Homeಮುಖಪುಟಮಿತ್ರೋ ಸ್ವಲ್ಪ ಇಲ್ಲಿ ಕೇಳಿ. - ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

ಮಿತ್ರೋ ಸ್ವಲ್ಪ ಇಲ್ಲಿ ಕೇಳಿ. – ಭರತ್ ಹೆಬ್ಬಾಳ್ ರವರ ಮಿತ್ರೋ ಬರಹಗಳು

- Advertisement -
| ಭರತ್ ಹೆಬ್ಬಾಳ್ |
ಮೊನಚು ಹಾಸ್ಯದ ಮೂಲಕ ಆಳುವವರನ್ನು ಪ್ರಶ್ನಿಸುವುದು ಬಹಳಷ್ಟು ಜನರಿಗೆ ಬೇಗ ಮುಟ್ಟುತ್ತದೆ. ಈ ರೀತಿಯಾಗಿ ನರೇಂದ್ರ ಮೋದಿ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮಿತ್ರೋ ಸೀರೀಸ್ ನಲ್ಲಿ ಭರತ್ ಹೆಬ್ಬಾಳ್ ಬರೆಯುತ್ತಾರೆ. ಆಯ್ದ ಮಿತ್ರೋನ್ ಬರಹಗಳು ನಿಮ್ಮ ಓದಿ, ನಕ್ಕು ನಲಿಯಿರಿ.
Mithron, ಚುನಾವಣಾ ಪ್ರಚಾರದ ಪ್ರಯುಕ್ತ  ನಾನು ಹುಟ್ಟಿದ ನಾಡಾದ ಕರ್ನಾಟಕಕ್ಕೆ ಮತ್ತೆ ಬರ್ತಿದ್ದೀನಿ, ನಾನು ಕನ್ನಡಿಗ ಅಂದ್ರೆ  ನಿಮಗೆ ಆಶ್ಚರ್ಯವಾಗಬೊಹುದು.. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲೇ.. ಇಲ್ದೆಇರೋ ಅಚ್ಛೇದಿನ್  ಜಿಲ್ಲೆಯ ಸಾಬ್ಕವಿಕಾಸ್ ತಾಲೂಕಿನ “ಸತ್ಯಸುಳ್ ಮಾಡೋಹಳ್ಳಿ” ನಾನು ಹುಟ್ಟಿದ್ದು ಎಂಬುವ ಸತ್ಯ  ಇಲ್ಲಿಯ ತನಕ ಯಾರಿಗೂ ಗೊತ್ತಿಲ್ಲ. ಚಿಕೊವ್ನಿದ್ದಾಗ ಮೈಸೂರ್ ದಸರಾ ಜಾತ್ರೆಲಿ ಕಳೆದು ಹೋಗಿ ಗುಜರಾತ್ ಸೇರ್ಕೊಂಡೆ.. ಆದ್ದರಿಂದ ನನ್ನನ್ನು ಅಂದರೆ ನಾನು ಸ್ಪರ್ದಿಸುತ್ತಿರುವ 27 ಕ್ಷೇತ್ರಗಳಲ್ಲಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಕೋರುತ್ತೇನೆ.. ಜೈ ಚೊಂಭೇಶ್ವರ..
——
Mithron,  ಅತಿ ಭ್ರಷ್ಟ ಲೋಫರ್ ಲಫ್ಹಂಗಾಗಳು ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸೈಟು, ಮನೆ, ಜಮೀನು, ಚಿನ್ನ ಇತ್ಯಾದಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಮಾಡ್ಕೊಂಡು “ನಾನು ಮಾತ್ರ ಭ್ರಷ್ಟನಲ್ಲ” ಅಂಥ ನನ್ನ ಬೆನ್ನ ಹಿಂದೆ ನಿಂತ್ಕೊಂಡ್ ನಾನು ಎನ್ ಹೇಳುದ್ರು ಮೋದಿ ಮೋದಿ ಎಂದು ಅರಚುತ್ತಾ, ಸ್ವಚ್ಛ ಭಾರತ, ಭ್ರಷ್ಟ ಕಾಂಗ್ರೆಸ್ ಅಂತೆಲ್ಲ ಮಾತಾಡ್ತಾರಲ್ಲ.. ಇವರುಗಳ ಬಗ್ಗೆ ಯೋಚನೆ ಮಾಡುದ್ರೆ ಒಂದೊಂದ್ ಸಾರ್ತಿ ಭಯ ಬಂದು ರಾತ್ರಿಯೆಲ್ಲ ನಿದ್ದೆ ಬರೋಲ್ಲ.. ಎಂಥ ಮನಗೆಟ್ಟ ಜನ್ಮ ಈ ಲೋಫರ್ಗಳದ್ದೂ.
——
Mithron, ಹಿಂದೂ ಸಂಸ್ಕೃತಿ ಸಂಪ್ರದಾಯದ ಪ್ರಕಾರ 15 ಲಕ್ಷ ಕೊಡುವುದು ಒಳ್ಳೆಯದಲ್ಲ. ಆದ್ದರಿಂದ ಈ ಭಾರಿ ನನ್ನನ್ನು ಗೆಲ್ಲಿಸಿದರೆ ಹಿಂದೂ ಸಂಸ್ಕೃತಿಯ ಪ್ರಕಾರ 15 ಲಕ್ಷದ ಒಂದು ರೂಪಾಯಿ ನಿಮ್ಮ ಅಕೌಂಟಿಗೆ  ಬಂದು ಬೀಳುವುದು ಗ್ಯಾರೆಂಟಿ..
