Homeಕರ್ನಾಟಕಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

ಮೀಡಿಯಾ ಮಿಸ್ಟರಿ: ವಸೂಲಿ ದಂಧೆಗೆ ಇಳಿದ ಪತ್ರಕರ್ತರು, ಕಳೆದುಹೋದ ವಿಶ್ವಾಸಾರ್ಹತೆ

- Advertisement -
- Advertisement -

| ಪ್ರದೀಪ್ ಪುಟ್ಟಪ್ಪ |

ಬ್ಲಾಕ್ ಮೇಲ್ ಆರೋಪ : ಪತ್ರಕರ್ತನ ಸೆರೆ,  ನಕಲಿ ದಾಖಲೆ ಸೃಷ್ಟಿಗೆ ಪತ್ರಕರ್ತನ ಬಂಧನ, ಲೋಗೋ ದುರ್ಬಳಕೆ : ವಾಹಿನಿ ಮೇಲೆ ದೂರು ಇದು ಇಂದಿನ ಪತ್ರಿಕಾರಂಗದ ಜನಸಾಮಾನ್ಯರಿಗೆ ತಲುಪದ ಇನ್ನೊಂದು ಮುಖ. ಅಷ್ಟಕ್ಕೂ ಎಲ್ಲಿ ಹೋಯ್ತು ಆ ವಿಶ್ವಾಸಾರ್ಹತೆ, ಎಲ್ಲಿ ಹೋಯ್ತು ಆ ಸತ್ಯ ಶುದ್ಧ ವರದಿಗಾರಿಕೆ.!?

ಚಳುವಳಿಯ ಹಿನ್ನೆಲೆಯಲ್ಲಿ, ನೊಂದವರ, ಶೋಷಿತರ ದನಿಯಾಗಿ, ಅಸಂಘಟಿತ ವರ್ಗಗಳ ಕೂಗಿಗೆ ಪ್ರತಿಧ್ವನಿಯಾಗಿ ಹುಟ್ಟಿದ Journalism ಅನ್ನೋದು ಈಗ ಐಡಿ ಕಾರ್ಡ್ ಚಲಾವಣೆಗಷ್ಟೆ ಸೀಮಿತವಾಗಿದೆ. ಮಾಧ್ಯಮದ ಕಾರ್ಡ್ ಒಂದಿದ್ದರೆ ವಿಧಾನಸೌಧ ಆದ್ರೇನು, ಪಾರ್ಲಿಮೆಂಟ್ ಆದ್ರೇನು ಅನ್ನುವಷ್ಟು ಸಲೀಸಾಗಿ ಹೋಗಿದೆ ಇವತ್ತಿನ ಪತ್ರಿಕೋದ್ಯಮ. ಇಷ್ಟೇ ಆಗಿದ್ದರೂ ಸಹಿಸಿಕೊಂಡು ಹೋಗಬಹುದಿತ್ತು. ಆ ಹಂತವನ್ನೂ ಮೀರಿ ಇಂದಿನ ಬಹುತೇಕ ಮಾಧ್ಯಮಗಳು ವಸೂಲಿ ದಂಧೆಗೆ ಇಳಿಯಲ್ಪಡುತ್ತಿವೆ. ಹಾಗಾದ್ರೆ ಎಲ್ಲಿ ಹೋಯ್ತು ಹುಟ್ಟಿನ ಮೂಲದಲ್ಲಿ ಇದ್ದ ಆ ಉದ್ದೇಶ.!?

