Homeಮುಖಪುಟಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

- Advertisement -
- Advertisement -

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿದೆ. ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದವರು ಅದನ್ನು ಸುರಕ್ಷಿತವಾಗಿ ಸ್ಫೋಟಿಸಿ ಆತಂಕ ಹೋಗಲಾಡಿಸಿದರು. ಬಾಂಬ್‌ ಇಟ್ಟಿದ್ದ ಆರೋಪಿ ಎನ್ನಲಾದ ಆದಿತ್ಯ ರಾವ್‌ ಕೂಡ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆ ಸಂದರ್ಭದಲ್ಲಿ ಕನ್ನಡದ ಕೆಲ ಮಾಧ್ಯಮಗಳು ನಡೆದುಕೊಂಡ ರೀತಿ ಅಸಹ್ಯ ಹುಟ್ಟಿಸುವಂತದ್ದು. ಒಂದು ಪಕ್ಷಕ್ಕೆ, ಒಂದು ಸಿದ್ದಾಂತಕ್ಕೆ ತಮ್ಮನ್ನು ತಾವು ಮಾರಿಕೊಂಡತೆ ಅವು ನಡೆದುಕೊಂಡಿದ್ದು ಪತ್ರಿಕೋದ್ಯಮದ ಎಲ್ಲಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದಂತಿತ್ತು. ‘ಪೌರತ್ವಕ್ಕೆ ಪ್ರತಿಕಾರ’, ‘ಬಾಂಬ್‌ಗೂ ಪಿಎಫ್‌ಐ ಸಂಘಟನೆಗೂ ನಂಟು ಏಕಿರಬಾರದು’ ಎಂಬಂತಹ ವರದಿಗಳನ್ನು ಪ್ರಸಾರ ಮಾಡಿದ್ದವು.

ವಿಜಯ ಕರ್ನಾಟಕ ಪತ್ರಿಕೆಯಂತೂ ಪೌರತ್ವ ವಿರೋಧಿಸಿ ನಡೆದ ಗಲಭೆಯ ವೇಳೆ ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿಯಾದ ಬಳಿಕ ಮಂಗಳೂರಿನಲ್ಲಿ ದೊಡ್ಡಮಟ್ಟದ ದುಷ್ಕೃತ್ಯವೊಂದು ನಡೆಯುವ ಸಾಧ್ಯತೆಯಿತ್ತು. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ಈ ದುಷ್ಕೃತ್ಯದ ಭಾಗವಾಗಿರಬಹುದೆಂದು ಶಂಕಿಸಲಾಗಿದೆ ಎಂದು ಕಪೋಲಕಲ್ಪಿತ ವರದಿಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆಮೂಲಕ ಗೋಲಿಬಾರ್‌ಗೆ ಬಲಿಯಾದವರು ಮುಸ್ಲಿಮರಾದ್ದರಿಂದ ಬಾಂಬ್ ಇಟ್ಟಿರುವವರು ಮುಸ್ಲಿಮರೆ ಎಂದು ಸಾರುವ ಉದ್ದೇಶ ಅದರಲ್ಲಿತ್ತು.

ಭಯೋತ್ಪಾದನ ಕೃತ್ಯಕ್ಕೆ ಜಯ ಸಿಗದು ಎಂಬ ಸಂಪಾದಕೀಯವನ್ನು ಬರೆದು ಈ ವಿಚಾರದ ಕುರಿತು ಪೂರ್ವನಿರ್ಧರಿತ ಅಭಿಪ್ರಾಯಕ್ಕೆ ಬಂದಿದ್ದನ್ನು ಸಾರಿತ್ತು. ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಬಾಂಬ್ ಮಾತ್ರವಲ್ಲ ಅದನ್ನು ಇಟ್ಟ ಭಯೋತ್ಪಾದಕ ಶಕ್ತಿಗಳನ್ನು ಸಹ ಸಂಪೂರ್ಣವಾಗಿ ನಿಷ್ಕ್ರಿಯ ಮಾಡುತ್ತೇವೆ ಎಂದು ಘೋಷಿಸಿದ್ದರು.

