Homeಮುಖಪುಟಮೋದಿ ಸರ್ಕಾರಕ್ಕೆ ಅಧಿಕ ಲಸಿಕೆ ಬೇಕಾಗಿದೆ: ಆದರೆ ಮಾಡೆರ್ನಾಕ್ಕೆ ಆಸಕ್ತಿಯಿಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ!

ಮೋದಿ ಸರ್ಕಾರಕ್ಕೆ ಅಧಿಕ ಲಸಿಕೆ ಬೇಕಾಗಿದೆ: ಆದರೆ ಮಾಡೆರ್ನಾಕ್ಕೆ ಆಸಕ್ತಿಯಿಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ!

- Advertisement -
- Advertisement -

ಸೋಂಕಿನ ಹೊಸ ಮತ್ತು ಹೆಚ್ಚು ಆಕ್ರಮಣಕಾರಿ ಅಲೆಯನ್ನು ನಿಭಾಯಿಸಲು ಹೆಚ್ಚಿನ ವಿದೇಶಿ ಕೋವಿಡ್-19 ಲಸಿಕೆಗಳನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ಮೋದಿ ಸರ್ಕಾರ ತೊಡಗಿದೆ. ಹಲವಾರು ಲಸಿಕೆ ತಯಾರಿಕೆ ಕಂಪನಿಗಳಿಗೆ ಸರ್ಕಾರ ಆಹ್ವಾನ ನೀಡಿದೆ. ಆದರೆ ಇದು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳಬಹುದು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಫಿಜರ್ ನಷ್ಟ ಪರಿಹಾರ ಬಾಂಡ್‌ಗೆ ಸಹಿ ಮಾಡುವಂತೆ ಕೇಳುವ ಸಾಧ್ಯತೆಯಿದೆ ಮತ್ತು ಮಾಡರ್ನಾ ತನ್ನ “ಕೈಗಳು ತುಂಬಿದೆ’ ಸಾಕಷ್ಟು ಆರ್ಡರ್‌ಗಳಿವೆ ಎಂದು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಅಮೆರಿಕ, ಬ್ರಿಟನ್, ಯುರೋಪ್, ಜಪಾನ್‌ಗಳಲ್ಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತತೆ ಪಡೆದ ಲಸಿಕೆಗಳಿಗೆ ತುರ್ತು ಪರವಾನಗಿ ನೀಡಲು ಸರ್ಕಾರ ಮಂಗಳವಾರ ಅನುಮತಿ ನೀಡಿತು.

ರಾಹುಲ್ ಗಾಂಧಿ ಈ ಕ್ರಮ ಕೈಗೊಳ್ಳಲು ಹಲವು ಸಲ ಸರ್ಕಾರವನ್ನು ಒತ್ತಾಯಿಸಿದ ನಂತರ ಮಂಗಳವಾರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಅಮೆರಿಕದ ಫಾರ್ಮಾ ದೈತ್ಯ, ಭಾರತದಲ್ಲಿ ತನ್ನ ಲಸಿಕೆಯ ತುರ್ತು ಬಳಕೆ ದೃಢೀಕರಣಕ್ಕಾಗಿ (ಇಯುಎ) ಅರ್ಜಿ ಸಲ್ಲಿಸಿತ್ತು. ಆದರೆ ಈ ವರ್ಷದ ಆರಂಭದಲ್ಲಿ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಮೂಲಗಳ ಪ್ರಕಾರ, ನಷ್ಟ ಪರಿಹಾರ ಬಾಂಡ್‌ಗಳಿಗೆ ಸಹಿ ಹಾಕಲು ಭಾರತ ಸರ್ಕಾರ ನಿರಾಕರಿಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಲಸಿಕೆ ಯಾವುದೇ ಅಡ್ಡಪರಿಣಾಮಗಳಿಗೆ ಕಾರಣವಾದರೆ ಕಂಪನಿಯ ಮೇಲೆ ಮೊಕದ್ದಮೆ ಹೂಡದಂತೆ ರಕ್ಷಿಸುವ ಕಾನೂನು ಬಾಂಡ್‌ಗಳು ಇವಾಗಿವೆ.

ಈ ಮಧ್ಯೆ, ಜಾನ್ಸನ್ & ಜಾನ್ಸನ್ ಭಾರತಕ್ಕೆ ಬರಲು ಉತ್ಸುಕವಾಗಿದೆ. ಅದು ಇತ್ತೀಚೆಗೆ ಕೇಂದ್ರೀಯ ಔಷಧಿ ಪ್ರಮಾಣಿಕೆ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್‌ಸಿಒ) ಮಾಹಿತಿ ನೀಡಿ ಕ್ಲಿನಿಕಲ್ ಟ್ರಯಲ್ಸ್ ಯೋಜನೆ ಆರಂಭಿಸುವುದಾಗಿ ತಿಳಿಸಿದೆ. ಆದರೆ ಜಾನ್ಸನ್ & ಜಾನ್ಸನ್ ಸಿಂಗಲ್-ಡೋಸ್ ಲಸಿಕೆ ಪಡೆದ ಹಲವರು ಮಹಿಳೆಯರ ಮೇಲೆ ಅಡ್ಡಪರಿಣಾಮಗಳು ಉಂಟಾದ ನಂತರ ಅದರ ಬಳಕೆಯನ್ನು ತಕ್ಷಣ ತಾತ್ಕಾಲಿಕವಾಗಿ ನಿಲ್ಲಿಸಲು ಅಮೆರಿಕ ಸರ್ಕಾರ ಕರೆ ನೀಡಿದ್ದರಿಂದ ಕಂಪನಿ ತೊಂದರೆಗೆ ಸಿಲುಕಿದೆ.

