Homeಮುಖಪುಟಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

ಮದುಮಗಳು ರಂಗದ ಹಿಂದಿನ ವಿಶ್ವಮಾನವ ಶಕ್ತಿ

- Advertisement -
- Advertisement -

ಇಲ್ಲಿ ಯಾರೂ ಮುಖ್ಯರಲ್ಲ,
ಯಾರೂ ಅಮುಖ್ಯರಲ್ಲ,
ಯಾವುದೂ ಯಃಕಶ್ಚಿತವಲ್ಲ…

ಈ ಮೇರು ತಾತ್ವಿಕತೆಯು ರೂಪತಾಳಿದ್ದು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ. ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪುರವರ ಅತ್ಯುತ್ಕೃಷ್ಟ ಗದ್ಯಕೃತಿ ಮಲೆಗಳಲ್ಲಿ ಮದುಮಗಳು. ಇದು ಹಿರಿಯ ರಂಗಕರ್ಮಿ ಬಸವಲಿಂಗಯ್ಯನವರ ನಿರ್ದೇಶನದಲ್ಲಿ ರಂಗರೂಪಕವಾಗಿ ಅಹೋರಾತ್ರಿ ಸಾವಿರಾರು ಪ್ರೇಕ್ಷಕರ ಸಮ್ಮುಖ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಈಗ ಇತಿಹಾಸ. ಇದು ಕೇವಲ ಕನ್ನಡ ರಂಗಭೂಮಿ ಮಾತ್ರವೇ ಅಲ್ಲದೇ ಭಾರತೀಯ ರಂಗಭೂಮಿಯ ಇತಿಹಾಸದಲ್ಲೇ ಅಚ್ಚಳಿಯದ ದಾಖಲೆ.

ಓದುಗನಿಗೆ ಕಾದಂಬರಿ ಕಟ್ಟಿಕೊಡುವ ಲೋಕವೇ ಬೇರೆ, ಪ್ರೇಕ್ಷಕನಿಗೆ ರಂಗಪ್ರಯೋಗ ಕಟ್ಟಿಕೊಡುವ ಲೋಕವೇ ಬೇರೆ. ಹಾಗೆಯೇ ಈ ರಂಗಪ್ರಯೋಗದಲ್ಲಿ ಭಾಗಿಯಾಗುವ ಕಲಾವಿದರಿಗೆ ದೊರೆಯುವ ಅನುಭವ ಲೋಕವೇ ಇನ್ನೊಂದು ತೆರನಾದದ್ದು. ಹೀಗಿರುವಾಗ ಇಡೀ ರಂಗಪ್ರಯೋಗದಲ್ಲಿನ ಕೆಲವು ಅನುಭವಗಳು ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕಲಾವಿದರಿಗೂ ಆಗಿದೆ ಎಂಬುದು ಅತಿಶಯೋಕ್ತಿ ಅಲ್ಲ.

ಮುಖ್ಯವಾಗಿ ಕುವೆಂಪು ಒಬ್ಬ ದಾರ್ಶನಿಕ ಕವಿ. ಅವರ ’ಜಡವೆಂಬುದು ಕೇವಲ ಜಡವಲ್ಲ ಮಾತು ಈ ಪ್ರಯೋಗದಲ್ಲಿ ಪ್ರಕೃತಿಯ ನಿತ್ಯ ಪ್ರಕ್ರಿಯೆಗಳಾದ ಮಳೆ, ಗಾಳಿ, ಕಲ್ಲು, ಮಣ್ಣು ಎಲ್ಲವೂ ಜೀವ ಪಡೆದು ನಾಟಕದಲ್ಲಿ ಸಜೀವ ಭಾಗಗಳಾಗಿ ಸಾಬೀತುಗೊಳ್ಳುತ್ತಿದ್ದವು. ಇದರೊಂದಿಗೆ ಪ್ರತಿಯೊಬ್ಬ ಕಲಾವಿದರು ಮುಖಾಮುಖಿಗೊಂಡೇ ತಮ್ಮತಮ್ಮ ಪಾತ್ರಗಳನ್ನು ನಿರ್ವಹಿಸಬೇಕಾಗಿತ್ತು. ಇದು ಗುತ್ತಿ ತನ್ನ ಅತ್ತೆ ಮಗಳನ್ನು ಹಾರಿಸಿಕೊಂಡು ಬರಲು ಹೋಗುವಾಗ ದನಗೋಳು ಮಳೆಯಲ್ಲಿ ದೀವರ ಮಕ್ಕಳು ಮೀನು ಹಿಡಿಯಲು ಹೋಗುವ ದೃಶ್ಯದ ಸಂದರ್ಭದಲ್ಲಿ ಆ ಸಂಗೀತ ಮತ್ತು ಮಳೆಯ ಶಬ್ದಗಳು ಪ್ರೇಕ್ಷಕರಿಗೆ ಮಲೆನಾಡಿನ ಅನುಭವ ನೀಡುತ್ತಿದ್ದರೆ, ಅದೇ ಸಂದರ್ಭದಲ್ಲಿ ರಂಗದ ಹಿಂದೆ ಇದ್ದ ಕಲಾವಿದರಿಗೂ ಆ ಅನುಭವವಾಗುತ್ತಿತ್ತು. ಹಾಗೆಯೇ ಗುತ್ತಿಯ ಛಲವನ್ನು ಹೆಚ್ಚಿಸುವ ಸಗಣಿ ಹುಳುಗಳು ಬಂದಾಗ ರಂಗಪ್ರಯೋಗದ ಜಾಗದಲ್ಲಿ ಇದ್ದಂತಹ ಸಣ್ಣ ಸಣ್ಣ ಹುಳು ಹುಪ್ಪಟೆಗಳು ಕೂಡ ಅಲ್ಲಿದ್ದ ಕಲಾವಿದರಿಗೆ ವಿಸ್ಮಯಕಾರಿಯಾಗಿ ಕಾಣುತ್ತಿದ್ದವು.

ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣದಿಂದಾಗಿ ಎಷ್ಟೋ ಪ್ರಯೋಗಗಳು ನಿಂತುಹೋಗಿವೆ. ಇಂತಹ ಮಳೆ ಸುರಿದಾಗ ಮುಖ್ಯವಾಗಿ ಕೆರೆ ಅಂಗಳದಲ್ಲಿ ಮಣ್ಣಿನಿಂದ ಮೇಲೆದ್ದು ಬಂದು ಕಾಲುಕಾಲಿಗೆ ಸಿಗುತ್ತಿದ್ದಂತಹ ಏಡಿಯ ಮರಿಗಳನ್ನು ಎಲ್ಲರೂ ವಿಸ್ಮಯದಿಂದಲೇ ಕಾಣುತ್ತಿದ್ದೆವು. ಏಕೆಂದರೆ ಇಷ್ಟು ದಿನ ಆ ಜಾಗದಲ್ಲಿ ಅವುಗಳ ಕುರುಹೇ ಕಾಣುತ್ತಿರಲಿಲ್ಲ. ಆದರೆ ಒಂದು ಜೋರು ಮಳೆಗೆ ಮಣ್ಣಿನಿಂದ ಮರಿಗಳು ಎದ್ದು ಬಂದು ಕೆರೆಯ ನೀರಿಗೆ ನಡೆದುಹೋಗುತ್ತಿದ್ದವು. ಎಷ್ಟೋ ಕಲಾವಿದರು ಅವುಗಳನ್ನು ಹಿಡಿದು ಜೇಬಿನಲ್ಲಿ ಇಟ್ಟ್ಟುಕೊಂಡು ಪ್ರದರ್ಶನದಲ್ಲಿ ಮತ್ತೊಬ್ಬ ಕಲಾವಿದರ ಕೈಗೆ ಕೊಟ್ಟು ತಮಾಷೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ ತಾವು ಆ ಪ್ರಕೃತಿಯ ಭಾಗವಾಗಿಯೇ ಬದುಕುತ್ತಿದ್ದರು.

