Homeಅಂಕಣಗಳು`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

`#ಮೀಟೂ ಆಂದೋಲನವು ಭಾರತದಲ್ಲಿ ಮಹಿಳೆಯರ ಕುರಿತಾದ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲುದು’

- Advertisement -
- Advertisement -

ಯಾವುದೇ ಒಂದು ಆರೋಪ ಕೇಳಿಬಂದಾಗ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಯೇ ನೋಡಬೇಕು ಎಂಬುದು ಸಾರ್ವಜನಿಕ ಜೀವನದಿಂದ ನಾವು ಕಲಿತಿರುವ ಮೊದಲ ಪಾಠ. ಗಂಭೀರ ಆರೋಪಗಳು ನಮ್ಮ ಸಾರ್ವಜನಿಕ ಜೀವನದ, ಅದಕ್ಕೂ ಮಿಗಿಲಾಗಿ ರಾಜಕೀಯ ಜೀವನದ ಅವಿಭಾಜ್ಯ ಅಂಗದಂತಾಗಿ ಹೋಗಿವೆ. ನಮ್ಮ ಸುತ್ತಮುತ್ತಲ ಜನರೊಂದಿಗೆ ಒಡನಾಡುವಾಗಲೇ ಇಂಥ ಆರೋಪಗಳ ಸುಳಿದುಬಿಡುತ್ತವೆ.
ಆರೋಪಗಳಿಗೆ ಗುರಿಯಾದವನು ಗಂಡಸಾಗಿದ್ದರೆ ‘ಅವನು ಹಣ ಕಬಳಿಸಿದ್ದಾನೆ’ ಎಂದು ಹಾಗೂ ಹೆಣ್ಣಾಗಿದ್ದರೆ ‘ಅವಳು ನಡತೆಗೆಟ್ಟವಳು’ ಎಂದು ಹೇಳುವುದು ಸಾಮಾನ್ಯ. ಇದರ ಪ್ರತಿಕ್ರಿಯೆಯಾಗಿ ‘ಮೊದಲು ಸಾಕ್ಷಿ ತೋರಿಸಿ’ ಎನ್ನುವುದು ಕೂಡ ಸಹಜವಾಗಿಬಿಟ್ಟಿದೆ. ಆದುದರಿಂದ ಜಾಗತಿಕ ಮಟ್ಟದಲ್ಲಿ ಶೋಷಕರು ಬಹಿರಂಗಗೊಳ್ಳುತ್ತಿರುವಾಗೆಲ್ಲ ನಾನು ದ್ವಂದ್ವದಲ್ಲಿ ಬೀಳುತ್ತೇನೆ. ಇಲ್ಲಿನ ಎರಡು ನೈತಿಕ ಆದರ್ಶಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಮೊದಲನೆಯದಾಗಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಲೈಂಗಿಕ ಶೋಷಣೆ ವ್ಯಾಪಿಸಿಕೊಂಡಿರುವುದನ್ನು ನೋಡಬೇಕಾದ ದಯನೀಯ ಸ್ಥಿತಿ ನಮ್ಮೆದುರಿಗಿದೆ. ಆದ್ದರಿಂದ ಸಾರ್ವಜನಿಕವಾಗಿ ಇಂಥವು ಬಹಿರಂಗಗೊಳ್ಳುವುದು ಅತ್ಯವಶ್ಯಕ. ಆರೋಪಿಗಳು ಸಿಕ್ಕುಬಿದ್ದಮೇಲೂ ಖುಲ್ಲಂ ಖುಲ್ಲ ತಿರುಗಾಡುತ್ತಿರುವುದು ಯಾವುದೇ ರಾಷ್ಟ್ರೀಯ ಕಳಂಕಕ್ಕೆ ಸಮನಾದ ವಿಚಾರವೇ ಸರಿ. ಹೀಗಾಗಿ, ಈ ಪಿಡುಗು ದೊಡ್ಡ ಪ್ರಮಾಣದಲ್ಲಿ ಬಹಿರಂಗಗೊಂಡು, ಸ್ವಲ್ಪ ನಾಟಕೀಯ ತಿರುವು ಪಡೆದುಕೊಂಡರೆ ಇಂಥಾ ಅನೇಕ ಪ್ರಕರಣಗಳು ಬೆಳಕಿಗೆ ಬರುವಂತಾಗುತ್ತದೆ; ಜನತೆಗೆ ಈ ಕುರಿತು ಪ್ರಜ್ಞೆ ಮೂಡುವಂತಾಗುತ್ತದೆ.