ಫಿಜರ್ ತನ್ನ ಲಸಿಕೆಯನ್ನು ಭಾರತಕ್ಕೆ ಕಳುಹಿಸುವ ಒಪ್ಪಂದಕ್ಕೆ ಒಪ್ಪುವ ಮೊದಲು ನಷ್ಟ ಪರಿಹಾರ ಬಾಂಡ್‌ಗೆ ಸಹಿ ಹಾಕಬೇಕು ಎಂದು ಷರತ್ತು ವಿಧಿಸಿದೆ ಎನ್ನಲಾಗಿದೆ.
“ಫಿಜರ್ ತನ್ನ ಕೋವಿಡ್ -19 ಲಸಿಕೆಯನ್ನು ಪೂರೈಸುತ್ತಿರುವ ಪ್ರತಿ ದೇಶದೊಂದಿಗೆ ನಷ್ಟ ಪರಿಹಾರ ಬಾಂಡ್‌ಗೆ ಸಹಿ ಹಾಕಿದೆ. ಬಾಂಡ್‌ಗೆ ಸಹಿ ಹಾಕಲು ಭಾರತ ಒಪ್ಪಿಕೊಂಡಾಗ ಮಾತ್ರ ಬೆಲೆಗಳ ಚರ್ಚೆ ಪ್ರಾರಂಭವಾಗುತ್ತದೆ ”ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಜನವರಿಯಲ್ಲಿ, ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರವು, ಯಾವುದೇ ಗಂಭೀರ ಅಡ್ಡಪರಿಣಾಮಗಳು ಅಥವಾ ಪ್ರತಿಕೂಲ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ಯಾವುದೇ ಹೊಣೆಗಾರಿಕೆಯಿಂದ ನಷ್ಟ ಪರಿಹಾರ ಅಥವಾ ವಿನಾಯಿತಿ ನೀಡುವ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ ಎಂದು ಹೇಳಿದೆ.

“ಜಾಗತಿಕವಾಗಿ, ಹೆಚ್ಚಿನ ದೇಶಗಳು ಲಸಿಕೆ ತಯಾರಕರ ಜೊತೆಗೆ ಬಾಂಡ್‌ಗಳಿಗೆ ಸಹಿ ಹಾಕಿವೆ.. ಭಾರತವು ಇದನ್ನು ಇಲ್ಲಿವರೆಗೆ ಮಾಡಿಲ್ಲ.. ನಾವು ಈಗಲಾದರೂ ಇದನ್ನು ಮಾಡಬೇಕು. ನಿರ್ದಿಷ್ಟ ತಯಾರಕರಿಗೆ ಬದಲು ಎಲ್ಲ ತಯಾರಕರೊಂದಿಗೂ ಬಾಂಡ್‌ಗಳಿಗೆ ಸಹಿ ಮಾಡಬೇಕು ಎಂದು ವೆಲ್ಲೂರು ಆಸ್ಪತ್ರೆಯ ಲಸಿಕಾ ತಜ್ಞ ಗಗನದೀಪ್ ಹೇಳಿದ್ದಾರೆ.

ಮಾಡರ್ನಾ ಭಾರತಕ್ಕೆ ಪ್ರವೇಶಿಸಲು ಉತ್ಸುಕವಾಗಿಲ್ಲ

ಲಸಿಕೆ ತಯಾರಕರು ಲಭ್ಯವಿರುವ ಸಾಮರ್ಥ್ಯಗಳನ್ನು ಆಧರಿಸಿ ತಮ್ಮ ಕಾರ್ಯತಂತ್ರಗಳನ್ನು ವಿನ್ಯಾಸಗೊಳಿಸುವ ಸಾಧ್ಯತೆಯಿದೆ ಮತ್ತು ಅವರು ಸಾಕಷ್ಟು ಗಾತ್ರವನ್ನು ಹೊಂದಿರುವ ಭಾರತೀಯ ಮಾರುಕಟ್ಟೆಗೆ ಎಷ್ಟು ಒದಗಿಸಬೇಕು ಎಂದು ಲೆಕ್ಕ ಹಾಕುತ್ತಾರೆ.
ಮಾಡರ್ನಾದ ವಕ್ತಾರ ರೇ ಜೋರ್ಡಾನ್ ಅವರು ದಿ ಪ್ರಿಂಟ್‌ಗೆ ಪ್ರತಿಕ್ರಿಯೆ ನೀಡಿ, “ಪೂರೈಕೆಯ ಬಗ್ಗೆ ಯಾವುದೇ ಸಂಭಾವ್ಯ ಚರ್ಚೆಗಳು ಅಥವಾ ಮಾತುಕತೆಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಅಡಿಯಲ್ಲಿರುವ ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಲಸಿಕೆಯನ್ನು ಭಾರತಕ್ಕೆ ತರಲು ಕಳೆದ ಆರು ತಿಂಗಳಿನಿಂದ ಅಮೆರಿಕದ ಮಾಡರ್ನಾ ಕೊತೆ ಮಾತುಕತೆ ನಡೆಸುತ್ತ ಬಂದಿದೆ.