ಬಾಂಬ್ ಎಂದ ಕೂಡಲೇ ಮುಸ್ಲಿಮರು ಎನ್ನುವಂತಹ ಮನೋಭಾವ ಮೂಡುವಂತೆ ಮಾಧ್ಯಮಗಳು ಮತ್ತು ಕೆಲ ಕೋಮುವಾದಿ ಪೊಲೀಸ್ ಅಧಿಕಾರಿಗಳು ದೀರ್ಘ ಅವಧಿಯಲ್ಲಿ ಬೆಳೆಸಿದ್ದಾರೆ. ಇದಕ್ಕಾಗಿಯೇ ಬಾಂಬ್ ಎಂದ ತಕ್ಷಣ ಬಹಳಷ್ಟು ಜನರು “ತನಿಖೆಯಲ್ಲಿ ಸಿಗುವ ಆರೋಪಿ ಮುಸ್ಲಿಮನಾಗಿದ್ದರೆ ಭಯೋತ್ಪಾದಕ ಎಂದು ಕರೆಸಿಕೊಳ್ಳುತ್ತಾನೆ, ಒಂದು ವೇಳೆ ಹಿಂದೂವಾಗಿದ್ದರೆ ಮಾನಸಿಕ ಅಸ್ವಸ್ಥನೆಂದು ಕರೆಸಿಕೊಳ್ಳುತ್ತಾನೆ” ಎಂದು ಟ್ರೋಲ್ ಮಾಡಿದ್ದರು.

ಆದರೆ ವಾಸ್ತವವೇನೆಂದರೆ ಸದ್ಯದ ಪೊಲೀಸ್ ತನಿಖೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಮಣಿಪಾಲದ ಮಣ್ಣಪಳ್ಳದ ಬಿ.ಕೃಷ್ಣಮೂರ್ತಿಯವರ ಮಗ ಆದಿತ್ಯ ರಾವ್ ಎಂದು ತಿಳಿದುಬಂದಿದ್ದಲ್ಲದೇ ಆತ ಪೊಲೀಸರೆದುರು ಶರಣಾಗಿದ್ದಾನೆ ಕೂಡ..

ಇಂಜಿನಿಯರಿಂಗ್ ಓದಿರುವ ಆದಿತ್ಯರಾವ್ ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಪ್ರಯತ್ನಿಸಿ ವಿಫಲವಾಗಿದ್ದನಂತೆ. ಕೆಲಸ ಸಿಗದ ಬೇಸರದಲ್ಲಿ ಒಂದು ವರ್ಷದ ಹಿಂದೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದ. ಆ ಅಪರಾಧಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆತನಿಗೆ ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಅಥಾರಿಟಿಯ ಮೇಲೆ ದ್ವೇಷವಿತ್ತು. ಆ ಕಾರಣಕ್ಕಾಗಿಯೇ ಆತ ಮಂಗಳೂರಿನಲ್ಲಿ ಬಾಂಬ್ ಇಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಾಗಿದ್ದ ಈತನ ಕುಟುಂಬ ಒಂದು ವಾರದ ಕೆಳಗೆ ತಾನೇ ಮಂಗಳೂರಿನ ಲೇಡಿಹಿಲ್ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ಆ ಒಂದು ವಾರದಿಂದ ಆತ ತನ್ನ ಮನೆಗೆ ಹೋಗದೆ ಕಾಣೆಯಾಗಿದ್ದಾನೆ ಎಂದು ಪೊಲೀಸರೆದುರು ಆತನ ತಂದೆ ತಿಳಿಸಿದ್ದಾರೆ. ಇನ್ನು ಬಾಂಬ್ ಇಟ್ಟಿದ್ದ ಘಟನೆ ಬೆಳಿಗ್ಗೆ 9 ಗಂಟೆಗೆ ನಡೆದರೆ ಮಧ್ಯಾಹ್ನ 2.50ಕ್ಕೆ ಟರ್ಮಿನಲ್ ಮ್ಯಾನೇಜರ್‌ಗೆ ಬಂದ ಕರೆಯೊಂದರಲ್ಲಿ ನನಗೆ ಕೊಟ್ಟ ತೊಂದರೆಗೆ ನಾನು ಸುಮ್ಮನೆ ಬಿಡುವುದಿಲ್ಲ ಎಂಬ ಧಮಕಿ ಹಾಕಲಾಗಿದೆಯಂತೆ. ಆದಿತ್ಯರಾವ್‌ನನ್ನು ಹೋಲುವ ವ್ಯಕ್ತಿಯು ಮಂಗಳೂರಿನ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ವಿಷಯ ಹೊರಬರುತ್ತಿದ್ದಂತೆಯೇ ಕನ್ನಡದ ಬಹುತೇಕ ಮುದ್ರಣ ಮಾಧ್ಯಮಗಳು ಮತ್ತು ಟಿವಿ ಚಾನೆಲ್‌ಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಆರೋಪಿ ಮುಸ್ಲಿಮನಾಗಿರುತ್ತಾನೆ ಎಂದು ಹಂಬಲಿಸುತ್ತಿದ್ದ ಅವರಿಗೆ ಈ ‘ರಾವ್’ ಎಂಬ ಹೆಸರು ಕೇಳಿದೊಡನೆಯೆ ಗರಬಡಿದವರಂತಾಗಿರುವುದು ಕಂಡುಬಂದಿದೆ. ಅಲ್ಲಿಯವರೆಗೂ ಏರುಧ್ವನಿಯ ಸುದ್ದಿ ಪ್ರಸಾರ ಮಾಡುತ್ತಿದ್ದ ಅವರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ.