ಎರಡನೆಯದು, ನಿಷ್ಪಕ್ಷಪಾತ ತನಿಖೆಯ ಅವಶ್ಯಕತೆಯಿದೆ ಎನ್ನುವುದು. ಘಟನೆ ಜರುಗಿ ಎಷ್ಟೋ ವರ್ಷಗಳ ಬಳಿಕ ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದರೆ ಅದಕ್ಕೆ ಗಟ್ಟಿ ಸಾಕ್ಷಿ ಇಲ್ಲದ ಸ್ಥಿತಿ ಉಂಟಾಗಿ ನಿಷ್ಪಕ್ಷಪಾತತೆ ಮತ್ತು ನ್ಯಾಯದ ಮೂಲ ಸಿದ್ಧಾಂತದ ಉಲ್ಲಂಘನೆಯಾಗುತ್ತದೆ. ಇದರ ದುರುಪಯೋಗ ಮಾಡುವ ಸಾಧ್ಯತೆಯಿರುತ್ತದೆ ಮತ್ತು ಇದನ್ನೇ ಮಾಡಲಾಗುತ್ತಿದೆ. ಆದ್ದರಿಂದ ಕಳೆದ ವರ್ಷ ಕೆಲ ಅಕಾಡೆಮಿಕ್ ಅಪರಾಧಿಗಳ ಹೆಸರುಗಳನ್ನು ಒಗ್ಗೂಡಿಸಿ ಸಾರ್ವತ್ರಿಕಗೊಳಿಸಿದಾಗ, ನಾನು ಇದರೊಂದಿಗೆ ನಿಲ್ಲುವುದು ಸಾಧ್ಯವಾಗಿರಲಿಲ್ಲ. ಮುಂದೆ, ಕೆಲವು ಸ್ತ್ರೀವಾದಿಗಳು ಇಂಥಾ ವಿಚಾರದಲ್ಲಿ ಗಂಭೀರವಾಗಿ ಉತ್ತರಿಸುವ ಬೇಡಿಕೆಯಿಟ್ಟಾಗಷ್ಟೇ ನನಗೆ ಈ ಹೊಯ್ದಾಟದಿಂದ ಹೊರ ಬರುವುದು ಸಾಧ್ಯವಾಯಿತು.
ಆದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಸದ್ಯದ ಅಲೆ ಈ ವಿಚಾರಕ್ಕಿಂತ ಕೊಂಚ ಬೇರೆಯಾಗಿದೆ. ಅದು ಉನ್ನತ ಪದವಿಗಳಲ್ಲಿ ಕುಳಿತವರು, ಮಾಧ್ಯಮಗಳ ಗೌರವಾನ್ವಿತ ವ್ಯಕ್ತಿಗಳೂ ತಮ್ಮ ಸ್ಥಾನದ ದುರುಪಯೋಗ ಮಾಡಿ ಮಹಿಳೆಯರನ್ನು ಪೀಡಿಸಿದ್ದಾರೆ, ಅವರನ್ನು ಕೀಳಾಗಿ ಕಾಣಲಾಗಿದೆ ಮತ್ತು ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎನ್ನುವುದು.
ಭಾರತದಲ್ಲಿ #ಮೀಟೂ ಅನಾಮಧೇಯ ಸೆರಗಿನಲ್ಲಿ ಅಡಗಿಕೊಂಡಿಲ್ಲ. ಮಹಿಳೆಯರು ಬಹಿರಂಗವಾಗಿ ಹೊರಬರುತ್ತಿದ್ದಾರೆ, ತಮ್ಮ ಪರಿಚಯವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ, ಅಪರಾಧಿಗಳ ಹೆಸರುಗಳನ್ನು ಹೇಳುತ್ತಿದ್ದಾರೆ ಮತ್ತು ಅವರಾಡುತ್ತಿರುವ ಮಾತುಗಳಿಗಾಗಿ ತಲೆದಂಡ ತೆರಲು ಅವರು ತಯಾರಾಗಿದ್ದಾರೆ. ಅವರ ಸಾಹಸಗಳನ್ನು ನೋಡುವಾಗ, ಅವರು ಈ ವಿಚಾರವಾಗಿ ದೃಢನಿಲುವು ತಳೆದಿದ್ದಾರೆ, ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅವರ ಕೈಯಲ್ಲಿ ಕೇವಲ ಅವಸರದ ಆರೋಪಗಳಿಲ್ಲ ಎನ್ನುವ ಅಭಿಪ್ರಾಯ ತಳೆಯಬೇಕಾಗುತ್ತದೆ.
