Homeಅಂಕಣಗಳುಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

ಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

- Advertisement -
- Advertisement -

| ಡಾ. ವಾಸು ಎಚ್.ವಿ |

‘ಮುಖ್ಯವಾಹಿನಿ’ ಮಾಧ್ಯಮಗಳ ಕೊಳಕುತನವನ್ನು ನೋಡಿ ಅಪಹಾಸ್ಯ ಮಾಡಿಕೊಂಡು ನಗುವುದು ಒಮ್ಮೊಮ್ಮೆ ಅಪಾಯಕಾರಿಯಾದುದು. ಏಕೆಂದರೆ ಇಂತಹ ಮಾಧ್ಯಮಗಳು ಜೀವವಿರೋಧಿಯಾಗಿದ್ದು ಪ್ರಜಾತಂತ್ರದ ಬುಡಕ್ಕೆ ಕೊಳ್ಳಿಯಿಡುತ್ತಿವೆ. ಆದರೆ ಅವನ್ನು ಬಯ್ದುಕೊಳ್ಳುತ್ತಾ, ಆತಂಕ ಪಡುತ್ತಾ, ವ್ಯಕ್ತಿಗತವಾಗಿ ಯಾರನ್ನೋ ಗುರಿ ಮಾಡುತ್ತಾ ಕಾಲವ್ಯಯ ಮಾಡುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪರ್ಯಾಯದ ನಿರ್ಮಾಣ ಮಾತ್ರ ಈ ವಿಷವ್ಯೂಹದಿಂದ ನಮ್ಮೆಲ್ಲರನ್ನು ಮೇಲೆತ್ತಬಹುದು.

ಇದರಲ್ಲಿ ಒಂದು ತೊಡಕಿದೆ. ಪರ್ಯಾಯದ ಮಾತಾಡುವವರು ಸಮಾಜದ ಮುಖ್ಯವಾಹಿನಿಯಲ್ಲಿ ಅಂತಹ ದೊಡ್ಡ ಪರಿಣಾಮ ಬೀರದ, ಶುದ್ಧ ಮತ್ತು ರ್ಯಾಡಿಕಲ್ ಕಂಟೆಂಟ್ ಹೊಂದಿರುವ ಪುಟ್ಟ ಪ್ರಯತ್ನದ ಕಡೆಗೆ ಒತ್ತು ಕೊಡುತ್ತಾರೆ. ಮೊದಲೇ ಅಂಚಿನಲ್ಲಿರುವುದನ್ನು, ಪರ್ಯಾಯದ ಹೆಸರಿನಲ್ಲಿ ಅಂಚಿನಲ್ಲೇ ಉಳಿಸುವುದು ಪರ್ಯಾಯವಾಗಲಾರದು. ಮುಖ್ಯವಾಹಿನಿಯ ಘಾತುಕ ಗಾತ್ರವನ್ನು ಹಿಮ್ಮೆಟ್ಟಿಸಿ, ಅದೇ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುವ ಸೃಜನಶೀಲ ಮಾರ್ಗವನ್ನು ಶೋಧಿಸಿ, ಸಾಕಾರಗೊಳಿಸಿ ಜಯಿಸುವುದೇ ನಿಜವಾದ ಪರ್ಯಾಯ.