——
Mithron, ಬೆಂಗಳೂರಿನ ಬೀದಿಗಳಲ್ಲಿ ಕಲ್ಲು ಬೀಸಿದರೆ ಒಂದೋ ಬೀದಿ ನಾಯಿಗೆ ತಗಲುತ್ತದೆ ಅಥವಾ ಸಾಫ್ಟ್ ವೆರ್ ಟೆಕಿಗಳಿಗೆ ಬೀಳುತ್ತದೆ ಎಂಬ ಮಾತಿತ್ತು.. ಭಾಹಿಯೋ ಔರ್ ಬೆಹೆನೋ ಇದರಲ್ಲಿ ವ್ಯತ್ಯಾಸ ಇಷ್ಟೇ, ನಾಯಿಗಳು ಕುಯ್ ಅಂಥವೇ, ಇಲ್ಲ ಎದುರು ಬಂದು ಬೊಗಳಿ ಕಚ್ಚುವ ಪ್ರಯತ್ನ ಮಾಡುತ್ತವೆ.. ಆದರೆ ಬಹುತೇಕ ಸಾಫ್ಟ್ ವೆರ್ ಟೆಕಿಗಳು ಮಾತ್ರ ಏನೇ ಆಗಲಿ ಮೋದಿ ಮೋದಿ ಎಂದು ಕೂಗುತ್ತಾರೆ ಅಷ್ಟೇ.. #ಮತ್ತೊಮ್ಮೆಮೋದಿ #ಕುಯ್ #ಜೈಚೊಂಭೇಶ್ವರ
——
Mithron, ಮೊನ್ನೆ ಚೆನ್ನಾಗಿ ಓದಿಕೊಂಡು ದೊಡ್ಡ ಹುದ್ದೆಯಲ್ಲಿರುವ  ನನ್ನ ಪರಮ ಭಕ್ತನೊಬ್ಬನನ್ನು ಪ್ರಶ್ನೆ ಮಾಡಿದೆ. ನಾಜಿ ಜರ್ಮನಿಯಲ್ಲಿ ಹಿಟ್ಲರ್ನನ ಪರವಾಗಿರ್ತೀಯ? ಅಥವಾ ಲಕ್ಷಗಟ್ಟಲೆ ಕೊಲ್ಲಲ್ಪಟ್ಟ ಯಹೂದಿಗಳ ಪರವಾಗಿರ್ತಿಯ ಅಂಥ.. ಅವನು ಹಿಟ್ಲರ್ ಪರವಾಗಿರ್ತೀನಿ ಅಂದ.
ಸರಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾತಾಂತ್ರಿಕ ಜರ್ಮನಿಯನ್ನು ಸಪ್ಪೋರ್ಟ್ ಮಾಡ್ತಿಯ ಅಥವಾ ಪ್ಯಾಲೆಸ್ತೀನಿಯನ್ನರ ಮಾರಣಹೋಮ ಮಾಡುತ್ತಿರುವ ಇಸ್ರೇಲಿ ಯಹೂದಿಗಳ ಸಪ್ಪೋರ್ಟ್ ಮಾಡ್ತಿಯ ಅಂಥ.. ಅವನು ಇಸ್ರೇಲಿ ಯಹೂದಿಗಳ ಪರ ಎಂದ..
ಆ ಉತ್ತರಗಳನ್ನು ಕೇಳಿ ಕರುಳು ಕಿತ್ ಬಂತು ನಂಗೆ.. ಸೊ ನಾನು ಏನೇ ಮಾಡಿದರೂ, ನನ್ನ ಹಿಂದೆ ಸಾಮಾಜಿಕ ಪ್ರಜ್ಞೆಯಿಲ್ಲದ, ಸರ್ವಾಧಿಕಾರವನ್ನು ಬಯಸುವ ಇಂತ ಸುಶಿಕ್ಷಿತ ನಾಯಿಗಳಿರುವವರೆಗೂ ನನ್ನ ಸ್ಥಾನ  ಭದ್ರ ಎಂದು ಖಾತರಿಯಾಯಿತು..
——
Mithron, ನನ್ನ ಸಲಹೆಗಾರರು ನಂಗೆ ನಾಲ್ಕು ಆಯ್ಕೆ ಕೊಟ್ಟಿದ್ರು.
1. ನನ್ನ ಕಣ್ಣೋಟದಿಂದಲೇ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
2. ಮಂತ್ರ ಜಪಿಸುತ್ತ ನನ್ನ ಮನಶಕ್ತಿಯಿಂದ ಕೆಳಮಟ್ಟದ ಉಪಗ್ರಹಗಳ ನಾಶ ಮಾಡುವ ಶಕ್ತಿ.
3. ನಾನು ಶಾ ಹೊಟ್ಟೆಮೇಲ್ ನಿತ್ಕೊಂಡ್ ಜಂಪ್ ಮಾಡಿ ಸೊಳ್ಳೆ ಬ್ಯಾಟ್ನಿಂದ ಉಪಗ್ರಹಗಳ ನಾಶ ಮಾಡುವ ಶಕ್ತಿ.
4. ಹತ್ತು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದ ವಿಶೇಷ  ಅಗ್ನಿ 5 ಕ್ಷಿಪಣಿಯಿಂದ ಕೆಳಮಟ್ಟದ ಉಪಗ್ರಹಗಳನ್ನು ನಾಶ ಮಾಡುವ ಶಕ್ತಿ.
ನಾನು ನಾಲ್ಕನೇಯದನ್ನು ಆರಿಸಿಕೊಂಡೆ ಚೋಂಬೇಶ್ವರ
——
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...