ಕಳೆದ ವಾರ ಈ ಕುರಿತು ನಾವು ಓದಿದ ಬಹುತೇಕ ಸುದ್ದಿಗಳು ಸವಿಸ್ತಾರವಾಗಿದ್ದು ಬಹು ಗಂಭೀರ ಸ್ವರೂಪದವುಗಳಾಗಿವೆ, ಮಹಿಳೆಯರು ಹೇಳುತ್ತಿರುವಂತಹ ಸನ್ನಿವೇಶಜನ್ಯ ಸಾಕ್ಷ್ಯಗಳು ಈ ಆರೋಪಗಳನ್ನು ಪುಷ್ಟೀಕರಿಸುತ್ತಿವೆ. ಈ ಸಾಕ್ಷ್ಯಾಧಾರಗಳನ್ನು ನಿಖರ ಸಾಕ್ಷಿಯಾಗಿ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಆದರೆ ಇವುಗಳನ್ನು ನಂಬಿಕೆಗೆ ಅರ್ಹವಲ್ಲ ಹಾಗೂ ಪ್ರಾಮಾಣಿಕವಲ್ಲ ಎನ್ನಲು ಸಂವೇದನಾಶೂನ್ಯರಾಗಬೇಕಾಗುತ್ತದೆ. ಈ ಸತ್ಯದ ಜೊತೆಗೆ ಮಹಿಳೆಯರು ಬಲಾಢ್ಯ ವ್ಯಕ್ತಿಗಳ ವಿರುದ್ಧ ನಿಂತಿದ್ದಾರೆ, ಅದು ನಿಮ್ಮ ಮನಸ್ಸನ್ನು ತಟ್ಟಲಾರದು ಎಂದಾದರೆ ನೀವು ದೂಷಣೆಗೆ ಅರ್ಹರೇ ಸರಿ.
ಇಂಥ ನೋವಿನ ಕಥೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿಡುವುದು, ಪ್ರತಿಷ್ಠಿತರ ಹೆಸರುಗಳನ್ನೆತ್ತಿ ಛೀಮಾರಿ ಹಾಕುವುದರಿಂದ ನ್ಯಾಯ ಪಡೆಯಬಹುದೆ? ನನ್ನ ಉತ್ತರ ಹೌದು. ಇವರಲ್ಲಿ ಹೆಚ್ಚಿನ ಮಹಿಳೆಯರು ಜ್ಯೂನಿಯರ್ ಉದ್ಯೋಗಿಗಳಾಗಿದ್ದರು ಮತ್ತು ಅಲ್ಲಿ ತಮ್ಮ ಪುರುಷ ಸಹೋದ್ಯೋಗಿಗಳಿಂದ ಕಿರುಕುಳವನ್ನು ಸಹಿಸಿದ್ದಾರೆಂದರೆ ಅವರಿಗೆ ದುಪ್ಪಟ್ಟು ನಷ್ಟ ಸಹಿಸಬೇಕಾದ ಬಿಕ್ಕಟ್ಟಿನ ಸನ್ನಿವೇಶವಿತ್ತು ಎಂದರ್ಥ.
ಕೆಸರೆರಚುವ ಪರವಾನಗಿ ಸಿಕ್ಕಂತಾಗುತ್ತದೆ ಎಂಬುದು ಇಲ್ಲಿನ ಅಪಾಯ. ಪ್ರತಿಯೊಂದು ಪ್ರೇಮ ಪ್ರಸಂಗ, ವಿಕೃತವಾದ ಪ್ರತಿಯೊಂದು ಸಂಬಂಧ, ಎಲ್ಲಾ ದುಡುಕುತನ, ಮೂರ್ಖತನ, ಕೊನೆಗೆ ಭ್ರಾಂತಿಯೂ ಕೂಡ ಪ್ರಹಾರದ ರೀತಿಯಲ್ಲಿ ಬಳಸುವ ಸಾಧ್ಯತೆಯಿದೆ. ಹೌದು, ಈ ಸಾಮೂಹಿಕ ಮತ್ತು ಸಾರ್ವಜನಿಕ ‘ಸತ್ಯೋದ್ಘಾಟನೆ’ಗೆ ತನ್ನದೇ ಮಾನದಂಡ ಹಾಗೂ ಪ್ರೋಟೋಕಾಲ್ ವಿಕಸಿತಗೊಳಿಸಬೇಕಾಗುತ್ತದೆ, ಯಾರೂ ಇದರ ದುರುಪಯೋಗ ಮಾಡದಂತೆ. ಆದರೆ ಭಾರತದಲ್ಲಿ #ಮೀಟೂ ಸಂದರ್ಭವು ತೆರೆದಿರುವ ಅಪರೂಪದ ಬೆಳಕಿಂಡಿಯನ್ನು ಮುಚ್ಚಲು ಯಾರಿಗೂ ಅಧಿಕಾರವಿಲ್ಲ.
ಇದು ನಮ್ಮ ಜನಪ್ರಿಯ ಸಂಸ್ಕೃತಿಯನ್ನು ಬದಲಿಸುವ ಆಂದೋಲನವಾಗಬಹುದೇ ಎಂಬುದು ಇದು ಇನ್ನಷ್ಟು ಪ್ರೋತ್ಸಾಹ, ಪ್ರಚಾರ ಪಡೆದುಕೊಳ್ಳುತ್ತದೋ ಅಥವಾ ಇದನ್ನು ಹತ್ತಿಕ್ಕಲಾಗುತ್ತದೋ ಎಂಬುದರ ಮೇಲೆ ನಿಂತಿದೆ.
