Homeಅಂಕಣಗಳುಶುರುವಾದ ಮಹೇಶ ಜೋಶಿ ಮಂತ್ರಗಳು!

ಶುರುವಾದ ಮಹೇಶ ಜೋಶಿ ಮಂತ್ರಗಳು!

- Advertisement -
- Advertisement -

ಈ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಪರಿಷತ್‌ಗೆ ಛದ್ಮವೇಶದವರ ಅವಿರತ ಶ್ರಮದಿಂದ ಆರಿಸಿಬಂದ ಜೋಶಿ ತಮ್ಮ ಜೋಳಿಗೆಯಿಂದ ಒಂದೊಂದೇ ಅಸ್ತ್ರವನ್ನ ತೆಗೆಯತೊಡಗಿದ್ದಾರಲ್ಲ! ಈತ ಆರಿಸಿ ಬಂದ ಆರಂಭದಲ್ಲಿ ಶುದ್ಧ ಕನ್ನಡ ಮಾತಾಡಲು ಕರೆಕೊಟ್ಟರು. ಶುದ್ಧ ಕನ್ನಡ ಎಂದರೆ ಯಾವುದು? ಈ ನಾಡಿನ ಮೂವತ್ತು ಜಿಲ್ಲೆಗಳಲ್ಲೂ ಮೂವ್ವತ್ತು ವರಸೆಯಲ್ಲಿ ಕನ್ನಡ ಮಾತನಾಡುತ್ತಾರೆ ಎಂದಾಗ ಈತನ ಪ್ರೌಢಿಮೆ ಬಾಯಿ ಮುಚ್ಚಿಕೊಂಡಿತು. ತುಂಬ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡು ಬರುತ್ತಿದ್ದ ಸಾಹಿತ್ಯ ಪರಿಷತ್‌ನ ಆಡಳಿತವನ್ನು ಕೇಂದ್ರಿಕರಿಸಲು ಹೊರಟಿರುವ ಈತ ಸಾಹಿತ್ಯ ಪರಿಷತ್ ಸದಸ್ಯರಿಗೆ ಎಸೆಸೆಲ್ಸಿ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಶಾಲೆಗೆ ಹೋಗದೆ ಸಾವಿರಾರು ಜಾನಪದ ಹಾಡು ಹೇಳುವ, ಕತೆ ಹೇಳುವ, ಜಾನಪದ ಕುಣಿತಗಳನ್ನು ಪ್ರದರ್ಶಿಸುವ ಮತ್ತು ಡೊಳ್ಳುಬಡಿಯುವವರು ಜೋಶಿಗೆ ಭೂತ ಬಿಡಿಸಬೇಕಷ್ಟೇ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಸಾಹಿತ್ಯ ಪರಿಷತ್ ಕಾರ್ಯಾಲಯವು ಪೂರ್ಣವಾಗಿ ಕೇಶವಕೃಪವಾಗುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಪ್ರಖರ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಡಿ.ಎಸ್ ನಾಗಭೂಷಣ ತರುತ್ತಿದ್ದ ಹೊಸ ಮನುಷ್ಯ ಎಂಬ ಮಾಸಪತ್ರಿಕೆ ನಿಲ್ಲಿಸುವುದಾಗಿ ಹೇಳಿದ್ದಾರಲ್ಲಾ! ಸದ್ಯ ಗರಹೊಡೆದ ಸ್ಥಿತಿಯಲ್ಲಿ ಪ್ರಜ್ಞಾವಂತರನ್ನು ಎಚ್ಚರಿಸುತ್ತಿದ್ದ ಹೊಸ ಮನುಷ್ಯ ಒಂದು ದಶಕವಾದರೂ ಹಳೆ ಮನುಷ್ಯನಾಗಿ ಉಳಿದಿದ್ದು ಹಳೆ ವಿಷಯ. ಆದರೆ ಹೊಸ ಮನುಷ್ಯನ ಒಗರು ದನಿ ಇರಬೇಕಿತ್ತು. ಅವನ್ನ ಹೊರತರಲು ಹಣಕಾಸಿನ ಸಮಸ್ಯೆಯಿಲ್ಲವಂತೆ, ಆದರೆ ಸಂಪಾದಕರ ಆರೋಗ್ಯ ಸಹಕರಿಸುತ್ತಿಲ್ಲವಂತೆ. ಸಮಾಜವಾದಿಗಳ ಅನಾರೋಗ್ಯದಿಂದ ಈ ಸಮಾಜಕ್ಕೆ ನಷ್ಟ. ಆಳುವ ಸರಕಾರಕ್ಕೆ ಅನಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಹೊಸ ಮನುಷ್ಯ ಪ್ರತಿ ತಿಂಗಳೂ ಸಿದ್ದರಾಮಯ್ಯನ ಸರಕಾರಕ್ಕೆ ಭೂತ ಬಿಡಿಸುತ್ತಿದ್ದು ಒಂದು ವಿಶೇಷ. ಆದರೆ ಕುಮಾರಣ್ಣ ಮತ್ತು ಎಡೂರಪ್ಪನ ಸರಕಾರಕ್ಕೆ ಛಾಟಿ ಬೀಸುವ ಬದಲು ಸಪ್ಪಗಾದದ್ದೂ ಒಂದು ವಿಶೇಷ. ಪ್ರಖರ ಚಿಂತನೆಯ ನಿಷ್ಠುರ ವಿಮರ್ಶೆಯ ಮತ್ತು ನಾಡಿನ ಸಂಸ್ಕೃತಿ ಚಿಂತಕರಿಗೆ, ಬೌದ್ಧಿಕವಾಗಿ ಕೆಲಸ ಕೊಡುತ್ತಿದ್ದ ಹೊಸ ಮನುಷ್ಯ ನಿಲ್ಲಬಾರದಿತ್ತು, ಯಾರಾದರೂ ನಡೆಸಿಕೊಂಡು ಹೋಗಲು ಅನುವುಮಾಡಿಕೊಡಬೇಕಿತ್ತು. ಆದರೆ ಅಂತ ತೀರ್ಮಾನ ಇಂತವರಿಂದ ಸಾಧ್ಯವಿಲ್ಲವಂತಲ್ಲಾ ಥೂತ್ತೆರಿ.

