Homeಅಂಕಣಗಳುಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

ಈಚೆಗೆ ಬೆಂಗಳೂರಲ್ಲಿ ಇರಕಾಗ್ತಾಯಿಲ್ಲ ಕಂಡ್ರಿ: ಯಾಹೂ ಜೊತೆ ಕುಮಾರಸ್ವಾಮಿ ಮಾತುಕತೆ

- Advertisement -
- Advertisement -

 

ಗಿರೀಶ್ ಕಾರ್ನಾಡ್‍ರವರ ಸಾವಿನ ನಂತರ ನಡೆದುಕೊಂಡ ರೀತಿಗೆ ಅವರ ವೈರಿಗಳೂ ಮೆಚ್ಚಿ ತಲೆದೂಗುತ್ತಿದ್ದಾರಂತಲ್ಲಾ. ಇದರ ನಡುವೆ ವೀರಶೈವರ ಜಾಲತಾಣಗಳು ಕಾರ್ನಾಡರ ಸಾವನ್ನು ಸಂಭ್ರಮಿಸಿದ್ದು ನೋಡಿದ ಲಿಂಗಾಯತರು, ‘ಥೂ ಎಷ್ಟೇ ಆಗಲಿ ಇವುರು ಅಂಥೋರೆಯ’ ಎಂದು ಉದ್ಘಾರ ತೆಗೆದರಂತಲ್ಲಾ. ಅದಿರಲಿ ಈ ವೀರಶೈವರಿಗೇಕೆ ಕಾರ್ನಾಡರ ಸಾವಿಗೆ ಸಂಭ್ರಮಿಸಿದರು ಎಂದು ನೋಡಿದರೆ, ಕಾರ್ನಾಡರ ‘ತಲೆದಂಡ’ ಕೃತಿ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದಂತಲ್ಲಾ. ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನ ಕೊಲೆ ಇಪ್ಪತ್ತೊಂದನೆ ಶತಮಾನದಲ್ಲೂ ಕೆಲವರನ್ನು ಬೆಚ್ಚಿಸುತ್ತದೆ ಎಂದರೆ ಆಶ್ಚರ್ಯ. ಗಾಂಧೀ ಕೊಲೆಯೂ ಹಾಗೇ ಅಲ್ಲವೆ. ಕೊಂದವನು ನಮ್ಮ ಜಾತಿ ಅಲ್ಲ ಎಂದರು. ಪತ್ತೆ ಹಚ್ಚಿ ಹೇಳಿದಾಗ ನಮ್ಮ ಸಂಘದ ಸದಸ್ಯನಲ್ಲ ಎಂದರು. ಅದನ್ನೂ ಪತ್ತೆ ಹಚ್ಚಿದಾಗ ಸಂಘ ತೊರೆದು ಬಹಳ ವರ್ಷವಾಗಿತ್ತು ಎಂದರು. ಎಲ್ಲಾ ಮುಗಿದು ಮರಣ ದಂಡನೆಯಾದಾಗ ಮನುಧರ್ಮದುದ್ದಾರಕ್ಕೆ ಹುತಾತ್ಮನಾದ ಮಹಾತ್ಯಾಗಿ ಎಂದರು. ಅದೆಲ್ಲಾ ಆಗಿ ಮನುಧರ್ಮ ಗ್ರಂಥವನ್ನು ಪುನರ್ಮುದ್ರಣ ಮಾಡುವ ವ್ಯಾಪಾರಿಯಂತೆ ಕಾಣುವ ಮೋದಿ ಪ್ರಧಾನಿಯಾದ ಕೂಡಲೆ ಗೋಡ್ಸೆಗೆ ಗುಡಿಕಟ್ಟಿದರಂತಲ್ಲಾ ಥೂತ್ತೇರಿ.

