Homeಅಂಕಣಗಳುಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

ಹೊಸ ಮಾಧ್ಯಮಕ್ಕೆ ಸ್ವಾಗತ ನೀವೂ ಅದರ ಭಾಗವಾಗಿರುವುದು ಗೊತ್ತೇನು?

- Advertisement -
- Advertisement -

| ಡಾ. ವಾಸು ಎಚ್.ವಿ |

‘ಮುಖ್ಯವಾಹಿನಿ’ ಮಾಧ್ಯಮಗಳ ಕೊಳಕುತನವನ್ನು ನೋಡಿ ಅಪಹಾಸ್ಯ ಮಾಡಿಕೊಂಡು ನಗುವುದು ಒಮ್ಮೊಮ್ಮೆ ಅಪಾಯಕಾರಿಯಾದುದು. ಏಕೆಂದರೆ ಇಂತಹ ಮಾಧ್ಯಮಗಳು ಜೀವವಿರೋಧಿಯಾಗಿದ್ದು ಪ್ರಜಾತಂತ್ರದ ಬುಡಕ್ಕೆ ಕೊಳ್ಳಿಯಿಡುತ್ತಿವೆ. ಆದರೆ ಅವನ್ನು ಬಯ್ದುಕೊಳ್ಳುತ್ತಾ, ಆತಂಕ ಪಡುತ್ತಾ, ವ್ಯಕ್ತಿಗತವಾಗಿ ಯಾರನ್ನೋ ಗುರಿ ಮಾಡುತ್ತಾ ಕಾಲವ್ಯಯ ಮಾಡುವುದು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪರ್ಯಾಯದ ನಿರ್ಮಾಣ ಮಾತ್ರ ಈ ವಿಷವ್ಯೂಹದಿಂದ ನಮ್ಮೆಲ್ಲರನ್ನು ಮೇಲೆತ್ತಬಹುದು.

ಇದರಲ್ಲಿ ಒಂದು ತೊಡಕಿದೆ. ಪರ್ಯಾಯದ ಮಾತಾಡುವವರು ಸಮಾಜದ ಮುಖ್ಯವಾಹಿನಿಯಲ್ಲಿ ಅಂತಹ ದೊಡ್ಡ ಪರಿಣಾಮ ಬೀರದ, ಶುದ್ಧ ಮತ್ತು ರ್ಯಾಡಿಕಲ್ ಕಂಟೆಂಟ್ ಹೊಂದಿರುವ ಪುಟ್ಟ ಪ್ರಯತ್ನದ ಕಡೆಗೆ ಒತ್ತು ಕೊಡುತ್ತಾರೆ. ಮೊದಲೇ ಅಂಚಿನಲ್ಲಿರುವುದನ್ನು, ಪರ್ಯಾಯದ ಹೆಸರಿನಲ್ಲಿ ಅಂಚಿನಲ್ಲೇ ಉಳಿಸುವುದು ಪರ್ಯಾಯವಾಗಲಾರದು. ಮುಖ್ಯವಾಹಿನಿಯ ಘಾತುಕ ಗಾತ್ರವನ್ನು ಹಿಮ್ಮೆಟ್ಟಿಸಿ, ಅದೇ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳುವ ಸೃಜನಶೀಲ ಮಾರ್ಗವನ್ನು ಶೋಧಿಸಿ, ಸಾಕಾರಗೊಳಿಸಿ ಜಯಿಸುವುದೇ ನಿಜವಾದ ಪರ್ಯಾಯ.

