Homeಮನರಂಜನೆಮಿತ್ರೋ ಸ್ವಲ್ಪ ಇಲ್ಲಿ ಕೇಳಿ. - ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

ಮಿತ್ರೋ ಸ್ವಲ್ಪ ಇಲ್ಲಿ ಕೇಳಿ. – ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

- Advertisement -
| ಭರತ್ ಹೆಬ್ಬಾಳ್ |
ಮೊನಚು ಹಾಸ್ಯದ ಮೂಲಕ ಆಳುವವರನ್ನು ಪ್ರಶ್ನಿಸುವುದು ಬಹಳಷ್ಟು ಜನರಿಗೆ ಬೇಗ ಮುಟ್ಟುತ್ತದೆ. ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮಿತ್ರೋ ಸೀರೀಸ್ ನಲ್ಲಿ ಭರತ್ ಹೆಬ್ಬಾಳ್ ಬರೆಯುತ್ತಾರೆ. ಆಯ್ದ ಮಿತ್ರೋನ್ ಬರಹಗಳು ನಿಮ್ಮ ಓದಿ, ನಕ್ಕು ನಲಿಯಿರಿ.
Mithron, ಚುನಾವಣಾ ಪ್ರಚಾರದ ಪ್ರಯುಕ್ತ  ನಾನು ಹುಟ್ಟಿದ ನಾಡಾದ ಕರ್ನಾಟಕಕ್ಕೆ ಮತ್ತೆ ಬರ್ತಿದ್ದೀನಿ, ನಾನು ಕನ್ನಡಿಗ ಅಂದ್ರೆ  ನಿಮಗೆ ಆಶ್ಚರ್ಯವಾಗಬೊಹುದು.. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲೇ.. ಇಲ್ದೆಇರೋ ಅಚ್ಛೇದಿನ್  ಜಿಲ್ಲೆಯ ಸಾಬ್ಕವಿಕಾಸ್ ತಾಲೂಕಿನ “ಸತ್ಯಸುಳ್ ಮಾಡೋಹಳ್ಳಿ” ನಾನು ಹುಟ್ಟಿದ್ದು ಎಂಬುವ ಸತ್ಯ  ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ. ಚಿಕೊವ್ನಿದ್ದಾಗ ಮೈಸೂರ್ ದಸರಾ ಜಾತ್ರೆಲಿ ಕಳೆದು ಹೋಗಿ ಗುಜರಾತ್ ಸೇರ್ಕೊಂಡೆ.. ಆದ್ದರಿಂದ ನನ್ನನ್ನು ಅಂದರೆ ನಾನು ಸ್ಪರ್ದಿಸುತ್ತಿರುವ 27 ಕ್ಷೇತ್ರಗಳಲ್ಲಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕೋರುತ್ತೇನೆ.. ಜೈ ಚೊಂಭೇಶ್ವರ..
——
Mithron,  ಅತಿ ಭ್ರಷ್ಟ ಲೋಫರ್ ಲಫ್ಹಂಗಾಗಳು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸೈಟು, ಮನೆ, ಜಮೀನು, ಚಿನ್ನ ಇತ್ಯಾದಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮಾಡ್ಕೊಂಡು “ನಾನು ಮಾತ್ರ ಭ್ರಷ್ಟನಲ್ಲ” ಅಂಥ ನನ್ನ ಬೆನ್ನ ಹಿಂದೆ ನಿಂತ್ಕೊಂಡ್ ನಾನು ಎನ್ ಹೇಳುದ್ರು ಮೋದಿ ಮೋದಿ ಎಂದು ಅರಚುತ್ತಾ, ಸ್ವಚ್ಛ ಭಾರತ, ಭ್ರಷ್ಟ ಕಾಂಗ್ರೆಸ್ ಅಂತೆಲ್ಲ ಮಾತಾಡ್ತಾರಲ್ಲ.. ಇವರುಗಳ ಬಗ್ಗೆ ಯೋಚನೆ ಮಾಡುದ್ರೆ ಒಂದೊಂದ್ ಸಾರ್ತಿ ಭಯ ಬಂದು ರಾತ್ರಿಯೆಲ್ಲ ನಿದ್ದೆ ಬರೋಲ್ಲ.. ಎಂಥ ಮನಗೆಟ್ಟ ಜನ್ಮ ಈ ಲೋಫರ್ಗಳದ್ದೂ.
——
Mithron, ಹಿಂದೂ ಸಂಸ್ಕೃತಿ ಸಂಪ್ರದಾಯದ ಪ್ರಕಾರ 15 ಲಕ್ಷ ಕೊಡುವುದು ಒಳ್ಳೆಯದಲ್ಲ. ಆದ್ದರಿಂದ ಈ ಭಾರಿ ನನ್ನನ್ನು ಗೆಲ್ಲಿಸಿದರೆ ಹಿಂದೂ ಸಂಸ್ಕೃತಿಯ ಪ್ರಕಾರ 15 ಲಕ್ಷದ ಒಂದು ರೂಪಾಯಿ ನಿಮ್ಮ ಅಕೌಂಟಿಗೆ  ಬಂದು ಬೀಳುವುದು ಗ್ಯಾರೆಂಟಿ..