ಅದೇ ರೀತಿಯಲ್ಲಿ ’ಮಸೇಕಲ್ಲು. ಕುವೆಂಪುರವರು ಮಸೇಕಲ್ಲಿನ ಮುಖಾಂತರ ತಲೆತಲೆಮಾರಿನ ಕತೆಗಳನ್ನು ಸುಬ್ಬಣ್ಣ ಹೆಗ್ಗಡೆಯ ಮೂಲಕ ಹೇಳಿಸುತ್ತಾರೆ. ಈ ಮಾತುಗಳನ್ನು ಸುಬ್ಬಣ್ಣ ಹೆಗ್ಗಡೆ ಹೇಳುವಾಗ ರಂಗದ ಹಿಂದೆ ಕುಳಿತ ಕಲಾವಿದರು ತಮಗೆ ಅರಿವಿಲ್ಲದೆಯೆ ತಾವುಗಳು ಕುಳಿತುಕೊಂಡಿರುವ ಕಲ್ಲುಗಳ ಬಗ್ಗೆ ಚಿಂತಿಸುತ್ತಿದ್ದರು. ಆ ಸಂದರ್ಭದಲ್ಲಿ ಕುವೆಂಪುರವರ ’ಶಿಲಾತಪಸ್ವಿ ಕವನವನ್ನು ಕೆಲವರು ನೆನೆಯುತ್ತಿದ್ದರು. ಇಲ್ಲಿ ಮತ್ತೊಂದು ಮಾತು ಹೇಳುವುದು ಉಚಿತ ಎನಿಸುತ್ತದೆ. ಅಲ್ಲಿದ್ದ ಯಾವ ಕಲಾವಿದರಿಗೂ ಯಾರು ಯಾವ ಜಾತಿ, ಯಾವ ಧರ್ಮ ಎಂದು ಗೊತ್ತಿರಲಿಲ್ಲ. ಎಲ್ಲರೂ ’ಮನುಷ್ಯಜಾತಿತಾನೊಂದೇ ವಲಂ’ ಎಂಬುದನ್ನು ನಂಬಿ ಒಟ್ಟಾಗಿ ಸೇರಿದ್ದವರು. ಹೀಗಿದ್ದರೂ ಹುಲಿಕಲ್ಲು ನೆತ್ತಿ ಹತ್ತುವಾಗ ಕುಸಿದು ಬಿದ್ದ ಸಮಯದಲ್ಲಿ ಸುಬ್ಬಣ್ಣ ಹೆಗ್ಗಡೆಗೆ ಆಸರೆಯಾಗಿ ಬಂದು, ತಮ್ಮ ಹೆಗಲನ್ನು ಕೊಟ್ಟು ದೊಡ್ಡಬೀರ ಮತ್ತು ಆತನ ಮಗ ಕರೆದುಕೊಂಡು ಹೋಗುವಾಗ ಇಷ್ಟು ದಿನ ಜಾತಿ ವ್ಯವಸ್ಥೆಯನ್ನು ಬಲವಾಗಿ ನಂಬಿದ್ದ ಸುಬ್ಬಣ್ಣ ಹೆಗ್ಗಡೆಗೆ ಮಾನವಧರ್ಮದ ಪರಿಚಯವಾಗುತ್ತಿತ್ತು. ಈ ಸಂದರ್ಭದಲ್ಲಿ ಎಷ್ಟೋ ಕಲಾವಿದರು ತಮ್ಮ ಪಕ್ಕದ ಕಲಾವಿದರ ಕೈಕೈ ಹಿಡಿದು ಗಟ್ಟಿ ಮಾಡಿಕೊಳ್ಳುತ್ತಿದ್ದುದು ಆಗಿದೆ. ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಇದ್ದಂತಹ ವಿಶ್ವಮಾನವಗುಣ ಎದ್ದು ಹೊರಬಂದಂತೆ ಕಾಣುತ್ತಿತ್ತು. ಆಗ ಕುವೆಂಪುರವರ ವಿಶ್ವಮಾನವಗೀತೆಯ ’ನೂರು ಮತದ ಹೊಟ್ಟ ತೂರಿ, ಎಲ್ಲತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ ಆಗು ನೀ ಅನಿಕೇತನ’ ಸಾಲು ನೆನಪಾಗುತ್ತಿತ್ತು.

