Homeಮುಖಪುಟಮಿತ್ರೋ ಸ್ವಲ್ಪ ಇಲ್ಲಿ ಕೇಳಿ. - ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

ಮಿತ್ರೋ ಸ್ವಲ್ಪ ಇಲ್ಲಿ ಕೇಳಿ. – ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

- Advertisement -
| ಭರತ್ ಹೆಬ್ಬಾಳ್ |
ಮೊನಚು ಹಾಸ್ಯದ ಮೂಲಕ ಆಳುವವರನ್ನು ಪ್ರಶ್ನಿಸುವುದು ಬಹಳಷ್ಟು ಜನರಿಗೆ ಬೇಗ ಮುಟ್ಟುತ್ತದೆ. ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮಿತ್ರೋ ಸೀರೀಸ್ ನಲ್ಲಿ ಭರತ್ ಹೆಬ್ಬಾಳ್ ಬರೆಯುತ್ತಾರೆ. ಆಯ್ದ ಮಿತ್ರೋನ್ ಬರಹಗಳು ನಿಮ್ಮ ಓದಿ, ನಕ್ಕು ನಲಿಯಿರಿ.
Mithron, ಚುನಾವಣಾ ಪ್ರಚಾರದ ಪ್ರಯುಕ್ತ  ನಾನು ಹುಟ್ಟಿದ ನಾಡಾದ ಕರ್ನಾಟಕಕ್ಕೆ ಮತ್ತೆ ಬರ್ತಿದ್ದೀನಿ, ನಾನು ಕನ್ನಡಿಗ ಅಂದ್ರೆ  ನಿಮಗೆ ಆಶ್ಚರ್ಯವಾಗಬೊಹುದು.. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲೇ.. ಇಲ್ದೆಇರೋ ಅಚ್ಛೇದಿನ್  ಜಿಲ್ಲೆಯ ಸಾಬ್ಕವಿಕಾಸ್ ತಾಲೂಕಿನ “ಸತ್ಯಸುಳ್ ಮಾಡೋಹಳ್ಳಿ” ನಾನು ಹುಟ್ಟಿದ್ದು ಎಂಬುವ ಸತ್ಯ  ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ. ಚಿಕೊವ್ನಿದ್ದಾಗ ಮೈಸೂರ್ ದಸರಾ ಜಾತ್ರೆಲಿ ಕಳೆದು ಹೋಗಿ ಗುಜರಾತ್ ಸೇರ್ಕೊಂಡೆ.. ಆದ್ದರಿಂದ ನನ್ನನ್ನು ಅಂದರೆ ನಾನು ಸ್ಪರ್ದಿಸುತ್ತಿರುವ 27 ಕ್ಷೇತ್ರಗಳಲ್ಲಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕೋರುತ್ತೇನೆ.. ಜೈ ಚೊಂಭೇಶ್ವರ..
——
Mithron,  ಅತಿ ಭ್ರಷ್ಟ ಲೋಫರ್ ಲಫ್ಹಂಗಾಗಳು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸೈಟು, ಮನೆ, ಜಮೀನು, ಚಿನ್ನ ಇತ್ಯಾದಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮಾಡ್ಕೊಂಡು “ನಾನು ಮಾತ್ರ ಭ್ರಷ್ಟನಲ್ಲ” ಅಂಥ ನನ್ನ ಬೆನ್ನ ಹಿಂದೆ ನಿಂತ್ಕೊಂಡ್ ನಾನು ಎನ್ ಹೇಳುದ್ರು ಮೋದಿ ಮೋದಿ ಎಂದು ಅರಚುತ್ತಾ, ಸ್ವಚ್ಛ ಭಾರತ, ಭ್ರಷ್ಟ ಕಾಂಗ್ರೆಸ್ ಅಂತೆಲ್ಲ ಮಾತಾಡ್ತಾರಲ್ಲ.. ಇವರುಗಳ ಬಗ್ಗೆ ಯೋಚನೆ ಮಾಡುದ್ರೆ ಒಂದೊಂದ್ ಸಾರ್ತಿ ಭಯ ಬಂದು ರಾತ್ರಿಯೆಲ್ಲ ನಿದ್ದೆ ಬರೋಲ್ಲ.. ಎಂಥ ಮನಗೆಟ್ಟ ಜನ್ಮ ಈ ಲೋಫರ್ಗಳದ್ದೂ.
——
Mithron, ಹಿಂದೂ ಸಂಸ್ಕೃತಿ ಸಂಪ್ರದಾಯದ ಪ್ರಕಾರ 15 ಲಕ್ಷ ಕೊಡುವುದು ಒಳ್ಳೆಯದಲ್ಲ. ಆದ್ದರಿಂದ ಈ ಭಾರಿ ನನ್ನನ್ನು ಗೆಲ್ಲಿಸಿದರೆ ಹಿಂದೂ ಸಂಸ್ಕೃತಿಯ ಪ್ರಕಾರ 15 ಲಕ್ಷದ ಒಂದು ರೂಪಾಯಿ ನಿಮ್ಮ ಅಕೌಂಟಿಗೆ  ಬಂದು ಬೀಳುವುದು ಗ್ಯಾರೆಂಟಿ..
