Homeಅಂಕಣಗಳುನಾನೂ ಗೋವುಗಳನ್ನು ಸಾಕಿದೆ, ಮಾರಿದೆ

ನಾನೂ ಗೋವುಗಳನ್ನು ಸಾಕಿದೆ, ಮಾರಿದೆ

- Advertisement -
- Advertisement -

| ಗೌರಿ ಲಂಕೇಶ್ |
10 ಮಾರ್ಚ್, 2010 (ಸಂಪಾದಕೀಯದಿಂದ)

ಯಡಿಯೂರಪ್ಪನ ‘ಬ್ರಾಹ್ಮಣಶಾಹಿ’ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಕುರಿತಂತೆ ನಿಮ್ಮ ಈ ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಬಹಳಷ್ಟು ಚರ್ಚಿಸಿವೆ. ಆದರೆ ಎಲ್ಲ ಚರ್ಚೆಗಳೂ ಆಹಾರ ಸಂಸ್ಕೃತಿ, ಸಂವಿಧಾನ, ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಆಯ್ಕೆ ಇತ್ಯಾದಿಗಳ ಸುತ್ತ ನಡೆದಿದೆ.

ಆದ್ದರಿಂದ ನಾನಿಲ್ಲಿ ರೈತರ ದೃಷ್ಟಿಕೋನದಿಂದ ಮತ್ತು ವೈಯಕ್ತಿಕ ಅನುಭವದಿಂದ ಹತ್ತಿರವಿರುವ ಅಮ್ಮನ ತೋಟದ ಜವಾಬ್ದಾರಿಯನ್ನು ಐದಾರು ವರ್ಷಗಳ ಹಿಂದೆ ವಹಿಸಿಕೊಂಡಾಗ ತೋಟದೊಂದಿಗೆ ಒಂದು ಜೊತೆ ಎತ್ತು ಬಂದಿದ್ದವು.

ಎರಡು ವರ್ಷಗಳ ಹಿಂದೆ ತೋಟವನ್ನು ನೋಡಿಕೊಳ್ಳಲು ಬಂದ ನಮ್ಮ ಲಿಂಗರಾಜು ಆ ಎರಡೂ ಎತ್ತುಗಳು ಮುದಿ ಆಗಿವೆ ಎಂದೂ, ಅವುಗಳನ್ನು ಮಾರಿ ಬೇರೆ ಜೋಡಿಯನ್ನು ಖರೀದಿಸಿದರೆ ಉತ್ತಮ ಎಂದೂ ಹೇಳಿದ. ಆ ಎತ್ತುಗಳಿಗೆ ಎಷ್ಟು ವಯಸ್ಸಾಗಿತ್ತೆಂದರೆ ಅವುಗಳಿಂದ ಯಾವ ಕೆಲಸವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವುಗಳನ್ನು ಮಾರದೆ ಹಾಗೆ ಇಟ್ಟುಕೊಳ್ಳುವುದೂ ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇವಿನ ಸಮಸ್ಯೆ.

ಇವತ್ತು ನೆಲಮಂಗಲದ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುತ್ತಿದೆ; ಹೊಲಗಳಿದ್ದ ಜಾಗಗಳಲ್ಲಿ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ; ಗೋಮಾಳಗಳು ಸೈಟುಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಎತ್ತುಗಳಿಗೆ ಎಲ್ಲಿಂದ ಮೇವು ತರುವುದು? ಹಿಂಡಿ, ಬೂಸಾ ಮಾತು ಬದಿಗಿರಲಿ, ಒಣಹುಲ್ಲು ಕೂಡ ಎಷ್ಟು ದುಬಾರಿ ಆಗಿದೆ ಎಂದರೆ ಒಂದು ಮೆದೆ ಹುಲ್ಲಿಗೆ ಇವತ್ತು ಕನಿಷ್ಠ ಆರು ಸಾವಿರ ರೂಪಾಯಿಗಳನ್ನು ತೆರಬೇಕು. ಇವತ್ತು ಹಲವಾರು ಚೆಡ್ಡಿಗಳು “ಗೋವು ಸಗಣಿ ಕೊಡುತ್ತದಲ್ಲ” ಎಂದೆಲ್ಲ ವಾದಿಸುತ್ತಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ಬೆಲೆಬಾಳುವ ಸಗಣಿಗಾಗಿ ಹತ್ತಾರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಹುಲ್ಲು ಖರೀದಿಸುವುದು ಎಷ್ಟು ಸಮಂಜಸ? ಅಷ್ಟು ಆರ್ಥಿಕ ಶಕ್ತಿ ಅದೆಷ್ಟು ರೈತರಿಗೆ ಇರುತ್ತದೆ? ಈಗಾಗಲೇ ಸಾಲ-ನಷ್ಟಗಳಡಿ ತತ್ತರಿಸುತ್ತಿರುವ ರೈತರ ಮೇಲೆ ಇಂತಹ ಇನ್ನೊಂದು ಆರ್ಥಿಕ ಹೊರೆಯನ್ನು ಹೊರಿಸುವಷ್ಟು ಅಮಾನವೀಯರಾಗಿದ್ದೇವೆಯೇ ನಾವು?

