Homeರಾಜಕೀಯಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

ಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

- Advertisement -
- Advertisement -

ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇಲ್ಲಿವೆ. ಸತ್ತಮೇಲೆಯೂ ಸಾಮಾಜಿಕ ಅಂತರಗಳನ್ನು ಕಾಪಾಡಲಾಗುತ್ತದೆ. ಇವೆಲ್ಲದರ ನಡುವೆ ದಲಿತ (ಎಲ್ಲ ಕೆಳಜಾತಿಗಳು ಸೇರಿ) ಸಮುದಾಯದ ವ್ಯಕ್ತಿಗಳು ಸತ್ತಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಹಲವೆಡೆ ಅವರಿಗೆ ಸ್ಮಶಾನಗಳಿಲ್ಲ. ಅವರ ಸಮುದಾಯದವರೇ ಯಾರಾದರೂ ದೊಡ್ಡಮನಸು ಮಾಡಿ ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇದು ಹೇಗೋ ದೊರಕುತ್ತದೆ ಎಂದುಕೊಂಡರೂ ಊರೊಟ್ಟಿನ ಮಂದಿ ಬಳಸುವ ಸಾಮಾನ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ಯಾತ್ರೆಗೆ ಅವಕಾಶ ನಿರಾಕರಿಸುವ ರೂಢಿ ಹಲವೆಡೆ ಇಂದಿಗೂ ಇದೆ.

ತಮಿಳು ಚಲನಚಿತ್ರ “ಮನುಸಂಗಡ” ಇದೇ ವಿಷಯವನ್ನು ನಮ್ಮ ಮುಂದೆ ಇಡುತ್ತದೆ. ಇದು ಕಾಲ್ಪನಿಕ ಚಿತ್ರಕಥೆಯಲ್ಲ. ನಡೆದ, ನಡೆಯುತ್ತಿರುವ ಘಟನಾವಳಿಗಳನ್ನು ಆಧರಿಸಿದ್ದು. ಆದ್ದರಿಂದಲೇ ಇದು ಸಂಪೂರ್ಣವಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಇಲ್ಲ. ಇದನ್ನು ಡಾಕ್ಯುಮೆಂಟರಿ ಮಾದರಿಯಲ್ಲಿಯೂ ಹೇಳಲಾಗಿದೆ. ಆದ್ದರಿಂದಲೇ ಇದರ ಕ್ಯಾಮೆರಾ ಭಾಷೆಯೂ ವಿಭಿನ್ನವಾಗಿದೆ ಮತ್ತು ಅಷ್ಟೇ ಸಶಕ್ತವಾಗಿದೆ. ದಲಿತರ ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಈ ಕಥನ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಇದು ಇತರ ಯಾವುದೇ ರಾಜ್ಯದಲ್ಲಿಯೂ ನಡೆಯಬಹುದು. ಸ್ಥಳ ಇಲ್ಲಿ ನೆಪ ಅಷ್ಟೆ. ಚೆನ್ನೈ ಮಹಾನಗರದ ಕಾರ್ಖಾನೆಯೊಂದರಲ್ಲಿ ದುಡಿಯುವ ಯುವಕ ಕೊಲ್ಲಪ್ಪನ್. ಈತನ ತಂದೆ ಮರಣ ಹೊಂದಿದ ಸುದ್ದಿ ಬರುತ್ತದೆ. ಈತ ಗ್ರಾಮಕ್ಕೆ ಬರುತ್ತಾನೆ. ತಾಯಿಯ, ಸಂಬಂಧಿಕರ ದುಃಖ ಕಟ್ಟೆಯೊಡೆದಿರುತ್ತದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುವಾಗಲೇ ಊರೊಟ್ಟಿನ ರಸ್ತೆ (ಸಾಮಾನ್ಯ ರಸ್ತೆ)ಯಲ್ಲಿ ಶವ ತೆಗೆದುಕೊಂಡು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ ಎಂಬ ವಿಷಯ ಚರ್ಚೆಯಾಗುತ್ತದೆ.

