Homeಅಂಕಣಗಳುಶುರುವಾದ ಮಹೇಶ ಜೋಶಿ ಮಂತ್ರಗಳು!

ಶುರುವಾದ ಮಹೇಶ ಜೋಶಿ ಮಂತ್ರಗಳು!

- Advertisement -
- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಛದ್ಮವೇಶದವರ ಅವಿರತ ಶ್ರಮದಿಂದ ಆರಿಸಿಬಂದ ಜೋಶಿ ತಮ್ಮ ಜೋಳಿಗೆಯಿಂದ ಒಂದೊಂದೇ ಅಸ್ತ್ರವನ್ನ ತೆಗೆಯತೊಡಗಿದ್ದಾರಲ್ಲ! ಈತ ಆರಿಸಿ ಬಂದ ಆರಂಭದಲ್ಲಿ ಶುದ್ಧ ಕನ್ನಡ ಮಾತಾಡಲು ಕರೆಕೊಟ್ಟರು. ಶುದ್ಧ ಕನ್ನಡ ಎಂದರೆ ಯಾವುದು? ಈ ನಾಡಿನ ಮೂವತ್ತು ಜಿಲ್ಲೆಗಳಲ್ಲೂ ಮೂವ್ವತ್ತು ವರಸೆಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದಾಗ ಈತನ ಪ್ರೌಢಿಮೆ ಬಾಯಿ ಮುಚ್ಚಿಕೊಂಡಿತು. ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಪರಿಷತ್‌ನ ಆಡಳಿತವನ್ನು ಕೇಂದ್ರಿಕರಿಸಲು ಹೊರಟಿರುವ ಈತ ಸಾಹಿತ್ಯ ಪರಿಷತ್ ಸದಸ್ಯರಿಗೆ ಎಸೆಸೆಲ್ಸಿ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಶಾಲೆಗೆ ಹೋಗದೆ ಸಾವಿರಾರು ಜಾನಪದ ಹಾಡು ಹೇಳುವ, ಕತೆ ಹೇಳುವ, ಜಾನಪದ ಕುಣಿತಗಳನ್ನು ಪ್ರದರ್ಶಿಸುವ ಮತ್ತು ಡೊಳ್ಳುಬಡಿಯುವವರು ಜೋಶಿಗೆ ಭೂತ ಬಿಡಿಸಬೇಕಷ್ಟೇ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಸಾಹಿತ್ಯ ಪರಿಷತ್ ಕಾರ್ಯಾಲಯವು ಪೂರ್ಣವಾಗಿ ಕೇಶವಕೃಪವಾಗುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಪ್ರಖರ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಡಿ.ಎಸ್ ನಾಗಭೂಷಣ ತರುತ್ತಿದ್ದ ಹೊಸ ಮನುಷ್ಯ ಎಂಬ ಮಾಸಪತ್ರಿಕೆ ನಿಲ್ಲಿಸುವುದಾಗಿ ಹೇಳಿದ್ದಾರಲ್ಲಾ! ಸದ್ಯ ಗರಹೊಡೆದ ಸ್ಥಿತಿಯಲ್ಲಿ ಪ್ರಜ್ಞಾವಂತರನ್ನು ಎಚ್ಚರಿಸುತ್ತಿದ್ದ ಹೊಸ ಮನುಷ್ಯ ಒಂದು ದಶಕವಾದರೂ ಹಳೆ ಮನುಷ್ಯನಾಗಿ ಉಳಿದಿದ್ದು ಹಳೆ ವಿಷಯ. ಆದರೆ ಹೊಸ ಮನುಷ್ಯನ ಒಗರು ದನಿ ಇರಬೇಕಿತ್ತು. ಅವನ್ನ ಹೊರತರಲು ಹಣಕಾಸಿನ ಸಮಸ್ಯೆಯಿಲ್ಲವಂತೆ, ಆದರೆ ಸಂಪಾದಕರ ಆರೋಗ್ಯ ಸಹಕರಿಸುತ್ತಿಲ್ಲವಂತೆ. ಸಮಾಜವಾದಿಗಳ ಅನಾರೋಗ್ಯದಿಂದ ಈ ಸಮಾಜಕ್ಕೆ ನಷ್ಟ. ಆಳುವ ಸರಕಾರಕ್ಕೆ ಅನಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಹೊಸ ಮನುಷ್ಯ ಪ್ರತಿ ತಿಂಗಳೂ ಸಿದ್ದರಾಮಯ್ಯನ ಸರಕಾರಕ್ಕೆ ಭೂತ ಬಿಡಿಸುತ್ತಿದ್ದು ಒಂದು ವಿಶೇಷ. ಆದರೆ ಕುಮಾರಣ್ಣ ಮತ್ತು ಎಡೂರಪ್ಪನ ಸರಕಾರಕ್ಕೆ ಛಾಟಿ ಬೀಸುವ ಬದಲು ಸಪ್ಪಗಾದದ್ದೂ ಒಂದು ವಿಶೇಷ. ಪ್ರಖರ ಚಿಂತನೆಯ ನಿಷ್ಠುರ ವಿಮರ್ಶೆಯ ಮತ್ತು ನಾಡಿನ ಸಂಸ್ಕೃತಿ ಚಿಂತಕರಿಗೆ, ಬೌದ್ಧಿಕವಾಗಿ ಕೆಲಸ ಕೊಡುತ್ತಿದ್ದ ಹೊಸ ಮನುಷ್ಯ ನಿಲ್ಲಬಾರದಿತ್ತು, ಯಾರಾದರೂ ನಡೆಸಿಕೊಂಡು ಹೋಗಲು ಅನುವುಮಾಡಿಕೊಡಬೇಕಿತ್ತು. ಆದರೆ ಅಂತ ತೀರ್ಮಾನ ಇಂತವರಿಂದ ಸಾಧ್ಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಜನಪ್ರಿಯ ಪ್ರಧಾನಿ ಯಾಕೋ ಈಶ್ವರಪ್ಪನಂತೆ ಮಾತನಾಡತೊಡಗಿದ್ದಾರಲ್ಲಾ ಕುಮಾರಣ್ಣ ಮತ್ತು ದೇವೇಗೌಡರ ಕೃಪಾಕಟಾಕ್ಷದಿಂದ ಮಂತ್ರಿಯಾದ ಅಮಲಿನಲ್ಲಿ ಈಶ್ವರಪ್ಪ ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದುಬಿಟ್ಟರು. ಈ ಬಗ್ಗೆ ಯಾರೂ ಅವರನ್ನ ವಿವರ ಕೇಳಲಿಲ್ಲ. ಆದರೇನು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುದಲ್ಲದೆ ಅವರ ಬಂಧುಬಾಂಧವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೀಗ ಮೋದಿಯವರು ಕಾಂಗ್ರೆಸ್ ಇನ್ನ ನೂರು ವರ್ಷಗಳವರೆಗೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಕಾಲಜ್ಞಾನಿಯ ಮಾತನ್ನು ನೆನೆಸಿಕೊಂಡು ಸ್ಮರಿಸಲು ಯಾರಿರುತ್ತಾರೆ? ಅದಿರಲಿ, ಜಗತ್ತಿನ ತಾಪಮಾನ ಕುರಿತು ನಮ್ಮ ವಿಜ್ಞಾನಿಗಳು ಎಚ್ಚರಿಸುವ ಮಾತಿನ ಪ್ರಕಾರ, ಇನ್ನ ಹದಿನೈದು ವರ್ಷದಲ್ಲಿ ಏನಾಗುತ್ತದೊ ಏನೋ! ಅಂಥಾದ್ದರಲ್ಲಿ ನೂರುವರ್ಷದ ಭವಿಷ್ಯ ಹೇಳಿರುವ ಕಾಲಜ್ಞಾನಿ ಪ್ರಧಾನಿ ಈವರೆಗೆ ಬೀದಿಯಲ್ಲಾಡುತ್ತಿದ್ದ ಮಾತನ್ನ ಲೋಕಸಭೆಯಲ್ಲಾಡುತ್ತಾರೆ, ಲೋಕಸಭೆಯ ಮಾತನ್ನು ಅಮೆರಿಕದಲ್ಲಿ ಬಿತ್ತರಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಈಶ್ವರಪ್ಪನ ಜೊತೆ ಸ್ಪರ್ಧೆಗಿಳಿದಂತಿದ್ದಾರಲ್ಲಾ ಥೂತ್ತೆರಿ.