ಈವರೆಗಿನ ಪರಿಭಾಷೆಯು ತಪ್ಪು ಅರ್ಥ ಕೊಡುವುದೆಂಬ ಕಾರಣಕ್ಕೆ, ಪರ್ಯಾಯ ಮಾಧ್ಯಮದ ಬದಲಿಗೆ ಹೊಸ ಮಾಧ್ಯಮ ಎಂಬ ಪದವನ್ನು ಶೀರ್ಷಿಕೆಯಲ್ಲಿ ಬಳಸಲಾಗಿದೆ. ಮಾಧ್ಯಮಗಳು ಉಳ್ಳವರ ಕಪಿಮುಷ್ಟಿಯಲ್ಲಿ ಸೇರುವುದು ಮತ್ತು ಹಳತಾಗುವುದು ಒಟ್ಟಿಗೇ ನಡೆಯುತ್ತಿರುತ್ತದೆ. ಆ ನಂತರ ಹೊಸ ಮಾಧ್ಯಮ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳನ್ನು ಹೊಸ ಮಾಧ್ಯಮಗಳೆಂದು ಕರೆಯಲಾಗುತ್ತದಾದರೂ, ಅಲ್ಲೊಂದು ವಿಪರ್ಯಾಸವಿದೆ. Social media is not so social ಎಂಬ ಮಾತಿದೆ. ಏಕೆಂದರೆ, ಅದೂ ಸಹಾ ಕಾರ್ಪೋರೇಟ್ ಲಾಭವನ್ನು ಹಿಗ್ಗಿಸಲೆಂದೇ ಹೆಚ್ಚೆಚ್ಚು ಪುನರ್ರೂಪಿತಗೊಳ್ಳುತ್ತಿದೆ.

ಅಂದರೆ, ಹೊಸ ಮಾಧ್ಯಮವು ಬಹುಬೇಗ ಹಳತಾಗುತ್ತಿರುವ ಕಾಲದಲ್ಲಿ ನಾವು ನವನವೀನ ದಾರಿಯನ್ನು ನಮ್ಮದಾಗಿಸಿಕೊಳ್ಳಬೇಕಿದೆ. ಲಂಕೇಶರು 90ರ ದಶಕದ ಮಧ್ಯಭಾಗದಲ್ಲೇ ‘ಪತ್ರಿಕೆ’ಯ ಬರಹದಲ್ಲಿ ಅದನ್ನು ಹೇಳಿದ್ದರು. ಆಗಿಂದಾಗ್ಗೆ ಪೊರೆ ಕಳಚದೇ ಮಾಧ್ಯಮವು ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅವರ ಮಾತಾಗಿತ್ತು. ಲಂಕೇಶರು ರಾಜಕೀಯ ಮತ್ತು ಸಾಹಿತ್ಯಗಳನ್ನು ಪತ್ರಿಕೆಯ ಪ್ರಮುಖ ಭಾಗಗಳನ್ನಾಗಿಸಿ ಜಾಣ ಜಾಣೆಯರನ್ನು ಓರಿಯೆಂಟ್ ಮಾಡಲು ಟ್ಯಾಬ್ಲಾಯ್ಡ್ ವಾರಪತ್ರಿಕೆಯನ್ನು ಪ್ರಭಾವೀ ಹತಾರವಾಗಿ ಬಳಸಿದರು.

ಟ್ಯಾಬ್ಲಾಯ್ಡ್ ಪತ್ರಿಕೆಗಳು ತಳಮುಟ್ಟಿ, ಮುದ್ರಣ ಮಾಧ್ಯಮ ತನ್ನ ಬಿರುಸು ಕಳೆದುಕೊಳ್ಳುತ್ತಿರುವ ಯುಗದಲ್ಲಿ ‘ನ್ಯಾಯಪಥ’ ಆರಂಭವಾಗಿದೆ. ಹಾಗಾದರೆ, ಇದು ಕೇವಲ ಒಂದು ಸಾಂಕೇತಿಕ ಪ್ರಯತ್ನವಾಗಿ ಮುಂದುವರೆಯಬೇಕೆಂಬುದೇ ನಮ್ಮ ಯೋಜನೆಯೇ? ಖಂಡಿತಾ ಅಲ್ಲ. ನಷ್ಟದಲ್ಲೇ ನಡೆಯುತ್ತಿರುವ ಬಹುಪಾಲು ಟಿವಿ ಚಾನೆಲ್‍ಗಳು ಮುಂದೆಂದೋ ಕ್ಲಿಕ್ ಆಗುತ್ತೇವೆಂಬ ಭ್ರಾಂತಿಯಲ್ಲಿ ಕಾಲು ಎಳೆದುಕೊಂಡು ನಡೆಯುತ್ತವಲ್ಲಾ ಹಾಗೆ ಇದನ್ನು ನಡೆಸಲಾಗುತ್ತಿದೆಯೇ? ಇಲ್ಲವೇ ಇಲ್ಲ. ನ್ಯಾಯಪಥ ಪತ್ರಿಕೆ ಅಥವಾ ಈಗ ಚುರುಕು ಹಾಗೂ ವ್ಯಾಪಕತೆ ಪಡೆದುಕೊಳ್ಳುತ್ತಿರುವ ವೆಬ್ ಪೋರ್ಟಲ್‍ಗಳು ಹೊಸ ಮಾಧ್ಯಮ ರೂಪಿಸಲು ಬೇಕಾದ ಜನರನ್ನು ಒಟ್ಟುಗೂಡಿಸುವ ವೇದಿಕೆಗಳಷ್ಟೇ.

