Homeಡೇಟಾ ಖೋಲಿಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

- Advertisement -
- Advertisement -

ಅರಿಸ್ಟಾಟಲ್ ಅಂತ್ ಒಬ್ಬ ಇದ್ದ. ಸುಮಾರು 2370 ವರ್ಷದ ಹಿಂದೆ. ಆ ಪುಣ್ಯಾತ್ಮ ಒಂದು ಮಾತು ಹೇಳಿ ಹೋದ. “ಅನೇಕ ಸಣ್ಣ ಸಣ್ಣ ವಸ್ತುಗಳು ಒಂದಕ್ಕೊಂದು ಸೇರುವುದರಿಂದ ಒಂದು ದೊಡ್ಡ ವಸ್ತು ಆಗಿರುತ್ತದೆ. ಆದರೆ ತನ್ನೊಳಗಿನ ಭಾಗಗಳಿಂದ ಆದ ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ಭಿನ್ನವಾಗಿರುತ್ತದೆ” ಎಂದು.

ಆದ್ರ ಆನಂತರ ಬಂದ ಕೆಲ ಮಹಾನುಭಾವರು ಅದನ್ನ ಬದಲು ಮಾಡಿದರು: “ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ” ಅಂತ. ಕೇವಲ ಒಂದು ಪದ ಬದಲಿ ಮಾಡಿದ್ರ ಎಷ್ಟು ಅಪಾರ್ಥ ಆಗತಾದ ಅನ್ನೋದು ಇದರಿಂದಾ ಗೊತ್ತಾಗ್ತದ.

ಇದನ್ನ ಗೆಸ್ಟಾಲ್ಟ್ ನಿಯಮ ಅಂತ ಕರೆದರು. ಗೆಸ್ಟಾಲ್ಟ್ ಅನ್ನೋದಕ್ಕ ಕನ್ನಡದೊಳಗ ರೂಪ, ಆಕಾರ ಅಂತ ಕರಿಯಬಹುದು.

ಹಂಗಾರ 20ನೆ ಶತಮಾನದ ಮರಿ ಅರಿಸ್ಟಾಟಲ್‌ಗಳು ರೂಪಿಸಿದ ‘ಗೆಸ್ಟಾಲ್ಟ್ ಥೆರಪಿ’ ಅಥವ ‘ಆಕಾರ ಸಿದ್ಧಾಂಥದ ರೋಗ ನಿದಾನ’ದ ಅರ್ಥ ಏನು? ಸರಳವಾಗಿ ಹೇಳೋದಾದರ, ಒಬ್ಬ ಮನುಷ್ಯನ ವ್ಯಕ್ತಿತ್ವ ತನ್ನ ದೇಹ-ಮನಸ್ಸು-ಸ್ವಂತ ವಿಚಾರ, ಹೊರಗಿನ ಪ್ರಭಾವ, ಸುತ್ತಲಿನ ಪರಿಸ್ಥಿತಿ, ಎಲ್ಲಾ ಸೇರಿ ಆಗಿರ್ತದ. ಈ ರೀತಿ ರೂಪುಗೊಂಡಿರುವುದನ್ನ ವ್ಯಕ್ತಿತ್ವ ಅನ್ನುವುದು. ಒಬ್ಬನ ಸ್ವಭಾವದ ಭಾಗಗಳಾದ ದೇಹ, ಮನಸ್ಸು, ವಿಚಾರ, ಪ್ರಭಾವ, ಪರಿಸ್ಥಿತಿ ಮುಂತಾದವುಗಳ ಒಟ್ಟು ಮೊತ್ತಕ್ಕಿಂತ ಅದು ದೊಡ್ಡದು ಅಂತ ಅವರು ವಾದಿಸಿದರು. ಆ ಮನೋವಿಜ್ಞಾನಿಗಳ ಗುಂಪಿನಲ್ಲಿ ವಿಲ್ಲ್ಹೆಲ್ಮ್ ಉಂಟ್, ಕರ್ಟ್ ಕೊಫ್ಕಾ, ಮ್ಯಾಕ್ಸ್
ವೆರ್ಥೆಮೆರ್, ಫ್ರಿಟ್ಸ್ ಪೆರ್ಲ್ಸ್, ವೂಲ್ಫ್‌ಗ್ಯಾಂಗ್ ಕೊಹ್ಲರ್, ಇತ್ಯಾದಿಗಳು ಇದ್ದರು.
ಅವರು ಪಾಪ ತಮ್ಮ ಕ್ಷೇತ್ರಕ್ಕ ತಮ್ಮ ಕೊಡುಗೆ ಕೊಟ್ಟರು, ಹೋದರು. ಆ ಸಿದ್ಧಾಂತ ಪಾಲಿಸೋ ವಿದ್ವಾಂಸರು ಈಗಲೂ ಇದ್ದಾರ.