ಇವತ್ತು ಮುದ್ರಣ ಮಾಧ್ಯಮ ಅಥವಾ ದೃಶ್ಯ ಮಾಧ್ಯಮ ಯಾವುದೇ ಆಗಿರಲಿ.. ಸೂಕ್ಷ್ಮವಾಗಿ ಒಮ್ಮೆ ಕಣ್ಣಾಡಿಸಿದರೆ ನಿಮಗೆ ಪ್ರತೀ ಮಾಧ್ಯಮ ಸಂಸ್ಥೆಗಳಲ್ಲೂ ವಸೂಲಿ ವೀರರ ಒಂದೊಂದು ಗುಂಪು ಕಾಣ ಸಿಗುತ್ತವೆ. ಅದು ಸಂಸ್ಥೆಯೊಳಗಿನ ಪ್ರೈವೇಟ್ ಟೀಮ್ ಆಗಿರಬಹುದು ಅಥವಾ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್ ಖೂಳರ” ಟೀಮ್ ಆಗಿರಬಹುದು‌, ಪ್ರತೀ ಸಂಸ್ಥೆಯಲ್ಲೂ ಇಂತಾದ್ದೊಂದು ತಂಡ ಖಾಯಂ ಅನ್ನಿಸುವಷ್ಟರ ಮಟ್ಟಿಗೆ ಬೇರೂರಿ ಬಿಟ್ಟಿದೆ. ಕೆಲವರಿಗೆ ಅದು ಅನಿವಾರ್ಯ, ಕೆಲವರಿಗೆ ಅವಶ್ಯಕವಲ್ಲದ ಕಾಯಕವಾಗಿದೆ. ಅಪಾಯಕಾರಿ ಬೆಳವಣಿಗೆ ಏನೆಂದರೆ ಇವತ್ತಿನ ಪತ್ರಿಕೋದ್ಯಮದಲ್ಲಿ ಸಂಸ್ಥೆಯೇ ಹುಟ್ಟುಹಾಕಿದ “ಕಮರ್ಷಿಯಲ್” ಕಾರಣದ ತಂಡಗಳಿಗೆ ಯಾವ ಅಡೆತಡೆಯೂ ಇಲ್ಲದಂತಾಗಿದೆ. ಎಲ್ಲಿ ಬೇಕಾದರೂ ನುಗ್ಗಿ ವಸೂಲಿ ದಂಧೆಗೆ ಸುಲಭವಾಗಿ ಇಳಿಯಬಹುದಾದಷ್ಟು ಸ್ವಾತಂತ್ರ್ಯವನ್ನು ಆಯಾ ಮಾಧ್ಯಮ ಸಂಸ್ಥೆಗಳೇ ಮಾಡಿಕೊಟ್ಟಿವೆ. ಮಾಧ್ಯಮ ಸಂಸ್ಥೆಗಳ ಈ ಮಟ್ಟಿಗಿನ ಸದರ ಹಲವಷ್ಟು ವಸೂಲಿ ವೀರರಿಗೆ ಹಲ್ಲಿಗೆ ಶಾಣೆ ಹಿಡಿದಂತಾಗಿದೆ. ಸಂಸ್ಥೆ ವಹಿಸಿದ “ಕೆಲಸ”ದ ಹೊರತಾಗಿ ತಮ್ಮ ಜೇಬಿಗೂ ಇಳಿಸಿಕೊಳ್ಳುವಷ್ಟು ಸಲೀಸಾಗಿ ದಂಧೆಗಳಲ್ಲಿ ತೊಡಗಿಕೊಂಡಿದ್ದಾರೆ The great Journalist ಗಳು.

