾಗ ಮನುಧರ್ಮದುದ್ದಾರಕ್ಕೆ ಹುತಾತ್ಮನಾದ ಮಹಾತ್ಯಾಗಿ ಎಂದರು. ಅದೆಲ್ಲಾ ಆಗಿ ಮನುಧರ್ಮ ಗ್ರಂಥವನ್ನು ಪುನರ್ಮುದ್ರಣ ಮಾಡುವ ವ್ಯಾಪಾರಿಯಂತೆ ಕಾಣುವ ಮೋದಿ ಪ್ರಧಾನಿಯಾದ ಕೂಡಲೆ ಗೋಡ್ಸೆಗೆ ಗುಡಿಕಟ್ಟಿದರಂತಲ್ಲಾ ಥೂತ್ತೇರಿ.

*****

ಎಡೂರಪ್ಪನ ಜೊತೆ ಇಪ್ಪತ್ತು ತಿಂಗಳು ತೆಕ್ಕೆ ಬಡಿದುಕೊಂಡು ರಾಜ್ಯಾಡಳಿತ ನಡೆಸಿದ ಕುಮಾರಣ್ಣ, ಜನಾನುರಾಗಿ ಆಗಿದ್ದರು. ಅದಕ್ಕೆ ಕಾರಣ, ಅವರ ಗ್ರಾಮ ವಾಸ್ತವ್ಯವಂತೆ. ಆದರೀಗ ಕುಮಾರಣ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಮಗನನ್ನ ಗೆಲ್ಲಿಸಲಾಗಿಲ್ಲ. ತುಮಕೂರಿನಲ್ಲಿ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಸನದಲ್ಲಿ ತನ್ನ ಮತ್ಸರಕ್ಕೆ ತುತ್ತಾಗಿರುವ ಭವಾನಿ ಪುತ್ರ ಗೆದ್ದು ಮೆರೆಯುತ್ತಿದ್ದಾನೆ. ಕಾಂಗೈಗಳು ನಂಬಿಕೆಗೆ ಯೋಗ್ಯವಾಗಿ ವರ್ತಿಸುತ್ತಿಲ್ಲ. ಸಿದ್ಧರಾಮಯ್ಯ ಕರ್ಣನಂತೆ ಮಾತನಾಡಿದರೂ ಶಕುನಿಯಾಗಿದ್ದಾರೆ. ಇಂತೆಲ್ಲಾ ತಲೆತಿನ್ನುವ ಸಂಗತಿಗಳಿಂದ ದೂರವಾಗಿ, ನೆಮ್ಮದಿಯಿಂದ ನಾಲ್ಕು ಗಂಟೆ ನಿದ್ದೆ ಮಾಡಬೇಕೆಂದರೆ, ಅದು ಗ್ರಾಮ ವಾಸ್ತವ್ಯದಿಂದ ಮಾತ್ರ ಸಾಧ್ಯ ಎಂದು ಸೂಕ್ತ ಗ್ರಾಮ ಶೋಧನೆಗೆ ತೊಡಗಿರುವಾಗ ಅವರಿಗೆ ಶುಭ ಹಾರೈಸುವುದು ನಮ್ಮ ಕರ್ತವ್ಯ. ಹಾಗಾಗಿ ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್ ಟೋನ್: ಹಳ್ಳಿಯಾದರೇನು ಶಿವಾ ದಿಳ್ಳಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ ಜನರೆಲ್ಲಾ…….
“ಹೇಳ್ರಿ ಯಾಹು ಏನ್ಸಮಾಚಾರ”
“ಸುಮ್ಮನೆ ಮಾತಾಡಬೇಕು ಅನ್ನುಸ್ತು ಸಾರ್.”
“ಒಂದು ಕೆಲಸ ಮಾಡಿ, ನಾನು ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಒಂದು ತೀರ್ಮಾನ ಏನು ತಗೊಂಡಿದ್ದೀನಿ. ಅದರ ಪ್ರಕಾರ ಗ್ರಾಮ ವಾಸ್ತವ್ಯವನ್ನ ಆರಂಭಿಸಬೇಕು ಅನ್ನೊ ತೀರ್ಮಾನದ ಪ್ರಕಾರ ನಡಕೊಳನಾ ಅಂತ ಇದೀನಿ.”
“ಒಳ್ಳೆ ಆಲೋಚನೆ ಸರ್, ಬೇಗ ಹೊರಡಿ.”
