Homeಅಂಕಣಗಳುಶುರುವಾದ ಮಹೇಶ ಜೋಶಿ ಮಂತ್ರಗಳು!

ಶುರುವಾದ ಮಹೇಶ ಜೋಶಿ ಮಂತ್ರಗಳು!

- Advertisement -
- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಛದ್ಮವೇಶದವರ ಅವಿರತ ಶ್ರಮದಿಂದ ಆರಿಸಿಬಂದ ಜೋಶಿ ತಮ್ಮ ಜೋಳಿಗೆಯಿಂದ ಒಂದೊಂದೇ ಅಸ್ತ್ರವನ್ನ ತೆಗೆಯತೊಡಗಿದ್ದಾರಲ್ಲ! ಈತ ಆರಿಸಿ ಬಂದ ಆರಂಭದಲ್ಲಿ ಶುದ್ಧ ಕನ್ನಡ ಮಾತಾಡಲು ಕರೆಕೊಟ್ಟರು. ಶುದ್ಧ ಕನ್ನಡ ಎಂದರೆ ಯಾವುದು? ಈ ನಾಡಿನ ಮೂವತ್ತು ಜಿಲ್ಲೆಗಳಲ್ಲೂ ಮೂವ್ವತ್ತು ವರಸೆಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದಾಗ ಈತನ ಪ್ರೌಢಿಮೆ ಬಾಯಿ ಮುಚ್ಚಿಕೊಂಡಿತು. ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಪರಿಷತ್‌ನ ಆಡಳಿತವನ್ನು ಕೇಂದ್ರಿಕರಿಸಲು ಹೊರಟಿರುವ ಈತ ಸಾಹಿತ್ಯ ಪರಿಷತ್ ಸದಸ್ಯರಿಗೆ ಎಸೆಸೆಲ್ಸಿ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಶಾಲೆಗೆ ಹೋಗದೆ ಸಾವಿರಾರು ಜಾನಪದ ಹಾಡು ಹೇಳುವ, ಕತೆ ಹೇಳುವ, ಜಾನಪದ ಕುಣಿತಗಳನ್ನು ಪ್ರದರ್ಶಿಸುವ ಮತ್ತು ಡೊಳ್ಳುಬಡಿಯುವವರು ಜೋಶಿಗೆ ಭೂತ ಬಿಡಿಸಬೇಕಷ್ಟೇ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಸಾಹಿತ್ಯ ಪರಿಷತ್ ಕಾರ್ಯಾಲಯವು ಪೂರ್ಣವಾಗಿ ಕೇಶವಕೃಪವಾಗುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಪ್ರಖರ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಡಿ.ಎಸ್ ನಾಗಭೂಷಣ ತರುತ್ತಿದ್ದ ಹೊಸ ಮನುಷ್ಯ ಎಂಬ ಮಾಸಪತ್ರಿಕೆ ನಿಲ್ಲಿಸುವುದಾಗಿ ಹೇಳಿದ್ದಾರಲ್ಲಾ! ಸದ್ಯ ಗರಹೊಡೆದ ಸ್ಥಿತಿಯಲ್ಲಿ ಪ್ರಜ್ಞಾವಂತರನ್ನು ಎಚ್ಚರಿಸುತ್ತಿದ್ದ ಹೊಸ ಮನುಷ್ಯ ಒಂದು ದಶಕವಾದರೂ ಹಳೆ ಮನುಷ್ಯನಾಗಿ ಉಳಿದಿದ್ದು ಹಳೆ ವಿಷಯ. ಆದರೆ ಹೊಸ ಮನುಷ್ಯನ ಒಗರು ದನಿ ಇರಬೇಕಿತ್ತು. ಅವನ್ನ ಹೊರತರಲು ಹಣಕಾಸಿನ ಸಮಸ್ಯೆಯಿಲ್ಲವಂತೆ, ಆದರೆ ಸಂಪಾದಕರ ಆರೋಗ್ಯ ಸಹಕರಿಸುತ್ತಿಲ್ಲವಂತೆ. ಸಮಾಜವಾದಿಗಳ ಅನಾರೋಗ್ಯದಿಂದ ಈ ಸಮಾಜಕ್ಕೆ ನಷ್ಟ. ಆಳುವ ಸರಕಾರಕ್ಕೆ ಅನಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಹೊಸ ಮನುಷ್ಯ ಪ್ರತಿ ತಿಂಗಳೂ ಸಿದ್ದರಾಮಯ್ಯನ ಸರಕಾರಕ್ಕೆ ಭೂತ ಬಿಡಿಸುತ್ತಿದ್ದು ಒಂದು ವಿಶೇಷ. ಆದರೆ ಕುಮಾರಣ್ಣ ಮತ್ತು ಎಡೂರಪ್ಪನ ಸರಕಾರಕ್ಕೆ ಛಾಟಿ ಬೀಸುವ ಬದಲು ಸಪ್ಪಗಾದದ್ದೂ ಒಂದು ವಿಶೇಷ. ಪ್ರಖರ ಚಿಂತನೆಯ ನಿಷ್ಠುರ ವಿಮರ್ಶೆಯ ಮತ್ತು ನಾಡಿನ ಸಂಸ್ಕೃತಿ ಚಿಂತಕರಿಗೆ, ಬೌದ್ಧಿಕವಾಗಿ ಕೆಲಸ ಕೊಡುತ್ತಿದ್ದ ಹೊಸ ಮನುಷ್ಯ ನಿಲ್ಲಬಾರದಿತ್ತು, ಯಾರಾದರೂ ನಡೆಸಿಕೊಂಡು ಹೋಗಲು ಅನುವುಮಾಡಿಕೊಡಬೇಕಿತ್ತು. ಆದರೆ ಅಂತ ತೀರ್ಮಾನ ಇಂತವರಿಂದ ಸಾಧ್ಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಜನಪ್ರಿಯ ಪ್ರಧಾನಿ ಯಾಕೋ ಈಶ್ವರಪ್ಪನಂತೆ ಮಾತನಾಡತೊಡಗಿದ್ದಾರಲ್ಲಾ ಕುಮಾರಣ್ಣ ಮತ್ತು ದೇವೇಗೌಡರ ಕೃಪಾಕಟಾಕ್ಷದಿಂದ ಮಂತ್ರಿಯಾದ ಅಮಲಿನಲ್ಲಿ ಈಶ್ವರಪ್ಪ ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದುಬಿಟ್ಟರು. ಈ ಬಗ್ಗೆ ಯಾರೂ ಅವರನ್ನ ವಿವರ ಕೇಳಲಿಲ್ಲ. ಆದರೇನು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುದಲ್ಲದೆ ಅವರ ಬಂಧುಬಾಂಧವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೀಗ ಮೋದಿಯವರು ಕಾಂಗ್ರೆಸ್ ಇನ್ನ ನೂರು ವರ್ಷಗಳವರೆಗೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಕಾಲಜ್ಞಾನಿಯ ಮಾತನ್ನು ನೆನೆಸಿಕೊಂಡು ಸ್ಮರಿಸಲು ಯಾರಿರುತ್ತಾರೆ? ಅದಿರಲಿ, ಜಗತ್ತಿನ ತಾಪಮಾನ ಕುರಿತು ನಮ್ಮ ವಿಜ್ಞಾನಿಗಳು ಎಚ್ಚರಿಸುವ ಮಾತಿನ ಪ್ರಕಾರ, ಇನ್ನ ಹದಿನೈದು ವರ್ಷದಲ್ಲಿ ಏನಾಗುತ್ತದೊ ಏನೋ! ಅಂಥಾದ್ದರಲ್ಲಿ ನೂರುವರ್ಷದ ಭವಿಷ್ಯ ಹೇಳಿರುವ ಕಾಲಜ್ಞಾನಿ ಪ್ರಧಾನಿ ಈವರೆಗೆ ಬೀದಿಯಲ್ಲಾಡುತ್ತಿದ್ದ ಮಾತನ್ನ ಲೋಕಸಭೆಯಲ್ಲಾಡುತ್ತಾರೆ, ಲೋಕಸಭೆಯ ಮಾತನ್ನು ಅಮೆರಿಕದಲ್ಲಿ ಬಿತ್ತರಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಈಶ್ವರಪ್ಪನ ಜೊತೆ ಸ್ಪರ್ಧೆಗಿಳಿದಂತಿದ್ದಾರಲ್ಲಾ ಥೂತ್ತೆರಿ.

