Homeಕರ್ನಾಟಕಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

ಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

- Advertisement -
- Advertisement -

ಹಿಂದೂ ಮುಸ್ಲಿಂ ಯುವ ಮಿತ್ರರೇ, ನಾನು ಇತ್ತೀಚೆಗೆ ಕೋಮು ಗಲಭೆಯಾದರೆ, ಯಾರದರೂ ಸತ್ತರೆ ತೀರಾ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ಕಡಿಮೆ ಮಾಡಿದ್ದೇನೆ. ಯಾಕೆಂದರೆ ಇವತ್ತು ಕೆಲವರು ಹೇಳುವುದನ್ನು ನಾನು 30 ವರ್ಷಗಳ ಹಿಂದೆ ಎಕಾಂಗಿಯಾಗಿ ಬೊಬ್ಬೆ ಹೊಡೆದು ಹೇಳಿದ್ದೆ. ಆಗ ಯಾರೂ ಕೂಡಾ ಅದನ್ನ ಕೇಳಿಸಿಕೊಳ್ಳಲಿಲ್ಲ. ಈಗ ಹೆಚ್ಚು ಜನರಿಗೆ ಅರ್ಥವಾದಂತಿದೆ.

ಬಡವರ ಮನೆಯ ಮಕ್ಕಳಿಗೆ ಮಾತ್ರ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಯಾಕೆ? ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಇರುವ ಯಾರಿಗೂ ಸಮಸ್ಯೆಗಳಾಗದ್ದು ಈ ಯುವಕರಿಗೇಕೆ ಸಮಸ್ಯೆ ಅಂತಾ ಕೇಳಿದ್ದೆ. ಹಿಂದೂ ಮುಸ್ಲಿಂನ ರಾಜಕೀಯ ನಾಯಕರ ಮನೆಯ ಮಕ್ಕಳು ಇಂತಹ ಸಂಘಟನೆಗಳಲ್ಲಿ ಕನಿಷ್ಠ ಸದಸ್ಯರಾಗಿಯೂ ಇರುವುದಿಲ್ಲ ಯಾಕೆ ಎಂದೂ ಕೇಳಿದ್ದೆ. ಈಗ ಅನೇಕರು ಈ ಪ್ರಶ್ನೆ ತಡವಾಗಿ ಕೇಳುತ್ತಿದ್ದಾರೆ. ಸಂತೋಷ.

ಹೀಗೆ ಹೇಳಿದ ತಕ್ಷಣ, “ಅರೇ ನಾವು ನಮ್ಮ ಧರ್ಮದ ಸಂಘಟನೆ ಮಾಡಿಕೊಳ್ಳುವುದು ತಪ್ಪಾ” ಅನ್ನುತ್ತೀರಿ. ಖಂಡಿತ ತಪ್ಪಲ್ಲ. ಅದು ನಿಮ್ಮ ನಿಮ್ಮ ಧರ್ಮದಲ್ಲಿನ ಉತ್ತಮ ವಿಷಯ ಪ್ರಚಾರಕ್ಕೆ, ಜೀವನ ಪದ್ಧತಿಯನ್ನು ಆದರ್ಶ ಮತ್ತು ಮೌಲ್ಯಗಳೊಂದಿಗೆ ಬದುಕಲು ಪ್ರೇರಣೆಯಾಗುವುದಕ್ಕೆ ಮತ್ತು ನಾವು ನಂಬುವ ದೇವರೊಂದಿಗೆ ಅನುಸಂಧಾನ ಮಾಡುವುದಕ್ಕೆ, ಮತೀಯ ಹೆಸರಲ್ಲಿ ಒಂದಿಷ್ಟು ಜನರ ಬದುಕು ಸರಿ ಮಾಡುವುದಕ್ಕೆ ಸಂಘಟನೆ ಮಾಡಿ. ಬೇಡ ಅನ್ನುವುದು ತಪ್ಪಾಗುತ್ತದೆ.