ಕುವೆಂಪುರವರು ಕಲಾವಿದರ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂಬುದಕ್ಕೆ ಮತ್ತೊಂದು ಉದಾಹಾರಣೆ ಎಂದರೆ ಅವರು ಪ್ರತಿಪಾದಿಸಿದ ಮಹತ್ವಾಕಾಂಕ್ಷೆಯ ’ಮಂತ್ರಮಾಂಗಲ್ಯ ವಿವಾಹ. ಇದರಿಂದ ಪ್ರೇರಣೆಯಾಗಿ ನಮ್ಮ ಕಲಾವಿದರಲ್ಲೇ ಐದು ಜೋಡಿಗಳು ಪ್ರೇಮ-ವಿವಾಹವಾಗಿದ್ದು ಸಂತಸದ ಸಂಗತಿ. ಇದು ಕೇವಲ ಕಲಾವಿದರು ಮಾತ್ರವಲ್ಲ ಎಷ್ಟೋ ಪ್ರೇಕ್ಷಕರಲ್ಲೂ ಕೂಡ ಪ್ರೇಮಾಂಕುರಕ್ಕೆ ಕಾರಣವಾಗಿ ಲೆಕ್ಕವಿಲ್ಲದಷ್ಟು ಮಂತ್ರಮಾಂಗಲ್ಯಗಳು ನಡೆದಿವೆ. ಅದು ಒತ್ತಟ್ಟಿಗಿರಲಿ, ಮದುಮಗಳು ರಂಗಪ್ರಯೋಗದ ಕಲಾವಿದ ತರುಣತರುಣಿಯರಲ್ಲಿ ಪ್ರೇಮಾಂಕುರವಾಗಿ ಅವರು ತಮ್ಮ ಮನೆಯವರ ಒಪ್ಪಿಗೆಯನ್ನು ಪಡೆದು ವಿವಾಹವಾಗಿದ್ದು, ಮತ್ತು ಅವರ ಮನೆಯವರು ಈ ವಿವಾಹಕ್ಕೆ ಬೆಂಗಾವಲಾಗಿ ನಿಂತಿದ್ದು ವಿಶೇಷಗಳಲ್ಲಿ ವಿಶೇಷ. ಅದರಲ್ಲೂ ಪ್ರತಿ ಎರಡು ಮೂರು ವರ್ಷಕ್ಕೆ ಕೆಲವು ಪ್ರದರ್ಶನಗಳಂತೆ ನಡೆಯುತ್ತಿದ್ದ ಮದುಮಗಳ ಪ್ರತಿ ದಿಬ್ಬಣದಲ್ಲೂ ಈ ರೀತಿಯ ಒಂದಲ್ಲ ಒಂದು ಪ್ರೇಮವಿವಾಹ ಮಂತ್ರಮಾಂಗಲ್ಯದ ಮೂಲಕ ಜರುಗುತಿತ್ತು.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಎಲ್ಲಕ್ಕೂ ಮುಖ್ಯವಾಗಿ ಮದುಮಗಳು ಶತಕದ ಸಂಭ್ರಮದ ನಂತರ ನಡೆದ ವಿವಾಹ ವಿಶೇಷಗಳಲ್ಲೇ ವಿಶೇಷ. ಐತ ಪಾತ್ರಧಾರಿ ’ಸ್ವಾಮಿ’ ಹಾಗೂ ಕಾವೇರಿ ಮತ್ತು ತಿಮ್ಮಿ ಪಾತ್ರವನ್ನು ನಿರ್ವಹಿಸಿದ್ದ ’ಮೀನಾಕ್ಷಿಯ ಪ್ರೇಮವಿವಾಹವು ಮದುಮಗಳು ರಂಗಭೂಮಿಯಲ್ಲೇ ಮಂತ್ರಮಾಂಗಲ್ಯದ ಮೂಲಕ ಜರುಗಿದ್ದು ಅವಿಸ್ಮರಣೀಯ. ಆಗ ಎಲ್ಲಾ ಕಲಾವಿದರು ತಮ್ಮ ಮನೆಯ ಮದುವೆಯೇ ಎಂಬಂತೆ ಸಂಭ್ರಮಿಸಿದರು. ಅಂದು ಹಬ್ಬದ ವಾತಾವರಣದಿಂದ ಇಡೀ ಮದುಮಗಳು ತಂಡ ತೇಲಾಡುತ್ತಿತ್ತು. ಆ ಮೂಲಕ ಕುವೆಂಪುರವರ ಚಿಂತನೆಗಳು ನಮ್ಮ ಬದುಕಿನ ದಾರಿದೀಪವಾಯಿತು.

ಕುವೆಂಪುರವರ ಸ್ತ್ರೀವಾದ ಅತ್ಯಂತ ಮಾನವೀಯ ಮೌಲ್ಯಗಳಿಂದ ಕೂಡಿರುವಂತಹದ್ದು. ಅವರ ಎರಡೂ ಕಾದಂಬರಿಗಳೂ ಹೆಣ್ಣನ್ನು ಕೇಂದ್ರವಾಗಿಸಿಕೊಂಡು ರಚಿಸಿದವು. ನಮ್ಮೊಳಗಿನ ಆಧುನಿಕತೆಯ ಭ್ರಮೆಯನ್ನು ಕೂಡ ಅವು ಮರು ವಿವೇಚನೆಗೆ ಒಳಪಡಿಸುತ್ತದೆ. ದೇಯಿ ಪಾತ್ರದ ಸಾವಿನಲ್ಲಿ ಚೀಂಕ್ರನ ವರ್ತನೆ. ಜೊತೆಗೆ ಕಾವೇರಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಸಾವಿಗೆ ಕಾರಣವಾಗುವ ಚೀಂಕ್ರ ಮತ್ತು ಅವನ ಸಹಚರರ ದೃಶ್ಯಗಳು ರಂಗದ ಮೇಲೆ ನಡೆಯುತ್ತಿದ್ದರೆ ರಂಗದ ಹಿಂದೆ ಇದ್ದಂತಹ ಹುಡುಗರಿಗೆ ತಮ್ಮೊಳಗಿನ ಗಂಡು ಅಹಂಗೆ ಪೆಟ್ಟು ಬಿದ್ದಂತಾಗಿ ಜಾಗೃತಗೊಳ್ಳುತ್ತಿದ್ದೆವು.

