Homeಕರ್ನಾಟಕಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

ಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

- Advertisement -
- Advertisement -

| ಪ್ರದೀಪ್ ಪುಟ್ಟಪ್ಪ |

ಬ್ಲಾಕ್ ಮೇಲ್ ಆರೋಪ : ಪತ್ರಕರ್ತನ ಸೆರೆ,  ನಕಲಿ ದಾಖಲೆ ಸೃಷ್ಟಿಗೆ ಪತ್ರಕರ್ತನ ಬಂಧನ, ಲೋಗೋ ದುರ್ಬಳಕೆ : ವಾಹಿನಿ ಮೇಲೆ ದೂರು ಇದು ಇಂದಿನ ಪತ್ರಿಕಾರಂಗದ ಜನಸಾಮಾನ್ಯರಿಗೆ ತಲುಪದ ಇನ್ನೊಂದು ಮುಖ. ಅಷ್ಟಕ್ಕೂ ಎಲ್ಲಿ ಹೋಯ್ತು ಆ ವಿಶ್ವಾಸಾರ್ಹತೆ, ಎಲ್ಲಿ ಹೋಯ್ತು ಆ ಸತ್ಯ ಶುದ್ಧ ವರದಿಗಾರಿಕೆ.!?

ಚಳುವಳಿಯ ಹಿನ್ನೆಲೆಯಲ್ಲಿ, ನೊಂದವರ, ಶೋಷಿತರ ದನಿಯಾಗಿ, ಅಸಂಘಟಿತ ವರ್ಗಗಳ ಕೂಗಿಗೆ ಪ್ರತಿಧ್ವನಿಯಾಗಿ ಹುಟ್ಟಿದ Journalism ಅನ್ನೋದು ಈಗ ಐಡಿ ಕಾರ್ಡ್ ಚಲಾವಣೆಗಷ್ಟೆ ಸೀಮಿತವಾಗಿದೆ. ಮಾಧ್ಯಮದ ಕಾರ್ಡ್ ಒಂದಿದ್ದರೆ ವಿಧಾನಸೌಧ ಆದ್ರೇನು, ಪಾರ್ಲಿಮೆಂಟ್ ಆದ್ರೇನು ಅನ್ನುವಷ್ಟು ಸಲೀಸಾಗಿ ಹೋಗಿದೆ ಇವತ್ತಿನ ಪತ್ರಿಕೋದ್ಯಮ. ಇಷ್ಟೇ ಆಗಿದ್ದರೂ ಸಹಿಸಿಕೊಂಡು ಹೋಗಬಹುದಿತ್ತು. ಆ ಹಂತವನ್ನೂ ಮೀರಿ ಇಂದಿನ ಬಹುತೇಕ ಮಾಧ್ಯಮಗಳು ವಸೂಲಿ ದಂಧೆಗೆ ಇಳಿಯಲ್ಪಡುತ್ತಿವೆ. ಹಾಗಾದ್ರೆ ಎಲ್ಲಿ ಹೋಯ್ತು ಹುಟ್ಟಿನ ಮೂಲದಲ್ಲಿ ಇದ್ದ ಆ ಉದ್ದೇಶ.!?

