Homeಕರ್ನಾಟಕಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

ಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

- Advertisement -
- Advertisement -

ಸಮ್ಮಿಶ್ರ ಸರ್ಕಾರದ ಶಾಸಕರ ರಾಜಿನಾಮೆಯ ಪ್ರಹಸನ ಈಗ ವಿಧಾನಸಭೆಯ ಅಂಗಳಕ್ಕೆ ಬಂದಿದ್ದು ಚರ್ಚೆ ನಡೆಯುತ್ತಿದೆ. ಬಿಜೆಪಿಯವರಿಗೆ ವಿಶ್ವಾಸ ಮತಯಾಚನೆಯ ಪ್ರಕ್ರಿಯೆ ಬೇಗ ನಡೆಯಬೆಕೆಂಬ ಕಾತರವಾದರೆ, ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈ ದಿನ ಕಳೆದರೆ ಎರಡು ದಿನ ಸಮಾಯಾವಕಾಶ ಸಿಗುವುದರಿಂದ ಮುಂದೆ ತಮ್ಮ ಸರ್ಕಾರ ಉಳಿಸಿಕೊಳ್ಳಬಹುದೆಂಬ ಯೋಚನೆ.

ಬಿಜೆಪಿಯ ಆಪರೇಷನ್ ಕಮಲದಂತಹ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಹಲವರು ಮಾತಾಡಿದ್ದರು. ಈ ಸಂದರ್ಭದಲ್ಲಿ ಅರಸಿಕೆರೆಯ ಶಾಸಕ ಶಿವಲಿಂಗೇಗೌಡರವರು ಹಾಸ್ಯ ಮಿಶ್ರಿತವಾಗಿ ರಾಜಕೀಯದ ಇತಿಹಾಸವನ್ನು ನೆನಪಿಸುತ್ತಾ ಸಭೆಯನ್ನು ಉದ್ದೇಶಿ ಮಾತನಾಡಿದರು. ತಮ್ಮ ಇಂಗ್ಲೀಷ್ ಭಾಷೆಯ ಜ್ಞಾನದ ಬಗ್ಗೆ ಕೆಣಕಿದಾಗ ನಾನು ಇಂಗ್ಲಿಷ್ ನಲ್ಲಿ ಪ್ರವೀಣನಲ್ಲ. ನನಗೆ ಬರುವ ಇಂಗ್ಲಿಷ್ ನಲ್ಲಿ ಬಾಂಬೆಯಲ್ಲಿ ಮಾತಾಡಿದ್ದೆ. ಇಲ್ಲಿ ಕನ್ನಡದಲ್ಲಿ ಮಾತಾನಾಡುತ್ತೇನೆ ಅದರ ಬಗ್ಗೆ ತಾವು ಚಿಂತೆ ಮಾಡಬೇಡಿ ಎಂದು ಹೇಳುತ್ತಲೆ ಭಾಷಣ ಆರಂಭಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಕೀಯ ನಾಟಕವನ್ನ ನೋಡಿ ಜನ ಚೀ ತೂ ಎಂದು ಉಗಿಯುತ್ತಿದ್ದಾರೆ. ನೇರವಾಗಿ ಯಾರಿಗೆ ಉಗಿಯುತ್ತಿದ್ದಾರೆ ಎಂಬುದನ್ನು ನೀವೆ ಊಹಿಸಿಕೊಳ್ಳಬಹದು ಎಂದರು. ಅತೃಪ್ತ ಶಾಸಕರೇ ನಮ್ಮನ್ನ ಬಾಂಬೆಗೆ ಬನ್ನಿ ಅಂದಿದ್ದರು. ಅದರಲ್ಲಿ ಗೋಪಾಲಯ್ಯನವರೇ ಫೋನ್ ಮಾಡಿದ್ದರು. ಅದಕ್ಕಾಗಿ ನಾವು ಹೋದೆವು.

ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡಿದ್ದರೂ, ನಮಗೆ ಸ್ನಾನ ಮಾಡೋಕೆ ಬಿಟ್ಟಿಲ್ಲ. ಅಲ್ಲಿ ಬಿಜೆಪಿನ ಸರ್ಕಾರ ಇದೆ. ಹೋಗಿರೋದು ನಾಲ್ಕು ಜನ ನೀವು ಹೇಂಗಯ್ಯ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಆದರೆ ನಾವು ಡಿಕೆಶಿ ಮಳೆಯಲ್ಲಿಯೇ ಟೀ ಕುಡಿದು, ತಿಂದಿ ತಿಂದು ಬಂದೆವು. ಇದಕ್ಕೆ ಯಾರನ್ನು ನಾವು ಕೇಳಬೇಕು? ಏನು ಮಾಡುತ್ತಿದೆ ಸೆಂಟ್ರಲ್ ಗರ್ಮೆಂಟು. ಏನ್ ಮಾಡ್ತಿದ್ದಾರೆ ಗೃಹ ಸಚಿವರು.