——
Mithron, ಬೆಂಗಳೂರಿನ ಬೀದಿಗಳಲ್ಲಿ ಕಲ್ಲು ಬೀಸಿದರೆ ಒಂದೋ ಬೀದಿ ನಾಯಿಗೆ ತಗಲುತ್ತದೆ ಅಥವಾ ಸಾಫ್ಟ್ ವೆರ್ ಟೆಕಿಗಳಿಗೆ ಬೀಳುತ್ತದೆ ಎಂಬ ಮಾತಿತ್ತು.. ಭಾಹಿಯೋ ಔರ್ ಬೆಹೆನೋ ಇದರಲ್ಲಿ ವ್ಯತ್ಯಾಸ ಇಷ್ಟೇ, ನಾಯಿಗಳು ಕುಯ್ ಅಂಥವೇ, ಇಲ್ಲ ಎದುರು ಬಂದು ಬೊಗಳಿ ಕಚ್ಚುವ ಪ್ರಯತ್ನ ಮಾಡುತ್ತವೆ.. ಆದರೆ ಬಹುತೇಕ ಸಾಫ್ಟ್ ವೆರ್ ಟೆಕಿಗಳು ಮಾತ್ರ ಏನೇ ಆಗಲಿ ಮೋದಿ ಮೋದಿ ಎಂದು ಕೂಗುತ್ತಾರೆ ಅಷ್ಟೇ.. #ಮತ್ತೊಮ್ಮೆಮೋದಿ #ಕುಯ್ #ಜೈಚೊಂಭೇಶ್ವರ
——
Mithron, ಮೊನ್ನೆ ಚೆನ್ನಾಗಿ ಓದಿಕೊಂಡು ದೊಡ್ಡ ಹುದ್ದೆಯಲ್ಲಿರುವ  ನನ್ನ ಪರಮ ಭಕ್ತನೊಬ್ಬನನ್ನು ಪ್ರಶ್ನೆ ಮಾಡಿದೆ. ನಾಜಿ ಜರ್ಮನಿಯಲ್ಲಿ ಹಿಟ್ಲರ್ನನ ಪರವಾಗಿರ್ತೀಯ? ಅಥವಾ ಲಕ್ಷಗಟ್ಟಲೆ ಕೊಲ್ಲಲ್ಪಟ್ಟ ಯಹೂದಿಗಳ ಪರವಾಗಿರ್ತಿಯ ಅಂಥ.. ಅವನು ಹಿಟ್ಲರ್ ಪರವಾಗಿರ್ತೀನಿ ಅಂದ.
ಸರಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ಜರ್ಮನಿಯನ್ನು ಸಪ್ಪೋರ್ಟ್ ಮಾಡ್ತಿಯ ಅಥವಾ ಪ್ಯಾಲೆಸ್ತೀನಿಯನ್ನರ ಮಾರಣಹೋಮ ಮಾಡುತ್ತಿರುವ ಇಸ್ರೇಲಿ ಯಹೂದಿಗಳ ಸಪ್ಪೋರ್ಟ್ ಮಾಡ್ತಿಯ ಅಂಥ.. ಅವನು ಇಸ್ರೇಲಿ ಯಹೂದಿಗಳ ಪರ ಎಂದ..
ಆ ಉತ್ತರಗಳನ್ನು ಕೇಳಿ ಕರುಳು ಕಿತ್ ಬಂತು ನಂಗೆ.. ಸೊ ನಾನು ಏನೇ ಮಾಡಿದರೂ, ನನ್ನ ಹಿಂದೆ ಸಾಮಾಜಿಕ ಪ್ರಜ್ಞೆಯಿಲ್ಲದ, ಸರ್ವಾಧಿಕಾರವನ್ನು ಬಯಸುವ ಇಂತ ಸುಶಿಕ್ಷಿತ ನಾಯಿಗಳಿರುವವರೆಗೂ ನನ್ನ ಸ್ಥಾನ  ಭದ್ರ ಎಂದು ಖಾತರಿಯಾಯಿತು..
——
Mithron, ನನ್ನ ಸಲಹೆಗಾರರು ನಂಗೆ ನಾಲ್ಕು ಆಯ್ಕೆ ಕೊಟ್ಟಿದ್ರು.
1. ನನ್ನ ಕಣ್ಣೋಟದಿಂದಲೇ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
2. ಮಂತ್ರ ಜಪಿಸುತ್ತ ನನ್ನ ಮನಶಕ್ತಿಯಿಂದ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
3. ನಾನು ಶಾ ಹೊಟ್ಟೆಮೇಲ್ ನಿತ್ಕೊಂಡ್ ಜಂಪ್ ಮಾಡಿ ಸೊಳ್ಳೆ ಬ್ಯಾಟ್ನಿಂದ ಉಪಗ್ರಹಗಳ ನಾಶ ಮಾಡುವ ಶಕ್ತಿ.
4. ಹತ್ತು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದ ವಿಶೇಷ  ಅಗ್ನಿ 5 ಕ್ಷಿಪಣಿಯಿಂದ ಕೆಳಮಟ್ಟದ ಉಪಗ್ರಹಗಳನ್ನು ನಾಶ ಮಾಡುವ ಶಕ್ತಿ.
ನಾನು ನಾಲ್ಕನೇಯದನ್ನು ಆರಿಸಿಕೊಂಡೆ ಚೋಂಬೇಶ್ವರ
——
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...