ಇವತ್ತು ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮ ಯಾವುದೇ ಆಗಿರಲಿ.. ಸೂಕ್ಷ್ಮವಾಗಿ ಒಮ್ಮೆ ಕಣ್ಣಾಡಿಸಿದರೆ ನಿಮಗೆ ಪ್ರತೀ ಮಾಧ್ಯಮ ಸಂಸ್ಥೆಗಳಲ್ಲೂ ವಸೂಲಿ ವೀರರ ಒಂದೊಂದು ಗುಂಪು ಕಾಣ ಸಿಗುತ್ತವೆ. ಅದು ಸಂಸ್ಥೆಯೊಳಗಿನ ಪ್ರೈವೇಟ್ ಟೀಮ್ ಆಗಿರಬಹುದು ಅಥವಾ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್ ಖೂಳರ” ಟೀಮ್ ಆಗಿರಬಹುದು‌, ಪ್ರತೀ ಸಂಸ್ಥೆಯಲ್ಲೂ ಇಂತಾದ್ದೊಂದು ತಂಡ ಖಾಯಂ ಅನ್ನಿಸುವಷ್ಟರ ಮಟ್ಟಿಗೆ ಬೇರೂರಿ ಬಿಟ್ಟಿದೆ. ಕೆಲವರಿಗೆ ಅದು ಅನಿವಾರ್ಯ, ಕೆಲವರಿಗೆ ಅವಶ್ಯಕವಲ್ಲದ ಕಾಯಕವಾಗಿದೆ. ಅಪಾಯಕಾರಿ ಬೆಳವಣಿಗೆ ಏನೆಂದರೆ ಇವತ್ತಿನ ಪತ್ರಿಕೋದ್ಯಮದಲ್ಲಿ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್” ಕಾರಣದ ತಂಡಗಳಿಗೆ ಯಾವ ಅಡೆತಡೆಯೂ ಇಲ್ಲದಂತಾಗಿದೆ. ಎಲ್ಲಿ ಬೇಕಾದರೂ ನುಗ್ಗಿ ವಸೂಲಿ ದಂಧೆಗೆ ಸುಲಭವಾಗಿ ಇಳಿಯಬಹುದಾದಷ್ಟು ಸ್ವಾತಂತ್ರ್ಯವನ್ನು ಆಯಾ ಮಾಧ್ಯಮ ಸಂಸ್ಥೆಗಳೇ ಮಾಡಿಕೊಟ್ಟಿವೆ. ಮಾಧ್ಯಮ ಸಂಸ್ಥೆಗಳ ಈ ಮಟ್ಟಿಗಿನ ಸದರ ಹಲವಷ್ಟು ವಸೂಲಿ ವೀರರಿಗೆ ಹಲ್ಲಿಗೆ ಶಾಣೆ ಹಿಡಿದಂತಾಗಿದೆ. ಸಂಸ್ಥೆ ವಹಿಸಿದ “ಕೆಲಸ”ದ ಹೊರತಾಗಿ ತಮ್ಮ ಜೇಬಿಗೂ ಇಳಿಸಿಕೊಳ್ಳುವಷ್ಟು ಸಲೀಸಾಗಿ ದಂಧೆಗಳಲ್ಲಿ ತೊಡಗಿಕೊಂಡಿದ್ದಾರೆ The great Journalist ಗಳು.

ಸಧ್ಯ ಇವೆಲ್ಲಾ ಕಾರಣಗಳಿಂದ ಮಾಧ್ಯಮ ಅನ್ನೋದು ಕಳ್ಳನ ಕೈಗೆ ಗಂಟು ಕೊಟ್ಟಂತಾಗಿದೆ. ಮಾಧ್ಯಮ ಅಂದ್ರೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಅಥವಾ ಇನ್ಯಾವುದೋ ಮೇಲ್ಸ್ತರದಲ್ಲಿ ಕೂತ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿ ದಾರಿಗೆ ತರಬೇಕಾದ ಮಹತ್ತರ ಪಾತ್ರ ಹೊಂದಿರಬೇಕು. ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ಪ್ರಜೆಗಳನ್ನು ಮರೆತಾಗ, ಜನಸೇವೆಗಾಗಿಯೇ ಜನರ ತೆರಿಗೆ ಹಣವನ್ನು ಸಂಬಳವಾಗಿ ಪಡೆಯುವ ಅಧಿಕಾರಿಗಳು ಕರ್ತವ್ಯ ಮರೆತಾಗ ಅವರನ್ನು ಬಡಿದು ಎಚ್ಚರಿಸಬೇಕಾಗಿರೋದು ಮಾಧ್ಯಮಗಳ ಕರ್ತವ್ಯವಾಗಿರಬೇಕು. ಆದ್ರೆ ಇವತ್ತು ಹಲವಷ್ಟು ಮಾಧ್ಯಮಗಳಿಗೆ, ಮಾಧ್ಯಮಗಳ ಒಳಗಿನ ವಸೂಲಿ ವೀರರಿಗೆ ಸಮಾಜದ ಅಂಕುಡೊಂಕುಗಳೇ ಆಹಾರ ಒದಗಿಸುತ್ತಿವೆ. ಯಾವ ಮಾಧ್ಯಮ ಅಧಿಕಾರಿ ವರ್ಗಗಳ ಅಥವಾ ಸಮಾಜದಲ್ಲಿ ಉನ್ನತ ಹಂತದಲ್ಲಿರೋ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರಬೇಕಿತ್ತೋ ಅದನ್ನು ಎಳ್ಳಷ್ಟೂ ಮಾಡುತ್ತಿಲ್ಲ. ಅದರ ಹೊರತಾಗಿ ಅವರ ತಪ್ಪುಗಳೇ ಅಥವಾ ಪ್ರಮಾದಗಳೇ ಬಂಡವಾಳ ಆಗ್ತಿದೆ ಇಂತಾ ವಸೂಲಿ ಮಾಧ್ಯಮಗಳಿಗೆ.