*****

ಎಡೂರಪ್ಪನ ಜೊತೆ ಇಪ್ಪತ್ತು ತಿಂಗಳು ತೆಕ್ಕೆ ಬಡಿದುಕೊಂಡು ರಾಜ್ಯಾಡಳಿತ ನಡೆಸಿದ ಕುಮಾರಣ್ಣ, ಜನಾನುರಾಗಿ ಆಗಿದ್ದರು. ಅದಕ್ಕೆ ಕಾರಣ, ಅವರ ಗ್ರಾಮ ವಾಸ್ತವ್ಯವಂತೆ. ಆದರೀಗ ಕುಮಾರಣ್ಣ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಮಂಡ್ಯದಲ್ಲಿ ಮಗನನ್ನ ಗೆಲ್ಲಿಸಲಾಗಿಲ್ಲ. ತುಮಕೂರಿನಲ್ಲಿ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಸನದಲ್ಲಿ ತನ್ನ ಮತ್ಸರಕ್ಕೆ ತುತ್ತಾಗಿರುವ ಭವಾನಿ ಪುತ್ರ ಗೆದ್ದು ಮೆರೆಯುತ್ತಿದ್ದಾನೆ. ಕಾಂಗೈಗಳು ನಂಬಿಕೆಗೆ ಯೋಗ್ಯವಾಗಿ ವರ್ತಿಸುತ್ತಿಲ್ಲ. ಸಿದ್ಧರಾಮಯ್ಯ ಕರ್ಣನಂತೆ ಮಾತನಾಡಿದರೂ ಶಕುನಿಯಾಗಿದ್ದಾರೆ. ಇಂತೆಲ್ಲಾ ತಲೆತಿನ್ನುವ ಸಂಗತಿಗಳಿಂದ ದೂರವಾಗಿ, ನೆಮ್ಮದಿಯಿಂದ ನಾಲ್ಕು ಗಂಟೆ ನಿದ್ದೆ ಮಾಡಬೇಕೆಂದರೆ, ಅದು ಗ್ರಾಮ ವಾಸ್ತವ್ಯದಿಂದ ಮಾತ್ರ ಸಾಧ್ಯ ಎಂದು ಸೂಕ್ತ ಗ್ರಾಮ ಶೋಧನೆಗೆ ತೊಡಗಿರುವಾಗ ಅವರಿಗೆ ಶುಭ ಹಾರೈಸುವುದು ನಮ್ಮ ಕರ್ತವ್ಯ. ಹಾಗಾಗಿ ಫೋನ್ ಮಾಡಿದರೆ ರಿಂಗಾಯ್ತು.
ರಿಂಗ್ ಟೋನ್: ಹಳ್ಳಿಯಾದರೇನು ಶಿವಾ ದಿಳ್ಳಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ ಜನರೆಲ್ಲಾ…….
“ಹೇಳ್ರಿ ಯಾಹು ಏನ್ಸಮಾಚಾರ”
“ಸುಮ್ಮನೆ ಮಾತಾಡಬೇಕು ಅನ್ನುಸ್ತು ಸಾರ್.”
“ಒಂದು ಕೆಲಸ ಮಾಡಿ, ನಾನು ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಒಂದು ತೀರ್ಮಾನ ಏನು ತಗೊಂಡಿದ್ದೀನಿ. ಅದರ ಪ್ರಕಾರ ಗ್ರಾಮ ವಾಸ್ತವ್ಯವನ್ನ ಆರಂಭಿಸಬೇಕು ಅನ್ನೊ ತೀರ್ಮಾನದ ಪ್ರಕಾರ ನಡಕೊಳನಾ ಅಂತ ಇದೀನಿ.”
“ಒಳ್ಳೆ ಆಲೋಚನೆ ಸರ್, ಬೇಗ ಹೊರಡಿ.”
“ನೋಡಿ, ನಿಮ್ಮ ಬಾಯಲ್ಲೂ ಅದೇ ಬರ್ತಾಯಿದೆ. ಅಲ್ಲಿ ನಾನು ಗ್ರಾಮ ವಾಸ್ತವ್ಯದ ಜಾಗದಲ್ಲಿ ಮಾತ್ನಾಡಕ್ಕೆ ಯಾರು ಇರಲ್ಲ. ನೀವು ಬಂದ್ರೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಕಂತ ಕಾರ್ಯಕ್ರಮ ಹಾಯ್ಕಬವುದು.”
