Homeಕರ್ನಾಟಕದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

ದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

- Advertisement -
- Advertisement -

ಯಾವುದೇ ಆಹಾರ ವ್ಯಕ್ತಿಯ ದೇಹ-ಅಭಿರುಚಿ-ಆರೋಗ್ಯಕ್ಕೆ ಸಂಬಂಧಿಸಿದ ಸ್ವತಂತ್ರ ಆಯ್ಕೆ. ಧಾರ್ಮಿಕ ಫಲಾಪೇಕ್ಷೆಗಳಿಲ್ಲದೆ ಸೊಪ್ಪು-ತರಕಾರಿಗಳಂತೆ ಸಾಕು ಪ್ರಾಣಿಗಳನ್ನು ಬಳಸುವುದು ದಿನನಿತ್ಯದ ಸಾಮಾನ್ಯ ಆಹಾರ ಪದ್ಧತಿ.

ಈ ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಆಹಾರ ತಿನ್ನಬೇಕೆಂದು ವಿಧಿಸುವುದು/ನಿಷೇಧಿಸುವುದು ಸರ್ವಾಧಿಕಾರಿ ಅವಿವೇಕದ ಪರಮಾವಧಿ. ಈ ಫರ್ಮಾನುಗಳ ಹಿಂದೆ ಜಾತೀಯತೆ/ಮತೀಯ ಅಸಹನೆ/ಅಸ್ಪೃಶ್ಯತಾಚರಣೆಗಳ ಸಮರ್ಥನೆ… ಇತ್ಯಾದಿ ರಾಜಕೀಯ ತಂತ್ರಗಳಿವೆ. ಈ ಷಡ್ಯಂತ್ರಗಳನ್ನು ಮರೆಮಾಚಲು 12ನೇ ಶತಮಾನದ ಶರಣರ ವಚನಗಳನ್ನು ಅವುಗಳ ಸಾಂದರ್ಭಿಕಾರ್ಥ-ಪೂರ್ಣಾರ್ಥ-ಒಟ್ಟು ಆಶಯಗಳ ಹಿನ್ನೆಲೆ ತಪ್ಪಿಸಿ ಬಳಸಿಕೊಳ್ಳುವುದರಲ್ಲಿ ಎಲ್ಲರನ್ನು ದಾರಿ ತಪ್ಪಿಸುವ ಹುನ್ನಾರವಡಗಿದೆ.

ಬಸವಣ್ಣನ ವಚನಗಳಲ್ಲಿ ಮಾಂಸಾಹಾರದ ತಿರುಳು ಹೆಚ್ಚಾಗಿ ಕಂಡುಬಂದಿರುವುದು- ವೈದಿಕರು ಯಜ್ಞ ಯಾಗಾದಿಗಳಲ್ಲಿ ಕೊಡುವ ಜೀವ ಬಲಿ ಮತ್ತು ಸಾಮೂಹಿಕವಾಗಿ ಜನ ಕ್ಷುದ್ರದೇವತೆಗಳ ಆರಾಧನೆಯಲ್ಲಿ ಹಬ್ಬದ ಹರಕೆಗಾಗಿ ಕೊಡುವ ಪ್ರಾಣಿಬಲಿಗಳ ಸಂದರ್ಭಗಳ ಉಲ್ಲೇಖಗಳಲ್ಲಿ, ‘ಹೋಮದ ನೇಮದಲ್ಲಿ ಹೋತನವೆಂಬ ಅನಾಮಿಕರೊಡನಾಡಿ ಗೆಲ್ಲುವುದೇನು…’, ‘ನಾನು ಕೊಲ್ಲೆ, ನೇಣು ಕೊಂದಿತ್ತೆಂಬ ಸೂನೆಗಾರರನೇನೆಂಬೆ’ (ನೇಣು=ಜನಿವಾರ) ಹಿಂಸಾತ್ಮಕ ಕ್ರಿಯೆಗಳ ವಿಪ್ರರನ್ನು ಹೊಲೆತನದ ತಳಕ್ಕೆ ಅನಾಮಿಕರೆಂದು ಸ್ಥಳಾಂತರಿಸಿದ್ದಾರೆ. ಹಾಗೆ ಸಾಮಾನ್ಯ ಜನರ ಕಿರುಕುಳ ದೈವಾರಾಧನೆಯ ಬಲಿ-ಹಿಂಸೆಗಳನ್ನು ಖಂಡಿಸಿ- ‘ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು…’ ಎಂದಿದ್ದಾರೆ.