——
Mithron, ಬೆಂಗಳೂರಿನ ಬೀದಿಗಳಲ್ಲಿ ಕಲ್ಲು ಬೀಸಿದರೆ ಒಂದೋ ಬೀದಿ ನಾಯಿಗೆ ತಗಲುತ್ತದೆ ಅಥವಾ ಸಾಫ್ಟ್ ವೆರ್ ಟೆಕಿಗಳಿಗೆ ಬೀಳುತ್ತದೆ ಎಂಬ ಮಾತಿತ್ತು.. ಭಾಹಿಯೋ ಔರ್ ಬೆಹೆನೋ ಇದರಲ್ಲಿ ವ್ಯತ್ಯಾಸ ಇಷ್ಟೇ, ನಾಯಿಗಳು ಕುಯ್ ಅಂಥವೇ, ಇಲ್ಲ ಎದುರು ಬಂದು ಬೊಗಳಿ ಕಚ್ಚುವ ಪ್ರಯತ್ನ ಮಾಡುತ್ತವೆ.. ಆದರೆ ಬಹುತೇಕ ಸಾಫ್ಟ್ ವೆರ್ ಟೆಕಿಗಳು ಮಾತ್ರ ಏನೇ ಆಗಲಿ ಮೋದಿ ಮೋದಿ ಎಂದು ಕೂಗುತ್ತಾರೆ ಅಷ್ಟೇ.. #ಮತ್ತೊಮ್ಮೆಮೋದಿ #ಕುಯ್ #ಜೈಚೊಂಭೇಶ್ವರ
——
Mithron, ಮೊನ್ನೆ ಚೆನ್ನಾಗಿ ಓದಿಕೊಂಡು ದೊಡ್ಡ ಹುದ್ದೆಯಲ್ಲಿರುವ  ನನ್ನ ಪರಮ ಭಕ್ತನೊಬ್ಬನನ್ನು ಪ್ರಶ್ನೆ ಮಾಡಿದೆ. ನಾಜಿ ಜರ್ಮನಿಯಲ್ಲಿ ಹಿಟ್ಲರ್ನನ ಪರವಾಗಿರ್ತೀಯ? ಅಥವಾ ಲಕ್ಷಗಟ್ಟಲೆ ಕೊಲ್ಲಲ್ಪಟ್ಟ ಯಹೂದಿಗಳ ಪರವಾಗಿರ್ತಿಯ ಅಂಥ.. ಅವನು ಹಿಟ್ಲರ್ ಪರವಾಗಿರ್ತೀನಿ ಅಂದ.
ಸರಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ಜರ್ಮನಿಯನ್ನು ಸಪ್ಪೋರ್ಟ್ ಮಾಡ್ತಿಯ ಅಥವಾ ಪ್ಯಾಲೆಸ್ತೀನಿಯನ್ನರ ಮಾರಣಹೋಮ ಮಾಡುತ್ತಿರುವ ಇಸ್ರೇಲಿ ಯಹೂದಿಗಳ ಸಪ್ಪೋರ್ಟ್ ಮಾಡ್ತಿಯ ಅಂಥ.. ಅವನು ಇಸ್ರೇಲಿ ಯಹೂದಿಗಳ ಪರ ಎಂದ..
ಆ ಉತ್ತರಗಳನ್ನು ಕೇಳಿ ಕರುಳು ಕಿತ್ ಬಂತು ನಂಗೆ.. ಸೊ ನಾನು ಏನೇ ಮಾಡಿದರೂ, ನನ್ನ ಹಿಂದೆ ಸಾಮಾಜಿಕ ಪ್ರಜ್ಞೆಯಿಲ್ಲದ, ಸರ್ವಾಧಿಕಾರವನ್ನು ಬಯಸುವ ಇಂತ ಸುಶಿಕ್ಷಿತ ನಾಯಿಗಳಿರುವವರೆಗೂ ನನ್ನ ಸ್ಥಾನ  ಭದ್ರ ಎಂದು ಖಾತರಿಯಾಯಿತು..
——
Mithron, ನನ್ನ ಸಲಹೆಗಾರರು ನಂಗೆ ನಾಲ್ಕು ಆಯ್ಕೆ ಕೊಟ್ಟಿದ್ರು.
1. ನನ್ನ ಕಣ್ಣೋಟದಿಂದಲೇ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
2. ಮಂತ್ರ ಜಪಿಸುತ್ತ ನನ್ನ ಮನಶಕ್ತಿಯಿಂದ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
3. ನಾನು ಶಾ ಹೊಟ್ಟೆಮೇಲ್ ನಿತ್ಕೊಂಡ್ ಜಂಪ್ ಮಾಡಿ ಸೊಳ್ಳೆ ಬ್ಯಾಟ್ನಿಂದ ಉಪಗ್ರಹಗಳ ನಾಶ ಮಾಡುವ ಶಕ್ತಿ.
4. ಹತ್ತು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದ ವಿಶೇಷ  ಅಗ್ನಿ 5 ಕ್ಷಿಪಣಿಯಿಂದ ಕೆಳಮಟ್ಟದ ಉಪಗ್ರಹಗಳನ್ನು ನಾಶ ಮಾಡುವ ಶಕ್ತಿ.
ನಾನು ನಾಲ್ಕನೇಯದನ್ನು ಆರಿಸಿಕೊಂಡೆ ಚೋಂಬೇಶ್ವರ
——
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...

ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಯುವಜನರ ನಿರುದ್ಯೋಗ ಪ್ರಮಾಣ

15–29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗ ದರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಶೇ. 14.8 ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 14.7 ರಷ್ಟು ಹೆಚ್ಚಾಗಿ, ಯುವಜನರಲ್ಲಿ ನಿರುದ್ಯೋಗ ಹೆಚ್ಚಳ ಉಂಟಾಗಿದೆ...

ಆರ್‌ಎಸ್‌ಎಸ್‌ ನಿಷೇಧಕ್ಕೆ ಒತ್ತಾಯಿಸಿದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ; ಕಾಂಗ್ರೆಸ್ ಪ್ರತಿಕ್ರಿಯೆ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುನೈಟೆಡ್ ಸ್ಟೇಟ್ಸ್ ಆಯೋಗವು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ, ವಿಶ್ಲೇಷಣಾ...

ಕಾಂಗ್ರೆಸ್ ವಿರುದ್ಧದ ‘ಟರ್ಕಿ ಕಚೇರಿ’ ಹೇಳಿಕೆ: ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಕಾಂಗ್ರೆಸ್ ವಿರುದ್ಧದ "ಟರ್ಕಿ ಕಚೇರಿ" ಆರೋಪಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತರರಾಷ್ಟ್ರೀಯ ಕಚೇರಿಯನ್ನು ನಡೆಸುತ್ತಿದೆ...

ಚುನಾವಣಾ ಆಯೋಗ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭಾ ಚುನಾವಣೆಗೂ ಮುನ್ನ, ಭಾರತದ ಚುನಾವಣಾ ಆಯೋಗ (ಇಸಿಐ) ಪ್ರಸ್ತುತ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಮುಖ್ಯ ಮತ್ತು ಗೃಹ ಕಾರ್ಯದರ್ಶಿಗಳನ್ನು ಬದಲಿಸುವ ಮೂಲಕ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಪಶ್ಚಿಮ ಬಂಗಾಳದ ಹೊಸ ಡಿಜಿ...