Homeಕರ್ನಾಟಕಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

ಹಿಂದೂ, ಮುಸ್ಲಿಂ ಯುವ ಮಿತ್ರರಿಗೆ ಶಿಕ್ಷಣ ತಜ್ಞ ಎಂ.ಜಿ.ಹೆಗಡೆ ಪತ್ರ

- Advertisement -
- Advertisement -

ಹಿಂದೂ ಮುಸ್ಲಿಂ ಯುವ ಮಿತ್ರರೇ, ನಾನು ಇತ್ತೀಚೆಗೆ ಕೋಮು ಗಲಭೆಯಾದರೆ, ಯಾರದರೂ ಸತ್ತರೆ ತೀರಾ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ಕಡಿಮೆ ಮಾಡಿದ್ದೇನೆ. ಯಾಕೆಂದರೆ ಇವತ್ತು ಕೆಲವರು ಹೇಳುವುದನ್ನು ನಾನು 30 ವರ್ಷಗಳ ಹಿಂದೆ ಎಕಾಂಗಿಯಾಗಿ ಬೊಬ್ಬೆ ಹೊಡೆದು ಹೇಳಿದ್ದೆ. ಆಗ ಯಾರೂ ಕೂಡಾ ಅದನ್ನ ಕೇಳಿಸಿಕೊಳ್ಳಲಿಲ್ಲ. ಈಗ ಹೆಚ್ಚು ಜನರಿಗೆ ಅರ್ಥವಾದಂತಿದೆ.

ಬಡವರ ಮನೆಯ ಮಕ್ಕಳಿಗೆ ಮಾತ್ರ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಯಾಕೆ? ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆ ಇರುವ ಯಾರಿಗೂ ಸಮಸ್ಯೆಗಳಾಗದ್ದು ಈ ಯುವಕರಿಗೇಕೆ ಸಮಸ್ಯೆ ಅಂತಾ ಕೇಳಿದ್ದೆ. ಹಿಂದೂ ಮುಸ್ಲಿಂನ ರಾಜಕೀಯ ನಾಯಕರ ಮನೆಯ ಮಕ್ಕಳು ಇಂತಹ ಸಂಘಟನೆಗಳಲ್ಲಿ ಕನಿಷ್ಠ ಸದಸ್ಯರಾಗಿಯೂ ಇರುವುದಿಲ್ಲ ಯಾಕೆ ಎಂದೂ ಕೇಳಿದ್ದೆ. ಈಗ ಅನೇಕರು ಈ ಪ್ರಶ್ನೆ ತಡವಾಗಿ ಕೇಳುತ್ತಿದ್ದಾರೆ. ಸಂತೋಷ.

ಹೀಗೆ ಹೇಳಿದ ತಕ್ಷಣ, “ಅರೇ ನಾವು ನಮ್ಮ ಧರ್ಮದ ಸಂಘಟನೆ ಮಾಡಿಕೊಳ್ಳುವುದು ತಪ್ಪಾ” ಅನ್ನುತ್ತೀರಿ. ಖಂಡಿತ ತಪ್ಪಲ್ಲ. ಅದು ನಿಮ್ಮ ನಿಮ್ಮ ಧರ್ಮದಲ್ಲಿನ ಉತ್ತಮ ವಿಷಯ ಪ್ರಚಾರಕ್ಕೆ, ಜೀವನ ಪದ್ಧತಿಯನ್ನು ಆದರ್ಶ ಮತ್ತು ಮೌಲ್ಯಗಳೊಂದಿಗೆ ಬದುಕಲು ಪ್ರೇರಣೆಯಾಗುವುದಕ್ಕೆ ಮತ್ತು ನಾವು ನಂಬುವ ದೇವರೊಂದಿಗೆ ಅನುಸಂಧಾನ ಮಾಡುವುದಕ್ಕೆ, ಮತೀಯ ಹೆಸರಲ್ಲಿ ಒಂದಿಷ್ಟು ಜನರ ಬದುಕು ಸರಿ ಮಾಡುವುದಕ್ಕೆ ಸಂಘಟನೆ ಮಾಡಿ. ಬೇಡ ಅನ್ನುವುದು ತಪ್ಪಾಗುತ್ತದೆ.