****

ನಮ್ಮ ಜನಪ್ರಿಯ ಪ್ರಧಾನಿ ಯಾಕೋ ಈಶ್ವರಪ್ಪನಂತೆ ಮಾತನಾಡತೊಡಗಿದ್ದಾರಲ್ಲಾ ಕುಮಾರಣ್ಣ ಮತ್ತು ದೇವೇಗೌಡರ ಕೃಪಾಕಟಾಕ್ಷದಿಂದ ಮಂತ್ರಿಯಾದ ಅಮಲಿನಲ್ಲಿ ಈಶ್ವರಪ್ಪ ಇನ್ನೂ ಹದಿನೈದು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದುಬಿಟ್ಟರು. ಈ ಬಗ್ಗೆ ಯಾರೂ ಅವರನ್ನ ವಿವರ ಕೇಳಲಿಲ್ಲ. ಆದರೇನು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುದಲ್ಲದೆ ಅವರ ಬಂಧುಬಾಂಧವರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇದೀಗ ಮೋದಿಯವರು ಕಾಂಗ್ರೆಸ್ ಇನ್ನ ನೂರು ವರ್ಷಗಳವರೆಗೆ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ. ಈ ಕಾಲಜ್ಞಾನಿಯ ಮಾತನ್ನು ನೆನೆಸಿಕೊಂಡು ಸ್ಮರಿಸಲು ಯಾರಿರುತ್ತಾರೆ? ಅದಿರಲಿ, ಜಗತ್ತಿನ ತಾಪಮಾನ ಕುರಿತು ನಮ್ಮ ವಿಜ್ಞಾನಿಗಳು ಎಚ್ಚರಿಸುವ ಮಾತಿನ ಪ್ರಕಾರ, ಇನ್ನ ಹದಿನೈದು ವರ್ಷದಲ್ಲಿ ಏನಾಗುತ್ತದೊ ಏನೋ! ಅಂಥಾದ್ದರಲ್ಲಿ ನೂರುವರ್ಷದ ಭವಿಷ್ಯ ಹೇಳಿರುವ ಕಾಲಜ್ಞಾನಿ ಪ್ರಧಾನಿ ಈವರೆಗೆ ಬೀದಿಯಲ್ಲಾಡುತ್ತಿದ್ದ ಮಾತನ್ನ ಲೋಕಸಭೆಯಲ್ಲಾಡುತ್ತಾರೆ, ಲೋಕಸಭೆಯ ಮಾತನ್ನು ಅಮೆರಿಕದಲ್ಲಿ ಬಿತ್ತರಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ನಮ್ಮ ಈಶ್ವರಪ್ಪನ ಜೊತೆ ಸ್ಪರ್ಧೆಗಿಳಿದಂತಿದ್ದಾರಲ್ಲಾ ಥೂತ್ತೆರಿ.