ಪೊಲೀಸ್ ಸ್ಟೇಷನ್, ಕಂದಾಯಾಧಿಕಾರಿ ಕಚೇರಿಗಳಿಗೆ ಅಲೆದರೂ ರಕ್ಷಣೆ ಭರವಸೆ ದೊರೆಯುವುದಿಲ್ಲ. ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಹಾಕಲಾಗುತ್ತದೆ. ಆಗ ಸರ್ಕಾರಿ ವಕೀಲರು ಹೇಳುವುದು “ಗ್ರಾಮದ ಸಾಮಾನ್ಯ ರಸ್ತೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯ ಶವ ತೆಗೆದುಕೊಂಡು ಹೋದರೆ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಬಹುದು” ಇದು ನ್ಯಾಯಾಧೀಶರಿಗೆ ಅಚ್ಚರಿ ಉಂಟು ಮಾಡುತ್ತದೆ. ಅರ್ಜಿದಾರ ಕೊಲ್ಲಪ್ಪನ್ ತಂದೆಯ ಅಂತ್ಯಕ್ರಿಯೆ ಯಾತ್ರೆಯನ್ನು ಸಾಮಾನ್ಯ ರಸ್ತೆಯಲ್ಲಿ ತೆಗೆದುಕೊಂಡು ಹೋಗಲು, ಅಂತ್ಯಕ್ರಿಯೆ ಯಾವುದೇ ಸಮಸ್ಯೆಗಳಿಲ್ಲದಂತೆ ನಡೆಯಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಡಳಿತ, ಪೊಲೀಸರಿಗೆ ಸೂಚಿಸುತ್ತದೆ.

ಪ್ರಾಯೋಗಿಕವಾಗಿ ಹೈಕೋರ್ಟ್ ಆದೇಶ ಪ್ರಹಶನದಂತೆ ಆಗಿಬಿಡುತ್ತದೆ. ಕಂದಾಯಾಧಿಕಾರಿ, ಪೊಲೀಸ್ ಉನ್ನತಾಧಿಕಾರಿಗಳು ಮೇಲ್ಜಾತಿಯ ವಕ್ತಾರರಾಗುತ್ತಾರೆ. “ಸಾಮಾನ್ಯ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗುವುದು ಬೇಡ. ಪರ್ಯಾಯ ಮಾರ್ಗದಲ್ಲಿ ತೆಗದುಕೊಂಡು ಹೋಗಿ” ಎನ್ನುತ್ತಾರೆ. ಪರ್ಯಾಯ ಮಾರ್ಗವೇ ಇಲ್ಲ. ಕಲ್ಲು-ಮುಳ್ಳು-ಪೊದೆಗಳ ಹಾದಿ ಅದು. ಒಂದುವೇಳೆ ಪರ್ಯಾಯ ಹಾದಿಯಿದ್ದರೂ ಅದನ್ನು ಬಳಸುವ ಅನಿವಾರ್ಯತೆ ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೊಲೀಸರೇ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಾರೆ.

ಈ ಸಂದರ್ಭದಲ್ಲಿ ಕೊಲ್ಲಪ್ಪನ್ ಸಾಮಾನ್ಯ ಹಾದಿ ಶುರುವಾಗುವಲ್ಲಿ ಒಬ್ಬಂಟಿಯಾಗಿ ಬಂದು ನಿಂತು “ನಿಮ್ಮ ಮನೆಗಳ ಸತ್ತ ನಾಯಿ, ದನ ಸಾಮಾನ್ಯ ರಸ್ತೆಯಲ್ಲಿ ಹೋಗಬಹುದು, ನಮಗ್ಯಾಕೆ ಅವಕಾಶ ನಿರಾಕರಿಸುತ್ತೀರಿ. ನಿಮ್ಮಲ್ಲಿ ಸಾವು ಉಂಟಾದಾಗ ಹೂಳಲು, ಸುಡಲು ನಮ್ಮ ನೆರವು ಬೇಕು. ಆದರೆ ನಮ್ಮ ಶವವನ್ನು ಕೊಂಡೊಯ್ಯಲು ಏಕೆ ನಿರಾಕರಿಸುತ್ತೀರಿ ಎಂದು ಕೇಳುವುದು ಪರಿಣಾಮಕಾರಿ. ಮೇಲ್ಜಾತಿಗಳ ಸಮುದಾಯದಲ್ಲಿ ಸಾವು ಉಂಟಾದಾಗ ಈ ಸುದ್ದಿ ಸಾರಲು ದಲಿತರು ಬೇಕು; ಶವದ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತಮಟೆ ಬಡಿಯಲು ಬೇಕು. ಆದರೆ ಈ ಸಮುದಾಯದಲ್ಲಿ ಸಾವು ಉಂಟಾದಾಗ ಅದೇರಸ್ತೆಯಲ್ಲಿ ಸಾಗಲು ಬಿಡುವುದಿಲ್ಲ. ಇದೊಂದು ಕ್ರೂರ ವಿಪರ್ಯಾಸ.