ನಮ್ಮ ಧರ್ಮದ ಅಳಿವು ಉಳಿವಿನ ಪ್ರಶ್ನೆ ಇದು. ಅದಕ್ಕಾಗಿ ಹೋರಾಟ ಮಾಡಲು, ಇದೊಂದು ಸೈನ್ಯ ಅಂತಿರಾ. ಸರಿ. ಧರ್ಮದ ಅಳಿವು ಉಳಿವಿನ ಪ್ರಶ್ನೆ ಅಂತಾದರೆ ಈ ಹೋರಾಟದಲ್ಲಿ ಶ್ರೀಮಂತರು, ಮೇಲ್ವರ್ಗದವರು, ಸನ್ಯಾಸಿಗಳು, ಪಾದ್ರಿಗಳು, ಮೌಲ್ವಿಗಳು ತಮ್ಮ ತಮ್ಮ ಧರ್ಮ ರಕ್ಷಣೆಗೆ ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಯಾಕೆ ಬರುವುದಿಲ್ಲ? ನಿಮ್ಮ ಪರ ಕಿರಿಚಾಡುವ ಟಿವಿ ನಿರೂಪಕ ಯಾಕೆ ಬೀದಿಗಿಳಿಯಲಾರ. ಮತೀಯವಾಗಿ ಉದ್ರೇಕ ಹೇಳಿಕೆ ಕೊಡುವ ನಾಯಕನ ಕುಟುಂಬವನ್ನು ನೀವು ಹತ್ತಿರದಿಂದ ನೋಡಿದ್ದೀರಿ.

ಇದನ್ನೂ ಓದಿರಿ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಶವಯಾತ್ರೆ: ಈಶ್ವರಪ್ಪ, ರಾಘವೇಂದ್ರ ವಿರುದ್ಧ ದೂರು ದಾಖಲು

ನಿಮ್ಮ ಬಳಿಯೇ ಇರುವ ಜನಪ್ರತಿನಿಧಿ ಅಥವಾ ಮತೀಯ ಸಂಘಟನೆಗಳ ಉನ್ನತ ನಾಯಕರನ್ನು ನೋಡಿ. ಅವರುಗಳ ಮನೆ, ವೈಭೋಗ, ಮಕ್ಕಳ ಉನ್ನತ ಶಿಕ್ಷಣ, ವ್ಯಾಪಾರ ವಹಿವಾಟು- ಅದು ನಿಮಗಿಲ್ಲ. ನಿಮ್ಮ ಹೋರಾಟದಲ್ಲಿ ಅವರಿಲ್ಲ. ಯಾಕೆ ಅಂತಾ ಯೋಚನೆ ಮಾಡಿದ್ದೀರಾ? ಹಾಗಾದರೆ ನೀವು ಕೆರಳಿ ಹೊಡೆದಾಡುವ ಮತೀಯ ಸಮಸ್ಯೆ ಅವರಿಗ್ಯಾರಿಗೂ ಇಲ್ಲವೆ? ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಹುರಿದುಂಬಿಸುವವರ ವಾಲ್ ಗಳನ್ನು ನೋಡಿ ಬನ್ನಿ. ಅಸಲಿಗೆ ಗಲಾಟೆಯಾದಾಗ ಅವರು ಮನೆ ಬಾಗಿಲು ಹಾಕಿ ಒಳಗಿರುವ ಜನರೇ ಜಾಸ್ತಿ. ಅವರ ವಾಲ್ ಪೋಟೋ ನೋಡಿ. ಆಧುನಿಕತೆ ಪಾಶ್ಚಿಮಾತ್ಯ ಎಲ್ಲ ಸುಖ ಅನುಭವಿಸುತ್ತ, ವಿದೇಶದಲ್ಲಿ ಮಕ್ಕಳನ್ನು ಸುಖವಾಗಿಡುವ ಜನ (ಹೀಗೆ ಮಾಡುವವರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ತಾವು ಹಾಗಿದ್ದುಕೊಂಡು ಬೇರೆಯವರ ಮಕ್ಕಳನ್ನು ದಾರಿಗೆ ತಳ್ಳುವವರ ವಿರೋಧಿ ನಾನು). ಇಂಥವರು ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಬಂದದ್ದು ಉಂಟಾ?