ಈಗ ಅಸಲಿ ವಿಷಯಕ್ಕೆ ಬರುವುದಾದರೆ ಆದಿತ್ಯ ರಾವ್‌ಗೂ ಪೌರತ್ವ ವಿರೋಧಿ ಹೋರಾಟಕ್ಕೂ ಏನು ಸಂಬಂಧ? ಈತ ಬಾಂಬ್ ಇಟ್ಟಿರುವುದು ಪೌರತ್ವಕ್ಕೆ ಪ್ರತೀಕಾರ ಹೇಗಾಗುತ್ತದೆ? ಒಂದು ಸಮುದಾಯವನ್ನು, ಒಂದು ಭಿನ್ನಾಭಿಪ್ರಾಯವಿಟ್ಟುಕೊಂಡು ಹೋರಾಟ ಮಾಡುತ್ತಿರುವವರ ಮೇಲೆ ಯಾವುದೇ ಸಾಕ್ಷಿ ಇಲ್ಲದೇ ಗೂಬೆ ಕೂರಿಸಿದ ಮಾಧ್ಯಮಗಳು ನೀತಿ ಸಂಹಿತೆಯನ್ನು ಈ ರೀತಿ ಕೈಬಿಟ್ಟಿರುವುದು ಏತಕ್ಕಾಗಿ? ಈ ಮಾಧ್ಯಮಗಳು ತಮ್ಮ ತಪ್ಪಿನಿಂದ ಪಾಠ ಕಲಿತು ಕ್ಷಮಾಪಣೆಯನ್ನು ಪ್ರಕಟಿಸುತ್ತವೆಯೇ? ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲವೆಂದು ಸಂಕಲ್ಪ ಮಾಡುತ್ತದೆಯೆಂದು ನಾವು ನಿರೀಕ್ಷಿಸಬಹುದೇ?

ಈಗ ಪೊಲೀಸರ ವಿಷಯಕ್ಕೆ ಬರೋಣ.

ಬೆಂಗಳೂರಿನಲ್ಲಿ ಪೌರತ್ವ ಕಾಯ್ದೆಯ ಪರ ಪ್ರತಿಭಟನೆಯಲ್ಲಿ ಹಿಂದೂ ಮುಖಂಡರ ಕೊಲೆಗೆ ಸ್ಕೆಚ್ ಹಾಕಿದ್ದರು, ಅವರು ಎಸ್‌ಡಿಪಿಐ ಸಂಘಟನೆಗೆ ಸೇರಿದವರು, ಅವರಿಗೆ ಹಣ ಬರುತ್ತದೆ ಎಂದು ಬೆಂಗಳೂರು ನಗರ ಕಮಿಷನರ್ ಪತ್ರಿಕಾಗೋಷ್ಟಿಯಲ್ಲಿ ಘೋಷಿಸಿದ್ದರು. ಆದರೆ ಎಫ್‌ಐಆರ್‌ನಲ್ಲಿಯಾಗಲಿ, ಆರೋಪಿತರ ಹೇಳಿಕೆಗಳಲ್ಲಾಗಲೀ ಅವರ ಟಾರ್ಗೆಟ್ ಆಗಿ ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಇಂಥವರೇ ಟಾರ್ಗೆಟ್ ಆಗಿದ್ದರು ಎಂದು ಹೇಳಲಾದ ವ್ಯಕ್ತಿಗಳು ಆಗಲೇ ಹುತಾತ್ಮರಂತೆ ಹೇಳಿಕೆಯನ್ನು ಕೊಟ್ಟೂ ಆಗಿತ್ತು. ಇದನ್ನೇ ಮುಂದುವರೆಸಿ ಪಿಎಫ್‌ಐ ನಿಷೇಧ ಎಂಬ ಟೈಟಲ್ ಸಹಾ ಬಂದಾಗಿತ್ತು. ವಾಸ್ತವದಲ್ಲಿ ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ಅದಕ್ಕೆ ತೀರ್ಮಾನವಾಗಿತ್ತು ಎಂಬುದನ್ನು ಬಿಟ್ಟರೆ ಅದಿನ್ನೂ ಫೈಲ್ ಸಮೇತ ಕೇಂದ್ರ ಸರ್ಕಾರಕ್ಕೆ ಹೋಗಿ, ಕೇಂದ್ರವು ಅಂತಹ ನಿಷೇಧ ಮಾಡಬೇಕಷ್ಟೇ.