ಕೊಲ್ಲಪ್ಪನ್ ಗೆಳತಿ ಮಹಾನಗರದ ನಿವಾಸಿ. ಈಕೆಗೆ ಹಳ್ಳಿಯ ಬಗ್ಗೆ ರೋಮ್ಯಾಂಟಿಕ್ ಕಲ್ಪನೆಗಳಿವೆ. “ಇಲ್ಲಿ ಇಂಥ ಸಾಮಾಜಿಕ ವಾತಾವರಣ ಇರಬಹುದೆಂದು ನನಗೆ ಗೊತ್ತಿರಲಿಲ್ಲ” ಎನ್ನುತ್ತಾಳೆ. ಅದಕ್ಕೆ ಕೊಲ್ಲಪ್ಪನ್ ಕೊಡುವ ಉತ್ತರ “ಇಲ್ಲಿ ಎಲ್ಲ ಜಾತಿ-ಸಮುದಾಯಗಳವರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ ಎಂದು ಭಾವಿಸಿದ್ದೆಯಾ” ಬಹುತೇಕ ಗ್ರಾಮಗಳಲ್ಲಿ ಎಲ್ಲ ಜಾತಿಗಳ ಸಾಮರಸ್ಯದ ಬದುಕು ಎಂಬುದೊಂದು ಇನ್ನೂ ರಮ್ಯ ಕಲ್ಪನೆ. ಸಾಮರಸ್ಯವೆಂದರೆ ಇಲ್ಲಿ ಮೇಲ್ಜಾತಿಗಳು ನಡೆಸಿಕೊಂಡು ಬಂದಂಥ ಆಚರಣೆಗಳನ್ನು ಪ್ರಶ್ನೆ ಮಾಡದಿರುವುದು, ತುಳಿಯುತ್ತಲೇ ಇರುವುದನ್ನು ಸಹಿಸಿಕೊಳ್ಳುವುದು.

ಆಸ್ಮೃಶ್ಯತೆ ಎನ್ನುವುದು ಹೇಗೆಲ್ಲ ಆಚರಣೆಯಲ್ಲಿದೆ ಎಂಬುದನ್ನು ನೇರವಾಗಿಯೇ ಹೇಳುವ “ಮನುಸಂಗಡ” ಒಂದು ಡಾಕ್ಯುಮೆಂಟರಿ ಹಂತದಲ್ಲಿಯೇ ನಿಂತು ಬಿಡಬಹುದಾಗಿತ್ತು. ಆದರೆ ನಿರ್ದೇಶಕ ಅಂಶನ್ ಕುಮಾರ್ ಪರಿಶ್ರಮ(ಚಿತ್ರಕಥೆಯೂ ಇವರದೇ) ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮ್ಯಾಟಿಕ್ ಪರಿಭಾಷೆಗಳನ್ನೂ ಸಮರ್ಥವಾಗಿ ಬಳಸಿ ಕಥೆ ಹೇಳಲಾಗಿದೆ.

ಪಿ.ಎಸ್ ದರನ್ ಮಾಡಿರುವ ಸಿನೆಮಾಟೋಗ್ರಫಿ ವಿಭಿನ್ನವಾಗಿದೆ. ಈ ಥರದ ಕ್ಯಾಮೆರಾ ಪರಿಭಾಷೆ, ಭಾರತೀಯ ಸಿನೆಮಾಗಳ ಸಂದರ್ಭದಲ್ಲಿ ಬಹಳ ಅಪರೂಪ. ಸಾಕಷ್ಟು ಸನ್ನಿವೇಶಗಳಲ್ಲಿ ಹ್ಯಾಂಡಿ ಕ್ಯಾಮೆರಾ ಬಳಸಲಾಗಿದೆ. ಆದರೆ ಎಲ್ಲಿಯೂ ಕಥೆಯ ನಿರೂಪಣೆಗೆ ಕ್ಯಾಮೆರಾ ತೊಡಕಾಗದೇ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಹಕಾರಿಯಾಗಿದೆ. ಸಿನೆಮಾಕ್ಕೆ ನೀಡಿರುವ ಹಿನ್ನೆಲೆ ಸಂಗೀತ ಕಥೆಯ ಸನ್ನಿವೇಶ, ಬೆಳವಣಿಗೆಯಲ್ಲಿ ಮಿಳಿತವಾಗಿದೆ. ಧನಶೇಖರ್ ನಿರ್ವಹಿಸಿರುವ ಸಂಕಲನ ಕಾರ್ಯ ಅತ್ಯುತ್ತಮ.

