Homeಕರ್ನಾಟಕದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

ದಾರಿ ತಪ್ಪಿಸುವ ಹುನ್ನಾರ ಅಡಗಿದೆ/ಆಹಾರ ಪರಂಪರೆ ಮತ್ತು ವಚನ ಚಳವಳಿ

- Advertisement -
- Advertisement -

ಯಾವುದೇ ಆಹಾರ ವ್ಯಕ್ತಿಯ ದೇಹ-ಅಭಿರುಚಿ-ಆರೋಗ್ಯಕ್ಕೆ ಸಂಬಂಧಿಸಿದ ಸ್ವತಂತ್ರ ಆಯ್ಕೆ. ಧಾರ್ಮಿಕ ಫಲಾಪೇಕ್ಷೆಗಳಿಲ್ಲದೆ ಸೊಪ್ಪು-ತರಕಾರಿಗಳಂತೆ ಸಾಕು ಪ್ರಾಣಿಗಳನ್ನು ಬಳಸುವುದು ದಿನನಿತ್ಯದ ಸಾಮಾನ್ಯ ಆಹಾರ ಪದ್ಧತಿ.

ಈ ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಆಹಾರ ತಿನ್ನಬೇಕೆಂದು ವಿಧಿಸುವುದು/ನಿಷೇಧಿಸುವುದು ಸರ್ವಾಧಿಕಾರಿ ಅವಿವೇಕದ ಪರಮಾವಧಿ. ಈ ಫರ್ಮಾನುಗಳ ಹಿಂದೆ ಜಾತೀಯತೆ/ಮತೀಯ ಅಸಹನೆ/ಅಸ್ಪೃಶ್ಯತಾಚರಣೆಗಳ ಸಮರ್ಥನೆ… ಇತ್ಯಾದಿ ರಾಜಕೀಯ ತಂತ್ರಗಳಿವೆ. ಈ ಷಡ್ಯಂತ್ರಗಳನ್ನು ಮರೆಮಾಚಲು 12ನೇ ಶತಮಾನದ ಶರಣರ ವಚನಗಳನ್ನು ಅವುಗಳ ಸಾಂದರ್ಭಿಕಾರ್ಥ-ಪೂರ್ಣಾರ್ಥ-ಒಟ್ಟು ಆಶಯಗಳ ಹಿನ್ನೆಲೆ ತಪ್ಪಿಸಿ ಬಳಸಿಕೊಳ್ಳುವುದರಲ್ಲಿ ಎಲ್ಲರನ್ನು ದಾರಿ ತಪ್ಪಿಸುವ ಹುನ್ನಾರವಡಗಿದೆ.

ಬಸವಣ್ಣನ ವಚನಗಳಲ್ಲಿ ಮಾಂಸಾಹಾರದ ತಿರುಳು ಹೆಚ್ಚಾಗಿ ಕಂಡುಬಂದಿರುವುದು- ವೈದಿಕರು ಯಜ್ಞ ಯಾಗಾದಿಗಳಲ್ಲಿ ಕೊಡುವ ಜೀವ ಬಲಿ ಮತ್ತು ಸಾಮೂಹಿಕವಾಗಿ ಜನ ಕ್ಷುದ್ರದೇವತೆಗಳ ಆರಾಧನೆಯಲ್ಲಿ ಹಬ್ಬದ ಹರಕೆಗಾಗಿ ಕೊಡುವ ಪ್ರಾಣಿಬಲಿಗಳ ಸಂದರ್ಭಗಳ ಉಲ್ಲೇಖಗಳಲ್ಲಿ, ‘ಹೋಮದ ನೇಮದಲ್ಲಿ ಹೋತನವೆಂಬ ಅನಾಮಿಕರೊಡನಾಡಿ ಗೆಲ್ಲುವುದೇನು…’, ‘ನಾನು ಕೊಲ್ಲೆ, ನೇಣು ಕೊಂದಿತ್ತೆಂಬ ಸೂನೆಗಾರರನೇನೆಂಬೆ’ (ನೇಣು=ಜನಿವಾರ) ಹಿಂಸಾತ್ಮಕ ಕ್ರಿಯೆಗಳ ವಿಪ್ರರನ್ನು ಹೊಲೆತನದ ತಳಕ್ಕೆ ಅನಾಮಿಕರೆಂದು ಸ್ಥಳಾಂತರಿಸಿದ್ದಾರೆ. ಹಾಗೆ ಸಾಮಾನ್ಯ ಜನರ ಕಿರುಕುಳ ದೈವಾರಾಧನೆಯ ಬಲಿ-ಹಿಂಸೆಗಳನ್ನು ಖಂಡಿಸಿ- ‘ಕುರಿ ಬೇಡ, ಮರಿ ಬೇಡ ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು…’ ಎಂದಿದ್ದಾರೆ.