ಉದಾಹರಣೆಗೆ ಹೇಳ್ಬೇಕು ಅಂದ್ರೆ ಹೆಚ್ಚಿನ ಟಿವಿ ಜರ್ನಲಿಸ್ಟ್ಗಳು ಇಂತಾ ಅಕ್ರಮಗಳಲ್ಲಿ ಭಾಗಿ ಆಗ್ತಿದ್ದಾರೆ. ರಾಜ್ಯ ಸಿಸಿಬಿ ಪೊಲೀಸ್ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲೇ ಬಹಳಷ್ಟು ಸುದ್ದಿ ಮಾಡಿದ ಆಂಬಿಡೆಂಟ್ ನಂತಾ ಹೈ ಪ್ರೊಫೈಲ್ ಕೇಸ್ಗಳಲ್ಲೇ ಪತ್ರಕರ್ತರ ಹೆಸರು ಓಡಾಡ್ತಿದೆ. ಅದರ ನಂತರ ಓಡಾಡಿದ ವೈದ್ಯರೊಬ್ಬರ ಲೈಂಗಿಕ ಪ್ರಕರಣವೊಂದನ್ನ ಬ್ಲಾಕ್ಮೇಲ್ಗೆ ಬಳಸಿಕೊಂಡ ವಿಚಾರದಲ್ಲಿ ಪತ್ರಕರ್ತರ ತಲೆದಂಡ ಹಲವಷ್ಟು ಸುದ್ದಿ ಮಾಡಿತ್ತು. ಸಧ್ಯ ಈಗ ಚಾಲ್ತಿಯಲ್ಲಿರೋ ಒಂದೊಂದೇ ಆರೋಪಿಗಳನ್ನು ಹಿಡಿದು ಒಳಗೆ ಹಾಕ್ತಿರೋ ಎಂಬಿ ಪಾಟೀಲರ ಟಾರ್ಗೆಟ್ ಮಾಡಿದ ಕೇಸ್ನಲ್ಲಿ ಪತ್ರಕರ್ತರು ಭಾಗಿಯಾಗಿದ್ದು ಎದ್ದು ಕಾಣ್ತಿದೆ. ರಾಜಕಾರಣಿಯೊಬ್ಬರ ಲೈಂಗಿಕ ಅಫೈರ್ ಕೇಸ್ ಕೂಡ ಪತ್ರಕರ್ತರಿಗೆ ಆಹಾರವಾಗ್ತಿದೆ. ತೀರಾ ಕೆದಕುತ್ತಾ ಹೋದ್ರೆ ದಿನಕ್ಕೊಂದು ವಸೂಲಿ ಕಥೆಗಳು ಮಾಧ್ಯಮಗಳ ಒಳಗೆ ಯಥೇಚ್ಛವಾಗಿ ಸಿಕ್ಕುತ್ತಾ ಹೋಗುತ್ತವೆ. ತೀರಾ ವಯುಕ್ತಿಕ ಅನ್ನಿಸೋ ಸ್ಟೋರಿಗಳಿಂದಲೂ ಸಹ ವಸೂಲಿ ವೀರರು ಕಮಿಷನ್ ಪಡೆದುಕೊಳ್ಳುವಷ್ಟು ಹದಗೆಟ್ಟಿದೆ ಇವತ್ತಿನ ಪತ್ರಿಕೋದ್ಯಮ. ನಿಮಗೆ ಆಶ್ಚರ್ಯದ ಜೊತೆಗೆ ಹೇಸಿಗೆ ಸಹ ಹುಟ್ಟಬಹುದು, ಕನ್ನಡದ ಟಿವಿ ಚಾನಲ್ ಒಂದು ಇದಕ್ಕಂತಲೇ ಒಂದು ಟೀಂ ಕಟ್ಟಿಕೊಂಡು ಫೀಲ್ಡಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕೆ ಚಾನಲ್ಲಿನ ಮುಖ್ಯಸ್ಥರೇ ಸಾತ್ ಕೊಡ್ತಿದ್ದಾರೆ. ಮೊದಲಿಗೆ ಸರಿಯಾದ ಮಿಕವೊಂದನ್ನು ಟಾರ್ಗೆಟ್ ಮಾಡಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳೀತಾರೆ. ನೆಕ್ಸ್ಟ್ ಸೀನಿನಲ್ಲಿ ಅದೇ ಸ್ಟಿಂಗ್ ಟೀಂ ಅದೇ ‘ಮಿಕ’ದ ಟೇಬಲ್ ಮೇಲೆ ವಸೂಲಿಗೆ ಇಳಿದಿರುತ್ತೆ. ಕೂತ ಬೈಟಕ್ಕಿಗೆ ಲಕ್ಷ, ಕೋಟಿ ನಿರಾಯಾಸವಾಗಿ ಜೇಬಿಗೆ ಬಂದು ಇಳಿಯುತ್ತೆ. ಇನ್ನೇನು ಬೇಕು. ಕೇಳಿದ್ರೆ ‘ನಾವು ಕೊಡ್ತಿರೋ ಪ್ರೋಗ್ರಾಂಗಳಿಗೆ ಬರೋ ಟಿಆರ್ಪಿ ಅಷ್ಟರಲ್ಲೇ ಇದೆ.. ಇನ್ನು ನೂರೈವತ್ತು ಇನ್ನೂರು ಮಂದಿ ಉದ್ಯೋಗಿಗಳಿಗೆ ಸಂಬಳ ಎಲ್ಲಿಂದ ಬರಬೇಕು’ ಅನ್ನೋ ಸಬೂಬಿನ ಉತ್ತರ ಕೂಡ ಇವರಿಂದ ಅಷ್ಟೇ ಸಲೀಸಾಗಿ ಬರುತ್ತೆ. ಹಾಗಾಗಿ ವಸೂಲಿ ಮಾಡಿಯೇ ಸಂಸ್ಥೆಯನ್ನು ಮುನ್ನಡೆಸಬೇಕಾದ ಕೃತಕ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಅಥವಾ ಅಂತಾ ಸುಲಭದ ದಾರಿ ಅಂತಲೂ ಹೇಳ್ಬಹುದು.