ನಮ್ಮ ಧರ್ಮದ ಅಳಿವು ಉಳಿವಿನ ಪ್ರಶ್ನೆ ಇದು. ಅದಕ್ಕಾಗಿ ಹೋರಾಟ ಮಾಡಲು, ಇದೊಂದು ಸೈನ್ಯ ಅಂತಿರಾ. ಸರಿ. ಧರ್ಮದ ಅಳಿವು ಉಳಿವಿನ ಪ್ರಶ್ನೆ ಅಂತಾದರೆ ಈ ಹೋರಾಟದಲ್ಲಿ ಶ್ರೀಮಂತರು, ಮೇಲ್ವರ್ಗದವರು, ಸನ್ಯಾಸಿಗಳು, ಪಾದ್ರಿಗಳು, ಮೌಲ್ವಿಗಳು ತಮ್ಮ ತಮ್ಮ ಧರ್ಮ ರಕ್ಷಣೆಗೆ ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಯಾಕೆ ಬರುವುದಿಲ್ಲ? ನಿಮ್ಮ ಪರ ಕಿರಿಚಾಡುವ ಟಿವಿ ನಿರೂಪಕ ಯಾಕೆ ಬೀದಿಗಿಳಿಯಲಾರ. ಮತೀಯವಾಗಿ ಉದ್ರೇಕ ಹೇಳಿಕೆ ಕೊಡುವ ನಾಯಕನ ಕುಟುಂಬವನ್ನು ನೀವು ಹತ್ತಿರದಿಂದ ನೋಡಿದ್ದೀರಿ.

ಇದನ್ನೂ ಓದಿರಿ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಶವಯಾತ್ರೆ: ಈಶ್ವರಪ್ಪ, ರಾಘವೇಂದ್ರ ವಿರುದ್ಧ ದೂರು ದಾಖಲು

ನಿಮ್ಮ ಬಳಿಯೇ ಇರುವ ಜನಪ್ರತಿನಿಧಿ ಅಥವಾ ಮತೀಯ ಸಂಘಟನೆಗಳ ಉನ್ನತ ನಾಯಕರನ್ನು ನೋಡಿ. ಅವರುಗಳ ಮನೆ, ವೈಭೋಗ, ಮಕ್ಕಳ ಉನ್ನತ ಶಿಕ್ಷಣ, ವ್ಯಾಪಾರ ವಹಿವಾಟು- ಅದು ನಿಮಗಿಲ್ಲ. ನಿಮ್ಮ ಹೋರಾಟದಲ್ಲಿ ಅವರಿಲ್ಲ. ಯಾಕೆ ಅಂತಾ ಯೋಚನೆ ಮಾಡಿದ್ದೀರಾ? ಹಾಗಾದರೆ ನೀವು ಕೆರಳಿ ಹೊಡೆದಾಡುವ ಮತೀಯ ಸಮಸ್ಯೆ ಅವರಿಗ್ಯಾರಿಗೂ ಇಲ್ಲವೆ? ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಹುರಿದುಂಬಿಸುವವರ ವಾಲ್ ಗಳನ್ನು ನೋಡಿ ಬನ್ನಿ. ಅಸಲಿಗೆ ಗಲಾಟೆಯಾದಾಗ ಅವರು ಮನೆ ಬಾಗಿಲು ಹಾಕಿ ಒಳಗಿರುವ ಜನರೇ ಜಾಸ್ತಿ. ಅವರ ವಾಲ್ ಪೋಟೋ ನೋಡಿ. ಆಧುನಿಕತೆ ಪಾಶ್ಚಿಮಾತ್ಯ ಎಲ್ಲ ಸುಖ ಅನುಭವಿಸುತ್ತ, ವಿದೇಶದಲ್ಲಿ ಮಕ್ಕಳನ್ನು ಸುಖವಾಗಿಡುವ ಜನ (ಹೀಗೆ ಮಾಡುವವರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ತಾವು ಹಾಗಿದ್ದುಕೊಂಡು ಬೇರೆಯವರ ಮಕ್ಕಳನ್ನು ದಾರಿಗೆ ತಳ್ಳುವವರ ವಿರೋಧಿ ನಾನು). ಇಂಥವರು ನಿಮ್ಮ ಜೊತೆ ಬೀದಿ ಹೋರಾಟಕ್ಕೆ ಬಂದದ್ದು ಉಂಟಾ?