“ಸರಿ ಸಾರ್, ಆದ್ರೆ ನಿಮ್ಮ ಗ್ರಾಮ ವಾಸ್ತವ್ಯದಲ್ಲಿ ಭೋಜೇಗೌಡ ಇರ್ತನೆ, ಇನ್ನ ಶಿವರಾಮೇಗೌಡ ಈಗ ನಿರುದ್ಯೋಗಿ ಆಗಿರದ್ರಿಂದ ಅವುನೂ ಇರತನೆ, ಅಲ್ದೆ ಮಧ್ಯೆಮಧ್ಯೆ ಬಾಯಿ ಹಾಕಿ ಯಾರೂ ಮಾತಾಡಕೆ ಬಿಡಲ್ಲ. ಅಂತ ಜಾಗದಲ್ಲಿ ನಾನ್ಯಾಕೆ ಸಾರ್.”
“ನೀವು ಬನ್ನಿ, ಅವುರು ಬೇರೆ ಜಾಗದಲ್ಲಿ ಮನಗತಕ್ಕಂತ ವ್ಯವಸ್ಥೆ ಮಾಡ್ತಿನಿ.”
“ಅದರಗತ್ಯ ಇಲ್ಲ ಸಾರ್, ಶಿವರಾಮೇಗೌಡ ಅವುನ ಕಾರಲ್ಲೇ ಮನಿಕತ್ತನೆ, ಭೋಜೇ ಗೌಡನೂ ಅಂಗೆಯಾ, ಅದಿರ್ಲಿ ತಾವು ಇದ್ದಕ್ಕಿದ್ದಂಗೆ ಗ್ರಾಮ ವಾಸ್ತವ್ಯಕ್ಕೆ ಹೊಂಟಿದ್ಯಾಕೆ.”
“ಈಚೆಗೆ ಬೆಂಗಳೂರಿನಲ್ಲಿ ಇರಕ್ಕಾಗ್ತಾಯಿಲ್ಲ ಕಂಡ್ರಿ.”
“ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ ಸಾರ್. ಇಡೀ ಬೆಂಗಳೂರ ಜನಕ್ಕೆ ಅಂಗಾಗ್ಯದೆ.”
“ಅವುರದೇನಾದ್ರು ಆಗ್ಲಿ, ನನ್ನ ಈ ಸಂದರ್ಭದ ಪರಿಸ್ಥಿತಿಯನ್ನ ನೋಡೋದಾದ್ರೆ, ನಾನು ಎಲ್ಲಾದ್ರು ಹೊರಗೋಗಲೇಬೇಕು. ನಾನು ತುಂಬಾ ಭರವಸೆ ಇಟ್ಟಿದ್ದಂತಹ ಮಂಡ್ಯ ಜಿಲ್ಲೆ ಎಮ್ಮೆಲ್ಲೆಗಳು ಮೋಸ ಮಾಡಿದ್ರು. ನಮ್ಮ ಪಕ್ಷದವರೆ ನನಗೆ ತೊಂದರೆ ಕೊಡತಕಂತ ತೀರ್ಮಾನ ತಗೊಂಡ್ರು. ರಾತ್ರೆ ಆದ್ರು ಕೂಡ ಕಾಂಗ್ರೆಸ್‍ನವರು ಮನೆಹತ್ರ ಬಂದು ಏನೇನೊ ಕೇಳ್ತರೆ. ಅವು ಬೆದರಿಕೆ ತರ ಇರತವೆ. ಇನ್ನ ಬಿಜೆಪಿಗಳ ಭಯೋತ್ಪಾದನೆ ಬೇರೆ.”
“ಒಳ್ಳೆ ಪದ ಬಳಸಿದ್ರಿ ಸಾ. ಬಿಜೆಪಿಗಳದು ಯಾವತ್ತೂ ಭಯೋತ್ಪಾದನೆನೆ. ಸಾಬರ ಕಂಡು ಹೆದ್ರಿಕಂಡು ಅಂಗಾಡ್ತವವು.”
“ಅದೇನಾದ್ರು ಆಗ್ಲಿ. ನನ್ನ ಮನಸ್ಸು ಹಾಳಾಗಿರತಕ್ಕಂತ ಈ ಸಮಯದಲ್ಲಿ ಗ್ರಾಮ ವಾಸ್ತವ್ಯ ಸೂಕ್ತ.”
“ಆರೋಗ್ಯ ಹ್ಯಾಗಿದೆ ಸಾ.”
“ಚೆನ್ನಾಗಿದೀನಿ.”
“ಮತ್ತೆ ದೇವೇಗೌಡ್ರು ತುಂಬ ಅಪಾಯದ ಸ್ಥಿತೀಲಿದಾನೆ ಕುಮಾರ ಅಂದ್ರು.”
