Homeಅಂಕಣಗಳುನಾನೂ ಗೋವುಗಳನ್ನು ಸಾಕಿದೆ, ಮಾರಿದೆ

ನಾನೂ ಗೋವುಗಳನ್ನು ಸಾಕಿದೆ, ಮಾರಿದೆ

- Advertisement -
- Advertisement -

| ಗೌರಿ ಲಂಕೇಶ್ |
10 ಮಾರ್ಚ್, 2010 (ಸಂಪಾದಕೀಯದಿಂದ)

ಯಡಿಯೂರಪ್ಪನ ‘ಬ್ರಾಹ್ಮಣಶಾಹಿ’ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಕುರಿತಂತೆ ನಿಮ್ಮ ಈ ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಬಹಳಷ್ಟು ಚರ್ಚಿಸಿವೆ. ಆದರೆ ಎಲ್ಲ ಚರ್ಚೆಗಳೂ ಆಹಾರ ಸಂಸ್ಕೃತಿ, ಸಂವಿಧಾನ, ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಆಯ್ಕೆ ಇತ್ಯಾದಿಗಳ ಸುತ್ತ ನಡೆದಿದೆ.

ಆದ್ದರಿಂದ ನಾನಿಲ್ಲಿ ರೈತರ ದೃಷ್ಟಿಕೋನದಿಂದ ಮತ್ತು ವೈಯಕ್ತಿಕ ಅನುಭವದಿಂದ ಹತ್ತಿರವಿರುವ ಅಮ್ಮನ ತೋಟದ ಜವಾಬ್ದಾರಿಯನ್ನು ಐದಾರು ವರ್ಷಗಳ ಹಿಂದೆ ವಹಿಸಿಕೊಂಡಾಗ ತೋಟದೊಂದಿಗೆ ಒಂದು ಜೊತೆ ಎತ್ತು ಬಂದಿದ್ದವು.

ಎರಡು ವರ್ಷಗಳ ಹಿಂದೆ ತೋಟವನ್ನು ನೋಡಿಕೊಳ್ಳಲು ಬಂದ ನಮ್ಮ ಲಿಂಗರಾಜು ಆ ಎರಡೂ ಎತ್ತುಗಳು ಮುದಿ ಆಗಿವೆ ಎಂದೂ, ಅವುಗಳನ್ನು ಮಾರಿ ಬೇರೆ ಜೋಡಿಯನ್ನು ಖರೀದಿಸಿದರೆ ಉತ್ತಮ ಎಂದೂ ಹೇಳಿದ. ಆ ಎತ್ತುಗಳಿಗೆ ಎಷ್ಟು ವಯಸ್ಸಾಗಿತ್ತೆಂದರೆ ಅವುಗಳಿಂದ ಯಾವ ಕೆಲಸವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವುಗಳನ್ನು ಮಾರದೆ ಹಾಗೆ ಇಟ್ಟುಕೊಳ್ಳುವುದೂ ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇವಿನ ಸಮಸ್ಯೆ.

ಇವತ್ತು ನೆಲಮಂಗಲದ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುತ್ತಿದೆ; ಹೊಲಗಳಿದ್ದ ಜಾಗಗಳಲ್ಲಿ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ; ಗೋಮಾಳಗಳು ಸೈಟುಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಎತ್ತುಗಳಿಗೆ ಎಲ್ಲಿಂದ ಮೇವು ತರುವುದು? ಹಿಂಡಿ, ಬೂಸಾ ಮಾತು ಬದಿಗಿರಲಿ, ಒಣಹುಲ್ಲು ಕೂಡ ಎಷ್ಟು ದುಬಾರಿ ಆಗಿದೆ ಎಂದರೆ ಒಂದು ಮೆದೆ ಹುಲ್ಲಿಗೆ ಇವತ್ತು ಕನಿಷ್ಠ ಆರು ಸಾವಿರ ರೂಪಾಯಿಗಳನ್ನು ತೆರಬೇಕು. ಇವತ್ತು ಹಲವಾರು ಚೆಡ್ಡಿಗಳು “ಗೋವು ಸಗಣಿ ಕೊಡುತ್ತದಲ್ಲ” ಎಂದೆಲ್ಲ ವಾದಿಸುತ್ತಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ಬೆಲೆಬಾಳುವ ಸಗಣಿಗಾಗಿ ಹತ್ತಾರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಹುಲ್ಲು ಖರೀದಿಸುವುದು ಎಷ್ಟು ಸಮಂಜಸ? ಅಷ್ಟು ಆರ್ಥಿಕ ಶಕ್ತಿ ಅದೆಷ್ಟು ರೈತರಿಗೆ ಇರುತ್ತದೆ? ಈಗಾಗಲೇ ಸಾಲ-ನಷ್ಟಗಳಡಿ ತತ್ತರಿಸುತ್ತಿರುವ ರೈತರ ಮೇಲೆ ಇಂತಹ ಇನ್ನೊಂದು ಆರ್ಥಿಕ ಹೊರೆಯನ್ನು ಹೊರಿಸುವಷ್ಟು ಅಮಾನವೀಯರಾಗಿದ್ದೇವೆಯೇ ನಾವು?