ಒಂದಿಷ್ಟು ಸಮಸ್ಯೆ ಇದೆ. ಮುಸ್ಲಿಮರು ಹಿಂದೂಗಳನ್ನು ಆಕ್ರಮಿಸಿ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತಾರೆ ಅನ್ನುವುದು ಕೆಲವರ ಭಯ. ಹಿಂದೂಗಳು ಮುಸ್ಲಿಂ, ಕ್ರೈಸ್ತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುತ್ತಾರೆ ಅನ್ನುವ ಭಯ. ಈ ಭಯಕ್ಕೆ ಮೂಲ ಯಾವುದು? ಕಾರಣಗಳೇನು? ಅದು ನಿಜವೇ ಆಗಿದ್ದರೆ ಅದಕ್ಕೆ ಪರಿಹಾರವೇನು ಅನ್ನುವ ಪ್ರಶ್ನೆಗೆ ಇಡೀ ಹಿಂದೂ ಜನಾಂಗ, ಮುಸ್ಲಿಂ ಜನಾಂಗ, ಕ್ರೈಸ್ತ ಸಮಾಜ ಸಾಮೂಹಿಕವಾಗಿ ಉತ್ತರದಾಯಿತ್ವವಾಗಬೇಕಲ್ಲವೇ? ನೀವು ಮಾತ್ರ ಬಲಿಯಾಗುವುದು ಯಾಕೆ?

ನಿಮ್ಮಲ್ಲೊಂದು ಹೆಣ ಸುಟ್ಟು ಭಸ್ಮವಾಗುವ ಮುನ್ನವೇ, ಅಲ್ಲೆಲ್ಲೋ ವೇದಿಕೆಯಲ್ಲಿ ಎಲ್ಲಾ ಧರ್ಮದ ಗುರುಗಳೂ ಒಟ್ಟಾಗಿ ಕೂತು ಖುುಷಿಯಾಗಿ ಮಾತನಾಡುವುದನ್ನು ನೋಡಿದೆ. ಇನ್ನೆಲ್ಲೋ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ರಾಜಕೀಯ ನಾಯಕರು ಊಟ ಮಾಡುವುದನ್ನೂ ನೋಡಿದೆ.

ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ 12 ಮಂದಿ ಪೊಲೀಸ್ ವಶಕ್ಕೆ- ಆರಗ ಜ್ಞಾನೇಂದ್ರ

ನೀವು ಹೇಳುವ ಸಮಸ್ಯೆಯ ಹೋರಾಟಕ್ಕೆ ಸ್ವಾಮಿಗಳು, ಫಾದರ್‌ಗಳು, ಮೌಲ್ವಿಗಳು, ಬರುವುದಿಲ್ಲ. ಅವರು ಪರಸ್ಪರ ಅನ್ಯೋನ್ಯವಾಗಿರುವುದನ್ನೂ ನೋಡಿದೆ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಕೋಟಿಗಟ್ಟಲೇ ಪರಸ್ಪರ ವ್ಯವಹಾರ ಮಾಡುವವರು ಮಾಡುತ್ತಲೇ ಇರುವುದನ್ನು, ರಾತ್ರಿ ಡೀಲ್ ಗಳನ್ನೂ ನೋಡಿದೆ. ಹೀಗೆ ನೋಡಿ ಅರ್ಥವಾದಾಗ ನಿಮ್ಮಂತೆ ಯೋಚಿಸುತ್ತಿದ್ದ ನಾನು 30 ವರ್ಷಗಳ ಹಿಂದೆ ಎಲ್ಲವನ್ನೂ ಬಿಟ್ಟೆ.

ಸಮಾಜದಲ್ಲಿ ಯಾರಿಗೂ ಇಲ್ಲದ ಸಮಸ್ಯೆ ನಿಮ್ಮ ತಲೆಗೆ ಕಟ್ಟುವವರು ಯಾರು? ಹಾಗೇ ಸಮಸ್ಯೆ ಹೊತ್ತುಕೊಂಡು ಹೊಡೆದಾಡಿ ಸಾಯುವ ನೀವು ಯಾರು?- ಪ್ರಶ್ನಿಸಿಕೊಳ್ಳಿ. ಧರ್ಮಕ್ಕೆ ಸಮಸ್ಯೆ ಬಂದರೆ ಅದನ್ನು ಸರಿಮಾಡಬೇಕಾದುದು ಮಠ, ಚರ್ಚ್, ಮಸೀದಿಗಳು, ಸರ್ಕಾರಗಳು. ಪೂರ್ಣ ಸಮಾಜದ ಹೊಣೆಗಾರಿಕೆ ಅದು.
ಅವರು ಇರೋದು ಯಾಕೆ? ಅವರು ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ?