ಆದರೆ ಇಂದು ಮಹಿಳೆಯರು ಸರ್ವವ್ಯಾಪಿಯಾಗಿರುವ ಅಶ್ಲೀಲ ಪ್ರಪಂಚದಲ್ಲಿ ಪ್ರತಿನಿತ್ಯ ಭೀಷಣ ರೂಪದ ಲೈಂಗಿಕ ದೌರ್ಜನ್ಯಗಳಿಗೆ ಈಡಾಗುತ್ತಲೇ ಇದ್ದಾರೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಈ ಆಂದೋಲನವು ಮಹಾನಗರಗಳಿಂದ ಕುಗ್ರಾಮಗಳವರೆಗೆ ವಿಸ್ತರಿಸಬೇಕು, ಮಾಧ್ಯಮಗಳಿಂದ ಹಿಡಿದು ಬ್ಯುಸಿನೆಸ್ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದವರೆಗೆ, ಸಂಘಟಿತ ಕ್ಷೇತ್ರದಿಂದ ಅಸಂಘಟಿತ ಕ್ಷೇತ್ರಗಳತನಕ, ಹಾಗೆಯೇ ಸಾರ್ವಜನಿಕ ಜೀವನದಿಂದ ಬಿಡಿಬಿಡಿ ಕೌಟುಂಬಿಕ ಲೈಂಗಿಕ ದೌರ್ಜನ್ಯಗಳ ತನಕ ವ್ಯಾಪಿಸಬೇಕಿದೆ. ಹೀಗಾದಲ್ಲಿ ಭಾರತದಲ್ಲಿ #ಮೀಟೂ ಚಳವಳಿ ನಮ್ಮ ಲೈಂಗಿಕ ಸಂವೇದನಾಶೀಲತೆ ಮತ್ತು ಸಾಮುದಾಯಿಕ ಕಟ್ಟುಪಾಡುಗಳನ್ನು ಪುನರ್ನಿರ್ಮಿಸಬಲ್ಲದು.
ನಾನು ಭಾರತದಲ್ಲಿ #ಮೀಟೂ ವಿಚಾರದಲ್ಲಿ ಓದುತ್ತಿರುವಾಗಲೇ ಎರಡು ಸುದ್ದಿಗಳು ಗಮನ ಸೆಳೆದವು. ಬಿಹಾರದ ಕೆಲ ಶಾಲಾ ವಿದ್ಯಾರ್ಥಿನಿಯರು ಹಲ್ಲೆಗೊಳಗಾಗಿದ್ದರೂ ಲೈಂಗಿಕ ದೌರ್ಜನ್ಯವನ್ನು ವಿರೋಧಿಸುವ ಸಾಹಸ ಮಾಡಿದ್ದಾರೆ. ಟ್ಯಾಗೋರರ ಕನಸಿನ ವಿಶ್ವವಿದ್ಯಾಲಯವಾದ ವಿಶ್ವಭಾರತಿಯಲ್ಲಿ ಎಂಥಾ ಅಕಾಡೆಮಿಕ್ ವ್ಯಕ್ತಿಯನ್ನು ನಮ್ಮ ಭಾರತದ ರಾಷ್ಟ್ರಪತಿಯವರು ಉಪಕುಲಪತಿಯನ್ನಾಗಿ ನಿಯುಕ್ತಗೊಳಿಸಿದ್ದಾರೆಂದರೆ ಆ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಸಿಕ್ಕುಬಿದ್ದು ಶಿಕ್ಷೆಗೊಳಗಾಗಿದ್ದಾರೆ.
ಈ ಎರಡು ಉದಾಹರಣೆಗಳು ಯಾವ ಕಪ್ಪು ಕಲೆಗಳ ಕಡೆಗೆ ಬೊಟ್ಟುಮಾಡುತ್ತವೆಯೋ ಅತ್ತ #ಮೀಟೂ ಚಳವಳಿಯ ಗಮನ ಹರಿಯಲೇಬೇಕಾಗಿದೆ. ಈಗ ನಾವು ಸಾರ್ವಜನಿಕವಾಗಿ ದಿಟ್ಟ ದನಿಯೆತ್ತಿರುವ ಆ ಮಹಿಳೆಯರಿಗೂ ಹಾಗೂ ದನಿ ಎತ್ತವಂತೆ ಮಾಡಿದ #ಮೀಟೂ ಅಭಿಯಾನದಲ್ಲಿ ಭಾಗಿಯಾದ ಎಲ್ಲರಿಗೂ ಸಲಾಮು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...