ತೋಟದ ಮುದಿ ಎತ್ತುಗಳನ್ನು ಮಾರಲು ಲಿಂಗರಾಜುವಿಗೆ ಹೇಳಿದೆ. ಅವುಗಳನ್ನು ಕೊಂಡವರು ಅವುಗಳನ್ನು ಸಾಕಿದರೋ ಅಥವಾ ಕಸಾಯಿಖಾನೆಗೆ ಮಾರಿದರೋ, ಅದರ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವುಗಳನ್ನು ಮಾರಿ ಬಂದ 10,500 ರೂಪಾಯಿಗಳೊಂದಿಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಎರಡು ನಾಟಿ ಹಸುಗಳನ್ನು ಕೊಂಡುಕೊಂಡೆ. ಈ ಎರಡೂ ಹಸುಗಳು ಈಗ ಎರಡು ಗಂಡು ಕರುಗಳನ್ನು ಈದಿವೆ. ನನ್ನ ಈ ನಾಲ್ಕು ಗೋವುಗಳಲ್ಲದೆ ಲಿಂಗರಾಜು ಕೂಡ ಎರಡು ಹಸುಗಳನ್ನು ಸಾಕಿದ್ದಾನೆ. ಆದರೆ ಆ ಹಸುಗಳನ್ನು ಕೊಂಡ ವರ್ಷ ಮಳೆ ಮತ್ತು ನಮ್ಮ ಬೋರ್‍ವೆಲ್ ಕೈಕೊಟ್ಟಿದ್ದರಿಂದ ಮೇವಿಗಾಗಿ ನಾನು ಮತ್ತು ಲಿಂಗರಾಜು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ನಮ್ಮ ಚಂದ್ರೇಗೌಡರ ಬಿದಿರಿನ ಕೆರೆಯಿಂದ ಏಳು ಸಾವಿರ ರೂಪಾಯಿ ಕೊಟ್ಟು ಒಣಹುಲ್ಲು ತರಿಸಿದ್ದಾಯಿತು. ಆದೂ ಸಾಕಾಗದೆ ಹತ್ತಿರದಿಂದಲೇ ಮತ್ತೆ ಐದು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಇನ್ನು ಎರಡೂ ಹಸುಗಳು ಗಬ್ಬ ಆಗಿದ್ದಾಗ ಹಿಂಡಿ, ಬೂಸಾ ಅಂತ ಮತ್ತಷ್ಟು ಸಾವಿರ ರೂಪಾಯಿಗಳು ಕೈಬಿಟ್ಟವು. ಹೀಗೆ ಲೆಕ್ಕ ಹಾಕಿದರೆ ಆ ಎರಡು ಹಸು ಮತ್ತು ಅವುಗಳ ಕರುಗಳಿಗೆಂದು ಈಗಾಗಲೇ 30,000 ರೂಪಾಯಿಗಳು ವೆಚ್ಚವಾಗಿವೆ.

ಈ ವೆಚ್ಚದೊಂದಿಗೆ ಆ ಗೋವುಗಳಿಂದ ಆದ ಉಳಿತಾಯ ಯಾವ ಲೆಕ್ಕಕ್ಕೂ ಆಗುವುದಿಲ್ಲ. ಆದರೆ ತೋಟದಲ್ಲಿ ಗೋವುಗಳಿದ್ದರೆ ಚಂದ ಎಂಬ ನಂಬಿಕೆ ಮತ್ತು ಆ ಕರುಗಳಿಂದ ನಮ್ಮ ಇಶಾಳಿಗೆ ಆಗುವ ಆನಂದ(ಅವುಗಳಿಗೆ ಶಿವ ಮತ್ತು ಬಸವ ಎಂದು ಹೆಸರಿಟ್ಟಿದ್ದಾಳೆ)ಕ್ಕೆ ಹೋಲಿಸಿದರೆ ವೆಚ್ಚವೆಲ್ಲ ಗೌಣ. ಹವ್ಯಾಸಿ ರೈತ ಮಹಿಳೆಯಾದ ನನಗೆ ಆ ಆರ್ಥಿಕ ಭಾರವನ್ನು ಹೊರುವ ಶಕ್ತಿ ಮತ್ತು ಹುಮ್ಮಸ್ಸು ಇರಬಹುದು, ಆದರೆ ಅದು ಎಲ್ಲ ರೈತರಿಂದ ನಿರೀಕ್ಷಿಸುವುದು ತಪ್ಪು ಮಾತ್ರವಲ್ಲ ದೊಡ್ಡ ಅನ್ಯಾಯವಾಗುತ್ತದೆ.

ಅಂದಹಾಗೆ, ಈಗಿರುವ ಹಸುಗಳೂ ಮುದಿ ಆದಾಗ ಅವುಗಳನ್ನೂ ಮಾರುತ್ತೇನೆ. ಕರುಗಳು ಬೆಳೆದಾಗ ಅವುಗಳನ್ನು ಇತರೆ ರೈತರಿಗೆ ಮಾರುತ್ತೇನೆ. ಬಂದ ಹಣದಲ್ಲಿ ಹೊಸ ಹಸುಗಳನ್ನು, ಹೊಸ ಎತ್ತುಗಳನ್ನು ಕೊಂಡು ಸಾಕುತ್ತೇನೆ. ಬುದ್ದಿ ಇರುವ ಎಲ್ಲಾ ಕೃಷಿಕರೂ ಮಾಡುವುದು ಇದನ್ನೇ.

ಆದರೆ ಬುದ್ದಿ ಇಲ್ಲದ, ಗೋವನ್ನು ಸಾಕದ ಅವುಗಳಿಗಾಗಿ ಪರದಾಡುವ, ಅವುಗಳನ್ನು ಆರ್ಥಿಕ ಲಾಭ-ನಷ್ಟದ ಲೆಕ್ಕದಲ್ಲಿ ನೋಡದ ಯಡಿಯೂರಪ್ಪನಂತಹ ಬುದ್ಧಿಹೀನರು ಮಾತ್ರ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲು ಹೊರಡುತ್ತಾರೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...