ಈವರೆಗಿನ ಪರಿಭಾಷೆಯು ತಪ್ಪು ಅರ್ಥ ಕೊಡುವುದೆಂಬ ಕಾರಣಕ್ಕೆ, ಪರ್ಯಾಯ ಮಾಧ್ಯಮದ ಬದಲಿಗೆ ಹೊಸ ಮಾಧ್ಯಮ ಎಂಬ ಪದವನ್ನು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಮಾಧ್ಯಮಗಳು ಉಳ್ಳವರ ಕಪಿಮುಷ್ಟಿಯಲ್ಲಿ ಸೇರುವುದು ಮತ್ತು ಹಳತಾಗುವುದು ಒಟ್ಟಿಗೇ ನಡೆಯುತ್ತಿರುತ್ತದೆ. ಆ ನಂತರ ಹೊಸ ಮಾಧ್ಯಮ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳನ್ನು ಹೊಸ ಮಾಧ್ಯಮಗಳೆಂದು ಕರೆಯಲಾಗುತ್ತದಾದರೂ, ಅಲ್ಲೊಂದು ವಿಪರ್ಯಾಸವಿದೆ. Social media is not so social ಎಂಬ ಮಾತಿದೆ. ಏಕೆಂದರೆ, ಅದೂ ಸಹಾ ಕಾರ್ಪೋರೇಟ್ ಲಾಭವನ್ನು ಹಿಗ್ಗಿಸಲೆಂದೇ ಹೆಚ್ಚೆಚ್ಚು ಪುನರ್ರೂಪಿತಗೊಳ್ಳುತ್ತಿದೆ.

ಅಂದರೆ, ಹೊಸ ಮಾಧ್ಯಮವು ಬಹುಬೇಗ ಹಳತಾಗುತ್ತಿರುವ ಕಾಲದಲ್ಲಿ ನಾವು ನವನವೀನ ದಾರಿಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಲಂಕೇಶರು 90ರ ದಶಕದ ಮಧ್ಯಭಾಗದಲ್ಲೇ ‘ಪತ್ರಿಕೆ’ಯ ಬರಹದಲ್ಲಿ ಅದನ್ನು ಹೇಳಿದ್ದರು. ಆಗಿಂದಾಗ್ಗೆ ಪೊರೆ ಕಳಚದೇ ಮಾಧ್ಯಮವು ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಮಾತಾಗಿತ್ತು. ಲಂಕೇಶರು ರಾಜಕೀಯ ಮತ್ತು ಸಾಹಿತ್ಯಗಳನ್ನು ಪತ್ರಿಕೆಯ ಪ್ರಮುಖ ಭಾಗಗಳನ್ನಾಗಿಸಿ ಜಾಣ ಜಾಣೆಯರನ್ನು ಓರಿಯೆಂಟ್ ಮಾಡಲು ಟ್ಯಾಬ್ಲಾಯ್ಡ್ ವಾರಪತ್ರಿಕೆಯನ್ನು ಪ್ರಭಾವೀ ಹತಾರವಾಗಿ ಬಳಸಿದರು.

ಟ್ಯಾಬ್ಲಾಯ್ಡ್ ಪತ್ರಿಕೆಗಳು ತಳಮುಟ್ಟಿ, ಮುದ್ರಣ ಮಾಧ್ಯಮ ತನ್ನ ಬಿರುಸು ಕಳೆದುಕೊಳ್ಳುತ್ತಿರುವ ಯುಗದಲ್ಲಿ ‘ನ್ಯಾಯಪಥ’ ಆರಂಭವಾಗಿದೆ. ಹಾಗಾದರೆ, ಇದು ಕೇವಲ ಒಂದು ಸಾಂಕೇತಿಕ ಪ್ರಯತ್ನವಾಗಿ ಮುಂದುವರೆಯಬೇಕೆಂಬುದೇ ನಮ್ಮ ಯೋಜನೆಯೇ? ಖಂಡಿತಾ ಅಲ್ಲ. ನಷ್ಟದಲ್ಲೇ ನಡೆಯುತ್ತಿರುವ ಬಹುಪಾಲು ಟಿವಿ ಚಾನೆಲ್‍ಗಳು ಮುಂದೆಂದೋ ಕ್ಲಿಕ್ ಆಗುತ್ತೇವೆಂಬ ಭ್ರಾಂತಿಯಲ್ಲಿ ಕಾಲು ಎಳೆದುಕೊಂಡು ನಡೆಯುತ್ತವಲ್ಲಾ ಹಾಗೆ ಇದನ್ನು ನಡೆಸಲಾಗುತ್ತಿದೆಯೇ? ಇಲ್ಲವೇ ಇಲ್ಲ. ನ್ಯಾಯಪಥ ಪತ್ರಿಕೆ ಅಥವಾ ಈಗ ಚುರುಕು ಹಾಗೂ ವ್ಯಾಪಕತೆ ಪಡೆದುಕೊಳ್ಳುತ್ತಿರುವ ವೆಬ್ ಪೋರ್ಟಲ್‍ಗಳು ಹೊಸ ಮಾಧ್ಯಮ ರೂಪಿಸಲು ಬೇಕಾದ ಜನರನ್ನು ಒಟ್ಟುಗೂಡಿಸುವ ವೇದಿಕೆಗಳಷ್ಟೇ.