ಒಂದು ಕಾಲದಲ್ಲಿ ಪತ್ರಕರ್ತರು ಅಂದ್ರೆ ಸಾಮಾನ್ಯ ಜನ ಅತಿಯಾಗಿ ಗೌರವ ಕೊಡುವಂತಾ ಸ್ಥಾನಮಾನ ಹೊಂದಿದ್ದಾಗಿತ್ತು. ತಮ್ಮ ಸಮಸ್ಯೆಗಳನ್ನು, ನಮ್ಮ ಕೂಗನ್ನು ಸರ್ಕಾರದ ಮಟ್ಟಕ್ಕೆ, ಅಧಿಕಾರಿಗಳ ಮಟ್ಟಕ್ಕೆ ತಲುಪಿಸುವಂತಾ ಜವಾಬ್ದಾರಿ ಹೊಂದಿತ್ತು. ಆ ಮೂಲಕ ಆಡಳಿತ ವರ್ಗ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಂತಾ ಪಾತ್ರ ವಹಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ನಿರ್ವಹಿಸುವಂತಹ ಜವಾಬ್ದಾರಿ ಮಾಧ್ಯಮಕ್ಕೆ ಇದೆ. ಸಧ್ಯ ಇವೆಲ್ಲಾ ಘನತೆಯನ್ನ ಮಾಧ್ಯಮ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಪತ್ರಕರ್ತರು ಅಂದ್ರೆ ಮುಖ ಮುರಿಯುವ ಹಂತಕ್ಕೆ ಬಂದಿದ್ದಾರೆ ಜನಸಾಮಾನ್ಯರು. ಆ ಮೂಲಕ ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬೀಳುತ್ತಿದ್ದಾರೆ.

ಕೊನೆಯದಾಗಿ ಹೇಳೋದು ಏನಂದ್ರೆ ಪತ್ರಿಕೋಧ್ಯಮ ಅನ್ನೋದು ಚಿಕ್ಕ ಸರ್ಕಲ್. ಯಾವ ಸಂಸ್ಥೆಯ ಒಳಗೆ ಏನು ಆಗ್ತಿದೆ ಅನ್ನೋದು ಸುಲಭವಾಗಿ ಇನ್ನೊಂದು ಸಂಸ್ಥೆಗೆ ಗೊತ್ತಾಗಿ ಬಿಡುವಷ್ಟು ವಿಚಾರಗಳು ಗಾಳಿಯಷ್ಟೇ ವೇಗವಾಗಿ ಹರಿದಾಡುತ್ತೆ. ಇನ್ನು ವಸೂಲಿ ವೀರರ ವಿಚಾರಗಳು ಮಾಧ್ಯಮಗಳ ಒಳಗಿರೋ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದ್ರೆ ಹೊರಗೆಲ್ಲೂ ಲೀಕ್ ಮಾಡುವಂತಿಲ್ಲ. ಏನು ಮಾಡ್ತೀರಿ.. ಮಾಧ್ಯಮ ಧರ್ಮ ಅನ್ನೋ ಉತ್ತರ ಯಾವುದೇ ಅಂಜಿಕೆ ಅಳುಕಿಲ್ಲದೇ ಬಂದು ಹೋಗುತ್ತದೆ. ಇನ್ನಾದ್ರು ಎಚ್ಚರ ವಹಿಸುತ್ತಾರಾ? ಕಾಲವೇ ಉತ್ತರಿಸಬೇಕು.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...