****

ಮತೀಯವಾಗಿ ಜೋರುಗಂಟಲಿನಿಂದ ಕೂಗಿದವರ ಕಡೆ ಬಿಜೆಪಿ ಪಕ್ಷದ ದೃಷ್ಟಿ ಬೇಗ ಬೀಳುತ್ತದೆ ಮತ್ತು ಅಂಥವರು ಮಾತ್ರ ನಮ್ಮ ಪಾರ್ಟಿ ಉಳಿಸಿ ಬೆಳೆಸಬಲ್ಲ ಎಂಬ ಮೂಢನಂಬಿಕೆಗೆ ತುತ್ತಾದ ಹಲವರು ಗಂಟಲು ಹರಿದುಕೊಳ್ಳುವ ಕೂಗುಮಾರಿಗಳಾಗಿದ್ದಾರಂತಲ್ಲಾ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ, ಮೈಸೂರಿನ ಪ್ರತಾಪಸಿಮ್ಮ ಹಾಗೂ ಶಿವಮೊಗ್ಗದ ಈಶ್ವರಪ್ಪ ಹಳೆಯಗಂಟಲು. ಅವರದ್ದು ನೈನ್‌ಟೀನ್ ಫಾರ್ಟಿ ಸೆವೆನ್ ಮಾಡೆಲಿನ ಗಾಡಿಯ ಸೈಲೆನ್ಸರ್ ಪೈಪು. ಅದು ಶಬ್ದ ಮಾಡಿದರೆ ಉಳಿದ ಯಾವುದೇ ಶಬ್ದ ಕೇಳುವುದಿಲ್ಲ. ಅಂತಹ ಗಂಟಲಿನಲ್ಲಿ ದೇಶದ ಬಾವುಟ ಹಾರಾಡುವ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜವನ್ನ ಹಾರಿಸುತ್ತೇವೆ, ಜೊತೆಗೆ ಕೆಂಪುಕೋಟೆಯ ಮೇಲೂ ಹಾರಿಸುತ್ತೇವೆ ಎಂದು ಅಬ್ಬರಿಸಿದ್ದಾರಲ್ಲಾ. ಈ ಅಬ್ಬರವು ಅಭದ್ರತೆಯ ಮೂಲದ್ದು. ಎಡೂರಪ್ಪನ ನಂತರ ಈಶ್ವರಪ್ಪ ನಿವೃತ್ತಿಯ ಸಾಲಿನಲ್ಲಿ ನಿಂತಿರುವಾಗ ನನ್ನಂತವನು ನಿವೃತ್ತಿಗೆ ಯೋಗ್ಯನಲ್ಲ ಪಾರ್ಟಿಗೆ ಅನಿವಾರ್ಯ ಎಂಬುದು ಭಗವಾಧ್ವಜದ ದನಿಯಲ್ಲಿದೆಯಂತಲ್ಲಾ. ಅದೇನಾದರಾಗಲಿ ಎಡೂರಪ್ಪನವರ ನಿರ್ಗಮನದ ನಂತರ ಈಶ್ವರಪ್ಪ ಅನಿವಾರ್ಯವಾಗಿ ಆಕಡೆ ಸರಿದು ನಿಲ್ಲಬೇಕಿದೆ. ಏಕೆಂದರೆ ಎಡೂರಪ್ಪನ ಮುಖ ನೋಡಿ ಈಶ್ವರಪ್ಪನಿಗೆ ಓಟು ಮಾಡುತ್ತಿದ್ದ ಶಿವಮೊಗ್ಗದ ಲಿಂಗಾಯಿತರಿಗೆ ಪುನಹ ಈಶ್ವರಪ್ಪನಿಗೆ ಓಟು ಮಾಡುವ ಅಗತ್ಯ ಕಾಣುತ್ತಿಲ್ಲವಂತಲ್ಲಾ

ಥೂತ್ತೆರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...