ಒಮ್ಮೆ ಪರೀಕ್ಷಿಸುವುದಕ್ಕಾಗಿ ಇದನ್ನು ಮಾಡಿ ನೋಡಿ. ನೀವು ಬೀದಿಗಿಳಿದು ಹೋರಾಟಕ್ಕೆ ಹೋಗುವ ಸಂಗತಿಗಳನ್ನು ತಿಳಿಸಿ, ನಿಮ್ಮ ನಾಯಕರ ಮನೆಯ ಸದಸ್ಯರನ್ನು, ರಾಜಕೀಯ ಮುಖಂಡರ ಮನೆಯ ಸದಸ್ಯರನ್ನು , ಫೇಸ್‌ಬುಕ್‌ ನಲ್ಲಿ ಕುಟ್ಟುವ ಅಂಕಲ್, ಆಂಟಿ, ಬ್ರೋ, ಸಿಸ್‌ಗಳನ್ನು, ಟಿವಿ ಲಿ ಅರಚುವವರ ಮನೆಯ ಮಕ್ಕಳನ್ನು ಒಮ್ಮೆ ಕರೆದು ನೋಡಿ. ಎಲ್ಲರೂ ಬಂದರೆ ಸೂಪರ್. ಹೋರಾಡಿ.

ಒಂದು ಮಾತು. ನೀವು ನಿಮ್ಮ ಊರಿನಲ್ಲಿ ಇಂತಹ ಬೀದಿ ಹೋರಾಟಕ್ಕೆ ಹೋಗುವಾಗ, ನಿಮ್ಮ ಊರಿನ ಜನಸಂಖ್ಯೆ ಲೆಕ್ಕ ಹಾಕಿ. ನೀವು ಎಷ್ಟು ಜನ ಅಂತಾ ನೋಡಿ. 25 ಲಕ್ಷ ಜನಸಂಖ್ಯೆಯ ಜಿಲ್ಲೆಯಲ್ಲಿ ಇಂತಹ ಹೋರಾಟಕ್ಕೆ ಬರುವವರು ಕೇವಲ ನೂರು, ಸಾವಿರ. ಅಂದರೆ ಇಡೀ ಸಮಾಜಕ್ಕೆ ಇಲ್ಲದ ಮಂಡೆ ಬಿಸಿ ನಿಮಗೆ ಮಾತ್ರ. ದೇಶದ ಸೈನ್ಯದಲ್ಲಿ ಯೋಧರಾಗಿ ಸಾಯುವುದು ಶ್ರೇಷ್ಠ. ಆದರೆ ಇಂತಹ ಹೊಡೆದಾಟದಲ್ಲಿ ಸೈನಿಕನಾಗಿ ಸಾಯುವುದಲ್ಲ. ಬೇರೆಯವರ ಬೇಳೆ ಬೇಯಿಸಿಕೊಳ್ಳಲು ನೀವು ಬಲಿಯಾಗುವುದು.

ನಾನು ನನ್ನ ಮಕ್ಕಳನ್ನು ಕಳಿಸುವುದಿಲ್ಲ. ಅವರು ಒಳ್ಳೆಯ ಉದ್ಯೋಗ ಮಾಡಿ, ಸಮಾಜಕ್ಕೆ ಎನಾದರೂ ನೀಡಲಿ ಎಂದು ಬಯಸುವೆ. ಅದಕ್ಕೆ ನೀವೂ ಹಾಗೇ ಆಗಬೇಕೆಂಬ ಹಾರೈಕೆ. ನಿಮ್ಮ ನಿಮ್ಮ ಧರ್ಮದ ಪುನರುತ್ಥಾನ , ಪ್ರಚಾರ, ಅಭಿವೃದ್ಧಿಗೆ ಸಾವಿರ ಸಭ್ಯ ದಾರಿಗಳಿದೆ. ನಿಮ್ಮ ಮರಣದಿಂದ ಏನೂ ಆಗುವುದಿಲ್ಲ.

  • ಎಂ.ಜಿ.ಹೆಗಡೆ, ಶಿಕ್ಷಣ ತಜ್ಞರು
    ಹಾಗೂ ಕರಾವಳಿ ಭಾಗದ ಹಿರಿಯ ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿರಿ: ಹರ್ಷ ಕೊಲೆ ಪ್ರಕರಣ: ಸರ್ಕಾರ ಎಸಗುತ್ತಿರುವ ಲೋಪಗಳತ್ತ ಜನಾಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...