ಒಟ್ಟು ಧಾರ್ಮಿಕಾಚರಣೆಯ ಮೌಢ್ಯದಲ್ಲಿ ತಮ್ಮ ಇಹ-ಪರ ಸುಖ, ಸಮೃದ್ಧಿ ಭೋಗಭಾಗ್ಯಗಳ ಈಡೇರಿಕೆಗಾಗಿ ಇನ್ನೊಂದು ಜೀವವನ್ನು ಬಲಿಕೊಟ್ಟು ತಮ್ಮ ಮಾಂಸಾಹಾರದ ಬಯಕೆಯನ್ನು ತೀರಿಸಿಕೊಳ್ಳುವ ರೂಢಿಯನ್ನು ಸ್ವಹಿತಕ್ಕಾಗಿ ಅನ್ಯಜೀವವನ್ನು ಕೊಲ್ಲುವ ಹಿಂಸಾರಭಸಮತೆಯನ್ನು ಖಂಡಿಸಿದ್ದಾರೆ.

ಹೀಗಾಗಿ ಬಸವಣ್ಣನ ವಚನಾಭಿವ್ಯಕ್ತಿ ಕೇವಲ ಮಾಂಸಾಹಾರಕ್ಕೆ ಸಂಬಂಧಿಸಿಲ್ಲ. ಉದಾಹರಣೆ, ‘ಸತ್ತುದನನೆಳೆವನೆತ್ತಣ ಹೊಲೆಯ?’
ಹೊತ್ತು ತಂದು ನೀವು ಕೊಲ್ಲುವಿರಿ ‘ಎಂದಿರುವುದು ಹಾಗೆ’ ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ ಬಾಯಲ್ಲಿ ಸುರೆಯ ಗಡಿಗೆ… ಅವರ ಲಿಂಗನೆಂಬೆ- ಸಂಗನೆಂಬೆ’ ಎಂಬಲ್ಲಿ ಸ್ವೀಕಾರಭಾವವಿದೆ.

ಸಸ್ಯಾಹಾರ-ಮಾಂಸಾಹಾರವೆಂಬ ಚರ್ಚೆಗಿಂತ ಬಸವಣ್ಣನ ತೀವ್ರ ಪ್ರತಿಭಟನೆ-ತಿರಸ್ಕಾರಗಳಿರುವುದು ದೇವರು-ಧರ್ಮ-ಶಾಸ್ತ್ರಗಳ ಪ್ರಮಾಣುವಿನಲ್ಲಿ ಬಲಿ-ಹಿಂಸೆಯನ್ನು ಧಾರ್ಮಿಕಗೊಳಿಸುವ/ಮೌಲಿಕಗೊಳಿಸುವ/ತಾತ್ವಿಕಗೊಳಿಸುವ ವೈದಿಕರ ಅಪಾಯಕಾರಿ ಪ್ರವೃತ್ತಿಯನ್ನು ಖಂಡಿಸುವಲ್ಲಿ, ಜತೆಗೆ ಹೀಗಾದಾಗ ಸಮಾಜದ ಅಧಃಪತನದ ಗತಿ ತೀವ್ರವಾಗುತ್ತದಲ್ಲ ಎಂಬ ಆತಂಕ- ಮರುಕ – ಕಾಳಜಿಗಳೂ ಬಸವಣ್ಣನ ದರ್ಶನದಲ್ಲಿದೆ.

ಡಾ.ಲತಾ ಮೈಸೂರು, ಪ್ರಾಧ್ಯಾಪಕರು

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಐಪಿಎಲ್ ಪಂದ್ಯದಿಂದ ಭಾರೀ ಸಂಚಾರ ದಟ್ಟಣೆ; ಆಂಬ್ಯುಲೆನ್ಸ್‌ನಲ್ಲಿದ್ದ ಮಹಿಳೆ ಸಾವು

ಏಪ್ರಿಲ್ 5 ರ ಭಾನುವಾರ ಉಪ್ಪಳದಲ್ಲಿ ಉಂಟಾದ ಭಾರೀ ಸಂಚಾರ ದಟ್ಟಣೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ನಲ್ಲಿ ಸಿಲುಕಿಕೊಂಡಿದ್ದ ಬಿಷ್ಣಾ ಎಂಬ 30 ವರ್ಷದ ಮಹಿಳೆ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಉಪ್ಪಳದ...

ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಎಸ್‌ಐಆರ್ ಪೂರಕ ಪಟ್ಟಿಯಿಂದ 95% ಮುಸ್ಲಿಂ ಮತದಾರರ ಹೆಸರು ತೆಗೆದುಹಾಕಲಾಗಿದೆ: ವರದಿ 

ಸುವೇಂದು ಅಧಿಕಾರಿ ಪ್ರತಿನಿಧಿಸುವ ಪೂರ್ವ ಮಿಡ್ನಾಪುರ ವಿಧಾನಸಭಾ ಕ್ಷೇತ್ರವಾದ ನಂದಿಗ್ರಾಮದಲ್ಲಿ ಒಂದು ಅಧ್ಯಯನವು ಆತಂಕಕಾರಿ ಅಸಮಾನತೆಯನ್ನು ಎತ್ತಿ ತೋರಿಸಿದೆ, ಅಲ್ಲಿ ಮತದಾರರಲ್ಲಿ ಕಡಿಮೆ ಪಾಲು ಇದ್ದರೂ ಎಸ್‌ಐಆರ್ ಪೂರಕ ಪಟ್ಟಿಯಿಂದ ಅಳಿಸಲಾದ ಮತದಾರರಲ್ಲಿ...

ಟೋಲ್ ಪ್ಲಾಜಾಗಳಲ್ಲಿನ ಅಶುಚಿತ್ವ ಶೌಚಾಲಯಗಳ ಬಗ್ಗೆ ವರದಿ ಮಾಡಿದರೆ ಬಹುಮಾನ: ಕೇಂದ್ರ ಸರ್ಕಾರ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ನೈರ್ಮಲ್ಯದ ಬಗ್ಗೆ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೋಲ್ ಪ್ಲಾಜಾಗಳಲ್ಲಿ ಅಶುಚಿಯಾದ ಶೌಚಾಲಯ ಸೌಲಭ್ಯಗಳ ಬಗ್ಗೆ ವರದಿ ಮಾಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವ...

ಮಣಿಪುರ: ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಬಲಿ; ಕುಕಿ ದಂಗೆಕೋರರಿಂದ ದಾಳಿ ಆರೋಪ; ಇದು ಅನಾಗರಿಕ ಕೃತ್ಯ ಎಂದ ಸಿಎಂ 

ಗುವಾಹಟಿ: ಮಣಿಪುರದ ಮೈತೇಯಿ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಐದು ತಿಂಗಳ ಗಂಡು ಮಗು ಸೇರಿದಂತೆ ಇಬ್ಬರು ಅಪ್ರಾಪ್ತ ವಯಸ್ಕರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಮೊಯಿರಾಂಗ್...

ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ವಿಪಕ್ಷಗಳಿಂದ ನೋಟಿಸ್‌ : ಕಾರಣ ನೀಡದೆ ತಿರಸ್ಕರಿಸಿದ ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು-ವರದಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ವಿಪಕ್ಷ ಸಂಸದರು ಸಲ್ಲಿಸಿದ್ದ ನಿಲುವಳಿ ನೋಟಿಸ್ ಅನ್ನು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದ್ದಾರೆ. ಉಭಯ...

ಎನ್‌ಸಿಪಿ ನಾಯಕನ ಕೊಲೆ ಪ್ರಕರಣ : ಛತ್ತೀಸ್‌ಗಢ ಮಾಜಿ ಸಿಎಂ ಅಜಿತ್ ಜೋಗಿ ಮಗ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ

2003ರ ಕೊಲೆ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಹಿಂದೂ ಸೋಮವಾರ (ಏ.6) ವರದಿ ಮಾಡಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್...

ಪ. ಬಂಗಾಳ | ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಸೂಕ್ತ ಕಾರಣ ನೀಡದ ಚುನಾವಣಾ ಆಯೋಗ : ಕಾಂಗ್ರೆಸ್ ಅಭ್ಯರ್ಥಿ ಹೆಸರು ಮರು ಸೇರ್ಪಡೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರ ಅರ್ಜಿಗಳ ವಿಚಾರಣೆಗಾಗಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾದ ಮೇಲ್ಮನವಿ ನ್ಯಾಯಮಂಡಳಿಯು, ಮುಂಬರುವ ವಿಧಾನಸಭಾ ಚುನಾವಣೆಯ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಭಾನುವಾರ...

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....