ಇದೇ ರೀತಿ ನಮ್ಮದೇ ತಂಡದ ಕಲಾವಿದೆ ’ಮಾದೇವಿ’ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಇಂದಿಗೂ ತಂಡದ ಪ್ರತಿ ಕಲಾವಿದನಿಗೂ ಮರೆಯಲಾಗದ ನೋವಿನ ಸಂಗತಿಯಾಗಿದೆ. ಅಲ್ಲದೇ ಪ್ರತಿ ಸರಣಿಯಲ್ಲೂ ನಮ್ಮ ಒಂದು ಪ್ರದರ್ಶನವನ್ನು ಮಾದೇವಿಗೆ ಅರ್ಪಿಸುತ್ತ್ತಿದ್ದವು. ಅದೇನೇ ಇರಲಿ ಕಾವೇರಿ ಸಾವಿನ ನಂತರ ಬರುತ್ತಿದ್ದ ಡಾ.ಕೆ.ವೈ ನಾರಾಯಣಸ್ವಾಮಿಯವರು ರಚಿಸಿದ ’ದೇವರೆಂಬುದು ಒಂದು ಉರುಳು, ಸಿಲುಕಿದೆ ಅದರಲಿ ಮನುಜನ ಕೊರಳು, ಆ ಮತ ಈ ಮತ ಎನ್ನುವುದು ಅದರ ನೆರಳು, ನಾಮವ ನೇಮವ ಕೊರಕಲು ದಾಟಿ ನೀ ವಿಶ್ವ ಪಥಕೆ ಮರಳು ಮರಳು…’ ಗೀತೆ ಎಲ್ಲರನ್ನು ವಿಶ್ವಮಾನವತತ್ವದೆಡೆಗೆ ಕರೆಯುತ್ತಿತ್ತು.

ಒಟ್ಟಿನಲ್ಲಿ ನಾಟಕ ಮುಗಿದು ಎಲ್ಲಾ ಕಲಾವಿದರು ತಮ್ಮತಮ್ಮ ಮನೆಗಳಿಗೆ ಹೊರಡುವಾಗ ಎಲ್ಲರಿಗೂ ಏನೋ ಕಳೆದುಕೊಳ್ಳುತ್ತಿರುವ ದುಃಖದೊಂದಿಗೆ ಕುವೆಂಪುರವರ ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ ಎಂಬ ಮುನ್ನುಡಿಯು ಅಕ್ಷರಶಃ ಅರಿವಿಗೆ ಬಂದೇ ಬರುತ್ತಿತ್ತು. ಇದರೊಂದಿಗೆ ಇಂತಹ ರಂಗಪ್ರಯೋಗದ ಭಾಗವಾಗಿದ್ದಕ್ಕೆ ಎಲ್ಲರಲ್ಲೂ ಧನ್ಯತೆಯ ಭಾವವೊಂದು ಮೂಡುತಿತ್ತು. ಹೀಗೆ ವಿಶ್ವದ ಮೂಲೆಮೂಲೆಗೂ ರಂಗಭೂಮಿ ಒಂದಲ್ಲ ಒಂದು ರೀತಿ ಮಾನವೀಯತೆಯ ಔಷಧಿಯನ್ನು ಉಣಿಸುತ್ತಿದೆ. ಹೀಗಿರುವಾಗ ವಿಶ್ವಮಾನವನ ಮೇರುಕೃತಿ ಮದುಮಗಳು ರಂಗಪ್ರಯೋಗದ ಮೂಲಕ ವಿಶ್ವಮಾನವ ಸಂದೇಶ ಕಲಾವಿದರ ಎದೆಗೆ ಇಳಿದಿರುವುದರಲ್ಲಿ ಅಚ್ಚರಿಯಿಲ್ಲ.

ಪುನೀತ್ ಕುಮಾರ್

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ, ರಂಗನಟ. ನಾಟಕಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಇವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಪಾದ್ರಿ ಜೀವರತ್ನಯ್ಯ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Too Much Democracy: ಹೆಚ್ಚು ಪ್ರಜಾಪ್ರಭುತ್ವಕ್ಕೆ ಅತಿ ಪ್ರಜಾಪ್ರಭುತ್ವವೇ ಪರಿಹಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....