ಸಧ್ಯ ಇವೆಲ್ಲಾ ಕಾರಣಗಳಿಂದ ಮಾಧ್ಯಮ ಅನ್ನೋದು ಕಳ್ಳನ ಕೈಗೆ ಗಂಟು ಕೊಟ್ಟಂತಾಗಿದೆ. ಮಾಧ್ಯಮ ಅಂದ್ರೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಅಥವಾ ಇನ್ಯಾವುದೋ ಮೇಲ್ಸ್ತರದಲ್ಲಿ ಕೂತ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿ ದಾರಿಗೆ ತರಬೇಕಾದ ಮಹತ್ತರ ಪಾತ್ರ ಹೊಂದಿರಬೇಕು. ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ಪ್ರಜೆಗಳನ್ನು ಮರೆತಾಗ, ಜನಸೇವೆಗಾಗಿಯೇ ಜನರ ತೆರಿಗೆ ಹಣವನ್ನು ಸಂಬಳವಾಗಿ ಪಡೆಯುವ ಅಧಿಕಾರಿಗಳು ಕರ್ತವ್ಯ ಮರೆತಾಗ ಅವರನ್ನು ಬಡಿದು ಎಚ್ಚರಿಸಬೇಕಾಗಿರೋದು ಮಾಧ್ಯಮಗಳ ಕರ್ತವ್ಯವಾಗಿರಬೇಕು. ಆದ್ರೆ ಇವತ್ತು ಹಲವಷ್ಟು ಮಾಧ್ಯಮಗಳಿಗೆ, ಮಾಧ್ಯಮಗಳ ಒಳಗಿನ ವಸೂಲಿ ವೀರರಿಗೆ ಸಮಾಜದ ಅಂಕುಡೊಂಕುಗಳೇ ಆಹಾರ ಒದಗಿಸುತ್ತಿವೆ. ಯಾವ ಮಾಧ್ಯಮ ಅಧಿಕಾರಿ ವರ್ಗಗಳ ಅಥವಾ ಸಮಾಜದಲ್ಲಿ ಉನ್ನತ ಹಂತದಲ್ಲಿರೋ ವ್ಯಕ್ತಿಗಳ ತಪ್ಪುಗಳನ್ನು ಎತ್ತಿ ತೋರಿಸಿ ಸರಿದಾರಿಗೆ ತರಬೇಕಿತ್ತೋ ಅದನ್ನು ಎಳ್ಳಷ್ಟೂ ಮಾಡುತ್ತಿಲ್ಲ. ಅದರ ಹೊರತಾಗಿ ಅವರ ತಪ್ಪುಗಳೇ ಅಥವಾ ಪ್ರಮಾದಗಳೇ ಬಂಡವಾಳ ಆಗ್ತಿದೆ ಇಂತಾ ವಸೂಲಿ ಮಾಧ್ಯಮಗಳಿಗೆ.

