Homeಅಂಕಣಗಳು`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

- Advertisement -
- Advertisement -

ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿವೆ. ನಮ್ಮ ಸುತ್ತಮುತ್ತಲ ಜನರೊಂದಿಗೆ ಒಡನಾಡುವಾಗಲೇ ಇಂಥ ಆರೋಪಗಳ ಸುಳಿದುಬಿಡುತ್ತವೆ.
ಆರೋಪಗಳಿಗೆ ಗುರಿಯಾದವನು ಗಂಡಸಾಗಿದ್ದರೆ ‘ಅವನು ಹಣ ಕಬಳಿಸಿದ್ದಾನೆ’ ಎಂದು ಹಾಗೂ ಹೆಣ್ಣಾಗಿದ್ದರೆ ‘ಅವಳು ನಡತೆಗೆಟ್ಟವಳು’ ಎಂದು ಹೇಳುವುದು ಸಾಮಾನ್ಯ. ಇದರ ಪ್ರತಿಕ್ರಿಯೆಯಾಗಿ ‘ಮೊದಲು ಸಾಕ್ಷಿ ತೋರಿಸಿ’ ಎನ್ನುವುದು ಕೂಡ ಸಹಜವಾಗಿಬಿಟ್ಟಿದೆ. ಆದುದರಿಂದ ಜಾಗತಿಕ ಮಟ್ಟದಲ್ಲಿ ಶೋಷಕರು ಬಹಿರಂಗಗೊಳ್ಳುತ್ತಿರುವಾಗೆಲ್ಲ ನಾನು ದ್ವಂದ್ವದಲ್ಲಿ ಬೀಳುತ್ತೇನೆ. ಇಲ್ಲಿನ ಎರಡು ನೈತಿಕ ಆದರ್ಶಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಮೊದಲನೆಯದಾಗಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಲೈಂಗಿಕ ಶೋಷಣೆ ವ್ಯಾಪಿಸಿಕೊಂಡಿರುವುದನ್ನು ನೋಡಬೇಕಾದ ದಯನೀಯ ಸ್ಥಿತಿ ನಮ್ಮೆದುರಿಗಿದೆ. ಆದ್ದರಿಂದ ಸಾರ್ವಜನಿಕವಾಗಿ ಇಂಥವು ಬಹಿರಂಗಗೊಳ್ಳುವುದು ಅತ್ಯವಶ್ಯಕ. ಆರೋಪಿಗಳು ಸಿಕ್ಕುಬಿದ್ದಮೇಲೂ ಖುಲ್ಲಂ ಖುಲ್ಲ ತಿರುಗಾಡುತ್ತಿರುವುದು ಯಾವುದೇ ರಾಷ್ಟ್ರೀಯ ಕಳಂಕಕ್ಕೆ ಸಮನಾದ ವಿಚಾರವೇ ಸರಿ. ಹೀಗಾಗಿ, ಈ ಪಿಡುಗು ದೊಡ್ಡ ಪ್ರಮಾಣದಲ್ಲಿ ಬಹಿರಂಗಗೊಂಡು, ಸ್ವಲ್ಪ ನಾಟಕೀಯ ತಿರುವು ಪಡೆದುಕೊಂಡರೆ ಇಂಥಾ ಅನೇಕ ಪ್ರಕರಣಗಳು ಬೆಳಕಿಗೆ ಬರುವಂತಾಗುತ್ತದೆ; ಜನತೆಗೆ ಈ ಕುರಿತು ಪ್ರಜ್ಞೆ ಮೂಡುವಂತಾಗುತ್ತದೆ.