ಆದರ ಪ್ರಾಚೀನ ಕಾಲದಿಂದಲೂ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ವಿಶ್ವ ಗುರು ಆಗಿರುವ ಭಾರತದ ಕೆಲವು ತಜ್ಞರು ಈ ಗೆಸ್ಟಾಲ್ಟ್ ಸಿದ್ಧಾಂತವನ್ನು ಹೊಸ ಕಣ್ಣಿನಿಂದ ನೋಡಿದರು. ಅದು ಅನ್ವಯ ಆಗುವುದು ನಮ್ಮ ದೇಹಕ್ಕೆ ಅಲ್ಲಾ, ನಮ್ಮ ದೇಶಕ್ಕೆ ಅಂತ ಚೀರಿ ಹೇಳಿದರು.

ಅವ್ರ ಪ್ರಕಾರ ಭಾರತ ಎಂಬೋ ರಾಷ್ಟ್ರ, ಎಲ್ಲಾ ರಾಜ್ಯಗಳ ಒಟ್ಟು ಮೊತ್ತಕ್ಕಿಂತಲೂ ದೊಡ್ಡದು, ಭವ್ಯವಾದದ್ದು. ಭಾರತ ಅನ್ನುವುದು ಕೇವಲ ರಾಜ್ಯಗಳ ಸಮೂಹ ಅಲ್ಲ, ಅದು ಅದಕ್ಕಿಂತಲೂ ದೊಡ್ಡದು, ಭಿನ್ನವಾದದ್ದು, ಭವ್ಯವಾದದ್ದು. ಒಟ್ಟಿನಲ್ಲಿ ಇದು ಒಕ್ಕೂಟ ಅಲ್ಲ, ಸಂಯುಕ್ತ ಸಂಘ ಅಲ್ಲ, ಕೇವಲ ರಾಜ್ಯಗಳ ಒಂದು ಗುಂಪು. ಹೀಗಾಗಿ, ದೇಶದ ಅಸ್ಮಿತೆ ಅನ್ನೋದು ದೊಡ್ಡದು. ರಾಜ್ಯಗಳ ಅನನ್ಯತೆ ಅಥವಾ ತನ್ನತನ ಅನ್ನೋದು ಯಾವ ಲೆಕ್ಕಕ್ಕೂ ಇಲ್ಲ.

ಈ ಪೀಠಿಕೆಯ ನಂತರ ನಮ್ಮ ವಿಷಯಕ್ಕ ಬರೋಣ. ಅದು ಮಾಧ್ಯಮ ನಲ್ಲರ ಬಗ್ಗೆ. ಈ ಹೊತ್ತಿನ ಮಾಧ್ಯಮ ನಲ್ಲರು ಯಾರು ಅಂದರ ಸದಾ ಸುದ್ದಿಯಲ್ಲಿ ಇರುವ ಕೆಲ ರಾಜ್ಯದ ಮುಖ್ಯ ಮಂತ್ರಿಗಳು. ಸುದ್ದಿ ಎನ್ನುವುದು ನಮ್ಮ ದೇಶದಾಗ ಬಹಳ ತಟಸ್ಥ ಹಾಗೂ ಯಾವ ಪಕ್ಷಕ್ಕೂ ಸೇರದೆ ಇರೋದರಿಂದ ಅವರು ಒಳ್ಳೆ ಕೆಲಸ ಮಾಡಿದಾಗ ಅಥವ ಕೆಟ್ಟ ಕೆಲಸ ಮಾಡಿದಾಗ ಅವರು ಸುದ್ದಿ ಮಾಡ್ತಾರ.

