Homeಅಂಕಣಗಳುಮೋದಿಜಿಯ ಸಮುದ್ರ ಗೀತೆಗಳು

ಮೋದಿಜಿಯ ಸಮುದ್ರ ಗೀತೆಗಳು

- Advertisement -
- Advertisement -

| ಥೂತ್ತೇರಿ ಯಾಹೂ |

ಭಾಜಪದ ಮೊದಲ ಪ್ರಧಾನಿ ವಾಜಪೇಯಿ ಆಗಾಗ್ಗೆ ಕವನ ಕೆರೆಯುತ್ತಿದ್ದರು. ಕವಿ ಹೃದಯವೂ ಅವರಿಗಿತ್ತು. ಆದ್ದರಿಂದ ಬಿಜೆಪಿ-ಕವಿ ಎನಿಸಿದ್ದರು. ಅವರಿಗೆ ನಾನೇನು ಕಡಿಮೆ ಎಂದು ಸೆಡ್ಡು ಹೊಡೆದಿರುವ ಈಗಿನ ಪ್ರಧಾನಿ ನರೇಂದ್ರ ಮೋದಿಯೂ ಪದಬೇಧಿ ಮಾಡಿಕೊಂಡು ಅದನ್ನೇ ಕಾವ್ಯವೆಂದು ಪರಿಗಣಿಸಿ ಬಿಜೆಪಿ ಕಾವ್ಯಪ್ರಿಯರಿಗೆ ಬಡಿಸಿದ್ದಾರಂತಲ್ಲಾ. ಅದನ್ನ ಕನ್ನಡ ಕರಪತ್ರ ಎಂಬ ಪತ್ರಿಕೆ ಪ್ರಕಟಿಸಿರುವುದಲ್ಲದೆ ಮೋದಿಯ ಪ್ರಾಮಾಣಿಕ ಅಭಿವ್ಯಕ್ತಿಯನ್ನ ತಿರುಚಿ ಪ್ರಕಟಿಸಿದೆಯಲ್ಲಾ. ವಾಸ್ತವವಾಗಿ ಮೋದಿ ಮೂಲಪ್ರತಿ ಹೇಗಿತ್ತು ಎಂಬ ಊಹೆಯ ಸಾಲುಗಳನ್ನು ನ್ಯಾಯಪಥ ಓದುಗರಿಗೆ ಕೊಡುವುದು ನಮ್ಮ ಧರ್ಮ. ಇದು ಕವಿಯೊಬ್ಬನ ಕಾವ್ಯದ ಸಾಲುಗಳ ನಡುವಿನ ಅಕ್ರಮ ಪ್ರವೇಶವಲ್ಲ. ಕಳೆದ ಶತಮಾನದಲ್ಲೇ ವರಕವಿ ಬೇಂದ್ರೆಯವರು ವಾಚನಕ್ಕೆ ಕಳುಹಿಸಿದ ಕವನದ ಸಾಲುಗಳಲ್ಲಿ ಕಡೆಯ ಕೆಲಸಾಲುಗಳು ಬಿಟ್ಟು ಹೋಗಿದ್ದು ಅದನ್ನ ಊಹಿಸಿ ಬರೆದು ಪೂರ್ಣಗೊಳಿಸಿದ ಕೀರ್ತಿ, ಕೀರ್ತಿನಾಥ ಕುರ್ತುಕೋಟಿಯವರದ್ದು. ಅಂತಹ ಭಾಗ್ಯ ಯಾಹುಗೆ ದೊರಕಿದ್ದು ಭಿನ್ನದೊಳಗಿನ ಸೌಭಾಗ್ಯವಲ್ಲವೆ, ಥೂತ್ತೇರಿ!

“ಮೋದಿಯ ಪದಬೇದಿ”