ಎಲ್ಲಾ ಕಾಲದಲ್ಲೂ ಅತ್ಯಂತ ಪ್ರಬಲವಾದ ಮಾಧ್ಯಮ ಯಾವುದು? ಅದು ಜನರೇ ವಾಹಕರಾಗಿ ಪ್ರಸಾರ ಮಾಡುವ ಮಾಧ್ಯಮ. ಜನರೇ ತಮಗೆ ಬೇಕಾದ ಕಥನವನ್ನೂ ಕಟ್ಟಿಕೊಳ್ಳುವಂತಾದರೆ? ಅಂತಹ ಮಾಧ್ಯಮವನ್ನು ಯಾವುದೂ ಸರಿಗಟ್ಟಲಾರದು. ವಿವಿಧ ದೇಶಗಳಲ್ಲಿ ತಮ್ಮ ಸ್ಥಾವರಗಳನ್ನು ಹೊಂದಿ, ವಚ್ರ್ಯುಯಲ್ ಜಗತ್ತಿನಲ್ಲಿ ಜಂಗಮವಾಗಿರುವ ಸಾಮಾಜಿಕ ಜಾಲತಾಣಗಳು ಜನರ ಆಲೋಚನೆಗಳು ಹರಳುಗಟ್ಟಿ ಪ್ರಸಾರಗೊಳ್ಳಲು ವೇದಿಕೆಯನ್ನು ಒದಗಿಸಿವೆ. ಮೇಲೆ ಹೇಳಿದಂತೆ ಇದಕ್ಕೆ ಮಿತಿಗಳಿವೆಯಾದರೂ, ಈ ಸದ್ಯ ಅವು ಇನ್ನೂ ವಿಸ್ತಾರಗೊಳ್ಳುವ ಹಂತದಲ್ಲೇ ಇವೆ. ಮುಂದೊಂದು ದಿನ (ಇಂದು ಕಾಶ್ಮೀರದಲ್ಲಿ ಆಗಿರುವಂತೆ) ಸ್ಥಗಿತಗೊಳ್ಳುವ ಅಥವಾ ಸಂಪೂರ್ಣ ಸೆಲೆಕ್ಟಿವ್ ಆಗುವುದಕ್ಕೆ ಮುಂಚೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದಾದರೂ, ಅಲ್ಲಿಯವರೆಗೆ ಅವು ನಮಗೆ ಕೆಲವು ಸಾಧ್ಯತೆಗಳನ್ನು ಒದಗಿಸುತ್ತವೆ.