ಉದಾಹರಣೆಗೆ ಹೇಳ್ಬೇಕು ಅಂದ್ರೆ ಹೆಚ್ಚಿನ ಟಿವಿ ಜರ್ನಲಿಸ್ಟ್ಗಳು ಇಂತಾ ಅಕ್ರಮಗಳಲ್ಲಿ ಭಾಗಿ ಆಗ್ತಿದ್ದಾರೆ. ರಾಜ್ಯ ಸಿಸಿಬಿ ಪೊಲೀಸ್ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ರಾಜ್ಯದಲ್ಲೇ ಬಹಳಷ್ಟು ಸುದ್ದಿ ಮಾಡಿದ ಆಂಬಿಡೆಂಟ್ ನಂತಾ ಹೈ ಪ್ರೊಫೈಲ್ ಕೇಸ್ಗಳಲ್ಲೇ ಪತ್ರಕರ್ತರ ಹೆಸರು ಓಡಾಡ್ತಿದೆ. ಅದರ ನಂತರ ಓಡಾಡಿದ ವೈದ್ಯರೊಬ್ಬರ ಲೈಂಗಿಕ ಪ್ರಕರಣವೊಂದನ್ನ ಬ್ಲಾಕ್ಮೇಲ್ಗೆ ಬಳಸಿಕೊಂಡ ವಿಚಾರದಲ್ಲಿ ಪತ್ರಕರ್ತರ ತಲೆದಂಡ ಹಲವಷ್ಟು ಸುದ್ದಿ ಮಾಡಿತ್ತು. ಸಧ್ಯ ಈಗ ಚಾಲ್ತಿಯಲ್ಲಿರೋ ಒಂದೊಂದೇ ಆರೋಪಿಗಳನ್ನು ಹಿಡಿದು ಒಳಗೆ ಹಾಕ್ತಿರೋ ಎಂಬಿ ಪಾಟೀಲರ ಟಾರ್ಗೆಟ್ ಮಾಡಿದ ಕೇಸ್ನಲ್ಲಿ ಪತ್ರಕರ್ತರು ಭಾಗಿಯಾಗಿದ್ದು ಎದ್ದು ಕಾಣ್ತಿದೆ. ರಾಜಕಾರಣಿಯೊಬ್ಬರ ಲೈಂಗಿಕ ಅಫೈರ್ ಕೇಸ್ ಕೂಡ ಪತ್ರಕರ್ತರಿಗೆ ಆಹಾರವಾಗ್ತಿದೆ. ತೀರಾ ಕೆದಕುತ್ತಾ ಹೋದ್ರೆ ದಿನಕ್ಕೊಂದು ವಸೂಲಿ ಕಥೆಗಳು ಮಾಧ್ಯಮಗಳ ಒಳಗೆ ಯಥೇಚ್ಛವಾಗಿ ಸಿಕ್ಕುತ್ತಾ ಹೋಗುತ್ತವೆ. ತೀರಾ ವಯುಕ್ತಿಕ ಅನ್ನಿಸೋ ಸ್ಟೋರಿಗಳಿಂದಲೂ ಸಹ ವಸೂಲಿ ವೀರರು ಕಮಿಷನ್ ಪಡೆದುಕೊಳ್ಳುವಷ್ಟು ಹದಗೆಟ್ಟಿದೆ ಇವತ್ತಿನ ಪತ್ರಿಕೋದ್ಯಮ. ನಿಮಗೆ ಆಶ್ಚರ್ಯದ ಜೊತೆಗೆ ಹೇಸಿಗೆ ಸಹ ಹುಟ್ಟಬಹುದು, ಕನ್ನಡದ ಟಿವಿ ಚಾನಲ್ ಒಂದು ಇದಕ್ಕಂತಲೇ ಒಂದು ಟೀಂ ಕಟ್ಟಿಕೊಂಡು ಫೀಲ್ಡಿನಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕೆ ಚಾನಲ್ಲಿನ ಮುಖ್ಯಸ್ಥರೇ ಸಾತ್ ಕೊಡ್ತಿದ್ದಾರೆ. ಮೊದಲಿಗೆ ಸರಿಯಾದ ಮಿಕವೊಂದನ್ನು ಟಾರ್ಗೆಟ್ ಮಾಡಿ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳೀತಾರೆ. ನೆಕ್ಸ್ಟ್ ಸೀನಿನಲ್ಲಿ ಅದೇ ಸ್ಟಿಂಗ್ ಟೀಂ ಅದೇ ‘ಮಿಕ’ದ ಟೇಬಲ್ ಮೇಲೆ ವಸೂಲಿಗೆ ಇಳಿದಿರುತ್ತೆ. ಕೂತ ಬೈಟಕ್ಕಿಗೆ ಲಕ್ಷ, ಕೋಟಿ ನಿರಾಯಾಸವಾಗಿ ಜೇಬಿಗೆ ಬಂದು ಇಳಿಯುತ್ತೆ. ಇನ್ನೇನು ಬೇಕು. ಕೇಳಿದ್ರೆ ‘ನಾವು ಕೊಡ್ತಿರೋ ಪ್ರೋಗ್ರಾಂಗಳಿಗೆ ಬರೋ ಟಿಆರ್ಪಿ ಅಷ್ಟರಲ್ಲೇ ಇದೆ.. ಇನ್ನು ನೂರೈವತ್ತು ಇನ್ನೂರು ಮಂದಿ ಉದ್ಯೋಗಿಗಳಿಗೆ ಸಂಬಳ ಎಲ್ಲಿಂದ ಬರಬೇಕು’ ಅನ್ನೋ ಸಬೂಬಿನ ಉತ್ತರ ಕೂಡ ಇವರಿಂದ ಅಷ್ಟೇ ಸಲೀಸಾಗಿ ಬರುತ್ತೆ. ಹಾಗಾಗಿ ವಸೂಲಿ ಮಾಡಿಯೇ ಸಂಸ್ಥೆಯನ್ನು ಮುನ್ನಡೆಸಬೇಕಾದ ಕೃತಕ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಅಥವಾ ಅಂತಾ ಸುಲಭದ ದಾರಿ ಅಂತಲೂ ಹೇಳ್ಬಹುದು.