“ನೋಡಿ, ನಿಮ್ಮ ಬಾಯಲ್ಲೂ ಅದೇ ಬರ್ತಾಯಿದೆ. ಅಲ್ಲಿ ನಾನು ಗ್ರಾಮ ವಾಸ್ತವ್ಯದ ಜಾಗದಲ್ಲಿ ಮಾತ್ನಾಡಕ್ಕೆ ಯಾರು ಇರಲ್ಲ. ನೀವು ಬಂದ್ರೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಕಾರ್ಯಕ್ರಮ ಹಾಯ್ಕಬವುದು.”
“ಸರಿ ಸಾರ್, ಆದ್ರೆ ನಿಮ್ಮ ಗ್ರಾಮ ವಾಸ್ತವ್ಯದಲ್ಲಿ ಭೋಜೇಗೌಡ ಇರ್ತನೆ, ಇನ್ನ ಶಿವರಾಮೇಗೌಡ ಈಗ ನಿರುದ್ಯೋಗಿ ಆಗಿರದ್ರಿಂದ ಅವುನೂ ಇರತನೆ, ಅಲ್ದೆ ಮಧ್ಯೆಮಧ್ಯೆ ಬಾಯಿ ಹಾಕಿ ಯಾರೂ ಮಾತಾಡಕೆ ಬಿಡಲ್ಲ. ಅಂತ ಜಾಗದಲ್ಲಿ ನಾನ್ಯಾಕೆ ಸಾರ್.”
“ನೀವು ಬನ್ನಿ, ಅವುರು ಬೇರೆ ಜಾಗದಲ್ಲಿ ಮನಗತಕ್ಕಂತ ವ್ಯವಸ್ಥೆ ಮಾಡ್ತಿನಿ.”
“ಅದರಗತ್ಯ ಇಲ್ಲ ಸಾರ್, ಶಿವರಾಮೇಗೌಡ ಅವುನ ಕಾರಲ್ಲೇ ಮನಿಕತ್ತನೆ, ಭೋಜೇ ಗೌಡನೂ ಅಂಗೆಯಾ, ಅದಿರ್ಲಿ ತಾವು ಇದ್ದಕ್ಕಿದ್ದಂಗೆ ಗ್ರಾಮ ವಾಸ್ತವ್ಯಕ್ಕೆ ಹೊಂಟಿದ್ಯಾಕೆ.”
“ಈಚೆಗೆ ಬೆಂಗಳೂರಿನಲ್ಲಿ ಇರಕ್ಕಾಗ್ತಾಯಿಲ್ಲ ಕಂಡ್ರಿ.”
“ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ ಸಾರ್. ಇಡೀ ಬೆಂಗಳೂರ ಜನಕ್ಕೆ ಅಂಗಾಗ್ಯದೆ.”
“ಅವುರದೇನಾದ್ರು ಆಗ್ಲಿ, ನನ್ನ ಈ ಸಂದರ್ಭದ ಪರಿಸ್ಥಿತಿಯನ್ನ ನೋಡೋದಾದ್ರೆ, ನಾನು ಎಲ್ಲಾದ್ರು ಹೊರಗೋಗಲೇಬೇಕು. ನಾನು ತುಂಬಾ ಭರವಸೆ ಇಟ್ಟಿದ್ದಂತಹ ಮಂಡ್ಯ ಜಿಲ್ಲೆ ಎಮ್ಮೆಲ್ಲೆಗಳು ಮೋಸ ಮಾಡಿದ್ರು. ನಮ್ಮ ಪಕ್ಷದವರೆ ನನಗೆ ತೊಂದರೆ ಕೊಡತಕಂತ ತೀರ್ಮಾನ ತಗೊಂಡ್ರು. ರಾತ್ರೆ ಆದ್ರು ಕೂಡ ಕಾಂಗ್ರೆಸ್‍ನವರು ಮನೆಹತ್ರ ಬಂದು ಏನೇನೊ ಕೇಳ್ತರೆ. ಅವು ಬೆದರಿಕೆ ತರ ಇರತವೆ. ಇನ್ನ ಬಿಜೆಪಿಗಳ ಭಯೋತ್ಪಾದನೆ ಬೇರೆ.”
“ಒಳ್ಳೆ ಪದ ಬಳಸಿದ್ರಿ ಸಾ. ಬಿಜೆಪಿಗಳದು ಯಾವತ್ತೂ ಭಯೋತ್ಪಾದನೆನೆ. ಸಾಬರ ಕಂಡು ಹೆದ್ರಿಕಂಡು ಅಂಗಾಡ್ತವವು.”