“ಅದು ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಬೇಕಾದ್ರೆ, ಏನಾದ್ರು ಒಂದು ಪ್ರಮುಖವಾದ ಕಾರಣ ಬೇಕಾಗಿದ್ದ ಸನ್ನಿವೇಶದಲ್ಲಿ ನಮ್ಮ ತಂದೆ ಹಾಗಂದಿದ್ರು.”
“ಥೂ.. ಏನಾಯ್ತು ಗೊತ್ತ ಸಾರ್, ನೀವು ಕಾಂಗ್ರೆಸ್‍ನಿಂದ ಮಂಜೇಗೌಡ ಅಂತ ಕೊಂಡಕೊಂಡ್ರಲ್ಲ ಅವುನೇನು ಮಾಡಿದ ಗೊತ್ತೇ, ಕುಮಾರಣ್ಣ ಜಾಸ್ತಿ ದಿನ ಇರದಿಲ್ಲ. ನಿಖಿಲ್‍ಗೆ ಓಟು ಮಾಡಿ ಅಂತ ಇಡೀ ಜಿಲ್ಲೇಲಿ ಹೇಳಿಕಂಡು ತಿರುಗಿದ. ಅಂಗಾಗಿ ಜನ ನಿಮ್ಮ ಬಗ್ಗೆ ಕ್ಯಟ್ಟ ನಿರೀಕ್ಷೆಲವುರೆ.”
“ಇರ್ಲಿ ಬಿಡಿ, ಜನ ನಮ್ಮ ಬಗ್ಗೆ ಅಂಗನ್ನಕಂಡ್ರೆ ನನ್ನ ಆಯಸ್ಸು ಜಾಸ್ತಿಯಾಯ್ತದಂತೆ, ನಮ್ಮ ತಂದೆ ಹಾಗೇಳತಿದ್ರು.”
“ಗ್ರಾಮ ವಾಸ್ತವ್ಯದಲ್ಲಿ ಏನು ಮಾಡ್ತಿರಿ ಸಾರ್.”
“ನಮ್ಮ ಅಧಿಕಾರಿಗಳು ನಾನು ಆಯ್ಕೆ ಮಾಡಿದ ಗ್ರಾಮಕ್ಕೆ ಹೋಗಿ ಒಂದು ಮನೇನ ವಶಕ್ಕೆ ತಗೊಳ್ತರೆ. ಅಲ್ಲಿ ನನ್ನ ವಾಸ್ತವ್ಯಕ್ಕೆ ಏನೇನು ಬೇಕೊ ಅದನ್ನ ಅರೇಂಜ್ ಮಾಡ್ತರೆ. ನಾನು ಆ ಮನೆ ಜನಗಳ ಜೊತೆ ಕುಳಿತು ಊಟ ಮಾಡ್ತಿನಿ, ಚರ್ಚೆ ಮಾಡ್ತಿನಿ. ಈ ಗ್ರಾಮದ ಅಭಿವೃದ್ಧಿ ಹೇಗೆ ಮಾಡಬೇಕು ಅನತಕ್ಕಂತ ಸಲಹೆ ಕೇಳ್ತಿನಿ.”
“ಒಳ್ಳೆ ಕಾರ್ಯಕ್ರಮ ಸಾರ್, ಆದ್ರು ಕರ್ನಾಟಕದಲ್ಲಿ 28 ಸಾವಿರ ಹಳ್ಳಿಗಳಿವೆ ಅವುಗಳ ಅಭಿವೃದ್ಧಿ ಹೇಗೆ.”
“ಇಪ್ಪತ್ತೆಂಟು ಸಾವಿರ ಹಳ್ಳಿಗಳಿಗೂ ಹೋಗಿ ನಾನು ಗ್ರಾಮ ವಾಸ್ತವ್ಯ ಮಾಡಕ್ಕಾಗಲ್ಲ.”
“ಅಷ್ಟು ದಿನ ಇರಬೇಕಲ್ಲ ಸಾ ನೀವು.”