ಬಲವಾದ ಹೊಸ ಮುಖ್ಯವಾಹಿನಿ ರೂಪಿಸಲು ಮೊದಲು ನಾವು ಓದುಗರ ಅಂದರೆ ಸಾಮಾನ್ಯ ಜನರ ಮುಂಚೂಣಿ ವಿಭಾಗದ ಹಿತಾಸಕ್ತಿಯನ್ನು ರೂಪಿಸುವುದು ಮುಖ್ಯ. ಆಗ ಅವರೇ ಸುದ್ದಿಯನ್ನು ರೂಪಿಸುತ್ತಾರೆ ಮತ್ತು ಅದರ ಪ್ರಸಾರಕ್ಕೂ ಕಾರಣರಾಗುತ್ತಾರೆ. ಎಲ್ಲಾ ಕಾಲದಲ್ಲೂ ಇವರೇ, ಅಂದರೆ ಈ ಸಾಮಾನ್ಯ ಜನರೇ, ಭಾರೀ ಬಹುಸಂಖ್ಯಾತರಾದ್ದರಿಂದ (overwhelming majority) ಅವರು ಸುದ್ದಿಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಇಳಿದರೆ ಅದನ್ನು ಯಾರಾದರೂ ಹೇಗೆ ಸರಿಗಟ್ಟಬಲ್ಲರು. ಅವರೇ ಅದಕ್ಕೆ ಬೇಕಾದ ಸಂಪನ್ಮೂಲವನ್ನೂ ರೂಢಿಸಿಕೊಳ್ಳುತ್ತಾರೆ. ಅಂದರೆ ಬಹಳ ಹೆಚ್ಚಿನ ಜನರು ಅದನ್ನು ಓದಿದರೆ ಜಾಹೀರಾತಿನ ಮೂಲಕ ಅಥವಾ ನೇರವಾಗಿ ಹಣ ನೀಡುವ ಮೂಲಕ.

ಈ ಬಹುಸಂಖ್ಯಾತ ಜನರನ್ನು ಅವರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಲು, ಕಥನ ರೂಪಿಸಲು, ಸುದ್ದಿ ಕಟ್ಟಲು ಓರಿಯೆಂಟ್ ಮಾಡುವುದೆಂದರೆ, ಅದು ಹೊಸ ಮಾಧ್ಯಮ ಕಟ್ಟಲು ಬೇಕಾದ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುವ ಕೆಲಸ. ಆ ಸವಾಲನ್ನು ನಾವೀಗ ಕೈಗೆತ್ತಿಕೊಳ್ಳಬೇಕಿದೆ.

ದೇಶದ ಬಹುಸಂಖ್ಯೆಯ ಜನರು ಪರ್ಯಾಯ ಚಿಂತನೆ, ಪ್ರಜ್ಞೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅವರೇ ಪಾಲ್ಗೊಳ್ಳುವ ಗುದ್ದಾಟದಿಂದ ಪಡೆಯುವ ಅನುಭವದ ಮೂಲಕವೇ. ಆ ರೀತಿಯಲ್ಲಿ ಬಹುಸಂಖ್ಯೆಯ ಜನರೆಲ್ಲರೂ ಒಂದಾಗಿ ನಿರ್ಮಿಸಹೊರಡುವ ಪರ್ಯಾಯ ಬೆಳೆಯದೇ, ಮಾಧ್ಯಮ ಮಾತ್ರ ಬೆಳೆದುಬಿಡುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವು ಶಾಶ್ವತ ಸಿನಿಕರು ಕೇಳಬಹುದು. ಹೌದು, ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮದು. ಅದು ಇಂದಿನ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳನ್ನು ಗಾತ್ರದಲ್ಲಿ ಮೀರದಿದ್ದರೂ, ಪರಿಣಾಮದಲ್ಲಿ ಬೀರುತ್ತದೆ. ಏಕೆಂದರೆ

ಮಾಧ್ಯಮವೆನ್ನುವುದು ಸಮಾಜದಲ್ಲಿ ವೇಗವರ್ಧಕದ ಕೆಲಸ ಮಾಡುತ್ತದೆಯೇ ಹೊರತು, ತಾನೇ ಸಮಾಜವಲ್ಲ.
ಅಂತಹ ‘ಮುಖ್ಯವಾಹಿನಿ’ ಮಾಧ್ಯಮವನ್ನು ಕಟ್ಟಿ ನಿಲ್ಲಿಸುವ ಯೋಚನೆಯನ್ನು ನಾವು ಹೊಂದಿದ್ದೇವೆ. ಹೇಗೆ ಎಂಬ ಯೋಜನೆಯನ್ನು ಜೊತೆಗೂಡಿ ರೂಪಿಸೋಣ. ಈ ನಿಟ್ಟಿನಲ್ಲಿ ನೀವೇನು ಜವಾಬ್ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...