****

ಮತೀಯವಾಗಿ ಜೋರುಗಂಟಲಿನಿಂದ ಕೂಗಿದವರ ಕಡೆ ಬಿಜೆಪಿ ಪಕ್ಷದ ದೃಷ್ಟಿ ಬೇಗ ಬೀಳುತ್ತದೆ ಮತ್ತು ಅಂಥವರು ಮಾತ್ರ ನಮ್ಮ ಪಾರ್ಟಿ ಉಳಿಸಿ ಬೆಳೆಸಬಲ್ಲ ಎಂಬ ಮೂಢನಂಬಿಕೆಗೆ ತುತ್ತಾದ ಹಲವರು ಗಂಟಲು ಹರಿದುಕೊಳ್ಳುವ ಕೂಗುಮಾರಿಗಳಾಗಿದ್ದಾರಂತಲ್ಲಾ. ಈ ಪೈಕಿ ಬಸನಗೌಡ ಪಾಟೀಲ ಯತ್ನಾಳ, ಮೈಸೂರಿನ ಪ್ರತಾಪಸಿಮ್ಮ ಹಾಗೂ ಶಿವಮೊಗ್ಗದ ಈಶ್ವರಪ್ಪ ಹಳೆಯಗಂಟಲು. ಅವರದ್ದು ನೈನ್‌ಟೀನ್ ಫಾರ್ಟಿ ಸೆವೆನ್ ಮಾಡೆಲಿನ ಗಾಡಿಯ ಸೈಲೆನ್ಸರ್ ಪೈಪು. ಅದು ಶಬ್ದ ಮಾಡಿದರೆ ಉಳಿದ ಯಾವುದೇ ಶಬ್ದ ಕೇಳುವುದಿಲ್ಲ. ಅಂತಹ ಗಂಟಲಿನಲ್ಲಿ ದೇಶದ ಬಾವುಟ ಹಾರಾಡುವ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜವನ್ನ ಹಾರಿಸುತ್ತೇವೆ, ಜೊತೆಗೆ ಕೆಂಪುಕೋಟೆಯ ಮೇಲೂ ಹಾರಿಸುತ್ತೇವೆ ಎಂದು ಅಬ್ಬರಿಸಿದ್ದಾರಲ್ಲಾ. ಈ ಅಬ್ಬರವು ಅಭದ್ರತೆಯ ಮೂಲದ್ದು. ಎಡೂರಪ್ಪನ ನಂತರ ಈಶ್ವರಪ್ಪ ನಿವೃತ್ತಿಯ ಸಾಲಿನಲ್ಲಿ ನಿಂತಿರುವಾಗ ನನ್ನಂತವನು ನಿವೃತ್ತಿಗೆ ಯೋಗ್ಯನಲ್ಲ ಪಾರ್ಟಿಗೆ ಅನಿವಾರ್ಯ ಎಂಬುದು ಭಗವಾಧ್ವಜದ ದನಿಯಲ್ಲಿದೆಯಂತಲ್ಲಾ. ಅದೇನಾದರಾಗಲಿ ಎಡೂರಪ್ಪನವರ ನಿರ್ಗಮನದ ನಂತರ ಈಶ್ವರಪ್ಪ ಅನಿವಾರ್ಯವಾಗಿ ಆಕಡೆ ಸರಿದು ನಿಲ್ಲಬೇಕಿದೆ. ಏಕೆಂದರೆ ಎಡೂರಪ್ಪನ ಮುಖ ನೋಡಿ ಈಶ್ವರಪ್ಪನಿಗೆ ಓಟು ಮಾಡುತ್ತಿದ್ದ ಶಿವಮೊಗ್ಗದ ಲಿಂಗಾಯಿತರಿಗೆ ಪುನಹ ಈಶ್ವರಪ್ಪನಿಗೆ ಓಟು ಮಾಡುವ ಅಗತ್ಯ ಕಾಣುತ್ತಿಲ್ಲವಂತಲ್ಲಾ

ಥೂತ್ತೆರಿ.


ಇದನ್ನೂ ಓದಿ: ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...