ಒಟ್ಟು ಧಾರ್ಮಿಕಾಚರಣೆಯ ಮೌಢ್ಯದಲ್ಲಿ ತಮ್ಮ ಇಹ-ಪರ ಸುಖ, ಸಮೃದ್ಧಿ ಭೋಗಭಾಗ್ಯಗಳ ಈಡೇರಿಕೆಗಾಗಿ ಇನ್ನೊಂದು ಜೀವವನ್ನು ಬಲಿಕೊಟ್ಟು ತಮ್ಮ ಮಾಂಸಾಹಾರದ ಬಯಕೆಯನ್ನು ತೀರಿಸಿಕೊಳ್ಳುವ ರೂಢಿಯನ್ನು ಸ್ವಹಿತಕ್ಕಾಗಿ ಅನ್ಯಜೀವವನ್ನು ಕೊಲ್ಲುವ ಹಿಂಸಾರಭಸಮತೆಯನ್ನು ಖಂಡಿಸಿದ್ದಾರೆ.

ಹೀಗಾಗಿ ಬಸವಣ್ಣನ ವಚನಾಭಿವ್ಯಕ್ತಿ ಕೇವಲ ಮಾಂಸಾಹಾರಕ್ಕೆ ಸಂಬಂಧಿಸಿಲ್ಲ. ಉದಾಹರಣೆ, ‘ಸತ್ತುದನನೆಳೆವನೆತ್ತಣ ಹೊಲೆಯ?’
ಹೊತ್ತು ತಂದು ನೀವು ಕೊಲ್ಲುವಿರಿ ‘ಎಂದಿರುವುದು ಹಾಗೆ’ ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ ಬಾಯಲ್ಲಿ ಸುರೆಯ ಗಡಿಗೆ… ಅವರ ಲಿಂಗನೆಂಬೆ- ಸಂಗನೆಂಬೆ’ ಎಂಬಲ್ಲಿ ಸ್ವೀಕಾರಭಾವವಿದೆ.

ಸಸ್ಯಾಹಾರ-ಮಾಂಸಾಹಾರವೆಂಬ ಚರ್ಚೆಗಿಂತ ಬಸವಣ್ಣನ ತೀವ್ರ ಪ್ರತಿಭಟನೆ-ತಿರಸ್ಕಾರಗಳಿರುವುದು ದೇವರು-ಧರ್ಮ-ಶಾಸ್ತ್ರಗಳ ಪ್ರಮಾಣುವಿನಲ್ಲಿ ಬಲಿ-ಹಿಂಸೆಯನ್ನು ಧಾರ್ಮಿಕಗೊಳಿಸುವ/ಮೌಲಿಕಗೊಳಿಸುವ/ತಾತ್ವಿಕಗೊಳಿಸುವ ವೈದಿಕರ ಅಪಾಯಕಾರಿ ಪ್ರವೃತ್ತಿಯನ್ನು ಖಂಡಿಸುವಲ್ಲಿ, ಜತೆಗೆ ಹೀಗಾದಾಗ ಸಮಾಜದ ಅಧಃಪತನದ ಗತಿ ತೀವ್ರವಾಗುತ್ತದಲ್ಲ ಎಂಬ ಆತಂಕ- ಮರುಕ – ಕಾಳಜಿಗಳೂ ಬಸವಣ್ಣನ ದರ್ಶನದಲ್ಲಿದೆ.

ಡಾ.ಲತಾ ಮೈಸೂರು, ಪ್ರಾಧ್ಯಾಪಕರು

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...