ನಾವು ಇಬ್ಬರು ಸಚಿವರು, ಇಬ್ಬರು ಶಾಸಕರು ಹೋದರೆ ಬಂದು ಮಾತಾಡಿಸುವಷ್ಟು ಸೌಜನ್ಯ ಇಲ್ಲ ಅಲ್ಲಿನ ಸರ್ಕಾರಕ್ಕೆ. ಆ ಹೋಟೆಲ್ ನ ಒಳಗೆ ಬಿಜೆಪಿ ಸಚಿವರು, ಶಾಸಕರು ತುಂಬಿಕೊಂಡಿದ್ದರು. ಈ ಆಟಕ್ಕೆ, ಈ ಕುತಂತ್ರಕ್ಕೆ, ಈ ಘನಕಾರ್ಯಕ್ಕೆ ಕನ್ನಡಿ ಬೇರೆ ಬೇಕಾ ಬಿಜೆಪಿಯವರೆ? ಭಾರೀ ಭಾರೀ ಬೇಕಲ್ವ ಕನ್ನಡಿ ನಿಮಗೆ? ಸಮ್ಮಿಶ್ರ ಸರ್ಕಾರ ಕೆಟ್ಟ ಕೆಲಸ ಮಾಡಿದ್ದರೆ, ಅಪವಿತ್ರ ಕೆಲಸ ಆಗಿದ್ದರೆ ಅದರ ಬಗ್ಗೆ ಚರ್ಚೆಗಿಡಿ. ಅದನ್ನು ಬಿಟ್ಟು ಯಾಕೆ ರಾಜೀನಾಮೆ ಕೊಡಿಸಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇವತ್ತು ನಮ್ಮ ನಾಯಕರಾದ ಕುಮಾರಸ್ವಾಮಿಯವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಿಂದ ವಿಮುಕ್ತರಾಗಬೇಕು. ಯಾವ 15 ಜನ ಶಾಸಕರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಈ ಸದನದಿಂದ ಅವರಿಗೆ ನಾವು ಕೇಳಬೇಕು? ಈ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಲಿಲ್ಲವೇ? ಅನುದಾನ ಸಿಕ್ಕಲಿಲ್ಲವೇ? ಅದಕ್ಕೆ ಈ ಸದನದ ಮೂಲಕ ಜನರಿಗೆ ನಾವು ಉತ್ತರ ಕೊಡಬೇಕಿದೆ.

ಅದಕ್ಕೆ ನಾವು ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಬೇಕಿದೆ. ಇನ್ನು ಸಮ್ಮಿಶ್ರ ಸರ್ಕಾರ ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆಯೇ? ಬೇರೆ ರಾಜ್ಯಗಳಲ್ಲಿ ಇಲ್ಲವೇ? ಗೋವಾದಲ್ಲಿ ಬಿಜೆಪಿಯವರು ಕಡಿಮೆ ಸ್ಥಾನದಲ್ಲಿದ್ದರು ಅವರು ಮುಖ್ಯಮಂತ್ರಿಯಾಗಲಿಲ್ಲವೇ? ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಇವೆ ಅಲ್ಲವೇ? ಕೇವಲ 37 ಇರುವವರಿಗೆ 80 ಜನ ಇರುವವರು ಮುಖ್ಯಮಂತ್ರಿ ಸ್ಥಾನ ಕೊಟ್ಟುಬಿಟ್ಟಿದ್ದಾರೆ ಎಂದು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬೇಕು. ಅದಕ್ಕೆ ಸಮಯ ಬೇಕಿದೆ. ಈ ದೇಶದಲ್ಲಿ ಇದು ಒಂದೇ ಸರ್ಕಾರವೇ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ವಾಜಪೇಯಿಯವರ ಸರ್ಕಾರ ಇದೇ ರೀತಿಯ ಬಿಕ್ಕಟ್ಟು ಇದ್ದಾಗ 10 ತಿಂಗಳ ಕಾಲ ಚರ್ಚೆಯಾಯಿತು ಎಂಬುದು ನೆನಪಿಸಿಕೊಟ್ಟರು.