ಒಂದಿಷ್ಟು ಸಮಸ್ಯೆ ಇದೆ. ಮುಸ್ಲಿಮರು ಹಿಂದೂಗಳನ್ನು ಆಕ್ರಮಿಸಿ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತಾರೆ ಅನ್ನುವುದು ಕೆಲವರ ಭಯ. ಹಿಂದೂಗಳು ಮುಸ್ಲಿಂ, ಕ್ರೈಸ್ತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುತ್ತಾರೆ ಅನ್ನುವ ಭಯ. ಈ ಭಯಕ್ಕೆ ಮೂಲ ಯಾವುದು? ಕಾರಣಗಳೇನು? ಅದು ನಿಜವೇ ಆಗಿದ್ದರೆ ಅದಕ್ಕೆ ಪರಿಹಾರವೇನು ಅನ್ನುವ ಪ್ರಶ್ನೆಗೆ ಇಡೀ ಹಿಂದೂ ಜನಾಂಗ, ಮುಸ್ಲಿಂ ಜನಾಂಗ, ಕ್ರೈಸ್ತ ಸಮಾಜ ಸಾಮೂಹಿಕವಾಗಿ ಉತ್ತರದಾಯಿತ್ವವಾಗಬೇಕಲ್ಲವೇ? ನೀವು ಮಾತ್ರ ಬಲಿಯಾಗುವುದು ಯಾಕೆ?

ನಿಮ್ಮಲ್ಲೊಂದು ಹೆಣ ಸುಟ್ಟು ಭಸ್ಮವಾಗುವ ಮುನ್ನವೇ, ಅಲ್ಲೆಲ್ಲೋ ವೇದಿಕೆಯಲ್ಲಿ ಎಲ್ಲಾ ಧರ್ಮದ ಗುರುಗಳೂ ಒಟ್ಟಾಗಿ ಕೂತು ಖುುಷಿಯಾಗಿ ಮಾತನಾಡುವುದನ್ನು ನೋಡಿದೆ. ಇನ್ನೆಲ್ಲೋ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ರಾಜಕೀಯ ನಾಯಕರು ಊಟ ಮಾಡುವುದನ್ನೂ ನೋಡಿದೆ.

ಇದನ್ನೂ ಓದಿರಿ: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದಲ್ಲಿ ಮತ್ತೆ 12 ಮಂದಿ ಪೊಲೀಸ್ ವಶಕ್ಕೆ- ಆರಗ ಜ್ಞಾನೇಂದ್ರ

ನೀವು ಹೇಳುವ ಸಮಸ್ಯೆಯ ಹೋರಾಟಕ್ಕೆ ಸ್ವಾಮಿಗಳು, ಫಾದರ್‌ಗಳು, ಮೌಲ್ವಿಗಳು, ಬರುವುದಿಲ್ಲ. ಅವರು ಪರಸ್ಪರ ಅನ್ಯೋನ್ಯವಾಗಿರುವುದನ್ನೂ ನೋಡಿದೆ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಕೋಟಿಗಟ್ಟಲೇ ಪರಸ್ಪರ ವ್ಯವಹಾರ ಮಾಡುವವರು ಮಾಡುತ್ತಲೇ ಇರುವುದನ್ನು, ರಾತ್ರಿ ಡೀಲ್ ಗಳನ್ನೂ ನೋಡಿದೆ. ಹೀಗೆ ನೋಡಿ ಅರ್ಥವಾದಾಗ ನಿಮ್ಮಂತೆ ಯೋಚಿಸುತ್ತಿದ್ದ ನಾನು 30 ವರ್ಷಗಳ ಹಿಂದೆ ಎಲ್ಲವನ್ನೂ ಬಿಟ್ಟೆ.

ಸಮಾಜದಲ್ಲಿ ಯಾರಿಗೂ ಇಲ್ಲದ ಸಮಸ್ಯೆ ನಿಮ್ಮ ತಲೆಗೆ ಕಟ್ಟುವವರು ಯಾರು? ಹಾಗೇ ಸಮಸ್ಯೆ ಹೊತ್ತುಕೊಂಡು ಹೊಡೆದಾಡಿ ಸಾಯುವ ನೀವು ಯಾರು?- ಪ್ರಶ್ನಿಸಿಕೊಳ್ಳಿ. ಧರ್ಮಕ್ಕೆ ಸಮಸ್ಯೆ ಬಂದರೆ ಅದನ್ನು ಸರಿಮಾಡಬೇಕಾದುದು ಮಠ, ಚರ್ಚ್, ಮಸೀದಿಗಳು, ಸರ್ಕಾರಗಳು. ಪೂರ್ಣ ಸಮಾಜದ ಹೊಣೆಗಾರಿಕೆ ಅದು.
ಅವರು ಇರೋದು ಯಾಕೆ? ಅವರು ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವೇ?