ಅದರೊಳಗ ಕೆಲವು ಹೆಸರು – ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿನರಾಯಿ ವಿಜಯನ್, ಹೇಮಂತ್ ಸೊರೆನ್, ಅಜಯ್ ಸಿಂಗ್ ಬಿಸ್ಟ್ ಅಲಿಯಾಸ್ ಯೋಗಿ ಆದಿತ್ಯನಾಥ್, ಬಿ ಎಸ್ ಯಡಿಯೂರಪ್ಪ, ಇತ್ಯಾದಿ. ಇವರು ಜಾಸ್ತಿ ಹೆಸರು ಮಾಡಿದಾಗಲೆಲ್ಲಾ ಪಂಥ ಪ್ರಧಾನ ಸೇವಕರ ಹೆಸರು ಮರೆ ಆಗಲಿಕ್ಕೆ ಸುರು ಆಗೇದ ಅಂತ ಕೆಲವರಿಗೆ ಚಡಪಡಿಕೆ ಆಗಲಿಕ್ಕೆ ಸುರು ಆಗ್ತದ. ಅವರು ಏನು ಸಣ್ಣ ಸಣ್ಣವರಿಗೆಲ್ಲಾ ಪ್ರಾಮುಖ್ಯತೆ ಕೊಡೋದು? ದೊಡ್ಡವರನ್ನ ಮರೆತರೆ ಹೆಂಗ? ಅಂತ ಜೋರಾಗಿ ಹೇಳ್ತಾರ, “ನಿನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದೊಡೆ ಎಂತಯ್ಯಾ?” ಅಂತ ಗೋಳಾಡುತ್ತಾರೆ. ಅವರ ಮನಸ್ಸಿನಾಗ ಎರಡು ತಪ್ಪು ಕಲ್ಪನೆಗಳು ಇರಬಹುದು. ಒಂದು ಪ್ರಧಾನಿ ಪಟ್ಟ ಅನ್ನೋದು ಸರ್ವ ಪ್ರಥಮ ಪ್ರಮುಖ ಅನ್ನೋದು, ಇನ್ನೊಂದು ರಾಜ್ಯಗಳು ಕನಿಷ್ಠ, ದೇಶ ಶ್ರೇಷ್ಠ ಅನ್ನೋದು. ಅವರೆಲ್ಲ ನಮ್ಮ ಕಾಲದ ಗೆಸ್ಟಾಲ್ಟ್ ನಂಬಿಕಸ್ಥರು.

ಅವರ ನಂಬಿಕೆ ತಪ್ಪು. ಅದಕ್ಕೆ ಯಾವುದೇ ಸಾಮಾಜಿಕ ವಿಜ್ಞಾನದ ಆಧಾರ ಇಲ್ಲ. ಮನೋವಿಜ್ಞಾನದ ಒಳಗ ಈ ವಿಚಾರಕ್ಕೆ ಮನ್ನಣೆ ಇರಬಹುದು. ಅದರಿಂದ ಬಹಳ ಜನ ಗುಣ ಆಗಿರಬಹುದು. ಆದರ ರಾಜ್ಯಶಾಸ್ತ್ರದೊಳಗ ಇದಕ್ಕೆ ಮನ್ನಣೆ ಇಲ್ಲ. ಇದು ಬಹು ಚರ್ಚಿತ ವಿಷಯ ಅಷ್ಟೇ ಅಲ್ಲ, ಬಹಳ ಜನ ಪಂಡಿತರಿಂದ ಟೀಕೆ-ನಿಂದನೆಗೆ ಒಳಗಾದ ವಿಷಯ. ರಾಜ್ಯಗಳ ಅನನ್ಯತೆ ಅನ್ನೋದು, ದೇಶದ ಅಸ್ಮಿತೆಗಿಂತ ದೊಡ್ಡದು. ರಾಜ್ಯಗಳಿಂದ ದೇಶಕ್ಕ ಪ್ರಾಮುಖ್ಯತೆ ಬರ್ತದ. ಉಲ್ಟಾ ಅಲ್ಲಾ.

ಇದಕ್ಕೆ ಒಂದು ಉದಾಹರಣೆ ಕೊಡೋಣ. 2015ರಲ್ಲಿ ಭಾರತದಿಂದ ಕಿರಿಯ ಐಪಿಎಸ್ ಅಧಿಕಾರಿಗಳ ತಂಡ ಅಮೆರಿಕ ದೇಶದ ಅಧ್ಯಯನ ಪ್ರವಾಸಕ್ಕ ಹೋಗಿತ್ತು. ಅವಾಗ ಅವರು ಅಲ್ಲಿನ ಕೆಲವು ಕೇಂದ್ರ ಪೊಲೀಸು ಪಡೆಗಳಾದ ಸಿಐಎ, ಎಫ್‌ಬಿಐ, ಐಆರ್‌ಎಸ್‌ಗಳ ಕಚೇರಿಗೆ ಕರಕೊಂಡು ಹೋದರು. ಆಮ್ಯಾಲೆ ಲಾಸ್ ಎಂಜಲಿಸ್, ಫ್ಲೋರಿಡಾ, ಕೆಂಟಕಿ, ನ್ಯುಯಾರ್ಕ್, ವಾಶಿಂಗ್‌ಟನ್ ಇತ್ಯಾದಿ ರಾಜ್ಯಗಳ ಪೊಲೀಸು ಅಧಿಕಾರಿಗಳ ಜೊತೆ ಭೇಟಿ ಮಾಡಿಸಿದರು.

ಅವಾಗ ಭಾರತೀಯ ಅಧಿಕಾರಿಗಳು ನಂಬಲಿಕ್ಕೆ ಸಾಧ್ಯವಿಲ್ಲದ ಎರಡು ವಿಷಯ ಅವರಿಗೆ ಗೊತ್ತಾತು. ಒಂದು ಅಲ್ಲಿ ಐಪಿಎಸ್ಸು-ಐಎಎಸ್ಸು ಅನ್ನೋದು ಇಲ್ಲ್ಲ.