ಹಳ್ಳಿಯ ಗ್ರಾಮ್ಯ ಭಾಷೆಯಲ್ಲಿ ಮುಂದುವರೆಸಿದ ಅವರು ಹಳ್ಳಿಯ ಕಡೆ ಎತ್ತುಗಳನ್ನು ಮಾರಿದರೆ ಚೀಟಿಕೊಡುತ್ತಾರೆ ಆದರೆ ಶಾಸಕರನ್ನು ಕರೆದುಕೊಂಡರೆ ಅದೇನು ಕೊಡೋದೇ ಇಲ್ಲ ಅದಕ್ಕಿಂತ ಕಡೆಯಾಗಿ ಹೋಗಿದ್ಧಾರೆ ಶಾಸಕರು ಎಂದರು. ಬಿಜೆಪಿ ಮಾಡುತ್ತಿರುವ ಎಲ್ಲಾ ಕುತಂತ್ರಗಳಿಗೂ ಯಾವ ಕನ್ನಡಿಯೂ ಬೇಕಿಲ್ಲ ಜನರಿಗೆಲ್ಲ ತಿಳಿದಿದೆ. ನಾನು ಮುಖ್ಯಮಂತ್ರಿ ಯವರ ಸ್ಥಾನ ಉಳಿದರೆ ತಿರುಪತಿಗೆ ಒಂದು ಕೋಟಿ ಕೊಡುವುದಾಗಿ ಬೇಡಿಕೊಂಡು ಹೊರಬಂದೆ ಒಂದು ಗುಳ್ಳೆನರಿ ಎಡದಿಂದ ಬಲಕ್ಕೆ ಹೋಯಿತು ನಾನು ಒಳ್ಳೆಯದಾಗುತ್ತದೆ ಅಂದುಕೊಂಡೆ ಆದರೆ ನಮ್ಮ ಸ್ನೇಹಿತರಿಗೆ ಪೋನಾಯಿಸಿದರೆ ಎಮ್.ಟಿ.ಬಿ ನಾಗರಾಜ್ ಗುಳ್ಳೆನರಿ ತರ ತಪ್ಪಿಸಿಕೊಂಡಿದ್ದರು ಎಂದು ಹೇಳುವ ಮೂಲಕ ಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಸಂಧರ್ಭದಲ್ಲಿ ಸದಸ್ಯರನ್ನ ಕಿಡ್ನಾಪ್ ಮಾಡೋತರ ಶಾಸಕರನ್ನ ಕಿಡ್ನಾಪ್ ಮಾಡಿದ್ದಾರೆ. ಶಾಸಕ ಶ್ರೀಮಂತ್ ಪಾಟೀಲ್ ಗೆ ಆರೋಗ್ಯ ಸರಿಯಿಲ್ಲ ಅಂತ ಅಡ್ಮಿಟ್ ಮಾಡಿದ ಹಾಗೆ ಎಲ್ಲಾ 15 ಅತೃಪ್ತ ಶಾಸಕರನ್ನು ಅಡ್ಮಿಟ್ ಮಾಡಬೇಕಿತ್ತು ಎಂದರು. ಪ್ರತಿ ಬಾರಿ ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬವನ್ನು ಹೇಳುತ್ತೀರಿ, ಕುಟುಂಬ ರಾಜಕಾರಣವಿಲ್ಲದ ಒಂದಾದರೂ ರಾಜಕೀಯ ಪಕ್ಷವಿದ್ದರೆ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷದವರನ್ನು ಆಹ್ವಾನಿಸಿದರು.

ಇನ್ನು ಸರ್ಕಾರ ಇವತ್ತು ಬಿದ್ದೋಯಿತು, ನಾಳೆ ಬಿದ್ದೋಯಿುತು, ಢಮಾರ್ ಅಂತ ಎಲ್ಲ ಚರ್ಚೆ ಮಾಡ್ತೀರಿ ಏನ್ರಿ ಇದು. ನಾವು ಒಂದು ಪಕ್ಷದ ಚಿಹ್ನೆಯ ಕೆಳಗೆ ಗೆದ್ದರೆ ಅದು ನಮಗೆ ತಾಯಿ ಇದ್ದ ಹಾಗೆ. ಆ ಅತೃಪ್ತರು ನಾವು ಕಾಂಗ್ರೇಸ್ ಅಲ್ಲೇ ಇದ್ದೇವೆ ಮುಖ್ಯಮಂತ್ರಿಗಳಿಗೆ ವಿರೋಧ ಎಂದು ಹೇಳುತ್ತಾರೆ. ಆದರೆ ಬನ್ನಿ ಹದಿನೈದು ಜನ ಶಾಸಕರ ಕ್ಷೇತ್ರಕ್ಕೆ ಕೊಟ್ಟ ಅನುದಾನದ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು .

ಬೇರೆ ಸಮಯದಲ್ಲಿ ನಾವು ಮಾತಾಡಲು ಇಷ್ಟು ಸಮಯ ನೀವು ಕೊಡಲ್ಲ. ಇವತ್ತು ನಾನು ಏನು ಮಾತನಾಡಿದರು ಸುಮ್ಮನೆ ಇರುತ್ತೀರಿ ಅದಕ್ಕೆ ನಾನು ಚಚ್ಚುತ್ತಿದ್ದೀನಿ ಎಂದು ಹೇಳಿ ಸಭೆಯನ್ನು ನಗೆ ಗಡಲಲ್ಲಿ ತೇಲಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...