“ಅದೇನಾದ್ರು ಆಗ್ಲಿ. ನನ್ನ ಮನಸ್ಸು ಹಾಳಾಗಿರತಕ್ಕಂತ ಈ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೂಕ್ತ.”
“ಆರೋಗ್ಯ ಹ್ಯಾಗಿದೆ ಸಾ.”
“ಚೆನ್ನಾಗಿದೀನಿ.”
“ಮತ್ತೆ ದೇವೇಗೌಡ್ರು ತುಂಬ ಅಪಾಯದ ಸ್ಥಿತೀಲಿದಾನೆ ಕುಮಾರ ಅಂದ್ರು.”
“ಅದು ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಬೇಕಾದ್ರೆ, ಏನಾದ್ರು ಒಂದು ಪ್ರಮುಖವಾದ ಕಾರಣ ಬೇಕಾಗಿದ್ದ ಸನ್ನಿವೇಶದಲ್ಲಿ ನಮ್ಮ ತಂದೆ ಹಾಗಂದಿದ್ರು.”
“ಥೂ.. ಏನಾಯ್ತು ಗೊತ್ತ ಸಾರ್, ನೀವು ಕಾಂಗ್ರೆಸ್‍ನಿಂದ ಮಂಜೇಗೌಡ ಅಂತ ಕೊಂಡಕೊಂಡ್ರಲ್ಲ ಅವುನೇನು ಮಾಡಿದ ಗೊತ್ತೇ, ಕುಮಾರಣ್ಣ ಜಾಸ್ತಿ ದಿನ ಇರದಿಲ್ಲ. ನಿಖಿಲ್‍ಗೆ ಓಟು ಮಾಡಿ ಅಂತ ಇಡೀ ಜಿಲ್ಲೇಲಿ ಹೇಳಿಕಂಡು ತಿರುಗಿದ. ಅಂಗಾಗಿ ಜನ ನಿಮ್ಮ ಬಗ್ಗೆ ಕ್ಯಟ್ಟ ನಿರೀಕ್ಷೆಲವುರೆ.”
“ಇರ್ಲಿ ಬಿಡಿ, ಜನ ನಮ್ಮ ಬಗ್ಗೆ ಅಂಗನ್ನಕಂಡ್ರೆ ನನ್ನ ಆಯಸ್ಸು ಜಾಸ್ತಿಯಾಯ್ತದಂತೆ, ನಮ್ಮ ತಂದೆ ಹಾಗೇಳತಿದ್ರು.”
“ಗ್ರಾಮ ವಾಸ್ತವ್ಯದಲ್ಲಿ ಏನು ಮಾಡ್ತಿರಿ ಸಾರ್.”
“ನಮ್ಮ ಅಧಿಕಾರಿಗಳು ನಾನು ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಒಂದು ಮನೇನ ವಶಕ್ಕೆ ತಗೊಳ್ತರೆ. ಅಲ್ಲಿ ನನ್ನ ವಾಸ್ತವ್ಯಕ್ಕೆ ಏನೇನು ಬೇಕೊ ಅದನ್ನ ಅರೇಂಜ್ ಮಾಡ್ತರೆ. ನಾನು ಆ ಮನೆ ಜನಗಳ ಜೊತೆ ಕುಳಿತು ಊಟ ಮಾಡ್ತಿನಿ, ಚರ್ಚೆ ಮಾಡ್ತಿನಿ. ಈ ಗ್ರಾಮದ ಅಭಿವೃದ್ಧಿ ಹೇಗೆ ಮಾಡಬೇಕು ಅನತಕ್ಕಂತ ಸಲಹೆ ಕೇಳ್ತಿನಿ.”
“ಒಳ್ಳೆ ಕಾರ್ಯಕ್ರಮ ಸಾರ್, ಆದ್ರು ಕರ್ನಾಟಕದಲ್ಲಿ 28 ಸಾವಿರ ಹಳ್ಳಿಗಳಿವೆ ಅವುಗಳ ಅಭಿವೃದ್ಧಿ ಹೇಗೆ.”
“ಇಪ್ಪತ್ತೆಂಟು ಸಾವಿರ ಹಳ್ಳಿಗಳಿಗೂ ಹೋಗಿ ನಾನು ಗ್ರಾಮ ವಾಸ್ತವ್ಯ ಮಾಡಕ್ಕಾಗಲ್ಲ.”