ಎರಡನೆಯದು, ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯಿದೆ ಎನ್ನುವುದು. ಘಟನೆ ಜರುಗಿ ಎಷ್ಟೋ ವರ್ಷಗಳ ಬಳಿಕ ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದರೆ ಅದಕ್ಕೆ ಗಟ್ಟಿ ಸಾಕ್ಷಿ ಇಲ್ಲದ ಸ್ಥಿತಿ ಉಂಟಾಗಿ ನಿಷ್ಪಕ್ಷಪಾತತೆ ಮತ್ತು ನ್ಯಾಯದ ಮೂಲ ಸಿದ್ಧಾಂತದ ಉಲ್ಲಂಘನೆಯಾಗುತ್ತದೆ. ಇದರ ದುರುಪಯೋಗ ಮಾಡುವ ಸಾಧ್ಯತೆಯಿರುತ್ತದೆ ಮತ್ತು ಇದನ್ನೇ ಮಾಡಲಾಗುತ್ತಿದೆ. ಆದ್ದರಿಂದ ಕಳೆದ ವರ್ಷ ಕೆಲ ಅಕಾಡೆಮಿಕ್ ಅಪರಾಧಿಗಳ ಹೆಸರುಗಳನ್ನು ಒಗ್ಗೂಡಿಸಿ ಸಾರ್ವತ್ರಿಕಗೊಳಿಸಿದಾಗ, ನಾನು ಇದರೊಂದಿಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ. ಮುಂದೆ, ಕೆಲವು ಸ್ತ್ರೀವಾದಿಗಳು ಇಂಥಾ ವಿಚಾರದಲ್ಲಿ ಗಂಭೀರವಾಗಿ ಉತ್ತರಿಸುವ ಬೇಡಿಕೆಯಿಟ್ಟಾಗಷ್ಟೇ ನನಗೆ ಈ ಹೊಯ್ದಾಟದಿಂದ ಹೊರ ಬರುವುದು ಸಾಧ್ಯವಾಯಿತು.
ಆದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸದ್ಯದ ಅಲೆ ಈ ವಿಚಾರಕ್ಕಿಂತ ಕೊಂಚ ಬೇರೆಯಾಗಿದೆ. ಅದು ಉನ್ನತ ಪದವಿಗಳಲ್ಲಿ ಕುಳಿತವರು, ಮಾಧ್ಯಮಗಳ ಗೌರವಾನ್ವಿತ ವ್ಯಕ್ತಿಗಳೂ ತಮ್ಮ ಸ್ಥಾನದ ದುರುಪಯೋಗ ಮಾಡಿ ಮಹಿಳೆಯರನ್ನು ಪೀಡಿಸಿದ್ದಾರೆ, ಅವರನ್ನು ಕೀಳಾಗಿ ಕಾಣಲಾಗಿದೆ ಮತ್ತು ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎನ್ನುವುದು.
ಭಾರತದಲ್ಲಿ #ಮೀಟೂ ಅನಾಮಧೇಯ ಸೆರಗಿನಲ್ಲಿ ಅಡಗಿಕೊಂಡಿಲ್ಲ. ಮಹಿಳೆಯರು ಬಹಿರಂಗವಾಗಿ ಹೊರಬರುತ್ತಿದ್ದಾರೆ, ತಮ್ಮ ಪರಿಚಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ, ಅಪರಾಧಿಗಳ ಹೆಸರುಗಳನ್ನು ಹೇಳುತ್ತಿದ್ದಾರೆ ಮತ್ತು ಅವರಾಡುತ್ತಿರುವ ಮಾತುಗಳಿಗಾಗಿ ತಲೆದಂಡ ತೆರಲು ಅವರು ತಯಾರಾಗಿದ್ದಾರೆ. ಅವರ ಸಾಹಸಗಳನ್ನು ನೋಡುವಾಗ, ಅವರು ಈ ವಿಚಾರವಾಗಿ ದೃಢನಿಲುವು ತಳೆದಿದ್ದಾರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅವರ ಕೈಯಲ್ಲಿ ಕೇವಲ ಅವಸರದ ಆರೋಪಗಳಿಲ್ಲ ಎನ್ನುವ ಅಭಿಪ್ರಾಯ ತಳೆಯಬೇಕಾಗುತ್ತದೆ.
