Homeಕರ್ನಾಟಕಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

ಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

- Advertisement -
- Advertisement -

ಸಮ್ಮಿಶ್ರ ಸರ್ಕಾರದ ಶಾಸಕರ ರಾಜಿನಾಮೆಯ ಪ್ರಹಸನ ಈಗ ವಿಧಾನಸಭೆಯ ಅಂಗಳಕ್ಕೆ ಬಂದಿದ್ದು ಚರ್ಚೆ ನಡೆಯುತ್ತಿದೆ. ಬಿಜೆಪಿಯವರಿಗೆ ವಿಶ್ವಾಸ ಮತಯಾಚನೆಯ ಪ್ರಕ್ರಿಯೆ ಬೇಗ ನಡೆಯಬೆಕೆಂಬ ಕಾತರವಾದರೆ, ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈ ದಿನ ಕಳೆದರೆ ಎರಡು ದಿನ ಸಮಾಯಾವಕಾಶ ಸಿಗುವುದರಿಂದ ಮುಂದೆ ತಮ್ಮ ಸರ್ಕಾರ ಉಳಿಸಿಕೊಳ್ಳಬಹುದೆಂಬ ಯೋಚನೆ.

ಬಿಜೆಪಿಯ ಆಪರೇಷನ್ ಕಮಲದಂತಹ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಹಲವರು ಮಾತಾಡಿದ್ದರು. ಈ ಸಂದರ್ಭದಲ್ಲಿ ಅರಸಿಕೆರೆಯ ಶಾಸಕ ಶಿವಲಿಂಗೇಗೌಡರವರು ಹಾಸ್ಯ ಮಿಶ್ರಿತವಾಗಿ ರಾಜಕೀಯದ ಇತಿಹಾಸವನ್ನು ನೆನಪಿಸುತ್ತಾ ಸಭೆಯನ್ನು ಉದ್ದೇಶಿ ಮಾತನಾಡಿದರು. ತಮ್ಮ ಇಂಗ್ಲೀಷ್ ಭಾಷೆಯ ಜ್ಞಾನದ ಬಗ್ಗೆ ಕೆಣಕಿದಾಗ ನಾನು ಇಂಗ್ಲಿಷ್ ನಲ್ಲಿ ಪ್ರವೀಣನಲ್ಲ. ನನಗೆ ಬರುವ ಇಂಗ್ಲಿಷ್ ನಲ್ಲಿ ಬಾಂಬೆಯಲ್ಲಿ ಮಾತಾಡಿದ್ದೆ. ಇಲ್ಲಿ ಕನ್ನಡದಲ್ಲಿ ಮಾತಾನಾಡುತ್ತೇನೆ ಅದರ ಬಗ್ಗೆ ತಾವು ಚಿಂತೆ ಮಾಡಬೇಡಿ ಎಂದು ಹೇಳುತ್ತಲೆ ಭಾಷಣ ಆರಂಭಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಕೀಯ ನಾಟಕವನ್ನ ನೋಡಿ ಜನ ಚೀ ತೂ ಎಂದು ಉಗಿಯುತ್ತಿದ್ದಾರೆ. ನೇರವಾಗಿ ಯಾರಿಗೆ ಉಗಿಯುತ್ತಿದ್ದಾರೆ ಎಂಬುದನ್ನು ನೀವೆ ಊಹಿಸಿಕೊಳ್ಳಬಹದು ಎಂದರು. ಅತೃಪ್ತ ಶಾಸಕರೇ ನಮ್ಮನ್ನ ಬಾಂಬೆಗೆ ಬನ್ನಿ ಅಂದಿದ್ದರು. ಅದರಲ್ಲಿ ಗೋಪಾಲಯ್ಯನವರೇ ಫೋನ್ ಮಾಡಿದ್ದರು. ಅದಕ್ಕಾಗಿ ನಾವು ಹೋದೆವು.

ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡಿದ್ದರೂ, ನಮಗೆ ಸ್ನಾನ ಮಾಡೋಕೆ ಬಿಟ್ಟಿಲ್ಲ. ಅಲ್ಲಿ ಬಿಜೆಪಿನ ಸರ್ಕಾರ ಇದೆ. ಹೋಗಿರೋದು ನಾಲ್ಕು ಜನ ನೀವು ಹೇಂಗಯ್ಯ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಆದರೆ ನಾವು ಡಿಕೆಶಿ ಮಳೆಯಲ್ಲಿಯೇ ಟೀ ಕುಡಿದು, ತಿಂದಿ ತಿಂದು ಬಂದೆವು. ಇದಕ್ಕೆ ಯಾರನ್ನು ನಾವು ಕೇಳಬೇಕು? ಏನು ಮಾಡುತ್ತಿದೆ ಸೆಂಟ್ರಲ್ ಗರ್ಮೆಂಟು. ಏನ್ ಮಾಡ್ತಿದ್ದಾರೆ ಗೃಹ ಸಚಿವರು.