ತೋಟದ ಮುದಿ ಎತ್ತುಗಳನ್ನು ಮಾರಲು ಲಿಂಗರಾಜುವಿಗೆ ಹೇಳಿದೆ. ಅವುಗಳನ್ನು ಕೊಂಡವರು ಅವುಗಳನ್ನು ಸಾಕಿದರೋ ಅಥವಾ ಕಸಾಯಿಖಾನೆಗೆ ಮಾರಿದರೋ, ಅದರ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವುಗಳನ್ನು ಮಾರಿ ಬಂದ 10,500 ರೂಪಾಯಿಗಳೊಂದಿಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಎರಡು ನಾಟಿ ಹಸುಗಳನ್ನು ಕೊಂಡುಕೊಂಡೆ. ಈ ಎರಡೂ ಹಸುಗಳು ಈಗ ಎರಡು ಗಂಡು ಕರುಗಳನ್ನು ಈದಿವೆ. ನನ್ನ ಈ ನಾಲ್ಕು ಗೋವುಗಳಲ್ಲದೆ ಲಿಂಗರಾಜು ಕೂಡ ಎರಡು ಹಸುಗಳನ್ನು ಸಾಕಿದ್ದಾನೆ. ಆದರೆ ಆ ಹಸುಗಳನ್ನು ಕೊಂಡ ವರ್ಷ ಮಳೆ ಮತ್ತು ನಮ್ಮ ಬೋರ್‍ವೆಲ್ ಕೈಕೊಟ್ಟಿದ್ದರಿಂದ ಮೇವಿಗಾಗಿ ನಾನು ಮತ್ತು ಲಿಂಗರಾಜು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ನಮ್ಮ ಚಂದ್ರೇಗೌಡರ ಬಿದಿರಿನ ಕೆರೆಯಿಂದ ಏಳು ಸಾವಿರ ರೂಪಾಯಿ ಕೊಟ್ಟು ಒಣಹುಲ್ಲು ತರಿಸಿದ್ದಾಯಿತು. ಆದೂ ಸಾಕಾಗದೆ ಹತ್ತಿರದಿಂದಲೇ ಮತ್ತೆ ಐದು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಇನ್ನು ಎರಡೂ ಹಸುಗಳು ಗಬ್ಬ ಆಗಿದ್ದಾಗ ಹಿಂಡಿ, ಬೂಸಾ ಅಂತ ಮತ್ತಷ್ಟು ಸಾವಿರ ರೂಪಾಯಿಗಳು ಕೈಬಿಟ್ಟವು. ಹೀಗೆ ಲೆಕ್ಕ ಹಾಕಿದರೆ ಆ ಎರಡು ಹಸು ಮತ್ತು ಅವುಗಳ ಕರುಗಳಿಗೆಂದು ಈಗಾಗಲೇ 30,000 ರೂಪಾಯಿಗಳು ವೆಚ್ಚವಾಗಿವೆ.

ಈ ವೆಚ್ಚದೊಂದಿಗೆ ಆ ಗೋವುಗಳಿಂದ ಆದ ಉಳಿತಾಯ ಯಾವ ಲೆಕ್ಕಕ್ಕೂ ಆಗುವುದಿಲ್ಲ. ಆದರೆ ತೋಟದಲ್ಲಿ ಗೋವುಗಳಿದ್ದರೆ ಚಂದ ಎಂಬ ನಂಬಿಕೆ ಮತ್ತು ಆ ಕರುಗಳಿಂದ ನಮ್ಮ ಇಶಾಳಿಗೆ ಆಗುವ ಆನಂದ(ಅವುಗಳಿಗೆ ಶಿವ ಮತ್ತು ಬಸವ ಎಂದು ಹೆಸರಿಟ್ಟಿದ್ದಾಳೆ)ಕ್ಕೆ ಹೋಲಿಸಿದರೆ ವೆಚ್ಚವೆಲ್ಲ ಗೌಣ. ಹವ್ಯಾಸಿ ರೈತ ಮಹಿಳೆಯಾದ ನನಗೆ ಆ ಆರ್ಥಿಕ ಭಾರವನ್ನು ಹೊರುವ ಶಕ್ತಿ ಮತ್ತು ಹುಮ್ಮಸ್ಸು ಇರಬಹುದು, ಆದರೆ ಅದು ಎಲ್ಲ ರೈತರಿಂದ ನಿರೀಕ್ಷಿಸುವುದು ತಪ್ಪು ಮಾತ್ರವಲ್ಲ ದೊಡ್ಡ ಅನ್ಯಾಯವಾಗುತ್ತದೆ.

ಅಂದಹಾಗೆ, ಈಗಿರುವ ಹಸುಗಳೂ ಮುದಿ ಆದಾಗ ಅವುಗಳನ್ನೂ ಮಾರುತ್ತೇನೆ. ಕರುಗಳು ಬೆಳೆದಾಗ ಅವುಗಳನ್ನು ಇತರೆ ರೈತರಿಗೆ ಮಾರುತ್ತೇನೆ. ಬಂದ ಹಣದಲ್ಲಿ ಹೊಸ ಹಸುಗಳನ್ನು, ಹೊಸ ಎತ್ತುಗಳನ್ನು ಕೊಂಡು ಸಾಕುತ್ತೇನೆ. ಬುದ್ದಿ ಇರುವ ಎಲ್ಲಾ ಕೃಷಿಕರೂ ಮಾಡುವುದು ಇದನ್ನೇ.

ಆದರೆ ಬುದ್ದಿ ಇಲ್ಲದ, ಗೋವನ್ನು ಸಾಕದ ಅವುಗಳಿಗಾಗಿ ಪರದಾಡುವ, ಅವುಗಳನ್ನು ಆರ್ಥಿಕ ಲಾಭ-ನಷ್ಟದ ಲೆಕ್ಕದಲ್ಲಿ ನೋಡದ ಯಡಿಯೂರಪ್ಪನಂತಹ ಬುದ್ಧಿಹೀನರು ಮಾತ್ರ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲು ಹೊರಡುತ್ತಾರೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...