ಕಳೆದ ವಾರ ಈ ಕುರಿತು ನಾವು ಓದಿದ ಬಹುತೇಕ ಸುದ್ದಿಗಳು ಸವಿಸ್ತಾರವಾಗಿದ್ದು ಬಹು ಗಂಭೀರ ಸ್ವರೂಪದವುಗಳಾಗಿವೆ, ಮಹಿಳೆಯರು ಹೇಳುತ್ತಿರುವಂತಹ ಸನ್ನಿವೇಶಜನ್ಯ ಸಾಕ್ಷ್ಯಗಳು ಈ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಈ ಸಾಕ್ಷ್ಯಾಧಾರಗಳನ್ನು ನಿಖರ ಸಾಕ್ಷಿಯಾಗಿ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಆದರೆ ಇವುಗಳನ್ನು ನಂಬಿಕೆಗೆ ಅರ್ಹವಲ್ಲ ಹಾಗೂ ಪ್ರಾಮಾಣಿಕವಲ್ಲ ಎನ್ನಲು ಸಂವೇದನಾಶೂನ್ಯರಾಗಬೇಕಾಗುತ್ತದೆ. ಈ ಸತ್ಯದ ಜೊತೆಗೆ ಮಹಿಳೆಯರು ಬಲಾಢ್ಯ ವ್ಯಕ್ತಿಗಳ ವಿರುದ್ಧ ನಿಂತಿದ್ದಾರೆ, ಅದು ನಿಮ್ಮ ಮನಸ್ಸನ್ನು ತಟ್ಟಲಾರದು ಎಂದಾದರೆ ನೀವು ದೂಷಣೆಗೆ ಅರ್ಹರೇ ಸರಿ.
ಇಂಥ ನೋವಿನ ಕಥೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿಡುವುದು, ಪ್ರತಿಷ್ಠಿತರ ಹೆಸರುಗಳನ್ನೆತ್ತಿ ಛೀಮಾರಿ ಹಾಕುವುದರಿಂದ ನ್ಯಾಯ ಪಡೆಯಬಹುದೆ? ನನ್ನ ಉತ್ತರ ಹೌದು. ಇವರಲ್ಲಿ ಹೆಚ್ಚಿನ ಮಹಿಳೆಯರು ಜ್ಯೂನಿಯರ್ ಉದ್ಯೋಗಿಗಳಾಗಿದ್ದರು ಮತ್ತು ಅಲ್ಲಿ ತಮ್ಮ ಪುರುಷ ಸಹೋದ್ಯೋಗಿಗಳಿಂದ ಕಿರುಕುಳವನ್ನು ಸಹಿಸಿದ್ದಾರೆಂದರೆ ಅವರಿಗೆ ದುಪ್ಪಟ್ಟು ನಷ್ಟ ಸಹಿಸಬೇಕಾದ ಬಿಕ್ಕಟ್ಟಿನ ಸನ್ನಿವೇಶವಿತ್ತು ಎಂದರ್ಥ.
ಕೆಸರೆರಚುವ ಪರವಾನಗಿ ಸಿಕ್ಕಂತಾಗುತ್ತದೆ ಎಂಬುದು ಇಲ್ಲಿನ ಅಪಾಯ. ಪ್ರತಿಯೊಂದು ಪ್ರೇಮ ಪ್ರಸಂಗ, ವಿಕೃತವಾದ ಪ್ರತಿಯೊಂದು ಸಂಬಂಧ, ಎಲ್ಲಾ ದುಡುಕುತನ, ಮೂರ್ಖತನ, ಕೊನೆಗೆ ಭ್ರಾಂತಿಯೂ ಕೂಡ ಪ್ರಹಾರದ ರೀತಿಯಲ್ಲಿ ಬಳಸುವ ಸಾಧ್ಯತೆಯಿದೆ. ಹೌದು, ಈ ಸಾಮೂಹಿಕ ಮತ್ತು ಸಾರ್ವಜನಿಕ ‘ಸತ್ಯೋದ್ಘಾಟನೆ’ಗೆ ತನ್ನದೇ ಮಾನದಂಡ ಹಾಗೂ ಪ್ರೋಟೋಕಾಲ್ ವಿಕಸಿತಗೊಳಿಸಬೇಕಾಗುತ್ತದೆ, ಯಾರೂ ಇದರ ದುರುಪಯೋಗ ಮಾಡದಂತೆ. ಆದರೆ ಭಾರತದಲ್ಲಿ #ಮೀಟೂ ಸಂದರ್ಭವು ತೆರೆದಿರುವ ಅಪರೂಪದ ಬೆಳಕಿಂಡಿಯನ್ನು ಮುಚ್ಚಲು ಯಾರಿಗೂ ಅಧಿಕಾರವಿಲ್ಲ.