ಒಮ್ಮೆ ಪರೀಕ್ಷಿಸುವುದಕ್ಕಾಗಿ ಇದನ್ನು ಮಾಡಿ ನೋಡಿ. ನೀವು ಬೀದಿಗಿಳಿದು ಹೋರಾಟಕ್ಕೆ ಹೋಗುವ ಸಂಗತಿಗಳನ್ನು ತಿಳಿಸಿ, ನಿಮ್ಮ ನಾಯಕರ ಮನೆಯ ಸದಸ್ಯರನ್ನು, ರಾಜಕೀಯ ಮುಖಂಡರ ಮನೆಯ ಸದಸ್ಯರನ್ನು , ಫೇಸ್‌ಬುಕ್‌ ನಲ್ಲಿ ಕುಟ್ಟುವ ಅಂಕಲ್, ಆಂಟಿ, ಬ್ರೋ, ಸಿಸ್‌ಗಳನ್ನು, ಟಿವಿ ಲಿ ಅರಚುವವರ ಮನೆಯ ಮಕ್ಕಳನ್ನು ಒಮ್ಮೆ ಕರೆದು ನೋಡಿ. ಎಲ್ಲರೂ ಬಂದರೆ ಸೂಪರ್. ಹೋರಾಡಿ.

ಒಂದು ಮಾತು. ನೀವು ನಿಮ್ಮ ಊರಿನಲ್ಲಿ ಇಂತಹ ಬೀದಿ ಹೋರಾಟಕ್ಕೆ ಹೋಗುವಾಗ, ನಿಮ್ಮ ಊರಿನ ಜನಸಂಖ್ಯೆ ಲೆಕ್ಕ ಹಾಕಿ. ನೀವು ಎಷ್ಟು ಜನ ಅಂತಾ ನೋಡಿ. 25 ಲಕ್ಷ ಜನಸಂಖ್ಯೆಯ ಜಿಲ್ಲೆಯಲ್ಲಿ ಇಂತಹ ಹೋರಾಟಕ್ಕೆ ಬರುವವರು ಕೇವಲ ನೂರು, ಸಾವಿರ. ಅಂದರೆ ಇಡೀ ಸಮಾಜಕ್ಕೆ ಇಲ್ಲದ ಮಂಡೆ ಬಿಸಿ ನಿಮಗೆ ಮಾತ್ರ. ದೇಶದ ಸೈನ್ಯದಲ್ಲಿ ಯೋಧರಾಗಿ ಸಾಯುವುದು ಶ್ರೇಷ್ಠ. ಆದರೆ ಇಂತಹ ಹೊಡೆದಾಟದಲ್ಲಿ ಸೈನಿಕನಾಗಿ ಸಾಯುವುದಲ್ಲ. ಬೇರೆಯವರ ಬೇಳೆ ಬೇಯಿಸಿಕೊಳ್ಳಲು ನೀವು ಬಲಿಯಾಗುವುದು.

ನಾನು ನನ್ನ ಮಕ್ಕಳನ್ನು ಕಳಿಸುವುದಿಲ್ಲ. ಅವರು ಒಳ್ಳೆಯ ಉದ್ಯೋಗ ಮಾಡಿ, ಸಮಾಜಕ್ಕೆ ಎನಾದರೂ ನೀಡಲಿ ಎಂದು ಬಯಸುವೆ. ಅದಕ್ಕೆ ನೀವೂ ಹಾಗೇ ಆಗಬೇಕೆಂಬ ಹಾರೈಕೆ. ನಿಮ್ಮ ನಿಮ್ಮ ಧರ್ಮದ ಪುನರುತ್ಥಾನ , ಪ್ರಚಾರ, ಅಭಿವೃದ್ಧಿಗೆ ಸಾವಿರ ಸಭ್ಯ ದಾರಿಗಳಿದೆ. ನಿಮ್ಮ ಮರಣದಿಂದ ಏನೂ ಆಗುವುದಿಲ್ಲ.

  • ಎಂ.ಜಿ.ಹೆಗಡೆ, ಶಿಕ್ಷಣ ತಜ್ಞರು
    ಹಾಗೂ ಕರಾವಳಿ ಭಾಗದ ಹಿರಿಯ ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿರಿ: ಹರ್ಷ ಕೊಲೆ ಪ್ರಕರಣ: ಸರ್ಕಾರ ಎಸಗುತ್ತಿರುವ ಲೋಪಗಳತ್ತ ಜನಾಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...