1

ನಮಸ್ತೇ ಸದಾ ವತ್ಸಲೇ ಸಾಗರ;
ನೀನು ಧೀರ ಗಂಭೀರ, ಆದರೆ ನಾನು,
ಸೀರ, ಬೀರ, ಚ್ವೌರ, ಕ್ವಾರ,
ನೀನು ನೀಲಿ
ನಮ್ಮ ಸಂಘ ಹಳದಿ
ನೀನು ಜಗತ್ತಿಗೆ ಜೀವನ ನೀಡುವೆ
ನಾನು ಸಂಘವೆಂಬ ವಿಷವೃಕ್ಷಕ್ಕೆ
ಹಾಲೆರೆಯುವೆ.
ಸಮುದ್ರದ ಮೇಲೆ ಕೋಲಾಹಲವಿದೆ,
ಭಾರತದ ಒಳಗೆ ಹಾಲಾಹಲವಿದೆ,
ನೀನು ವಿಚಲಿತನಾಗಲ್ಲ,
ನಾವು ಸದಾ ವಿಚಲಿತರು.
ಗರ್ಜಿಸುವ ಕನ್ನಯ್ಯನನ್ನು ಕಂಡರೆ
ನಮ್ಮವರು ಭಯಭೀತರಾಗುತ್ತಾರೆ.
ಸಾಬರನ್ನು ಕಂಡರೆ ಸಣ್ಣಗೆ ನಡುಗುತ್ತಾರೆ.
ನಿನ್ನೊಳಗೆ ಅಡಗಿರುವ ಶಾರ್ಕುಗಳಂತೆ
ಭಾರತದಲ್ಲಿ ಅಡಿಗಿದ್ದಾರವರು.

2
ನಮಸ್ತೇ ಸದಾವತ್ಸಲೇ ಸಾಗರ;
ನೀನು ಶಕ್ತಿಭಂಡಾರ.
ನಾನು ಕುಯುಕ್ತಿ ಬಿಡಾರ,
ನೀನು ಯಾವತ್ತೂ ನಿನ್ನ ಪರಿಧಿಯಲ್ಲಿರುತ್ತೀ.
ನಾವು ಸದಾ ಪರಿಧಿ ಮೀರುತ್ತೇವೆ,
ನೀನು ಯಾವತ್ತೂ ದೊಡ್ಡತನದ ಬೋಧನೆ ಮಾಡುತ್ತಿ,
ನಾವು ಪ್ರತಿಬಾರಿ ಸಣ್ಣತನದಲ್ಲೇ ವಾದಿಸುತ್ತೇವೆ.
ನಿನ್ನ ಅಲೆಗಳಲ್ಲಿ ಜೀವನ ಸಂದೇಶವಿದೆ,
ನಮ್ಮ ಮಾತುಗಳಲ್ಲಿ ಸರ್ವನಾಶದ ಆಶಯವಿದೆ.
ನಿನಗೆ ಯಾವ ಆಸೆಯೂ ಇಲ್ಲ,
ಭರತಖಂಡವನ್ನು ಹಿಂದೂ ರಾಷ್ಟ್ರ ಮಾಡುವ ದುರಾಶೆ ನಮ್ಮನ್ನು ಆಕ್ರಮಿಸಿದೆ.

3
ನಮಸ್ತೆ ಸದಾವತ್ಸಲೇ ಸಾಗರ;
ನಡೆಯುತ್ತಲೇ ಜೀವನ ನಡೆಸುತ್ತಿ,
ನಾನು ತಿರುಗುತ್ತಲೇ ಜೀವನ ನಡೆಸುತ್ತಿದ್ದೇನೆ.
ತಿರುಗಲು ನನಗೆ ಆಯಾಸವೇ ಇಲ್ಲ
ಏಕೆಂದರೆ ನನಗೆ ಮನೆ ಎಂಬುದೇ ಇಲ್ಲ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನನ್ನ ದೇಶದಲ್ಲೇ ತಿರುಗಿದರೆ
ಅತಿವೃಷ್ಠಿ ಅನಾವೃಷ್ಠಿಗೆ ತುತ್ತಾದವರ
ಅತಿಯಾದ ಬೇಡಿಕೆ ನಿಂದನೆಯ ನರಕ,
ಅದಕ್ಕೆ ವಿದೇಶಗಳ ತಿರುಗುತ್ತೇನೆ.
ನಾಯಿಗೆ ಕೆಲಸವಿಲ್ಲ,
ಕೂರಲು ಸಮಯವಿಲ್ಲ ಎಂಬಂತೆ,
ನನ್ನ ಅಲೆಮಾರಿ ಸಂದೇಶ
ಅನವರತ-ಅನವರತ.