ಎಲ್ಲಾ ಕಾಲದಲ್ಲೂ ಅತ್ಯಂತ ಪ್ರಬಲವಾದ ಮಾಧ್ಯಮ ಯಾವುದು? ಅದು ಜನರೇ ವಾಹಕರಾಗಿ ಪ್ರಸಾರ ಮಾಡುವ ಮಾಧ್ಯಮ. ಜನರೇ ತಮಗೆ ಬೇಕಾದ ಕಥನವನ್ನೂ ಕಟ್ಟಿಕೊಳ್ಳುವಂತಾದರೆ? ಅಂತಹ ಮಾಧ್ಯಮವನ್ನು ಯಾವುದೂ ಸರಿಗಟ್ಟಲಾರದು. ವಿವಿಧ ದೇಶಗಳಲ್ಲಿ ತಮ್ಮ ಸ್ಥಾವರಗಳನ್ನು ಹೊಂದಿ, ವಚ್ರ್ಯುಯಲ್ ಜಗತ್ತಿನಲ್ಲಿ ಜಂಗಮವಾಗಿರುವ ಸಾಮಾಜಿಕ ಜಾಲತಾಣಗಳು ಜನರ ಆಲೋಚನೆಗಳು ಹರಳುಗಟ್ಟಿ ಪ್ರಸಾರಗೊಳ್ಳಲು ವೇದಿಕೆಯನ್ನು ಒದಗಿಸಿವೆ. ಮೇಲೆ ಹೇಳಿದಂತೆ ಇದಕ್ಕೆ ಮಿತಿಗಳಿವೆಯಾದರೂ, ಈ ಸದ್ಯ ಅವು ಇನ್ನೂ ವಿಸ್ತಾರಗೊಳ್ಳುವ ಹಂತದಲ್ಲೇ ಇವೆ. ಮುಂದೊಂದು ದಿನ (ಇಂದು ಕಾಶ್ಮೀರದಲ್ಲಿ ಆಗಿರುವಂತೆ) ಸ್ಥಗಿತಗೊಳ್ಳುವ ಅಥವಾ ಸಂಪೂರ್ಣ ಸೆಲೆಕ್ಟಿವ್ ಆಗುವುದಕ್ಕೆ ಮುಂಚೆ ಬದಲೀ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದಾದರೂ, ಅಲ್ಲಿಯವರೆಗೆ ಅವು ನಮಗೆ ಕೆಲವು ಸಾಧ್ಯತೆಗಳನ್ನು ಒದಗಿಸುತ್ತವೆ.

ಬಲವಾದ ಹೊಸ ಮುಖ್ಯವಾಹಿನಿ ರೂಪಿಸಲು ಮೊದಲು ನಾವು ಓದುಗರ ಅಂದರೆ ಸಾಮಾನ್ಯ ಜನರ ಮುಂಚೂಣಿ ವಿಭಾಗದ ಹಿತಾಸಕ್ತಿಯನ್ನು ರೂಪಿಸುವುದು ಮುಖ್ಯ. ಆಗ ಅವರೇ ಸುದ್ದಿಯನ್ನು ರೂಪಿಸುತ್ತಾರೆ ಮತ್ತು ಅದರ ಪ್ರಸಾರಕ್ಕೂ ಕಾರಣರಾಗುತ್ತಾರೆ. ಎಲ್ಲಾ ಕಾಲದಲ್ಲೂ ಇವರೇ, ಅಂದರೆ ಈ ಸಾಮಾನ್ಯ ಜನರೇ, ಭಾರೀ ಬಹುಸಂಖ್ಯಾತರಾದ್ದರಿಂದ (overwhelming majority) ಅವರು ಸುದ್ದಿಯನ್ನು ರೂಪಿಸುವುದು ಮತ್ತು ಪ್ರಸಾರ ಮಾಡುವುದಕ್ಕೆ ಇಳಿದರೆ ಅದನ್ನು ಯಾರಾದರೂ ಹೇಗೆ ಸರಿಗಟ್ಟಬಲ್ಲರು. ಅವರೇ ಅದಕ್ಕೆ ಬೇಕಾದ ಸಂಪನ್ಮೂಲವನ್ನೂ ರೂಢಿಸಿಕೊಳ್ಳುತ್ತಾರೆ. ಅಂದರೆ ಬಹಳ ಹೆಚ್ಚಿನ ಜನರು ಅದನ್ನು ಓದಿದರೆ ಜಾಹೀರಾತಿನ ಮೂಲಕ ಅಥವಾ ನೇರವಾಗಿ ಹಣ ನೀಡುವ ಮೂಲಕ.

