Homeಅಂಕಣಗಳುನಾನೂ ಗೋವುಗಳನ್ನು ಸಾಕಿದೆ, ಮಾರಿದೆ

ನಾನೂ ಗೋವುಗಳನ್ನು ಸಾಕಿದೆ, ಮಾರಿದೆ

- Advertisement -
- Advertisement -

| ಗೌರಿ ಲಂಕೇಶ್ |
10 ಮಾರ್ಚ್, 2010 (ಸಂಪಾದಕೀಯದಿಂದ)

ಯಡಿಯೂರಪ್ಪನ ‘ಬ್ರಾಹ್ಮಣಶಾಹಿ’ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಕುರಿತಂತೆ ನಿಮ್ಮ ಈ ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಬಹಳಷ್ಟು ಚರ್ಚಿಸಿವೆ. ಆದರೆ ಎಲ್ಲ ಚರ್ಚೆಗಳೂ ಆಹಾರ ಸಂಸ್ಕೃತಿ, ಸಂವಿಧಾನ, ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಆಯ್ಕೆ ಇತ್ಯಾದಿಗಳ ಸುತ್ತ ನಡೆದಿದೆ.

ಆದ್ದರಿಂದ ನಾನಿಲ್ಲಿ ರೈತರ ದೃಷ್ಟಿಕೋನದಿಂದ ಮತ್ತು ವೈಯಕ್ತಿಕ ಅನುಭವದಿಂದ ಹತ್ತಿರವಿರುವ ಅಮ್ಮನ ತೋಟದ ಜವಾಬ್ದಾರಿಯನ್ನು ಐದಾರು ವರ್ಷಗಳ ಹಿಂದೆ ವಹಿಸಿಕೊಂಡಾಗ ತೋಟದೊಂದಿಗೆ ಒಂದು ಜೊತೆ ಎತ್ತು ಬಂದಿದ್ದವು.

ಎರಡು ವರ್ಷಗಳ ಹಿಂದೆ ತೋಟವನ್ನು ನೋಡಿಕೊಳ್ಳಲು ಬಂದ ನಮ್ಮ ಲಿಂಗರಾಜು ಆ ಎರಡೂ ಎತ್ತುಗಳು ಮುದಿ ಆಗಿವೆ ಎಂದೂ, ಅವುಗಳನ್ನು ಮಾರಿ ಬೇರೆ ಜೋಡಿಯನ್ನು ಖರೀದಿಸಿದರೆ ಉತ್ತಮ ಎಂದೂ ಹೇಳಿದ. ಆ ಎತ್ತುಗಳಿಗೆ ಎಷ್ಟು ವಯಸ್ಸಾಗಿತ್ತೆಂದರೆ ಅವುಗಳಿಂದ ಯಾವ ಕೆಲಸವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವುಗಳನ್ನು ಮಾರದೆ ಹಾಗೆ ಇಟ್ಟುಕೊಳ್ಳುವುದೂ ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇವಿನ ಸಮಸ್ಯೆ.

ಇವತ್ತು ನೆಲಮಂಗಲದ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುತ್ತಿದೆ; ಹೊಲಗಳಿದ್ದ ಜಾಗಗಳಲ್ಲಿ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ; ಗೋಮಾಳಗಳು ಸೈಟುಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಎತ್ತುಗಳಿಗೆ ಎಲ್ಲಿಂದ ಮೇವು ತರುವುದು? ಹಿಂಡಿ, ಬೂಸಾ ಮಾತು ಬದಿಗಿರಲಿ, ಒಣಹುಲ್ಲು ಕೂಡ ಎಷ್ಟು ದುಬಾರಿ ಆಗಿದೆ ಎಂದರೆ ಒಂದು ಮೆದೆ ಹುಲ್ಲಿಗೆ ಇವತ್ತು ಕನಿಷ್ಠ ಆರು ಸಾವಿರ ರೂಪಾಯಿಗಳನ್ನು ತೆರಬೇಕು. ಇವತ್ತು ಹಲವಾರು ಚೆಡ್ಡಿಗಳು “ಗೋವು ಸಗಣಿ ಕೊಡುತ್ತದಲ್ಲ” ಎಂದೆಲ್ಲ ವಾದಿಸುತ್ತಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ಬೆಲೆಬಾಳುವ ಸಗಣಿಗಾಗಿ ಹತ್ತಾರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಹುಲ್ಲು ಖರೀದಿಸುವುದು ಎಷ್ಟು ಸಮಂಜಸ? ಅಷ್ಟು ಆರ್ಥಿಕ ಶಕ್ತಿ ಅದೆಷ್ಟು ರೈತರಿಗೆ ಇರುತ್ತದೆ? ಈಗಾಗಲೇ ಸಾಲ-ನಷ್ಟಗಳಡಿ ತತ್ತರಿಸುತ್ತಿರುವ ರೈತರ ಮೇಲೆ ಇಂತಹ ಇನ್ನೊಂದು ಆರ್ಥಿಕ ಹೊರೆಯನ್ನು ಹೊರಿಸುವಷ್ಟು ಅಮಾನವೀಯರಾಗಿದ್ದೇವೆಯೇ ನಾವು?