ಇನ್ನೊಂದು ಅದು ಏನು ಅಂದರ ಅಮೆರಿಕ ದೇಶದಲ್ಲಿ ಕೇವಲ ಒಂದು ಪೊಲೀಸು ವ್ಯವಸ್ಥೆ ಇಲ್ಲ. ಅಲ್ಲೇ ಸುಮಾರು 19,000 ವಿವಿಧ ವ್ಯವಸ್ಥೆಗಳು ಇವೆ. ನಮ್ಮ ಊರಿನಲ್ಲಿ ಪೊಲೀಸು ಕೆಲಸ ಹೆಂಗ ಮಾಡಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿರುತ್ತದೆ. ನನ್ನ ಊರಿಗೆ ಭೇಟಿಯೇ ನೀಡದ ವಾಶಿಂಗ್‌ಟನ್‌ನ ಹಿರಿಯ ಅಧಿಕಾರಿಗೆ ಏನು ಗೊತ್ತಿರ್ತದ ಮಣ್ಣು ಅಂತ ಅಲ್ಲಿನ ಪುಟ್ಟ ನಗರದ ಪೊಲೀಸು ಅಧಿಕಾರಿ ಒಬ್ಬ
ಇವರಿಗೆ ಹೇಳಿದ.

ಇದನ್ನ ಜೀರ್ಣಿಸಿಕೊಳ್ಳಲಿಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಗಳಾದ ನಮ್ಮ ಐಪಿಎಸ್ಸು ಅಧಿಕಾರಿಗಳಿಗೆ ಸಾಧ್ಯ ಆಗಲಿಲ್ಲ. ಅದು ಹೇಗೆ ಸಾಧ್ಯ, ನೀವು ನಮಗೆ ಸುಳ್ಳು ಹೇಳುತ್ತಿದ್ದೀರಿ ಅಂತ ಹೇಳಿ ಜೋರಾಗಿ ಜಗಳ ಮಾಡಿದರು. ಆಮ್ಯಾಲೆ ಅಲ್ಲಿಯೇ ನೆಲೆಸಿದ್ದ ಭಾರತಿಯ ಮೂಲದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನ ಅಲ್ಲಿಯ ಪೊಲೀಸರು ಕರೆಸಿದರು. ಅವರು ಇವರಿಗೆ ತಿಳಿಸಿ ಹೇಳಿದರು. ನಿಮಗೆ ಸುಳ್ಳು ಹೇಳಿ ಇವರಿಗೆ ಯಾವ ಲಾಭವೂ ಇಲ್ಲ. ಇಲ್ಲೇ ಇರುವುದು ನೈಜ ಒಕ್ಕೂಟ ವ್ಯವಸ್ಥೆ. ಭಾರತದ ಒಕ್ಕೂಟ ವ್ಯವಸ್ಥೆ ಇರೋದು ಬರೀ ಕಾಗದದ ಮೇಲೆ ಅಂತ ಅವರು ತಿಳಿ ಹೇಳುವಾಗ ರಾತ್ರಿ ಆಗಿತ್ತು. ಎಲ್ಲರೂ ಊಟ ಮಾಡಿ ತಲೆನೋವಿನ ಮಾತ್ರೆ ತೊಗೊಂಡು ಮಲಗಿಕೊಂಡರು. ಅವರು ಮರಳಿ ಭಾರತಕ್ಕೆ ಬಂದರೂ ಕೂಡ ಅವರಿಗೆ ಅಲ್ಲಿನ ಪೊಲೀಸು ವ್ಯವಸ್ಥೆ ಅರ್ಥ ಅಗಲಿಲ್ಲ.

ಈ ಕಳೆದ ಐದಾರು ವರ್ಷದೊಳಗ ಎರಡು ಶಬ್ದ ಮತ್ತ ಮತ್ತ ಬಳಕೆ ಆಗಲಿಕ್ಕೆ ಹತ್ತಿದ್ದಾವು. ಅವು ಯಾವಪಾ ಅಂದ್ರ – ವಿಕೇಂದ್ರೀಕರಣ ಮತ್ತು ಒಕ್ಕೂಟ ವ್ಯವಸ್ಥೆ. ಅವು ನಮಗ ಈಗ ಎಷ್ಟು ಮುಖ್ಯ ಅಗ್ಯಾವು ಅನ್ನೋದು ನಾವು ತಿಳಕೊಬೇಕು. ಆ ದಿಕ್ಕಿನಾಗ ಇದು ಒಕ್ಕೂಟ ವ್ಯವಸ್ಥೆಯ ಪರಿಚಯದ ಪ್ರಯತ್ನ. ಉಳಿದದ್ದು ಮುಂದ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...