ನಾವು ಇಬ್ಬರು ಸಚಿವರು, ಇಬ್ಬರು ಶಾಸಕರು ಹೋದರೆ ಬಂದು ಮಾತಾಡಿಸುವಷ್ಟು ಸೌಜನ್ಯ ಇಲ್ಲ ಅಲ್ಲಿನ ಸರ್ಕಾರಕ್ಕೆ. ಆ ಹೋಟೆಲ್ ನ ಒಳಗೆ ಬಿಜೆಪಿ ಸಚಿವರು, ಶಾಸಕರು ತುಂಬಿಕೊಂಡಿದ್ದರು. ಈ ಆಟಕ್ಕೆ, ಈ ಕುತಂತ್ರಕ್ಕೆ, ಈ ಘನಕಾರ್ಯಕ್ಕೆ ಕನ್ನಡಿ ಬೇರೆ ಬೇಕಾ ಬಿಜೆಪಿಯವರೆ? ಭಾರೀ ಭಾರೀ ಬೇಕಲ್ವ ಕನ್ನಡಿ ನಿಮಗೆ? ಸಮ್ಮಿಶ್ರ ಸರ್ಕಾರ ಕೆಟ್ಟ ಕೆಲಸ ಮಾಡಿದ್ದರೆ, ಅಪವಿತ್ರ ಕೆಲಸ ಆಗಿದ್ದರೆ ಅದರ ಬಗ್ಗೆ ಚರ್ಚೆಗಿಡಿ. ಅದನ್ನು ಬಿಟ್ಟು ಯಾಕೆ ರಾಜೀನಾಮೆ ಕೊಡಿಸಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇವತ್ತು ನಮ್ಮ ನಾಯಕರಾದ ಕುಮಾರಸ್ವಾಮಿಯವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಿಂದ ವಿಮುಕ್ತರಾಗಬೇಕು. ಯಾವ 15 ಜನ ಶಾಸಕರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಈ ಸದನದಿಂದ ಅವರಿಗೆ ನಾವು ಕೇಳಬೇಕು? ಈ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಲಿಲ್ಲವೇ? ಅನುದಾನ ಸಿಕ್ಕಲಿಲ್ಲವೇ? ಅದಕ್ಕೆ ಈ ಸದನದ ಮೂಲಕ ಜನರಿಗೆ ನಾವು ಉತ್ತರ ಕೊಡಬೇಕಿದೆ.

ಅದಕ್ಕೆ ನಾವು ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಬೇಕಿದೆ. ಇನ್ನು ಸಮ್ಮಿಶ್ರ ಸರ್ಕಾರ ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆಯೇ? ಬೇರೆ ರಾಜ್ಯಗಳಲ್ಲಿ ಇಲ್ಲವೇ? ಗೋವಾದಲ್ಲಿ ಬಿಜೆಪಿಯವರು ಕಡಿಮೆ ಸ್ಥಾನದಲ್ಲಿದ್ದರು ಅವರು ಮುಖ್ಯಮಂತ್ರಿಯಾಗಲಿಲ್ಲವೇ? ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಇವೆ ಅಲ್ಲವೇ? ಕೇವಲ 37 ಇರುವವರಿಗೆ 80 ಜನ ಇರುವವರು ಮುಖ್ಯಮಂತ್ರಿ ಸ್ಥಾನ ಕೊಟ್ಟುಬಿಟ್ಟಿದ್ದಾರೆ ಎಂದು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬೇಕು. ಅದಕ್ಕೆ ಸಮಯ ಬೇಕಿದೆ. ಈ ದೇಶದಲ್ಲಿ ಇದು ಒಂದೇ ಸರ್ಕಾರವೇ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ವಾಜಪೇಯಿಯವರ ಸರ್ಕಾರ ಇದೇ ರೀತಿಯ ಬಿಕ್ಕಟ್ಟು ಇದ್ದಾಗ 10 ತಿಂಗಳ ಕಾಲ ಚರ್ಚೆಯಾಯಿತು ಎಂಬುದು ನೆನಪಿಸಿಕೊಟ್ಟರು.