ಒಂದು ಕಾಲದಲ್ಲಿ ಪತ್ರಕರ್ತರು ಅಂದ್ರೆ ಸಾಮಾನ್ಯ ಜನ ಅತಿಯಾಗಿ ಗೌರವ ಕೊಡುವಂತಾ ಸ್ಥಾನಮಾನ ಹೊಂದಿದ್ದಾಗಿತ್ತು. ತಮ್ಮ ಸಮಸ್ಯೆಗಳನ್ನು, ನಮ್ಮ ಕೂಗನ್ನು ಸರ್ಕಾರದ ಮಟ್ಟಕ್ಕೆ, ಅಧಿಕಾರಿಗಳ ಮಟ್ಟಕ್ಕೆ ತಲುಪಿಸುವಂತಾ ಜವಾಬ್ದಾರಿ ಹೊಂದಿತ್ತು. ಆ ಮೂಲಕ ಆಡಳಿತ ವರ್ಗ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಂತಾ ಪಾತ್ರ ವಹಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯ ನಿರ್ವಹಿಸುವಂತಹ ಜವಾಬ್ದಾರಿ ಮಾಧ್ಯಮಕ್ಕೆ ಇದೆ. ಸಧ್ಯ ಇವೆಲ್ಲಾ ಘನತೆಯನ್ನ ಮಾಧ್ಯಮ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಪತ್ರಕರ್ತರು ಅಂದ್ರೆ ಮುಖ ಮುರಿಯುವ ಹಂತಕ್ಕೆ ಬಂದಿದ್ದಾರೆ ಜನಸಾಮಾನ್ಯರು. ಆ ಮೂಲಕ ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬೀಳುತ್ತಿದ್ದಾರೆ.

ಕೊನೆಯದಾಗಿ ಹೇಳೋದು ಏನಂದ್ರೆ ಪತ್ರಿಕೋಧ್ಯಮ ಅನ್ನೋದು ಚಿಕ್ಕ ಸರ್ಕಲ್. ಯಾವ ಸಂಸ್ಥೆಯ ಒಳಗೆ ಏನು ಆಗ್ತಿದೆ ಅನ್ನೋದು ಸುಲಭವಾಗಿ ಇನ್ನೊಂದು ಸಂಸ್ಥೆಗೆ ಗೊತ್ತಾಗಿ ಬಿಡುವಷ್ಟು ವಿಚಾರಗಳು ಗಾಳಿಯಷ್ಟೇ ವೇಗವಾಗಿ ಹರಿದಾಡುತ್ತೆ. ಇನ್ನು ವಸೂಲಿ ವೀರರ ವಿಚಾರಗಳು ಮಾಧ್ಯಮಗಳ ಒಳಗಿರೋ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದ್ರೆ ಹೊರಗೆಲ್ಲೂ ಲೀಕ್ ಮಾಡುವಂತಿಲ್ಲ. ಏನು ಮಾಡ್ತೀರಿ.. ಮಾಧ್ಯಮ ಧರ್ಮ ಅನ್ನೋ ಉತ್ತರ ಯಾವುದೇ ಅಂಜಿಕೆ ಅಳುಕಿಲ್ಲದೇ ಬಂದು ಹೋಗುತ್ತದೆ. ಇನ್ನಾದ್ರು ಎಚ್ಚರ ವಹಿಸುತ್ತಾರಾ? ಕಾಲವೇ ಉತ್ತರಿಸಬೇಕು.

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...