ಇದು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ಬದಲಿಸುವ ಆಂದೋಲನವಾಗಬಹುದೇ ಎಂಬುದು ಇದು ಇನ್ನಷ್ಟು ಪ್ರೋತ್ಸಾಹ, ಪ್ರಚಾರ ಪಡೆದುಕೊಳ್ಳುತ್ತದೋ ಅಥವಾ ಇದನ್ನು ಹತ್ತಿಕ್ಕಲಾಗುತ್ತದೋ ಎಂಬುದರ ಮೇಲೆ ನಿಂತಿದೆ.
ಆದರೆ ಇಂದು ಮಹಿಳೆಯರು ಸರ್ವವ್ಯಾಪಿಯಾಗಿರುವ ಅಶ್ಲೀಲ ಪ್ರಪಂಚದಲ್ಲಿ ಪ್ರತಿನಿತ್ಯ ಭೀಷಣ ರೂಪದ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಲೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಈ ಆಂದೋಲನವು ಮಹಾನಗರಗಳಿಂದ ಕುಗ್ರಾಮಗಳವರೆಗೆ ವಿಸ್ತರಿಸಬೇಕು, ಮಾಧ್ಯಮಗಳಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದವರೆಗೆ, ಸಂಘಟಿತ ಕ್ಷೇತ್ರದಿಂದ ಅಸಂಘಟಿತ ಕ್ಷೇತ್ರಗಳತನಕ, ಹಾಗೆಯೇ ಸಾರ್ವಜನಿಕ ಜೀವನದಿಂದ ಬಿಡಿಬಿಡಿ ಕೌಟುಂಬಿಕ ಲೈಂಗಿಕ ದೌರ್ಜನ್ಯಗಳ ತನಕ ವ್ಯಾಪಿಸಬೇಕಿದೆ. ಹೀಗಾದಲ್ಲಿ ಭಾರತದಲ್ಲಿ #ಮೀಟೂ ಚಳವಳಿ ನಮ್ಮ ಲೈಂಗಿಕ ಸಂವೇದನಾಶೀಲತೆ ಮತ್ತು ಸಾಮುದಾಯಿಕ ಕಟ್ಟುಪಾಡುಗಳನ್ನು ಪುನರ್ನಿರ್ಮಿಸಬಲ್ಲದು.
ನಾನು ಭಾರತದಲ್ಲಿ #ಮೀಟೂ ವಿಚಾರದಲ್ಲಿ ಓದುತ್ತಿರುವಾಗಲೇ ಎರಡು ಸುದ್ದಿಗಳು ಗಮನ ಸೆಳೆದವು. ಬಿಹಾರದ ಕೆಲ ಶಾಲಾ ವಿದ್ಯಾರ್ಥಿನಿಯರು ಹಲ್ಲೆಗೊಳಗಾಗಿದ್ದರೂ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುವ ಸಾಹಸ ಮಾಡಿದ್ದಾರೆ. ಟ್ಯಾಗೋರರ ಕನಸಿನ ವಿಶ್ವವಿದ್ಯಾಲಯವಾದ ವಿಶ್ವಭಾರತಿಯಲ್ಲಿ ಎಂಥಾ ಅಕಾಡೆಮಿಕ್ ವ್ಯಕ್ತಿಯನ್ನು ನಮ್ಮ ಭಾರತದ ರಾಷ್ಟ್ರಪತಿಯವರು ಉಪಕುಲಪತಿಯನ್ನಾಗಿ ನಿಯುಕ್ತಗೊಳಿಸಿದ್ದಾರೆಂದರೆ ಆ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಕ್ಕುಬಿದ್ದು ಶಿಕ್ಷೆಗೊಳಗಾಗಿದ್ದಾರೆ.
ಈ ಎರಡು ಉದಾಹರಣೆಗಳು ಯಾವ ಕಪ್ಪು ಕಲೆಗಳ ಕಡೆಗೆ ಬೊಟ್ಟುಮಾಡುತ್ತವೆಯೋ ಅತ್ತ #ಮೀಟೂ ಚಳವಳಿಯ ಗಮನ ಹರಿಯಲೇಬೇಕಾಗಿದೆ. ಈಗ ನಾವು ಸಾರ್ವಜನಿಕವಾಗಿ ದಿಟ್ಟ ದನಿಯೆತ್ತಿರುವ ಆ ಮಹಿಳೆಯರಿಗೂ ಹಾಗೂ ದನಿ ಎತ್ತವಂತೆ ಮಾಡಿದ #ಮೀಟೂ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಸಲಾಮು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...