****

ಮತೀಯವಾಗಿ ಜೋರುಗಂಟಲಿನಿಂದ ಕೂಗಿದವರ ಕಡೆ ಬಿಜೆಪಿ ಪಕ್ಷದ ದೃಷ್ಟಿ ಬೇಗ ಬೀಳುತ್ತದೆ ಮತ್ತು ಅಂಥವರು ಮಾತ್ರ ನಮ್ಮ ಪಾರ್ಟಿ ಉಳಿಸಿ ಬೆಳೆಸಬಲ್ಲ ಎಂಬ ಮೂಢನಂಬಿಕೆಗೆ ತುತ್ತಾದ ಹಲವರು ಗಂಟಲು ಹರಿದುಕೊಳ್ಳುವ ಕೂಗುಮಾರಿಗಳಾಗಿದ್ದಾರಂತಲ್ಲಾ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ, ಮೈಸೂರಿನ ಪ್ರತಾಪಸಿಮ್ಮ ಹಾಗೂ ಶಿವಮೊಗ್ಗದ ಈಶ್ವರಪ್ಪ ಹಳೆಯಗಂಟಲು. ಅವರದ್ದು ನೈನ್‌ಟೀನ್ ಫಾರ್ಟಿ ಸೆವೆನ್ ಮಾಡೆಲಿನ ಗಾಡಿಯ ಸೈಲೆನ್ಸರ್ ಪೈಪು. ಅದು ಶಬ್ದ ಮಾಡಿದರೆ ಉಳಿದ ಯಾವುದೇ ಶಬ್ದ ಕೇಳುವುದಿಲ್ಲ. ಅಂತಹ ಗಂಟಲಿನಲ್ಲಿ ದೇಶದ ಬಾವುಟ ಹಾರಾಡುವ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜವನ್ನ ಹಾರಿಸುತ್ತೇವೆ, ಜೊತೆಗೆ ಕೆಂಪುಕೋಟೆಯ ಮೇಲೂ ಹಾರಿಸುತ್ತೇವೆ ಎಂದು ಅಬ್ಬರಿಸಿದ್ದಾರಲ್ಲಾ. ಈ ಅಬ್ಬರವು ಅಭದ್ರತೆಯ ಮೂಲದ್ದು. ಎಡೂರಪ್ಪನ ನಂತರ ಈಶ್ವರಪ್ಪ ನಿವೃತ್ತಿಯ ಸಾಲಿನಲ್ಲಿ ನಿಂತಿರುವಾಗ ನನ್ನಂತವನು ನಿವೃತ್ತಿಗೆ ಯೋಗ್ಯನಲ್ಲ ಪಾರ್ಟಿಗೆ ಅನಿವಾರ್ಯ ಎಂಬುದು ಭಗವಾಧ್ವಜದ ದನಿಯಲ್ಲಿದೆಯಂತಲ್ಲಾ. ಅದೇನಾದರಾಗಲಿ ಎಡೂರಪ್ಪನವರ ನಿರ್ಗಮನದ ನಂತರ ಈಶ್ವರಪ್ಪ ಅನಿವಾರ್ಯವಾಗಿ ಆಕಡೆ ಸರಿದು ನಿಲ್ಲಬೇಕಿದೆ. ಏಕೆಂದರೆ ಎಡೂರಪ್ಪನ ಮುಖ ನೋಡಿ ಈಶ್ವರಪ್ಪನಿಗೆ ಓಟು ಮಾಡುತ್ತಿದ್ದ ಶಿವಮೊಗ್ಗದ ಲಿಂಗಾಯಿತರಿಗೆ ಪುನಹ ಈಶ್ವರಪ್ಪನಿಗೆ ಓಟು ಮಾಡುವ ಅಗತ್ಯ ಕಾಣುತ್ತಿಲ್ಲವಂತಲ್ಲಾ

ಥೂತ್ತೆರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...