“ಅಷ್ಟು ದಿನ ಇರಬೇಕಲ್ಲ ಸಾ ನೀವು.”
“ಇರದರ ಪ್ರಶ್ನೆ ಅಲ್ಲ. ಗ್ರಾಮಗಳನ್ನ ಹೇಗೆ ಅಭಿವೃದ್ಧಿ ಮಾಡಬೇಕು ಅನತಕ್ಕಂತ ವಿಷಯಗಳನ್ನ ವಿಧಾನಸೌಧದಲ್ಲಿ ಕುಳಿತು ಚರ್ಚೆಮಾಡದಕ್ಕಿಂತ ಗ್ರಾಮಕ್ಕೆ ಹೋದ್ರೆ ಒಳ್ಳೆದಲವೆ.”
“ಸರಿ, ವಿಧಾನಸೌಧದ ರಾಶಿ ಫೈಲ್‍ಗಳ ನೋಡದ್ಯಾವಾಗ ನೀವು.”
“ಅದಕ್ಕೆಲ್ಲಾ ಜನ ಇದಾರೆ.”
“ನಿಮ್ಮ ಕುಟುಂಬದಲ್ಲಾ.”
“ನಮ್ಮ ಕುಟುಂಬ ಅಂದ್ರು ತಪ್ಪಾಗಲಾರ್ದು. ಯಾಕೆ ಅಂದ್ರೆ ನಮ್ಮ ಕುಟುಂಬದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದವುರು ಇದಾರೆ. ಸತತ ಮಂತ್ರಿಗಳಾಗಿದ್ದವರು ಇದಾರೆ. ಮಾಜಿ ಪ್ರಧಾನಿಗಳಿದಾರೆ. ಆದ್ರಿಂದ ಆಡಳಿತ ನಡೆಸತಕ್ಕಂತ ವಿಷಯದಲ್ಲಿ ನಮಗೆ ಯಾವ ಭಯವೂ ಇಲ್ಲ.”
“ಗ್ರಾಮಾಭಿವೃದ್ಧಿ ಬಗ್ಗೆ ಒಂದೆರಡು ಸಲಹೆ ಕೊಡ್ಳ ಸಾರ್.”
“ಕೊಡಿ, ನಾವು ದನಕಾಯೋ ಹುಡುಗನಿಂದ್ಲೂ ಸಲಹೆ ತಗೊಳ್ತಿವಿ.”
“ನಾನು ಕುರಿಕಾದಿದ್ದೆ ಸಾ.”
“ಇನ್ನೂ ಒಳ್ಳೆದಲವ, ನಾವು ದನಕಾದಿದ್ದೊ, ನೀವು ಕುರಿಕಾದಿದ್ರಿ. ಆದ್ರಿಂದ ನಾವಿಬ್ರು ಅಣ್ಣತಮ್ಮಂದಿರಿದ್ದಂಗೆ.”
“ಏನಿಲ್ಲ ಸಾರ್, ಗ್ರಾಮದ ಉದ್ದಾರ ಒಂದು ನಾಲ್ಕಾರು ಸಮಸ್ಯೆನ ಒಳಗೊಂಡದೆ ಸಾರ್. ರಸ್ತೆ, ಕರೆಂಟು, ಕುಡಿಯೋ ನೀರು, ಒಳ್ಳೆ ಸ್ಕೂಲು ಇಷ್ಟೆ ಸಾರ್.”
“ಅದಕ್ಕೆ ನಾನು ಸ್ಕೂಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೊರಟಿರೋದು.”
“ಒಳ್ಳೆ ತೀರ್ಮಾನ ಸಾರ್, ಒಂಥರ ಐತಿಹಾಸಿಕ ತೀರ್ಮಾನ.”
“ಐತಿಹಾಸಿಕ ಯಾಕ್ರಿ?”
“ನೀವು ಎಡೂರಪ್ಪನ ಜೊತೆ ಸರಕಾರ ಮಾಡಿದಾಗ ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ರಿ. ಆಯ್ಕೆ ಮಾಡಿದ ಊರಿನ ಮಹಿಳೆ ನಿಮಗಾಗಿ ಬೆಡ್ ರೂಮನ ಶೃಂಗಾರ ಮಾಡಿದ್ಲು ಇದು ಗೊತ್ತಾಗಿ ನೀವು ಐಬಿಗೆ ಓಡಿದ್ರಿ ಅಲವ ಸಾರ್.”
“ಹೌದು ಕಂಡ್ರೀ.”
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...