ಈ ಬಹುಸಂಖ್ಯಾತ ಜನರನ್ನು ಅವರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಲು, ಕಥನ ರೂಪಿಸಲು, ಸುದ್ದಿ ಕಟ್ಟಲು ಓರಿಯೆಂಟ್ ಮಾಡುವುದೆಂದರೆ, ಅದು ಹೊಸ ಮಾಧ್ಯಮ ಕಟ್ಟಲು ಬೇಕಾದ ಸೃಜನಶೀಲ ದಾರಿಗಳನ್ನು ಕಂಡುಕೊಳ್ಳುವ ಕೆಲಸ. ಆ ಸವಾಲನ್ನು ನಾವೀಗ ಕೈಗೆತ್ತಿಕೊಳ್ಳಬೇಕಿದೆ.

ದೇಶದ ಬಹುಸಂಖ್ಯೆಯ ಜನರು ಪರ್ಯಾಯ ಚಿಂತನೆ, ಪ್ರಜ್ಞೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅವರೇ ಪಾಲ್ಗೊಳ್ಳುವ ಗುದ್ದಾಟದಿಂದ ಪಡೆಯುವ ಅನುಭವದ ಮೂಲಕವೇ. ಆ ರೀತಿಯಲ್ಲಿ ಬಹುಸಂಖ್ಯೆಯ ಜನರೆಲ್ಲರೂ ಒಂದಾಗಿ ನಿರ್ಮಿಸಹೊರಡುವ ಪರ್ಯಾಯ ಬೆಳೆಯದೇ, ಮಾಧ್ಯಮ ಮಾತ್ರ ಬೆಳೆದುಬಿಡುತ್ತದೆಯೇ ಎಂಬ ಪ್ರಶ್ನೆಯನ್ನು ಕೆಲವು ಶಾಶ್ವತ ಸಿನಿಕರು ಕೇಳಬಹುದು. ಹೌದು, ಬೆಳೆಯುತ್ತದೆ ಎಂಬ ವಿಶ್ವಾಸ ನಮ್ಮದು. ಅದು ಇಂದಿನ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳನ್ನು ಗಾತ್ರದಲ್ಲಿ ಮೀರದಿದ್ದರೂ, ಪರಿಣಾಮದಲ್ಲಿ ಬೀರುತ್ತದೆ. ಏಕೆಂದರೆ

ಮಾಧ್ಯಮವೆನ್ನುವುದು ಸಮಾಜದಲ್ಲಿ ವೇಗವರ್ಧಕದ ಕೆಲಸ ಮಾಡುತ್ತದೆಯೇ ಹೊರತು, ತಾನೇ ಸಮಾಜವಲ್ಲ.
ಅಂತಹ ‘ಮುಖ್ಯವಾಹಿನಿ’ ಮಾಧ್ಯಮವನ್ನು ಕಟ್ಟಿ ನಿಲ್ಲಿಸುವ ಯೋಚನೆಯನ್ನು ನಾವು ಹೊಂದಿದ್ದೇವೆ. ಹೇಗೆ ಎಂಬ ಯೋಜನೆಯನ್ನು ಜೊತೆಗೂಡಿ ರೂಪಿಸೋಣ. ಈ ನಿಟ್ಟಿನಲ್ಲಿ ನೀವೇನು ಜವಾಬ್ದಾರಿ ತೆಗೆದುಕೊಳ್ಳಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...