ಬೆಂಗಳೂರಿನಲ್ಲಿನ ಸ್ಲಂಗಳಲ್ಲಿ ಬಾಂಗ್ಲಾದವರಿದ್ದಾರೆ ಎಂದು ಬಿಜೆಪಿ ಸಂಸದರ ಮಾಲೀಕತ್ವದ ಚಾನೆಲ್ ನಕಲಿ ಸ್ಟಿಂಗ್ ಒಂದನ್ನು ನಡೆಸಿತು. ಕೂಡಲೇ ಹಿಂದು ಮುಂದು ನೋಡದೇ ಉತ್ತರ ಕರ್ನಾಟಕದ ಮತ್ತು ಪೂರ್ವ ಭಾರತದ ಕೂಲಿ ಜನರು ವಾಸವಿದ್ದ ಗುಡಿಸಲುಗಳನ್ನು ನೆಲಸಮ ಮಾಡಿದ್ದ ಪೊಲೀಸ್ ಇಲಾಖೆಯ ಕಮಿಷನರ್ ಭಾಸ್ಕರ್‌ರಾವ್‌ರನ್ನು ಯಾರಾದರೂ ಬಿಜೆಪಿ ಪಕ್ಷದ ವಕ್ತಾರರಾ ಎಂದು ಕೇಳಿದರೆ ಏನು ಹೇಳುತ್ತಾರೆ?

ಬಾಂಬ್ ಇಟ್ಟವರು ಯಾರಾದರೂ ಸರಿಯೇ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ, ಭದ್ರತೆಯನ್ನು ಹೆಚ್ಚಿಸಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂಬ ಮಾತುಗಳನ್ನು ಆಡುವುದು ಸಮಂಜಸ. ಅದನ್ನು ದಾಟಿ ಕೋಮುಗಳಿಗೆ ಸಂಬಂಧ ಕಲ್ಪಿಸಿ ಹೇಳಿಕೆಗಳನ್ನು ನೀಡಲಾಗುತ್ತದೆ.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಹೋರಾಟದಲ್ಲಿ ಇಬ್ಬರು ಮುಸ್ಲಿಮರನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು ಅದಕ್ಕೆ ಕಾರಣವಾದ ಘಟನಾವಳಿಯ ಕುರಿತೂ ಸಮರ್ಪಕ ಪುರಾವೆಗಳನ್ನು ಒದಗಿಸಲು ವಿಫಲವಾಗಿದ್ದಾರೆ. ಆದರೆ ಬಾಂಬ್ ಎಂದ ಕೂಡಲೇ ಒಂದು ಕಡೆ ಕೈ ತೋರಿಸುತ್ತಾರೆ.. ವಾಸ್ತವ ಗೊತ್ತಾದಾಗ ಪೆಚ್ಚುಮೋರೆ ಹಾಕಿ ಕೂರುತ್ತಾರೆ ಅಷ್ಟೇ.

ಪ್ರತಿಭಟಿಸುತ್ತಿರುವವರ ಬಟ್ಟೆ ನೋಡಿದರೆ ಸಾಕು ಅವರು ಯಾರು ಎಂಬುದು ಗೊತ್ತಾಗುತ್ತದೆ ಎಂದು ಹೇಳುವ ಪ್ರಧಾನಿ ಇರುವ ರಾಷ್ಟ್ರವಿದು. ಮಾಧ್ಯಮಗಳು ಅಂತಹ ಪ್ರಧಾನಿಗೆ ಪ್ರಶ್ನೆ ಹಾಕುವ ಬದಲು ಪ್ರಧಾನಿಯ ವಿರುದ್ಧ ಮಾತಾಡುವವರ ಮೇಲೆ ದಾಳಿ ನಡೆಸಲು ಕಥೆಗಳನ್ನು ಹೊಸೆಯುತ್ತಿರುತ್ತವೆ. ಹೀಗಿರುವಾಗ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...