- Advertisement -
- Advertisement -
ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ ಆರೋಪಿ ಆದಿತ್ಯಾ ರಾವ್ ಇಂದು ಬೆಳಿಗ್ಗೆ ಬೆಂಗಳೂರಿನ ಡಿಜಿ ಎನ್ ನೀಲಮಣಿರಾಜುರವರ ಕಚೇರಿಯಲ್ಲಿ ಶರಣಾಗಿರುವುದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕಳೆದ ವರ್ಷದ ಹುಸಿಬಾಂಬ್ ಕರೆಯ ಮೇಲೆ ಉಡುಪಿ ನಿವಾಸಿ ಆದಿತ್ಯ ರಾವ್ ಬಾಂಬ್ ಇಟ್ಟಿರಬಹುದೆಂದು ಶಂಕಿಸಲಾಗಿತ್ತು. ಈಗ ಆತ ನೇರವಾಗಿ ಶರಣಾಗಿರುವುದರಿಂದ ಅದು ಮತ್ತಷ್ಟು ದೃಢಪಟ್ಟಿದೆ.
ಮೇಲ್ನೋಟಕ್ಕೆ ವಯಕ್ತಿಕ ದ್ವೇಷದ ಕಾರಣಕ್ಕಾಗಿ ಆತ ಬಾಂಬ್ ಇಟ್ಟಿರುವುದು ಕಂಡಿಬಂದಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.