“ಹಲವಾರು ತಿಂಗಳುಗಳ ಕಾಲ ಅವರೊಂದಿಗೆ ಮಾತನಾಡುತ್ತಿದ್ದರೂ, ಕಂಪನಿಯು ತನ್ನ ಕೋವಿಡ್ -19 ಲಸಿಕೆಯನ್ನು ಭಾರತದಲ್ಲಿ ತರಲು ನಿಜವಾಗಿಯೂ ಉತ್ಸುಕವಾಗಿಲ್ಲ. ಬಹುಶಃ ಅವರ ಕೈಗಳು ಪೂರ್ಣವಾಗಿರುವುದರಿಂದ ಅಂದರೆ ಆರ್ಡರ್‌ಗಳು ಹೆಚ್ಚು ಇರುವುದರಿಂದ ಹೀಗಾಗಿರಬಹುದು. ಈಗ ವಿದೇಶಿ ಲಸಿಕೆಗಳಿಗೆ ತ್ವರಿತ ಪರವಾನಗಿ ನೀಡಲು ಸರ್ಕಾರ ಒಪ್ಪಿದ ನಂತರ, ಮರಳಿ ಸಿಎಸ್‌ಐಆರ್ ಮೂಲಕ ಮಾಡೆರ್ನಾವನ್ನು ಭಾರತಕ್ಕೆ ತರಲು ಯತ್ನಿಸಬಹುದು” ಎಂದು ಸಿಎಸ್‌ಐಆರ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಪನಿಯು ಈಗಾಗಲೇ ಸಹಿ ಮಾಡಿರುವ ಬದ್ಧ ಆರ್ಡರ್‌ಗಳ ಪೂರೈಕೆ ಒಪ್ಪಂದಗಳನ್ನು ಮಾಡರ್ನಾ ತನ್ನ ಇಮೇಲ್‌ನಲ್ಲಿ ಪಟ್ಟಿ ಮಾಡಿದೆ. ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಕೊರಿಯಾ, ಜಪಾನ್, ಸ್ವಿಟ್ಜರ್ಲೆಂಡ್, ಕೊಲಂಬಿಯಾ, ಇಸ್ರೇಲ್, ತೈವಾನ್, ಸಿಂಗಾಪುರ್ ಮತ್ತು ಕತಾರ್ ದೇಶಗಳಿಗೆ ಪೂರೈಕೆ ಆರ್ಡರ್‌ಗಳು ಒಟ್ಟು 1,000 ಮಿಲಿಯನ್ (100 ಕೋಟಿ) ಪ್ರಮಾಣವನ್ನು ಮೀರಿವೆ ಎನ್ನಲಾಗಿದೆ.

ಅಮೆರಿಕದಲ್ಲಿ ಮಾಡರ್ನಾ ಲಸಿಕೆ ಎರಡು ಡೋಸ್‌ಗಳಿಗೆ 30 ಡಾಲರ್ (2,250 ರೂ.) ದರ ಹೊಂದಿದೆ. “ಮಾಡರ್ನಾ ನಮ್ಮೊಂದಿಗೆ ಬಂದು ನಮ್ಮ ಫಾರ್ಮಾ ಕಂಪೆನಿಗಳಿಗೆ ಇಲ್ಲಿ ಲಸಿಕೆ ತಯಾರಿಸಲು ಅವಕಾಶ ನೀಡಿದರೆ ಭಾರತದಲ್ಲಿ ಎಂ-ಆರ್‌ಎನ್‌ಎ ಲಸಿಕೆಯ ಬೆಲೆ ಸಾಕಷ್ಟು ಕಡಿಮೆಯಾಗಲಿದೆ. ಈ ತಂತ್ರಜ್ಞಾನವು ತುಂಬಾ ಸರಳವಾಗಿದೆ ಮತ್ತು ಉತ್ಪಾದನೆಯನ್ನು ಪ್ರಾರಂಭಿಸಲು 8-9 ತಿಂಗಳು ಬೇಕಾಗಬಹುದು”ಎಂದು ಸಿಎಸ್‌ಐಆರ್ ತಿಳಿಸಿದೆ.

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಕೊರೊನಾ ಲಸಿಕೆ ಪೇಟೆಂಟ್‌ ಬಿಟ್ಟುಬಿಡಲು ನೊಬೆಲ್ ಪ್ರಶಸ್ತಿ ವಿಜೇತರು, ವಿಶ್ವದ ಮಾಜಿ ನಾಯಕರಿಂದ ಜೋ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...