ಹಳ್ಳಿಯ ಗ್ರಾಮ್ಯ ಭಾಷೆಯಲ್ಲಿ ಮುಂದುವರೆಸಿದ ಅವರು ಹಳ್ಳಿಯ ಕಡೆ ಎತ್ತುಗಳನ್ನು ಮಾರಿದರೆ ಚೀಟಿಕೊಡುತ್ತಾರೆ ಆದರೆ ಶಾಸಕರನ್ನು ಕರೆದುಕೊಂಡರೆ ಅದೇನು ಕೊಡೋದೇ ಇಲ್ಲ ಅದಕ್ಕಿಂತ ಕಡೆಯಾಗಿ ಹೋಗಿದ್ಧಾರೆ ಶಾಸಕರು ಎಂದರು. ಬಿಜೆಪಿ ಮಾಡುತ್ತಿರುವ ಎಲ್ಲಾ ಕುತಂತ್ರಗಳಿಗೂ ಯಾವ ಕನ್ನಡಿಯೂ ಬೇಕಿಲ್ಲ ಜನರಿಗೆಲ್ಲ ತಿಳಿದಿದೆ. ನಾನು ಮುಖ್ಯಮಂತ್ರಿ ಯವರ ಸ್ಥಾನ ಉಳಿದರೆ ತಿರುಪತಿಗೆ ಒಂದು ಕೋಟಿ ಕೊಡುವುದಾಗಿ ಬೇಡಿಕೊಂಡು ಹೊರಬಂದೆ ಒಂದು ಗುಳ್ಳೆನರಿ ಎಡದಿಂದ ಬಲಕ್ಕೆ ಹೋಯಿತು ನಾನು ಒಳ್ಳೆಯದಾಗುತ್ತದೆ ಅಂದುಕೊಂಡೆ ಆದರೆ ನಮ್ಮ ಸ್ನೇಹಿತರಿಗೆ ಪೋನಾಯಿಸಿದರೆ ಎಮ್.ಟಿ.ಬಿ ನಾಗರಾಜ್ ಗುಳ್ಳೆನರಿ ತರ ತಪ್ಪಿಸಿಕೊಂಡಿದ್ದರು ಎಂದು ಹೇಳುವ ಮೂಲಕ ಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಸಂಧರ್ಭದಲ್ಲಿ ಸದಸ್ಯರನ್ನ ಕಿಡ್ನಾಪ್ ಮಾಡೋತರ ಶಾಸಕರನ್ನ ಕಿಡ್ನಾಪ್ ಮಾಡಿದ್ದಾರೆ. ಶಾಸಕ ಶ್ರೀಮಂತ್ ಪಾಟೀಲ್ ಗೆ ಆರೋಗ್ಯ ಸರಿಯಿಲ್ಲ ಅಂತ ಅಡ್ಮಿಟ್ ಮಾಡಿದ ಹಾಗೆ ಎಲ್ಲಾ 15 ಅತೃಪ್ತ ಶಾಸಕರನ್ನು ಅಡ್ಮಿಟ್ ಮಾಡಬೇಕಿತ್ತು ಎಂದರು. ಪ್ರತಿ ಬಾರಿ ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬವನ್ನು ಹೇಳುತ್ತೀರಿ, ಕುಟುಂಬ ರಾಜಕಾರಣವಿಲ್ಲದ ಒಂದಾದರೂ ರಾಜಕೀಯ ಪಕ್ಷವಿದ್ದರೆ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷದವರನ್ನು ಆಹ್ವಾನಿಸಿದರು.

ಇನ್ನು ಸರ್ಕಾರ ಇವತ್ತು ಬಿದ್ದೋಯಿತು, ನಾಳೆ ಬಿದ್ದೋಯಿುತು, ಢಮಾರ್ ಅಂತ ಎಲ್ಲ ಚರ್ಚೆ ಮಾಡ್ತೀರಿ ಏನ್ರಿ ಇದು. ನಾವು ಒಂದು ಪಕ್ಷದ ಚಿಹ್ನೆಯ ಕೆಳಗೆ ಗೆದ್ದರೆ ಅದು ನಮಗೆ ತಾಯಿ ಇದ್ದ ಹಾಗೆ. ಆ ಅತೃಪ್ತರು ನಾವು ಕಾಂಗ್ರೇಸ್ ಅಲ್ಲೇ ಇದ್ದೇವೆ ಮುಖ್ಯಮಂತ್ರಿಗಳಿಗೆ ವಿರೋಧ ಎಂದು ಹೇಳುತ್ತಾರೆ. ಆದರೆ ಬನ್ನಿ ಹದಿನೈದು ಜನ ಶಾಸಕರ ಕ್ಷೇತ್ರಕ್ಕೆ ಕೊಟ್ಟ ಅನುದಾನದ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು .

ಬೇರೆ ಸಮಯದಲ್ಲಿ ನಾವು ಮಾತಾಡಲು ಇಷ್ಟು ಸಮಯ ನೀವು ಕೊಡಲ್ಲ. ಇವತ್ತು ನಾನು ಏನು ಮಾತನಾಡಿದರು ಸುಮ್ಮನೆ ಇರುತ್ತೀರಿ ಅದಕ್ಕೆ ನಾನು ಚಚ್ಚುತ್ತಿದ್ದೀನಿ ಎಂದು ಹೇಳಿ ಸಭೆಯನ್ನು ನಗೆ ಗಡಲಲ್ಲಿ ತೇಲಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...