ತೋಟದ ಮುದಿ ಎತ್ತುಗಳನ್ನು ಮಾರಲು ಲಿಂಗರಾಜುವಿಗೆ ಹೇಳಿದೆ. ಅವುಗಳನ್ನು ಕೊಂಡವರು ಅವುಗಳನ್ನು ಸಾಕಿದರೋ ಅಥವಾ ಕಸಾಯಿಖಾನೆಗೆ ಮಾರಿದರೋ, ಅದರ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವುಗಳನ್ನು ಮಾರಿ ಬಂದ 10,500 ರೂಪಾಯಿಗಳೊಂದಿಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಎರಡು ನಾಟಿ ಹಸುಗಳನ್ನು ಕೊಂಡುಕೊಂಡೆ. ಈ ಎರಡೂ ಹಸುಗಳು ಈಗ ಎರಡು ಗಂಡು ಕರುಗಳನ್ನು ಈದಿವೆ. ನನ್ನ ಈ ನಾಲ್ಕು ಗೋವುಗಳಲ್ಲದೆ ಲಿಂಗರಾಜು ಕೂಡ ಎರಡು ಹಸುಗಳನ್ನು ಸಾಕಿದ್ದಾನೆ. ಆದರೆ ಆ ಹಸುಗಳನ್ನು ಕೊಂಡ ವರ್ಷ ಮಳೆ ಮತ್ತು ನಮ್ಮ ಬೋರ್‍ವೆಲ್ ಕೈಕೊಟ್ಟಿದ್ದರಿಂದ ಮೇವಿಗಾಗಿ ನಾನು ಮತ್ತು ಲಿಂಗರಾಜು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ನಮ್ಮ ಚಂದ್ರೇಗೌಡರ ಬಿದಿರಿನ ಕೆರೆಯಿಂದ ಏಳು ಸಾವಿರ ರೂಪಾಯಿ ಕೊಟ್ಟು ಒಣಹುಲ್ಲು ತರಿಸಿದ್ದಾಯಿತು. ಆದೂ ಸಾಕಾಗದೆ ಹತ್ತಿರದಿಂದಲೇ ಮತ್ತೆ ಐದು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಇನ್ನು ಎರಡೂ ಹಸುಗಳು ಗಬ್ಬ ಆಗಿದ್ದಾಗ ಹಿಂಡಿ, ಬೂಸಾ ಅಂತ ಮತ್ತಷ್ಟು ಸಾವಿರ ರೂಪಾಯಿಗಳು ಕೈಬಿಟ್ಟವು. ಹೀಗೆ ಲೆಕ್ಕ ಹಾಕಿದರೆ ಆ ಎರಡು ಹಸು ಮತ್ತು ಅವುಗಳ ಕರುಗಳಿಗೆಂದು ಈಗಾಗಲೇ 30,000 ರೂಪಾಯಿಗಳು ವೆಚ್ಚವಾಗಿವೆ.

ಈ ವೆಚ್ಚದೊಂದಿಗೆ ಆ ಗೋವುಗಳಿಂದ ಆದ ಉಳಿತಾಯ ಯಾವ ಲೆಕ್ಕಕ್ಕೂ ಆಗುವುದಿಲ್ಲ. ಆದರೆ ತೋಟದಲ್ಲಿ ಗೋವುಗಳಿದ್ದರೆ ಚಂದ ಎಂಬ ನಂಬಿಕೆ ಮತ್ತು ಆ ಕರುಗಳಿಂದ ನಮ್ಮ ಇಶಾಳಿಗೆ ಆಗುವ ಆನಂದ(ಅವುಗಳಿಗೆ ಶಿವ ಮತ್ತು ಬಸವ ಎಂದು ಹೆಸರಿಟ್ಟಿದ್ದಾಳೆ)ಕ್ಕೆ ಹೋಲಿಸಿದರೆ ವೆಚ್ಚವೆಲ್ಲ ಗೌಣ. ಹವ್ಯಾಸಿ ರೈತ ಮಹಿಳೆಯಾದ ನನಗೆ ಆ ಆರ್ಥಿಕ ಭಾರವನ್ನು ಹೊರುವ ಶಕ್ತಿ ಮತ್ತು ಹುಮ್ಮಸ್ಸು ಇರಬಹುದು, ಆದರೆ ಅದು ಎಲ್ಲ ರೈತರಿಂದ ನಿರೀಕ್ಷಿಸುವುದು ತಪ್ಪು ಮಾತ್ರವಲ್ಲ ದೊಡ್ಡ ಅನ್ಯಾಯವಾಗುತ್ತದೆ.

ಅಂದಹಾಗೆ, ಈಗಿರುವ ಹಸುಗಳೂ ಮುದಿ ಆದಾಗ ಅವುಗಳನ್ನೂ ಮಾರುತ್ತೇನೆ. ಕರುಗಳು ಬೆಳೆದಾಗ ಅವುಗಳನ್ನು ಇತರೆ ರೈತರಿಗೆ ಮಾರುತ್ತೇನೆ. ಬಂದ ಹಣದಲ್ಲಿ ಹೊಸ ಹಸುಗಳನ್ನು, ಹೊಸ ಎತ್ತುಗಳನ್ನು ಕೊಂಡು ಸಾಕುತ್ತೇನೆ. ಬುದ್ದಿ ಇರುವ ಎಲ್ಲಾ ಕೃಷಿಕರೂ ಮಾಡುವುದು ಇದನ್ನೇ.

ಆದರೆ ಬುದ್ದಿ ಇಲ್ಲದ, ಗೋವನ್ನು ಸಾಕದ ಅವುಗಳಿಗಾಗಿ ಪರದಾಡುವ, ಅವುಗಳನ್ನು ಆರ್ಥಿಕ ಲಾಭ-ನಷ್ಟದ ಲೆಕ್ಕದಲ್ಲಿ ನೋಡದ ಯಡಿಯೂರಪ್ಪನಂತಹ ಬುದ್ಧಿಹೀನರು ಮಾತ್ರ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲು ಹೊರಡುತ್ತಾರೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...