ಚಿತ್ರದಲ್ಲಿ ಇರುವ ಕಲಾವಿದರಾದ ರಾಜೀವ್ ಆನಂದ್, ಶೀಲಾ ರಾಜಕುಮಾರ್, ಮಣಿಮೇಘಲೈ, ವಿದುರ್ ರಾಜರಾಜನ್, ಆನಂದ್ ಸಂಪತ್, ಸೇತು ದರ್ವೀನ್, ಎ.ಎಸ್. ಶಶಿಕುಮಾರ್ ಅಭಿನಯ ಮನಮುಟ್ಟುತ್ತದೆ. ಗ್ರಾಮ ನಿವಾಸಿಗಳನ್ನು ಪಾತ್ರಧಾರಿಗಳಾಗಿರುವಂತೆ ಸಿನಿಮಾ ಸಂಯೋಜಿಸಿರುವುದು ವಿಶೇಷ.

ತಮಿಳುನಾಡಿನಲ್ಲಿ 2018ರ ಅಕ್ಟೋಬರ್ ನಲ್ಲಿ “ಮನುಸಂಗಡ” ತೆರೆಕಂಡಿದೆ. ಸಾಕಷ್ಟು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳನ್ನೂ ಗಳಿಸಿದೆ. ಭಾರತೀಯ ಸಾಮಾಜಿಕ ಕಥನವನ್ನು ಬಹು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ಈ ಸಿನೆಮಾ “ನೆಟ್ ಫ್ಲಿಕ್ಸ್” ನಲ್ಲಿಯೂ ಲಭ್ಯವಿದೆ.

ಪೊಲೀಸರು ಕೊಲ್ಲಪ್ಪನ್ ಮತ್ತವರ ಕುಟುಂಬದವರು, ಸಂಬಂಧಿಕರನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇವರೆಲ್ಲ ಪೊಲೀಸ್ ವ್ಯಾನಿನಲ್ಲಿದ್ದೂ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ಹಳ್ಳಿಯ ಮೇಲ್ಞಾತಿಯವರು ದಾಳಿ ಮಾಡುತ್ತಾರೆ. ಕಲ್ಲುಗಳೂ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ವ್ಯಾನಿನತ್ತ ತೂರುತ್ತಾರೆ, ನಿಂದಿಸುತ್ತಾರೆ. ಇವೆಲ್ಲವೂ ಇಲ್ಲಿ ಹಲವೊಮ್ಮೆ ಕಾನೂನು ಸುವ್ಯವಸ್ಥೆ ಎಂಬುದು ಅಣಕ ಎಂಬುದನ್ನು ಹೇಳುತ್ತದೆ.

ಭಾರತೀಯರಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸೂಕ್ತವಾಗಿ ನಡೆಸಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಚ್ಯುತಿ ಬಂದರೆ ಆ ನೋವು ದೀರ್ಘಕಾಲ ಉಳಿಯುತ್ತದೆ. ಮಣ್ಣು ಮಾಡಿದ ನಂತರ ನಡೆಸುವ ವಿಧಿವಿಧಾನಗಳಿರುತ್ತವೆ. ಸತ್ತವರ ಸಮಾಧಿ ಮುಂದೆ ಅವುಗಳನ್ನು ನಡೆಸಲಾಗುತ್ತದೆ. ಆದರೆ ಸತ್ತವರ ಸಮಾಧಿ ಯಾವುದು, ಎಲ್ಲಿದೆ ಎಂದು ತಿಳಿಯದಿದ್ದರೆ ….

ಇದನ್ನೂ ಓದಿ: ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...