“ಇರದರ ಪ್ರಶ್ನೆ ಅಲ್ಲ. ಗ್ರಾಮಗಳನ್ನ ಹೇಗೆ ಅಭಿವೃದ್ಧಿ ಮಾಡಬೇಕು ಅನತಕ್ಕಂತ ವಿಷಯಗಳನ್ನ ವಿಧಾನಸೌಧದಲ್ಲಿ ಕುಳಿತು ಚರ್ಚೆಮಾಡದಕ್ಕಿಂತ ಗ್ರಾಮಕ್ಕೆ ಹೋದ್ರೆ ಒಳ್ಳೆದಲವೆ.”
“ಸರಿ, ವಿಧಾನಸೌಧದ ರಾಶಿ ಫೈಲ್‍ಗಳ ನೋಡದ್ಯಾವಾಗ ನೀವು.”
“ಅದಕ್ಕೆಲ್ಲಾ ಜನ ಇದಾರೆ.”
“ನಿಮ್ಮ ಕುಟುಂಬದಲ್ಲಾ.”
“ನಮ್ಮ ಕುಟುಂಬ ಅಂದ್ರು ತಪ್ಪಾಗಲಾರ್ದು. ಯಾಕೆ ಅಂದ್ರೆ ನಮ್ಮ ಕುಟುಂಬದಲ್ಲಿ ಕೆಎಎಸ್ ಅಧಿಕಾರಿಯಾಗಿದ್ದವುರು ಇದಾರೆ. ಸತತ ಮಂತ್ರಿಗಳಾಗಿದ್ದವರು ಇದಾರೆ. ಮಾಜಿ ಪ್ರಧಾನಿಗಳಿದಾರೆ. ಆದ್ರಿಂದ ಆಡಳಿತ ನಡೆಸತಕ್ಕಂತ ವಿಷಯದಲ್ಲಿ ನಮಗೆ ಯಾವ ಭಯವೂ ಇಲ್ಲ.”
“ಗ್ರಾಮಾಭಿವೃದ್ಧಿ ಬಗ್ಗೆ ಒಂದೆರಡು ಸಲಹೆ ಕೊಡ್ಳ ಸಾರ್.”
“ಕೊಡಿ, ನಾವು ದನಕಾಯೋ ಹುಡುಗನಿಂದ್ಲೂ ಸಲಹೆ ತಗೊಳ್ತಿವಿ.”
“ನಾನು ಕುರಿಕಾದಿದ್ದೆ ಸಾ.”
“ಇನ್ನೂ ಒಳ್ಳೆದಲವ, ನಾವು ದನಕಾದಿದ್ದೊ, ನೀವು ಕುರಿಕಾದಿದ್ರಿ. ಆದ್ರಿಂದ ನಾವಿಬ್ರು ಅಣ್ಣತಮ್ಮಂದಿರಿದ್ದಂಗೆ.”
“ಏನಿಲ್ಲ ಸಾರ್, ಗ್ರಾಮದ ಉದ್ದಾರ ಒಂದು ನಾಲ್ಕಾರು ಸಮಸ್ಯೆನ ಒಳಗೊಂಡದೆ ಸಾರ್. ರಸ್ತೆ, ಕರೆಂಟು, ಕುಡಿಯೋ ನೀರು, ಒಳ್ಳೆ ಸ್ಕೂಲು ಇಷ್ಟೆ ಸಾರ್.”
“ಅದಕ್ಕೆ ನಾನು ಸ್ಕೂಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಹೊರಟಿರೋದು.”
“ಒಳ್ಳೆ ತೀರ್ಮಾನ ಸಾರ್, ಒಂಥರ ಐತಿಹಾಸಿಕ ತೀರ್ಮಾನ.”
“ಐತಿಹಾಸಿಕ ಯಾಕ್ರಿ?”
“ನೀವು ಎಡೂರಪ್ಪನ ಜೊತೆ ಸರಕಾರ ಮಾಡಿದಾಗ ಗ್ರಾಮ ವಾಸ್ತವ್ಯಕ್ಕೆ ಹೊರಟಿದ್ರಿ. ಆಯ್ಕೆ ಮಾಡಿದ ಊರಿನ ಮಹಿಳೆ ನಿಮಗಾಗಿ ಬೆಡ್ ರೂಮನ ಶೃಂಗಾರ ಮಾಡಿದ್ಲು ಇದು ಗೊತ್ತಾಗಿ ನೀವು ಐಬಿಗೆ ಓಡಿದ್ರಿ ಅಲವ ಸಾರ್.”
“ಹೌದು ಕಂಡ್ರೀ.”
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...