4
ಓಂ ನಮೋ ಸದಾವತ್ಸಲೇ ಸಾಗರ:
ಅಲೆಯಿಂದ ಅಲೆಗಳು ಹೊರಬೀಳುವುದಿಲ್ಲ.
ಇದೇ ಸಂಘಕ್ಕೆ ಆದರ್ಶ,
ಬಿದ್ದರೂ ಉಪ ಅಲೆಗಳ ಆಶ್ರಯ,
ಹಿಂದೂ ಮಹಾಸಭಾ, ವಿಶ್ವಹಿಂದೂ ಪರಿಷತ್,
ಆರೆಸ್ಸೆಸ್ಸು, ಭಜರಂಗದಳದ ಅಲೆಗಳೆಲ್ಲಾ
ಸಂಘ ಸಂಯಮಗೊಂಡ ಸಮುಚ್ಛಯಗಳು.

5
ನಮಸ್ತೆ ಸದಾವತ್ಸಲೇ ಸಾಗರ:
ಸೂರ್ಯನ ಜೊತೆಗೆ ನಿನ್ನ ಗೆಳೆತನ ಹಳೆಯದು,
ನನ್ನ ಸಂಘ ಪರಿವಾರದ ಗೆಳೆತನವೂ ಹಳೆಯದು.
ಜೀವಂತ ಜಲ ನೀನು,
ನಿನ್ನನ್ನು ಕುಡಿದು, ಹೊರಬಿಡುವ ಜನ್ಮವಷ್ಟೇ ನನ್ನದು.
ನೀನು ಆಗಸವನ್ನ ಚುಂಬಿಸುತ್ತೀ,
ನಾನೇನು ಚುಂಬಿಸಲೀ,
ಚುಂಬನದಿಂದ ವಂಚಿತ ನಾನು.
ನೀನು ಮೋಡವಾಗಿ ಮಳೆ ಸುರಿಸುತ್ತಿ,
ನಾನು ಜನಸಾಗರದ ಮೇಲೆ ಸುಳ್ಳು ಸುರಿಸುತ್ತೇನೆ.
ನೀನು ಮಧುರಭಾವ ಇಟ್ಟುಕೊಂಡಿದ್ದಿ,
ಸಂಘ ಸೇರಿದಾಗಲೇ ನನ್ನ ಮಧುರಭಾವ ಮಾಯವಾಯ್ತು,
ಈಗೇನಿದ್ದರೂ ಮಧುರ ಕಾಶ ತಲೆನೋವಷ್ಟೇ..

6
ಓಂ ನಮೋ ಸದಾವತ್ಸಲೇ ಸಾಗರ:
ಜೀವನದ ಈ ಸೌಂದರ್ಯ ನೀಲಕಂಠನ ಆದರ್ಶ ನಿನ್ನದು,
ಜೀವನದ ಸೌಂದರ್ಯ ಹಾಳುಮಾಡುವುದೇ ನಮ್ಮ ಆದರ್ಶ.
ನೀನು ಭೂಮಿಯ ವಿಷವನ್ನು ಕುಡಿಯುತ್ತಿ,
ನಾವು ಭರತ ಖಂಡಕೆ ವಿಷ ಉಣಿಸುತ್ತೇವೆ.
ನೀನು ಲವಣಾಂಶವನ್ನು ನಿನ್ನಲ್ಲೇ ಇಟ್ಟುಕೊಳ್ಳುವೆ,
ನಾವು ತಡೆಯಲಾಗದೆ ಆಗಾಗ್ಗೆ ಬಿಟ್ಟುಬಿಡುತ್ತೇವೆ.
ನೀನು ಜಗತ್ತಿಗೆ ಹೊಸ ಜೀವನ ನೀಡುತ್ತಿ,
ನಾವು ಜಗತ್ತಿಗೆ ಹೊಸ ನರಕ ಕೊಡುತ್ತಿದ್ದೇವೆ.
ನೀನು ಜೀವನ ನಡೆಸುವ ಮರ್ಮ ನೀಡುತ್ತಿ,
ನಾವು ಜೀವನ ಸರ್ವನಾಶ ಮಾಡುವ ಕರ್ಮ ನೀಡುತ್ತೇವೆ.
ಹೇ ಸಮುದ್ರವೆ, ನಿನಗೆ ನನ್ನ ಶತಸಹಸ್ರ
ಪ್ರಣಾಮಗಳು.
ಥೂ…. ಥೂ….. ಥೂತ್ತೇರಿ!!!

ಸೆ: ಕನ್ನಡ ಕರಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...